ಧಾರವಾಡ: ಹುಬ್ಬಳ್ಳಿಯ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜಾಮೀನು ನೀಡಲು ಮೂರನೇ ಬಾರಿಗೆ ಇಲ್ಲಿಯ ಹೈಕೋರ್ಟ್ ಪೀಠವು ನಿರಾಕರಿಸಿದೆ. ಆರೋಪಿ ಫಯಾಜ್ ಪರವಾಗಿ ವಾದ ಮಂಡಿಸಿದ ನ್ಯಾಯವಾದಿ ಎಂ.ಹತ್ತರಕಿ, ಜಾಮೀನು ನೀಡುವಂತೆ ನ್ಯಾಯಪೀಠದ ಎದುರು ಮನವಿ ಮಾಡಿದರು.
ನೇಹಾ ಪರವಾಗಿ ವಾದಿಸಿದ ವಕೀಲ ರಾಘವೇಂದ್ರ ಮುತ್ತಗೀಕರ, ಆರೋಪಿ ಮಾಡಿರುವ ಕೊಲೆಯು ಗಂಭೀರ ಸ್ವರೂಪದ್ದಾಗಿದ್ದು, ಆರೋಪಿಗೆ ಶಿಕ್ಷೆ ಪ್ರಕಟವಾಗುವ ವರೆಗೂ ಜಾಮೀನು ನೀಡದಿರುವಂತೆ ಪ್ರತಿವಾದ ಮಂಡಿಸಿದರು. ವಾದ-ಪ್ರತಿವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರು ಜಾಮೀನು ಅರ್ಜಿಯನ್ನು ವಜಾಗೊಳಿಸಿದರು.
10:00 PM (IST) Jul 01
ಡಾ. ಶಿವರಾಜ್ಕುಮಾರ್ ಅಭಿನಯದ ಬಹುನಿರೀಕ್ಷಿತ 'ಡ್ಯಾಡ್' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಹಲವು ವರ್ಷಗಳ ಬಳಿಕ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಶಿವಣ್ಣ ಚಿತ್ರದ ಬಗ್ಗೆ ನಿರ್ದೇಶಕ ಅನಿಲ್ ಕನ್ನೆಗಂಟಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
08:57 PM (IST) Jul 01
'ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರದ ಹೊಸ ಪ್ರೋಮೋ ಬಿಡುಗಡೆಯಾದ ಬೆನ್ನಲ್ಲೇ ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ತಾರಾಗಣದ ಸಂಭಾವನೆ ಕುರಿತು ವರದಿಗಳು ವೈರಲ್ ಆಗಿವೆ.
08:39 PM (IST) Jul 01
ಜೀ ಕನ್ನಡದ 'ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಘವೇಂದ್ರ ಸ್ವಾಮಿಗಳ ಮತ್ತೊಂದು ಪವಾಡ ಅನಾವರಣಗೊಳ್ಳಲಿದೆ. ಸತ್ತ ಮಗುವಿಗೆ ಪುನರ್ಜೀವ ನೀಡುವ ರೋಚಕ ಪ್ರಸಂಗದ ಜೊತೆಗೆ ಹಿರಿಯ ನಟ ಬಿ.ಸಿ ಪಾಟೀಲ್ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.
08:31 PM (IST) Jul 01
'ಮಾ ಇಂಟಿ ಬಂಗಾರಂ' ಚಿತ್ರದ ಶೂಟಿಂಗ್ ವೇಳೆ ಸಮಂತಾರ ವೃತ್ತಿಪರತೆ, ಬದ್ಧತೆ ಕಂಡು ಇಡೀ ಚಿತ್ರತಂಡವೇ ದಂಗಾಗಿತ್ತು. ಸಾಮಾನ್ಯವಾಗಿ ಸಾಹಸ ದೃಶ್ಯಗಳಿಗೆ ಸ್ಟಂಟ್ ಡ್ಯೂಪ್ಗಳನ್ನು ಬಳಸಲಾಗುತ್ತದೆ. ಆದರೆ, ಕ್ಲೈಮ್ಯಾಕ್ಸ್ನ ಕಠಿಣ ಆಕ್ಷನ್ ದೃಶ್ಯಗಳಲ್ಲಿ ಸಮಂತಾ ‘ನನಗೆ ಡ್ಯೂಪ್ ಬೇಡ, ನಾನೇ ಸ್ವತಃ ಮಾಡುತ್ತೇನೆ’ ಎಂದು ಪಟ್ಟು ಹಿಡಿದು ಆಕ್ಷನ್ ಸನ್ನಿವೇಶಗಳನ್ನು ಮಾಡಿದ್ದಾರಂತೆ
07:40 PM (IST) Jul 01
07:18 PM (IST) Jul 01
ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿ ಭಾರೀ ಚರ್ಚೆಗೆ ಕಾರಣವಾಗಿದೆ. ಬೋಲ್ಡ್ ದೃಶ್ಯಗಳು ಮತ್ತು ಆಕ್ಷನ್ ಸನ್ನಿವೇಶಗಳ ನಡುವೆಯೇ CBFC ಪ್ರಮಾಣಪತ್ರ ಕುರಿತು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.
06:30 PM (IST) Jul 01
ಕನ್ನಡ ಚಿತ್ರರಂಗ ಉಳಿವಿಗಾಗಿ ಹೊಸ ಚಲನಚಿತ್ರ ನೀತಿ, ಸರ್ಕಾರಿ OTT ವೇದಿಕೆ, ಚಿತ್ರಮಂದಿರಗಳ ಅಭಿವೃದ್ಧಿ, ಆರ್ಕೈವ್, ಚಿತ್ರನಗರಿಗೆ 500 ಕೋಟಿ ಅನುದಾನ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಲ್ಲಿಸಿದೆ.
05:40 PM (IST) Jul 01
ಬಾಗಲಕೋಟೆ ಜಿಲ್ಲೆಯ ಪೊಲೀಸ್ ಅಧಿಕಾರಿಯೊಬ್ಬರು ಬಡ್ತಿ ಪಡೆದ ಕೆಲವೇ ಗಂಟೆಗಳಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸಹಾಯಕ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ದಾಗ ಮಾರ್ಗಮಧ್ಯೆಯೇ ಈ ದುರಂತ ಸಂಭವಿಸಿದೆ.
05:40 PM (IST) Jul 01
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಅಮೆರಿಕಾ ಅಮೆರಿಕಾ 2' ಚಿತ್ರದ ಟೈಟಲ್ ಅಧಿಕೃತವಾಗಿ ಅನಾವರಣಗೊಂಡಿದೆ. ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಮತ್ತು ಶಾನ್ವಿ ನಟಿಸಿರುವ ಈ ಸಿನಿಮಾ 'ಕ್ಷಮೆ' ಕಾದಂಬರಿ ಆಧಾರಿತವಾಗಿದೆ.
05:18 PM (IST) Jul 01
'Gichchi Giligili' ಖ್ಯಾತಿಯ ಪ್ರಶಾಂತ್ ಗೌಡ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ನಟಿ ಮೇಘನಾ ರಾಜ್ಗೆ ನೀಡಿ ಆಹ್ವಾನಿಸಿದರು. ವಿಶಿಷ್ಟ ವಿನ್ಯಾಸದ ವೆಡ್ಡಿಂಗ್ ಕಾರ್ಡ್ ನೋಡಿ ಮೇಘನಾ ರಾಜ್ ಅಚ್ಚರಿಗೊಂಡು ಶುಭ ಹಾರೈಸಿದರು.
04:56 PM (IST) Jul 01
ಹಿರಿಯೂರು ತಾಲೂಕಿನ ಡಿಆರ್ಎಫ್ಒ ಆಗಿದ್ದ ವೆಂಕಟೇಶ್ (40) ಚಿತ್ರದುರ್ಗದ ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದ್ದರಿಂದ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
04:39 PM (IST) Jul 01
Partner Kannada Movie: 'ಮಳೆ', 'ಧೈರ್ಯಂ', 'ದಿಲ್ ಪಸಂದ್' ಬಳಿಕ ನಿರ್ದೇಶಕ ಶಿವತೇಜಸ್ ನಿರ್ದೇಶಿಸಿರುವ 'ಪಾರ್ಟ್ನರ್' ಚಿತ್ರದಲ್ಲಿ ಅಜೇಯ್ ರಾವ್, ಬೃಂದಾ ಆಚಾರ್ಯ ಹಾಗೂ ರಂಗಾಯಣ ರಘು ಅಭಿನಯಿಸಿದ್ದಾರೆ.
04:38 PM (IST) Jul 01
ಆ್ಯಪ್ ಮೂಲಕ ಪರಿಚಯವಾದ ವ್ಯಕ್ತಿ ಜೊತೆ ಬೆಂಗಳೂರು ಯುವತಿ ಡೇಟಿಂಗ್ ಮಾಡಿದ್ದಾಳೆ. ಇವರಿಬ್ಬರ ಡೇಟಿಂಗ್ ಕೆಲವೇ ದಿನ ಮಾತ್ರ ಇತ್ತು. ಅದರಲ್ಲೇ ಉತ್ತುಂಗಕ್ಕೆ ತಲುಪಿತ್ತು. ಬಳಿಕ ಎಲ್ಲಾ ರಿಲೇಶನ್ಶಿಪ್, ಕಾಂಟಾಕ್ಟ್ ಕಟ್ ಆಗಿತ್ತು. ಆದರೆ ನಾಲ್ಕು ವರ್ಷ ಬಳಿಕ ಆತನ ಜೊತೆಗಿನ ಇಂಟಿಮೇಟ್ ವಿಡಿಯೋ ಆನ್ಲೈನ್ನಲ್ಲಿ ಪತ್ತೆಯಾಗಿದೆ.
04:35 PM (IST) Jul 01
‘ಟಾಕ್ಸಿಕ್’ ಚಿತ್ರವು ಕೇವಲ ಗನ್ ಮತ್ತು ಗ್ಯಾಂಗ್ಸ್ಟರ್ ಕಥೆಯಲ್ಲ, ಬದಲಿಗೆ ಮಹಿಳಾ ಶಕ್ತಿಯನ್ನು ಹೊಸ ಆಯಾಮದಲ್ಲಿ ತೋರಿಸುವ ಸಿನಿಮಾ ಆಗಲಿದೆಯೇ ಎಂಬ ಸಂಶಯ ಈ ಟೀಸರ್ನಿಂದ ಸೃಷ್ಟಿಯಾಗಿದೆ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಈ ಚಿತ್ರವು 26 ಆಗಸ್ಟ್ 2026 ರಂದು ತೆರೆಗೆ ಬರಲಿದೆ.
04:16 PM (IST) Jul 01
ಅಪರ್ಣಾ ವಸ್ತಾರೆ ಅವರನ್ನು ನೆನೆದು ಸಾಹಿತಿ ನಾಗರಾಜ ವಸ್ತಾರೆ ಭಾವುಕರಾದರು. ಗ್ರಾಮಾಯಣ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ 'ಅವಳು ನನ್ನೊಳಗೇ ಇದ್ದಾಳೆ' ಎಂದ ಅವರ ಮಾತು ಎಲ್ಲರ ಮನಮುಟ್ಟಿತು.
