Published : Nov 02, 2025, 06:59 AM ISTUpdated : Nov 02, 2025, 10:58 PM IST

Karnataka Latest News Live: ಅಚ್ಚರಿ ಒಗಟಿನ ಮೂಲಕ ಬಿಗ್‌ಬಾಸ್ ಆಟಕ್ಕೆ ಮಲ್ಲಮ್ಮ ವಿದಾಯ; ಹೃದಯ ಗೆದ್ದ ಮಾಳು ನಿಪನಾಳ

ಸಾರಾಂಶ

ಹಾಸನ: ಈ ಬಾರಿಯ ಭಾರೀ ಮಳೆಯಿಂದ ರಾಜ್ಯದಾದ್ಯಂತ ಸುಮಾರು 15 ಲಕ್ಷ 50 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಶೀಘ್ರದಲ್ಲೆ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ನಗರದ ಯೂತ್ ಹಾಸ್ಟೆಲ್‌ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದಿಂದ 2798 ಕೋಟಿ ರು. ಬೆಳೆ ಪರಿಹಾರ ಅಂದಾಜಿಸಿದ್ದು, 200 ಕೋಟಿಗೂ ಹೆಚ್ಚು ಪರಿಹಾರ ಈಗಾಗಲೇ ರೈತರ ಖಾತೆಗಳಿಗೆ ಜಮೆ ಮಾಡಲಾಗಿದೆ. ಉಳಿದ ರೈತರಿಗೂ ಶೀಘ್ರದಲ್ಲೇ ಪರಿಹಾರ ಹಣ ನೇರವಾಗಿ ವರ್ಗಾಯಿಸಲಾಗುವುದು.

Mallamma Bigg Boss elimination

10:58 PM (IST) Nov 02

ಅಚ್ಚರಿ ಒಗಟಿನ ಮೂಲಕ ಬಿಗ್‌ಬಾಸ್ ಆಟಕ್ಕೆ ಮಲ್ಲಮ್ಮ ವಿದಾಯ; ಹೃದಯ ಗೆದ್ದ ಮಾಳು ನಿಪನಾಳ

ಸೋಶಿಯಲ್ ಮೀಡಿಯಾದಿಂದ ಖ್ಯಾತಿ ಪಡೆದಿದ್ದ ಮಲ್ಲಮ್ಮ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಾರೆ. ಅವರ ಎಲಿಮಿನೇಷನ್‌ನಿಂದ ಮನೆಯ ಸದಸ್ಯರು ಭಾವುಕರಾಗಿದ್ದು, ಹೊರಹೋಗುವ ಮುನ್ನ ಮಲ್ಲಮ್ಮ ಬಿಗ್‌ಬಾಸ್‌ಗೆ ಒಂದು ಒಗಟು ಹೇಳಿ ಗಮನ ಸೆಳೆದರು.
Read Full Story

09:45 PM (IST) Nov 02

ನಾಲ್ಕು ವಾರದಿಂದ ಕಾಣೆಯಾಗಿದ್ದ ಮೂವರಿಗೆ ಸ್ವಾಗತಿಸಿ ಅಶ್ವಿನಿ ಗೌಡರಿಂದ ಹುಷಾರ್ ಆಗಿರಿ ಎಂದ ಕಿಚ್ಚ ಸುದೀಪ್

ಕಳೆದ ನಾಲ್ಕು ವಾರಗಳಿಂದ ತೆರೆಮರೆಯಲ್ಲಿದ್ದ ಮೂವರು ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಸ್ವಾಗತಿಸಿದ್ದಾರೆ. ಈ ವಾರ ಧನುಷ್ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದು, ಮನೆಯ ಲವ್ ಬರ್ಡ್ಸ್ ಸೂರಜ್-ರಾಶಿಕಾ ಪ್ರೀತಿಯ ವಿಚಾರವನ್ನು ಸುದೀಪ್ ಬಯಲು ಮಾಡಿದ್ದಾರೆ.

Read Full Story

08:46 PM (IST) Nov 02

ಟಗರಿಗೆ ಠಕ್ಕರ್ ಕೊಡೋರು ಯಾರು ಇಲ್ಲ, ಸಿದ್ದರಾಮಯ್ಯ ಸಿಎಂ ಎಂದು ಸಂದೇಶ ರವಾನಿಸಿದ ಜಮೀರ್

ಟಗರಿಗೆ ಠಕ್ಕರ್ ಕೊಡೋರು ಯಾರು ಇಲ್ಲ, ಸಿದ್ದರಾಮಯ್ಯ ಸಿಎಂ ಎಂದು ಸಂದೇಶ ರವಾನಿಸಿದ ಜಮೀರ್, ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ ಎಂದಿದ್ದಾರೆ. ಇಷ್ಟೇ ಅಲ್ಲ 2028ರ ವರೆಗೆ ಸಿಎಂ ಬದಲಾವಣೆಯೂ ಇಲ್ಲ ಎಂದಿದ್ದಾರೆ.

Read Full Story

05:14 PM (IST) Nov 02

Bigg Boss ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ! ಕಾವ್ಯಾನೂ ಬತ್ತಿ ಇಟ್ಲಲ್ಲೋ ಗುರೂ ಎಂದು ಫ್ಯಾನ್ಸ್​ ಬೇಸರ!

ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯದಿಂದ ಹವಾ ಸೃಷ್ಟಿಸಿದ್ದ ಗಿಲ್ಲಿ ನಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಪಂದನಾ, ಅಶ್ವಿನಿ, ಹಾಗೂ ಜೋಡಿ ಕಾವ್ಯಾ ಶೈವ ಸೇರಿದಂತೆ ಹಲವು ಸ್ಪರ್ಧಿಗಳು ಅವರ ವಿರುದ್ಧ ನಂಬಿಕೆ ದ್ರೋಹ ಮತ್ತು ಸ್ವಾರ್ಥದಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
Read Full Story

05:13 PM (IST) Nov 02

ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳಲು ಹೆಲ್ಮೆಟ್ ಬದಲು ತಲೆಗೆ ಬಾಣಲೆ ಹಾಕಿಕೊಂಡ ಹಿಂಬದಿ ಸವಾರ

Man wears pan instead of helmet: ಬೆಂಗಳೂರಿನಲ್ಲಿ ಹಿಂಬದಿ ಸವಾರನೊಬ್ಬ ಟ್ರಾಫಿಕ್ ಚಲನ್ ತಪ್ಪಿಸಿಕೊಳ್ಳಲು ಹೆಲ್ಮೆಟ್ ಬದಲು ತಲೆಗೆ ಬಾಣಲೆ ಧರಿಸಿ ಸಂಚರಿಸಿದ್ದಾನೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Read Full Story

04:38 PM (IST) Nov 02

Bhagyalakshmi - ಆದಿಯ ಎದುರು ಮರು ಮದ್ವೆಯ ಬಗ್ಗೆ ಕೊನೆಗೂ ಮೌನ ಮುರಿದ ಭಾಗ್ಯ- ಫ್ಯಾನ್ಸ್ ಶಾಕ್​!

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ, ಆದಿ ಮದುವೆಯ ಪ್ರಸ್ತಾಪವನ್ನು ಭಾಗ್ಯಳ ಮುಂದಿಟ್ಟಾಗ, ಆಕೆ ಮರುಮದುವೆಯ ಸಾಧ್ಯತೆಯನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾಳೆ. ತನ್ನ ಜೀವನದಲ್ಲಿ ಮತ್ತೊಬ್ಬರಿಗೆ ಜಾಗವಿಲ್ಲ ಎಂಬ ಆಕೆಯ ನಿರ್ಧಾರದಿಂದ ಆದಿ ಹಾಗೂ ವೀಕ್ಷಕರಿಗೆ ನಿರಾಸೆಯಾಗಿದೆ.
Read Full Story

04:22 PM (IST) Nov 02

Bigg Boss ಮನೇಲಿ ಪುರುಷ ಸ್ಪರ್ಧಿಗೆ ಮಹಿಳೆಯೇ ಕಾಲಿನಲ್ಲಿ ಹೊಟ್ಟೆಗೆ ಒದ್ದರು, ಚಪ್ಪಲಿಯಲ್ಲಿ ಹೊಡೆದ್ರು!

Bigg Boss Show: ಬಿಗ್‌ ಬಾಸ್‌ ಮನೆಯಲ್ಲಿ ಕೆಲವೊಮ್ಮೆ ಸಣ್ಣ ವಿಷಯಕ್ಕೂ ನಗುತ್ತಾರೆ, ಜಗಳ ಆಡುತ್ತಾರೆ. ಯಾವ ಸಂದರ್ಭ ಎನ್ನೋದು ಮ್ಯಾಟರ್‌ ಆಗುವುದು. ನನಹೆ ಹಾಗಂದ್ರು, ಹೀಗಂದ್ರು ಎಂದು ಜಗಳ ಆಡೋರು ಈಗ, ಚಪ್ಪಲಿಯಲ್ಲಿ ಹೊಡೆದರೂ ಕೂಡ ನಕ್ಕಿದ್ದಾರೆ. ಎಂಥ ದುರಂತ ನೋಡಿ…ತಮಾಷೆಗೆ ಲಿಮಿಟ್‌ ಇಲ್ಲವಾ? 

Read Full Story

03:44 PM (IST) Nov 02

ಸತ್ತ ಮೇಲೆ ನನ್ನ ಪಾದಕ್ಕೆ, ಹಳೆಯ ಚಪ್ಪಲಿ ಹಾಕಿ ಅಂತ್ಯಕ್ರಿಯೆ ಮಾಡು; ತಂದೆಯ ವಿಲ್‌ ನೋಡಿ ಮಗ ಕಂಗಾಲು

Father Vil: ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ ಎಂಬ ಮಾತಿದೆ. ಅಪ್ಪನೊಬ್ಬ ತೀರಿಕೊಳ್ಳುವ ಮುಂಚೆ, ವಿಲ್‌ ಬರೆದಿದ್ದನು. ಅಂತ್ಯಕ್ರಿಯೆ ಮಾಡುವ ಮುನ್ನ ಮಗ ಆ ವಿಲ್‌ ಓದಿದ್ದಾನೆ. ಆ ವಿಲ್‌ ಓದಿ ಕಣ್ಣೀರು ಹಾಕಿದ್ದಾನೆ. ಆ ಪತ್ರದಲ್ಲಿ ಏನಿತ್ತು?

Read Full Story

03:13 PM (IST) Nov 02

BBK 12 - ರಾಶಿಕಾ, ಸೂರಜ್ I Love You ಕಥೆ;‌ ಕಿಚ್ಚ ಸುದೀಪ್‌ ಮುಂದೆ ಅಸಲಿ ಸತ್ಯ ಹೊರಬಿತ್ತು

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ವೈಲ್ಡ್‌ಕಾರ್ಡ್‌ ಎಂಟ್ರಿ ಕೊಟ್ಟ ಒಂದೇ ವಾರಕ್ಕೆ ಸೂರಜ್‌ ಸಿಂಗ್‌, ರಾಶಿಕಾ ಶೆಟ್ಟಿ ಅವರು ಆತ್ಮೀಯತೆಯಿಂದ ಇದ್ದರು. ಇವರಿಬ್ಬರ ಬಾಂಡಿಂಗ್‌ ಬಗ್ಗೆ ಇಡೀ ಮನೆ ಹಾಗೂ ವೀಕ್ಷಕರು ಕೂಡ ಮಾತನಾಡಿದ್ದುಂಟು.

Read Full Story

02:39 PM (IST) Nov 02

ಕಿಚ್ಚ ಸುದೀಪ್‌ ಮಗಳು ಹೀಗಿದ್ರೆ ಅವ್ರು ಸುಮ್ನೆ ಇರ್ತಿದ್ರಾ? BBK ರಕ್ಷಿತಾ ಶೆಟ್ಟಿ ವಿರುದ್ಧ ಸಿಡಿದೆದ್ದ ನಟಿ

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಹೆಸರು ಜೋರಾಗಿ ಕೇಳಿ ಬರುತ್ತಿದೆ. ಜಾಹ್ನವಿ, ಅಶ್ವಿನಿ ಗೌಡ, ರಿಷಾ ಗೌಡ, ಅಶ್ವಿನಿ ಗೌಡ ಜೊತೆ ರಕ್ಷಿತಾ ಜಗಳ ಆಡಿದ್ದರು. ಈಗ ರಕ್ಷಿತಾ ಕಲಾವಿದರಿಗೆ ಅವಮಾನ ಮಾಡಿದ್ದಾರೆ, ದೂರು ಕೊಡ್ತೀನಿ ಎಂದು ರಂಗಭೂಮಿ ಕಲಾವಿದೆ ಕುಶಲಾ ಎನ್ನುವವರು ಹೇಳಿದ್ದಾರೆ.

 

Read Full Story

01:55 PM (IST) Nov 02

ಹಾಲಿವುಡ್‌ನಿಂದ ಕಾಪಿ ಅಲ್ಲ! ಬಾಹುಬಲಿಯಲ್ಲಿ ಶಿವಗಾಮಿಯ ತ್ಯಾಗ.. 48 ವರ್ಷಗಳ ಹಿಂದಿನ ಘಟನೆಯೇ ರಾಜಮೌಳಿಗೆ ಸ್ಫೂರ್ತಿ!

ಬಾಹುಬಲಿಯಲ್ಲಿ ಶಿವಗಾಮಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಹೇಂದ್ರ ಬಾಹುಬಲಿಯನ್ನು ಕಾಪಾಡುತ್ತಾಳೆ. ಆ ದೃಶ್ಯಕ್ಕೆ 48 ವರ್ಷಗಳ ಹಿಂದೆ ಆಂಧ್ರಪ್ರದೇಶದಲ್ಲಿ ನಡೆದ ನಿಜವಾದ ಘಟನೆಯೇ ಸ್ಫೂರ್ತಿ ಅನ್ನೋದು ನಿಮಗೆ ಗೊತ್ತಾ?

Read Full Story

01:29 PM (IST) Nov 02

ರಕ್ಷಿತಾ ಶೆಟ್ಟಿ ಅವ್ರೇ.. Bigg Boss ಮನೇಲಿ ಅದೊಂದು ತಪ್ಪು ಮಾಡಿದ್ರಿ..ಕಿಚ್ಚನ ಚಪ್ಪಾಳೆ ಕಳ್ಕೊಂಡ್ರಿ..

Bigg Boss Kannada Season 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಬಡ್ಡಿ ಆಟ ಆಡಿಸಲಾಗಿತ್ತು. ರಕ್ಷಿತಾ ಮೇಲೆ ಸ್ಪಂದನಾ ಸೋಮಣ್ಣ, ರಾಶಿಕಾ ಶೆಟ್ಟಿ ಬಿದ್ದು ಹೊರಳಾಡಿದ್ದರು. ಆ ವೇಳೆ ರಕ್ಷಿತಾ ಅವರ ಬಟ್ಟೆ ಆ ಕಡೆ ಈ ಕಡೆ ಆಯ್ತು. ಇದರಿಂದ ಮತ್ತೆ ಗೇಮ್‌ ಆಡಿಸಿದರು. ಆಮೇಲೆ ಏನಾಯಿತು? 

Read Full Story

01:26 PM (IST) Nov 02

ಬೆಂಗಳೂರು - ರೋಗಿ ಇಲ್ಲದಿದ್ರೂ ಸೈರನ್ ಹಾಕೊಂಡ್ ಬಂದು ಸ್ಕೂಟರ್‌ಗೆ ಆಂಬುಲೆನ್ಸ್ ಡಿಕ್ಕಿ - ದಂಪತಿ ಸಾವು

Richmond Circle fatal crash: ಬೆಂಗಳೂರಿನ ರಿಚ್‌ಮಂಡ್ ಸರ್ಕಲ್‌ನಲ್ಲಿ ರೋಗಿಗಳಿಲ್ಲದೇ ಇದ್ದರೂ ಸೈರನ್ ಹಾಕಿಕೊಂಡು ವೇಗವಾಗಿ ಬಂದ ಆಂಬುಲೆನ್ಸ್ ರೆಡ್ ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಸ್ಕೂಟರ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Read Full Story

