LIVE NOW
Published : Jun 12, 2026, 08:03 AM ISTUpdated : Jun 12, 2026, 11:00 PM IST

India News Live: ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲಿನ ಮೂಳೆಯನ್ನೇ ಮುರಿದ ವೈದ್ಯರು?

ಸಾರಾಂಶ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (Delimitation) ಕುರಿತು ದಕ್ಷಿಣದ ರಾಜ್ಯಗಳ ತೀವ್ರ ವಿರೋಧದ ನಡುವೆಯೇ, ಕೇಂದ್ರ ಸರ್ಕಾರ ಹೊಸದೊಂದು ಸೂತ್ರದ ಸುಳಿವು ನೀಡಿದೆ. ಎಲ್ಲಾ 543 ಕ್ಷೇತ್ರಗಳನ್ನು ಬದಲಾಯಿಸುವ ಬದಲು, ಜನಸಂಖ್ಯೆ ಹೆಚ್ಚಿರುವ ಕೇವಲ 170 ನಿರ್ದಿಷ್ಟ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಲು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ (EAC-PM) ಪ್ರಸ್ತಾಪಿಸಿದೆ. ಈ ಯೋಜನೆಯಡಿ 59 ಕ್ಷೇತ್ರಗಳನ್ನು 2 ಭಾಗವಾಗಿ ಮತ್ತು 111 ಕ್ಷೇತ್ರಗಳನ್ನು 3 ಭಾಗವಾಗಿ ವಿಭಜಿಸುವ ಮೂಲಕ ಒಟ್ಟು ಲೋಕಸಭಾ ಸ್ಥಾನಗಳನ್ನು 824ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಡಾ. ಶಮಿಕಾ ರವಿ ಮತ್ತು ಮುದಿತ್ ಕಪೂರ್ ಅವರ ವರದಿ ಅನ್ವಯ, ಈ ಹೊಸ ಸೂತ್ರದಿಂದ ದೇಶದಲ್ಲಿ ಮತದಾನ ಪ್ರಮಾಣ ಶೇ. 0.3 ರಿಂದ ಶೇ. 2.3 ರಷ್ಟು ಹೆಚ್ಚಾಗಲಿದ್ದು, ಸುಮಾರು 90 ಲಕ್ಷದಿಂದ 2.3 ಕೋಟಿ ಹೆಚ್ಚುವರಿ ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳಲು ನೆರವಾಗಲಿದೆ. ಕರ್ನಾಟಕದ ಕ್ಷೇತ್ರ 28 ರಿಂದ 42ಕ್ಕೆ ಏರಿಕೆ ಆಗಲಿದೆ.

Doctor

11:00 PM (IST) Jun 12

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲಿನ ಮೂಳೆಯನ್ನೇ ಮುರಿದ ವೈದ್ಯರು?

ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ, ವಿಧವೆಯೊಬ್ಬರು ತಮ್ಮ 14 ವರ್ಷದ ವಿಕಲಚೇತನ ಮಗಳ ಚಿಕಿತ್ಸೆಗೆ ಹಣ ಪಾವತಿಸದ ಕಾರಣಕ್ಕೆ ವೈದ್ಯರೇ ಆಕೆಯ ಕಾಲು ಮುರಿದಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದು, ಈ ಪ್ರಕರಣದ ತನಿಖೆಗೆ ಮುಖ್ಯ ವೈದ್ಯಾಧಿಕಾರಿಗಳು ಸಮಿತಿ ರಚಿಸಿದ್ದಾರೆ.
Read Full Story

10:27 PM (IST) Jun 12

ಗನ್​ ತೋರಿಸಿ ಸೊಸೆ ಮೇಲೆ ರೇ*ಪ್ - ಅಪ್ಪನಿಗೆ ಸಹಕರಿಸಿಲ್ಲ ಎಂದು ಪತಿ ಫೋನ್​ನಲ್ಲೇ ತಲಾಖ್​

ಉತ್ತರ ಪ್ರದೇಶದಲ್ಲಿ, ಮಾವನಿಂದ ಅತ್ಯಾ*ಚಾರಕ್ಕೊಳಗಾದ ಮಹಿಳೆಗೆ, ಆತನಿಗೆ ಸಹಕರಿಸಲು ನಿರಾಕರಿಸಿದ್ದಕ್ಕೆ ಪತಿಯು ಫೋನ್ ಮೂಲಕವೇ ತ್ರಿವಳಿ ತಲಾಖ್ ನೀಡಿದ್ದಾನೆ. ಈ ಕ್ರೌರ್ಯದ ವಿರುದ್ಧ ಸಂತ್ರಸ್ತೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿ ಪತಿ ತಲೆಮರೆಸಿಕೊಂಡಿದ್ದಾನೆ.

Read Full Story

09:15 PM (IST) Jun 12

ಈ ಸಿನಿಮಾ ನೋಡಿದರೆ ಆತ್ಮ*ಹ*ತ್ಯೆ ಆಗಲ್ಲ - Silk Smitha ಸಾವಿನ ಬಗ್ಗೆ ದಾಸರಿ ಹೇಳಿದ್ದ ಮಾತು ಮತ್ತೆ ವೈರಲ್!

Silk Smitha ಮತ್ತು ಜಯಲಕ್ಷ್ಮಿ ಅವರ ದುರಂತ ಸಾವಿನ ಬಗ್ಗೆ ನಿರ್ದೇಶಕ ದಾಸರಿ ನಾರಾಯಣ ರಾವ್ ಮಾತನಾಡಿದ್ದು, ಚಿತ್ರರಂಗಕ್ಕೆ ಬರುವ ಪ್ರತಿಯೊಬ್ಬ ನಟಿಯೂ 'ಶಿವರಂಜನಿ' ಸಿನಿಮಾ ನೋಡಬೇಕು ಎಂದು ಹೇಳಿದ್ದರು.

Read Full Story

08:47 PM (IST) Jun 12

ಕಳಚಿತು ರಾಜಮನೆತನದ ಕೊಂಡಿ - ಮೂರು ವರ್ಷಗಳಿಂದ ಕೋಮಾದಲ್ಲಿದ್ದ ರಾಜಕುಮಾರಿ ಇನ್ನಿಲ್ಲ

“ಲಾಯರ್ ಪ್ರಿನ್ಸೆಸ್” ಎಂದೇ ಜನಪ್ರಿಯರಾಗಿದ್ದ ಥಾಯ್ಲೆಂಡ್ ರಾಜಕುಮಾರಿ ಬಜ್ರಕಿಟಿಯಾಭಾ ಅವರು ಹೃದಯ ಸೋಂಕಿನಿಂದಾಗಿ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣವು ಥಾಯ್ಲೆಂಡ್ ರಾಜಮನೆತನದ ಉತ್ತರಾಧಿಕಾರದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟುಹಾಕಿದೆ.

Read Full Story

08:26 PM (IST) Jun 12

ಮಹತ್ವದ ಸರಣಿಯ ನಡುವೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಹೇಳಿದ ಕೂಲ್ ಕ್ಯಾಪ್ಟನ್!

ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ನಡೆಯುತ್ತಿರುವಾಗಲೇ ಈ ನಿರ್ಧಾರ ಪ್ರಕಟಿಸಿದ್ದು, 16 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ 19,346 ರನ್ ಗಳಿಸಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯೊಂದಿಗೆ ಅವರು ವಿದಾಯ ಹೇಳುತ್ತಿದ್ದಾರೆ.
Read Full Story

08:07 PM (IST) Jun 12

'ನಿನ್ನ ನೆನಪಾಗುತ್ತಿದೆ, ಬೇಗ ಬಾ'.. Gen Z ನಿದ್ದೆಗೆಡಿಸಿದ 'ಮಿಸ್ಸಿಂಗ್' ಮೆಸೇಜ್! ಏನಿದು ಶಾರ್ವರಿ-ವೇದಂಗ್ ರೈನಾ ಆಟ?

ಈ ಚಿತ್ರವು 1947ರ ಭಾರತ-ಪಾಕಿಸ್ತಾನ ವಿಭಜನೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ತನ್ನ ಪ್ರೀತಿಯನ್ನು ಕಳೆದುಕೊಂಡ ವೃದ್ಧನೊಬ್ಬನ ನೋವಿನ ಕಥೆ ಇದು. ಸಾಯುವ ಮುನ್ನ ತನ್ನ ಹಳೆಯ ಪ್ರೇಮಿಯನ್ನು ಒಮ್ಮೆ ನೋಡಬೇಕೆಂಬ ಅವರ ಕೊನೆಯ ಆಸೆ ಏನಾಯ್ತು?

Read Full Story

07:17 PM (IST) Jun 12

Item Songs - 'ಐಟಂ ಸಾಂಗ್‌'ಗೆ ಅತಿ ಹೆಚ್ಚು ಹಣ ಪಡೆಯೋ ಭಾರತದ No 1 ನಟಿ ಯಾರು? ಅದೆಷ್ಟು ಚಾರ್ಜ್‌ ಮಾಡ್ತಾರೆ ಗೊತ್ತಾ?!

