ನವದೆಹಲಿ: ಹರ್ಯಾಣದಲ್ಲಿ ಸಂಚಾರಕ್ಕೆ ಸಿದ್ಧವಾಗಿರುವ ದೇಶದ ಮೊಟ್ಟ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಜು.17 ರಂದು ಚಾಲನೆ ನೀಡುವ ಸಾಧ್ಯತೆ ಇದೆ.
136 ಕೋಟಿ ರು.ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ರೈಲು ಹರ್ಯಾಣದ ಜಿಂದ್ ಮತ್ತು ಸೋನಿಪತ್ ನಡುವೆ ಸಂಚರಿಸಲಿದೆ. 10 ಬೋಗಿ ಹೊಂದಿರುವ ರೈಲು 682 ಸೀಟು ಹೊಂದಿದೆ. ಗಂಟೆಗೆ ಗರಿಷ್ಠ 75-120 ಕಿ.ಮೀ ವೇಗದಲ್ಲಿ ಚಲಿಸುವ ರೈಲು ಗರಿಷ್ಠ 2600 ಜನರನ್ನು ಹೊತ್ತೊಯ್ಯಬಲ್ಲದಾಗಿದೆ. ರೈಲು ಹೈಡ್ರೋಜನ್ ಫ್ಯೂಯೆಲ್ ಸೆಲ್ಗಳನ್ನು ಹೊಂದಿದ್ದು, ಅದು ಹೈಡ್ರೋಜನ್ ಅನ್ನು ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಈ ಪ್ರಕ್ರಿಯೆ ವೇಳೆ ಅದು ನೀರಾವಿಯನ್ನು ಮಾತ್ರವೇ ಹೊರಸೂಸುತ್ತದೆ. ಹೀಗಾಗಿ ಇದು ಸಂಪೂರ್ಣ ಪರಿಸರ ಸ್ನೇಹಿಯಾಗಿದೆ.
11:46 PM (IST) Jul 09
ಚೀನಾದ ದಕ್ಷಿಣ ಭಾಗದಲ್ಲಿ ನೂರಾರು ಹಾವುಗಳು ಪ್ರವಾಹದ ನೀರಿನಲ್ಲಿ ಈಜುತ್ತಿರುವ ಒಂದು ಭಯಾನಕ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿ ಸೋಷಿಯಲ್ ಮೀಡಿಯಾ ಬಳಕೆದಾರರು ಬೆಚ್ಚಿಬಿದ್ದಿದ್ದಾರೆ.
09:41 PM (IST) Jul 09
ಪ್ರೇಕ್ಷಕರ ನೆಚ್ಚಿನ ನಟಿಯರಲ್ಲಿ ಸ್ವಾಸಿಕಾ ಕೂಡ ಒಬ್ಬರು. ಕಿರುತೆರೆಯಿಂದ ವೃತ್ತಿಜೀವನ ಆರಂಭಿಸಿ, ನಂತರ ಸಿನಿಮಾಗಳಲ್ಲಿ ಮಿಂಚಿದ ಸ್ವಾಸಿಕಾ, ಅತ್ಯುತ್ತಮ ನಟಿ ಎಂದು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ.
09:12 PM (IST) Jul 09
2025ರಲ್ಲಿ ತೆರೆಕಂಡಿದ್ದ ತೆಲುಗು ಸಿನಿಮಾ 'ಲಿಟಲ್ ಹಾರ್ಟ್ಸ್' ವರ್ಷದ ಅಚ್ಚರಿ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿತ್ತು. ಈ ಸಿನಿಮಾವನ್ನು ಬರೆದು ನಿರ್ದೇಶಿಸಿದ್ದವರು 27 ವರ್ಷದ ಯುವ ನಿರ್ದೇಶಕ ಸಾಯಿ ಮಾರ್ತಾಂಡ್.
07:11 PM (IST) Jul 09
ನಾಂದೇಡ್ಗ್ರಾಮ್ ಎಕ್ಸ್ಪ್ರೆಸ್ ರೈಲಿನಲ್ಲಿ ದಂಪತಿಯೊಬ್ಬರು ಹನಿಮೂನ್ಗಾಗಿ ಎಸಿ ಕೋಚ್ ಅನ್ನು ಹೂವು ಮತ್ತು ಬಲೂನ್ಗಳಿಂದ ಅಲಂಕರಿಸಿದ್ದರು. ಈ ವಿಡಿಯೋ ವೈರಲ್ ಆದ ನಂತರ, ಭಾರತೀಯ ರೈಲ್ವೆ ಇದನ್ನು ಭದ್ರತಾ ಲೋಪವೆಂದು ಪರಿಗಣಿಸಿ, ಸಂಬಂಧಪಟ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದೆ.
06:22 PM (IST) Jul 09
The Vvaan: ಕಿಯಾರಾ ಅಡ್ವಾಣಿ ಪತಿ ನಟ ಸಿದ್ಧಾರ್ಥ್ ಮಲ್ಹೋತ್ರಾ ಅಭಿನಯದ 'ದಿ ವಾನ್' ಚಿತ್ರಕ್ಕೆ ಹೊಸ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಿದೆ. ಸಿನಿಮಾವು 2026ರ ಸೆಪ್ಟೆಂಬರ್ 25 ರಂದು ತೆರೆಗೆ ಬರಲಿದೆ.
05:07 PM (IST) Jul 09
Saif Ali Khan: ಸೈಫ್ ಅಲಿ ಖಾನ್ ಪ್ರಕಾರ, 'ಧುರಂಧರ್' ಸಿನಿಮಾ ಬಾಲಿವುಡ್ ಮೇಲೆ ದೊಡ್ಡ ಪರಿಣಾಮ ಬೀರಿದೆ. ನಟರು ಮತ್ತು ನಿರ್ದೇಶಕರು ಸಿನಿಮಾ ಬಗ್ಗೆ ಯೋಚನೆ ಮಾಡುವ ರೀತಿಯನ್ನೇ ಇದು ಬದಲಾಯಿಸಿದೆ.
04:43 PM (IST) Jul 09
ಟ್ರೈನ್ ಪ್ರಯಾಣದ ವೇಳೆ ಊಟ-ತಿಂಡಿಗಾಗಿ ಇನ್ಮುಂದೆ ಸ್ಟೇಷನ್ಗಳನ್ನೇ ನೆಚ್ಚಿಕೊಳ್ಳಬೇಕಿಲ್ಲ. ಸ್ವಿಗ್ಗಿ ಆ್ಯಪ್ನಲ್ಲಿಯೇ ನಿಮಗೆ ಇಷ್ಟವಾದ ಊಟವನ್ನು ಆರ್ಡರ್ ಮಾಡಬಹುದು. ಸ್ವಿಗ್ಗಿಯ 'ಫುಡ್ ಆನ್ ಟ್ರೈನ್' ಫೀಚರ್ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.
03:44 PM (IST) Jul 09
BSNL ತನ್ನ ಮಹತ್ವಾಕಾಂಕ್ಷೆಯ ಸ್ಯಾಟಲೈಟ್ ಫೋನ್ ಲಾಂಚ್ ಮಾಡಿದೆ. ಬೆಲೆ ಬರೋಬ್ಬರಿ 1.34 ಲಕ್ಷ ರೂಪಾಯಿ ಆಗಿದೆ. ಹಾಗಂತ ಈ ಫೋನ್ ಎಲ್ಲರೂ ಖರೀದಿಸುವಂತಿಲ್ಲ. ಒಂದು ವೇಳೆ ಖರೀದಿಸಿದ್ರೂ ಅದಕ್ಕೆ ಅದರದ್ದೇ ಆದ ನೀತಿ, ನಿಯಮಗಳು ಇವೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ.
03:41 PM (IST) Jul 09
03:37 PM (IST) Jul 09
ರೈಲ್ವೆ ಸಚಿವಾಲಯವು ದೇಶಾದ್ಯಂತ ರೈಲ್ವೆ ಕಾರ್ಯಾಚರಣೆಯ ಸುರಕ್ಷತೆ ಮತ್ತು ದಕ್ಷತೆಯನ್ನು ಹೆಚ್ಚಿಸಲು 4,098 ತಾಂತ್ರಿಕ ಹುದ್ದೆಗಳ ನೇಮಕಾತಿಗೆ ಅಧಿಕೃತ ಅನುಮೋದನೆ ನೀಡಿದೆ. ಜೂನಿಯರ್ ಇಂಜಿನಿಯರ್ಗಳು ಮತ್ತು ತಂತ್ರಜ್ಞರನ್ನು ಒಳಗೊಂಡ ಈ ನೇಮಕಾತಿ ಪ್ರಕ್ರಿಯೆಯ ಅಧಿಸೂಚನೆಯು ಜುಲೈ 21 ರಿಂದ ಪ್ರಾರಂಭವಾಗಲಿದೆ.
02:46 PM (IST) Jul 09
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ನಾಲ್ಕನೇ ಹಾಗೂ ಮಹತ್ವದ ಪಂದ್ಯಕ್ಕೆ ಬ್ರಿಸ್ಟೊಲ್ನ ಕೌಂಟಿ ಗ್ರೌಂಡ್ ಆತಿಥ್ಯ ವಹಿಸಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತ, ಇಂದಿನ ಪಂದ್ಯಕ್ಕೆ ಮಹತ್ವದ ಬದಲಾವಣೆಯೊಂದಿಗೆ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
02:44 PM (IST) Jul 09
Yash Toxic Movie: ನಟ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದ್ದೇ ತಡ, ಇಡೀ ಸೋಶಿಯಲ್ ಮೀಡಿಯಾಕ್ಕೆ ಬೆಂಕಿ ಬಿದ್ದಿದೆ! ನಟಿ ಕಿಯಾರಾ ಅಡ್ವಾಣಿ, ಯಶ್ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಸಿದ್ದಾರ್ಥ್ ಮಲ್ಹೋತ್ರ ಏನಂದ್ರು?
01:51 PM (IST) Jul 09
ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಪ್ರಶ್ನೆ ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸತತ ಸೋಲುಗಳ ಬಗ್ಗೆ ಪ್ರಶ್ನೆ ಮಾಡಿರುವ ಅವರು, ಸೋಲು ಎಲ್ಲಿಂದ ಆಯಿತು ಅನ್ನೋದನ್ನು ವಿವರಿಸಿದ್ದಾರೆ. ಕುಂಬ್ಳೆ ಏನು ಹೇಳಿದರು ಅನ್ನೋದ್ರ ವಿವರ ಇಲ್ಲಿದೆ..
01:22 PM (IST) Jul 09
01:18 PM (IST) Jul 09
DRDO Ghatak UCAV: ಭಾರತ ತನ್ನ ವಾಯುಪಡೆಯ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಹಲವು ಮಹತ್ವದ ಯೋಜನೆಗಳಿಗೆ ಕೈಹಾಕಿದೆ. ಈಗ DRDO ಅತ್ಯಾಧುನಿಕ ಸ್ಟೆಲ್ತ್ ಡ್ರೋನ್ (UCAV) ಅಭಿವೃದ್ಧಿಗೆ ವೇಗ ನೀಡಿದೆ. ಪೈಲೆಟ್ ಬೇಕಿಲ್ಲ, ರಾಡಾರ್ ಕಣ್ಣಿಗೂ ಸಿಗೋಲ್ಲ, ಹೇಗಿದೆ ಗೊತ್ತಾ ಘಾತಕ್ ತಾಕತ್ತು?
01:16 PM (IST) Jul 09
12:58 PM (IST) Jul 09
'ಕಲರ್ಸ್' ಖ್ಯಾತಿಯ ನಟಿ ಸ್ವಾತಿ ರೆಡ್ಡಿ ಅವರು 'ಮಂತ್ ಆಫ್ ಮಧು' ಚಿತ್ರದ ನಿರ್ದೇಶಕ ಶ್ರೀಕಾಂತ್ ನಾಗೋಟಿ ಅವರೊಂದಿಗೆ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಪೈಲಟ್ ವಿಕಾಸ್ ವಾಸು ಅವರಿಂದ ಡಿವೋರ್ಸ್ ಪಡೆದಿದ್ದ ಸ್ವಾತಿ, ಇದೀಗ ತಮ್ಮದೇ ಸಿನಿಮಾ ನಿರ್ದೇಶಕರ ಕೈಹಿಡಿದಿದ್ದಾರೆ.
12:22 PM (IST) Jul 09
ಪ್ರಧಾನಿ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಅಲ್ಬನೀಸ್ ಅವರ ವಾರ್ಷಿಕ ಶೃಂಗಸಭೆ ಮುಕ್ತಾಯ. ಉಭಯ ದೇಶಗಳ ವ್ಯೂಹಾತ್ಮಕ ಪಾಲುದಾರಿಕೆ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ರಕ್ಷಣೆ, ಭದ್ರತೆ, ವ್ಯಾಪಾರ, ಇಂಧನ, ತಂತ್ರಜ್ಞಾನ, ಮುಕ್ತ ಇಂಡೋ-ಪೆಸಿಫಿಕ್ ವಲಯದ ಸಹಕಾರ ಈ ಸಭೆಯ ಪ್ರಮುಖ ಅಜೆಂಡಾಗಳಾಗಿದ್ದವು.
12:12 PM (IST) Jul 09
12:00 PM (IST) Jul 09
ಬೆಂಗಳೂರು: ಭಾರತದ ಅತ್ಯಂತ ಸಂಪತ್ಭರಿತ ಪ್ರದೇಶ ಯಾವುದು ಎಂದರೆ ಥಟ್ಟನೆ ನೆನಪಾಗುವುದು ನಮ್ಮ ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು, ವಾಣಿಜ್ಯ ನಗರಿ ಮುಂಬೈ ಹಾಗೆ ರಾಷ್ಟ್ರ ರಾಜಧಾನಿ ನವದೆಹಲಿ. ಆದರೆ ದೇಶದ ಅತ್ಯಂತ ಶ್ರೀಮಂತ ಜಿಲ್ಲೆ ಯಾವುದು ಗೊತ್ತಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
11:33 AM (IST) Jul 09
11:03 AM (IST) Jul 09
ಪ್ರಾಣಿಗಳು ಸೇಡು ತೀರಿಸಿಕೊಳ್ಳುತ್ವಾ? ಒಂಟಿ ಸಲಗವೊಂದು (Elephant attack) 14 ವರ್ಷದಲ್ಲಿ ಒಂದೇ ಕುಟುಂಬದ ಮೇಲೆ 2 ಬಾರಿ ದಾಳಿ ನಾಲ್ವರ ಬಲಿ ಪಡೆದಿದೆ. ಈ ಕುಟುಂಬದ ಮೇಲೆ ಅದೇನು ದ್ವೇಷ ಇತ್ತೋ ಗೊತ್ತಿಲ್ಲ. ಆನೆ ದಾಳಿಗೆ ಸಂಬಂಧಿಸಿದ ರೋಚಕ ಸ್ಟೋರಿ ಇಲ್ಲಿದೆ.
10:54 AM (IST) Jul 09
10:16 AM (IST) Jul 09
10:04 AM (IST) Jul 09
09:46 AM (IST) Jul 09
ಶೈಕ್ಷಣಿಕ ವರ್ಷ 2023-24 ಮತ್ತು 2025-26ರ ನಡುವೆ (2 ವರ್ಷದಲ್ಲಿ) ದೇಶದಲ್ಲಿ ಸರ್ಕಾರಿ ಶಾಲೆಗೆ ದಾಖಲಾಗುವ ವಿದ್ಯಾರ್ಥಿಗಳ ಸಂಖ್ಯೆ 86 ಲಕ್ಷದಷ್ಟು ಇಳಿಕೆಯಾಗಿದೆ. ಅತ್ತ ಇದೇ ಅವಧಿಯಲ್ಲಿ ಖಾಸಗಿ ಶಾಲೆಗಳಿಗೆ 88 ಮಕ್ಕಳು ಸೇರಿಕೊಂಡಿದ್ದಾರೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ.
09:39 AM (IST) Jul 09
ದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಪೂರ್ ಜುಲೈ 7ರಂದು ಕೊನೆಯುಸಿರೆಳೆದಿದ್ದರು. ವಿಧಿಯ ವೈಪರೀತ್ಯವೆಂದರೆ, ಅವರ ಜನ್ಮದಿನದಂದೇ ಪಾರ್ಥಿವ ಶರೀರ ಕಾಬೂಲ್ಗೆ ತಲುಪಿತು. ಕುಟುಂಬಸ್ಥರು ಮತ್ತು ಸಹ ಆಟಗಾರರು ಮೃತದೇಹವನ್ನು ಕಂಡು ಆಕ್ರಂದನ ಮುಗಿಲು ಮುಟ್ಟಿತು.
08:17 AM (IST) Jul 09
07:37 AM (IST) Jul 09
ಬೆಳಗಾವಿ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಸುಪ್ರೀಂಕೋರ್ಟ್ನಲ್ಲಿ ತ್ವರಿತ ವಿಚಾರಣೆಗೆ ಅರ್ಜಿ ಸಲ್ಲಿಸುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ, ಕರ್ನಾಟಕದಲ್ಲಿನ ಮರಾಠಿ ಪರ ಹೋರಾಟಗಾರರಿಗೆ ಕಾನೂನು ನೆರವು ನೀಡುವುದಾಗಿ ಘೋಷಿಸಿದ್ದಾರೆ