Published : Jun 09, 2026, 06:48 AM ISTUpdated : Jun 09, 2026, 10:58 PM IST

India Latest News Live: 1 ಲೀಟರ್ ಎಥನಾಲ್‌ ತಯಾರಿಸಲು ಎಷ್ಟು ಕಬ್ಬು ಬೇಕು? - ದೇಶಕ್ಕೆ ಆಸರೆಯಾದ ಪರ್ಯಾಯ ಇಂಧನದ ಕಂಪ್ಲೀಟ್ ಪ್ರೊಸೆಸ್!

ಸಾರಾಂಶ

ದುಬೈ: ತಾಂತ್ರಿಕ ದೋಷದ ಕಾರಣ ನಡುರಸ್ತೆಯಲ್ಲಿ ನಿಂತಿದ್ದ ಟ್ರಕ್‌ ಒಂದು ಮಿನಿಬಸ್‌ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ 7 ಭಾರತೀಯ ಕಾರ್ಮಿಕರು ಸೇರಿ 8 ಜನರು ಸಾವನ್ನಪ್ಪಿದ್ದಾರೆ ಎಂದು ದುಬೈ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಲ್ಲಿರುವ ಭಾರತೀಯ ದೂತಾವಾಸ ಎಕ್ಸ್‌ನಲ್ಲಿ ಸಂತಾಪ ಸೂಚಕ ಪೋಸ್ಟ್‌ ಮಾಡಿದ್ದು, ‘ಸ್ಥಳೀಯ ಅಧಿಕಾರಿಗಳೊಂದಿಗೆ ಸೇರಿ ಕೆಲಸ ಮಾಡುತ್ತಿದ್ದೇವೆ ಹಾಗೂ ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುತ್ತೇವೆ’ ಎಂದಿದೆ. ಅಲ್ಲಿನ ಸಂಚಾರ ಪೊಲೀಸ್‌ ವಿಭಾಗದ ನಿರ್ದೇಶಕ ಮಾತನಾಡಿ, ‘ಬಸ್‌ ಚಾಲಕ ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳಲು ವಿಫಲವಾಗಿದ್ದರಿಂದ ಈ ಅನಾಹುತ ಸಂಭವಿಸಿದೆ’ ಎಂದು ಹೇಳಿದ್ದಾರೆ.

ethanol production process

10:58 PM (IST) Jun 09

1 ಲೀಟರ್ ಎಥನಾಲ್‌ ತಯಾರಿಸಲು ಎಷ್ಟು ಕಬ್ಬು ಬೇಕು? - ದೇಶಕ್ಕೆ ಆಸರೆಯಾದ ಪರ್ಯಾಯ ಇಂಧನದ ಕಂಪ್ಲೀಟ್ ಪ್ರೊಸೆಸ್!

ತೈಲ ಬಿಕ್ಕಟ್ಟಿನ ನಡುವೆ, ಭಾರತದಲ್ಲಿ ಪೆಟ್ರೋಲ್‌ಗೆ ಪರ್ಯಾಯವಾಗಿ ಎಥನಾಲ್ ಇಂಧನ ಮುನ್ನೆಲೆಗೆ ಬಂದಿದೆ. ಕಬ್ಬಿನಿಂದ ಎಥನಾಲ್ ಅನ್ನು ಹೇಗೆ ತಯಾರಿಸಲಾಗುತ್ತದೆ, 1 ಲೀಟರ್ ಉತ್ಪಾದನೆಗೆ ಎಷ್ಟು ಕಬ್ಬು ಬೇಕಾಗುತ್ತದೆ ಮತ್ತು ಅದರ ಉತ್ಪಾದನಾ ಹಂತಗಳ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

Read Full Story

09:52 PM (IST) Jun 09

ಪ್ರಿಯಾಂಕಾ ಚೋಪ್ರಾ ಕಣ್ಣಾಲಿಗಳು ಇಂದಿಗೂ ಒದ್ದೆಯಾಗೋದು ಆ ಒಬ್ಬರಿಗಾಗಿ ಮಾತ್ರ.. ನಿಕ್ ಅಲ್ಲ, ಇನ್ಯಾರು ಗೊತ್ತಾ?

"ಯಾರಿಗೂ ಹೆದರಬೇಡ, ನೀನು ಇರುವ ಜಾಗದಲ್ಲಿ ನೀನೇ ಅತಿ ಹೆಚ್ಚು ಧೈರ್ಯಶಾಲಿ (Fierce) ಆಗಿರು ಎಂದು ಅಪ್ಪ ಹೇಳುತ್ತಿದ್ದರು. ಗಂಡಸರು ಮಹತ್ವಾಕಾಂಕ್ಷಿಗಳಾಗಿದ್ದರೆ ಅವರನ್ನು 'ಬಾಸ್' ಎನ್ನುತ್ತಾರೆ, ಆದರೆ ಹೆಣ್ಣುಮಕ್ಕಳು ಹಾಗಿದ್ದರೆ ಸಮಾಜ ಬೇರೆಯದೇ ದೃಷ್ಟಿಯಲ್ಲಿ ನೋಡುತ್ತದೆ.

Read Full Story

09:26 PM (IST) Jun 09

ಇನ್ಮುಂದೆ ರೈಲ್ವೆ ಬುಕಿಂಗ್​ ವ್ಯವಸ್ಥೆಯಲ್ಲಿ ಭಾರಿ ಬದಲಾವಣೆ - ಏನಿದು ಹೊಸ ಸಿಸ್ಟಮ್​- ಡಿಟೇಲ್ಸ್​ ಇಲ್ಲಿದೆ

ಭಾರತೀಯ ರೈಲ್ವೆಯು ತನ್ನ 40 ವರ್ಷ ಹಳೆಯ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯನ್ನು (PRS) ಆಗಸ್ಟ್‌ನಿಂದ ನವೀಕರಿಸಲು ಸಿದ್ಧತೆ ನಡೆಸಿದೆ. ಈ ಹೊಸ ವ್ಯವಸ್ಥೆಯು RailOne ಆ್ಯಪ್‌ನೊಂದಿಗೆ ಸಂಯೋಜನೆಗೊಂಡು, ವೇಟಿಂಗ್ ಲಿಸ್ಟ್ ಟಿಕೆಟ್‌ಗಳಿಗೆ ಮಿತಿ ವಿಧಿಸುವಂತಹ ನಿಯಮಗಳೊಂದಿಗೆ ವೇಗದ ಮತ್ತು ಸುಗಮ ಟಿಕೆಟ್ ಬುಕ್ಕಿಂಗ್ ಅನುಭವವನ್ನು ನೀಡಲಿದೆ.
Read Full Story

09:07 PM (IST) Jun 09

ಉಪ ಮುಖ್ಯಮಂತ್ರಿಯನ್ನು ಟಿವಿಯಲ್ಲಿ ನೋಡುತ್ತಿರುವಾಗ್ಲೇ ಮೆದುಳು ಆಪರೇಷನ್​ ಮಾಡಿದ ವೈದ್ಯರು

ಆಂಧ್ರಪ್ರದೇಶದ ಗುಂಟೂರಿನಲ್ಲಿ, ವೈದ್ಯರು ಮಹಿಳೆಯೊಬ್ಬರಿಗೆ ಎಚ್ಚರವಿದ್ದಾಗಲೇ ಮೆದುಳಿನ ಗಡ್ಡೆಯನ್ನು ಯಶಸ್ವಿಯಾಗಿ ತೆಗೆದಿದ್ದಾರೆ. 'ಅವೇಕ್ ಬ್ರೈನ್ ಸರ್ಜರಿ' ಎಂದು ಕರೆಯಲ್ಪಡುವ ಈ ಶಸ್ತ್ರಚಿಕಿತ್ಸೆಯ ಸಮಯದಲ್ಲಿ, ರೋಗಿಯು ಆತಂಕ ಕಡಿಮೆ ಮಾಡಲು ಮತ್ತು ಸಹಕರಿಸಲು ಪವನ್ ಕಲ್ಯಾಣ್ ಅವರ 'OG' ಚಿತ್ರವನ್ನು ವೀಕ್ಷಿಸುತ್ತಿದ್ದರು.
Read Full Story

08:42 PM (IST) Jun 09

ಮಾರುತಿ ಸುಜುಕಿಗೆ ಹೆಚ್ಚಿದ ಟೆನ್ಷನ್ - ಮಾರುಕಟ್ಟೆಯಲ್ಲಿ ಧೂಳೆಬ್ಬಿಸ್ತಿದ್ದ ಈ ಜನಪ್ರಿಯ ಕಾರುಗಳ ಸೇಲ್ಸ್ ಭಾರಿ ಕುಸಿತ

ದೇಶದ ನಂಬರ್ 1 ಕಾರು ತಯಾರಕ ಮಾರುತಿ ಸುಜುಕಿ, ಮೇ ತಿಂಗಳ ಮಾರಾಟದಲ್ಲಿ ಕೆಲವು ಕಾರುಗಳ ಕಳಪೆ ಪ್ರದರ್ಶನದಿಂದ ಆತಂಕಕ್ಕೆ ಒಳಗಾಗಿದೆ. ಎಸ್‌-ಪ್ರೆಸ್ಸೋ, ಸೆಲೆರಿಯೊ, ಜಿಮ್ನಿ ಮತ್ತು ಇನ್ವಿಕ್ಟೋನಂತಹ ಪ್ರೀಮಿಯಂ ಮಾದರಿಗಳು ಅತ್ಯಂತ ಕಡಿಮೆ ಮಾರಾಟವಾಗಿದ್ದು, ಇದು ಕಂಪನಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
Read Full Story

08:36 PM (IST) Jun 09

ಬಿರಿಯಾನಿ ಮತ್ತು ಪಲಾವ್ ಒಂದೇ ಅಲ್ಲ.. ಎರಡರ ನಡುವಿನ ಅಸಲಿ ವ್ಯತ್ಯಾಸವೇನು ಗೊತ್ತಾ?

ಬಿರಿಯಾನಿ ಮತ್ತು ಪಲಾವ್ ಹೆಸರು ಕೇಳಿದ ತಕ್ಷಣ ಬಹಳ ಮಂದಿ ಇವೆರಡೂ ಒಂದೇ ಬಗೆಯ ಖಾದ್ಯ ಅಂದುಕೊಳ್ಳುತ್ತಾರೆ. ಆದರೆ, ವಾಸ್ತವದಲ್ಲಿ ಬಿರಿಯಾನಿ ಮತ್ತು ಪಲಾವ್ ತಯಾರಿಸುವ ವಿಧಾನದಿಂದ ಹಿಡಿದು ರುಚಿಯವರೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಆ ವ್ಯತ್ಯಾಸಗಳೇನು ಗೊತ್ತಾ?

Read Full Story

08:19 PM (IST) Jun 09

ಇತಿಹಾಸದಲ್ಲೇ ಮೊದಲ ಬಾರಿಗೆ ನ್ಯೂಕ್ಲಿಯರ್‌ ಬಾಂಬ್‌ ನಿಯೋಜನೆ ಮಾಡಿದ ಭಾರತ - SIPRI ಸ್ಫೋಟಕ ವರದಿ

ಸಿಪ್ರಿ ಇಯರ್‌ಬುಕ್ 2026 ರ ವರದಿಯ ಪ್ರಕಾರ, ಭಾರತವು ಇತಿಹಾಸದಲ್ಲೇ ಮೊದಲ ಬಾರಿಗೆ ತನ್ನ ಪರಮಾಣು ಸಿಡಿತಲೆಗಳನ್ನು ಕಾರ್ಯಾಚರಣೆಗೆ ನಿಯೋಜಿಸಿದೆ. ಈ ವರದಿಯು ಭಾರತ, ಚೀನಾ ಮತ್ತು ಪಾಕಿಸ್ತಾನದ ಪರಮಾಣು ಸಾಮರ್ಥ್ಯಗಳನ್ನು ವಿಶ್ಲೇಷಣೆ ಮಾಡಿದೆ.

Read Full Story

08:11 PM (IST) Jun 09

ನಿನ್ನನ್ನು ನೋಡಿ ಹೆಮ್ಮೆ ಆಯ್ತು ಬ್ರದರ್.. - ರಾಮ್ ಚರಣ್ 'ಪೆದ್ದಿ' ಬಗ್ಗೆ ಅಲ್ಲು ಅರ್ಜುನ್ ಪೋಸ್ಟ್‌ನಲ್ಲೇನಿದೆ?

ರಾಮ್ ಚರಣ್ ನಟನೆಯ 'ಪೆದ್ದಿ' ಸಿನಿಮಾ ನೋಡಿ ಅಲ್ಲು ಅರ್ಜುನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚರಣ್ ನಟನೆ ನೋಡಿ ನನಗೆ ಹೆಮ್ಮೆಯಾಗುತ್ತಿದೆ ಎಂದಿದ್ದಾರೆ. ಈ ಬಗ್ಗೆ ಅವರು ಹಂಚಿಕೊಂಡ ಸೋಶಿಯಲ್ ಮೀಡಿಯಾ ಪೋಸ್ಟ್ ವೈರಲ್ ಆಗಿದೆ.

Read Full Story

07:18 PM (IST) Jun 09

ಪಾನಿಪುರಿ ತಿನ್ನೋಕೆ ಈ ಪುಟ್ಟ ಬಾಲಕಿಯ ಐಡಿಯಾ ನೋಡಿ - ಸೋಷಿಯಲ್ ಮೀಡಿಯಾದಲ್ಲಿ ನಗುವಿನ ಅಲೆ

ಸೋಷಿಯಲ್ ಮೀಡಿಯಾದಲ್ಲಿ ಪುಟ್ಟ ಬಾಲಕಿಯೊಬ್ಬಳು ಪಾನಿಪುರಿ ತಿನ್ನುವ ವಿಡಿಯೋ ಸಖತ್ ವೈರಲ್ ಆಗಿದೆ. ಸಿಹಿ ಮತ್ತು ಖಾರ ಎರಡನ್ನೂ ಒಂದೇ ಸಮಯದಲ್ಲಿ ಸವಿಯಲು ಆಕೆ ಕಂಡುಕೊಂಡ ಉಪಾಯ ನೆಟ್ಟಿಗರನ್ನು ನಗುವಿನ ಕಡಲಲ್ಲಿ ತೇಲಿಸಿದೆ.

Read Full Story

06:55 PM (IST) Jun 09

ಏರ್‌ಟೆಲ್‌ ಗ್ರಾಹಕರಿಗೆ ಮತ್ತೊಂದು ಭರ್ಜರಿ ನ್ಯೂಸ್‌, ಅತ್ಯಂತ ಕಡಿಮೆ ಬೆಲೆಗೆ ಸಿಗಲಿದೆ ಬಂಪರ್ ಆಫರ್!

ಏರ್‌ಟೆಲ್ ತನ್ನ 41 ಕೋಟಿಗೂ ಅಧಿಕ ಗ್ರಾಹಕರಿಗಾಗಿ ₹899 ರ ಹೊಸ ದೀರ್ಘಾವಧಿಯ ಪ್ಲಾನ್ ಪರಿಚಯಿಸಿದೆ. ಈ ಯೋಜನೆಯು 84 ದಿನಗಳ ವ್ಯಾಲಿಡಿಟಿಯೊಂದಿಗೆ ಅನ್‌ಲಿಮಿಟೆಡ್ ಕಾಲಿಂಗ್, ಪ್ರತಿದಿನ 1.5GB ಹೈ-ಸ್ಪೀಡ್ ಡೇಟಾ ಮತ್ತು 100 ಉಚಿತ SMS ಸೌಲಭ್ಯಗಳನ್ನು ಒದಗಿಸುತ್ತದೆ.
Read Full Story

