MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Bhagyalakshmi: ಆದಿಯ ಎದುರು ಮರು ಮದ್ವೆಯ ಬಗ್ಗೆ ಕೊನೆಗೂ ಮೌನ ಮುರಿದ ಭಾಗ್ಯ- ಫ್ಯಾನ್ಸ್ ಶಾಕ್​!

Bhagyalakshmi: ಆದಿಯ ಎದುರು ಮರು ಮದ್ವೆಯ ಬಗ್ಗೆ ಕೊನೆಗೂ ಮೌನ ಮುರಿದ ಭಾಗ್ಯ- ಫ್ಯಾನ್ಸ್ ಶಾಕ್​!

ಭಾಗ್ಯಲಕ್ಷ್ಮಿ ಸೀರಿಯಲ್‌ನಲ್ಲಿ, ಆದಿ ಮದುವೆಯ ಪ್ರಸ್ತಾಪವನ್ನು ಭಾಗ್ಯಳ ಮುಂದಿಟ್ಟಾಗ, ಆಕೆ ಮರುಮದುವೆಯ ಸಾಧ್ಯತೆಯನ್ನು ಖಡಾಖಂಡಿತವಾಗಿ ನಿರಾಕರಿಸಿದ್ದಾಳೆ. ತನ್ನ ಜೀವನದಲ್ಲಿ ಮತ್ತೊಬ್ಬರಿಗೆ ಜಾಗವಿಲ್ಲ ಎಂಬ ಆಕೆಯ ನಿರ್ಧಾರದಿಂದ ಆದಿ ಹಾಗೂ ವೀಕ್ಷಕರಿಗೆ ನಿರಾಸೆಯಾಗಿದೆ.

1 Min read
Suchethana D
Published : Nov 02 2025, 04:38 PM IST
Share this Photo Gallery
  • FB
  • TW
  • Linkdin
  • Whatsapp
16
ಆದಿ ಭಾಗ್ಯ ಒಂದಾಗುವ ಕನಸು
Image Credit : colors kannada instagram

ಆದಿ-ಭಾಗ್ಯ ಒಂದಾಗುವ ಕನಸು

ಭಾಗ್ಯಲಕ್ಷ್ಮಿ ಸೀರಿಯಲ್​ (Bhagyalakshmi Serial)ನಲ್ಲಿ ಸದ್ಯ ಕುಸುಮಾ ಭಾಗ್ಯ ಮತ್ತು ಆದಿಯ ಮದುವೆಯ ಕನಸನ್ನು ಕಾಣುತ್ತಿದ್ದಾನೆ. ಇನ್ನೊಂದೆಡೆ ಆದಿಗೂ ಭಾಗ್ಯಳ ಮೇಲೆ ಮನಸಾಗುತ್ತಿದೆ. ವೀಕ್ಷಕರು ಕೂಡ ಆದಿ ಮತ್ತು ಭಾಗ್ಯಳ ಜೋಡಿ ಸೂಪರ್​ ಎನ್ನುತ್ತಿದ್ದು ಇವರಿಬ್ಬರೂ ಮದುವೆಯಾಗಬೇಕು ಎಂದೇ ಬಯಸುತ್ತಿದ್ದಾರೆ.

26
ಮದುವೆ ಬಗ್ಗೆ ಅಭಿಪ್ರಾಯ
Image Credit : Instagram

ಮದುವೆ ಬಗ್ಗೆ ಅಭಿಪ್ರಾಯ

ಇದೀಗ ಆದಿ ಈ ಬಗ್ಗೆ ಭಾಗ್ಯಳ ಅಭಿಪ್ರಾಯವನ್ನು ಕೇಳಿದ್ದಾನೆ. ತುಂಬಾ ಹಿಂಜರಿಯುತ್ತಲೇ ಮದುವೆಯ ವಿಷಯವನ್ನು ಪ್ರಸ್ತಾಪಿಸಿದ್ದಾನೆ ಆದಿ. ನಿಮ್ಮ ಹಿಂದಿನ ಲೈಫ್​ ಬಗ್ಗೆ ಕೇಳಬೇಕಿತ್ತು ಎಂದಾಗ ಭಾಗ್ಯ ಅದನ್ನು ಹೇಳುತ್ತಲೇ, ಇದು ಎಲ್ಲರಿಗೂ ಗೊತ್ತಿರುವ ವಿಷಯವೇ ಎಂದಿದ್ದಾಳೆ.

Related Articles

Related image1
Niveditha Gowdaಗೆ ಬಂದ ಕಮೆಂಟ್ಸ್​ಗಳೇ ಈಗ Rap Music: ಚಂದನ್​ ಶೆಟ್ಟಿನೂ ಸುಸ್ತಾಗಿ ಹೋಗ್ತಾರೆ ಎಂದ ನೆಟ್ಟಿಗರು!
Related image2
Bigg Boss ಮಲ್ಲಮ್ಮನ ಜೊತೆ ದಿಢೀರ್​ ಕಾಣಿಸಿಕೊಂಡ ಭಾರ್ಗವಿ ಎಲ್​ಎಲ್​ಬಿ ಅರ್ಜುನ್​: ಇದೇನಿದು ಟ್ವಿಸ್ಟ್​?
36
ಬೇರೊಂದು ಮದುವೆ
Image Credit : Instagram

ಬೇರೊಂದು ಮದುವೆ

ಆಗ ಆದಿ, ಬೇರೊಬ್ಬರು ಈಗ ನಿಮ್ಮ ಜೀವನದಲ್ಲಿ ಎಂಟ್ರಿ ಕೊಡಬಹುದೆ ಎಂದಾಗ ಖಡಾಖಂಡಿತವಾಗಿ ಭಾಗ್ಯ ಅದನ್ನು ಅಲ್ಲಗಳೆದಿದ್ದಾಳೆ.ಇದು ಸಾಧ್ಯವೇ ಇಲ್ಲ. ನನ್ನ ಜೀವನದಲ್ಲಿ ಮತ್ತೊಬ್ಬರು ಎಂಟ್ರಿ ಆಗಲು ಸಾಧ್ಯವಿಲ್ಲ ಎನ್ನುವ ಮೂಲಕ ಮರು ಮದುವೆಯ ಮಾತು ಸಾಧ್ಯವೇ ಇಲ್ಲ ಎಂದಿದ್ದಾರೆ.

46
ಸಾಧ್ಯವಾಗದ ಮಾತು
Image Credit : Instagram

ಸಾಧ್ಯವಾಗದ ಮಾತು

ಒಂದು ವೇಳೆ ನಿಮ್ಮ ಪತಿ ವಾಪಸ್ ಬಂದರೆ ಒಂದಾಗುವಿರಾ ಎಂದು ಆದಿ ಕೇಳಿದಾಗ, ಅವರು ನನ್ನನ್ನು ಬಿಟ್ಟು ಹೋಗಿರುವ ಉದ್ದೇಶವೇ ಬೇರೊಬ್ಬಳ ಜೊತೆ ಮದುವೆಯಾಗಲು. ಆದ್ದರಿಂದ ಅದು ಸಾಧ್ಯವಾಗದ ಮಾತು ಎಂದಿದ್ದಾಳೆ.

56
ವೀಕ್ಷಕರಿಗೆ ನಿರಾಸೆ
Image Credit : colors kannada instagram

ವೀಕ್ಷಕರಿಗೆ ನಿರಾಸೆ

ಇದನ್ನು ಕೇಳಿ ವೀಕ್ಷಕರಿಗೆ ನಿರಾಸೆಯಾಗಿದೆ. ಆದಿ ಮತ್ತು ಭಾಗ್ಯ ಒಂದಾಗಬೇಕು, ತಾಂಡವ್​ ಎದುರೇ ಇಬ್ಬರೂ ಜೊತೆಯಾಗಿ ಇರಬೇಕು. ತಾಂಡವ್​ ಹೊಟ್ಟೆ ಉರಿಯಿಂದ ಸಾಯಬೇಕು ಎನ್ನುವುದು ವೀಕ್ಷಕರ ಆಸೆ.

66
ವೀಕ್ಷಕರ ಆಸೆ
Image Credit : Instagram

ವೀಕ್ಷಕರ ಆಸೆ

ಆದರೆ ಸದ್ಯದ ಸ್ಥಿತಿಯಲ್ಲಿ ಅದು ಆಗದ ಮಾತು. ಆದರೆ ಮುಂದೊಂದು ದಿನ ಆದಿ ಮತ್ತು ಭಾಗ್ಯ ಒಂದಾಗುವರು ಎನ್ನುವ ಆಸೆ ಮತ್ತು ಭರವಸೆಯಲ್ಲಿದ್ದಾರೆ ವೀಕ್ಷಕರು.

ಭಾಗ್ಯಲಕ್ಷ್ಮಿ ಪ್ರೊಮೋಗಾಗಿ ಇಲ್ಲಿ ಕ್ಲಿಕ್​ ಮಾಡಿ

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಭಾಗ್ಯಲಕ್ಷ್ಮಿ ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
ಸಂಬಂಧಗಳು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved