JNUನಲ್ಲಿ ವಿವೇಕಾನಂದರ ಪ್ರತಿಮೆ, IPL ಅಭಿಮಾನಿಗಳಿಗೆ ಗುಡ್‌ನ್ಯೂಸ್; ನ.9ರ ಟಾಪ್ 10 ಸುದ್ದಿ!

By Suvarna NewsFirst Published Nov 9, 2020, 5:13 PM IST
Highlights

JNU ಕ್ಯಾಂಪಸ್‌ನಲ್ಲಿ ಪ್ರಧಾನಿ ಮೋದಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣ ಮಾಡಲಿದ್ದಾರೆ.  ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮಾಜಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಸೋಲಿನ ಬೆನ್ನಲ್ಲೇ ಡೋನಾಲ್ಡ್ ಟ್ರಂಪ್‌ಗೆ ವಿಚ್ಛೇದನ ನೀಡಲು 3ನೇ ಪತ್ನಿ ಮೆಲಾನಿಯಾ ಸಿದ್ಧತೆ ನಡೆಸಿದ್ದಾರೆ. ಐಪಿಎಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮಂಗಳೂರು ವಿಮಾನ ನಿಲ್ದಾಣಕ್ಕೆ ಮಲ್ಯ ಹೆಸರು ಸೇರಿದಂತೆ ನವೆಂಬರ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಡ್ರಗ್ಸ್‌ ಮಾಫಿಯಾ: ಕರ್ನಾಟಕದ ಮಾಜಿ ಸಚಿವರ ಪುತ್ರ ಅರೆಸ್ಟ್...

ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮಾಜಿ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ.

6 ಲಾರಿಗಳಿಗೆ 8 ಚಾಲಕರು ಇದ್ದಾರೆ ಎಂದ ಮಾಲೀಕಗೆ ಮೋದಿ ತೀವ್ರ ತರಾಟೆ!...

ಗುಜರಾತಿನ ಭಾವನಗರದ ಸಾರಿಗೆ ಸಂಸ್ಥೆಯ ಮಾಲೀಕನೊಬ್ಬ ತನ್ನಲ್ಲಿರುವ 6 ಟ್ರಕ್‌ಗಳಿಗೆ ಕೇವಲ 8 ಮಂದಿ ಚಾಲಕರನ್ನು ನೇಮಿಸಿಕೊಂಡಿದ್ದ|  ಪ್ರಧಾನಿ ನರೇಂದ್ರ ಮೋದಿ ತೀವ್ರ ಅಸಮಾಧಾನ 

ಟ್ರಂಪ್‌ಗೆ ಮತ್ತೊಂದು ಶಾಕ್: ವಿಚ್ಛೇದನ ನೀಡಲು 3ನೇ ಪತ್ನಿ ಮೆಲಾನಿಯಾ ಸಿದ್ಧತೆ...

ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚುನಾವಣೆಯಲ್ಲಿ ಸೋಲುತ್ತಿದ್ದಂತೆ ಅವರ ಪತ್ನಿ ಮೆಲಾನಿಯಾ ಟ್ರಂಪ್‌ (50) ವಿಚ್ಛೇದನ ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅಧ್ಯಕ್ಷೀಯ ಅವಧಿ ಪೂರ್ಣಗೊಂಡು ಟ್ರಂಪ್‌ ಶ್ವೇತಭವನದಿಂದ ಹೊರಬರುತ್ತಿದ್ದಂತೆ ಮೆಲಾನಿಯಾ ವಿಚ್ಛೇದನ ನೀಡಲಿದ್ದಾರೆ ಎಂದು ಇಬ್ಬರು ಮಾಜಿ ಅಧಿಕಾರಿಗಳು ಹೇಳಿದ್ದಾರೆ.

ಐಪಿಎಲ್ ಅಭಿಮಾನಿಗಳಿಗೆ ಮತ್ತೊಂದು ಗುಡ್‌ ನ್ಯೂಸ್ ಕೊಟ್ಟ ಬಿಸಿಸಿಐ ಬಾಸ್ ಸೌರವ್ ಗಂಗೂಲಿ...

13ನೇ ಆವೃತ್ತಿಯ ಐಪಿಎಲ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೀಗಿರುವಾಗಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಪಿಎಲ್ ಅಭಿಮಾನಿಗಳಿಗೆ ಮತ್ತೊಂದು ಗುಡ್‌ ನ್ಯೂಸ್ ನೀಡಿದ್ದಾರೆ. 

ಹುಟ್ಟು ಹಬ್ಬದಂದೇ ಪ್ರೀತಿಸಿದವಳ ಕೈಹಿಡಿದ ಶಂಕರ್ ನಾಗ್!...