'ಮುನ್ನಿ ಬದ್ನಾಮ್' ಇಂದ ಹಿಡಿದು ಇತ್ತೀಚಿನ 'ಆಜ್ ಕಿ ರಾತ್' ವರೆಗೆ, ಐಟಂ ಸಾಂಗ್‌ಗಳು ಸೃಷ್ಟಿಸಿರುವ ಕ್ರೇಜ್ ಅಷ್ಟಿಷ್ಟಲ್ಲ. ಇನ್ನು ಈ ಹಾಡುಗಳಲ್ಲಿ ಸೊಂಟ ಬಳುಕಿಸೋ ನಾಯಕಿಯರು ಪಡೆಯೋ ಸಂಭಾವನೆ ಕೇಳಿದರೆ ನೀವು ನಿಜಕ್ಕೂ ಶಾಕ್ ಆಗ್ತೀರಾ! 

Read Full Story

06:58 PM (IST) Jun 12

NBK 111 Glimpse - ಪವನ್ ಕಲ್ಯಾಣ್ ಹಾದಿ ಹಿಡಿದ್ರಾ ಬಾಲಯ್ಯ? OG ನೆನಪಿಸುತ್ತಿದೆ NBK111 ಫಸ್ಟ್ ಗ್ಲಿಂಪ್ಸ್!

ನಂದಮೂರಿ ಅಭಿಮಾನಿಗಳಿಗೆ ಇನ್ನು ಹಬ್ಬವೋ ಹಬ್ಬ. ಬಾಲಯ್ಯನ ಹೊಸ ಅವತಾರ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಇತ್ತೀಚೆಗೆ NBK 111 ಚಿತ್ರದ ಫಸ್ಟ್ ಗ್ಲಿಂಪ್ಸ್ ರಿಲೀಸ್ ಆಗಿದ್ದು, ಇದರಲ್ಲಿ ಬಾಲಕೃಷ್ಣ ಹೇಗಿದ್ದಾರೆ ಗೊತ್ತಾ?

Read Full Story

06:05 PM (IST) Jun 12

ಆಫ್ಘಾನಿಸ್ತಾನ ಎದುರಿನ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ; ಓರ್ವ ಟೀಂ ಇಂಡಿಯಾಗೆ ಪಾದಾರ್ಪಣೆ?

ಭಾರತ ಮತ್ತು ಆಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ಗಾಯದ ಸಮಸ್ಯೆಯಿಂದ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಸರಣಿಯಿಂದ ಹೊರಗುಳಿದಿದ್ದು, ಅವರ ಸ್ಥಾನದಲ್ಲಿ ಯಾರು ಆಡಲಿದ್ದಾರೆ ಮತ್ತು ಭಾರತದ ಸಂಭಾವ್ಯ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.
Read Full Story

06:03 PM (IST) Jun 12

Ram Charan Habits - ರಾಮ್ ಚರಣ್‌ ಸಿಗರೇಟ್ ಸೇದುತ್ತಾರಾ? ಮೆಗಾ ಪವರ್ ಸ್ಟಾರ್ ಬಿಚ್ಚಿಟ್ಟ ಸತ್ಯವೇನು?

Ram Charan Smoking: ಗ್ಲೋಬಲ್ ಸ್ಟಾರ್ ರಾಮ್ ಚರಣ್‌ಗೆ ಸಿಗರೇಟ್ ಸೇದುವ ಅಭ್ಯಾಸ ಇದೆಯಾ? ಮೆಗಾ ಹೀರೋ ಮದ್ಯಪಾನ ಮಾಡ್ತಾರಾ? ಈ ಬಗ್ಗೆ ಮೆಗಾ ಪವರ್ ಸ್ಟಾರ್ ಸ್ವತಃ ಹೇಳಿದ್ದೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

Read Full Story

05:37 PM (IST) Jun 12

Baby Elephant - ಹುಟ್ಟಿದ ಎರಡೇ ದಿನಕ್ಕೆ ಫುಟ್ಬಾಲ್ ಆಟ - 2026ರ ವರ್ಲ್ಡ್‌ಕಪ್‌ಗೆ ಈ ಆನೆಮರಿ ರೆಡಿ!

Asian Elephant Calf: ಬ್ರಿಟನ್‌ನ ಮೃಗಾಲಯದಲ್ಲಿ ಹುಟ್ಟಿದ ಪುಟ್ಟ ಏಷ್ಯನ್ ಆನೆಮರಿಯೊಂದು ಫುಟ್ಬಾಲ್ ಆಡಲು ಯತ್ನಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಫುಟ್ಬಾಲ್ ಅಭಿಮಾನಿಗಳು..

