Published : Feb 07, 2026, 06:36 AM ISTUpdated : Feb 07, 2026, 11:41 PM IST

India Latest News Live: ಮುಂಬೈನಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ - ನಟ ಸಲ್ಮಾನ್ ಖಾನ್, ರಣ್ಬೀರ್ ಕಪೂರ್ ಭಾಗಿ

ಸಾರಾಂಶ

ಢಾಕಾ: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌ ಮನೆ ಎದುರು ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಜಮಾಯಿಸಿ ಯೂನಸ್‌ ವಿರುದ್ಧ ಪ್ರತಿಭಟನೆ ನಡೆಸಿದರು. ಪರಿಣಾಮ ಭದ್ರತಾ ಸಿಬ್ಬಂದಿ ಜೊತೆ ಸಂಘರ್ಷದಲ್ಲಿ 15 ಮಂದಿ ತೀವ್ರವಾಗಿ ಗಾಯಗೊಂಡರು.

ಬಾಂಗ್ಲಾ ಸರ್ಕಾರಿ ನೌಕರರಿಗೆ 7ನೇ ರಾಷ್ಟ್ರೀಯ ವೇತನ ಶ್ರೇಣಿಯನ್ನು ಜಾರಿಗೊಳಿಸಬೇಕೆಂದು ಢಾಕಾದ ಜಮುನಾದಲ್ಲಿರುವ ಯೂನಸ್‌ ಅಧಿಕೃತ ನಿವಾಸಕ್ಕೆ ನೌಕರರು ಮುತ್ತಿಗೆ ಹಾಕಿದರು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಜನರನ್ನು ಹತ್ತಿಕ್ಕಲು ಯತ್ನಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ 15 ಜನರು ಗಾಯಗೊಂಡಿದ್ದಾರೆ.

11:41 PM (IST) Feb 07

ಮುಂಬೈನಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ - ನಟ ಸಲ್ಮಾನ್ ಖಾನ್, ರಣ್ಬೀರ್ ಕಪೂರ್ ಭಾಗಿ

ಮುಂಬೈನಲ್ಲಿ ನಡೆದ ಆರ್‌ಎಸ್‌ಎಸ್‌ನ 100ನೇ ವರ್ಷದ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ರಣಬೀರ್ ಕಪೂರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಮಾತನಾಡಿದ RSS ಮುಖ್ಯಸ್ಥ ಸಂಘಟನೆ ಯಾರ ವಿರುದ್ಧವೂ ಅಲ್ಲ ಮತ್ತು ಅಧಿಕಾರ ಬಯಸುವುದಿಲ್ಲ ಎಂದು ಹೇಳಿದರು.

Read Full Story

10:51 PM (IST) Feb 07

ಟಿ20 ವಿಶ್ವಕಪ್‌ - ಸೂರ್ಯನ ಆರ್ಭಟಕ್ಕೆ ಮುಳುಗಿದ ಅಮೆರಿಕ! ಹಾಲಿ ಚಾಂಪಿಯನ್ ಭಾರತ ಶುಭಾರಂಭ

ನಾಯಕ ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ ಅಜೇಯ 84 ರನ್‌ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ಬಲದಿಂದ, ಟಿ20 ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ಭಾರತವು ಯುಎಸ್‌ಎ ವಿರುದ್ಧ 29 ರನ್‌ಗಳ ಭರ್ಜರಿ ಜಯ ಸಾಧಿಸಿತು. 162 ರನ್‌ಗಳ ಗುರಿ ಬೆನ್ನತ್ತಿದ ಯುಎಸ್‌ಎ 132 ರನ್‌ಗಳಿಗೆ ತನ್ನ ಹೋರಾಟ ಮುಗಿಸಿತು.

Read Full Story

10:10 PM (IST) Feb 07

ಮಹಿಳೆ ರೀಲ್ಸ್‌ಗಾಗಿ ಹಾಕಿದ ನೇಣು ನಿಜವಾಗಿಯೂ ಕತ್ತು ಬಿಗಿಯಿತು - ತಬ್ಬಲಿಯಾಯ್ತು 4 ವರ್ಷದ ಮಗು

ಉತ್ತರ ಪ್ರದೇಶದಲ್ಲಿ, ರೀಲ್ಸ್ ಮಾಡುವಾಗ ಯುವತಿಯೊಬ್ಬಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ. ನೇಣು ಹಾಕಿಕೊಳ್ಳುವಂತೆ ವಿಡಿಯೋ ಚಿತ್ರೀಕರಿಸುತ್ತಿದ್ದಾಗ, ಆಕೆ ನಿಂತಿದ್ದ ಸ್ಟೂಲ್ ಜಾರಿ ನೇಣು ಬಿಗಿಗೊಂಡು ದುರಂತ ಸಂಭವಿಸಿದ್ದು, ಆಕೆಯ ಸಾವಿನಿಂದ ನಾಲ್ಕು ವರ್ಷದ ಮಗು ತಬ್ಬಲಿಯಾಗಿದೆ.

Read Full Story

10:08 PM (IST) Feb 07

ಉದ್ಯಮಿಗೆ 2 ಕೋಟಿ ರೂ. ಪಂಗನಾಮ; ಕರ್ತವ್ಯ ಲೋಪ ಸಾಬೀತು, ಡಿವೈಎಸ್‌ಪಿ ಕಲ್ಪನಾ ವರ್ಮಾ ಅಮಾನತು!

ದೇಶದ ಪ್ರತಿಷ್ಠಿತ ಉದ್ಯಮಿಯೊಬ್ಬರಿಗೆ 2 ಕೋಟಿ ರೂ. ಆರ್ಥಿಕ ನಷ್ಟ ಉಂಟುಮಾಡಿದ ಆರೋಪದ ಮೇಲೆ ಡಿವೈಎಸ್‌ಪಿ ಕಲ್ಪನಾ ವರ್ಮಾ ಅವರನ್ನು  ಅಮಾನತುಗೊಳಿಸಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಹಣ ಗಳಿಕೆ, ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾಗಿದೆ.

Read Full Story

09:29 PM (IST) Feb 07

Propose Day - ಹುಡುಗಿಗೆ ಪ್ರಪೋಸ್ ಮಾಡುವಾಗ ಈ 5 ತಪ್ಪುಗಳನ್ನು ಮಾಡಲೇಬೇಡಿ!

ವ್ಯಾಲೆಂಟೈನ್ಸ್ ವೀಕ್ 2026 ವಿಶೇಷ: ಪ್ರಪೋಸ್ ಡೇ ವ್ಯಾಲೆಂಟೈನ್ಸ್ ವೀಕ್‌ನ ಅತ್ಯಂತ ವಿಶೇಷ ದಿನ. ನಿಮ್ಮ ಪ್ರಪೋಸಲ್ ಸ್ಮರಣೀಯವಾಗಬೇಕಾದರೆ, ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡಬಾರದು. ಆ 5 ತಪ್ಪುಗಳು ಯಾವುವು ತಿಳಿಯೋಣ ಬನ್ನಿ

 

Read Full Story

09:13 PM (IST) Feb 07

Funky Movie - ತೆಲುಗು ಸ್ಟಾರ್ ನಾಯಕರ ಚಿತ್ರಗಳಿಗೆ ಪೈಪೋಟಿ; ಹೆಸರೇ ಸೂಚಿಸುವಂತೆ ನಗುವಿನ ಸುರಿಮಳೆ ಗ್ಯಾರಂಟಿ!

ವಿಶ್ವಕ್ ಸೇನ್ ಮತ್ತು ನಿರ್ದೇಶಕ ಅನುದೀಪ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ 'ಫಂಕಿ' ಚಿತ್ರದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಟ್ರೈಲರ್ ಹೇಗಿದೆ? ನಿರ್ದೇಶಕ ಅನುದೀಪ್ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರಾ? ಈ ಎಲ್ಲಾ ವಿವರಗಳನ್ನು ಈ ಫೋಟೋ ಗ್ಯಾಲರಿಯಲ್ಲಿ ತಿಳಿಯಿರಿ.
Read Full Story

09:03 PM (IST) Feb 07

ತಲೆಗೆ ಒಟ್ಟು 1.61 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 51 ಮಾವೋವಾದಿ ನಕ್ಸಲರ ಶರಣಾಗತಿ

2026ರ ಒಳಗೆ ನಕ್ಸಲ್‌ ಚಟುವಟಿಕೆಯಿಂದ ದೇಶವನ್ನು ಮುಕ್ತ ಮಾಡುವ ಪಣ ತೊಟ್ಟಿದ್ದು, ನಕ್ಸಲರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದೆ. ಇದರ ಭಾಗವಾಗಿ ಛತ್ತೀಸ್‌ಗಢದಲ್ಲಿ 1.61 ಕೋಟಿ ಬಹುಮಾನ ಘೋಷಿಸಲ್ಪಟ್ಟಿದ್ದ 51 ಮಾವೋವಾದಿ ನಕ್ಸಲರು ಶರಣಾಗಿದ್ದಾರೆ. ಶರಣಾದವರಲ್ಲಿ 34 ಮಹಿಳೆಯರೂ ಸೇರಿದ್ದಾರೆ.

Read Full Story

06:58 PM (IST) Feb 07

ಟಿ20 ವಿಶ್ವಕಪ್‌ - ಭಾರತ ಎದುರು ಟಾಸ್ ಗೆದ್ದ ಯುಎಸ್‌ಎ ಬೌಲಿಂಗ್ ಆಯ್ಕೆ; ಸಂಜುಗೆ ಶಾಕ್, ಡಿಎಸ್‌ಪಿ ಸಿರಾಜ್ ಡೈರೆಕ್ಟ್ ಎಂಟ್ರಿ

ಟಿ20 ವಿಶ್ವಕಪ್‌ನ ಭಾರತ-ಯುಎಸ್‌ಎ ಪಂದ್ಯದಲ್ಲಿ, ಟಾಸ್ ಗೆದ್ದ ಯುಎಸ್‌ಎ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಜ್ವರದಿಂದ ಬುಮ್ರಾ ಹೊರಗುಳಿದಿದ್ದು, ಸಂಜು ಸ್ಯಾಮ್ಸನ್ ಬದಲಿಗೆ ಇಶಾನ್ ಕಿಶನ್ ಮತ್ತು ಮೊಹಮ್ಮದ್ ಸಿರಾಜ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
Read Full Story

06:55 PM (IST) Feb 07

ಭಾರತ ಅಮೆರಿಕಾ ವ್ಯಾಪಾರ ಒಪ್ಪಂದ - ಅಮೆರಿಕಾದ ಈ ಉತ್ಪನ್ನಗಳಿಗೆ ಝಿರೋ ಟ್ಯಾಕ್ಸ್

India-US trade agreement details: ಭಾರತ ಮತ್ತು ಅಮೆರಿಕಾ ನಡುವಿನ ಹೊಸ ವ್ಯಾಪಾರ ಒಪ್ಪಂದದ ಅಡಿಯಲ್ಲಿ, ಅಮೆರಿಕಾದಿಂದ ಆಮದಾಗುವ ಹಾಗೂ ಭಾರತದಿಂದ ಅಮೆರಿಕಾಗೆ ಹಲವು ಉತ್ಪನ್ನಗಳಿಗೂ ಪರಸ್ಪರ ಸುಂಕ ವಿನಾಯಿತಿ ಸಿಗಲಿದೆ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

Read Full Story

06:30 PM (IST) Feb 07

ಪೊಲೀಸ್​ ರೂಪದ ರಕ್ಕಸರು! ಎಂಜಲು ಕಾಸಿಗೆ ಬಾಲಕನ ಜೀವದ ಜೊತೆ ಚೆಲ್ಲಾಟವಾಡಿದ ಕ್ರೂರ ಅಧಿಕಾರಿಗಳು

ಎಂಜಲು ಕಾಸಿಗೆ ಯಾರ ಜೀವದ ಜೊತೆ ಬೇಕಾದರೂ ಚೆಲ್ಲಾಟವಾಡುವ ಪೊಲೀಸ್​ ಇಲಾಖೆಯ ಅತ್ಯಂತ ಕ್ರೂರ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ. ಡ್ರಗ್ಸ್ ಪೆಡ್ಲರ್‌ಗಳಿಂದ ಲಂಚ ಪಡೆದ ಪೊಲೀಸ್​ ಅಧಿಕಾರಿಗಳು ಮಾಡಿರುವ ಘನಂದಾರಿ ಕೆಲಸ ನೋಡಿ!

Read Full Story

06:02 PM (IST) Feb 07

2026ರ ಟಿ20 ವಿಶ್ವಕಪ್ ಮತ್ತೆ ಭಾರತವೇ ಗೆಲ್ಲುತ್ತೆ ಅನ್ನೋದಕ್ಕೆ ಈ 5 ಕಾರಣಗಳು ಸಾಕು!

ICC ಪುರುಷರ T20 ವಿಶ್ವಕಪ್ 2026: ಈ ಬಾರಿಯೂ ಟಿ20 ವಿಶ್ವಕಪ್ ಟೀಂ ಇಂಡಿಯಾ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎಂದು ಕ್ರೀಡಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬರೀ ಮಾತಲ್ಲ, ಅದಕ್ಕೆ 5 ಬಲವಾದ ಕಾರಣಗಳನ್ನೂ ಅವರು ನೀಡುತ್ತಿದ್ದಾರೆ.

Read Full Story

05:44 PM (IST) Feb 07

ಕಸದ ಜೊತೆ 12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ, ಪೌರ ಕಾರ್ಮಿಕರಿಗೆ ಸಿಕ್ಕ ಬಂಗಾರ ಕತೆ ಏನಾಯಿತು?

ಕಸದ ಜೊತೆ 12 ಲಕ್ಷ ರೂ ಮೌಲ್ಯದ ಚಿನ್ನ ಎಸೆದ ಮಹಿಳೆ, ದುಬೈನಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ ಭಾರತೀಯ ಮಹಿಳೆ ತನ್ನಲ್ಲಿದ್ದ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಕಸದ ಜೊತೆ ಎಸೆದಿದ್ದಾರೆ. ಮುಂದೇನಾಯಿತು?

Read Full Story

05:41 PM (IST) Feb 07

'ನನ್ನನ್ನು ನಂಬಿದವರಲ್ಲಿ ಕ್ಷಮೆ ಕೇಳ್ತೀನಿ'; ಕಳಪೆ ಆಟಕ್ಕೆ ಸಂಜು ಸ್ಯಾಮ್ಸನ್ ಕ್ಷಮೆ ಕೇಳಿದ್ರಾ? ಸತ್ಯಾಂಶ ಏನು?

ಟಿ20 ವಿಶ್ವಕಪ್‌ನಲ್ಲಿ ಸಂಜು ಸ್ಯಾಮ್ಸನ್ ಭಾರತದ ಪರ ಓಪನಿಂಗ್ ಮಾಡುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಕಳಪೆ ಫಾರ್ಮ್‌ನಿಂದಾಗಿ ಸಂಜು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಇದರ ನಡುವೆ ಸಂಜು ಕ್ಷಮೆ ಕೇಳಿದ್ದಾರೆ ಎನ್ನುವ ಪೋಸ್ಟ್ ಕೂಡ ವೈರಲ್ ಆಗ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಇಲ್ಲಿದೆ.

Read Full Story

05:40 PM (IST) Feb 07

ಸದಾ ಸಿಡುಕುವ ಜಯಾ ಬಚ್ಚನ್‌ಗೆ ಬಾಲಿವುಡ್ ಡ್ರಾಮಾ ಕ್ವೀನ್ ನೀಡಿದ ಬಿಟ್ಟಿ ಸಲಹೆಗೆ ನೆಟ್ಟಿಗರ ಶಹಭಾಷ್

ಸದಾ ಸಿಡುಕಿನಿಂದ ಸುದ್ದಿಯಾಗುವ ಹಿರಿಯ ನಟಿ ಜಯಾ ಬಚ್ಚನ್‌ಗೆ ಬಾಲಿವುಡ್‌ನ ಕಿರಿಕ್ ನಟಿ ರಾಖಿ ಸಾವಂತ್ ವಿಚಿತ್ರ ಸಲಹೆಯೊಂದನ್ನು ನೀಡಿದ್ದು, ರಾಖಿ ಸಲಹೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ರಾಖಿ ನೀಡಿದ ಸಲಹೆ ಏನು..?

Read Full Story

05:10 PM (IST) Feb 07

BCCI Contracts - ಇಶಾನ್ ಕಿಶನ್‌ಗೆ ಮತ್ತೆ ಶಾಕ್, ರೋಹಿತ್-ಕೊಹ್ಲಿ ಗ್ರೇಡ್ ಡೌನ್?

ಬಿಸಿಸಿಐನ ಹೊಸ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ 'ಎ+' ಗ್ರೇಡ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಕೊಹ್ಲಿ ಮತ್ತು ರೋಹಿತ್ ಅವರನ್ನು 'ಬಿ' ಗ್ರೇಡ್‌ಗೆ ಇಳಿಸಲಾಗಿದ್ದು, ಶ್ರೇಯಸ್ ಅಯ್ಯರ್ ಮತ್ತೆ ಗುತ್ತಿಗೆ ಪಟ್ಟಿಗೆ ಮರಳಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

Read Full Story

04:40 PM (IST) Feb 07

14 ವರ್ಷದ ವೈಭವ್ ಸೂರ್ಯವಂಶಿ ಮತ್ತೆ U-19 ವಿಶ್ವಕಪ್ ಆಡೋಕಾಗಲ್ಲ! ಭಾರತ ಸೀನಿಯರ್ ಟೀಮ್‌ಗೂ ಸದ್ಯಕ್ಕಿಲ್ಲ ಎಂಟ್ರಿ! ಅಚ್ಚರಿಯಾದ್ರೂ ಸತ್ಯ

ಅಂಡರ್-19 ವಿಶ್ವಕಪ್ ಫೈನಲ್‌ನಲ್ಲಿ 175 ರನ್ ಸಿಡಿಸಿ ದಾಖಲೆ ಬರೆದ 14 ವರ್ಷದ ವೈಭವ್ ಸೂರ್ಯವಂಶಿಯನ್ನು ಸೀನಿಯರ್ ತಂಡಕ್ಕೆ ಸೇರಿಸಿಕೊಳ್ಳಲು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಆದರೆ, ಐಸಿಸಿ ಮತ್ತು ಬಿಸಿಸಿಐನ ವಯಸ್ಸಿನ ಹಾಗೂ ಟೂರ್ನಿಯ ನಿಯಮಗಳು ಈ ಯುವ ಪ್ರತಿಭೆಯ ಮುಂದಿನ ಹಾದಿಗೆ ಅಡ್ಡಿಯಾಗಿವೆ.
Read Full Story

04:19 PM (IST) Feb 07

Epstein Filesನಲ್ಲಿ ರಾಹುಲ್​ ಗಾಂಧಿ ಹೆಸರು, ವಿಡಿಯೋ - ಹಲ್​ಚಲ್​ ಸೃಷ್ಟಿಸ್ತಿರೋ ಇದರ ಅಸಲಿಯತ್ತೇನು?

ಎಪ್​ಸ್ಟೀನ್​ ಫೈಲ್ಸ್​ ಜಗತ್ತಿನ ಶ್ರೀಮಂತರ ಕರಾಳ ಮುಖವನ್ನು ಬಯಲು ಮಾಡಿದೆ. ಇದೇ ಹೊತ್ತಲ್ಲಿ, ರಾಹುಲ್ ಗಾಂಧಿಯವರದ್ದು ಎನ್ನಲಾದ ವಿಡಿಯೋಮತ್ತು ಈ ಫೈಲ್​ನಲ್ಲಿ ಅವರ ಹೆಸರು ವೈರಲ್​ ಆಗ್ತಿದೆ. ಏನಿದರ ಅಸಲಿಯತ್ತು?

Read Full Story

03:20 PM (IST) Feb 07

ಕಡಿಮೆ ರಿಸ್ಕ್‌ನಲ್ಲಿ ಹೆಚ್ಚು ಲಾಭ; ಲಕ್ಷ ಲಕ್ಷ ಸಂಪಾದಿಸುವ ಆಸೆಯಿದ್ರೆ ಆರಂಭಿಸಿ ಅತ್ಯುತ್ತಮ ಬ್ಯುಸಿನೆಸ್

ಲಕ್ಷ ಲಕ್ಷ ಸಂಪಾದಿಸಬೇಕು ಅನ್ನೋ ಆಸೆ ಅನೇಕರಿಗೆ ಇರುತ್ತೆ. ಇದಕ್ಕಾಗಿ ಹಲವು ದಾರಿಗಳನ್ನು ಹುಡುಕುತ್ತಾರೆ. ಕಡಿಮೆ ರಿಸ್ಕ್‌ನಲ್ಲಿ ಹೆಚ್ಚು ಲಾಭ ತಂದುಕೊಡುವ ಒಂದು ಅತ್ಯುತ್ತಮ ಬ್ಯುಸಿನೆಸ್ ಐಡಿಯಾ ಅಂದ್ರೆ ಲೇಯರ್ ಕೋಳಿ ಫಾರಂ. ಈ ವ್ಯವಹಾರದ ಸಂಪೂರ್ಣ ವಿವರ ಇಲ್ಲಿದೆ.
Read Full Story

03:01 PM (IST) Feb 07

ಮತ್ತೆ ವೈರಲ್ ಆಯ್ತು ಕೇಂದ್ರ ಸಚಿವ ಹಾಗೂ ಸಂಸದೆಯ ವೀಡಿಯೋ - ಮದ್ವೆಯಾಗುವಂತೆ ಸಲಹೆ ನೀಡಿದ ನೆಟ್ಟಿಗರು

ನಟಿ ಕಂಗನಾ ರಣಾವತ್ ಮತ್ತು ರಾಜಕಾರಣಿ ಚಿರಾಗ್ ಪಸ್ವಾನ್ ಸಂಸತ್ ಕಲಾಪಕ್ಕೆ ಒಟ್ಟಿಗೆ ಆಗಮಿಸುತ್ತಿರುವ ವೀಡಿಯೋ ವೈರಲ್ ಆಗಿದೆ. ಈ ಹಿಂದೆ ಕೂಡ ಇವರಿಬ್ಬರ ಫೋಟೋಗಳು ವೈರಲ್ ಆಗಿದ್ದು, ಇದೀಗ ಮತ್ತೆ ಇವರ ಜೋಡಿಯನ್ನು ನೋಡಿದ ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ.

Read Full Story

02:46 PM (IST) Feb 07

ಊರನ್ನೇ ಬೆಚ್ಚಿ ಬೀಳಿಸಿದ 37ರ ಮಹಿಳೆ, 17ರ ಹುಡುಗನ ಲವ್ ಸ್ಟೋರಿ; ಆಂಟಿ ಎಸ್ಕೇಪ್, ಪೋರ ಲಾಕ್

Aunty Love Case: ಸಮಾಜ ಎತ್ತ ಸಾಗುತ್ತಿದೆ ಎಂದು ಕೆಲವು ಘಟನೆಗಳು ನಮ್ಮನ್ನು ಪ್ರಶ್ನಿಸುವಂತೆ ಮಾಡುತ್ತವೆ. ಅದರಲ್ಲೂ ಅನೈತಿಕ ಸಂಬಂಧಗಳು ಮತ್ತು ಅವು ಸೃಷ್ಟಿಸುವ ಭಯಾನಕ ಸನ್ನಿವೇಶಗಳ ಬಗ್ಗೆ ಹೇಳಬೇಕಾಗಿಲ್ಲ. ಇತ್ತೀಚೆಗೆ ಇಂತಹ ಒಂದು ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.

Read Full Story

02:44 PM (IST) Feb 07

ಭಾರತ ಸೋಲಿಸುವುದಿರಲಿ, ಕ್ರಿಕೆಟ್ ಶಿಶು ನೆದರ್‌ಲೆಂಡ್‌ ಎದುರು ಪರದಾಡಿ ಗೆದ್ದ ಪಾಕಿಸ್ತಾನ!

2026ರ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ, ನೆದರ್‌ಲೆಂಡ್‌ ನೀಡಿದ 148 ರನ್‌ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ, ಕೊನೆಯಲ್ಲಿ ಫಾಹೀಮ್ ಅಶ್ರಫ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 3 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. 

Read Full Story

02:18 PM (IST) Feb 07

ಬಾವಿಯ ಅಂಚಿನಲ್ಲಿ ನಿಂತು ಮಕ್ಕಳೊಂದಿಗೆ ಸೊಂಟ ಬಳುಕಿಸಿದ ಡೇಂಜರ್ ಮಮ್ಮಿ - ವೈರಲ್ ವಿಡಿಯೋ

ಸೋಶಿಯಲ್ ಮೀಡಿಯಾ ಲೈಕ್ಸ್‌ಗಾಗಿ ಮಹಿಳೆಯೊಬ್ಬಳು ತನ್ನ ಮಕ್ಕಳನ್ನು ಬಾವಿಯ ಅಂಚಿನಲ್ಲಿ ನಿಲ್ಲಿಸಿ ಅಪಾಯಕಾರಿ ರೀಲ್ಸ್ ಮಾಡಿದ್ದಾಳೆ. ಈ ವಿಡಿಯೋ ವೈರಲ್ ಆಗಿದ್ದು, ಐಪಿಎಸ್‌ ಅಧಿಕಾರಿಯೊಬ್ಬರು ಸೇರಿದಂತೆ ಸಾರ್ವಜನಿಕರು ಆಕೆಯ ಹುಚ್ಚುತನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬಂಧನಕ್ಕೆ ಆಗ್ರಹಿಸಿದ್ದಾರೆ.
Read Full Story

02:11 PM (IST) Feb 07

ಅ19 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಭರ್ಜರಿ ಗಿಫ್ಟ್, 7.5 ಕೋಟಿ ರೂ ನಗದು ಬಹುಮಾನ

ಅ19 ವಿಶ್ವಕಪ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ ಭರ್ಜರಿ ಗಿಫ್ಟ್, ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿದ ಭಾರತ 6ನೇ ಟ್ರೋಫಿ ಗೆದ್ದುಕೊಂಡು ದಾಖಲೆ ಬರೆದಿದೆ. ಈ ಸಾಧನೆಗೆ ಬಿಸಿಸಿಐ ಉಡುಗೊರೆ ನೀಡಿದೆ.

 

Read Full Story

02:06 PM (IST) Feb 07

ಸಂಜು ಇನ್, ರಿಂಕು ಔಟ್ - ಟಿ20 ವಿಶ್ವಕಪ್‌ಗೆ ಭಾರತದ ಪ್ಲೇಯಿಂಗ್ 11 ಆಯ್ಕೆ ಮಾಡಿದ ಇರ್ಫಾನ್ ಪಠಾಣ್!

ಟಿ20 ವಿಶ್ವಕಪ್‌ಗೆ ಭಾರತದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಅನ್ನು ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಆಯ್ಕೆ ಮಾಡಿದ್ದಾರೆ. ಅಚ್ಚರಿಯೆಂದರೆ, ಸಂಜು ಸ್ಯಾಮ್ಸನ್‌ಗೆ ತಂಡದಲ್ಲಿ ