LIVE NOW
Published : Jun 12, 2026, 08:03 AM ISTUpdated : Jun 12, 2026, 12:26 PM IST

India News Live: ತಂದೆಯ ಹಾದಿಯಲ್ಲಿ ಮಗ! ಭಾರತ ಅಂಡರ್-19 ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅನ್ವಯ್ ದ್ರಾವಿಡ್ ಎಂಟ್ರಿ!

ಸಾರಾಂಶ

ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ (Delimitation) ಕುರಿತು ದಕ್ಷಿಣದ ರಾಜ್ಯಗಳ ತೀವ್ರ ವಿರೋಧದ ನಡುವೆಯೇ, ಕೇಂದ್ರ ಸರ್ಕಾರ ಹೊಸದೊಂದು ಸೂತ್ರದ ಸುಳಿವು ನೀಡಿದೆ. ಎಲ್ಲಾ 543 ಕ್ಷೇತ್ರಗಳನ್ನು ಬದಲಾಯಿಸುವ ಬದಲು, ಜನಸಂಖ್ಯೆ ಹೆಚ್ಚಿರುವ ಕೇವಲ 170 ನಿರ್ದಿಷ್ಟ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಲು ಪ್ರಧಾನಿ ಆರ್ಥಿಕ ಸಲಹಾ ಮಂಡಳಿ (EAC-PM) ಪ್ರಸ್ತಾಪಿಸಿದೆ. ಈ ಯೋಜನೆಯಡಿ 59 ಕ್ಷೇತ್ರಗಳನ್ನು 2 ಭಾಗವಾಗಿ ಮತ್ತು 111 ಕ್ಷೇತ್ರಗಳನ್ನು 3 ಭಾಗವಾಗಿ ವಿಭಜಿಸುವ ಮೂಲಕ ಒಟ್ಟು ಲೋಕಸಭಾ ಸ್ಥಾನಗಳನ್ನು 824ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ. ಡಾ. ಶಮಿಕಾ ರವಿ ಮತ್ತು ಮುದಿತ್ ಕಪೂರ್ ಅವರ ವರದಿ ಅನ್ವಯ, ಈ ಹೊಸ ಸೂತ್ರದಿಂದ ದೇಶದಲ್ಲಿ ಮತದಾನ ಪ್ರಮಾಣ ಶೇ. 0.3 ರಿಂದ ಶೇ. 2.3 ರಷ್ಟು ಹೆಚ್ಚಾಗಲಿದ್ದು, ಸುಮಾರು 90 ಲಕ್ಷದಿಂದ 2.3 ಕೋಟಿ ಹೆಚ್ಚುವರಿ ಮತದಾರರು ಚುನಾವಣೆಯಲ್ಲಿ ಪಾಲ್ಗೊಳ್ಳಲು ನೆರವಾಗಲಿದೆ. ಕರ್ನಾಟಕದ ಕ್ಷೇತ್ರ 28 ರಿಂದ 42ಕ್ಕೆ ಏರಿಕೆ ಆಗಲಿದೆ.

Anvay Dravid

12:27 PM (IST) Jun 12

ತಂದೆಯ ಹಾದಿಯಲ್ಲಿ ಮಗ! ಭಾರತ ಅಂಡರ್-19 ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟರ್ ಆಗಿ ಅನ್ವಯ್ ದ್ರಾವಿಡ್ ಎಂಟ್ರಿ!

ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್, ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರುವ ಭಾರತ ಅಂಡರ್-19 ಕ್ರಿಕೆಟ್ ತಂಡಕ್ಕೆ ವಿಕೆಟ್ ಕೀಪರ್ ಆಗಿ ಆಯ್ಕೆಯಾಗಿದ್ದಾರೆ. ಜುಲೈ 04ರಿಂದ ಆರಂಭವಾಗಲಿರುವ ಈ ಪ್ರವಾಸದಲ್ಲಿ ಏಕದಿನ ಹಾಗೂ ಮಲ್ಟಿ ಡೇ ಪಂದ್ಯಗಳು ನಡೆಯಲಿದ್ದು, ಯಶ್‌ಬರ್ಧನ್ ಸಿಂಗ್ ಚೌಹಾಣ್ ತಂಡದ ನಾಯಕತ್ವ ವಹಿಸಲಿದ್ದಾರೆ.
Read Full Story

12:21 PM (IST) Jun 12

US Israel Iran War - ಒಮಾನ್ ಕಡಲ ಹಡಗಲ್ಲಿದ್ದ 3 ಭಾರತೀಯರ ಬಲಿ! ಅಮೆರಿಕದ ದಾಳಿ ಖಂಡಿಸಿದ ಭಾರತ

ಒಮಾನ್ ಬಳಿ ಅಮೆರಿಕ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿದ್ದು, ಮತ್ತೊಂದು ಭಾರತೀಯರಿದ್ದ ಹಡಗಿನ ಮೇಲೂ ದಾಳಿ ನಡೆದಿದೆ. ಈ ದಾಳಿಗಳನ್ನು ಖಂಡಿಸಿರುವ ಭಾರತ, ಅಮೆರಿಕಕ್ಕೆ ದಾಳಿ ನಿಲ್ಲಿಸುವಂತೆ ಆಗ್ರಹಿಸಿದೆ. ಈ ನಡುವೆ, ಅಮೆರಿಕ-ಇರಾನ್ ನಡುವಿನ ದಾಳಿ-ಪ್ರತಿದಾಳಿ ತೀವ್ರಗೊಂಡಿದೆ.