Read Full Story

05:22 PM (IST) Jun 12

Wonder Kid ವೈಭವ್ ಸೂರ್ಯವಂಶಿ ಬಗ್ಗೆ ಕನ್ನಡದಲ್ಲೇ ಗುಣಗಾನ ಮಾಡಿದ ರಾಹುಲ್ ದ್ರಾವಿಡ್! ವಿಡಿಯೋ ಇಲ್ಲಿದೆ ನೋಡಿ

ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್, 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿಯನ್ನು 'ಜನರೇಷನಲ್ ಟ್ಯಾಲೆಂಟ್' ಎಂದು ಬಣ್ಣಿಸಿದ್ದಾರೆ. ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದು ಅದ್ಭುತ ಪ್ರದರ್ಶನ ನೀಡಿದ ವೈಭವ್, ಇದೀಗ ಭಾರತದ ಹಿರಿಯರ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿದ್ದಾರೆ.
Read Full Story

05:22 PM (IST) Jun 12

Sachin Tendulkar - 'ನನ್ನ ಔಟ್‌ ಮಾಡೋಕೆ ನಿಮಗೆ ಸಾಧ್ಯ ಆಗೋದಿಲ್ಲ..' ಮಗಳು, ಸೊಸೆ ಜೊತೆ ಫ್ಲೈಟ್‌ನಲ್ಲೇ ಮಾಸ್ಟರ್‌ ಬ್ಲಾಸ್ಟರ್‌ ಕ್ರಿಕೆಟ್‌

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತಮ್ಮ ಕುಟುಂಬದೊಂದಿಗೆ ಖಾಸಗಿ ವಿಮಾನದಲ್ಲಿ ಕ್ರಿಕೆಟ್ ಆಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಲಘು ಆಟದಲ್ಲಿ ಸೊಸೆ ಬೌಲಿಂಗ್ ಮಾಡಿದರೆ, ಮಗಳು ಸಾರಾ ಫೀಲ್ಡಿಂಗ್ ಮಾಡಿ, ಕೊನೆಗೆ ಸಚಿನ್ ಅವರ ಕ್ಯಾಚ್ ಹಿಡಿದು ಸಂಭ್ರಮಿಸಿದ್ದಾರೆ. 

Read Full Story

05:11 PM (IST) Jun 12

ಭಾರತೀಯರಿಗೆ ಸ್ಪೆಷಲ್ ಗಿಫ್ಟ್ - ಜಗತ್ತಿಗಿಂತ ಒಂದು ದಿನ ಮೊದಲೇ ಬಿಡುಗಡೆಯಾಗಲಿದೆ ಸ್ಪೈಡರ್ ಮ್ಯಾನ್!

ಟಾಮ್ ಹಾಲೆಂಡ್ ನಟನೆಯ ‘ಸ್ಪೈಡರ್-ಮ್ಯಾನ್: ಬ್ರಾಂಡ್ ನ್ಯೂ ಡೇ’ ಸಿನಿಮಾ ಭಾರತದಲ್ಲಿ ಜಾಗತಿಕ ಬಿಡುಗಡೆಗೂ ಒಂದು ದಿನ ಮುಂಚಿತವಾಗಿ ಜುಲೈ 30, 2026ರಂದು ಬಿಡುಗಡೆಯಾಗಲಿದೆ. ಮಾರ್ವೆಲ್ ಅಭಿಮಾನಿಗಳಲ್ಲಿ ಭಾರೀ ನಿರೀಕ್ಷೆ ಮೂಡಿದೆ.

Read Full Story

04:55 PM (IST) Jun 12

'ನನ್ನೊಳಗಿದ್ದ ರಾಕ್ಷಸರನ್ನು ಹೊರಹಾಕಿದ್ದೇನೆ' - ಸಲ್ಮಾನ್ ಜೊತೆಗಿನ ಬ್ರೇಕಪ್ ಬಗ್ಗೆ ಐಶ್ವರ್ಯಾ ರೈ ಅಂದು ಹೇಳಿದ್ದೇನು?

ಸಲ್ಮಾನ್ ಖಾನ್ ಜೊತೆಗಿನ ಹಳೆಯ ಸಂಬಂಧ ಮತ್ತು ಬ್ರೇಕಪ್ ಬಗ್ಗೆ ವರ್ಷಗಳ ಹಿಂದೆ ನೀಡಿದ್ದ ಐಶ್ವರ್ಯಾ ರೈ ಅವರ ಹೇಳಿಕೆ ಮತ್ತೆ ವೈರಲ್ ಆಗಿದೆ. ‘ನನ್ನೊಳಗಿದ್ದ ರಾಕ್ಷಸರನ್ನು ಹೊರಹಾಕಿದ್ದೇನೆ’ ಎಂಬ ಮಾತಿನ ಹಿಂದಿನ ಕಥೆ ಇಲ್ಲಿದೆ.

