LIVE NOW
Published : Jan 16, 2026, 07:49 AM ISTUpdated : Jan 16, 2026, 09:39 PM IST

India News Live: ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?

ಸಾರಾಂಶ

ನವದೆಹಲಿ (ಜ.16): ಮುಂಬೈ: 74 ಸಾವಿರ ಕೋಟಿ ರು. ಬಜೆಟ್‌ ಗಾತ್ರದಿಂದಾಗಿ ದೇಶದ ಶ್ರೀಮಂತ ನಗರ ಪಾಲಿಕೆ ಎಂಬ ಹಿರಿಮೆ ಹೊಂದಿರುವ ಬೃಹನ್ಮುಂಬೈ ಪಾಲಿಕೆಗೆ ಗುರುವಾರ ಚುನಾವಣೆ ನಡೆದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ. ಜೊತೆಗೆ ಇದೇ ಮೊದಲ ಬಾರಿಗೆ ಬಿಜೆಪಿಗೆ ಮೇಯ‌ರ್ ಹುದ್ದೆ ಲಭ್ಯವಾಗುವ ಸಾಧ್ಯತೆ ಕಂಡುಬಂದಿದೆ. ಮತ್ತೊಂದೆಡೆ 30 ವರ್ಷಗಳಲ್ಲೇ ಮೊದಲ ಬಾರಿಗೆ ಉದ್ಧವ್ ಠಾಕ್ರೆ ಬಣದ ಶಿವಸೇನೆ ಅಧಿಕಾರದಿಂದ ವಂಚಿತವಾಗುವತ್ತ ಹೆಜ್ಜೆ ಹಾಕಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

Indian Railways train coach color

09:39 PM (IST) Jan 16

ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು?

ಕೆಂಪು, ನೀಲಿ, ಹಸಿರು, ಭಾರತೀಯ ರೈಲುಗಳ ಕಲರ್ ಕೋಡ್ ಬಗ್ಗೆ ನಿಮಗೆಷ್ಟು ಗೊತ್ತು? ಪ್ರತಿ ಬಣ್ಣಕ್ಕೆ ವಿಶೇಷ ಮಹತ್ವವಿದೆ. ಇದು ಕ್ಲಾಸ್ ಸೂಚಿಸುತ್ತದೆ. ಅಷ್ಟಕ್ಕೂ ರೈಲಿನ ಬಣ್ಣದ ಹಿಂದಿನ ರಹಸ್ಯ ಇಲ್ಲಿದೆ.

Read Full Story

09:25 PM (IST) Jan 16

ಅಜ್ಜ ಅಜ್ಜಿಯ ಮೊದಲ ಬಾರಿ ವಿಮಾನದಲ್ಲಿ ಕರೆದೊಯ್ದ ಮೊಮ್ಮಗ - ವೀಡಿಯೋ ಭಾರಿ ವೈರಲ್

ಯುವಕನೋರ್ವ ತನ್ನ ಅಜ್ಜ-ಅಜ್ಜಿಯನ್ನು ಮೊದಲ ಬಾರಿಗೆ ವಿಮಾನದಲ್ಲಿ ಕರೆದೊಯ್ದಿದ್ದಾನೆ.  ಅವರ ಮೊದಲ ವಿಮಾನ ಪ್ರಯಾಣದ ಭಾವುಕ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಅಜ್ಜ-ಅಜ್ಜಿಯ ಕನಸನ್ನು ನನಸು ಮಾಡಿದ ಮೊಮ್ಮಗನ ಕಾರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Read Full Story

08:28 PM (IST) Jan 16

ಸಿಂಗಾಪುರದ ಕೋತಿ ಬ್ಯೂಟಿಗೆ ಮನಸೋತ ಯುವತಿ - ಇದು ಕಾಸ್ಟ್ಯುಮ್ ಅಲ್ಲ ದೇವರೇ ಕೊಡಿಸಿದ ಸೊಗಸಾದ ಬಟ್ಟೆ

ಸಿಂಗಾಪುರದಲ್ಲಿ ಕಂಡುಬಂದ ಅಪರೂಪದ ಡೌಕ್ ಲಂಗೂರ್ ಕೋತಿಯೊಂದು ತನ್ನ ವಿಶಿಷ್ಟ ನೋಟದಿಂದ ಎಲ್ಲರ ಗಮನ ಸೆಳೆದಿದೆ. ನೈಸರ್ಗಿಕವಾಗಿಯೇ ಬಟ್ಟೆ ಧರಿಸಿದಂತೆ ಕಾಣುವ ಈ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಕೃತಿಯ ಈ ಅದ್ಭುತ ಸೃಷ್ಟಿಗೆ ನೆಟ್ಟಿಗರು ಬೆರಗಾಗಿದ್ದಾರೆ.
Read Full Story

07:44 PM (IST) Jan 16

Immunity boost - ರೋಗನಿರೋಧಕ ಶಕ್ತಿ ಹೆಚ್ಚಿಸಲು ಸುಲಭ ಉಪಾಯ- ಸದ್ಗುರು ಜಗ್ಗಿ ವಾಸುದೇವ ಟಿಪ್ಸ್​ ಕೇಳಿ

ಹವಾಮಾನ ಬದಲಾವಣೆಯಿಂದ ಕುಂದಿದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸದ್ಗುರು ಜಗ್ಗಿ ವಾಸುದೇವ್ ಅವರು ಸರಳ ಮನೆಮದ್ದನ್ನು ತಿಳಿಸಿದ್ದಾರೆ. ನೆಲ್ಲಿಕಾಯಿ, ಜೇನುತುಪ್ಪ ಮತ್ತು ಕಾಳು ಮೆಣಸನ್ನು ಬಳಸಿ ತಯಾರಿಸಬಹುದಾದ ಈ ಆಯುರ್ವೇದ ಪೇಯವು ಕೆಲವೇ ವಾರಗಳಲ್ಲಿ ಪರಿಣಾಮಕಾರಿ ಫಲಿತಾಂಶ ನೀಡುತ್ತದೆ.
Read Full Story

07:37 PM (IST) Jan 16

ನರಕಕ್ಕೆ ಬನ್ನಿ ಅಂತ ಕರೆಯುತ್ತೆ ಈ ವೀಡಿಯೋ - ಅನೇಕರ ತಲೆ ಕೆಡಿಸಿದ 140 ವರ್ಷಗಳ ಅವಧಿಯ ವಿಚಿತ್ರ ಯುಟ್ಯೂಬ್ ವೀಡಿಯೋ

ಯೂಟ್ಯೂಬ್‌ನಲ್ಲಿ 140 ವರ್ಷಗಳ ಅವಧಿ ತೋರಿಸುವ ವೀಡಿಯೋವೊಂದು ವೈರಲ್ ಆಗಿ ಜನರಲ್ಲಿ ಗೊಂದಲ ಸೃಷ್ಟಿಸಿದೆ. ವಿಡಿಯೋದ ವಿವರಣೆ ಅರೇಬಿಕ್ ಭಾಷೆಯಲ್ಲಿದ್ದು ಭಾಷಾಂತರಿಸಿದಾಗ 'ನರಕದಲ್ಲಿ ನನ್ನನ್ನು ಭೇಟಿ ಮಾಡಿ' ಎಂಬ ಅರ್ಥವನ್ನು ನೀಡುತ್ತದೆ. ಈ ಬಗ್ಗೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.

Read Full Story

07:20 PM (IST) Jan 16

ಮುಂಬೈ ಪಾಲಿಕೆ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಭರ್ಜರಿ ಗೆಲುವು

ಮುಂಬೈ ಪಾಲಿಕೆ ಚುನಾವಣೆಯಲ್ಲಿ ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಭರ್ಜರಿ ಗೆಲುವು ಕಂಡಿದ್ದಾರೆ. ಬಿಜೆಪಿ, ಶಿವಸೇನೇ ಸರಿದಂತೆ ಪ್ರಮುಖ ಪಕ್ಷಗಳಿಂದ ಪ್ರಬಲ ಸ್ಪರ್ಧೆ ಎದುರಿಸಿದ ಅಭ್ಯರ್ಥಿ ಅಭೂತಪೂರ್ವ ಗೆಲುವು ಕಂಡಿದ್ದಾರೆ.

 

Read Full Story

06:54 PM (IST) Jan 16

ಟ್ರಂಪ್​ಗೆ ದಿಢೀರ್​ ಸಿಕ್ಕಿತು ನೊಬೆಲ್​ ಶಾಂತಿ ಪ್ರಶಸ್ತಿ! ಕಸಿದುಕೊಂಡರೂ ಇತಿಹಾಸ ಸೃಷ್ಟಿಸಿದ ಅಮೆರಿಕ ಅಧ್ಯಕ್ಷ

2025ರ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ, ವೆನೆಜುವೆಲಾದ ಮಾರಿಯಾ ಕೊರಿನಾ ಮಚಾಡೊ ಅವರು ತಮ್ಮ ಪ್ರಶಸ್ತಿಯನ್ನು ಅಮೆರಿಕದ ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್‌ಗೆ ಹಸ್ತಾಂತರಿಸಿದ್ದಾರೆ. ಈ ವಿಚಿತ್ರ ಘಟನೆ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಆದರೆ ನಿಯಮ ಇರೋದೇನು?

Read Full Story

06:10 PM (IST) Jan 16

ಹೊರ ಪ್ರಪಂಚದ ಜೊತೆ ಸಂಪರ್ಕ ಇಲ್ಲದ ಅಮೇಜಾನ್ ಕಾಡಿನ ಕಾಡು ಮನುಷ್ಯರ ಮೊದಲ ವೀಡಿಯೋ ವೈರಲ್

ಹೊರಗಿನ ಪ್ರಪಂಚದ ಜೊತೆಗೆ ಯಾವುದೇ ಸಂಪರ್ಕವೇ ಇಲ್ಲದ ಅಮೇಜಾನ್ ಕಾಡಿನ ಬುಡಕಟ್ಟು ಸಮುದಾಯದ ಜನರನ್ನು ಬಹಳ ಹತ್ತಿರದಿಂದ ವೀಡಿಯೋ ಮಾಡಿರುವಂತ ದೃಶ್ಯಾವಳಿಯನ್ನು ಸಂರಕ್ಷಣಾವಾದಿ ಪಾಲ್ ರೊಸೋಲಿ ಅವರು ಬಿಡುಗಡೆ ಮಾಡಿದ್ದಾರೆ. ಈ ವಿಚಾರವೀಗ ಜಾಗತಿಕ ಮಟ್ಟದಲ್ಲಿ ಜನರ ಗಮನ ಸೆಳೆಯುತ್ತಿದೆ.

Read Full Story

05:28 PM (IST) Jan 16

ವಿರಾಟ್ ಕೊಹ್ಲಿ ಕಾಲೆಳೆದ ಸಂಜಯ್ ಮಂಜ್ರೇಕರ್‌ಗೆ ಚಾಟಿ ಬೀಸಿದ ಹರ್ಭಜನ್ ಸಿಂಗ್!