01:23 PM (IST) Nov 02

ಪುಸ್ತಕಕ್ಕಾಗಿ ‘ತಮಿಳು’ ಕನ್ನಡಾಭಿಮಾನಿಯ ವರ್ಷಪೂರ್ತಿ ಸಂಚಾರ - ಕನ್ನಡಕ್ಕೆ ನಿಷ್ಠೆಯ ಕತೆ

ಶ್ರೀಲಂಕಾದಿಂದ ತಮಿಳು ನಿರಾಶ್ರಿತರಾಗಿ ಕರ್ನಾಟಕಕ್ಕೆ ಬಂದು ಪ್ರಸಕ್ತ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಮರ್ಧಾಳದಲ್ಲಿ ನೆಲೆಸಿದ್ದಾರೆ ಕನ್ನಡ ಪುಸ್ತಕ ಮಾರಾಟದ ಪ್ರೇಮಿ ರವಿಚಂದ್ರ. ಇವರ ತಂದೆ, ತಾಯಿ ಇಲ್ಲಿಗೆ ನಿರಾಶ್ರಿತರಾಗಿ ಬಂದು ರಬ್ಬರ್‌ ಕೂಲಿ ಕಾರ್ಮಿಕರಾಗಿ ದುಡಿದವರು.

Read Full Story

01:03 PM (IST) Nov 02

ಆ ಸಿನಿಮಾ ಮಾಡಿದ್ದಕ್ಕೆ ಒಂದು ವರ್ಷ ಅತ್ತಿದ್ದ ಅನುಷ್ಕಾ ಶೆಟ್ಟಿ.. ಅದಕ್ಕಿಂತ ಕೆಟ್ಟ ಸಿನಿಮಾ ಇನ್ನೊಂದಿದೆ ಎಂದ ಸ್ವೀಟಿ

ಅನುಷ್ಕಾ ಶೆಟ್ಟಿ ತನ್ನ ವೃತ್ತಿಜೀವನದಲ್ಲಿ ಮಾಡಿದ ಒಂದು ಸಿನಿಮಾದಿಂದಾಗಿ ಒಂದು ವರ್ಷ ಅತ್ತಿದ್ದರಂತೆ. ಆದರೆ ಅದೇ ಚಿತ್ರ ಅನುಷ್ಕಾ ಅವರ ಹಣೆಬರಹವನ್ನೇ ಬದಲಾಯಿಸಿತು. ಟಾಲಿವುಡ್‌ನಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿ ಬೆಳೆಯಲು ಕಾರಣವಾಯಿತು.

Read Full Story

12:49 PM (IST) Nov 02

ನನ್ನ ಹಿಂದೆ ಬೀಳಬೇಡಿ, I am Committed ಎಂದ ಗಿಲ್ಲಿ ನಟ; ನನ್ನ ಗುಂಡಿ ನಾನ್ಯಾಕೆ ತೋಡಿಕೊಳ್ಳಲಿ

'ಸೂಪರ್ ಸಂಡೇ ವಿತ್ ಬಾದ್‌ಷಾ ಸುದೀಪ' ಸಂಚಿಕೆಯಲ್ಲಿ, ಕಾವ್ಯಾ ಮತ್ತು ಸೂರಜ್ ಡ್ಯಾನ್ಸ್ ಬಗ್ಗೆ ಗಿಲ್ಲಿ ನಟ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಅಶ್ವಿನಿ ಗೌಡ ಗಿಲ್ಲಿಯನ್ನು ಕಾಲೆಳೆದಾಗ, 'ನಾನು ಕಮಿಟೆಡ್' ಎಂದು ಹೇಳುವ ಮೂಲಕ ಎಲ್ಲರಲ್ಲೂ ಕುತೂಹಲ ಮೂಡಿಸಿದ್ದಾರೆ.
Read Full Story

12:40 PM (IST) Nov 02

BBK 12 - ಒಂದಾದ್ಮೇಲೆ ಒಂದು ಕಂಪ್ಲೇಂಟ್‌ ಮಾಡಿದ ರಾಶಿಕಾಗೆ ಮುಖಭಂಗ; ಕಿಚ್ಚ ಸುದೀಪ್‌ ಮುಂದೆ ಆ ಘಟನೆ ನಡೀತು

ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಈ ವಾರ ಕಾಲೇಜು ಟಾಸ್ಕ್‌ನಲ್ಲಿ ರಘು ಅವರು ಪ್ರಿನ್ಸಿಪಾಲ್‌ ಆಗಿದ್ದರು. ಪ್ರಿನ್ಸಿಪಾಲ್‌ ಆಗಿ ಅವರು ಚೆನ್ನಾಗಿ ಟಾಸ್ಕ್‌ ಮಾಡಿದರಾ? ಫೇವರಿಸಂ ಮಾಡಿದ್ದಾರಾ ಎಂದು ಕಿಚ್ಚ ಸುದೀಪ್‌ ಪ್ರಶ್ನೆ ಮಾಡಿದಾಗ, ರಾಶಿಕಾ ಶೆಟ್ಟಿ ಮಾತ್ರ ಫೇವರಿಸಂ ಮಾಡಿದರು ಎಂದು ಆರೋಪ ಮಾಡಿದ್ರು. 

Read Full Story

12:36 PM (IST) Nov 02

ಬೆಂಗಳೂರು - ಡಂಬಲ್ಸ್‌ನಿಂದ ಹೊಡೆದು ವಿಜಯವಾಡದ ಯುವಕನಿಂದ ಚಿತ್ರದುರ್ಗದ ಸಹೋದ್ಯೋಗಿ ಕೊಲೆ

Man killed with dumbbell in office: ಬೆಂಗಳೂರಿನ ಗೋವಿಂದರಾಜ ನಗರದಲ್ಲಿ ಲೈಟ್ ಸ್ವಿಚ್ ಆಫ್ ಮಾಡುವ ವಿಚಾರಕ್ಕೆ ನಡೆದ ಜಗಳವು ಸಹೋದ್ಯೋಗಿಯ ಕೊಲೆಯಲ್ಲಿ ಅಂತ್ಯವಾಗಿದೆ. ರಾತ್ರಿ ಪಾಳಿಯಲ್ಲಿದ್ದ ಸೋಮಾಲ ವಂಶಿ ಎಂಬ ಯುವಕ, ಭೀಮೇಶ್ ಬಾಬು ಎಂಬುವರ ತಲೆಗೆ ಡಂಬಲ್ಸ್‌ನಿಂದ ಹೊಡೆದು ಹತ್ಯೆ ಮಾಡಿದ್ದಾನೆ. 

Read Full Story

12:28 PM (IST) Nov 02

ರಾಜ್ಯದಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಎಂಬ ಮಾತು ಕೇವಲ ವದಂತಿ - ಸಚಿವ ಶಿವರಾಜ ತಂಗಡಗಿ

ರಾಜ್ಯದಲ್ಲಿ ನವೆಂಬರ್ ಕ್ರಾಂತಿ ನಡೆಯಲಿದೆ ಎಂಬ ಮಾತು ಕೇವಲ ವದಂತಿ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆಗುತ್ತಾರೆ ಎನ್ನುವ ವಿಷಯ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದರು.

Read Full Story

12:22 PM (IST) Nov 02

ರಾಜ್ಯದ ಎಲ್ಲಾ ಮದರಸಾಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ - ಸಚಿವ ಜಮೀರ್ ಅಹಮ್ಮದ್ ಘೋಷಣೆ

ರಾಜ್ಯದ ಎಲ್ಲ ಮದರಸಾಗಳಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯ ಹಾಗೂ ಉರ್ದು ಶಾಲೆಗಳಲ್ಲಿ ಪ್ರಥಮ ಭಾಷೆ ಕನ್ನಡ ಅಳವಡಿಸಲು ಕ್ರಮ ವಹಿಸಲಾಗಿದೆ ಎಂದು ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್‌ ಖಾನ್ ಹೇಳಿದರು.

Read Full Story

12:09 PM (IST) Nov 02

Bigg Boss ಮಲ್ಲಮ್ಮನ ಜೊತೆ ದಿಢೀರ್​ ಕಾಣಿಸಿಕೊಂಡ ಭಾರ್ಗವಿ ಎಲ್​ಎಲ್​ಬಿ ಅರ್ಜುನ್​ - ಇದೇನಿದು ಟ್ವಿಸ್ಟ್​?

ಬಿಗ್‌ಬಾಸ್‌ನ ಸ್ಟ್ರಾಂಗ್ ಸ್ಪರ್ಧಿ ಮಲ್ಲಮ್ಮ ಮನೆಯಿಂದ ಹೊರಬಂದಿದ್ದಾರೆ ಎಂಬ ಸುದ್ದಿಯ ನಡುವೆಯೇ, 'ಭಾರ್ಗವಿ ಎಲ್‌ಎಲ್‌ಬಿ' ಖ್ಯಾತಿಯ ನಟ ಮನೋಜ್ ಕುಮಾರ್ ಜೊತೆಗಿನ ಅವರ ವಿಡಿಯೋ ವೈರಲ್ ಆಗಿದೆ. ಮನೋಜ್ ಕುಮಾರ್ ಅವರು ಮಲ್ಲಮ್ಮ ಪರವಾಗಿ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡುತ್ತಿದ್ದಾರೆ  

Read Full Story

11:57 AM (IST) Nov 02

BBK 12 - ರಕ್ಷಿತಾ ವಿರುದ್ಧ ರಿಷಾ‌ ಆರೋಪ; ರೇಷ್ಮೆ ಶಾಲಿನಲ್ಲಿ ಸುತ್ತಿ ಹೊಡೆದಂತೆ ಮಾತಾಡಿದ ಕಿಚ್ಚ ಸುದೀಪ್

Bigg Boss Kannada 12: ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಕಂಡರೆ ರಿಷಾ ಗೌಡ ಉರಿದು ಬೀಳ್ತಾರೆ, ರಕ್ಷಿತಾಗೆ ಚೆನ್ನಾಗಿಯೇ ಕನ್ನಡ ಮಾತನಾಡುತ್ತಾರೆ, ಆದರೆ ಸುಮ್ನೆ ನಾಟಕ ಮಾಡ್ತಾರೆ ಎಂದು ಸಾಕಷ್ಟು ಬಾರಿ ಮಿಮಿಕ್ರಿ ಮಾಡಿದ್ದರು. ಈಗ ಕಿಚ್ಚನ ಪಂಚಾಯಿತಿಯಲ್ಲಿ ಇದೇ ವಿಚಾರ ಚರ್ಚೆ ಆಗಿದೆ.

 

Read Full Story

11:47 AM (IST) Nov 02

ಸಿನಿ ಇಂಡಸ್ಟ್ರಿಗೆ ಗುಡ್ ಬೈ ಹೇಳ್ತಾರಾ ರಜನಿಕಾಂತ್? ಕಮಲ್ ಹಾಸನ್ ಜೊತೆಗಿನ ಚಿತ್ರವೇ ಕೊನೆಯದಾಗಲಿದೆಯೇ?

ರಜನಿಕಾಂತ್ ಚಿತ್ರರಂಗದಲ್ಲಿ 5 ದಶಕಗಳನ್ನು ಪೂರೈಸಿದ್ದಾರೆ, ಈಗ ಕಮಲ್ ಹಾಸನ್ ಜೊತೆಗಿನ ಬಿಗ್ ಬಜೆಟ್ ಚಿತ್ರದ ಬಗ್ಗೆ ಚರ್ಚೆ ನಡೆಯುತ್ತಿದೆ. ವರದಿಗಳ ಪ್ರಕಾರ, ಈ ಚಿತ್ರವೇ ಅವರ ಕೊನೆಯ ಚಿತ್ರವಾಗಬಹುದು, ಆದರೆ ನಿವೃತ್ತಿಯ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ.

Read Full Story

11:42 AM (IST) Nov 02

Niveditha Gowdaಗೆ ಬಂದ ಕಮೆಂಟ್ಸ್​ಗಳೇ ಈಗ Rap Music - ಚಂದನ್​ ಶೆಟ್ಟಿನೂ ಸುಸ್ತಾಗಿ ಹೋಗ್ತಾರೆ ಎಂದ ನೆಟ್ಟಿಗರು!

ಡಿವೋರ್ಸ್ ಬಳಿಕ ಹಾಟ್ ಫೋಟೋಗಳಿಂದ ಟ್ರೋಲ್ ಆಗುತ್ತಿರುವ ನಿವೇದಿತಾ ಗೌಡ ಅವರಿಗೆ ಬರುವ ಕೆಟ್ಟ ಕಮೆಂಟ್‌ಗಳೇ ಈಗ ಸುದ್ದಿಯಲ್ಲಿವೆ. ಈ ಅಶ್ಲೀಲ ಮತ್ತು ಅವಮಾನಕಾರಿ ಕಮೆಂಟ್‌ಗಳನ್ನೇ ಬಳಸಿ 'ಕಮೆಂಟ್‌ಬಾಕ್ಸ್ ಕನ್ನಡ' ಎಂಬ ಖಾತೆಯು ಒಂದು ವಿಶಿಷ್ಟವಾದ ರಾಪ್ ಹಾಡನ್ನು ಸೃಷ್ಟಿಸಿದ್ದಾರೆ.  

Read Full Story

11:17 AM (IST) Nov 02

ಕೊನೆಗೂ ವಿಜಯ್ ವರ್ಮಾ ಜೊತೆಗಿನ ಲವ್ ಬ್ರೇಕಪ್‌ಗೆ ಕಾರಣ ಬಿಚ್ಚಿಟ್ಟ ತಮನ್ನಾ? ಏನಾಯ್ತು ಅಂದ್ರೆ...

ತಮನ್ನಾ ಭಾಟಿಯಾ ಸಂದರ್ಶನವೊಂದರಲ್ಲಿ, ಸಂಬಂಧದಲ್ಲಿದ್ದಾಗ ಸುಳ್ಳು ಹೇಳುವವರನ್ನು ತಾನು ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ತಮನ್ನಾ, ವಿಜಯ್ ವರ್ಮಾ ಜೊತೆ ಬ್ರೇಕಪ್ ಮಾಡಿಕೊಂಡಿದ್ದರು.

Read Full Story

11:10 AM (IST) Nov 02

BBK 12 - ಅಶ್ವಿನಿಗೆ ಗೌಡಗೆ ನಾಲ್ಕು ಬಾರಿ ರಕ್ಷಿತಾ ಚಪ್ಪಲಿ ತೋರಿಸಿದ್ರಾ? ಸತ್ಯ ಏನು?

Bigg Boss Kannada Season 12 Updates: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ನಾಲ್ಕು ಬಾರಿ ಚಪ್ಪಲಿ ತೋರಿಸಿದ್ದಾರೆ ಎಂದು ಅಶ್ವಿನಿ ಗೌಡ ಹೇಳಿದ್ದಾರೆ. ಕಿಚ್ಚನ ಪಂಚಾಯಿತಿಯಲ್ಲಿ ಕೂಡ ಈ ರೀತಿ ಆಗಿದೆ. ಹಾಗಾದರೆ ಅಸಲಿ ವಿಷಯ ಏನು?

Read Full Story

10:51 AM (IST) Nov 02

ಬಹುಶ್ರುತ ವಿದ್ವಾಂಸ ಎನ್ ಸಿ ದೇಸಾಯಿ - ಜನ್ಮ ಶತಮಾನೋತ್ಸವ ಚಿತ್ರಕಲಾ ಪ್ರದರ್ಶನ

ಎಲ್ಲ ಸೇರಿ ಜಪಾನ್ ಪ್ರವಾಸಕ್ಕೆ ಹೋಗಿ ಬಂದರು. ಅವರು ಆ ಪ್ರವಾಸದಲ್ಲಿ ಇದ್ದಾಗ ಒಂದು ಸ್ವಾರಸ್ಯಕರ ಘಟನೆ ನಡೆಯಿತು. ಆದೇನಪ್ಪ ಅಂದರೆ ಅವರು ಯಿಕೋಮ ಪ್ರಾಂತದ ಹೊಜಾನ ಜಿ- ಬುದ್ಧ ಮಂದಿರಕ್ಕೆ ಹೋಗಿದ್ದರು.

Read Full Story

10:46 AM (IST) Nov 02

BBK 12 - ಸುದೀಪ್ ಮುಂದೆಯೇ ಅಶ್ವಿನಿ ಗೌಡ ಮುಖವಾಡ ಕಳಚಿದ ಕಾವ್ಯಾ; ಪ್ರೇಕ್ಷಕರಿಂದ ಸಿಕ್ತು ಚಪ್ಪಾಳೆ

BBK 12: ವೀಕೆಂಡ್ ಸಂಚಿಕೆಯಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ ತನ್ನಗೆ ಚಪ್ಪಲಿ ತೋರಿಸಿ ಸೀರಿಯಲ್ ಕಲಾವಿದರಿಗೆ ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಆದರೆ, ಕಾವ್ಯಾ ಶೈವ ಮಧ್ಯ ಪ್ರವೇಶಿಸಿ, ಅಶ್ವಿನಿ ತಮ್ಮ ಅನುಕೂಲಕ್ಕೆ ತಕ್ಕಂತೆ ರಕ್ಷಿತಾ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಹೇಳಿದರು. 

Read Full Story

10:01 AM (IST) Nov 02

ಹೆರಿಗೆಯ ನಂತರ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಕಿಯಾರಾ ಅಡ್ವಾಣಿ - ಅಭಿಮಾನಿಗಳಲ್ಲಿ ಸಂತೋಷದ ಅಲೆ

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಈ ವರ್ಷದ ಜುಲೈನಲ್ಲಿ ತಮ್ಮ ಮಗಳನ್ನು ಸ್ವಾಗತಿಸಿದರು. ಕಿಯಾರಾ ಸದ್ಯ ಹೆರಿಗೆ ರಜೆಯಲ್ಲಿದ್ದು, ಅವರ ಮುಂಬರುವ ಯಾವುದೇ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.

Read Full Story

09:48 AM (IST) Nov 02

60ನೇ ವಯಸ್ಸಿನಲ್ಲೂ ಯಂಗ್ ಲುಕ್ - ಶಾರುಖ್ ಖಾನ್ ಹೊಳೆಯುವ ತ್ವಚೆಯ ರಹಸ್ಯ, ಡಯಟ್ ತಿಳಿದರೆ ಅಚ್ಚರಿ ಪಡ್ತೀರಾ

ಇಂದು ಬಾಲಿವುಡ್ ನಟ ಶಾರುಖ್ ಖಾನ್ ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 60ನೇ ವಯಸ್ಸಿಗೆ ಕಾಲಿಡುತ್ತಿರುವ ಶಾರುಖ್ ಅವರನ್ನು ನೋಡಿ ಅವರ ವಯಸ್ಸನ್ನು ಊಹಿಸುವುದು ತುಂಬಾ ಕಷ್ಟ.

Read Full Story

09:48 AM (IST) Nov 02

Jockey 42 Movie Teaser - ಬೆಳ್ಳಂಬೆಳಗ್ಗೆ ಗುಡ್‌ನ್ಯೂಸ್‌ ಕೊಟ್ಟ Kiran Raj; ಫ್ಯಾನ್ಸ್‌ಗೆ ಹಬ್ಬದ ಸಂಭ್ರಮ

Kiran Raj Movies: ಜಾಕಿ 42 ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಟೀಸರ್ ಸಿನಿಮಾ ಪ್ರೇಕ್ಷಕನ ಗಮನ ಸೆಳೆದಿದೆ, ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್‌ನಲ್ಲಿ ಭಾರತಿ ಸತ್ಯನಾರಾಯಣ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ನಡೆಯುವ ಕಥೆ ಈ ಟೀಸರ್‌ನ ಹೈಲೆಟ್ಸ್ ಇದಾಗಿದೆ.

Read Full Story

09:24 AM (IST) Nov 02

ಕಮಿಷನರ್ ಕಪ್ ಕ್ರಿಕೆಟ್ ಪಂದ್ಯಾವಳಿ - ಮಾಧ್ಯಮ ಮತ್ತು ಪೊಲೀಸರ ಮಧ್ಯೆ ಸೌಹಾರ್ದದ ಕ್ರೀಡಾ ಹಬ್ಬ

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿವನ್ನು ನಗರದ ಎಂ.ಜಿ.ರಸ್ತೆಯ ಆರ್.ಎಸ್.ಐ ಗ್ರೌಂಡ್‌ನಲ್ಲಿ ಆಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೀಪ ಬೆಳಗಿಸಿ ಉದ್ಘಾಟಿಸಿದರು.

Read Full Story

09:12 AM (IST) Nov 02

ಇಂಗ್ಲೀಷ್‌ ಕನ್ನಡತನಕ್ಕೆ ಒಡ್ಡುವ ಸವಾಲನ್ನು ತಪ್ಪಿಸಬೇಕಿದೆ - ಸಚಿವ ಕೆ.ಜೆ.ಜಾರ್ಜ್

ಇಂಗ್ಲಿಷ್‌ ಭಾಷೆ ನಮ್ಮ ಕನ್ನಡತನಕ್ಕೆ ಸವಾಲನ್ನು ಒಡ್ಡುತ್ತಿರುವ ದುರಂತವನ್ನು ಮತ್ತೆ ಕನ್ನಡಿಗರೆಲ್ಲ ಒಂದಾಗುವ ಮೂಲಕ ತಪ್ಪಿಸಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಕರೆ ನೀಡಿದರು.

Read Full Story

09:12 AM (IST) Nov 02

ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ - ಡಿಕೆಶಿ

ನಗರದಲ್ಲಿ ಸುರಂಗ ರಸ್ತೆ(ಟನಲ್‌ ರೋಡ್‌) ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರ ನೇತೃತ್ವದಲ್ಲಿಯೇ ಸಮಿತಿ ರಚನೆ ಮಾಡಲು ನಾನು ತಯಾರಿದ್ದೇನೆ. ಅವರು ಸೂಚಿಸಿದ ಕಡೆಯೇ ಲಾಲ್‌ಬಾಗ್ ಬಳಿ ಪ್ರವೇಶ-ನಿರ್ಗಮನ ತಾಣ ರೂಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

Read Full Story

09:00 AM (IST) Nov 02

ರಸ್ತೆ ನಿರ್ಮಿಸಿದವರಿಗೇ ಕಸ ನಿರ್ವಹಣೆ ಹೊಣೆ - ಡಿಸಿಎಂ ಚಿಂತನೆ

ಮುಂಬೈ ಮಾದರಿಯಲ್ಲಿ ಪ್ರಮುಖ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆ ಮಾಡುವವರಿಗೇ ಅದೇ ರಸ್ತೆಯ ತ್ಯಾಜ್ಯ ನಿರ್ವಹಣೆ ಹೊಣೆ ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Read Full Story

08:56 AM (IST) Nov 02

ದೇವೇಗೌಡರ ಹೆಸರಲ್ಲಿ ರಾಜಕಾರಣ ಮಾಡೋದನ್ನ ಬಿಡಿ - ಸಚಿವ ಚಲುವರಾಯಸ್ವಾಮಿ

ಅಪ್ಪ- ಮಕ್ಕಳು ಇನ್ನು ಎಷ್ಟು ವರ್ಷ ದೇವೇಗೌಡರ ಹೆಸರಲ್ಲಿ ರಾಜಕಾರಣ ಮಾಡುತ್ತಾರೋ ಗೊತ್ತಿಲ್ಲ. ಅವರ ಹೆಸರಿನಲ್ಲಿ ರಾಜಕಾರಣ ಮಾಡೋದು ಬಿಟ್ಟು ಸ್ವತಂತ್ರವಾಗಿ ರಾಜಕೀಯ ಮಾಡುವಂತೆ ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.

Read Full Story

08:22 AM (IST) Nov 02

ಮೆಟ್ರೋ ಬೋಗಿ ಮೇಲೆ ರಾರಾಜಿಸಿದ ಪುನೀತ್!

ಕನ್ನಡ ರಾಜ್ಯೋತ್ಸವದ ದಿನ ಕರ್ನಾಟಕ ರತ್ನ ನಟ ಪುನೀತ್‌ ರಾಜ್‌ಕುಮಾರ್‌ ಭಾವಚಿತ್ರ, ಕನ್ನಡಪರ ಘೋಷಣೆಗಳನ್ನು ಹೊತ್ತ ನಮ್ಮ ಮೆಟ್ರೋ ರೈಲಿನ ಸಂಚಾರ ಜನಮನ ಸೆಳೆಯಿತು. ಮೆಟ್ರೋದ ಬೋಗಿಗಳ ಮೇಲೆ ಕನ್ನಡ ಬಾವುಟ, ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’, ಘೋಷಣೆಗಳು ರಾರಾಜಿಸಿದವು.

Read Full Story

08:03 AM (IST) Nov 02

ರಾಜಧಾನಿಯಲ್ಲಿ ರಾಜಾಜಿಸಿದ ರಾಜ್ಯೋತ್ಸವ ಬಾವುಟ

ಎಲ್ಲೆಲ್ಲೂ ರಾರಾಜಿಸಿದ ಹಳದಿ-ಕೆಂಪು ಬಾವುಟ, ಕನ್ನಡ ಪರ ಘೋಷಣೆ, ಕನ್ನಡ ಪರ ಸಂಘಟನೆಗಳಿಂದ ವಿವಿಧ ಕಡೆ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ಕಲರವ, ಸಂಘ-ಸಂಸ್ಥೆಗಳಿಂದ ಭುವನೇಶ್ವರಿ ದೇವಿಗೆ ನಮನ, ಆಟೋ ಸೇರಿದಂತೆ ವಿವಿಧ ವಾಹನಗಳಲ್ಲಿ ಹಾರಾಡಿದ ಕನ್ನಡ ಧ್ವಜ.

Read Full Story

07:50 AM (IST) Nov 02

Mysuru - 10 ದಿನ & 2 ವರ್ಷದ ಮಗಳನ್ನು ಕೊಂದು ಪ್ರಾಣ ಬಿಟ್ಟ ಬಾಣಂತಿ; ಹೃದಯ ವಿದ್ರಾವಕ ಘಟನೆ

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ, 22 ವರ್ಷದ ತಾಯಿಯೊಬ್ಬಳು ತನ್ನ 10 ದಿನದ ಹಾಗೂ ಎರಡು ವರ್ಷದ ಹೆಣ್ಣು ಮಕ್ಕಳನ್ನು ಕೊಂದು ಆತ್ಮ*ಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆಯ ತನಿಖೆ ನಡೆಯುತ್ತಿದ್ದು, ಇದೇ ವೇಳೆ ನಂಜನಗೂಡಿನಲ್ಲಿ ಅಪರಿಚಿತ ವೃದ್ಧೆ ಹಾಗೂ ವ್ಯಕ್ತಿಯ ಶವಗಳು ಪತ್ತೆಯಾಗಿವೆ.

Read Full Story

More Trending News