Read Full Story

04:53 PM (IST) Jun 12

ಮಿಸ್ ಸ್ಟೇಟ್ ಕಿರೀಟ ಗೆದ್ದ ಮಾಡೆಲ್ ವಿಮಾನ ನಿಲ್ದಾಣದಲ್ಲಿ ಅರೆಸ್ಟ್, ಬ್ಯಾಗ್ ನೋಡಿ ಪೊಲೀಸ್ ದಂಗು

ಹಲವು ಬ್ಯೂಟಿ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಖ್ಯಾತ ಮಾಡೆಲ್ ಇದೀಗ ವಿಮಾನ ನಿಲ್ದಾಣದಲ್ಲೇ ಅರೆಸ್ಟ್ ಆಗಿದ್ದಾರೆ. ಈಕೆಯ ಬ್ಯಾಗ್ ಚೆಕ್ ಮಾಡಿದ ಕಸ್ಟಮ್ ಅಧಿಕಾರಿಗಳು ದಂಗಾಗಿದ್ದಾರೆ. ಅಷ್ಟಕ್ಕೂ ಈಕೆ ಅರೆಸ್ಟ್ ಆಗಿದ್ದೇಕೆ?

Read Full Story

04:41 PM (IST) Jun 12

ಆ ಎಂಎಂಎಸ್ ಲೀಕ್ ಆದಾಗ ನಾನು ಸಂಪೂರ್ಣ ಕುಸಿದು ಹೋಗಿದ್ದೆ - ಶಾಹಿದ್ ಕಪೂರ್ ಬಿಚ್ಚಿಟ್ರು ಆ ರಹಸ್ಯ!

ಕರೀನಾ ಕಪೂರ್ ಜೊತೆಗಿನ ಹಳೆಯ ಎಂಎಂಎಸ್ ವಿವಾದದ ಬಗ್ಗೆ ವರ್ಷಗಳ ಬಳಿಕ ಮಾತನಾಡಿದ ಶಾಹಿದ್ ಕಪೂರ್, ಖಾಸಗಿತನಕ್ಕೆ ಆದ ಧಕ್ಕೆ ಮತ್ತು ಮಾನಸಿಕವಾಗಿ ಎದುರಿಸಿದ ಸಂಕಷ್ಟದ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

Read Full Story

04:26 PM (IST) Jun 12

ಸಚಿನ್‌, ವಿರಾಟ್‌ಗಿಂತಲೂ ದೊಡ್ಡ ಪ್ಲೇಯರ್‌ ಆಗುವ ಸಾಮರ್ಥ್ಯ ವೈಭವ್‌ ಸೂರ್ಯವಂಶಿಗಿದೆ - ದಿಗ್ಗಜ ಬೌಲರ್‌ ಭವಿಷ್ಯ

ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್, ಭಾರತದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಅವರನ್ನು 'ಭಾರತೀಯ ಕ್ರಿಕೆಟ್‌ನ ಅಮೂಲ್ಯ ನಿಧಿ' ಎಂದು ಹೊಗಳಿದ್ದಾರೆ. ಸಚಿನ್ ಮತ್ತು ಕೊಹ್ಲಿಗಿಂತ ದೊಡ್ಡ ಆಟಗಾರನಾಗುವ ಸಾಮರ್ಥ್ಯ ಅವರಲ್ಲಿದೆ ಎಂದಿದ್ದಾರೆ.

Read Full Story

03:36 PM (IST) Jun 12

ಎದ್ನೋ ಬಿದ್ನೋ ಎಂದು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್; ಎಂಥಾ ಬ್ಯಾಡ್ ಟೈಂ ನೋಡಿ!

ಬಾಲಿವುಡ್ ‘ಸುಲ್ತಾನ್’ ಸಲ್ಮಾನ್ ಖಾನ್ ಮತ್ತೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ತಮ್ಮ ಯಾವುದೇ ಹೊಸ ಸಿನಿಮಾದ ಕಾರಣಕ್ಕಲ್ಲ, ಬದಲಾಗಿ ಬೇರೆ ಒಂದು ವಿಭಿನ್ನ ಕಾರಣಕ್ಕಾಗಿ ಸುದ್ದಿಯಲ್ಲಿ ಇದ್ದಾರೆ. ಏನದು ನೋಡಿ..!

Read Full Story

02:59 PM (IST) Jun 12

ವಿಚ್ಛೇದನದ ಬಳಿಕ ಮತ್ತೊಂದ್‌ ಮದುವೆಯಾದ ಬಾಲಿವುಡ್‌ ರಂಗಿಲಾ ನಟಿಯ ಮಾಜಿ ಗಂಡ ಮೊಹ್ಸಿನ್‌ ಅಖ್ತರ್‌!

ನಟಿ ಊರ್ಮಿಳಾ ಮಾತೋಂಡ್ಕರ್‌ಗೆ ವಿಚ್ಛೇದನ ನೀಡಿದ ನಂತರ ಅವರ ಮಾಜಿ ಪತಿ ಮೊಹ್ಸಿನ್‌ ಅಖ್ತರ್‌ ಮೀರ್ ಎರಡನೇ ಮದುವೆಯಾಗಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೊಸ ಪತ್ನಿಯ ಕೈ ಹಿಡಿದ ಫೋಟೋ ಹಂಚಿಕೊಂಡಿದ್ದು, ಆಕೆಯ ಗುರುತನ್ನು ಗೌಪ್ಯವಾಗಿಟ್ಟಿದ್ದಾರೆ, ಇದು ಸಾಮಾಜಿಕ ಜಾಲತಾಣದಲ್ಲಿ ಕುತೂಹಲ ಕೆರಳಿಸಿದೆ.
Read Full Story

02:01 PM (IST) Jun 12

ಆರು ಬಾರಿಯ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾಗೆ ಮುಖಭಂಗ; ಬಾಂಗ್ಲಾದೇಶ ಎದುರು ಸರಣಿ ಸೋತ ಕಾಂಗರೂ ಪಡೆ

ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಬಾಂಗ್ಲಾದೇಶ ತಂಡವು 2-0 ಅಂತರದಲ್ಲಿ ಗೆದ್ದುಕೊಂಡಿದೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಇದೇ ಮೊದಲ ಬಾರಿಗೆ ಏಕದಿನ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ. ಎರಡನೇ ಪಂದ್ಯದಲ್ಲಿ ಡೆಕ್ವರ್ಥ್ ಲೂಯಿಸ್ ನಿಯಮದನ್ವಯ 5 ವಿಕೆಟ್‌ಗಳ ಜಯ ಸಾಧಿಸಿ ಸರಣಿ ಕೈವಶ ಮಾಡಿಕೊಂಡಿತು.
Read Full Story

01:56 PM (IST) Jun 12

ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ OPPO Find X9s ಅಬ್ಬರ - ಗ್ರಾಹಕರು ಫಿದಾ ಆಗಲು ಇಲ್ಲಿದೆ 5 ಮುಖ್ಯ ಕಾರಣಗಳು!

OPPO Find X9s ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ತನ್ನ ವಿಶಿಷ್ಟ ವಿನ್ಯಾಸ, ಹ್ಯಾಸಲ್‌ಬ್ಲಾಡ್ ಕ್ಯಾಮೆರಾ, ಮತ್ತು ಸ್ಮಾರ್ಟ್ AI ಫೀಚರ್‌ಗಳಿಂದ ಗಮನ ಸೆಳೆಯುತ್ತಿದೆ. ದೀರ್ಘಕಾಲ ಬಾಳಿಕೆ ಬರುವ ಬ್ಯಾಟರಿ ಮತ್ತು ಅತ್ಯಾಧುನಿಕ ಪ್ರೊಸೆಸರ್ ಹೊಂದಿರುವ ಈ ಫೋನ್, ಪ್ರೀಮಿಯಂ ವಿಭಾಗದಲ್ಲಿ ಹೊಸ ಮಾನದಂಡವನ್ನು ಸ್ಥಾಪಿಸುತ್ತಿದೆ.
Read Full Story

01:50 PM (IST) Jun 12

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೂ ತಮಿಳುನಾಡಿನ 'ಸಿಎಂ'ಗಳಿಗೂ ಇರುವ 'ಸೀಕ್ರೆಟ್' ಕನೆಕ್ಷನ್ ಏನು?

ಈಗ ವಿಜಯ್ ಅವರು ಕೂಡ ಅಧಿಕಾರ ಸ್ವೀಕರಿಸಿದ ಕೇವಲ ಒಂದು ತಿಂಗಳ ಅಂತರದಲ್ಲಿ ಕೊಲ್ಲೂರಿಗೆ ಧಾವಿಸುತ್ತಿರುವುದು 'ಇವರು ಕೂಡ ಜಯಲಲಿತಾ ಮತ್ತು ಎಂಜಿಆರ್ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆಯೇ' ಎಂಬ ಚರ್ಚೆಗೆ ನಾಂದಿ ಹಾಡಿದೆ. ಏನು ಈ ಸೀಕ್ರೆಟ್..?!

Read Full Story

12:27 PM (IST) Jun 12

ತಂದೆಯ ಹಾದಿಯಲ್ಲಿ ಮಗ! ಭಾರತ ಅಂಡರ್-19 ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅನ್ವಯ್ ದ್ರಾವಿಡ್ ಎಂಟ್ರಿ!

ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಅಂಡರ್-19 ಕ್ರಿಕೆಟ್ ತಂಡಕ್ಕೆ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಜುಲೈ 04ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ ಏಕದಿನ ಹಾಗೂ ಮಲ್ಟಿ ಡೇ ಪಂದ್ಯಗಳು ನಡೆಯಲಿದ್ದು, ಯಶ್‌ಬರ್ಧನ್ ಸಿಂಗ್ ಚೌಹಾಣ್ ತಂಡದ ನಾಯಕತ್ವ ವಹಿಸಲಿದ್ದಾರೆ.
Read Full Story

12:21 PM (IST) Jun 12

US Israel Iran War - ಒಮಾನ್ ಕಡಲ ಹಡಗಲ್ಲಿದ್ದ 3 ಭಾರತೀಯರ ಬಲಿ! ಅಮೆರಿಕದ ದಾಳಿ ಖಂಡಿಸಿದ ಭಾರತ

ಒಮಾನ್ ಬಳಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದು, ಮತ್ತೊಂದು ಭಾರತೀಯರಿದ್ದ ಹಡಗಿನ ಮೇಲೂ ದಾಳಿ ನಡೆದಿದೆ. ಈ ದಾಳಿಗಳನ್ನು ಖಂಡಿಸಿರುವ ಭಾರತ, ಅಮೆರಿಕಕ್ಕೆ ದಾಳಿ ನಿಲ್ಲಿಸುವಂತೆ ಆಗ್ರಹಿಸಿದೆ. ಈ ನಡುವೆ, ಅಮೆರಿಕ-ಇರಾನ್ ನಡುವಿನ ದಾಳಿ-ಪ್ರತಿದಾಳಿ ತೀವ್ರಗೊಂಡಿದೆ.

Read Full Story

11:41 AM (IST) Jun 12

ರಣವೀರ್ ಸಿಂಗ್ ಟಾರ್ಗೆಟ್ ಆಗಿರೋದಕ್ಕೆ 'ಅವರಲ್ಲಿರೋ' ಪಾಕಿಸ್ತಾನ ಪ್ರೇಮವೇ ಕಾರಣ; ಕಂಗನಾ ರಣಾವತ್

"ರಣವೀರ್ ಸಿಂಗ್ ಹಠಾತ್ ಆಗಿ ಚಿತ್ರರಂಗದಲ್ಲಿ ಯಾಕೆ ಟಾರ್ಗೆಟ್ ಆಗುತ್ತಿದ್ದಾರೆ?" ಎಂಬ ಪ್ರಶ್ನೆಗೆ ಮೊದಲು ಕಂಗನಾ, "ಅದನ್ನು ನೀವು ಅವರನ್ನೇ ಕೇಳಬೇಕು, ನನಗೇನು ಗೊತ್ತು?" ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಬಳಿಕ ಉತ್ತರ ಕೊಟ್ಟರು!

Read Full Story

11:41 AM (IST) Jun 12

NITI Aayog Meeting - ಇದೇ ಮೊದಲ ಬಾರಿಗೆ ಎಲ್ಲಾ 28 ಮುಖ್ಯಮಂತ್ರಿಗಳು ನೀತಿ ಆಯೋಗ ಸಭೆಗೆ ಹಾಜರ್!

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಇದೇ ಮೊದಲ ಬಾರಿಗೆ ದೇಶದ ಎಲ್ಲಾ 28 ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿ.. 'ವಿಕಸಿತ ಭಾರತ 2047' ವಿಷಯದಡಿ ನಡೆದ ಈ ಸಭೆಯು, ಹಿಂದಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಹೊಸ ಬಲ ನೀಡಿದೆ.

Read Full Story

11:20 AM (IST) Jun 12

ಮನು ಭಾಕರ್ ಕೋಚ್, ಭಾರತದ ದಿಗ್ಗಜ ಶೂಟರ್ ಜಸ್ಪಲ್ ರಾಣಾ ನಿಧನ!

ಭಾರತದ ಖ್ಯಾತ ಶೂಟಿಂಗ್ ಕೋಚ್ ಮತ್ತು ಮನು ಭಾಕರ್ ಅವರ ಗುರು ಜಸ್ಪಾಲ್ ರಾಣಾ (49) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮ್ಯೂನಿಚ್‌ನಿಂದ ಹಿಂದಿರುಗುವಾಗ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಅವರ ಮಾರ್ಗದರ್ಶನದಲ್ಲಿ ಭಾರತದ ಯುವ ಶೂಟರ್‌ಗಳು ಹಲವು ಪದಕಗಳನ್ನು ಗೆದ್ದಿದ್ದರು.
Read Full Story

10:42 AM (IST) Jun 12

ಗೋಲ್ಡನ್ ಚಾರಿಯಟ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ - ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಕೂದಲೆಳೆ ಅಂತರದಲ್ಲಿ ಪಾರು!

