LIVE NOW
Published : Jul 09, 2026, 06:58 AM ISTUpdated : Jul 09, 2026, 09:39 AM IST

India Latest News Live: ಆಪ್ತ ಸ್ನೇಹಿತನ ಮೃತದೇಹ ಹೊತ್ತು ಕಣ್ಣೀರು ಇಟ್ಟ ರಶೀದ್ ಖಾನ್.. ಫೋಟೋಗಳು

ಸಾರಾಂಶ

ನವದೆಹಲಿ: ಹರ್ಯಾಣದಲ್ಲಿ ಸಂಚಾರಕ್ಕೆ ಸಿದ್ಧವಾಗಿರುವ ದೇಶದ ಮೊಟ್ಟ ಮೊದಲ ಹೈಡ್ರೋಜನ್‌ ಚಾಲಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಜು.17 ರಂದು ಚಾಲನೆ ನೀಡುವ ಸಾಧ್ಯತೆ ಇದೆ.

136 ಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ರೈಲು ಹರ್ಯಾಣದ ಜಿಂದ್‌ ಮತ್ತು ಸೋನಿಪತ್ ನಡುವೆ ಸಂಚರಿಸಲಿದೆ. 10 ಬೋಗಿ ಹೊಂದಿರುವ ರೈಲು 682 ಸೀಟು ಹೊಂದಿದೆ. ಗಂಟೆಗೆ ಗರಿಷ್ಠ 75-120 ಕಿ.ಮೀ ವೇಗದಲ್ಲಿ ಚಲಿಸುವ ರೈಲು ಗರಿಷ್ಠ 2600 ಜನರನ್ನು ಹೊತ್ತೊಯ್ಯಬಲ್ಲದಾಗಿದೆ. ರೈಲು ಹೈಡ್ರೋಜನ್‌ ಫ್ಯೂಯೆಲ್‌ ಸೆಲ್‌ಗಳನ್ನು ಹೊಂದಿದ್ದು, ಅದು ಹೈಡ್ರೋಜನ್‌ ಅನ್ನು ವಿದ್ಯುತ್‌ ಆಗಿ ಪರಿವರ್ತಿಸುತ್ತದೆ. ಈ ಪ್ರಕ್ರಿಯೆ ವೇಳೆ ಅದು ನೀರಾವಿಯನ್ನು ಮಾತ್ರವೇ ಹೊರಸೂಸುತ್ತದೆ. ಹೀಗಾಗಿ ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿದೆ.

09:39 AM (IST) Jul 09

ಆಪ್ತ ಸ್ನೇಹಿತನ ಮೃತದೇಹ ಹೊತ್ತು ಕಣ್ಣೀರು ಇಟ್ಟ ರಶೀದ್ ಖಾನ್.. ಫೋಟೋಗಳು

ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಪಾರ್ಥಿವ ಶರೀರ ಕಾಬೂಲ್‌ಗೆ ತಲುಪಿತು. ಕುಟುಂಬಸ್ಥರು ಮತ್ತು ಸಹ ಆಟಗಾರರು ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.

Read Full Story

08:17 AM (IST) Jul 09

US Iran Tension again - 'ಸ್ವಲ್ಪ ಸಮಯದ ಹಿಂದೆ ನನಗೆ ಕರೆ ಬಂತು..' ಇರಾನ್ ಮೇಲೆ ದಾಳಿ ಬೆನ್ನಲ್ಲೇ ಟ್ರಂಪ್ ಶಾಕಿಂಗ್ ಹೇಳಿಕೆ!

ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರ, ಅಮೆರಿಕವು ಇರಾನ್ ವಿರುದ್ಧ ಕ್ಷಿಪಣಿ ದಾಳಿಗಳನ್ನು ಆರಂಭಿಸಿದೆ. ಈ ಮಿಲಿಟರಿ ಕ್ರಮಗಳು ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದ್ದು, ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಮಾತಿನ ಸಮರಕ್ಕೂ ಕಾರಣವಾಗಿದೆ.
Read Full Story

07:37 AM (IST) Jul 09

Belagavi border dispute - ಕರ್ನಾಟಕದಲ್ಲಿನ ಮರಾಠಿ ಹೋರಾಟಗಾರರ ಪರ ಮಹಾರಾಷ್ಟ್ರ ಸಿಎಂ ಘೋಷಣೆ! ಸುಪ್ರೀಂಗೆ ಅರ್ಜಿ

ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಸುಪ್ರೀಂಕೋರ್ಟ್‌ನಲ್ಲಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ, ಕರ್ನಾಟಕದಲ್ಲಿನ ಮರಾಠಿ ಪರ ಹೋರಾಟಗಾರರಿಗೆ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾರೆ

Read Full Story

More Trending News