ಟೆಸ್ಟ್ ನಿವೃತ್ತಿ ನಂತರ ಏಕದಿನ ಕ್ರಿಕೆಟ್ ಆಡುತ್ತಿರುವ ವಿರಾಟ್ ಕೊಹ್ಲಿ ನಿರ್ಧಾರವನ್ನು ಸಂಜಯ್ ಮಂಜ್ರೇಕರ್ ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಹರ್ಭಜನ್ ಸಿಂಗ್, ಯಾವುದೇ ಫಾರ್ಮ್ಯಾಟ್‌ನಲ್ಲಿ ರನ್ ಗಳಿಸುವುದು ಸುಲಭವಲ್ಲ ಎಂದು  ಹೇಳಿದ್ದಾರೆ.

Read Full Story

05:16 PM (IST) Jan 16

ಒಡತಿ ಟೊಮೆಟೊ ಕೊಟ್ಟಿಲ್ಲವೆಂದು ಪೊಲೀಸರನ್ನು ಕರೆಸಿದ ಗಿಳಿ! ಅಚ್ಚರಿಯ ವಿಡಿಯೋ ವೈರಲ್​

ಸೋಷಿಯಲ್ ಮೀಡಿಯಾದಲ್ಲಿ ಗಿಳಿಯೊಂದರ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ಅದು ತನ್ನ ಒಡತಿಯ ಬಳಿ ಟೊಮೆಟೊ ಕೇಳುತ್ತದೆ. ಒಡತಿ ನಿರಾಕರಿಸಿದಾಗ, ಗಿಳಿಯು 'ಪೊಲೀಸ್, ಪೊಲೀಸ್' ಎಂದು ಕೂಗುವ ಮೂಲಕ ತಮಾಷೆಯಾಗಿ ಧಮ್ಕಿ ಹಾಕುತ್ತದೆ.
Read Full Story

04:58 PM (IST) Jan 16

ಅಪಘಾತದಲ್ಲಿ ಬಾಲಕ ಸ್ಥಳದಲ್ಲೇ ಸಾವು, ನೆರವಿನ ಬದಲು ಲಾರಿಯಿಂದ ಚೆಲ್ಲಿದ ಮೀನಿಗಾಗಿ ಮುಗಿಬಿದ್ದ ಜನ

ಅಪಘಾತದಲ್ಲಿ ಬಾಲಕ ಸ್ಥಳದಲ್ಲೇ ಸಾವು, ನೆರವಿನ ಬದಲು ಲಾರಿಯಿಂದ ಚೆಲ್ಲಿದ ಮೀನಿಗಾಗಿ ಮುಗಿಬಿದ್ದ ಜನ ವಿಡಿಯೋ ಭಾರತೀಯರ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ನೆರವಿನ ಬದಲು ಜನರಿಗೆ ರಸ್ತೆಯಲ್ಲಿ ಬಿದ್ದಿದ್ದ ಫ್ರಿ ಮೀನು ಹೆಚ್ಚಾಯಿತು.

 

Read Full Story

04:13 PM (IST) Jan 16

ಆರ್‌ಸಿಬಿ ಮ್ಯಾಚ್ ಬೆಂಗಳೂರು ಬಿಟ್ ಎಲ್ಲಿಗೂ ಶಿಫ್ಟ್ ಆಗೊಲ್ಲ! ಮಹತ್ವದ ಅಪ್‌ಡೇಟ್ಸ್‌ ಕೊಟ್ಟ ಬೆಂಗಳೂರು ಫ್ರಾಂಚೈಸಿ

ಬೆಂಗಳೂರು: ಮುಂಬರುವ 2026ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳು ನಗರದ ಎಂ ಚಿನ್ನಸ್ವಾಮಿ ಸ್ಟೇಡಿಯಂನಿಂದ ಬೇರೆ ಕಡೆ ಶಿಫ್ಟ್ ಆಗಲಿದೆ ಎನ್ನುವ ಸುದ್ದಿ ಜೋರಾಗಿ ಕೇಳಿ ಬರುತ್ತಿರುವ ಬೆನ್ನಲ್ಲೇ, ಆರ್‌ಸಿಬಿ ಫ್ರಾಂಚೈಸಿಯು ಇದೀಗ ಅಧಿಕೃತ ಅಪ್‌ಡೇಟ್ಸ್ ನೀಡಿದೆ.

 

Read Full Story

04:10 PM (IST) Jan 16

ಬಿಎಂಸಿ ಚುನಾವಣೆಯಲ್ಲಿ ಗೆಲುವು - ರಾಜ್‌ಠಾಕ್ರೆ, ಉದ್ಧವ್ ಠಾಕ್ರೆಗೆ ರಸಮಲೈ ಕಳುಹಿಸಿದ ಬಿಜೆಪಿಯ ಬಗ್ಗಾ

ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟವೂ ಗೆಲುವು ಸಾಧಿಸಿದ ಹಿನ್ನೆಲೆ ಬಿಜೆಪಿ ನಾಯಕ ತೇಜಿಂದರ್ ಬಗ್ಗಾ ಅವರು ವಿರೋಧಿ ಬಣವಾದ ಶಿವಸೇನೆಯ ಉದ್ಧವ್‌ ಠಾಕ್ರೆ, ರಾಜ್ ಠಾಕ್ರೆ ಹಾಗೂ ಆದಿತ್ಯ ಠಾಕ್ರೆ ಅವರಿಗೆ ಸಿಹಿತಿನಿಸಾದ ರಸಮಲೈ ಅನ್ನು ಕಳುಹಿಸಿಕೊಟ್ಟಿದ್ದಾರೆ.

Read Full Story

03:59 PM (IST) Jan 16

ಇನ್ಫೋಸಿಸ್ ಷೇರು ಮೌಲ್ಯ ಹೆಚ್ಚಳ, ಒಂದೇ ದಿನ ನಾರಾಯಣಮೂರ್ತಿ , ಸುಧಾಮೂರ್ತಿ ಗಳಿಸಿದ್ದೆಷ್ಟು?

ಇನ್ಫೋಸಿಸ್ ಷೇರು ಮೌಲ್ಯ ಹೆಚ್ಚಳ, ಶುಕ್ರವಾರ ಶೇಕಡಾ 5ರಷ್ಟು ಏರಿಕೆಯಾಗಿದೆ. ಸಂಸ್ಥಾಪಕರಾದ ನಾರಾಯಣಮೂರ್ತಿ, ಸುಧಾ ಮೂರ್ತಿ ಸೇರಿ ಹೂಡಿಕೆದಾರರು ಒಂದೇ ದಿನ ಗಳಿಸಿದ ಆದಾಯವೆಷ್ಟು? ಶುಕ್ರವಾರದ ಶುಭ ಘಳಿಗೆಯಲ್ಲಿ ಗಳಿಕೆ

Read Full Story

02:43 PM (IST) Jan 16

ಕೇರಳದಿಂದ ಓದಲು ಬಂದು ಇಲ್ಲಿ ಬೇರೆಯದೇ ಕಾರುಬಾರು - ಕಾರಿನ ಬೆಲೆಗಿಂತಲೂ ದುಬಾರಿ ದಂಡ ವಿಧಿಸಿದ ಪೊಲೀಸರು

ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ಎಂಜಿನಿಯರಿಂಗ್ ಮಾಡುವುದಕ್ಕಾಗಿ ಬಂದಿದ್ದ ವಿದ್ಯಾರ್ಥಿಯೋರ್ವನಿಗೆ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸುಮಾರು 1.11 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಹಾಗಿದ್ರೆ ಆತ ಮಾಡಿದ್ದೇನು ಇಲ್ಲಿದೆ ಡಿಟೇಲ್ ಸ್ಟೋರಿ.

Read Full Story

01:28 PM (IST) Jan 16

ಅಲಿಬಾಗ್‌ನಲ್ಲಿ ಮತ್ತೊಂದು ದುಬಾರಿ ಆಸ್ತಿ ಖರೀದಿಸಿದ ವಿರುಷ್ಕಾ - ಸ್ಟಾಂಪ್ ಡ್ಯೂಟಿಯೇ 2.27 ಕೋಟಿ - ಆಸ್ತಿ ಮೊತ್ತವೆಷ್ಟು?

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ ಜಂಟಿಯಾಗಿ ಕೋಟ್ಯಾಂತರ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ. ಸುಮಾರು 21,010 ಚದರ ಮೀಟರ್ ವಿಸ್ತೀರ್ಣದ ಆಸ್ತಿಗಾಗಿ ಅವರು 2.27 ಕೋಟಿ ರೂ. ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ. 

Read Full Story

01:06 PM (IST) Jan 16

Maharashtra Municipal Corporation Results - ಬಿಎಂಸಿಯಲ್ಲಿ ಬಹುಮತದ ಗಡಿ ದಾಟಿದ ಮಹಾಯುತಿ, ಠಾಕ್ರೆ ಸರ್ಕಾರ್‌ ಅಧಿಕಾರ ಅಂತ್ಯ!

ಮಹಾರಾಷ್ಟ್ರದ 29 ಪುರಸಭೆಗಳ ಮತ ಎಣಿಕೆಯಲ್ಲಿ, ಬಿಜೆಪಿ-ಶಿವಸೇನೆ (ಶಿಂಧೆ ಬಣ) ನೇತೃತ್ವದ ಮಹಾಯುತಿ ಮೈತ್ರಿಕೂಟವು ಮುನ್ನಡೆ ಸಾಧಿಸಿದೆ. ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಸೇರಿದಂತೆ ಪ್ರಮುಖ ನಗರಗಳಲ್ಲಿ ಶತಕದ ಗಡಿ ದಾಟಿ ಮುನ್ನಡೆಯುತ್ತಿದ್ದು, ಲಾತೂರ್‌ನಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ.
Read Full Story

12:31 PM (IST) Jan 16

ಅಳಿಯನಿಗೆ ರಾಜ ಮರ್ಯಾದೆ - 158 ಬಗೆಯ ಭಕ್ಷ್ಯ ಸಿದ್ಧಪಡಿಸಿ ಬಡಿಸಿದ ಆಂಧ್ರದ ಕುಟುಂಬ

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯ ಕುಟುಂಬವೊಂದು ತಮ್ಮ ಮಗಳು ಮತ್ತು ಹೊಸ ಅಳಿಯನ ಮೊದಲ ಸಂಕ್ರಾಂತಿ ಹಬ್ಬಕ್ಕಾಗಿ 158 ಬಗೆಯ ಭಕ್ಷ್ಯಗಳನ್ನು ಸಿದ್ಧಪಡಿಸಿ ಅದ್ದೂರಿ ಔತಣ ನೀಡಿದೆ. ಗೋದಾವರಿ ಜಿಲ್ಲೆಯಲ್ಲಿ ಅಳಿಯನನ್ನು ರಾಜನಂತೆ ಸತ್ಕರಿಸುವ ಸಂಪ್ರದಾಯದ ಭಾಗವಾಗಿ ಈ ಸಂಭ್ರಮವನ್ನು ಆಚರಿಸಲಾಗಿದೆ.
Read Full Story

12:18 PM (IST) Jan 16

ವಿಚ್ಛೇದನ ಪಡೆದು 10 ವರ್ಷಗಳ ನಂತರ 2ನೇ ಮದುವೆಗೆ ರೆಡಿಯಾದ ಸೀರಿಯಲ್‌ ನಟಿ!

ಟಿವಿ ನಟಿ ರಶ್ಮಿ ದೇಸಾಯಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದಾರೆ. ತಮ್ಮ ಪೋಷಕರು ತನಗಾಗಿ ಸಂಗಾತಿಯನ್ನು ಹುಡುಕುತ್ತಿದ್ದು, ಸರಿಯಾದ ಸಮಯದಲ್ಲಿ ಸರಿಯಾದ ವ್ಯಕ್ತಿ ಸಿಗುತ್ತಾರೆ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. 

Read Full Story

12:11 PM (IST) Jan 16

ಮಾವನ ಆಸ್ತಿಯಲ್ಲಿ ವಿಧವೆ ಸೊಸೆಗೆ ಜೀವನಾಂಶ - ಸುಪ್ರೀಂ ಮಹತ್ವದ ತೀರ್ಪು- ಕೋರ್ಟ್​ ಹೇಳಿದ್ದೇನು?

ಸುಪ್ರೀಂಕೋರ್ಟ್ ಮಹತ್ವದ ತೀರ್ಪೊಂದರಲ್ಲಿ, ಮಾವನ ಮರಣದ ನಂತರ ವಿಧವೆಯಾದ ಸೊಸೆಗೂ ಮಾವನ ಆಸ್ತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ, ಕೆಳಹಂತದ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿ, ಹಿಂದೂ ದತ್ತು ಮತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿನ ಕಾನೂನು ಗೊಂದಲಕ್ಕೆ ತೆರೆ ಎಳೆದಿದೆ.
Read Full Story

11:45 AM (IST) Jan 16

'ಅವನ ವಿಷಯದಲ್ಲಿ ಮಾತ್ರ ಯಾಕೆ ಈ ತಾರತಮ್ಯ?' ಈ ಆಟಗಾರನನ್ನು ಕೈಬಿಟ್ಟಿದ್ದಕ್ಕೆ ಗಂಭೀರ್ ವಿರುದ್ಧ ಅಶ್ವಿನ್ ಕಿಡಿ!

ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ವೇಗಿ ಅರ್ಷದೀಪ್ ಸಿಂಗ್ ಅವರನ್ನು ಪ್ಲೇಯಿಂಗ್ ಇಲೆವೆನ್‌ನಿಂದ ಹೊರಗಿಟ್ಟಿರುವುದಕ್ಕೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಉತ್ತಮ ಪ್ರದರ್ಶನ ನೀಡಿದರೂ ಅವಕಾಶ ನಿರಾಕರಿಸುವುದು ಬೌಲರ್‌ನ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ.

Read Full Story

11:14 AM (IST) Jan 16

ನರೇಗಾ ಬಳಿಕ ಯುಪಿಎ ಕಾಲದ ಇನ್ನೆರಡು ಕಾಯ್ದೆಗೆ ತಿದ್ದುಪಡಿ? ಆರ್‌ಟಿಐ, ಆಹಾರ ಭದ್ರತಾ ಕಾಯ್ದೆಯ ಮೇಲೆ ಕೇಂದ್ರದ ಕಣ್ಣು!

ನರೇಗಾ ನಂತರ, ಕೇಂದ್ರ ಸರ್ಕಾರವು ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದಿದ್ದ ಶಿಕ್ಷಣ ಹಕ್ಕು ಕಾಯ್ದೆ (RTE) ಮತ್ತು ಆಹಾರ ಭದ್ರತಾ ಕಾಯ್ದೆಗಳನ್ನು (FSA) ತಿದ್ದುಪಡಿ ಮಾಡಲು ಸಿದ್ಧತೆ ನಡೆಸುತ್ತಿದೆ. ಯೋಜನೆಗಳ ಪ್ರಯೋಜನಗಳು ಫಲಾನುಭವಿಗಳನ್ನು ತಲುಪುವುದನ್ನು ಖಚಿತಪಡಿಸುವುದು ಮುಖ್ಯ ಉದ್ದೇಶವಾಗಿದೆ.

Read Full Story

10:04 AM (IST) Jan 16

ಭಾರತ- ಚೀನಾ ಯುದ್ಧ ವೇಳೆ 600 ಕೆಜಿ ಚಿನ್ನ ಕೊಟ್ಟಿದ್ದ ರಾಣಿ ಕಾಮಸುಂದರಿ ದೇವಿ ನಿಧನ

1962ರ ಭಾರತ- ಚೀನಾ ಯುದ್ಧದ ಸಂದರ್ಭದಲ್ಲಿ ದೇಶದ ರಕ್ಷಣೆಗಾಗಿ ಬರೋಬ್ಬರಿ 600 ಕೆ.ಜಿ.ಚಿನ್ನ ಹಾಗೂ ಮೂರು ಖಾಸಗಿ ವಿಮಾನವನ್ನು ದಾನವಾಗಿ ನೀಡಿದ್ದ ದರ್ಭಾಂಗ ರಾಜಮನೆತನದ ಕೊನೆಯ ರಾಣಿ ಕಾಮಸುಂದರಿ ದೇವಿ( 96) ನಿಧನರಾಗಿದ್ದಾರೆ.

 

Read Full Story

09:34 AM (IST) Jan 16

ಬಾಂಗ್ಲಾ ಕ್ರಿಕೆಟ್‌ನಲ್ಲಿ ಬಂಡಾಯ - ಪ್ರೀಮಿಯರ್‌ ಲೀಗ್‌ ಸ್ಥಗಿತ? ಭಾರತದ ಮೇಲೆ ಕಿಡಿಕಾರಿದ್ದ ನಜ್ಮುಲ್ ಇಸ್ಲಾಂಗೆ ಗೇಟ್‌ಪಾಸ್!

ಬಿಸಿಬಿ ನಿರ್ದೇಶಕ ನಜ್ಮುಲ್ ಇಸ್ಲಾಂ ಅವರ ವಿವಾದಾತ್ಮಕ ಹೇಳಿಕೆಯಿಂದಾಗಿ ಬಾಂಗ್ಲಾ ಕ್ರಿಕೆಟಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕಾರಣದಿಂದ ಬಾಂಗ್ಲಾ ಪ್ರೀಮಿಯರ್‌ ಲೀಗ್ ಪಂದ್ಯಗಳು ಮುಂದೂಡಿಕೆಯಾಗಿದ್ದು, ಆಟಗಾರರು ತಮ್ಮ ಬೇಡಿಕೆ ಈಡೇರದಿದ್ದರೆ ಲೀಗ್ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ, 

Read Full Story

09:01 AM (IST) Jan 16

ಅಂಡರ್-19 ವಿಶ್ವಕಪ್ - ಅಮೆರಿಕ ಎದುರು ಯಂಗ್‌ ಇಂಡಿಯಾ ಶುಭಾರಂಭ!

ಐಸಿಸಿ ಅಂಡರ್‌-19 ಏಕದಿನ ವಿಶ್ವಕಪ್‌ನ ಆರಂಭಿಕ ಪಂದ್ಯದಲ್ಲಿ ಭಾರತವು ಯುಎಸ್‌ಎ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಹೆನಿಲ್‌ ಪಟೇಲ್ ಮಾರಕ ಬೌಲಿಂಗ್ ದಾಳಿಗೆ (6 ವಿಕೆಟ್) ತತ್ತರಿಸಿದ ಯುಎಸ್‌ಎ 107 ರನ್‌ಗಳಿಗೆ ಆಲೌಟ್ ಆಯಿತು. ಅಭಿಗ್ಯಾನ್‌ ಅಜೇಯ 42 ರನ್‌ಗಳ ನೆರವಿನಿಂದ ಭಾರತ ಗೆದ್ದಿತು.  

Read Full Story

07:55 AM (IST) Jan 16

ಮಸ್ಕತ್ ತಲುಪಿದ ಎಂಜಿನ್‌ ಇಲ್ಲದ ಭಾರತದ ನೌಕೆ!

ಕೇವಲ ಗಾಳಿ ಮತ್ತು ನೌಕಾಯಾನದ ಪರದೆಗಳ (Sails) ಸಹಾಯದಿಂದ ಸಾಗಿದ ಈ ನೌಕೆಯು, ‘ವಿರುದ್ಧ ದಿಕ್ಕಿನ ಗಾಳಿ, ಗಾಳಿಯಿಲ್ಲದ ಶಾಂತ ಸ್ಥಿತಿ (Dead calms), ಭೋರ್ಗರೆಯುವ ಅಲೆಗಳು ಮತ್ತು ಆಧುನಿಕ ಹಡಗು ಸಂಚಾರ ಮಾರ್ಗಗಳ’ ಅಡಚಣೆ ಸೇರಿದಂತೆ ಹಲವು ಸವಾಲುಗಳನ್ನು ಈ ನೌಕೆಯು ಎದುರಿಸಬೇಕಾಯಿತು.

 

Read Full Story

07:55 AM (IST) Jan 16

ಬಾಹ್ಯಾಕಾಶದಲ್ಲೂ ಆರೋಗ್ಯ ತುರ್ತುಪರಿಸ್ಥಿತಿ : ತುರ್ತು ಕಾರ್ಯಾಚರಣೆ

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅನಾರೋಗ್ಯಕ್ಕೆ ತುತ್ತಾಗಿದ್ದ ಬಾಹ್ಯಾಕಾಶ ಯಾನಿಯೊಬ್ಬರನ್ನು ಅಮೆರಿಕ ಬಾಹ್ಯಾಕಾಶ ಸಂಸ್ಥೆ ನಾಸಾ ತುರ್ತು ಕಾರ್ಯಾಚರಣೆಯೊಂದರಲ್ಲಿ ಯಶಸ್ವಿಯಾಗಿ ಭೂಮಿಗೆ ಮರಳಿ ಕರೆತಂದಿದೆ.

 

Read Full Story

07:54 AM (IST) Jan 16

ಮುಂಬೈ ಪಾಲಿಕೆ ಚುನಾವಣೆಯಲ್ಲಿ ಅಳಿಸದ ಇಂಕ್‌ ಅಳಿಸಿದ ವಿವಾದ

ಗುರುವಾರ ನಡೆದ ಮುಂಬೈ ಸೇರಿದಂತೆ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತದಾರರ ಬೆರಳಿಗೆ ಹಾಕಲಾದ ಅಳಿಸಲು ಆಗದ ಇಂಕಿನ ಗುರುತು ಅಳಿಸಿ ಹೋಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

 

Read Full Story

07:54 AM (IST) Jan 16

ದರ ನಿಗದಿ ಪ್ರಕ್ರಿಯೆ ಸೀಕ್ರೆಟ್‌ ಬಹಿರಂಗಪಡಿಸಲ್ಲ: ರೈಲ್ವೆ

ಪ್ರಯಾಣಿಕರ ರೈಲಿನ ಟಿಕೆಟ್‌ ದರ ನಿಗದಿ ಹೇಗೆ ಮಾಡಲಾಗುತ್ತದೆ ಎಂದು ಹೇಳಲಾಗದು. ಯಾಕೆಂದರೆ ಅದು ವ್ಯಾಪಾರದ ಸೀಕ್ರೆಟ್‌. ಈ ದರ ನಿಗದಿ ಪ್ರಕ್ರಿಯೆಗೆ ಮಾಹಿತಿ ಹಕ್ಕುಗಳ ಕಾಯ್ದೆಯಿಂದ ರಕ್ಷಣೆ ಇದೆ ಎಂದು ಭಾರತೀಯ ರೈಲ್ವೆಯು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ಕ್ಕೆ ತಿಳಿಸಿದೆ.

 

Read Full Story

07:54 AM (IST) Jan 16

ಇರಾನ್‌ನತ್ತ ಅಮೆರಿಕದ ನೌಕಾಪಡೆಯ ದಂಡು

ಇರಾನ್‌ನೊಂದಿಗೆ ಸಂಘರ್ಷ ದಿನೇ ದಿನೇ ಹೆಚ್ಚುತ್ತಿರುವ ನಡುವೆಯೇ, ತನ್ನ ನೌಕಾಪಡೆಯ ಮುಂಚೂಣಿ ದಾಳಿಯ ನೌಕೆಗಳನ್ನು ಅಮೆರಿಕ ಸರ್ಕಾರವು ಮಧ್ಯಪ್ರಾಚ್ಯದತ್ತ ರವಾನಿಸಿದೆ. ಇದರೊಂದಿಗೆ ಇರಾನ್‌ ಮೇಲೆ ಅಮೆರಿಕದ ದಾಳಿ ಮತ್ತಷ್ಟು ಸನ್ನಿಹಿತವಾಗಿರಬಹುದು ಎಂಬ ವಿಶ್ಲೇಷಣೆ ಕೇಳಿಬಂದಿದೆ.

Read Full Story

07:53 AM (IST) Jan 16

ಗ್ರೀನ್‌ಲ್ಯಾಂಡ್‌ಗೆ ನ್ಯಾಟೋ ಸೈನಿಕರ ಪ್ರವೇಶ

ನಮಗೆ ಗ್ರೀನ್‌ಲ್ಯಾಂಡ್‌ ಬೇಕೇ ಬೇಕು ಎಂದು ಅಮೆರಿಕ ಪಟ್ಟು ಹಿಡಿದು ಕೂತಿರುವ ನಡುವೆಯೇ ಅಮೆರಿಕದ್ದೇ ನೇತೃತ್ವ ಹೊಂದಿರುವ ನ್ಯಾಟೋ ಮಿಲಿಟರಿ ಕೂಟದ ಭಾಗವಾಗಿರುವ ಫ್ರಾನ್ಸ್‌, ಜರ್ಮನಿ ಸೇರಿ ಇತರೆ ಯುರೋಪಿಯನ್‌ ದೇಶಗಳು ಗ್ರೀನ್‌ಲ್ಯಾಂಡ್‌ ರಕ್ಷಣೆಗಾಗಿ ತಮ್ಮ ಸೇನೆಯನ್ನು ಕಳುಹಿಸಿಕೊಟ್ಟಿವೆ

 

Read Full Story

07:53 AM (IST) Jan 16

ಹೊಸ ‘ಪಂಚ್‌’ ಕೊಟ್ಟ ಟಾಟಾ ‘ಕಮಾಂಡ್ ಮ್ಯಾಕ್ಸ್’!

ಭಾರತದ ಮುಂಚೂಣಿ ಕಾರು ಮತ್ತು ಎಸ್‌ಯುವಿಗಳ ತಯಾರಿಕಾ ಸಂಸ್ಥೆಯಾದ ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಲಿ., (ಟಿಎಂಪಿವಿ) ಹೆಚ್ಚು ವೇಗ, ಹೆಚ್ಚು ಸ್ಮಾರ್ಟ್ ಹೊಂದಿರುವ ಹೊಸ ಟಾಟಾ ‘ಪಂಚ್‌ ಕಮಾಂಡ್ ಮ್ಯಾಕ್ಸ್’ ಎಂಬ ಹೆಸರಿನ ಕಾರು ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

 

Read Full Story

07:52 AM (IST) Jan 16

ದೇಶದ ಶ್ರೀಮಂತ ಪಾಲಿಕೆಗೆ ಮೊದಲ ಬಿಜೆಪಿ ಮೇಯರ್‌?

ದೇಶದ ಅತ್ಯಂತ ಶ್ರೀಮಂತ ಮಹಾನಗರ ಪಾಲಿಕೆ ಎಂಬ ಹಿರಿಮೆ ಹೊಂದಿರುವ ಬೃಹನ್ಮುಂಬೈ ಪಾಲಿಕೆಗೆ ಗುರುವಾರ ಶಾಂತಿಯುತ ಚುನಾವಣೆ ನಡೆದಿದ್ದು, ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತು ಶಿವಸೇನೆ (ಶಿಂಧೆ) ಕೂಟಕ್ಕೆ ಸ್ಪಷ್ಟ ಬಹುಮತದ ಸುಳಿವು ನೀಡಿವೆ.

 

Read Full Story

07:52 AM (IST) Jan 16

ಸಿಂದೂರದಿಂದ ಪಾಕ್‌ ತಲ್ಲಣ ಆಗಿತ್ತು : ಉಗ್ರನಿಂದ್ಲೇ ಒಪ್ಪಿಗೆ

ಕಾಶ್ಮೀರದ ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರನ್ನು ಹತ್ಯೆಗೈದಿದ್ದಕ್ಕೆ ಪ್ರತೀಕಾರವಾಗಿ ಭಾರತ ಕೈಗೊಂಡ ‘ಆಪರೇಷನ್‌ ಸಿಂದೂರ’ವು, ನಮ್ಮ ಕಾರ್ಯಾಚರಣೆಯ ಕೇಂದ್ರ ಸ್ಥಾನವಾದ ಮುರೀದ್ಕೆ ಮಸೀದಿಯನ್ನು ನಾಮಾವಶೇಷ ಮಾಡಿತ್ತು ಎಂದು ಸ್ವತಃ ಲಷ್ಕರ್‌ ಉಗ್ರ ಹಫೀಜ್‌ ಅಬ್ದುಲ್‌ ರೌಫ್‌ ಒಪ್ಪಿಕೊಂಡಿದ್ದಾನೆ.

 

Read Full Story

07:52 AM (IST) Jan 16

ಗ್ರೋಕ್‌ನಲ್ಲಿ ನೈಜ ವ್ಯಕ್ತಿ ಅಶ್ಲೀಲ ಚಿತ್ರ ಸೃಷ್ಟಿ ಅವಕಾಶಕ್ಕೆ ಬ್ರೇಕ್‌

ಎಲಾನ್ ಮಸ್ಕ್ ಒಡೆತನದ ಎಐ ಚಾಟ್‌ಬಾಟ್‌ ಗ್ರೋಕ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ಎಡಿಟ್‌ ಮಾಡುತ್ತಿರುವ ಕುರಿತು ಜಾಗತಿಕ ಮಟ್ಟದಲ್ಲಿ ಕಳವಳ ವ್ಯಕ್ತವಾದ ಬೆನ್ನಲ್ಲೇ, ಯಾವುದೇ ನೈಜ ವ್ಯಕ್ತಿಯ ಚಿತ್ರವನ್ನು ಬೆತ್ತಲೆ/ಅಶ್ಲೀಲಗೊಳಿಸುವ ಆಯ್ಕೆಯನ್ನು ಗ್ರೋಕ್‌ನಿಂದ ತೆಗೆದುಹಾಕಲು ನಿರ್ಧರಿಸಿದೆ.

 

Read Full Story

07:51 AM (IST) Jan 16

ಇರಾನ್‌ ಭಾರತೀಯರ ಏರ್‌ಲಿಫ್ಟ್‌ - ಅಮೆರಿಕದ ದಾಳಿ ಭೀತಿ

ಕ್ಷಣಕ್ಷಣಕ್ಕೂ ಅಮೆರಿಕ ದಾಳಿಯ ಭೀತಿ ಹೆಚ್ಚಾಗುತ್ತಿರುವ ನಡುವೆಯೇ ಇರಾನ್‌ನಲ್ಲಿ ಸಿಲುಕಿರುವ ಸಾವಿರಾರು ಭಾರತೀಯರನ್ನು ವಿಮಾನದ ಮೂಲಕ ತವರಿಗೆ ಕರೆತರಲು ಭಾರತ ಸರ್ಕಾರ ಸಜ್ಜಾಗಿದೆ. ಎಲ್ಲವೂ ಅಂದುಕೊಂಡರೆ ನಡೆದರೆ ಮೊದಲ ತಂಡ ಶುಕ್ರವಾರ ಭಾರತಕ್ಕೆ ಆಗಮಿಸುವ ಸಾಧ್ಯತೆಯಿದೆ.

 

Read Full Story

07:51 AM (IST) Jan 16

ಈ ಬಾರಿ ಗುಂಡಿನ ಗುರಿ ತಪ್ಪಲ್ಲ : ಟ್ರಂಪ್‌ಗೆ ಇರಾನ್‌ ವಾರ್ನಿಂಗ್‌!

ಇರಾನ್‌ ಮತ್ತು ಅಮೆರಿಕ ನಡುವೆ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಇರಾನ್‌ ಹತ್ಯೆಯ ಬೆದರಿಕೆ ಹಾಕಿದೆ. ಈ ಬಾರಿ ಗುಂಡು ಗುರಿ ತಪ್ಪಲ್ಲ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಟೀವಿ ವಾಹಿನಿ ಎಚ್ಚರಿಕೆ ನೀಡಿದೆ.

 

Read Full Story

07:50 AM (IST) Jan 16

ಭಾರತ- ಅಮೆರಿಕ ವ್ಯಾಪಾರ ಒಪ್ಪಂದ ಬಹುತೇಕ ಫೈನಲ್‌- ಬಾಕಿ ಉಳಿದ ವಿಷಯ ಇತ್ಯರ್ಥಕ್ಕೆ ಚರ್ಚೆ

ರಷ್ಯಾ ತೈಲ ಖರೀದಿ ವಿಷಯ ಉಭಯ ದೇಶಗಳ ನಡುವೆ ಬಿಕ್ಕಟ್ಟು, ತೆರಿಗೆ ದಾಳಿಗೆ ಕಾರಣವಾದ ಹೊರತಾಗಿಯೂ ಅಮೆರಿಕ ಮತ್ತು ಭಾರತ ನಡುವಿನ ಮುಕ್ತ ವ್ಯಾಪಾರ ಒಪ್ಪಂದ ಮಾತುಕತೆ ಅಂತಿಮ ಹಂತಕ್ಕೆ ತಲುಪಿದೆ. ಎರಡೂ ಕಡೆಯವರು ಸಿದ್ಧವಾದಾಗ ಅದನ್ನು ಘೋಷಿಸಲಾಗುವುದು ಎಂದು ಭಾರತ ಸರ್ಕಾರ ಹೇಳಿದೆ.

 

Read Full Story

More Trending News