ದುಬೈ: ತಾಂತ್ರಿಕ ದೋಷದ ಕಾರಣ ನಡುರಸ್ತೆಯಲ್ಲಿ ನಿಂತಿದ್ದ ಟ್ರಕ್ ಒಂದು ಮಿನಿಬಸ್ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ 7 ಭಾರತೀಯ ಕಾರ್ಮಿಕರು ಸೇರಿ 8 ಜನರು ಸಾವನ್ನಪ್ಪಿದ್ದಾರೆ ಎಂದು ದುಬೈ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಲ್ಲಿರುವ ಭಾರತೀಯ ದೂತಾವಾಸ ಎಕ್ಸ್ನಲ್ಲಿ ಸಂತಾಪ ಸೂಚಕ ಪೋಸ್ಟ್ ಮಾಡಿದ್ದು, ‘ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ ಹಾಗೂ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತೇವೆ’ ಎಂದಿದೆ. ಅಲ್ಲಿನ ಸಂಚಾರ ಪೊಲೀಸ್ ವಿಭಾಗದ ನಿರ್ದೇಶಕ ಮಾತನಾಡಿ, ‘ಬಸ್ ಚಾಲಕ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ವಿಫಲವಾಗಿದ್ದರಿಂದ ಈ ಅನಾಹುತ ಸಂಭವಿಸಿದೆ’ ಎಂದು ಹೇಳಿದ್ದಾರೆ.

08:52 AM (IST) Jun 09
ಮದುವೆಗೂ ಮೊದಲೇ ನಡೆಸುವ ಲೈಂಗಿಕ ಸಂಪರ್ಕ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಹಲವರಿಗೆ ಅಚ್ಚರಿ ತಂದಿದೆ. ಇದು ಜೆನ್ಝಿ ಯುಗ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಏನಿದು ತೀರ್ಪು?
08:23 AM (IST) Jun 09
07:17 AM (IST) Jun 09
ಸರ್ಕಾರವು ಉಜ್ವಲ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್ಗಳ ವಾರ್ಷಿಕ ಮಿತಿಯನ್ನು 9 ರಿಂದ 4 ಕ್ಕೆ ಇಳಿಸಿದೆ. ಫಲಾನುಭವಿಗಳು ಸರಾಸರಿ 4 ಸಿಲಿಂಡರ್ಗಳನ್ನು ಬಳಸುತ್ತಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಿದೆ.