ಭಾರತದ 9 ನಗರದಲ್ಲಿ ಟಿ20 ವಿಶ್ವಕಪ್, ಚೇತರಿಸಿಕೊಳ್ತಿದ್ದಾರೆ ಸುದೀಪ್; ಏ.21ರ ಟಾಪ್ 10 ಸುದ್ದಿ!

By Suvarna NewsFirst Published Apr 21, 2021, 4:57 PM IST
Highlights

ICC ವಿಶ್ವಕಪ್ ಟೂರ್ನಿಗೆ ಭಾರತ ಸಜ್ಜಾಗಿದೆ. 9 ನರಗಳಲ್ಲಿ ಟೂರ್ನಿ ಆಯೋಜಿಸಲು ಬಿಸಿಸಿಐ ಮುಂದಾಗಿದೆ. ಆಸ್ಪತ್ರೆ ಬಳಿ ಆಕ್ಸಿಜನ್ ಸೋರಿಕೆಯಾಗಿ 22 ರೋಗಿಗಳು ಸಾವನ್ನಪ್ಪಿದ್ದಾರೆ. ಕೊರೋನಾ ಭೀತಿ ನಡುವೆ ಐಸಿಎಂಆರ್ ಗುಡ್ ನ್ಯೂಸ್ ನೀಡಿದೆ. ಕೊರೋನಾ ಲಸಿಕೆಗೆ ಬೇರೆ ಬೇರೆ ಬೆಲೆ ನಿಗದಿ ಮಾಡಲಾಗಿದೆ. ಕಿಚ್ಚ ಸುದೀಪ್ ಆರೋಗ್ಯ, ಕರ್ನಾಟಕದ ಕೊರೋನಾ ನಿಯಮ ಸೇರಿದಂತೆ ಏಪ್ರಿಲ್ 21ರ ಟಾಪ್ 10 ಸುದ್ದಿ ಇಲ್ಲಿವೆ.

ನಾಸಿಕ್‌ನ ಆಸ್ಪತ್ರೆ ಬಳಿ ಆಕ್ಸಿಜನ್ ಸೋರಿಕೆ: ವೆಂಟಿಲೇಟರ್‌ನಲ್ಲಿದ್ದ 22 ರೋಗಿಗಳು ಸಾವು!...

ಕೊರೋನಾತಂಕ ಮಧ್ಯೆ ಅನಿಲ ದುರಂತ| ಮಹಾರಾಷ್ಟ್ರದ ನಾಸಿಕ್‌ನ ಆಸ್ಪತ್ರೆ ಬಳಿ ಆಮ್ಲಜನಕ ಸೋರಿಕೆ| ಆಕ್ಸಿಜನ್ ಸೋರಿಕೆಯಿಂದ 22 ರೋಗಿಗಳು ಸಾವು

ಕೋವಿಶೀಲ್ಡ್‌ ಬೆಲೆ ನಿಗದಿ: ರಾಜ್ಯ, ಖಾಸಗಿ ಆಸ್ಪತ್ರೆಗಳಿಗೆ ವಿಭಿನ್ನ ದರ!...

ದೇಶಾದ್ಯಂತ ಕೊರೋನಾ ಆತಂಕ| ಕೊರೋನಾ ಎರಡನೇ ಅಲೆ ನಡುವೆ ಮುಂದುವರೆದ ಲಸಿಕಾ ಅಭಿಯಾನ| ಭಾರತ ಸರ್ಕಾರದ ನಿರ್ದೇಶನದಂತೆ ಲಸಿಕೆ ದರ ಘೋಷಿಸಿದ ಸೀರಂ ಸಂಸ್ಥೆ| ದುಬಾರಿಯಲ್ಲ ಕೋವಿಶೀಲ್ಡ್

ಪ್ರತಿ ಗಂಟೆಗೆ ದೇಶದಲ್ಲಿ 10,000 ಕೇಸ್‌, 60 ಬಲಿ!...

ಪ್ರತಿ ಗಂಟೆಗೆ ದೇಶದಲ್ಲಿ 10,000 ಕೇಸ್‌, 60 ಬಲಿ!| ಕಳೆದ ಮೂರು ದಿನದಿಂದ ಇದೇ ಟ್ರೆಂಡ್‌| 2ನೇ ಅಲೆಯಿಂದ ಭಾರತ ತೀವ್ರ ತತ್ತರ

ಭಾರತದ 9 ನಗರಗಳಲ್ಲಿ ಐಸಿಸಿ ಟಿ20 ವಿಶ್ವಕಪ್‌ ಪಂದ್ಯಗಳು?...

ಭಾರತದಲ್ಲಿ ನಡೆಯಲಿರುವ  ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಿಸಿಸಿಐ ಬೆಂಗಳೂರು ಸೇರಿದಂತೆ 9 ನಗರಗಳನ್ನು ಶಾರ್ಟ್‌ಲಿಸ್ಟ್‌ ಮಾಡಿದೆ. 

ಚೇತರಿಸ್ಕೊಳ್ತಿದ್ದಾರೆ ಕಿಚ್ಚ ಸುದೀಪ್..! ನಟನ ಪತ್ನಿ ಹೇಳಿದ್ದಿಷ್ಟು...