04:12 PM (IST) Jul 01
ಭಾರತವು ಸಂಪೂರ್ಣ ಸ್ವದೇಶಿ ತಂತ್ರಜ್ಞಾನದ 'ಅನಂತ ಶಸ್ತ್ರ' (QRSAM) ಕ್ಷಿಪಣಿ ವ್ಯವಸ್ಥೆಯನ್ನು ಸೇನೆಗೆ ಸೇರ್ಪಡೆಗೊಳಿಸಲು ಸಜ್ಜಾಗಿದೆ. DRDO ಅಭಿವೃದ್ಧಿಪಡಿಸಿದ ಈ ವ್ಯವಸ್ಥೆಯು, ಹಳೆಯ 'OSA-AK' ಬದಲಿಗೆ ಶತ್ರುಗಳ ಡ್ರೋನ್, ಹೆಲಿಕಾಪ್ಟರ್ಗಳನ್ನು ಹೊಡೆದುರುಳಿಸಲಿದೆ.
03:41 PM (IST) Jul 01
03:22 PM (IST) Jul 01
ಐಪಿಎಲ್ನಲ್ಲಿ ಮಿಂಚಿದ 15ರ ಯುವ ಆಟಗಾರ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ಅವರ ಸಂಭಾವ್ಯ ಪಾದಾರ್ಪಣೆಯು ಇಂಗ್ಲೆಂಡ್ ತಂಡಕ್ಕೆ ಚಿಂತೆಗೀಡುಮಾಡಿದೆ. ಆದರೆ ಡ್ರೆಸ್ಸಿಂಗ್ ರೂಂನಲ್ಲಿ ನಡೆದಿದ್ದೇನು ಗೊತ್ತಾ?
02:24 PM (IST) Jul 01
ನಟಿ ರುಕ್ಮಿಣಿ ವಸಂತ್ ಅವರಿಗೆ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದಲ್ಲಿ ತೀರಾ ವಿಭಿನ್ನ ಎಂಬಂತೆ ರೆಬೆಲ್ ಲೇಡಿ ರೋಲ್ ಸಿಕ್ಕಿದೆ. ಇಡೀ ಸಿನಿಮಾದಲ್ಲೇ ಅವರಿಗೆ ಅಂತಹ ಪಾತ್ರವೋ ಅಥವಾ ಅದು ಒಂದು ಸೀನ್ ಅಷ್ಟೇನಾ ಎಂಬುದು ಸಿನಿಮಾ ತೆರೆಗೆ ಬಂದ ಬಳಿಕವಷ್ಟೇ ತಿಳಿಯಲಿದೆ!
01:20 PM (IST) Jul 01
01:10 PM (IST) Jul 01
01:09 PM (IST) Jul 01
ಟೀಸರ್ ನೋಡ್ತಾ ಇದ್ರೆ ಯಶ್ ವರ್ಸಸ್ ನಾಯಕಿಯರು ಎನ್ನುವಂತಹ ಕಥಾಹಂದರ ಏನಾದ್ರೂ ಇದೆಯಾ ಅನ್ನೋ ಪ್ರಶ್ನೆ ಮೂಡುವಂತಿದೆ. ಟಾಕ್ಸಿಕ್ನ ಈ ಲೇಡೀಸ್ ಅಂಡ್ ಲೇಡೀಸ್ ಟೀಸರ್ ಅಕ್ಷರಶಃ ಕಿಚ್ಚು ಹಚ್ಚಿದೆ..! 5 ನಾಯಕಿಯರನ್ನ ಪರಿಚಯಿಸೋ ಈ ಟೀಸರ್ ಟಾಕ್ಸಿಕ್ ಬಗ್ಗೆ ಸಿನಿಮಾ ಇದ್ದ ನಿರೀಕ್ಷೆಯನ್ನ 5 ಪಟ್ಟು ಹೆಚ್ಚು ಮಾಡಿದೆ..
12:53 PM (IST) Jul 01
ತುಮಕೂರು ಜಿಲ್ಲೆಯ ಶಿರಾ ಬಳಿ ಬಾಂಬ್ ಸಿಡಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ, ಮಹತ್ವದ ಮಾಹಿತಿಯೊಂದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಎಸ್ಪಿ ಸುದ್ದಿಗೋಷ್ಠಿ ನಡೆಸಿ ಮಹತ್ವದ ಮಾಹಿತಿ ಬಹಿರಂಗಗೊಳಿಸಿದ್ದಾರೆ.
12:43 PM (IST) Jul 01
ಬಾಡಿಗೆ ಪಡೆದವೆಂದರೂ ನೀರಿನ ಸಮಸ್ಯೆ, ಈ ರೀತಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಜೀವನ ನಡೆಸುವುದು ದುಸ್ತರವಾಗಿದೆ. ನಗರದಲ್ಲಿ ಇಷ್ಟೆಲ್ಲ ಸವಾಲುಗಳ ನಡುವೆ ಲಕ್ಷಾಂತರ ಮಂದಿ ಬೆಂಗಳೂರು ಏಕೆ ಬಿಡಲು ತಯಾರಿಲ್ಲ? ಎಂಬ ಪ್ರಶ್ನೆಗೆ ನಗರದ ಟೆಕ್ಕಿಯೊಬ್ಬರು ನೀಡಿದ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
12:11 PM (IST) Jul 01
ಗ್ಯಾಂಗ್ಸ್ಟರ್ ಕ್ರೈಮ್ ಕಥಾಹಂದರ, ವಾಣಿಜ್ಯ ಅಂಶಗಳು, ಭಾವನಾತ್ಮಕ ಕ್ಷಣಗಳು ಮತ್ತು ಉತ್ತಮ ತಾಂತ್ರಿಕ ನಿರ್ವಹಣೆಯೊಂದಿಗೆ ರಕ್ಕಿ ಕನ್ನಡ ಪ್ರೇಕ್ಷಕರಿಗೆ ಒಳ್ಳೆಯ ಸಿನಿ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ. ಒಟ್ಟಾರೆ 'RAKKY' ಕಿಡಿ ಹಚ್ಚಿದೆ..
11:59 AM (IST) Jul 01
11:15 AM (IST) Jul 01
09:56 AM (IST) Jul 01
09:13 AM (IST) Jul 01
09:09 AM (IST) Jul 01
08:49 AM (IST) Jul 01
ದೂರು ಸ್ವೀಕಾರಕ್ಕೆ ಪೊಲೀಸರು ಹಿಂದೇಟು ಹಾಕುತ್ತಿರುವ ಆರೋಪ ಕೇಳಿಬಂದ ಬೆನ್ನಲ್ಲೇ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಜನಸ್ನೇಹಿ ವ್ಯವಸ್ಥೆ ಜಾರಿಗೆ ದಿಟ್ಟ ಕ್ರಮ. ಇನ್ನು ದೂರು ಕೊಡಲು ಪೊಲೀಸ್ ಠಾಣೆಗೆ ಹೋಗಬೇಕಿಲ್ಲ, ನೀವಿರುವಲ್ಲಿಂದಲೇ ಆನ್ಲೈನ್ ಮೂಲಕ ಪೊಲೀಸರಿಗೆ ದೂರು ನೀಡಿ ಸ್ವೀಕೃತಿ ಪಡೆಯಬಹುದಾಗಿದೆ.
08:47 AM (IST) Jul 01
ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರ ಪತ್ನಿ ವರ್ಷ ಹರೀಶ್ ಗೌಡ ಅವರು, ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ಗೆ ಅಶ್ಲೀಲ ಕಮೆಂಟ್ ಹಾಕಿದ ಅನಾಮಿಕ ಖಾತೆಯ ವಿರುದ್ಧ ಮೈಸೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
08:35 AM (IST) Jul 01
ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗೆ ಮರುಚಾಲನೆ ಸಿಕ್ಕಿದೆ. ಕೇಂದ್ರ ಸಚಿವ ವಿ.ಸೋಮಣ್ಣ 2027ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಿದ್ದರೆ, ಡಿಸಿಎಂ ಡಾ.ಜಿ.ಪರಮೇಶ್ವರ್ ಒಂದು ವರ್ಷದೊಳಗೆ ತುಮಕೂರು-ಪಾವಗಡ ಮಾರ್ಗ ಪೂರ್ಣಗೊಳಿಸಲು ಸೂಚಿಸಿದ್ದಾರೆ.