RSS Chief Mohan Bhagwat: ಉತ್ತರ ಪ್ರದೇಶದ ಕಾನ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಗೋಲ್ಡನ್ ಚಾರಿಯಟ್ ಎಕ್ಸ್ ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಇದೇ ರೈಲಿನಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದರು ಸುರಕ್ಷಿತ.

Read Full Story

09:41 AM (IST) Jun 12

2 ಇಲಾಖೆಗಳ ವಿರುದ್ಧ 19 ವರ್ಷಗಳ ಹೋರಾಟ, ಬೆಂಗಳೂರಿನ ಆಟೋ ಚಾಲಕನಿಗೆ ₹25 ಲಕ್ಷ ಪರಿಹಾರ ನೀಡಲು ಸುಪ್ರೀಂ ಆದೇಶ

19 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮರದ ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಟೋ ಚಾಲಕನಿಗೆ ಸುಪ್ರೀಂ ಕೋರ್ಟ್ ನ್ಯಾಯ ಒದಗಿಸಿದೆ. ದೀರ್ಘಕಾಲದ ಕಾನೂನು ಹೋರಾಟದ ನಂತರ, ಚಾಲಕನಿಗೆ ಬಡ್ಡಿ ಸಮೇತ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.
Read Full Story

09:19 AM (IST) Jun 12

ಇಂದಿನಿಂದ 10ನೇ ಸೀಸನ್ ಮಹಿಳಾ ಟಿ20 ವಿಶ್ವಕಪ್; ಚಾಂಪಿಯನ್ ತಂಡಕ್ಕೆ ಸಿಗಲಿದೆ ಕೋಟಿ ಕೋಟಿ ಬಹುಮಾನ

ಶುಕ್ರವಾರದಿಂದ 10ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಆರಂಭವಾಗಲಿದ್ದು, ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ನಡೆಯಲಿದೆ. ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿರುವ ಭಾರತ ತಂಡ, ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ.
Read Full Story

08:40 AM (IST) Jun 12

FIFA World Cup - 23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಅದ್ಧೂರಿ ಸ್ವಾಗತ

23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಮೆಕ್ಸಿಕೊ ಸಿಟಿಯ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಗಾಯಕಿ ಶಕೀರಾ ಅವರ ಪ್ರದರ್ಶನ ಮತ್ತು ಆಕರ್ಷಕ ಲೈಟ್ ಶೋ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು. ಈ ಬಾರಿ ಮೂರು ದೇಶಗಳು ಆತಿಥ್ಯ ವಹಿಸುತ್ತಿದ್ದು, ಕೆನಡಾ ಮತ್ತು ಅಮೆರಿಕದಲ್ಲೂ ಪ್ರತ್ಯೇಕ ಉದ್ಘಾಟನಾ ಸಮಾರಂಭಗಳು ನಡೆಯಲಿವೆ.
Read Full Story

08:29 AM (IST) Jun 12

ಮಹಾರಾಜ ಟ್ರೋಫಿ 2026 ಟ್ರೋಫಿ ಅನಾವರಣ - ಐಪಿಎಲ್ ತಂಡಗಳ ಕಣ್ಣು ಈ ಲೀಗ್ ಮೇಲಿದೆ ಎಂದ ರಾಹುಲ್ ದ್ರಾವಿಡ್

ಕೆಎಸ್‌ಸಿಎ ಆಯೋಜಿಸುತ್ತಿರುವ 5ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಟ್ರೋಫಿಯನ್ನು ರಾಹುಲ್ ದ್ರಾವಿಡ್ ಅನಾವರಣಗೊಳಿಸಿದರು. ಜೂನ್ 20 ರಿಂದ ಆರಂಭವಾಗುವ ಈ ಲೀಗ್, ಐಪಿಎಲ್ ತಂಡಗಳು ಪ್ರತಿಭೆಗಳನ್ನು ಗುರುತಿಸಲು ಒಂದು ಪ್ರಮುಖ ವೇದಿಕೆಯಾಗಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.
Read Full Story

08:05 AM (IST) Jun 12

'ಇಂಧನ ಮಾರುಕಟ್ಟೆಯನ್ನೇ ಉಡೀಸ್ ಮಾಡ್ತೇವೆ' ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು

https://kannada.asianetnews.com/world-news/we-will-blow-up-the-energy-market-ran-warns-us-president-trump-rav/articleshow-gfs9smi


More Trending News