Read Full Story

11:41 AM (IST) Jun 12

ರಣವೀರ್ ಸಿಂಗ್ ಟಾರ್ಗೆಟ್ ಆಗಿರೋದಕ್ಕೆ 'ಅವರಲ್ಲಿರೋ' ಪಾಕಿಸ್ತಾನ ಪ್ರೇಮವೇ ಕಾರಣ; ಕಂಗನಾ ರಣಾವತ್

"ರಣವೀರ್ ಸಿಂಗ್ ಹಠಾತ್ ಆಗಿ ಚಿತ್ರರಂಗದಲ್ಲಿ ಯಾಕೆ ಟಾರ್ಗೆಟ್ ಆಗುತ್ತಿದ್ದಾರೆ?" ಎಂಬ ಪ್ರಶ್ನೆಗೆ ಮೊದಲು ಕಂಗನಾ, "ಅದನ್ನು ನೀವು ಅವರನ್ನೇ ಕೇಳಬೇಕು, ನನಗೇನು ಗೊತ್ತು?" ಎಂದು ಜಾರಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಬಳಿಕ ಉತ್ತರ ಕೊಟ್ಟರು!

Read Full Story

11:41 AM (IST) Jun 12

NITI Aayog Meeting - ಇದೇ ಮೊದಲ ಬಾರಿಗೆ ಎಲ್ಲಾ 28 ಮುಖ್ಯಮಂತ್ರಿಗಳು ನೀತಿ ಆಯೋಗ ಸಭೆಗೆ ಹಾಜರ್!

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಇದೇ ಮೊದಲ ಬಾರಿಗೆ ದೇಶದ ಎಲ್ಲಾ 28 ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿ.. 'ವಿಕಸಿತ ಭಾರತ 2047' ವಿಷಯದಡಿ ನಡೆದ ಈ ಸಭೆಯು, ಹಿಂದಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ಸಹಕಾರಿ ಒಕ್ಕೂಟ ವ್ಯವಸ್ಥೆಗೆ ಹೊಸ ಬಲ ನೀಡಿದೆ.

Read Full Story

11:20 AM (IST) Jun 12

ಮನು ಭಾಕರ್ ಕೋಚ್, ಭಾರತದ ದಿಗ್ಗಜ ಶೂಟರ್ ಜಸ್ಪಲ್ ರಾಣಾ ನಿಧನ!

ಭಾರತದ ಖ್ಯಾತ ಶೂಟಿಂಗ್ ಕೋಚ್ ಮತ್ತು ಮನು ಭಾಕರ್ ಅವರ ಗುರು ಜಸ್ಪಾಲ್ ರಾಣಾ (49) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮ್ಯೂನಿಚ್‌ನಿಂದ ಹಿಂದಿರುಗುವಾಗ ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಅವರ ಮಾರ್ಗದರ್ಶನದಲ್ಲಿ ಭಾರತದ ಯುವ ಶೂಟರ್‌ಗಳು ಹಲವು ಪದಕಗಳನ್ನು ಗೆದ್ದಿದ್ದರು.
Read Full Story

10:42 AM (IST) Jun 12

ಗೋಲ್ಡನ್ ಚಾರಿಯಟ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ - ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಕೂದಲೆಳೆ ಅಂತರದಲ್ಲಿ ಪಾರು!

RSS Chief Mohan Bhagwat: ಉತ್ತರ ಪ್ರದೇಶದ ಕಾನ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದ ವೇಳೆ ಗೋಲ್ಡನ್ ಚಾರಿಯಟ್ ಎಕ್ಸ್ ಪ್ರೆಸ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದ್ದು, ಇದೇ ರೈಲಿನಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಪ್ರಯಾಣಿಸುತ್ತಿದ್ದರು ಸುರಕ್ಷಿತ.

Read Full Story

09:41 AM (IST) Jun 12

2 ಇಲಾಖೆಗಳ ವಿರುದ್ಧ 19 ವರ್ಷಗಳ ಹೋರಾಟ, ಬೆಂಗಳೂರಿನ ಆಟೋ ಚಾಲಕನಿಗೆ ₹25 ಲಕ್ಷ ಪರಿಹಾರ ನೀಡಲು ಸುಪ್ರೀಂ ಆದೇಶ

19 ವರ್ಷಗಳ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಮರದ ಕೊಂಬೆ ಬಿದ್ದು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಆಟೋ ಚಾಲಕನಿಗೆ ಸುಪ್ರೀಂ ಕೋರ್ಟ್ ನ್ಯಾಯ ಒದಗಿಸಿದೆ. ದೀರ್ಘಕಾಲದ ಕಾನೂನು ಹೋರಾಟದ ನಂತರ, ಚಾಲಕನಿಗೆ ಬಡ್ಡಿ ಸಮೇತ 25 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ.
Read Full Story

09:19 AM (IST) Jun 12

ಇಂದಿನಿಂದ 10ನೇ ಸೀಸನ್ ಮಹಿಳಾ ಟಿ20 ವಿಶ್ವಕಪ್; ಚಾಂಪಿಯನ್ ತಂಡಕ್ಕೆ ಸಿಗಲಿದೆ ಕೋಟಿ ಕೋಟಿ ಬಹುಮಾನ

ಶುಕ್ರವಾರದಿಂದ 10ನೇ ಆವೃತ್ತಿಯ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ ಆರಂಭವಾಗಲಿದ್ದು, ಇಂಗ್ಲೆಂಡ್‌ ಹಾಗೂ ವೇಲ್ಸ್‌ನಲ್ಲಿ ನಡೆಯಲಿದೆ. ಚೊಚ್ಚಲ ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿರುವ ಭಾರತ ತಂಡ, ತನ್ನ ಮೊದಲ ಪಂದ್ಯದಲ್ಲಿ ಬದ್ಧವೈರಿ ಪಾಕಿಸ್ತಾನವನ್ನು ಎದುರಿಸಲಿದೆ.
Read Full Story

08:40 AM (IST) Jun 12

FIFA World Cup - 23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಅದ್ಧೂರಿ ಸ್ವಾಗತ

23ನೇ ಆವೃತ್ತಿಯ ಫಿಫಾ ವಿಶ್ವಕಪ್‌ಗೆ ಮೆಕ್ಸಿಕೊ ಸಿಟಿಯ ಅಜ್ಟೆಕಾ ಕ್ರೀಡಾಂಗಣದಲ್ಲಿ ಅದ್ಧೂರಿ ಚಾಲನೆ ದೊರೆತಿದೆ. ಗಾಯಕಿ ಶಕೀರಾ ಅವರ ಪ್ರದರ್ಶನ ಮತ್ತು ಆಕರ್ಷಕ ಲೈಟ್ ಶೋ ಉದ್ಘಾಟನಾ ಸಮಾರಂಭದ ಪ್ರಮುಖ ಆಕರ್ಷಣೆಯಾಗಿತ್ತು. ಈ ಬಾರಿ ಮೂರು ದೇಶಗಳು ಆತಿಥ್ಯ ವಹಿಸುತ್ತಿದ್ದು, ಕೆನಡಾ ಮತ್ತು ಅಮೆರಿಕದಲ್ಲೂ ಪ್ರತ್ಯೇಕ ಉದ್ಘಾಟನಾ ಸಮಾರಂಭಗಳು ನಡೆಯಲಿವೆ.
Read Full Story

08:29 AM (IST) Jun 12

ಮಹಾರಾಜ ಟ್ರೋಫಿ 2026 ಟ್ರೋಫಿ ಅನಾವರಣ - ಐಪಿಎಲ್ ತಂಡಗಳ ಕಣ್ಣು ಈ ಲೀಗ್ ಮೇಲಿದೆ ಎಂದ ರಾಹುಲ್ ದ್ರಾವಿಡ್

ಕೆಎಸ್‌ಸಿಎ ಆಯೋಜಿಸುತ್ತಿರುವ 5ನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಲೀಗ್‌ನ ಟ್ರೋಫಿಯನ್ನು ರಾಹುಲ್ ದ್ರಾವಿಡ್ ಅನಾವರಣಗೊಳಿಸಿದರು. ಜೂನ್ 20 ರಿಂದ ಆರಂಭವಾಗುವ ಈ ಲೀಗ್, ಐಪಿಎಲ್ ತಂಡಗಳು ಪ್ರತಿಭೆಗಳನ್ನು ಗುರುತಿಸಲು ಒಂದು ಪ್ರಮುಖ ವೇದಿಕೆಯಾಗಿದೆ ಎಂದು ದ್ರಾವಿಡ್ ಅಭಿಪ್ರಾಯಪಟ್ಟರು.
Read Full Story

08:05 AM (IST) Jun 12

'ಇಂಧನ ಮಾರುಕಟ್ಟೆಯನ್ನೇ ಉಡೀಸ್ ಮಾಡ್ತೇವೆ' ಟ್ರಂಪ್ ಬೆದರಿಕೆಗೆ ಇರಾನ್ ತಿರುಗೇಟು

https://kannada.asianetnews.com/world-news/we-will-blow-up-the-energy-market-ran-warns-us-president-trump-rav/articleshow-gfs9smi


More Trending News