ದೇವೇಗೌಡರಿಗೆ ಮೋದಿ ಆಫರ್, RCBಗೆ ಕ್ಯಾಂಪ್‌ಗೆ ಕೊಹ್ಲಿ ಹಾಜರ್?ಮಾ.31ರ ಟಾಪ್ 10 ಸುದ್ದಿ!

By Suvarna NewsFirst Published Mar 31, 2021, 4:38 PM IST
Highlights

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮಗೆ ಕೊರೋನಾ ತಗುಲಿದ ಬೆನ್ನಲ್ಲೇ ಕರೆ ಮಾಡಿದ ಪ್ರಧಾನಿ ಮೋದಿ ಆರೋಗ್ಯ ವಿಚಾರಿಸಿದ್ದಾರೆ. ಎಪ್ರಿಲ್ 1ರಂದು ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡ ಸೇರಿಕೊಳ್ಳಲಿದ್ದಾರೆ. ಮುನಿಸು ಮರೆತ ಸ್ಯಾಂಡಲ್‌ವುಟ್ ನಟಿ ರಮ್ಯಾ ಹಾಗೂ ರಕ್ಷಿತಾ,  ಸತತ 3ನೇ ದಿನ ಕುಸಿದ ಚಿನ್ನದ ದರ ಸೇರಿದಂತೆ ಮಾರ್ಚ್ 31ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಎಚ್. ಡಿ. ದೇವೇಗೌಡ ದಂಪತಿಗೆ ಕೊರೋನಾ: ಮಾಜಿ ಪಿಎಂಗೆ ಮೋದಿ ವಿಶೇಷ ಆಫರ್!...

ಎಚ್. ಡಿ. ದೇವೇಗೌಡ ದಂಪತಿಗೆ ಕೊರೋನಾ| ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ| ಮೋದಿ ಕೊಟ್ಟ ಆಫರ್‌ಗೆ ಕೃತಜ್ಷತೆಗಳೆಂದ ಎಚ್‌ಡಿಡಿ

ಕರ್ನಾಟಕ ಸೇರಿ 8 ರಾಜ್ಯಗಳಲ್ಲಿ ಮಿತಿ ಮೀರಿದ ಕೊರೋನಾ; ಆರೋಗ್ಯ ಇಲಾಖೆ ವಾರ್ನಿಂಗ್!...

ದೇಶದಲ್ಲಿ ಕೊರೋನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ರಾಜ್ಯಗಳು ಕೈಗೊಂಡಿರುವ ಕ್ರಮಗಳ ಕುರಿತು ಕೇಂದ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದೀಗ ಕೊರೋನಾ ವರದಿ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರ ಕರ್ನಾಟಕ ಸೇರಿ 8 ರಾಜ್ಯಗಳಿಕೆ ಮಹತ್ವದ ಸೂಚನೆ ನೀಡಿದೆ. 

ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು!...

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ 2 ದಿನಗಳ ಕಾಲ ಬಾಂಗ್ಲಾದೇಶಕ್ಕೆ ನೀಡಿದ್ದ ಭೇಟಿ| ಬಾಂಗ್ಲಾ ಪ್ರವಾಸ: ಮೋದಿ ವಿರುದ್ಧ ಆಯೋಗಕ್ಕೆ ಟಿಎಂಸಿ ದೂರು

IPL 2021: ಎಪ್ರಿಲ್ 1ಕ್ಕೆ RCB ತರಬೇತಿ ಶಿಬಿರ ಸೇರಿಕೊಳ್ಳಲಿದ್ದಾರೆ ಕೊಹ್ಲಿ!...

IPL ಟೂರ್ನಿಗೆ 8 ಫ್ರಾಂಚೈಸಿಗಳು ತಯಾರಿ ಆರಂಭಿಸಿದೆ. ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತರಬೇತಿ ಶಿಬಿರ ಆರಂಭಿಸಿದೆ. ನಾಯಕ ವಿರಾಟ್ ಕೊಹ್ಲಿ ಕೂಡ ಶಿಬಿರ ಸೇರಿಕೊಳ್ಳಲಿದ್ದಾರೆ. 

ಕ್ರಿಕೆಟಿಗ ಅಶೋಕ್ ದಿಂಡಾ ಮೇಲೆ ಮಾರಕ ದಾಳಿ; Y+ ಭದ್ರತೆ ನೀಡಿದ ಕೇಂದ್ರ!...

ಕಳೆದ ತಿಂಗಳು ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ ಟೀಂ ಇಂಡಿಯಾ ವೇಗಿ ಅಶೋಕ್ ದಿಂಡಾ ಇದೀಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ ಆರಂಭದಲ್ಲೇ ದಿಂಡಾ ಮೇಲೆ ಮಾರಕ ದಾಳಿ ನಡೆದಿದ್ದು, ಕೇಂದ್ರ ಸರ್ಕಾರ Y+ ಭದ್ರತೆ ನೀಡಿದೆ. 

ಎಣ್ಣೆ-ಸೀಗೇಕಾಯಿಯಂತಿದ್ದ ರಕ್ಷಿತಾ - ರಮ್ಯಾ ಒಂದಾದ್ರಾ...?...

ಎಣ್ಣೆ ಸೀಗೇಕಾಯಿ ರೀತಿ ಇದ್ದ ರಮ್ಯಾ-ರಕ್ಷಿತಾ ಒಂದಾಗಿದ್ಯಾವಾಗಾ ? ಸ್ಯಾಂಡಲ್‌ವುಡ್ ಸುಂದರಿಯರ ಜಗಳವೆಲ್ಲಾ ಮುಗೀತಾ..?

ಪುನೀತ್ ಜೊತೆ ಮಾತುಕತೆ: ಯುವರತ್ನ ಹೇಳಿದ ಇಂಟ್ರೆಸ್ಟಿಂಗ್ ವಿಚಾರಗಳಿವು...

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಯುವರತ್ನ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಸಿನಿಮಾ ಹಾಡು ವೈರಲ್ ಆಗಿದೆ. ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ಅಪ್ಪು ಮತ್ತು ಧನಂಜಯ್ ಜೊತೆ ಮಾಡಿದ ಸಂದರ್ಶನ ಹೀಗಿದೆ.

ಸತತ ಮೂರನೇ ದಿನವೂ ಚಿನ್ನದ ದರದಲ್ಲಿ ಭಾರೀ ಇಳಿಕೆ, ಬೆಳ್ಳಿಯೂ ಅಗ್ಗ!...

ಏರಿಳಿತವಾಡುತ್ತಿದ್ದ ಚಿನ್ನದ ದರ ಮತ್ತೆ ಕುಸಿತ| ಚಿನ್ನ ಖರೀದಿಗೆ ಒಳ್ಳೆಯ ಸಮಯ| ಹೀಗಿದೆ ನೋಡಿ ಮಾರ್ಚ್ 31ರ ಗೋಲ್ಡ್ ರೇಟ್

ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಸೆಲ್ಫಿ; ಯುವಕರಿಗೆ ಬಿತ್ತು ದುಬಾರಿ ಫೈನ್!...

ವಾಹನ ಚಲಾಯಿಸುವಾಗ ಟ್ರಾಫಿಕ್ ನಿಯಮ ಚಾಚೂ ತಪ್ಪದೆ ಪಾಲಿಸಬೇಕು. ಶೋಕಿಗಾಗಿ ರೂಲ್ ಬ್ರೇಕ್ ಮಾಡಿದರೆ ದುಬಾರಿ ದಂಡ ಬೀಳುವುದು ಖಚಿತ. ಇದೀಗ ಯುವಕರಿಬ್ಬರು ಚಲಿಸುತ್ತಿದ್ದ ಕಾರಿನ ಮೇಲೆ ಕುಳಿತು ಸೆಲ್ಫಿ ತೆಗೆದು ದುಬಾರಿ ದಂಡಕ್ಕೆ ಗುರಿಯಾಗಿದ್ದಾರೆ.

ಎವರ್‌ ಗ್ರೀನ್ 25 ಭಾರತೀಯ ನಾವಿಕರಿಗೆ ತನಿಖೆ ಭೀತಿ!...

ಎವರ್‌ ಗ್ರೀನ್ 25 ಭಾರತೀಯ ನಾವಿಕರಿಗೆ ತನಿಖೆ ಭೀತಿ| ಹಡಗು ಕಂಪನಿಯಿಂದ ಪ್ರಶಂಸೆ, ಆದರೆ ಈಜಿಪ್ಟ್‌ನಲ್ಲಿ ತನಿಖೆ

click me!