08:11 AM (IST) Jul 01
ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ ಶತಮಾನದ ನಂತರ ದಲಿತರು ಪ್ರವೇಶಿಸುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. ತಾಲೂಕು ಆಡಳಿತ ಮತ್ತು ಪೊಲೀಸ್ ಬಂದೋಬಸ್ತ್ನಲ್ಲಿ, ಮೇಲ್ವರ್ಗದವರ ಸಹಕಾರದೊಂದಿಗೆ ಈ ದೇವಾಲಯ ಪ್ರವೇಶವು ಶಾಂತಿಯುತವಾಗಿ ನಡೆದು, ದಲಿತ ಸಮುದಾಯದ ಶತಮಾನದ ಕನಸು ನನಸಾಗಿದೆ.
08:08 AM (IST) Jul 01
ಸರ್ಕಾರಿ ನೌಕರಿ ಕನಸು ಕಂಡವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯದ ಸರ್ಕಾರಿ ಶಾಲೆಗಳಿಗೆ 2,500 ಕಂಪ್ಯೂಟರ್ ಸೈನ್ಸ್ (ಗಣಕ ವಿಜ್ಞಾನ) ಶಿಕ್ಷಕರ ಹುದ್ದೆಗಳನ್ನು ಮಂಜೂರು ಮಾಡಿದ್ದ ಸರ್ಕಾರವು, ಈ ಹುದ್ದೆಗಳ ನೇಮಕಾತಿಗೆ ನಿಯಮಾವಳಿಗೆ ತಿದ್ದುಪಡಿ ಮಾಡಿ ಕರಡು ಅಧಿಸೂಚನೆ ಹೊರಡಿಸಿದೆ.
07:58 AM (IST) Jul 01
07:37 AM (IST) Jul 01
ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನೆಲೆಸಿ, ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ 12 ಬಾಂಗ್ಲಾದೇಶ ಮೂಲದ ಪ್ರಜೆಗಳನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾನವ ಕಳ್ಳ ಸಾಗಣೆ ಮೂಲಕ ಬಾಂಗ್ಲಾದೇಶದಿಂದ ಮಹಿಳೆಯರನ್ನು ಕರೆಯಿಸಿ ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪಿಗಳು.
07:23 AM (IST) Jul 01
ಲಂಬಾಣಿ ತಾಂಡಾಗಳಲ್ಲಿ, ಬಂಜಾರಾ ಕ್ರಾಂತಿದಳ ಮತ್ತು ಸೇವಾಲಾಲ ಜಯಂತಿ ಸಮಿತಿಗಳು ವರದಕ್ಷಿಣೆ ಪಿಡುಗಿನ ವಿರುದ್ಧ ಹೊಸ ಕ್ರಾಂತಿಯನ್ನು ಆರಂಭಿಸಿವೆ. ವರದಕ್ಷಿಣೆ ಕೊಡು-ಕೊಳ್ಳುವಿಕೆಯನ್ನು ನಿಷೇಧಿಸಿ, ನಿಯಮ ಉಲ್ಲಂಘಿಸಿದವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸುವ ಐತಿಹಾಸಿಕ ನಿರ್ಧಾರ ಕೈಗೊಳ್ಳುವ ಮೂಲಕ ಸರಳ ವಿವಾಹಗಳಿಗೆ ಆದ್ಯತೆ ನೀಡುತ್ತಿವೆ.