ಕಮಿಷನರ್ ಕಪ್ ಕ್ರಿಕೆಟ್ ಪಂದ್ಯಾವಳಿ: ಮಾಧ್ಯಮ ಮತ್ತು ಪೊಲೀಸರ ಮಧ್ಯೆ ಸೌಹಾರ್ದದ ಕ್ರೀಡಾ ಹಬ್ಬ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿವನ್ನು ನಗರದ ಎಂ.ಜಿ.ರಸ್ತೆಯ ಆರ್.ಎಸ್.ಐ ಗ್ರೌಂಡ್ನಲ್ಲಿ ಆಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಪೊಲೀಸ್ ಆಯುಕ್ತರ ಕ್ರಿಕೆಟ್ ಕಪ್
ಬೆಂಗಳೂರು (ನ.02): ಪೊಲೀಸರು ಹಾಗೂ ಮಾಧ್ಯಮದವರ ನಡುವೆ ಸೌಹಾರ್ದಯುತವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕ್ರಿಕೆಟ್ ಕಪ್ ಮ್ಯಾಚ್ಗೆ ಚಾಲನೆ ನೀಡಲಾಯ್ತು.
ದೀಪ ಬೆಳಗಿಸಿ ಉದ್ಘಾಟನೆ
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕ್ರಿಕೆಟ್ ಪಂದ್ಯಾವಳಿವನ್ನು ನಗರದ ಎಂ.ಜಿ.ರಸ್ತೆಯ ಆರ್.ಎಸ್.ಐ ಗ್ರೌಂಡ್ನಲ್ಲಿ ಆಯೋಜನೆ ಮಾಡಲಾಗಿದೆ. ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಹಲವು ತಂಡಗಳು ಭಾಗಿ
ಬೆಂಗಳೂರು ನಗರ ಕ್ರೈಂ ರಿಪೋರ್ಟರ್ಸ್ನ ಬಿಸಿಆರ್ ಪ್ಯಾಂಥರ್ಸ್, ಹೆಡ್ಲಾಡ್ಲೈನ್ ಹಿಟ್ಲರ್ಸ್. ನ್ಯಾಷನಲ್ ಮೀಡಿಯಾದ ಒಲ್ಡ್ ಮಾಂಕ್ಸ್ ತಂಡ ಭಾಗಿಯಾಗಿತ್ತು.
ಕಪ್ಗಾಗಿ ಸೆಣಸಾಟ
ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿ ಪರವಾಗಿ, ಕಾಶಿ ಲಯನ್, ಐಪಿಎಸ್ ಅಧಿಕಾರಿಗಳ ಟಾಪ್ ಗನ್ಸ್ ಹಾಗೂ ನಗರ ಡಿಸಿಪಿ ಹಾಗೂ ಎಸಿಪಿಗಳ ಸೆಂಚುರಿ ನೈಟ್ಸ್ ತಂಡಗಳು ಪೊಲೀಸ್ ಕಮಿಷನರ್ ಕಪ್ಗಾಗಿ ಸೆಣಸಾಟ ನಡೆಸಿವೆ.
ಸೋಲು ಗೆಲುವು ಮುಖ್ಯವಲ್ಲ
ಈ ವೇಳೆ ಮಾತನಾಡಿದ ಕಮಿಷನರ್ ಸೋಲು ಗೆಲುವು ಮುಖ್ಯವಲ್ಲ. ಕ್ರೀಡಾಕೂಟದಲ್ಲಿ ಭಾಗಿಯಾಗುವುದು ಮುಖ್ಯವಾದದ್ದು. ಮಾಧ್ಯಮ ಹಾಗೂ ಪೊಲೀಸರ ನಡುವಿನ ಸೌಹಾರ್ದಯುತವಾಗಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದ್ರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.