ಈಗ ಕಿಚ್ಚ ಹೇಗಿದ್ದಾರೆ ? ಅವರ ಆರೋಗ್ಯ ಸ್ಥಿತಿ ಹೇಗಿದೆ ? ಮತ್ತೆ ಬಿಗ್‌ಬಾಸ್ ವೇದಿಕೆಗೆ ಬರೋದ್ಯಾವಾಗಾ ? ಅವರ ಪತ್ನಿ ಕೊಟ್ಟಿದ್ದಾರೆ ಕಿಚ್ಚನ ಆರೋಗ್ಯ ಕುರಿತ ಅಪ್ಡೇಟ್ಸ್. ಇಲ್ನೋಡಿ ವಿಡಿಯೋ

ಸೋಂಕಿತರ ಚಿಕಿತ್ಸೆಗೆ ನೆರವಾದ ರಿಲಯನ್ಸ್; ಪ್ರತಿ ದಿನ 700 ಟನ್ ಆಮ್ಲಜನರ ಪೂರೈಕೆ!...

ದೇಶದಲ್ಲಿ ಕೊರೋನಾ ವೈರಸ್ ಪ್ರಕರಣ ಅತಿಯಾಗುತ್ತಿರುವ ಕಾರಣ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಅಭಾವ ಸೃಷ್ಟಿಯಾಗಿದೆ. ಕೊರತೆ ನೀಗಿಸಲು ಇದೀಗ  ರಿಲಯನ್ಸ್ ಇಂಡಸ್ಟ್ರಿ ಸಜ್ಜಾಗಿದೆ. ರಿಲಯನ್ಸ್ ಸಂಸ್ಕರಣಾಗಾರ ಘಟಕವನ್ನು ಆಮ್ಲಜನಕ ಉತ್ಪಾದಕ ಘಟವನ್ನಾಗಿ ಪರಿವರ್ತಿಸಿ, ಪ್ರತಿ ದಿನ 700 ಟನ್ ಆಕ್ಸಿಜನ್ ರಿಲಯನ್ಸ್ ನೀಡಿಲಿದೆ. 

ದಕ್ಷಿಣ ಕನ್ನಡದಲ್ಲಿ ಮದುವೆ, ಮುಂಜಿ ಮಾಡುತ್ತಿರುವವರ ಗಮನಕ್ಕೆ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆ ಸಮಾರಂಭ ನಡೆಸುವವರು ಗಮನಿಸಿ. ಮದುವೆ ಮಾಡಲು ಅವಕಾಶವಿದೆ. ಆದರೆ ಮದುವೆ ಮಾಡಲು ಕಂಡೀಶನ್ಸ್ ಇದೆ. ಏನದು ಕಂಡೀಶನ್?

ಕೊರೋನಾ ಭೀತಿ ನಡುವೆ ಗುಡ್‌ ನ್ಯೂಸ್: ICMR ಅಧ್ಯಯನದಲ್ಲಿ ಅಚ್ಚರಿಯ ಮಾಹಿತಿ!...

ದೇಶಾದ್ಯಂತ ಕೊರೋನಾ ಹಾವಳಿ| ಜನರನ್ನು ಆತಂಕಕ್ಕೀಡು ಮಾಡಿದೆ ಕೊರೋನಾ ಎರಡನೇ ಅಲೆ| ಕೊರೋನಾ ಅಬ್ಬರದ ನಡುವೆಯೇ ಶುಭ ಸಮಾಚಾರ ಕೊಟ್ಟ ಐಸಿಎಂಆರ್‌| ಕೋವ್ಯಾಕ್ಸಿನ್‌ ಲಸಿಕೆ ಬ್ಗಗೆ ಅಚ್ಚರಿಯ ಮಾಹಿತಿ ಬಹಿರಂಗ

ಪಾತ್ರ ಚಿಕ್ಕದಾದರೂ ಹೆಸರು ಮಾಡಬೇಕು ಅಂತಾರೆ ಶುಭ ರಕ್ಷಾ...

ಯುಗಾದಿ ಎಂದರೆ ಹೊಸತನ ಮತ್ತು ನವಿರಾದ ಕನಸುಗಳ ಸಂಭ್ರಮ. ಇಂಥ ಸಂಭ್ರಮದಿಂದ ಕನ್ನಡ ನಟಿಯರು ಕೂಡ ಹೊರತಾಗಿಲ್ಲ. ಸದಾ ಹೊಸತದಲ್ಲಿ ತೊಡಗುವ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬಾಕೆ ಶುಭ ರಕ್ಷಾ.

ಕೇವಲ 4 ರನ್‌ ಬಾರಿಸಿದರೂ ಅಪರೂಪದ ದಾಖಲೆ ಬರೆದ ಕೆ.ಎಲ್‌. ರಾಹುಲ್‌..!...

ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ದದ ಪಂದ್ಯದಲ್ಲಿ ಕೆ,ಎಲ್‌ ರಾಹುಲ್ ಕೇವಲ 4 ರನ್‌ ಬಾರಿಸಿ ವಿಕೆಟ್‌ ಒಪ್ಪಿಸಿದರೂ ಅಪರೂಪದ ದಾಖಲೆ ಬರೆದಿದ್ದಾರೆ. 

click me!