'ಸಂತೋಷಕ್ಕೇ.. ಹಾಡು ಸಂತೋಷಕ್ಕೆ' ಎನ್ನುತ್ತಾ ಕನ್ನಡ ನಾಡಿನ ಜನರನ್ನೆಲ್ಲ ಸಂತೋಷದಲ್ಲಿಟ್ಟವರು ಶಂಕರ್ ನಾಗ್. ಇಂದು ಅವರ ಹ್ಯಾಪಿ ಬರ್ತ್ ಡೇ. ಈ ಅದಮ್ಯ ಸಾಹಸಿ ಹೀರೋನ ಪ್ರೇಮ್ ಕಹಾನಿ ಸಖತ್ ಇಂಟೆರೆಸ್ಟಿಂಗ್.

ಹಬ್ಬದ ಸಂಭ್ರಮವನ್ನು ಮರ್ಸಿಡಿಸ್ ಬೆಂಝ್ ಇ ಕ್ಲಾಸ್ ಸೆಡಾನ್‌ನೊಂದಿಗೆ ಆಚರಿಸಿ!...

ಎಲ್ಲರಿಗೂ ಐಷಾರಾಮಿ ಕಾರು ಕೊಳ್ಳುವ ಆಸೆ ಇರುತ್ತದೆ. ಮರ್ಸಿಡೆಸ್ ಬೆಂಜ್ ಒಡೆಯರಾಗುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಇಂಥದ್ದೊಂದು ಆಸೆ ನಿಮಗಿದ್ದರೆ ಇಲ್ಲಿದೆ ಅದ್ಭುತ ಅವಕಾಶ. ವಿಶೇಷ ಆಫರ್‌ನೊಂದಿಗೆ ಬೆಂಜ್ ಕಾರನ್ನು ನಿಮ್ಮದಾಗಿಸಿಕೊಳ್ಳಿ. 

JNU ಕ್ಯಾಂಪಸ್‌ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಲಿರುವ ಮೋದಿ...

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ಜೀವನ ಗಾತ್ರದ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು, ಅದನ್ನು  ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಲಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣಕ್ಕೆ ಮಲ್ಯ ಹೆಸರು'...

ಸಂಸದರಾಗಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರ ದೂರದರ್ಶಿತ್ವದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಎನ್‌ಐಟಿಕೆ, ವಿಮಾನ ನಿಲ್ದಾಣ ಸಹಿತ ಅಭಿವೃದ್ಧಿಗೆ ಪೂರಕವಾದ ಕೊಡುಗೆಗಳು ಸಂದಿವೆ. ಅಂತಹ ಶ್ರೇಷ್ಠ ರಾಜಕಾರಣಿಯ ಹೆಸರು ಅಥವಾ ಉಳ್ಳಾಲದ ರಾಣಿ ಅಬ್ಬಕ್ಕ ಹೆಸರನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಮರು ನಾಮಕರಣ ಮಾಡಬೇಕೆಂಬುದು ಜಿಲ್ಲೆಯ ಜನತೆಯ ಕನಸಾಗಿತ್ತು. 

ಸೋಲೊಪ್ಪುವಂತೆ ಟ್ರಂಪ್‌ ಮನವೊಲಿಕೆಗೆ ಅಳಿಯ ಯತ್ನ!...

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡೆನ್‌ ಅವರಿಗೆ ತೀವ್ರ ಪೈಪೋಟಿ ನೀಡಿ ಪರಾಭವಗೊಂಡಿರುವ ಚುನಾವಣಾ ಫಲಿತಾಂಶವನ್ನು ಒಪ್ಪಿಕೊಳ್ಳುವಂತೆ ಅಳಿಯ ಮತ್ತು ಹಿರಿಯ ಸಲಹೆಗಾರ ಜೆರೇಡ್‌ ಕುಶ್ನೆರ್‌ ಅವರು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಮನವೊಲಿಸಲು ಯತ್ನಿಸಿರುವುದಾಗಿ ಸುದ್ದಿಸಂಸ್ಥೆಗಳು ಭಾನುವಾರ ವರದಿ ಮಾಡಿವೆ.

ಬಾರದ ಸ್ಕಾಲರ್‌ಶಿಪ್, ಡೇಟಾ ಪ್ಯಾಕ್ ಹಾಕಲು ದುಡ್ಡಿಲ್ಲ.. ಟಾಪರ್ ಸುಸೈಡ್...

ವಿದ್ಯಾರ್ಥಿ  ವೇತನ ಸರಿಯಾದ ಸಮಯಕ್ಕೆ ಕೈಸೇರದ ಕಾರಣ ದೆಹಲಿಯ ಶ್ರೀ ರಾಮ್ ಕಾಲೇಜ್ ಫಾರ್ ವುಮೆನ್ ನ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.   ಕಾಲೇಜಿನ ಹಾಸ್ಟೇಲ್ ನಿಂದ ನೋಟಿಸ್ ಬಂದ ಕಾರಣ  ಸುಸೈಡ್ ಮಾಡಿಕೊಂಡಿದ್ದಾರೆ

click me!