Published : Aug 06, 2026, 05:23 AM ISTUpdated : Aug 06, 2026, 11:55 PM IST

Karnataka Latest News Live: Exclusive Interview - ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು - ಸತೀಶ್ ನೀನಾಸಂ ಸಂದರ್ಶನ

ಸಾರಾಂಶ

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ರಾಜ್ಯ ಸರ್ಕಾರ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಕಿಯಲ್ಲಿ ₹357.39 ಕೋಟಿಯನ್ನು ಗುರುವಾರ ಬಿಡುಗಡೆಗೊಳಿಸಲಿದೆ ಎಂದು ಮೂಲಗಳು ತಿಳಿಸಿವೆ.

2025-26ನೇ ಸಾಲಿನಲ್ಲಿ ಎಂಎಸ್‌ಪಿ ಅಡಿ ರೈತರಿಂದ ಖರೀದಿಸಿದ್ದ ರಾಗಿ, ಜೋಳದ ಬಾಬ್ತು ₹1128.13 ಕೋಟಿ ಬಾಕಿ ಉಳಿಸಿಕೊಳ್ಳಲಾಗಿತ್ತು. ಇದರಲ್ಲಿ ₹357.39 ಕೋಟಿಯನ್ನು ಬಿಡುಗಡೆ ಮಾಡಲು ಆಹಾರ ಇಲಾಖೆಯು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಬುಧವಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಹಿರಿತನದ ಆಧಾರದಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಸಂದಾಯವಾಗಲಿದೆ.

ಎಂಎಸ್‌ಪಿ ಅಡಿ ಪ್ರಸಕ್ತ ಸಾಲಿನಲ್ಲಿ ರಾಗಿ, ಜೋಳ, ಭತ್ತ ಖರೀದಿಸಿದ ರೈತರಿಗೆ ಈಗಾಗಲೇ ₹2487.69 ಕೋಟಿ ಪಾವತಿಸಲಾಗಿತ್ತು. ಭತ್ತ ಮಾರಾಟ ಮಾಡಿದ್ದ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಹಣ ಸಂದಾಯವಾಗಿದ್ದು ರಾಗಿ ಮತ್ತು ಜೋಳ ಮಾರಾಟ ಮಾಡಿದ್ದವರಿಗೆ ₹1,128.13 ಕೋಟಿ ಪಾವತಿಸಬೇಕಿತ್ತು. ಅದರಲ್ಲಿ ಈಗ ₹357.39 ಕೋಟಿ ಪಾವತಿಸಲಿದ್ದರೂ ಇನ್ನೂ ಸಹಸ್ರಾರು ರೈತರಿಗೆ ₹770.74 ಕೋಟಿ ಬಾಕಿ ಉಳಿಸಿಕೊಳ್ಳಲಾಗಿದೆ. ರೈತರಿಗೆ ಎಂಎಸ್‌ಪಿ ಹಣ ಬಾಕಿ ಉಳಿಸಿಕೊಂಡಿರುವ ಬಗ್ಗೆ ‘ಕನ್ನಡಪ್ರಭ’ ವಿಶೇಷ ವರದಿಗಳನ್ನು ಪ್ರಕಟಿಸಿ ಸರ್ಕಾರದ ಗಮನ ಸೆಳೆದಿತ್ತು.

11:55 PM (IST) Aug 06

Exclusive Interview - ಅಯೋಗ್ಯ 2ರಲ್ಲಿ ಗುಣಮಟ್ಟ, ನಗು ದುಪ್ಪಟ್ಟು - ಸತೀಶ್ ನೀನಾಸಂ ಸಂದರ್ಶನ

ಚಿತ್ರಮಂದಿರಗಳಲ್ಲಿ 100 ದಿನ ಯಶಸ್ವಿ ಪ್ರದರ್ಶನ ಕಂಡ ಅಯೋಗ್ಯ ಸಿನಿಮಾ, ಕಿರುತೆರೆಯಲ್ಲೂ ದಾಖಲೆ ಬರೆದು 400ಕ್ಕೂ ಹೆಚ್ಚು ಬಾರಿ ಪ್ರಸಾರ ಕಂಡಿದೆ ಎಂಬುದು ನಮಗೆ ದೊಡ್ಡ ಹೆಮ್ಮೆ ಎಂದರು ಸತೀಶ್ ನೀನಾಸಂ.

Read Full Story

11:05 PM (IST) Aug 06

Mobile - ಪವರ್‌ಬ್ಯಾಂಕ್ ಹಂಗೇ ಇಲ್ಲ! ಒಂದೇ ಚಾರ್ಜ್‌ಗೆ 3 ದಿನ ಬಾಳಿಕೆ ಬರೋ ಧಮಾಕಾ 5G ಫೋನ್ ಲಾಂಚ್; ನೋಡುಗರ ಕಣ್ಣು ಕುಕ್ಕುವ ಫೀಚರ್ಸ್!

ಶಿಯೋಮಿ ತನ್ನ ಬಹುನಿರೀಕ್ಷಿತ ರೆಡ್‌ಮಿ ನೋಟ್ 17 ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ 8,000mAh ದೈತ್ಯ ಬ್ಯಾಟರಿ, 120Hz AMOLED ಡಿಸ್ಪ್ಲೇ, ಮತ್ತು ಸ್ನಾಪ್‌ಡ್ರಾಗನ್ 4 ಜನ್ 4 ಪ್ರೊಸೆಸರ್‌ನೊಂದಿಗೆ ಬರುತ್ತದೆ. ₹27,999 ರಿಂದ ಆರಂಭವಾಗುವ ಈ ಫೋನ್, ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲವನ್ನು ಸಹ ಹೊಂದಿದೆ.
Read Full Story

10:49 PM (IST) Aug 06

ಶಾಂತಿ ಕ್ರಾಂತಿ ರೀ-ರಿಲೀಸ್, ‘ಮುಧೋಳ್’ ಸಿನಿಮಾ, ನಿರ್ಮಾಪಕರ ಪ್ರಶ್ನೆ - ವಿಕ್ರಮ್ ರವಿಚಂದ್ರನ್ ಓಪನ್ ಟಾಕ್

ಈ ವರ್ಷ ಸೆಪ್ಟೆಂಬರ್‌ 19 ಬಂದರೆ ‘ಶಾಂತಿ ಕ್ರಾಂತಿ’ ಬಿಡುಗಡೆಯಾಗಿ 25 ವರ್ಷಗಳಾಗುತ್ತದೆ. 90ನೇ ದಶಕದ ಆರಂಭಕ್ಕೇ 10 ಕೋಟಿಯಲ್ಲಿ ತಯಾರಾದ ಸಿನಿಮಾ ಅಂತ ಜನ ಹೇಳುತ್ತಾರೆ ಎಂದರು ವಿಕ್ರಮ್ ರವಿಚಂದ್ರನ್.

Read Full Story

10:14 PM (IST) Aug 06

Exclusive - ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ನನ್ನ ಆ್ಯಕ್ಷನ್‌ ಇಷ್ಟ ಆಗಿದೆ - ಪ್ರಿಯಾಂಕ ಉಪೇಂದ್ರ ಸಂದರ್ಶನ

‘ಡಿಟೆಕ್ಟಿವ್‌ ತೀಕ್ಷ್ಣ’ ನನ್ನ 50ನೇ ಸಿನಿಮಾ. ಏನಾದರೂ ವಿಶೇಷತೆ ಇರಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ. ನಾಯಕಿ ಕೇಂದ್ರಿತ ಪತ್ತೇದಾರಿಕೆ ಸಿನಿಮಾಗಳು ಕನ್ನಡದಲ್ಲಿ ಬಂದಿಲ್ಲ ಎಂದು ಸಂದರ್ಶನದಲ್ಲಿ ಪ್ರಿಯಾಂಕ ಉಪೇಂದ್ರ ಹೇಳಿದರು.

Read Full Story

09:32 PM (IST) Aug 06

ಫ್ರಿಡ್ಜ್‌ನಲ್ಲಿ ಐಸ್ ಬೆಟ್ಟದಂತೆ ಇದೆಯಾ? ಚಾಕು ಬಳಸದೆ ಈ ಟ್ರಿಕ್ ಬಳಸಿ, ನಿಮಿಷಗಳಲ್ಲಿ ಕ್ಲೀನ್ ಮಾಡಿ!

ಸಿಂಗಲ್ ಡೋರ್ ಫ್ರಿಡ್ಜ್‌ನ ಫ್ರೀಜರ್‌ನಲ್ಲಿ ಬೆಟ್ಟದಂತೆ ಶೇಖರವಾಗುವ ಐಸನ್ನು, ಚಾಕು ಬಳಸದೆ, ಬರೀ ಬಿಸಿ ನೀರಿನ ಹಬೆಯಿಂದ ಸುಲಭವಾಗಿ ಕರಗಿಸುವುದು ಹೇಗೆಂದು ಇಲ್ಲಿ ವಿವರವಾಗಿ ತಿಳಿಯೋಣ.

Read Full Story

09:05 PM (IST) Aug 06

SIR - ಬೆಂಗಳೂರಿನಲ್ಲಿ 50 ಲಕ್ಷ ವೋಟರ್ ಐಡಿ ಕಟ್?! ನಿಮ್ಮ ಹೆಸರೂ ಲಿಸ್ಟ್‌ನಲ್ಲಿದೆಯಾ ಎಂದು ಹೀಗೆ ಚೆಕ್ ಮಾಡಿ!

ಕರ್ನಾಟಕದ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಸುಮಾರು 1.11 ಕೋಟಿ ಮತದಾರರನ್ನು 'ಎಎಸ್‌ಡಿಡಿಒ' ವರ್ಗದಲ್ಲಿ ಗುರುತಿಸಲಾಗಿದೆ. ಈ ಹೆಸರುಗಳು ಪಟ್ಟಿಯಿಂದ ಡಿಲೀಟ್ ಆಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ  ನಿಮ್ಮ ಹೆಸರೂ ಲಿಸ್ಟ್‌ನಲ್ಲಿದೆಯಾ ಎಂದು ಹೀಗೆ ಚೆಕ್ ಮಾಡಿ.

Read Full Story

08:35 PM (IST) Aug 06

‘ಕೂಸೇ’ ಎಂದು ಕರೆಯುತ್ತಿದ್ದರು.. ‘ನಮ್ಮೂರ ಮಂದಾರ ಹೂವೆ’ ನೆನಪಲ್ಲಿ ನಟಿ ಸುಮನ್ ನಗರ್ಕರ್

Nammoora Mandara Hoove 30 Years: ‘ನಮ್ಮೂರ ಮಂದಾರ ಹೂವೆ’ ಸಿನಿಮಾ ಬಿಡುಗಡೆಯಾಗಿ ಬರೋಬ್ಬರಿ 30 ವರ್ಷಗಳು ಕಳೆದಿದ್ದು, ಇದೀಗ ಚಿತ್ರದ ನೆನಪುಗಳು ಮತ್ತೊಮ್ಮೆ ಸಿನಿಪ್ರಿಯರ ಮುಂದೆ ಬಂದಿವೆ.

Read Full Story

07:44 PM (IST) Aug 06

ಡ್ರ್ಯಾಗನ್‌ನಂತೆ ಕಾಣುವ ಅಪರೂಪದ ಹಾವು! ನೋಡಿದ್ರೆ ಇದು ನಿಜವಾದ ಹಾವೇನಾ ಅಂತೀರಾ!

ಪ್ರಕೃತಿಯಲ್ಲಿ ಕೆಲವು ಜೀವಿಗಳು ನಿಜಕ್ಕೂ ಕಾಲ್ಪನಿಕ ಲೋಕದಿಂದ ಹೊರಬಂದಂತೆ ಕಾಣುತ್ತವೆ. ಅಂತಹ ಅಪರೂಪದ ಜೀವಿಗಳ ಪೈಕಿ ಇದೀಗ ‘ಡ್ರ್ಯಾಗನ್ ಸ್ನೇಕ್’ ಎಂದೇ ಗಮನ ಸೆಳೆಯುತ್ತಿರುವ ಒಂದು ಹಾವು ಸಾಕಷ್ಟು ಕುತೂಹಲ ಮೂಡಿಸಿದೆ.

Read Full Story

07:24 PM (IST) Aug 06

ಸೌನಾ ಸ್ನಾನ ಪ್ರಿಯರಿಗೆ ಗುಡ್‌ನ್ಯೂಸ್? 30 ನಿಮಿಷದ ಸೆಷನ್ ಬಗ್ಗೆ ಹೊಸ ಸಂಶೋಧನೆ

Sauna Benefits: ಸೌನಾ ಸ್ನಾನದಿಂದ ದೇಹಕ್ಕೆ ವಿಶ್ರಾಂತಿ ಸಿಗುವುದಷ್ಟೇ ಅಲ್ಲ, ರೋಗನಿರೋಧಕ ವ್ಯವಸ್ಥೆಯ ಮೇಲೂ ಅಲ್ಪಾವಧಿಯ ಪರಿಣಾಮ ಉಂಟಾಗಬಹುದು ಎಂದು ಹೊಸ ಸಂಶೋಧನೆಯೊಂದು ಸೂಚಿಸಿದೆ.

Read Full Story

07:04 PM (IST) Aug 06

ಬಟ್ಟೆ ಒಗೆಯುವಾಗ ವಿನೆಗರ್ ಬಳಸಿದ್ದೀರಾ? ಗೊತ್ತಿರದ 7 ಅದ್ಭುತ ಪ್ರಯೋಜನಗಳು ಇಲ್ಲಿವೆ!

Vinegar Laundry Benefits: ಸಾಮಾನ್ಯವಾಗಿ ಅಡುಗೆಮನೆಯಲ್ಲಿರುವ ಡಿಸ್ಟಿಲ್ಡ್ ವೈಟ್ ವಿನೆಗರ್ ಸಾಕಷ್ಟು ಉಪಯೋಗಗಳನ್ನು ಹೊಂದಿದ್ದರೂ, ಲಾಂಡ್ರಿಯಲ್ಲಿ ಅದರ ಬಳಕೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ.

Read Full Story

06:32 PM (IST) Aug 06

‘ಸಮಯ ಬಂದಾಗ ಎಲ್ಲ ಹೇಳುವೆ’ - ಸಚಿವ ಸ್ಥಾನ ತಪ್ಪಿದ್ದಕ್ಕೆ ಫುಲ್ ಸ್ಟೋರಿ ಬಿಚ್ಚಿಟ್ಟ ಬಸವರಾಜ ಶಿವಣ್ಣವರ

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವ ಸ್ಥಾನ ವಂಚಿತ ಆಕಾಂಕ್ಷಿಗಳ ಅಸಮಾಧಾನ ಮುಂದುವರಿದಿದೆ. ಈ ನಡುವೆ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಅವರು ಸಚಿವ ಸ್ಥಾನ ಕೈತಪ್ಪಿದ ಬೆಳವಣಿಗೆಗಳ..

Read Full Story

06:15 PM (IST) Aug 06

‘ಪಕ್ಷ ತಾಯಿ ಇದ್ದಂತೆ, ಮೋಸ ಮಾಡಬಾರದು’.. ನಾಗೇಂದ್ರ ಸಚಿವ ಸ್ಥಾನಕ್ಕೆ ನರೇಂದ್ರಸ್ವಾಮಿ ಸಮರ್ಥನೆ

Kodagu: ಪಕ್ಷ ತಾಯಿ ಇದ್ದಂತೆ, ಅದಕ್ಕೆ ಯಾವುದೇ ಕಾರಣಕ್ಕೂ ಮೋಸ ಮಾಡದಂತೆ ಪ್ರಾಮಾಣಿಕವಾಗಿ ಇರುವವರನ್ನು ಪಕ್ಷವೇ ಗುರುತ್ತಿಸುತ್ತದೆ. ಹಾಗೆಯೇ ನಾಗೇಂದ್ರ ಅವರನ್ನು ಹೈಕಮಾಂಡ್ ಗುರುತ್ತಿಸಿ ಸಚಿವ ಸ್ಥಾನ ನೀಡಿದೆ.

Read Full Story

06:02 PM (IST) Aug 06

‘ನಾವೂ ಸ್ವಲ್ಪ ಒದ್ದೆ ಆಗೋಣ’ - ಅಭಿಮಾನಿಗಳಿಗಾಗಿ ಮಳೆಯಲ್ಲಿ ನೆನೆದ ಕಿಚ್ಚ ಸುದೀಪ್

ಕಿಚ್ಚ ಸುದೀಪ್ ಎಂದರೆ ಅಭಿಮಾನಿಗಳಿಗೆ ಕೇವಲ ನಟನಲ್ಲ, ಅವರೊಂದಿಗೆ ಭಾವನಾತ್ಮಕ ನಂಟು ಹೊಂದಿರುವ ಸ್ಟಾರ್. ಈ ಮಾತಿಗೆ ಮತ್ತೊಮ್ಮೆ ಸಾಕ್ಷಿಯಾಗಿದೆ ರಾಮನಗರ ಕರಗ ಉತ್ಸವದಲ್ಲಿ ನಡೆದ ಘಟನೆ. ಮಳೆಯ ನಡುವೆಯೂ..

Read Full Story

05:35 PM (IST) Aug 06

BBK 13 - ನೀವು ಬಿಗ್ ಬಾಸ್‌ಗೆ ಹೋಗ್ಬೇಕಾ? ಲಾಲ್‌ಬಾಗ್ ಫ್ಲವರ್ ಶೋನಲ್ಲಿ ಸಿಕ್ಕಿದೆ ಭರ್ಜರಿ ಅವಕಾಶ!

ಬಿಗ್ ಬಾಸ್‌ ಕನ್ನಡ ಸೀಸನ್ 13 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕಿಚ್ಚ ಸುದೀಪ್ ಅವರ ಪ್ರೊಮೋ ಬಿಡುಗಡೆಯಾಗಿದ್ದು, ಹೊಸ ಸೀಸನ್‌ಗಾಗಿ ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Read Full Story

05:22 PM (IST) Aug 06

Indian Army - ನೂರಾರು ಬೈಕ್‌ಗಳಿದ್ದರೂ ಭಾರತೀಯ ಸೇನೆ ರಾಯಲ್ ಎನ್ಫೀಲ್ಡ್ ಅನ್ನೇ ಆಯ್ದುಕೊಂಡಿದ್ದೇಕೆ? ಇಲ್ಲಿದೆ ರೋಚಕ ಸ್ಟೋರಿ!

1949ರ ಗಡಿ ಬಿಕ್ಕಟ್ಟಿನ ನಂತರ, ಭಾರತೀಯ ಸೇನೆಗೆ ಕಠಿಣ ಭೂಪ್ರದೇಶಗಳಲ್ಲಿ ಗಸ್ತು ತಿರುಗಲು ಬಲಿಷ್ಠ ಬೈಕ್‌ನ ಅಗತ್ಯವಿತ್ತು. ಈ ಪರೀಕ್ಷೆಯಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಗೆದ್ದು, ಸೇನೆಯ ಅವಿಭಾಜ್ಯ ಅಂಗವಾಯಿತು. ಈ ಐತಿಹಾಸಿಕ ಬಾಂಧವ್ಯವು 'ಎನ್‌ಫೀಲ್ಡ್ ಇಂಡಿಯಾ' ಸ್ಥಾಪನೆಗೆ ಕಾರಣವಾಗಿ, ಬುಲೆಟ್ ದೇಶಭಕ್ತಿಯ ಸಂಕೇತವಾಗಿ ಬೆಳೆಯಿತು.
Read Full Story

05:15 PM (IST) Aug 06

ಕೆಲ ದಿನಗಳ ಬಳಿಕ ವಿಕ್ರಮ್ ರವಿಚಂದ್ರನ್ ಏಕಾಏಕಿ ಆಕ್ಟಿವ್ - ‘ಮುಧೋಳ್’ ಬಗ್ಗೆ ಕೊಟ್ಟ ಸುಳಿವೇನು?

ನಟ ವಿಕ್ರಮ್ ರವಿಚಂದ್ರನ್ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಕೆಲ ದಿನಗಳಿಂದ ಡಿಜಿಟಲ್ ಸ್ಪೇಸ್‌ನಿಂದ ದೂರವಿದ್ದ ವಿಕ್ರಮ್‌, ಇದೀಗ ತಮ್ಮ ಬಹುನಿರೀಕ್ಷಿತ ಸಿನಿಮಾ ‘ಮುಧೋಳ್’ ಕುರಿತು..

Read Full Story

04:51 PM (IST) Aug 06

ಗಾಯದ ಬಳಿಕ ಮದುವೆ ಫೋಟೋ ನೋಡ್ತಿದ್ದೀನಿ - ಆರೋಗ್ಯದ ಗುಟ್ಟು ಬಿಚ್ಚಿಟ್ಟ ರಶ್ಮಿಕಾ ಮಂದಣ್ಣ

ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸೊಂಟದ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ತಮ್ಮ ದೈನಂದಿನ ಜೀವನದ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು…

Read Full Story

04:27 PM (IST) Aug 06

‘ಕನ್ನಡಿಗರಿಂದಲೇ ಶಿಲೆಯಾಗಿದ್ದೀರಿ’.. ಹೀರೋಗಳಿಗೆ ಓಂ ಪ್ರಕಾಶ್ ರಾವ್ ಕೊಟ್ಟ ಖಡಕ್ ಸಂದೇಶವೇನು?

ಒಂದು ಸಿನಿಮಾ ಗೆದ್ದರೆ ಹೀರೋಗೆ ಹೆಚ್ಚಿನ ಕ್ರೆಡಿಟ್‌ ಸಿಗೋದು. ಗೆದ್ದ ತಕ್ಷಣ ಕನ್ನಡಿಗರು ಬೇಡ, ಬೇರೆಯವರು ಇವರಿಗಿಂತ ಚೆನ್ನಾಗಿ ಮಾಡ್ತಾರೆ ಅನ್ನುವ ಮನೋಭಾವ ಹೀರೋಗಳಲ್ಲಿ ಜಾಸ್ತಿ ಆಗುತ್ತಿದೆ ಎಂದರು ಓಂ ಪ್ರಕಾಶ್ ರಾವ್.

Read Full Story

04:11 PM (IST) Aug 06

Cloths - ಮಳೆಗಾಲಕ್ಕೆ ಈ ಬಟ್ಟೆಯೇ ಪರ್ಫೆಕ್ಟ್ ಚಾಯ್ಸ್ - ಇದರ ಹಿಂದಿದೆ ಬಹುಮುಖ್ಯ ಕಾರಣ!

ಮಳೆಗಾಲದಲ್ಲಿ ಹೆಚ್ಚಾಗುವ ತೇವಾಂಶ ಮತ್ತು ಒದ್ದೆಯಾದ ವಾತಾವರಣಕ್ಕೆ ಹತ್ತಿ (ಕಾಟನ್) ಬಟ್ಟೆಗಳು ಅತ್ಯುತ್ತಮ ಆಯ್ಕೆಯಾಗಿದೆ. ಹಗುರ, ಗಾಳಿಯಾಡುವ ಮತ್ತು ಬೇಗನೆ ಒಣಗುವ ಗುಣ ಹೊಂದಿರುವ ಕಾಟನ್, ಚರ್ಮದ ಸೋಂಕುಗಳನ್ನು ತಡೆಯುವುದಲ್ಲದೆ, ಮಕ್ಕಳಿಗೆ ಮತ್ತು ದೊಡ್ಡವರಿಗೆ ಆರಾಮದಾಯಕ ಅನುಭವ ನೀಡುತ್ತದೆ. ಸಡಿಲವಾದ ವಿನ್ಯಾಸ ಮತ್ತು ಗಾಢ ಬಣ್ಣಗಳನ್ನು ಆರಿಸಿಕೊಳ್ಳುವ ಮೂಲಕ ಈ ಋತುವನ್ನು ಸ್ಟೈಲಿಶ್ ಆಗಿ ಕಳೆಯಬಹುದು.
Read Full Story

04:10 PM (IST) Aug 06

ಕಾರವಾರ ಕದಂಬ ನೌಕಾನೆಲೆಯಲ್ಲಿ ಐಎನ್‌ಎಸ್ ಮಾಲವನ್‌ ಕಾರ್ಯಾಚರಣೆ - ನೌಕೆಗೆ ಬಲ ತುಂಬಿದ AM/NS ಇಂಡಿಯಾ ಉಕ್ಕು!

ಭಾರತೀಯ ನೌಕಾಪಡೆಯ ಬಲ ಹೆಚ್ಚಿಸಲು 'ಮೇಕ್ ಇನ್ ಇಂಡಿಯಾ' ಅಭಿಯಾನದಡಿ ನಿರ್ಮಿಸಲಾದ ಅತ್ಯಾಧುನಿಕ 'ಐಎನ್‌ಎಸ್ ಮಾಲವನ್‌' ಯುದ್ಧನೌಕೆಯು ಕಾರವಾರದ ಕದಂಬ ನೌಕಾನೆಲೆಯಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಜಲಾಂತರ್ಗಾಮಿ ನಿರೋಧಕ ಸಾಮರ್ಥ್ಯ ಹೊಂದಿರುವ ಈ ನೌಕೆಗೆ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಸಂಸ್ಥೆಯು ಸಂಪೂರ್ಣ ದೇಶೀಯವಾಗಿ ತಯಾರಿಸಿದ ವಿಶೇಷ ನೇವಿ-ಗ್ರೇಡ್ ಉಕ್ಕನ್ನು ಪೂರೈಸಿದೆ.
Read Full Story

03:48 PM (IST) Aug 06

ರೇಣುಕಾಸ್ವಾಮಿ ಕೇಸ್ ಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ - ಪ್ರದೋಶ್ ಮಾಫಿ ಸಾಕ್ಷಿಯಾದರೆ ದರ್ಶನ್‌ಗೆ ಲಾಭ! ಇದು ಫ್ಲ್ಯಾನ್?

ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾರೆ. ಈ ಬೆಳವಣಿಗೆಯು ದರ್ಶನ್‌ಗೆ ಸಂಕಷ್ಟ ತರುವುದಿಲ್ಲ, ಬದಲಾಗಿ ಲಂಚ ಪಡೆದು ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಪೊಲೀಸ್ ಅಧಿಕಾರಿಗಳನ್ನು ಬಲೆಗೆ ಬೀಳಿಸಲಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ಸ್ನೇಹಮಯಿ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.
Read Full Story

03:37 PM (IST) Aug 06

ನಾಗರಹಾವಿನ ಪಕೋಡಾ ! ಕೋಬ್ರಾ ಮೀಟ್ ಮಾರ್ಕೆಟ್ ನಲ್ಲಿ ಏನೆಲ್ಲ ಸಿಗುತ್ತೆ?

cobra meat : ಹಾವು ಕಂಡ್ರೆ ಭಯ ಶುರುವಾಗುತ್ತೆ. ಅದ್ರಲ್ಲೂ ನಾಗರಹಾವು ಅಂದ್ರೆ ನಿದ್ರೆಯಲ್ಲೂ ಜನ ಬೆವರ್ತಾರೆ. ಆದ್ರೆ ಈಗ ನಾವು ಹೇಳ್ತಿರೋ ಜಾಗದಲ್ಲಿ ಜನರು ಹಾವನ್ನು ಪಕೋಡಾ ಮಾಡಿ ತಿಂತಾರೆ.

Read Full Story

03:14 PM (IST) Aug 06

ಸಚಿವ ಸ್ಥಾನ ಅನುಭವಿಸಿದ ಹಿರಿಯರೇ ಮಂತ್ರಿ ಸ್ಥಾನ ತಪ್ಪಿಸುವ ಕೆಲ್ಸ ಮಾಡಿದ್ದಾರೆ -ಉ.ಕನ್ನಡ ಕಾಂಗ್ರೆಸ್‌ನ ಅಸಲಿ ಸತ್ಯ ಬಿಚ್ಚಿಟ್ಟ ಸೈಲ್

ಉತ್ತರ ಕನ್ನಡ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಲು ಶಾಸಕರ ನಡುವಿನ ಒಗ್ಗಟ್ಟಿನ ಕೊರತೆಯೇ ಕಾರಣ ಎಂದು ಶಾಸಕ ಸತೀಶ್ ಸೈಲ್ ಆರೋಪಿಸಿದ್ದಾರೆ. ಹಿರಿಯ ಶಾಸಕರಾದ ಆರ್.ವಿ. ದೇಶಪಾಂಡೆ ಮತ್ತು ಮಂಕಾಳು ವೈದ್ಯರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದು, ಇತ್ತ ಮಂಕಾಳು ವೈದ್ಯರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಮೀನುಗಾರ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

Read Full Story

01:54 PM (IST) Aug 06

ಯೋಗೇಶ್ ಗೌಡ ಕೊಲೆ ಪ್ರಕರಣ - ಬೇಲ್ ಸಿಕ್ಕ ಜೋಶ್, ಧಾರವಾಡದ ಗಡಿ ದಾಟಲು ವಿನಯ್ ಕುಲಕರ್ಣಿ ಹೊಸ ಅಸ್ತ್ರ!

ಯೋಗೇಶ್ ಗೌಡ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ತಮ್ಮ ಜಾಮೀನು ಷರತ್ತು ಸಡಿಲಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಸಾಕ್ಷಿ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿಸಲಾಗಿರುವ ಧಾರವಾಡ ಜಿಲ್ಲಾ ಪ್ರವೇಶ ನಿರ್ಬಂಧವನ್ನು ತೆರವುಗೊಳಿಸುವಂತೆ ಅವರು ಮನವಿ ಮಾಡಿದ್ದಾರೆ.
Read Full Story

01:43 PM (IST) Aug 06

ಶುರುವಾಗ್ತಿದೆ ಕೂಡು ಕುಟುಂಬದ ಹೊಸ ಕಥೆ "ಆನಂದ ನಿಲಯ" ಆಗಸ್ಟ್ 10 ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ...!

ಒಗ್ಗಟ್ಟಿನ ಸಾರವನ್ನು ಸಾರುವ ಸುಂದರ ಕೂಡು ಕುಟುಂಬದ ಕಥೆ.ತಂದೆಯ ಹಿಟ್ಟಿನ ಗಿರಣಿಯನ್ನು ಒಟ್ಟಾಗಿ ನಿರ್ವಹಿಸೋ ನಾಲ್ಕು ಜನ ಸಹೋದರರು ಧರ್ಮ, ಅರ್ಜುನ್, ಭುವನ್ ಮತ್ತು ನಕುಲ್'ಆನಂದ ನಿಲಯಕ್ಕೆ ಮಹಾಲಕ್ಷ್ಮೀಯಂತಿರೋ ಧರ್ಮನ ಪತ್ನಿ ಸುಧಾ. ಮೈದುನರನ್ನು ಮಕ್ಕಳಂತೆ ಸಾಕಿ ಧರ್ಮನ ಸಹೋದರರಿಗೆ ಅಮ್ಮನಂತಿರೋ ಅತ್ತಿಗೆ

Read Full Story

01:30 PM (IST) Aug 06

ಸಂಪುಟ ವಿಸ್ತರಣೆ ಸೀಕ್ರೆಟ್ ಬಿಚ್ಚಿಟ್ಟ ಯತೀಂದ್ರ ಸಿದ್ದರಾಮಯ್ಯ - ಅಪ್ಪ ಸಿದ್ದು ಹಾಕಿದ್ದ ಮಾಸ್ಟರ್ ಪ್ಲಾನ್ ರಿವೀಲ್

ಆಗಸ್ಟ್ 3 ರಂದು ನಡೆದ ಸಚಿವ ಸಂಪುಟ ವಿಸ್ತರಣೆಯ ಹಿಂದಿನ ಅಸಲಿ ಕಥೆ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಸಿದ್ಧಪಡಿಸಿದ್ದ 'ಮಾಸ್ಟರ್ ಪ್ಲಾನ್' ಬಗ್ಗೆ ಅವರ ಪುತ್ರ ಹಾಗೂ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಮೈಸೂರಿನಲ್ಲಿ ಸ್ಪೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಿದ್ದರಾಮಯ್ಯ ಅವರ ಶಿಫಾರಸ್ಸು ಪಟ್ಟಿಯಲ್ಲಿದ್ದವರು ಯಾರು? ಹೈಕಮಾಂಡ್ ಅದಕ್ಕೆ ಹೇಗೆ ಪ್ರತಿಕ್ರಿಯಿಸಿತು ಎಂಬ ಇಡೀ 'ಸೀಕ್ರೆಟ್' ಈಗ ಬಹಿರಂಗವಾಗಿದೆ.

Read Full Story

12:56 PM (IST) Aug 06

21 ವರ್ಷ ದಾಂಪತ್ಯ, 5 ಮಕ್ಕಳು! ಪ್ರಿಯಕರನ ಪಾಶಕ್ಕೆ ಬಿದ್ದ ಪತ್ನಿ; ಪ್ರೀತಿಯ ಹೆಂಡ್ತಿಗೆ ಪ್ರೇಮಿ ಜೊತೆ ಮದ್ವೆ ಮಾಡಿಸಿದ ಗಂಡ

ಉತ್ತರ ಪ್ರದೇಶದ ಸಂತ ಕಬೀರ್ ನಗರದಲ್ಲಿ, 21 ವರ್ಷಗಳ ಕಾಲ ಸಂಸಾರ ನಡೆಸಿದ ಪತ್ನಿ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ನಿತ್ಯದ ಜಗಳದಿಂದ ಬೇಸತ್ತ ಪತಿಯೇ ಮುಂದೆ ನಿಂತು, ದೇವಸ್ಥಾನದಲ್ಲಿ ತನ್ನ ಪತ್ನಿಗೆ ಆಕೆಯ ಪ್ರೇಮಿಯ ಜೊತೆ ಮದುವೆ ಮಾಡಿಸಿಕೊಟ್ಟಿದ್ದಾನೆ.
Read Full Story

12:47 PM (IST) Aug 06

ದರ್ಶನ್‌ಗೆ ಮತ್ತಷ್ಟು ಸಂಕಷ್ಟ, ಪ್ರದೋಷ್ ಬಳಿಕ ಕೋರ್ಟ್‌ಲ್ಲಿ ಸತ್ಯ ಹೇಳಲು ಮುಂದಾದ ಕುಚುಕು ದೋಸ್ತ್ ವಿನಯ್, ರವಿಶಂಕರ್!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ ಬೆನ್ನಲ್ಲೇ, ಇದೀಗ ನಟ ದರ್ಶನ್ ಆಪ್ತರಾದ ವಿನಯ್ ಮತ್ತು ರವಿಶಂಕರ್ ಕೂಡ ಮಾಫಿ ಸಾಕ್ಷಿಯಾಗಲು ನಿರ್ಧರಿಸಿದ್ದಾರೆ. ಇದು ಜೈಲಿನಲ್ಲಿರುವ ದರ್ಶನ್‌ಗೆ ಮತ್ತಷ್ಟು ಕಾನೂನು ಸಂಕಷ್ಟವನ್ನು ತಂದೊಡ್ಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ.
Read Full Story

12:19 PM (IST) Aug 06

8 ಕಾಲು, 3 ಕಿವಿಗಳಿರೋ ವಿಚಿತ್ರ ಆಡಿನ ಮರಿ ಜನನ; ಸೊರಬ ತಾಲೂಕಿನಲ್ಲಿ ಅಪರೂಪದ ಘಟನೆ

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ಎಂಟು ಕಾಲು, ಮೂರು ಕಿವಿ, ಎರಡು ಬಾಲ ಮತ್ತು ಎರಡು ನಾಲಿಗೆಗಳಿದ್ದ ವಿಚಿತ್ರ ಆಡಿನ ಮರಿಯೊಂದು ಜನಿಸಿದೆ. ಕಾಳಿಂಗಪ್ಪ ಭಾವಿಕಟ್ಟೇರ್ ಅವರ ಮನೆಯಲ್ಲಿ ಜನಿಸಿದ ಈ ಮರಿಯು, ಕೆಲ ಗಂಟೆಗಳ ಕಾಲ ಬದುಕುಳಿದು ನಂತರ ಸಾವನ್ನಪ್ಪಿದ್ದು, ಗ್ರಾಮಸ್ಥರಲ್ಲಿ ತೀವ್ರ ಕುತೂಹಲ ಮೂಡಿಸಿತ್ತು.
Read Full Story

11:51 AM (IST) Aug 06

'ರೇಣುಕಾಸ್ವಾಮಿ ಕೇಸ್‌ ಬಗ್ಗೆ ಎಲ್ಲಾ ಸತ್ಯ ಹೇಳ್ತಿನಿ' ದರ್ಶನ್ ಆಪ್ತ ಸ್ನೇಹಿತ 14ನೇ ಆರೋಪಿ ನ್ಯಾಯಾಲಯದಲ್ಲಿ ಅರ್ಜಿ!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ನಟ ದರ್ಶನ್ ಆಪ್ತ ಮತ್ತು 14ನೇ ಆರೋಪಿ ಪ್ರದೋಷ್ 'ಮಾಫಿ ಸಾಕ್ಷಿ'ಯಾಗಲು ಸೆಷನ್ಸ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾನೆ. ಪ್ರಕರಣದ ಸಂಪೂರ್ಣ ಸತ್ಯವನ್ನು ಬಹಿರಂಗಪಡಿಸುವುದಾಗಿ ತಿಳಿಸಿರುವ ಈ ಬೆಳವಣಿಗೆಯು, ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ತೀವ್ರ ಕಾನೂನು ಸಂಕಷ್ಟವನ್ನು ತಂದೊಡ್ಡಿದೆ.
Read Full Story

11:02 AM (IST) Aug 06

ಯಲಹಂಕದಲ್ಲಿ ಹೃದಯ ವಿದ್ರಾವಕ ಘಟನೆ.. ಒಂದೇ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರು ಯುವತಿಯರು ಪತ್ತೆ

ಬೆಂಗಳೂರಿನ ಯಲಹಂಕ ಬಳಿ ಮರವೊಂದಕ್ಕೆ ಇಬ್ಬರು ಯುವತಿಯರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನೇಪಾಳ ಮೂಲದವರೆಂದು ಗುರುತಿಸಲಾದ ಯುವತಿಯರ ಈ ಅಸಹಜ ಸಾವಿನ ಕುರಿತು ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದು, ಸಾವಿನ ನಿಖರ ಕಾರಣ ಇನ್ನೂ ನಿಗೂಢವಾಗಿದೆ.
Read Full Story

10:07 AM (IST) Aug 06

ತೆರೆಯ ಹಿಂದಿನ ಜಯಂತ್ ವ್ಯಕ್ತಿತ್ವದ ಬಗ್ಗೆ ನಟಿ ಯಮುನಾ ಶ್ರೀನಿಧಿ ಅಚ್ಚರಿಯ ಮಾತುಗಳು

ಲಕ್ಷ್ಮೀ ನಿವಾಸ ಧಾರಾವಾಹಿಯ ನಟಿ ಯಮುನಾ ಶ್ರೀನಿಧಿ, ತಮ್ಮ ಸಹನಟ ದೀಪಕ್ (ಜಯಂತ್) ಬಗ್ಗೆ ಫೇಸ್‌ಬುಕ್‌ನಲ್ಲಿ ಮೆಚ್ಚುಗೆಯ ಮಾತುಗಳನ್ನು ಹಂಚಿಕೊಂಡಿದ್ದಾರೆ. ತೆರೆಯ ಮೇಲೆ ದೀಪಕ್ ಅವರ ನಟನೆ ಎಷ್ಟು ಅದ್ಭುತವೋ, ತೆರೆಮರೆಯಲ್ಲಿ ಅವರ ವ್ಯಕ್ತಿತ್ವವೂ ಅಷ್ಟೇ ಶ್ರೇಷ್ಠ ಎಂದು ಬಣ್ಣಿಸಿದ್ದಾರೆ.

Read Full Story

10:04 AM (IST) Aug 06

ರೈಲು ಬರುವ ವೇಳೆಯೇ ಕೆಟ್ಟು ನಿಂತ 25 ಮಕ್ಕಳಿದ್ದ ಶಾಲಾ ವಾಹನ.. ಸ್ಥಳೀಯರಿಂದ ತಪ್ಪಿದ ಭಾರೀ ಅನಾಹುತ

ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ, ರೈಲ್ವೆ ಹಳಿಯ ಮೇಲೆ ಕೆಟ್ಟು ನಿಂತಿದ್ದ 25ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ವಾಹನವನ್ನು ಸ್ಥಳೀಯರು ರಕ್ಷಿಸಿದ್ದಾರೆ. ರೈಲು ಬರುವ ಕೆಲವೇ ಕ್ಷಣಗಳ ಮೊದಲು, ಗ್ರಾಮಸ್ಥರು ತಮ್ಮ ಪ್ರಾಣದ ಹಂಗು ತೊರೆದು ವಾಹನವನ್ನು ಪಕ್ಕಕ್ಕೆ ತಳ್ಳಿ ಭಾರೀ ದುರಂತವನ್ನು ತಪ್ಪಿಸಿದ್ದಾರೆ.
Read Full Story

09:31 AM (IST) Aug 06

ರಾಯಚೂರು ಜೈಲಿನಲ್ಲಿ ಖೈದಿ ಹಠಾತ್ ಸಾವು.. ಪೊಲೀಸರ ವಿರುದ್ಧ ಭುಗಿಲೆದ್ದ ಕುಟುಂಬಸ್ಥರ ಆರೋಪ

ಕಾರಾಗೃಹದಲ್ಲಿ ವಿಚಾರಣಾಧೀನ ಖೈದಿಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮೆದರಗೋಳ ಗ್ರಾಮದ ನಿವಾಸಿ ಭೀಮರಾಯ (42) ಮೃತಪಟ್ಟ ದುರ್ದೈವಿ. ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ..

Read Full Story

09:02 AM (IST) Aug 06

ಖ್ಯಾತ ಕ್ರಿಕೆಟರ್ ಮನೆ ಮೇಲೆ ಬಾಂಬ್ ದಾಳಿ.. ಸಂಕಷ್ಟದಲ್ಲಿ ಶಕೀಬ್ ಅಲ್ ಹಸನ್..!

ಶೇಖ್ ಹಸೀನಾ ಜೊತೆ ಕಾಣಿಸಿಕೊಂಡ ಬೆನ್ನಲ್ಲೇ ಶಕೀಬ್ ಅಲ್ ಹಸನ್ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ! ಬಾಂಗ್ಲಾದೇಶದಲ್ಲಿ ಕ್ರಿಕೆಟ್ ದಿಗ್ಗಜನಿಗೆ ಹೆಚ್ಚಿದ ಭೀತಿ. ಸಂಪೂರ್ಣ ವಿವರ ಈ ಸ್ಟೋರಿಯಲ್ಲಿದೆ..

Read Full Story

07:33 AM (IST) Aug 06

ರಾಜ್ಯದ 20%, ಬೆಂಗ್ಳೂರಿನ 48% ಮತದಾರರ ಹೆಸರು ಡಿಲೀಟ್‌! 1.10 ಕೋಟಿ ಹೆಸರು ಡಿಲೀಟ್

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ, ಬೆಂಗಳೂರಿನ ಶೇ.47.75 ರಷ್ಟು ಸೇರಿದಂತೆ ರಾಜ್ಯದ 1.10 ಕೋಟಿ ಮತದಾರರ ಹೆಸರುಗಳನ್ನು ರದ್ದುಗೊಳಿಸಲಾಗುತ್ತಿದೆ. ಸ್ಥಳಾಂತರ, ಮರಣ ಮತ್ತು ಇತರೆ ಕಾರಣಗಳಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಅರ್ಹ ಮತದಾರರು ಫಾರ್ಮ್ 6 ಸಲ್ಲಿಸಿ ಮತ್ತೆ ನೋಂದಾಯಿಸಿಕೊಳ್ಳಲು ಅವಕಾಶವಿದೆ.
Read Full Story

07:12 AM (IST) Aug 06

ಕೇಂದ್ರ ಸರ್ಕಾರದ ವಿಬಿ ಜಿ ರಾಮ್‌ಜಿ ಸ್ಕೀಂ ಜಾರಿಗೆ ಮೊದಲ ತಿಂಗಳೇ ಭಾರಿ ಹಿನ್ನಡೆ; ಆರಂಭಿಕ ತೊಡಕು

ಕೇಂದ್ರ ಸರ್ಕಾರವು ಮ-ನರೇಗಾ ಬದಲಿಗೆ ಜಾರಿಗೆ ತಂದಿರುವ ವಿಬಿ ಜಿ ರಾಮ್‌ ಜಿ ಯೋಜನೆಯು, ರಾಜ್ಯದಲ್ಲಿ ಜಾರಿಯಾದ ಮೊದಲ ತಿಂಗಳಲ್ಲೇ ಮಾನವ ದಿನಗಳ ಸೃಜನೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಕಳೆದ ವರ್ಷದ ಜುಲೈಗೆ ಹೋಲಿಸಿದರೆ ಈ ಬಾರಿ ಶೇ.78.77ರಷ್ಟು ಕುಸಿತ ದಾಖಲಾಗಿದ್ದು, ಯೋಜನೆಯ ಆರಂಭಿಕ ಯಶಸ್ಸಿನ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
Read Full Story

06:51 AM (IST) Aug 06

Shivamogga - ಕೋಟೆಗಂಗೂರು ಡಿಪೋ - ಶಿವಮೊಗ್ಗದಿಂದಲೇ ಎಕ್ಸ್‌ಪ್ರೆಸ್ ರೈಲು ನಿರ್ವಹಣೆ ಶೀಘ್ರ

ಶಿವಮೊಗ್ಗ ಜಿಲ್ಲೆಯ ಮಹತ್ವಾಕಾಂಕ್ಷೆಯ ಕೋಟೆಗಂಗೂರು ಕೋಚಿಂಗ್ ಡಿಪೋ ಕಾಮಗಾರಿಯು ಶೇ.77ಕ್ಕೂ ಹೆಚ್ಚು ಆರ್ಥಿಕ ಪ್ರಗತಿ ಸಾಧಿಸಿ ವೇಗವಾಗಿ ಪೂರ್ಣಗೊಳ್ಳುವತ್ತ ಸಾಗಿದೆ. ಸಂಸದ ಬಿ.ವೈ. ರಾಘವೇಂದ್ರ ಅವರು ಬಾಕಿ ಯೋಜನೆಗಳ ತ್ವರಿತ ಜಾರಿಗೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.

Read Full Story

06:40 AM (IST) Aug 06

Sakleshpur - ಹೊಸಳ್ಳಿ ಬೆಟ್ಟ- ಕಾಗಿನಹರೆಗೆ ಪ್ರವಾಸಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ

ಮಲೆನಾಡಿನ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ, ಸಕಲೇಶಪುರದ ಹೆತ್ತೂರು ಹೋಬಳಿಯ ಹೊಸಹಳ್ಳಿ ಬೆಟ್ಟ ಹಾಗೂ ಕಾಗಿಹರೆ ವೀಕ್ಷಣಾ ಸ್ಥಳಗಳಿಗೆ ಪ್ರವಾಸಿಗರ ವಾಹನಗಳ ಪ್ರವೇಶವನ್ನು ಅರಣ್ಯ ಇಲಾಖೆ ನಿರ್ಬಂಧಿಸಿದೆ. ವಾಹನಗಳ ಅಡ್ಡಾದಿಡ್ಡಿ ಸಂಚಾರದಿಂದ ಪರಿಸರಕ್ಕೆ ಹಾನಿಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದ್ದು, ಪ್ರವಾಸಿಗರು ಕಾಲ್ನಡಿಗೆಯಲ್ಲಿ ಈ ಸ್ಥಳಗಳನ್ನು ವೀಕ್ಷಿಸಬಹುದು.
Read Full Story

06:33 AM (IST) Aug 06

Karnataka Rains - ಮಲೆನಾಡು, ಕರಾವಳಿಯಲ್ಲಿ ಮಳೆ - ಅಣೆಕಟ್ಟೆಗಳಿಗೆ ಹೆಚ್ಚಾದ ಒಳಹರಿವು

ಮಲೆನಾಡು ಮತ್ತು ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಕೆಆರ್‌ಎಸ್‌, ಕಬಿನಿ ಸೇರಿದಂತೆ ಪ್ರಮುಖ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಗುಡ್ಡ ಕುಸಿತ ಹಾಗೂ ಮನೆ ಹಾನಿ ವರದಿಯಾಗಿದೆ.
Read Full Story

More Trending News