ಮದುವೆಗೆ ಅಡ್ಡಿಯಾದ ಪೊಲೀಸ್, ರಾಗಿಣಿಗಿಲ್ಲ ರಿಲೀಫ್; ಡಿ.4ರ ಟಾಪ್ 10 ಸುದ್ದಿ!

By Suvarna NewsFirst Published Dec 4, 2020, 4:36 PM IST
Highlights

ಪೋಷಕರು ಒಪ್ಪಿದರೂ ಮದುವೆ ನಡೆಸಲು ಪೊಲೀಸರು ಒಪ್ಪದ ಘಟನೆ ನಡೆದಿದೆ. ಡಿ.5ರ ಕರ್ನಾಟಕ ಬಂದ್‌ಗೆ ಹಲವು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ನಾಳೆ ಕರ್ನಾಟಕದಲ್ಲಿ ಯಾವ ಸೇವೆಗಳು ಇರಲಿದೆ. ಯಾವುದು ಬಂದ್ ಆಗಲಿದೆ? ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ರಾಗಿಣಿಗೆ ನಿರಾಸೆಯಾಗಿದೆ. ಭಾರತದ ಘೋಷಣೆಗೆ ಮೆತ್ತಗಾದ ಚೀನಾ, ದರ್ಶನ್ ಖರೀದಿಸದ ಹೊಸ ಕಾರು ಸೇರಿದಂತೆ ಡಿಸೆಂಬರ್ 4ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

ಪೋಷಕರ ಒಪ್ಪಿಗೆ ಮೇರೆಗೆ ನಡೆಯುತ್ತಿದ್ದ ಹಿಂದೂ-ಮುಸ್ಲಿಂ ಮದುವೆ ನಿಲ್ಲಿಸಿದ ಪೊಲೀಸ್!...

ಮದುವೆಗೆ ಎಲ್ಲಾ ಸಿದ್ದತೆ ನಡೆಸಿ ವಧು-ವರ ಮಂಟಪದಲ್ಲಿ ಹಾಜರಿದ್ದರು. ಹಿಂದೂ-ಮುಸ್ಲಿಂ ಧರ್ಮವಾಗಿದ್ದರೂ, ಎರಡೂ ಮನೆಯವರೂ ಒಪ್ಪಿಗೆ ನೀಡಿದ್ದರು. ಇನ್ನೇನು ಮದುವೆ ಕಾರ್ಯ ನಡೆಯಬೇಕು ಅನ್ನುವಷ್ಟರಲ್ಲೇ ಸಿನಿಮೀಯ ರೀತಿ ಪೊಲೀಸರು ಎಂಟ್ರಿ ಕೊಟ್ಟು ಮದುವೆ ನಿಲ್ಲಿಸಿದ್ದಾರೆ. 

ಹೈದರಾಬಾದ್ ಪಾಲಿಕೆ ರಿಸಲ್ಟ್: ಬಿಜೆಪಿಯ ಭಾಗ್ಯನಗರದ ಕನಸಿಗೆ ಹಿನ್ನಡೆ..!...

ಹೈದರಾಬಾದ್‌ ಮಹಾನಗರ ಪಾಲಿಕೆ ಚುನಾವಣೆ ಮತ ಎಣಿಕೆ ನಡೆಯುತ್ತಿದ್ದು, ಯಾರು ಮುನ್ನಡೆ? ಯಾರು ಹಿನ್ನಡೆ ಎನ್ನುವ ಸಂಕ್ಷಿಪ್ತ ಮಾಹಿತಿ ಈ ಕೆಳಗಿನಂತಿದೆ.

ಈಜಿಪ್ಟ್ ಪಿರಮಿಡ್ ಮುಂದೆ ಸೆಕ್ಸೀ ಫೋಟೋ ಶೂಟ್, ಸುಂದರಿಗೆ ಸಂಕಟ...

ಫೇಮಸ್ ಆಗ್ಬೇಕು ಅಂತ ಏನೇನೋ ಮಾಡೋಕೋಗಿ ಪೇಜಿಗೆ ಸಿಕ್ಕಾಕೊಂಡಿದ್ದಾಳೆ ಈ ಸುಂದರಿ. ಪಿರಮಿಡ್ ಮುಂದೆ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಕಾಣಿಸ್ಕೊಂಡ ಈಕೆಗೆ ಈಗ ಭಾರೀ ಕಷ್ಟ

ಭಾರತದ ಈ ಘೋಷಣೆ ಬೆನ್ನಲ್ಲೇ ಮೆತ್ತಗಾದ ಚೀನಾ...

ಬ್ರಹ್ಮಪುತ್ರ ನದಿಗೆ ಅಣೆಕಟ್ಟು ಕಟ್ಟುವ ವಿಚಾರವಾಗಿ  ಭಾರತ ಹಾಗೂ ಬಾಂಗ್ಲಾದೇಶದೊಂದಿಗೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಈ ಯೋಜನೆ ಪ್ರಾರಂಭಿಸುವುದಾಗಿ ಚೀನಾ ಹೇಳಿದೆ. 

ಡಿ.5ಕ್ಕೆ ಕರ್ನಾಟಕ ಬಂದ್: ಏನಿರುತ್ತೆ, ಏನಿರೋಲ್ಲ?...

ಕರ್ನಾಟಕ ಸರ್ಕಾರದ ವಿರುದ್ಧ ಕನ್ನಡ ಪರ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆ. ಈ ಬಂದ್ ವೇಳೆ ಸಾರ್ವಜನಿಕರ ಸೇವೆಗೆ ಏನಿರುತ್ತೆ..? ಏನಿರಲ್ಲ..?

ರೈತರ ಪ್ರತಿಭಟನೆಗೆ ಕೈ ಜೋಡಿಸಿ ಮೋದಿ ವಿರುದ್ದ ಗುಡುಗಿದ ಯುವಿ ತಂದೆ..!...

ಕೇಂದ್ರ ಸರ್ಕಾರದ ವಿರುದ್ದ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್ ಬೆಂಬಲ ಸೂಚಿಸಿದ್ದು, ಪ್ರಧಾನಿ ಮೋದಿ ವಿರುದ್ದ ಕಿಡಿಕಾರಿದ್ದಾರೆ.

'ಮಾಣಿಕ್ಯ' ನಟಿ ಖಾತೆಯಿಂದ ಅಶ್ಲೀಲ ಸಂದೇಶ; ನೆಟ್ಟಿಗರ ಆಕ್ರೋಶ?...

ನಟಿ ವರಲಕ್ಷ್ಮಿ ಶರತ್‌ಕುಮಾರ್‌ ಇನ್‌ಸ್ಟಾಗ್ರಾಂ ಹಾಗೂ ಟ್ವಿಟರ್‌ ಖಾತೆಯನ್ನು ಕೆಲವು ಕಿಡಿಗೇಡಿಗಳು ಹ್ಯಾಕ್‌ ಮಾಡಿದ್ದಾರೆ. ನಟಿ ಸ್ಪಷ್ಟನೆ ನೀಡಿದ ನಂತರ ಎಲ್ಲವೂ, ಎಲ್ಲರೂ ಕೂಲ್ ಕೂಲ್..! 

ಡಿಬಾಸ್ ದರ್ಶನ್ ಖರೀದಿಸಿದ ಫೋರ್ಡ್ ಮಸ್ತಾಂಗ್ ಕಾರಿನ ಬೆಲೆ ಹಾಗೂ ವಿಶೇಷತೆ ಏನು?...

ಸ್ಯಾಂಡಲ್‌ವುಡ್ ನಟ ದರ್ಶನ್ ಕಾರು ಕ್ರೇಝ್ ಕುರಿತು ಬಿಡಿಸಿ ಹೇಳಬೇಕಾಗಿಲ್ಲ. ದರ್ಶನ್ ಬಳಿ ಹಲವು ದುಬಾರಿ ಹಾಗೂ ಐಷಾರಾಮಿ ಕಾರುಗಳಿವೆ. ಇದೀಗ ದರ್ಶನ್ ಹೊಚ್ಚ ಹೊಸ ಫೋರ್ಡ್ ಮಸ್ತಾಂಗ್ ಕಾರು ಖರೀದಿಸಿದ್ದಾರೆ.

ರೋಷನಿ ದೇಶದ ನಂ.1 ಶ್ರೀಮಂತೆ : ಯಾರಾಕೆ..?...

ಎಚ್‌ಸಿಎಲ್‌ ಟೆಕ್ನಾಲಜಿ ಮುಖ್ಯಸ್ಥೆ ರೋಷನಿ ನಾಡಾರ್‌ ಮಲ್ಹೋತ್ರಾ ಭಾರತದ ಅತಿ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ  ಪಾತ್ರವಾಗಿದ್ದಾರೆ

ರಾಗಿಣಿಗೆ ಹೊಸವರ್ಷವೂ ಜೈಲಿನಲ್ಲೆ.. ರಾಜ್ಯ ಸರ್ಕಾರಕ್ಕೂ ನೋಟಿಸ್ ಕೊಟ್ಟ ಸುಪ್ರೀಂ...

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ಇದೀಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಅಲ್ಲಿಯೂ ಜಾಮೀನು ಸಿಕ್ಕಿಲ್ಲ. ಹೊಸ ವರ್ಷವನ್ನು ರಾಗಿಣಿ ಜೈಲಿನಲ್ಲಿಯೇ ಕಳೆಯಬೇಕಾಗಿದೆ.

click me!