Published : Jun 07, 2026, 04:51 AM ISTUpdated : Jun 07, 2026, 10:58 PM IST

India Latest News Live: ಸೂರ್ಯನ ಮೇಲ್ಮೈನಲ್ಲಿ ಭೀಕರ ಸ್ಫೋಟ, ಸೋಮವಾರ ಭೂಮಿಗೆ ಅಪ್ಪಳಿಸಲಿದೆ ಪ್ರಬಲ ಸೌರ ಬಿರುಗಾಳಿ

ಸಾರಾಂಶ

ನವದೆಹಲಿ: ಇತ್ತೀಚೆಗಷ್ಟೇ ಆನ್‌ಲೈನ್‌ನಲ್ಲಿ ಸ್ಥಾಪನೆಗೊಂಡು ಭಾರೀ ಸದ್ದು ಮಾಡಿದ್ದ ಯುವ ನೇತಾರ ಅಭಿಜೀತ್‌ ದೀಪ್ಕೆ ನೇತೃತ್ವದ ಕಾಕ್ರೋಚ್‌ ಜನತಾ ಪಾರ್ಟಿ ಶನಿವಾರ ಮೊದಲ ಬಾರಿ ಬೀದಿಗಿಳಿದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದೆ. ನೀಟ್‌ ಹಾಗೂ ಇತರ ಪರೀಕ್ಷಾ ಅಕ್ರಮ ಖಂಡಿಸಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಆಗ್ರಹಿಸಿ ದೀಪ್ಕೆ ನೇತೃತ್ವದಲ್ಲಿ ಸಿಜೆಪಿ ಕಾರ್ಯಕರ್ತರು ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಿದರು. ಈ ವೇಳೆ ಲಡಾಖ್‌ ಹೋರಾಟಗಾರ ಸೋನಂ ವಾಂಗ್ಚುಕ್‌ ಸಾಥ್‌ ನೀಡಿದರು.

Solar explosion

10:58 PM (IST) Jun 07

ಸೂರ್ಯನ ಮೇಲ್ಮೈನಲ್ಲಿ ಭೀಕರ ಸ್ಫೋಟ, ಸೋಮವಾರ ಭೂಮಿಗೆ ಅಪ್ಪಳಿಸಲಿದೆ ಪ್ರಬಲ ಸೌರ ಬಿರುಗಾಳಿ

ನಾಸಾ ಮಹತ್ವದ ಎಚ್ಚರಿಕೆ ನೀಡಿದೆ. ಸೂರ್ಯನ ಮೇಲ್ಮೈನಲ್ಲಿನ ಸ್ಫೋಟದಿಂದ ಜೂನ್ 8 ರಂದು ಭೂಮಿಗೆ ಸೌರ ಬಿರುಗಾಳಿ ಅಪ್ಪಳಿಸಲಿದೆ. ಭಾರತದ ಕೆಲ ಪ್ರದೇಶಗಳಿಗೂ ಸೌರ ಕಾಂತೀಯ ಬಿರುಗಾಳಿ ಭೀತಿ  ಇದೆ ಎಂದು ನಾಸಾ ಮಹತ್ವದ ಎಚ್ಚರಿಕೆ ನೀಡಿದೆ.

Read Full Story

10:22 PM (IST) Jun 07

ಕಾಕ್ರೋಚ್ ಆಯ್ತು ಈಗ ಇರುವೆ, ಚೀಂಟಿ ಜನತಾ ಪಾರ್ಟಿ ಆರಂಭಿಸಿದ ಬಿಜೆಪಿ ಮಾಜಿ ನಾಯಕ

ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯಲ್ಲಿ ಪ್ರತಿಭಟನೆ ಮಾಡಿದ ಬೆನ್ನಲ್ಲೇ ಇದೀಗ ಇರುವೆ ಪಕ್ಷಗಳು ಹುಟ್ಟಿಕೊಂಡಿದೆ. ಬಿಜೆಪಿ ಮಾಜಿ ನಾಯಕ ಇದೀಗ ಚೀಂಟಿ ಜನತಾ ಪಾರ್ಟಿ ಆರಂಭಿಸಿದ್ದಾರೆ. 2027ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದೆ.

Read Full Story

09:32 PM (IST) Jun 07

ಬಯಲಾಯ್ತು ರಾಜಮೌಳಿ ಸಿನಿಮಾದ ಹೊಸ ರಹಸ್ಯ - 'ವಾರಣಾಸಿ'ಯಲ್ಲಿ 30 ನಿಮಿಷದ ಆ ಯುದ್ಧ!

ಎಸ್‌.ಎಸ್. ರಾಜಮೌಳಿ ಅವರ ಮುಂಬರುವ ಮಹೋನ್ನತ ಸಿನಿಮಾ 'ವಾರಣಾಸಿ' ಬಗ್ಗೆ ಹೊಸ ಕ್ರೇಜ್ ಶುರುವಾಗಿದೆ. ಚಿತ್ರಕಥೆಗಾರ ವಿಜಯೇಂದ್ರ ಪ್ರಸಾದ್, ರಾಮಾಯಣದಿಂದ ಸ್ಫೂರ್ತಿ ಪಡೆದ 30 ನಿಮಿಷಗಳ ಯುದ್ಧದ ದೃಶ್ಯದ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾರೆ.

Read Full Story

09:00 PM (IST) Jun 07

ನಟ ಸಲೀಮ್ ಅಂತಿಮ ನಮನಕ್ಕಾದರೂ ದಾರಿ ಬಿಡಿ, ಪಾಪಾರಾಜಿ ವರ್ತನೆಗೆ ಸಹನೆ ಕಳೆದುಕೊಂಡ ಮಗ

ರಾಷ್ಟ್ರ ಪ್ರಶಸ್ತಿ ವಿಜೇತನ ನಟ ಸಲೀಂ ಕುಮಾರ್ ಅಂತ್ಯಕ್ರಿಯೆ ವೇಳೆ ನೋವಿನ ಘಟನೆ ನಡೆದಿದೆ. ಕುಟುಂಬಕ್ಕೆ ಅಂತಿಮ ನಮನ ಸಲ್ಲಿಸಲು ಪಾಪರಾಜಿಗಳು ಬಿಡದೆ ಮುಗಿಬಿದ್ದ ಘಟನೆ ನಡೆದಿದೆ. ಇದರಿಂದ ಸಲೀಂ ಮಗ ಸಹನೆ ಕಳೆದುಕೊಂಡು ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.

Read Full Story

08:14 PM (IST) Jun 07

Peddi Piracy - HD ಕ್ವಾಲಿಟಿಯಲ್ಲಿ 'ಪೆದ್ದಿ' ಪೈರಸಿ.. ರಿಲೀಸ್ ಆದ 3ನೇ ದಿನಕ್ಕೆ ರಾಮ್ ಚರಣ್ ಟೀಮ್‌ಗೆ ಶಾಕ್!

'ಪೆದ್ದಿ' ಚಿತ್ರಕ್ಕೂ ಪೈರಸಿ ಕಾಟ ತಪ್ಪಿಲ್ಲ. ಬಿಡುಗಡೆಗೂ ಮುನ್ನ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ರಾಮ್ ಚರಣ್ ತಂಡಕ್ಕೆ ಶಾಕ್ ತಪ್ಪಲಿಲ್ಲ. 'ಪೆದ್ದಿ' ಚಿತ್ರದ ಎಚ್‌ಡಿ ಗುಣಮಟ್ಟದ ಪೈರಸಿ ಕಾಪಿ ಲೀಕ್ ಆಗಿದೆ. ಈಗ ನಿರ್ಮಾಪಕರು ಏನು ಮಾಡಲಿದ್ದಾರೆ?

Read Full Story

08:11 PM (IST) Jun 07

ತ್ರಿಷಾ ಅಲ್ಲ, ರಾಘವ ಲಾರೆನ್ಸ್.. ತಿರುಚ್ಚಿ ಪೂರ್ವ ಉಪಚುನಾವಣೆ ಬಗ್ಗೆ ತಮಿಳುನಾಡಿನಲ್ಲಿ ಸಿಕ್ಕಾಪಟ್ಟೆ ಬಿಸಿಬಿಸಿ ಚರ್ಚೆ!

ತಿರುಚ್ಚಿ ಪೂರ್ವ ಕ್ಷೇತ್ರದಲ್ಲಿ ಸ್ಪರ್ಧಿಸಲು ಕೇವಲ ಲಾರೆನ್ಸ್ ಹೆಸರಷ್ಟೇ ಕೇಳಿಬರುತ್ತಿಲ್ಲ. ಈ ರೇಸ್‌ನಲ್ಲಿ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ತ್ರಿಶಾ ಮತ್ತು ಮಾಜಿ ಐಎಎಸ್ ಅಧಿಕಾರಿ ಇರೈಯನ್ಬು ಅವರ ಹೆಸರುಗಳು ಕೂಡ ಮುಂಚೂಣಿಯಲ್ಲಿವೆ. ಒಂದು ವೇಳೆ ತ್ರಿಶಾ ಮತ್ತು ಲಾರೆನ್ಸ್ ಇಬ್ಬರೂ ಅಖಾಡಕ್ಕೆ ಇಳಿದರೆ? 

Read Full Story

08:10 PM (IST) Jun 07

ಅಯ್ಯರ್ ಟಿ20 ನಾಯಕನಾದ ಹಿಂದೆ ರಿಕಿ ಪಾಂಟಿಂಗ್ ಮ್ಯಾಜಿಕ್, ಆಯ್ಕೆ ಸಮಿತಿ ಜೊತೆಗಿನ ಚಾಟ್ ಬಹಿರಂಗ

ಶ್ರೇಯಸ್ ಅಯ್ಯರ್ ಭಾರತ ಟಿ20 ತಂಡದ ನಾಯಕನಾದ ಹಿಂದಿನ ರಹಸ್ಯ ಬಯಲಾಗಿದೆ.ಬಿಸಿಸಿಐ ಆಯ್ಕೆ ಸಮಿತಿ ಜೊತೆಗಿನ ಮಾತುಕತೆಯೂ ಬಹಿರಂಗವಾಗಿದೆ. ಸೂರ್ಯಕುಮಾರ್ ಯಾದವ್ ಬದಲು ಅಯ್ಯರ್‌ಗೆ ನಾಯಕತ್ವ ಸಿಕ್ಕಿದ ಕಹಾನಿ.

Read Full Story

07:22 PM (IST) Jun 07

ನರ್ಸ್‌ಗಳ ಯೂನಿಫಾರ್ಮ್‌ಗೆ ಭಾರತೀಯ ಟಚ್ ಬೇಕು, ಇದು ಬ್ರಿಟಿಷರ ಕಾಲದ್ದು - ಕಂಗನಾ ಹೇಳಿಕೆ ವೈರಲ್!

ತಮ್ಮ 'ಭಾರತ್ ಭಾಗ್ಯ ವಿಧಾತ' ಚಿತ್ರದ ಪ್ರಚಾರದ ವೇಳೆ ಮಾತನಾಡಿರುವ ನಟಿ ಕಂಗನಾ ರಣಾವತ್, ನರ್ಸ್‌ಗಳ ಸದ್ಯದ ಯೂನಿಫಾರ್ಮ್ ಬ್ರಿಟಿಷರ ಕಾಲದ ಸಂಕೇತವಾಗಿದೆ. ಇದನ್ನು 'ಭಾರತೀಕರಣ'ಗೊಳಿಸಬೇಕು. ನರ್ಸ್‌ಗಳ ಇಷ್ಟದಂತೆ ಹೊಸ ಡ್ರೆಸ್ ಕೋಡ್ ಜಾರಿಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Read Full Story

06:26 PM (IST) Jun 07

ಕನ್ನಡ, ತೆಲುಗಿನಲ್ಲಿ 'ದೃಶ್ಯಂ 3' ರಿಮೇಕ್ ಆಗಲ್ಲ - ಕಾರಣ ಬಿಚ್ಚಿಟ್ಟ ನಿರ್ದೇಶಕ ಜೀತು ಜೋಸೆಫ್!

ಮೋಹನ್‌ಲಾಲ್ ಅಭಿನಯದ 'ದೃಶ್ಯಂ 3' ಕನ್ನಡ ಮತ್ತು ತೆಲುಗಿನಲ್ಲಿ ರಿಮೇಕ್ ಆಗದಿರುವ ಕಾರಣವನ್ನು ನಿರ್ದೇಶಕ ಜೀತು ಜೋಸೆಫ್ ಬಹಿರಂಗಪಡಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಸ್ಥಳೀಯ ಸ್ಟಾರ್‌ಗಳ ಇಮೇಜ್‌ಗೆ..

Read Full Story

06:09 PM (IST) Jun 07

ಶೂಟಿಂಗ್‌ನಲ್ಲಿ ನಾನಾ ಪಾಟೇಕರ್ ನನ್ನ ಕೆನ್ನೆಗೆ ಬಾರಿಸಿದ್ರು, ನಾನೂ ತಿರುಗಿ ಹೊಡೆದೆ - 'ಅಣ್ಣಯ್ಯ' ನಟಿ

1997ರಲ್ಲಿ 'ಯಶ್ವಂತ್' ಸಿನಿಮಾ ಶೂಟಿಂಗ್ ವೇಳೆ, ಅಳುವ ದೃಶ್ಯ ಸಹಜವಾಗಿ ಬರಲಿ ಅಂತ ಸಹನಟ ನಾನಾ ಪಾಟೇಕರ್ ನನ್ನ ಕೆನ್ನೆಗೆ ಹೊಡೆದಿದ್ದರು. ಇದಕ್ಕೆ ಪ್ರತಿಯಾಗಿ ನಾನೂ ಅವರ ಕೆನ್ನೆಗೆ ಹೊಡೆದೆ ಎಂದು ನಟಿ ಮಧುಬಾಲಾ ಇದೀಗ ಬಹಿರಂಗಪಡಿಸಿದ್ದಾರೆ.

Read Full Story

05:04 PM (IST) Jun 07

ಜಾನ್ವಿ ಸೀನ್ ಗಲಾಟೆ ಬೆನ್ನಲ್ಲೇ 'ಪೆದ್ದಿ'ಗೆ ಮತ್ತೊಂದು ಶಾಕ್ - ಜಾನಿ ಮಾಸ್ಟರ್ ಬಗ್ಗೆ ಗಂಭೀರ ಆರೋಪ!

ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾಕ್ಕೆ ವಿವಾದಗಳು ಬೆನ್ನು ಬಿಡುತ್ತಿಲ್ಲ. ಜಾನ್ವಿ ನಟನೆಯ ದೃಶ್ಯವೊಂದರ ಬಗ್ಗೆ ಎದ್ದಿದ್ದ ಗಲಾಟೆ ತಣ್ಣಗಾಗುವ ಮುನ್ನವೇ, ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಕೊರಿಯೋಗ್ರಾಫರ್ ಚಿತ್ರತಂಡದಲ್ಲಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

Read Full Story

05:02 PM (IST) Jun 07

ಕಾಕ್ರೋಚ್​ ಪ್ರತಿಭಟನಾಕಾರರ ಎಡವಟ್ಟು - 'ಅಮಿತ್​ ಪ್ರಧಾನ್'​ ವಿರುದ್ಧ ಘೋಷಣೆ ಕೂಗಿ ನಗೆಪಾಟಲು

ನೀಟ್​ ಪರೀಕ್ಷೆ ಅನ್ಯಾಯದ ವಿರುದ್ಧ ದೆಹಲಿಯ ಜಂತರ್​ಮಂತರ್​ನಲ್ಲಿ ಕಾಕ್ರೋಚ್​ ಜನತಾ ಪಕ್ಷವು ಪ್ರತಿಭಟನೆ ನಡೆಸಿತು. ಆದರೆ, ಪ್ರತಿಭಟನಾಕಾರರು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಬದಲಿಗೆ 'ಅಮಿತ್ ಪ್ರಧಾನ್' ರಾಜೀನಾಮೆಗೆ ಆಗ್ರಹಿಸಿ ನಗೆಪಾಟಲಿಗೀಡಾದರು. ಈ ಎಡವಟ್ಟಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

04:24 PM (IST) Jun 07

Peddi Controversy - ಜಾನ್ವಿ ಕಪೂರ್ ಬೆನ್ನಿಗೆ ನಿಂತ ಕನ್ನಡದ ನಟಿ - ಇಂಡಸ್ಟ್ರಿಯ ಕರಾಳ ಸತ್ಯ ಬಿಚ್ಚಿಟ್ಟ ಆಶಿಕಾ!

ರಾಮ್ ಚರಣ್ ಮತ್ತು ಜಾನ್ವಿ ಕಪೂರ್ ನಟನೆಯ 'ಪೆದ್ದಿ' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸಖತ್ ಸದ್ದು ಮಾಡುವುದರ ಜೊತೆಗೆ, ಒಂದು ದೊಡ್ಡ ವಿವಾದದ ಕೇಂದ್ರಬಿಂದು ಕೂಡ ಆಗಿದೆ. ಚಿತ್ರದಲ್ಲಿ ಜಾನ್ವಿ ಕಪೂರ್ ಅವರ..

Read Full Story

04:02 PM (IST) Jun 07

Gold Rate Today - ಕಳೆದ 10 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 4,910 ರುಪಾಯಿ ಕುಸಿತ..! ಖರೀದಿಗೆ ಇದು ಸೂಕ್ತ ಸಮಯವೇ?

ಬೆಂಗಳೂರು: ಚಿನ್ನ ಹಾಗೂ ಬೆಳ್ಳಿ ಖರೀದಿಸುವವರಿಗೆ ಇದೀಗ ಗುಡ್‌ ನ್ಯೂಸ್ ಸಿಕ್ಕಿದೆ. ಕಳೆದ 10 ದಿನಗಳಿಂದ ಚಿನ್ನದ ಬೆಲೆಯಲ್ಲಿ ನಿರಂತರ ಇಳಿಕೆ ಕಂಡಿದ್ದು, ಆಭರಣ ಖರೀದಿಸುವವರು ಇದೀಗ ನಿಧಾನವಾಗಿ ಬಂಗಾರದ ಅಂಗಡಿಗಳತ್ತ ಮುಖ ಮಾಡಲಾರಂಭಿಸಿದ್ದಾರೆ.

 

Read Full Story

03:39 PM (IST) Jun 07

Shocking - ಶೂಟಿಂಗ್‌ ವೇಳೆ ಕಾಜೋಲ್‌ ತಲೆಗೆ ಭಾರೀ ಪೆಟ್ಟು; ಶಾರುಖ್‌ ಮರೆತ ನಟಿ ಆ ನಟನನ್ನು ಮಾತ್ರ ಮರೆಯಲೇ ಇಲ್ಲ!

ಕಣ್ಣು ಬಿಟ್ಟ ಕಾಜೋಲ್ ಗೆ ತಾನು ಎಲ್ಲಿದ್ದೇನೆ ಎನ್ನುವುದೇ ಮರೆತು ಹೋಗಿತ್ತು. ಅವರು ತಮ್ಮ ಸುತ್ತಲೂ ಇದ್ದವರನ್ನು ವಿಚಿತ್ರವಾಗಿ ನೋಡತೊಡಗಿದರು. ಆಶ್ಚರ್ಯವೆಂದರೆ, ತನ್ನ ಆಪ್ತ ಸ್ನೇಹಿತ ಶಾರುಖ್ ಖಾನ್ ಅವರನ್ನೂ ಕಾಜೋಲ್ ಗುರುತಿಸಲಿಲ್ಲ. ಆದರೆ, ಆ ನಟ ಮಾತ್ರ ನೆನಪಿನಲ್ಲಿದ್ದರು!

Read Full Story

03:23 PM (IST) Jun 07

Instagram ಬಳಕೆದಾರರಿಗೆ, ರೀಲ್ಸ್‌ ಅಪ್ಲೋಡ್‌ ಮಾಡೋರು ಇನ್ಮುಂದೆ 299 ರೂ. ಕೊಡ್ಬೇಕು! ಹೊಸ ಫೀಚರ್‌ ಜಾರಿಗೆ!

Instagram subscription price: ಇನ್‌ಸ್ಟಾಗ್ರಾಮ್‌ ಹೊಸ ಫೀಚರ್‌ ಬಿಟ್ಟಿದೆ. ಇದಕ್ಕೆ ಭಾರತದಲ್ಲಿ ಭಾರತದಲ್ಲಿ ಇನ್‌ಸ್ಟಾಗ್ರಾಮ್ ಪ್ಲಸ್ ಎಂಬ ಹೊಸ Subscription ಕೊಡಲಾಗ್ತಿದೆ. ಜಾಹೀರಾತುಗಳ ಮೇಲೆ ಹೆಚ್ಚು ಡಿಪೆಂಡ್‌ ಆಗೋದು ಬೇಡ ಎಂದು ಹೀಗೆ ಮಾಡಲಾಗಿದೆ. ಹಾಗಾದರೆ ಇದರಿಂದ ಏನು ಲಾಭ ಸಿಗುತ್ತೆ?

Read Full Story

03:11 PM (IST) Jun 07

ಕೇವಲ ಎರಡೇ ತಂಡ, ಐಪಿಎಲ್ ಹರಾಜಿನ ಕುರಿತು ಅಚ್ಚರಿ ಹೇಳಿಕೆ ನೀಡಿದ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಆಯ್ಕೆಯಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ. ಇದರ ನಡುವೆ ವೈಭವ್ ನೀಡಿದ ಹೇಳಿಕೆಯೂ ಭಾರಿ ವೈರಲ್ ಆಗುತ್ತಿದೆ. ಅದರಲ್ಲೂ ಐಪಿಎಲ್ ಹರಾಜಿನ ಕುರತು ಸ್ಫೋಟಕ ಹೇಳಿಕೆ ನೀಡಿದ್ದಾರೆ.

Read Full Story

01:51 PM (IST) Jun 07

ಸೂರ್ಯಕುಮಾರ್ ಯಾದವ್‌ಗೆ ಭಾರತ ಟಿ20 ತಂಡದಿಂದ ಗೇಟ್‌ಪಾಸ್ ಬೆನ್ನಲ್ಲೇ ರೋಹಿತ್ ಶರ್ಮಾ ದಿಟ್ಟ ಮಾತು!

ಮುಂಬೈ: ಮುಂಬರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು, ಶ್ರೇಯಸ್ ಅಯ್ಯರ್‌ಗೆ ಭಾರತ ಟಿ20 ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಈ ಮೂಲಕ ಸೂರ್ಯಕುಮಾರ್ ಯಾದವ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಈ ಬಗ್ಗೆ ರೋಹಿತ್ ಶರ್ಮಾ ಮಾತನಾಡಿದ್ದಾರೆ.

 

Read Full Story

12:55 PM (IST) Jun 07

ಭಾರತ ತಂಡದಿಂದ ಹೊರ ಬಿದ್ದವನು ನಾಯಕನಾಗಿ ಮರಳಿದ.. ಕಮ್‌ಬ್ಯಾಕ್ ಎಂದರೆ ಹೀಗಿರಬೇಕು..!

915 ದಿನಗಳ ಹಿಂದೆ ಭಾರತ ಟಿ20 ತಂಡದಿಂದ ಹೊರಬಿದ್ದಿದ್ದ ಶ್ರೇಯಸ್ ಅಯ್ಯರ್, ಐಪಿಎಲ್‌ನಲ್ಲಿ ತಮ್ಮ ನಾಯಕತ್ವ ಮತ್ತು ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇದೀಗ, ಎಲ್ಲ ಅಡೆತಡೆಗಳನ್ನು ಮೀರಿ, ತಂಡಕ್ಕೆ ಕೇವಲ ಆಟಗಾರನಾಗಿ ಅಲ್ಲ, ನಾಯಕನಾಗಿಯೇ ಭರ್ಜರಿ ಪುನರಾಗಮನ ಮಾಡಿದ್ದಾರೆ.
Read Full Story

12:19 PM (IST) Jun 07

ಐಪಿಎಲ್‌ನಲ್ಲಿ 732 ರನ್, ಆದ್ರೂ ಟಿ20 ತಂಡದಿಂದ ಶುಭ್‌ಮನ್‌ ಗಿಲ್‌ಗೆ ಗೇಟ್‌ಪಾಸ್! ಕೊನೆಗೂ ಇಂಟ್ರೆಸ್ಟಿಂಗ್ ಕಾರಣ ಬಿಚ್ಚಿಟ್ಟ BCCI

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಶುಭ್‌ಮನ್ ಗಿಲ್ ಅವರನ್ನು ಭಾರತೀಯ ಟಿ20 ತಂಡದಿಂದ ಹೊರಗಿಡಲಾಗಿದೆ. ಕೆಲಸದ ಹೊರೆ ನಿರ್ವಹಣೆ ಮತ್ತು 2027ರ ಏಕದಿನ ವಿಶ್ವಕಪ್‌ಗೆ ಅವರನ್ನು ಸಿದ್ಧವಾಗಿರಿಸಲು, ಬಿಸಿಸಿಐ ಆಯ್ಕೆ ಸಮಿತಿಯು ಗಿಲ್ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‌ನತ್ತ ಗಮನಹರಿಸಬೇಕೆಂದು ಸೂಚಿಸಿದೆ.
Read Full Story

11:32 AM (IST) Jun 07

ಅನ್ನದ ಜೊತೆ ಐಸ್ ಕ್ರೀಂ ಮಿಕ್ಸ್.. ಈ ನಟಿಯ ಶಾಕಿಂಗ್ ಫುಡ್ ಹ್ಯಾಬಿಟ್ ಹಿಂದಿದೆ ಇಂಟರೆಸ್ಟಿಂಗ್ ಕಥೆ!

ಕೆಲವರು ಗುಲಾಬ್ ಜಾಮೂನ್ ಜೊತೆ ಐಸ್‌ಕ್ರೀಂ ಸವಿಯುತ್ತಾರೆ, ಇನ್ನು ಕೆಲವರು ಫ್ರೂಟ್ ಸಲಾಡ್ ಜೊತೆ ಮಿಕ್ಸ್ ಮಾಡುತ್ತಾರೆ. ಆದರೆ, ಬಿಸಿ ಬಿಸಿ ಅನ್ನಕ್ಕೆ ಐಸ್‌ಕ್ರೀಂ ಹಾಕಿಕೊಂಡು ತಿನ್ನುವವರನ್ನು ಎಲ್ಲಾದರೂ ನೋಡಿದ್ದೀರಾ? ಹೌದು, ಈ ನಟಿ ಅನ್ನದ ಜೊತೆ ಐಸ್‌ ಕ್ರೀಂ ಮಿಕ್ಸ್ ಮಾಡಿ ತಿಂತಾರೆ!

Read Full Story

11:05 AM (IST) Jun 07

ಭಾರತ ಟಿ20 ತಂಡ, ನಾಯಕತ್ವದಿಂದ ಹೊರಬಿದ್ದ ಬೆನ್ನಲ್ಲೇ ಆಯ್ಕೆ ಸಮಿತಿಗೆ ಖಡಕ್ ವಾರ್ನಿಂಗ್ ಕೊಟ್ಟ ಸೂರ್ಯಕುಮಾರ್ ಯಾದವ್..!

ಬೆಂಗಳೂರು: ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಸೂರ್ಯಕುಮಾರ್ ಯಾದವ್, ಟಿ20 ತಂಡದಿಂದ ಹೊರಬಿದ್ದಿದ್ದಾರೆ. ಇದರ ಜತೆಗೆ ಭಾರತ ಟಿ20 ತಂಡದ ನಾಯಕತ್ವವನ್ನೂ ಕಳೆದುಕೊಂಡಿದ್ದಾರೆ. ಇದೆಲ್ಲದರ ನಡುವೆ ಆಯ್ಕೆ ಸಮಿತಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಏನದು, ನೋಡೋಣ ಬನ್ನಿ.

 

Read Full Story

10:09 AM (IST) Jun 07

2 ನಿಮಿಷದ ವಿಡಿಯೋದಿಂದ ಖಾಲಿ ಆಗುತ್ತೆ ನಿಮ್ಮ ಬ್ಯಾಂಕ್ ಅಕೌಂಟ್; ಇದು ಹೊಸ ಸ್ಕ್ಯಾಮ್

ಸೈಬರ್ ಕಳ್ಳರು '2 ನಿಮಿಷದ ವಿಡಿಯೋ' ಎಂಬ ಹೆಸರಿನಲ್ಲಿ ಲಿಂಕ್ ಕಳುಹಿಸಿ ಹೊಸ ರೀತಿಯಲ್ಲಿ ವಂಚಿಸುತ್ತಿದ್ದಾರೆ. ಈ ಲಿಂಕ್ ಕ್ಲಿಕ್ ಮಾಡಿದರೆ, ನಿಮ್ಮ ಮೊಬೈಲ್‌ಗೆ ಮಾಲ್‌ವೇರ್ ಸೇರಿ ಬ್ಯಾಂಕ್ ಖಾತೆಯಲ್ಲಿನ ಹಣ ಸಂಪೂರ್ಣ ಖಾಲಿಯಾಗುವ ಅಪಾಯವಿದೆ. 

Read Full Story

09:48 AM (IST) Jun 07

ಆರ್‌ಸಿಬಿಗೆ ಕಪ್ ಗೆದ್ದುಕೊಟ್ಟ ವಿರಾಟ್ ಕೊಹ್ಲಿ ಈಗ ಭಾರತ ತಂಡದಿಂದ ಔಟ್! ರಾಜಸ್ಥಾನ ರಾಯಲ್ಸ್ ಆರಂಭಿಕ ಬ್ಯಾಟರ್‌ಗೆ ಜಾಕ್‌ಪಾಟ್!

ಮುಂಬೈ: ಜೂನ್ 13ರಿಂದ ಆರಂಭವಾಗಲಿರುವ ಆಫ್ಘಾನಿಸ್ತಾನ ಎದರಿನ ಮೂರು ಪಂದ್ಯಗಳ ಟಿ20 ಸರಣಿಯಿಂದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಕೊಹ್ಲಿ ಸ್ಥಾನಕ್ಕೆ ಇದೀಗ ರಾಜಸ್ಥಾನ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ತಂಡ ಕೂಡಿಕೊಂಡಿದ್ದಾರೆ.

 

Read Full Story

09:29 AM (IST) Jun 07

ಏಯ್, ಎಲ್ಲಿ ಮುಟ್ಟತ್ತಿದೀಯಾ ನೀನು? ವೇದಿಕೆಯಲ್ಲೇ ಯುವಕನಿಗೆ ಕಪಾಳಮೋಕ್ಷ; ವಿಡಿಯೋ

ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿದ್ದ ಕಲಾವಿದೆಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೋಪಗೊಂಡ ಡ್ಯಾನ್ಸರ್, ಯುವಕನ ಕಪಾಳಕ್ಕೆ ಹೊಡೆದು ವೇದಿಕೆಯಲ್ಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

07:44 AM (IST) Jun 07

ಆಫ್ಘಾನ್ ವಿರುದ್ದದ ಟೆಸ್ಟ್ - ಮೊದಲ ದಿನವೇ ಕೆ ಎಲ್ ರಾಹುಲ್, ಶುಭ್‌ಮನ್ ಗಿಲ್ ಅಬ್ಬರದ ಶತಕ!

ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ, ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ನಾಯಕ ಶುಭಮನ್ ಗಿಲ್ ಅವರ ಭರ್ಜರಿ ಶತಕಗಳ ನೆರವಿನಿಂದ ಭಾರತ ಮೊದಲ ದಿನದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 368 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಿದೆ. ಸಾಯಿ ಸುದರ್ಶನ್ (81) ಮತ್ತು ರಿಷಭ್ ಪಂತ್ (50*) ಕೂಡ ಉಪಯುಕ್ತ ಕಾಣಿಕೆ ನೀಡಿದರು.
Read Full Story

06:32 AM (IST) Jun 07

ಜೂ.21ಕ್ಕೆ ನ್ಯೂಯಾರ್ಕ್‌ ಯೋಗ ದಿನಕ್ಕೆ ಬೆಂಗಳೂರಿನ ನಾಗೇಂದ್ರ ನೇತೃತ್ವ; ಟೈಮ್ಸ್ ಸ್ಕ್ವೇರ್‌ನಲ್ಲಿ ಕಾರ್ಯಕ್ರಮ

ಪ್ರಧಾನಿ ನರೇಂದ್ರ ಮೋದಿಯವರ ಯೋಗ ಗುರು ಹಾಗೂ ಬೆಂಗಳೂರಿನ ಎಸ್-ವ್ಯಾಸ ಸಂಸ್ಥಾಪಕರಾದ ಡಾ. ಎಚ್. ಆರ್. ನಾಗೇಂದ್ರ ಅವರು ಜೂ.21 ರಂದು ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನೇತೃತ್ವ ವಹಿಸಲಿದ್ದಾರೆ. 

Read Full Story

06:23 AM (IST) Jun 07

ದೆಹಲಿಯಲ್ಲಿ ಜಿರಳೆ ಪಾರ್ಟಿ ಬೃಹತ್‌ ಕಹಳೆ; ಶಿಕ್ಷಣ ಸಚಿವ ಪ್ರಧಾನ್ ರಾಜೀನಾಮೆ ಆಗ್ರಹ

ಅಭಿಜಿತ್‌ ದೀಪ್ಕೆ ನೇತೃತ್ವದ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ನೀಟ್‌ ಪರೀಕ್ಷಾ ಅಕ್ರಮಗಳ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಲಾಯಿತು. ಜಾಲತಾಣದಲ್ಲಿ ಆರಂಭವಾದ ಈ ಚಳವಳಿಗೆ ಸೋನಂ ವಾಂಗ್ಚುಕ್ ಸೇರಿದಂತೆ ಹಲವರು ಬೆಂಬಲ ಸೂಚಿಸಿದರು.
Read Full Story

06:04 AM (IST) Jun 07

ಗ್ರಾಹಕರಿಗೆ ಶಾಕ್ - ಮತ್ತೆ ಗಗನಕ್ಕೇರಿದ ಗೃಹ ಬಳಕೆಯ 14 ಕೆಜಿ ಸಿಲಿಂಡರ್ ಬೆಲೆ!

ಇರಾನ್ ಯುದ್ಧದ ಪರಿಣಾಮವಾಗಿ, ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 29 ರೂ. ಹೆಚ್ಚಿಸಲಾಗಿದೆ. ಈ ಮೂಲಕ, 913 ರೂ. ಇದ್ದ 14.2 ಕೆಜಿ ಸಿಲಿಂಡರ್‌ನ ದರವು ಜೂನ್ 7 ರಿಂದ 942 ರೂ.ಗೆ ಏರಿಕೆಯಾಗಿದ್ದು, ಇದು ಮೂರು ತಿಂಗಳಲ್ಲಿ ಎರಡನೇ ಬಾರಿಯ ದರ ಹೆಚ್ಚಳವಾಗಿದೆ.
Read Full Story

More Trending News