06:45 PM (IST) Jun 09

ಭಾರತ-ಇಂಗ್ಲೆಂಡ್ ಟಿ20 ಸರಣಿ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ..! ಇದು ಬ್ರಿಟೀಷರ ನಾಡಲ್ಲಿ ಭಾರತೀಯರ ಹವಾ

India vs England T20 Series 2026: Match Timings Revised: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ವೇಳಾಪಟ್ಟಿಯಲ್ಲಿ ಇದೀಗ ಮಹತ್ವದ ಬದಲಾವಣೆಗಳಾಗಿದೆ. ಭಾರತೀಯ ಕ್ರಿಕೆಟ್ ಫ್ಯಾನ್ಸ್‌ಗೋಸ್ಕರ ಪಂದ್ಯ ಆಯೋಜನೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

 

Read Full Story

06:42 PM (IST) Jun 09

ಲಕ್ಷಗಟ್ಟಲೆ ಗಿಫ್ಟ್ ಕೊಟ್ಟ ಮಾರನೇ ದಿನವೇ ಬ್ರೇಕಪ್ - ಪ್ರಿಯತಮೆಯನ್ನು ಕೋರ್ಟ್‌ಗೆಳೆಯಲು ಯುವಕನ ಪ್ಲಾನ್!

ಹುಟ್ಟುಹಬ್ಬಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯದ ಗೇಮಿಂಗ್ ಪಿಸಿ ಗಿಫ್ಟ್ ಆಗಿ ಸಿಕ್ಕ ಮಾರನೇ ದಿನವೇ ಯುವತಿ ಬ್ರೇಕಪ್ ಮಾಡಿಕೊಂಡಿದ್ದಾಳೆ. ಗಿಫ್ಟ್‌ಗಾಗಿಯೇ ಆಕೆ ತಿಂಗಳುಗಟ್ಟಲೆ ಪ್ರೀತಿಯ ನಾಟಕವಾಡಿದ್ದಳು ಎಂದು ಯುವಕ ಆರೋಪಿಸಿದ್ದಾನೆ.

Read Full Story

06:22 PM (IST) Jun 09

ನೋವೇ ನನ್ನ ಗುರುತು ಅಂದ್ಕೊಂಡಿದ್ದೆ - ಇಲ್ಲಿದೆ ರಾಮ್ ಚರಣ್ ಸಹೋದರಿ ಶ್ರೀಜಾ ಕಣ್ಣೀರ ಕಥೆ!

ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರಿ ಮತ್ತು ರಾಮ್ ಚರಣ್ ಅವರ ಸಹೋದರಿ ಶ್ರೀಜಾ ಕೋನಿದೆಲಾ ಅವರು ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಯಾವುದೇ ಕೌಟುಂಬಿಕ ಚರ್ಚೆ ಅಥವಾ ವಿವಾದದಿಂದಲ್ಲ.

Read Full Story

06:17 PM (IST) Jun 09

ಒಂದೇ ಒಂದು ತಪ್ಪಾದ್ರೂ ಪ್ರಾಣಕ್ಕೆ ಕುತ್ತು, ಫಿಫಾ ವಿಶ್ವಕಪ್‌ ಬಗ್ಗೆ ಪ್ಲೇಯರ್ಸ್‌ಗೆ ಎಚ್ಚರಿಸಿದ ಸ್ವಿಜರ್ಲೆಂಡ್‌ ಟೀಮ್‌!

ಫಿಫಾ ವಿಶ್ವಕಪ್ 2026ರ ಸಿದ್ಧತೆಯಲ್ಲಿರುವ ಸ್ವಿಟ್ಜರ್ಲೆಂಡ್ ಫುಟ್‌ಬಾಲ್ ತಂಡಕ್ಕೆ ಅನಿರೀಕ್ಷಿತ ಸಂಕಷ್ಟ ಎದುರಾಗಿದೆ. ಅಮೆರಿಕಾದ ಸ್ಯಾನ್ ಡಿಯಾಗೋದಲ್ಲಿ ತರಬೇತಿ ಪಡೆಯುತ್ತಿರುವ ತಂಡದ ಶಿಬಿರವು ವಿಷಕಾರಿ ರಾಟಲ್‌ ಹಾವುಗಳ ಆವಾಸಸ್ಥಾನವಾಗಿದ್ದು, ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ. 

Read Full Story

05:44 PM (IST) Jun 09

ಜಾಗತಿಕ ಐಟಿ ವಲಯದ ಹೊಸ ಮೈಲಿಗಲ್ಲು - ಗೂಗಲ್ ಕ್ಲೌಡ್ ಜೊತೆ ಸೇರಿ ಎಐ ಇನ್ನೋವೇಶನ್ ಝೋನ್ ಆರಂಭಿಸಿದ ಎಚ್‌ಸಿಎಲ್‌ ಟೆಕ್!

ಜಾಗತಿಕ ಐಟಿ ದೈತ್ಯ ಎಚ್‌ಸಿಎಲ್ ಟೆಕ್, ಗೂಗಲ್ ಕ್ಲೌಡ್ ಜೊತೆಗೂಡಿ ಕ್ಯಾಲಿಫೋರ್ನಿಯಾದಲ್ಲಿ 'ಎಐ ಇನ್ನೋವೇಶನ್ ಝೋನ್' ಅನ್ನು ಸ್ಥಾಪಿಸಿದೆ. ಈ ಕೇಂದ್ರವು ಗೂಗಲ್‌ನ ಜೆಮಿನೈ ಎಂಟರ್‌ಪ್ರೈಸ್ ತಂತ್ರಜ್ಞಾನವನ್ನು ಬಳಸಿ, ಜಾಗತಿಕ ಉದ್ಯಮಗಳಿಗೆ ಕೃತಕ ಬುದ್ಧಿಮತ್ತೆ ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ.
Read Full Story

05:12 PM (IST) Jun 09

ಫ್ಲೈಟ್‌ ವಿಳಂಬದಿಂದ ಹಲಸಿನ ಸಸಿ ನಾಶ, ರೈತನಿಗೆ ಭಾರೀ ಪರಿಹಾರ ನೀಡುವಂತೆ ಏರ್‌ಏಷ್ಯಾಗೆ ಸೂಚಿಸಿದ ಕೋರ್ಟ್‌

ವಿಮಾನ ವಿಳಂಬದಿಂದಾಗಿ ಕನೆಕ್ಟಿಂಗ್ ಫ್ಲೈಟ್ ತಪ್ಪಿ, ಇಂಡೋನೇಷ್ಯಾದಿಂದ ತರುತ್ತಿದ್ದ ಅಪರೂಪದ ಹಲಸಿನ ಸಸಿ ನಾಶವಾದ ಕಾರಣ ರೈತರೊಬ್ಬರು ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ, ಕೇರಳದ ಗ್ರಾಹಕ ನ್ಯಾಯಾಲಯವು ಏರ್‌ಏಷ್ಯಾ ಸಂಸ್ಥೆಗೆ ಸೇವಾ ನ್ಯೂನತೆಗಾಗಿ ₹90,750 ಪರಿಹಾರ ನೀಡುವಂತೆ ಆದೇಶಿಸಿದೆ.
Read Full Story

04:41 PM (IST) Jun 09

ಫಿಫಾ 2026 ಅಧಿಕೃತ ಆಲ್ಬಂನಲ್ಲಿ ನೋರಾ ಫತೇಹಿ - 'ಸಿರ್ ಸಿರ್'ನಲ್ಲಿ ಏನಿದೆ ವಿಶೇಷ?

ಬಾಲಿವುಡ್‌ನ ಖ್ಯಾತ ಡ್ಯಾನ್ಸರ್ ಮತ್ತು ನಟಿ ನೋರಾ ಫತೇಹಿ, ಫಿಫಾ ವಿಶ್ವಕಪ್ 2026ಕ್ಕೆ ತಮ್ಮ ಹೊಸ ಹಾಡನ್ನು ರಿಲೀಸ್ ಮಾಡಿದ್ದಾರೆ. 'ಸಿರ್ ಸಿರ್' ಹೆಸರಿನ ಈ ಹಾಡು ಈಗ ಫುಟ್ಬಾಲ್ ಪ್ರೇಮಿಗಳ ಗಮನ ಸೆಳೆಯುತ್ತಿದೆ.

Read Full Story

04:37 PM (IST) Jun 09

ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ವೈಭವ್ ಸೂರ್ಯವಂಶಿ! 15 ವರ್ಷದ ಆಟಗಾರನಿಗೆ ಒಂದು ಮ್ಯಾಚ್‌ಗೆ ಸಿಗೋ ಸಂಬಳ ಎಷ್ಟು?

ಬೆಂಗಳೂರು: 2026ರ ಐಪಿಎಲ್ ಟೂರ್ನಿಯಲ್ಲಿ ವಿಸ್ಪೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ, ಇದೀಗ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಭಾರತ ತಂಡ ಕೂಡಿಕೊಂಡ ಮೇಲೆ ವೈಭವ್ ಸೂರ್ಯವಂಶಿಗೆ ಒಂದು ಮ್ಯಾಚ್‌ಗೆ ಸಿಗುವ ಸಂಬಳವೆಷ್ಟು ನೋಡೋಣ ಬನ್ನಿ.

 

Read Full Story

03:44 PM (IST) Jun 09

ಐರ್ಲೆಂಡ್, ಇಂಗ್ಲೆಂಡ್ ಎದುರಿನ ಟಿ20 ಸರಣಿಯಿಂದ ಕೊನೆಯ ಕ್ಷಣದಲ್ಲಿ ಸ್ಟಾರ್ ಕ್ರಿಕೆಟಿಗ ಔಟ್; ಕನ್ನಡಿಗನಿಗೆ ಜಾಕ್‌ಪಾಟ್

ಬೆಂಗಳೂರು: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಯಿಂದ ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಸಿರಾಜ್ ಹೊರಬಿದ್ದಿದ್ದಾರೆ. ಅವರ ಸ್ಥಾನಕ್ಕೆ ಕನ್ನಡಿಗ ಎಂಟ್ರಿಕೊಟ್ಟಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

03:31 PM (IST) Jun 09

ಅಮ್ಮನ ಚೆನ್ನಾಗಿ ನೋಡಿಕೋ, ಚೆನ್ನಾಗಿ ಓದು, ಸ್ಟೀಲ್ ಪ್ಲಾಂಟ್ ದುರಂತ ಗಾಯಾಳುವಿನ ಕೊನೆಯ ಮಾತು

ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು, ನೀನು ಚೆನ್ನಾಗಿ ಓದಬೇಕು. ಇದು ವಿಶಿಖಾಪಟ್ಟಣಂನ ಸ್ಟೀಲ್ ಘಟಕದಲ್ಲಿ ನಡೆದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡ ಕಾರ್ಮಿಕ ಸಾವಿಗೂ ಮುನ್ನ ಆಡಿದ ಕೊನೆಯ ಮಾತು. ಇದೀಗ ಎಲ್ಲರ ಕಣ್ಣಾಲಿ ತೇವಗೊಳಿಸಿದೆ.

Read Full Story

02:49 PM (IST) Jun 09

ಭಾರತದ ಮಾವಿನ ಹಣ್ಣು ಆಮದಿಗೆ ನಿಷೇಧ ಹೇರಿದ ನೇಪಾಳ, ಅತೀ ರುಚಿಕರ ಹಣ್ಣು ಬ್ಯಾನ್ ಆಗಿದ್ದೇಕೆ?

ಭಾರತದದ ಮಾವಿನ ಹಣ್ಣಿಗೆ ನೇಪಾಳ ನಿಷೇಧ ಹೇರಿದೆ. ಭಾರತದಿಂದ ಯಾವುದೇ ಮಾವಿನ ಹಣ್ಣ ಆಮದು ಮಾಡಿಕೊಳ್ಳದಿರಲು ನಿರ್ಧರಿಸಿದೆ. ನೇಪಾಳ ಈ ನಿರ್ಧಾರ ಮಾಡಿದ್ದೇಕೆ? ಭಾರತದ ರೈತರಿಗೆ ಎದುರಾಯ್ಕು ಸಂಕಷ್ಟ

Read Full Story

01:25 PM (IST) Jun 09

ಪೀರಿಯಡ್ಸ್‌ ವೇಳೆ ಆಟ ಇದ್ರೆ ಮಹಿಳಾ ಕ್ರಿಕೆಟರ್ಸ್‌ಗೆ ಕಷ್ಟ, ಅಂದು Smriti Mandhana ರನ್ನು ಹೊರಗೆ ಹಾಕಿದ್ದ ಅಂಪೈರ್

ಟೆಸ್ಟ್ ಪಂದ್ಯದ ವೇಳೆ ತನಗೆ ಪೀರಿಯಡ್ಸ್ ಆದ ಬಗ್ಗೆ ಸ್ಮೃತಿ ಮಂಧಾನ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಈ ಅನುಭವ, ಮಹಿಳಾ ಕ್ರೀಡಾಪಟುಗಳು ಎದುರಿಸುವ ಸವಾಲುಗಳ ಬಗ್ಗೆ ಗಂಭೀರ ಚರ್ಚೆಯನ್ನೇ ಹುಟ್ಟುಹಾಕಿದೆ. ಸ್ಮೃತಿ ಮಂಧಾನ ಇತ್ತೀಚೆಗೆ ತಮ್ಮ ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡಿದ್ದಾರೆ.

 

Read Full Story

01:25 PM (IST) Jun 09

ನೀಟ್ ಪ್ರಶ್ನೆ ಪತ್ರಿಕೆ ವಾಯುಪಡೆಯ ಮಿ-17ನಲ್ಲಿ ರವಾನೆ, ಪೇಪರ್ ತಯಾರಿಸಿದವರಿಗೆ ಜೂನ್21ರವರೆಗೆ ಗೃಹಬಂಧನ!

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ನಂತರ, ಜೂನ್ 21ರ ಮರುಪರೀಕ್ಷೆಗೆ ಕೇಂದ್ರ ಸರ್ಕಾರ ಅಭೂತಪೂರ್ವ ಭದ್ರತೆ ಒದಗಿಸಿದೆ. ಪ್ರಶ್ನೆಪತ್ರಿಕೆ ಸಾಗಣೆಗೆ ವಾಯುಪಡೆಯ ಮಿ-17 ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದ್ದು, ಪತ್ರಿಕೆ ಸಿದ್ಧಪಡಿಸುವ ತಂಡವನ್ನು ಪರೀಕ್ಷೆ ಮುಗಿಯುವವರೆಗೂ ರಹಸ್ಯ ಸ್ಥಳದಲ್ಲಿ ಇರಿಸಲಾಗಿದೆ.
Read Full Story

01:16 PM (IST) Jun 09

ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲೂ ಕಿಂಗ್ ಕೊಹ್ಲಿಯೇ ನಂ.1; ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಹಿಂದಿಕ್ಕಿದ ವಿರಾಟ್..!

ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಮತ್ತೆ ನಂ.1 ಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಕ್ರೀಡೆ, ಸಿನಿಮಾ, ಸಂಗೀತ ಹಾಗೂ ಮನರಂಜನಾ ಪ್ರಪಂಚದ 25 ಪ್ರಮುಖ ಸೆಲಿಬ್ರಿಟಿಗಳನ್ನು ಒಳಗೊಂಡಿದ್ದು, ಯಾರೆಲ್ಲಾ ಯಾವ ಸ್ಥಾನದಲ್ಲಿದ್ದಾರೆ ನೋಡೋಣ ಬನ್ನಿ.

Read Full Story

12:52 PM (IST) Jun 09

50 ರೂಪಾಯಿಗೆ 1 ಕೆಜಿ ಗೋಡಂಬಿ; ನಿಮಗೂ ಬೇಕಾದ್ರೆ ಈ ಹಳ್ಳಿಗೆ ಹೋಗಿ ಖರೀದಿಸಿ, ಯಾಕಿಷ್ಟು ಕಡಿಮೆ?

ದೇಶದ ಈ ಗ್ರಾಮದಲ್ಲಿ ಗೋಡಂಬಿಯನ್ನು ಕೆಜಿಗೆ ಕೇವಲ 50 ರೂಪಾಯಿಯಂತೆ ಮಾರಾಟ ಮಾಡಲಾಗುತ್ತದೆ. ಈ ಗ್ರಾಮದಲ್ಲಿ ಗೋಡಂಬಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆಯಾದರೂ, ಸಂಸ್ಕರಣಾ ಘಟಕ ಮತ್ತು ರಫ್ತು ಸೌಲಭ್ಯಗಳ ಕೊರತೆಯಿಂದಾಗಿ ರೈತರು ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗುತ್ತಿದ್ದಾರೆ.

Read Full Story

11:48 AM (IST) Jun 09

ಫುಟ್ಬಾಲ್ ವಿಶ್ವಕಪ್‌ ಭಾರೀ ಬಹುಮಾನ ಘೋಷಿಸಿದ FIFA; ಚಾಂಪಿಯನ್ ತಂಡಕ್ಕೆ ಸಿಗುವ ನಗದು ಮೊತ್ತ ಕೇಳಿದ್ರೆ ದಂಗಾಗ್ತೀರಾ!

ಜ್ಯೂರಿಚ್: ಫುಟ್ಬಾಲ್ ಇತಿಹಾಸದಲ್ಲೇ ಅತಿದೊಡ್ಡ ವಿಶ್ವಕಪ್‌ಗೆ ಫಿಫಾ ಭರ್ಜರಿ ಬಹುಮಾನದ ಮೊತ್ತವನ್ನು ಘೋಷಿಸಿದೆ. ಇನ್ನೇನು ಕೆಲವೇ ದಿನಗಳಲ್ಲಿ ಶುರುವಾಗಲಿರುವ ಈ ಫುಟ್ಬಾಲ್ ಹಬ್ಬದಲ್ಲಿ ಸಿಗುವ ಬಹುಮಾನದ ಮೊತ್ತವಾದ್ರೂ ಎಷ್ಟು ಅಂತ ನೋಡೋಣ ಬನ್ನಿ.

 

Read Full Story

11:14 AM (IST) Jun 09

FIFA World Cup 2026 - ಮಾಂತ್ರಿಕ ಫುಟ್ಬಾಲಿಗರ ಮ್ಯಾಜಿಕ್‌ಗೆ ಕಾಯುತ್ತಿದೆ ಫಿಫಾ..!

2026ರ ಫಿಫಾ ವಿಶ್ವಕಪ್‌ನಲ್ಲಿ ನಿರೀಕ್ಷೆ ಮೂಡಿಸಿರುವ 10 ಪ್ರಮುಖ ಆಟಗಾರರ ಪಟ್ಟಿಯನ್ನು ಈ ಲೇಖನವು ಒದಗಿಸುತ್ತದೆ. ಲಿಯೋನಲ್ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಅವರಂತಹ ಅನುಭವಿಗಳಿಂದ ಹಿಡಿದು, ಕೀಲಿಯನ್ ಎಂಬಾಪೆ ಮತ್ತು ಲ್ಯಾಮಿನೆ ಯಮಲ್ ಅವರಂತಹ ಯುವ ಸೂಪರ್‌ಸ್ಟಾರ್‌ಗಳವರೆಗೆ, ಈ ಆಟಗಾರರು ಫುಟ್ಬಾಲ್ ಜಗತ್ತನ್ನು ಆಳುವ ಸಾಮರ್ಥ್ಯ ಹೊಂದಿದ್ದಾರೆ.
Read Full Story

11:02 AM (IST) Jun 09

ಭಾರತ ಎ ತಂಡದ ಪರ ನಿರಾಸೆ ಮೂಡಿಸಿದ ವೈಭವ್ ಸೂರ್ಯವಂಶಿ, ಕೇವಲ 14 ರನ್‌ಗೆ ಔಟ್

ಅಂಡರ್ 19, ಐಪಿಎಲ್ ಟೂರ್ನಿಗಳಲ್ಲಿ ಅಬ್ಬರಿಸಿದ ವೈಭವ್ ಸೂರ್ಯವಂಶಿ ಇದೀಗ ಭಾರತ ಎ ತಂಡದ ಪರ ಮೊದಲ ಪಂದ್ಯದಲ್ಲಿ ಅಲ್ಪ ಮೊತ್ತಕ್ಕೆ ಔಟ್ ಆಗಿದ್ದಾರೆ. ಇತ್ತ ಆರಂಭದಲ್ಲೇ ವಿಕೆಟ್ ಕಳೆದುಕೊಂಡ ಭಾರತ ತಂಡ ಕೂಡ ಸಂಕಷ್ಟಕ್ಕೆ ಸಿಲುಕಿದೆ.

Read Full Story

10:09 AM (IST) Jun 09

ಸಂಕಷ್ಟದಲ್ಲಿ ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ, ತಂಡದ ಆಯ್ಕೆಯಲ್ಲಿ ಗೋಲ್‌ಮಾಲ್ ಆರೋಪ

ಟೀಂ ಇಂಡಿಯಾ ಆಯ್ಕೆ ಸಮಿತಿ ಮುಖ್ಯಸ್ಥ ಅಗರ್ಕರ್ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ. ಐರ್ಲೆಂಡ್, ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಆಯ್ಕೆಯಲ್ಲಿ ಅಚ್ಚರಿ ನೀಡಿದ್ದ ಸಮಿತಿಗೆ ಇದೀಗ ಸಂಕಷ್ಟ ಎದುರಾಗಿದೆ. ಒಬ್ಬ ಆಟಗಾರನ ಆಯ್ಕೆ ಸಮಸ್ಯೆಯಾಗಿದೆ.

Read Full Story

10:02 AM (IST) Jun 09

₹100 Is Just a Number - ರೂಪಾಯಿ ಮೌಲ್ಯ 100 ಡಾಲರ್‌ಗೆ ಕುಸಿದರೂ ಆತಂಕವಿಲ್ಲ!

ಭಾರತದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳು ಯುವ ಜನಸಂಖ್ಯೆ ಮತ್ತು ತಂತ್ರಜ್ಞಾನ. ಹೀಗಿರುವಾಗ, ರುಪಾಯಿ ಬೆಲೆ ಕುಸಿತದ ಆಘಾತವನ್ನು ಕೃತಕವಾಗಿ ನಿಯಂತ್ರಿಸಲು ಯತ್ನಿಸುವ ಬದಲು, ಯುವ ಜನತೆ ಮತ್ತು ಮುಂದುವರಿದ ತಂತ್ರಜ್ಞಾನವನ್ನು ಅವಲಂಬಿಸಿದರೆ, ನಮ್ಮ ಆರ್ಥಿಕತೆಯು ಜಾಗತಿಕ ಆಘಾತಗಳನ್ನು ನಿಭಾಯಿಸುವಷ್ಟು ಪ್ರಬಲ

Read Full Story

08:52 AM (IST) Jun 09

ಕಾಲ ಬದಲಾಗಿದೆ, ಮದುವೆಗೂ ಮೊದಲೇ ಲೈಂಗಿಕ ಸಂಬಂಧ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮದುವೆಗೂ ಮೊದಲೇ ನಡೆಸುವ ಲೈಂಗಿಕ ಸಂಪರ್ಕ ಕುರಿತು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪು ಹಲವರಿಗೆ ಅಚ್ಚರಿ ತಂದಿದೆ. ಇದು ಜೆನ್‌ಝಿ ಯುಗ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಏನಿದು ತೀರ್ಪು?

Read Full Story

08:23 AM (IST) Jun 09

'ನಿಮ್ಮಿಂದ ದೆಹಲಿ ಕಸಿದುಕೊಳ್ತೇವೆ' ಎಂದಿದ್ದ ಶಾಕ್ ಕೊಟ್ಟ ಶಾ! ಟಿಎಂಸಿ 20 ಸಂಸದರು ಬಿಜೆಪಿಗೆ ಬೆಂಬಲ!

ಲೋಕಸಭೆಯಲ್ಲಿ ಟಿಎಂಸಿಯ 20 ಸಂಸದರು ಎನ್‌ಡಿಎಗೆ ಬೆಂಬಲ ಘೋಷಿಸಿದ್ದು, ಪ್ರತ್ಯೇಕ ಬಣವಾಗಿ ಗುರುತಿಸಿಕೊಂಡಿದ್ದಾರೆ. ಇದೇ ವೇಳೆ, ಹಿರಿಯ ನಾಯಕ ಸುಖೇಂದು ಶೇಖರ್‌ ರಾಯ್‌ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಮಮತಾ ಬ್ಯಾನರ್ಜಿ ಅವರಿಗೆ ಇದು ಡಬಲ್ ಶಾಕ್ ನೀಡಿದೆ.
Read Full Story

07:17 AM (IST) Jun 09

ಸಬ್ಸಿಡಿ LPG ಸಿಲಿಂಡರ್‌ಗೆ ಕತ್ತರಿ ಪ್ರಯೋಗ; ಮಿತಿ ಇಳಿಕೆ ಮಾಡಿದ ಸ್ಪಷ್ಟನೆ ನೀಡಿದ ಸರ್ಕಾರ

ಸರ್ಕಾರವು ಉಜ್ವಲ ಯೋಜನೆಯಡಿ ನೀಡಲಾಗುತ್ತಿದ್ದ ಸಬ್ಸಿಡಿ ಸಹಿತ ಎಲ್ಪಿಜಿ ಸಿಲಿಂಡರ್‌ಗಳ ವಾರ್ಷಿಕ ಮಿತಿಯನ್ನು 9 ರಿಂದ 4 ಕ್ಕೆ ಇಳಿಸಿದೆ. ಫಲಾನುಭವಿಗಳು ಸರಾಸರಿ 4 ಸಿಲಿಂಡರ್‌ಗಳನ್ನು ಬಳಸುತ್ತಿರುವುದೇ ಈ ನಿರ್ಧಾರಕ್ಕೆ ಕಾರಣ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 

Read Full Story

More Trending News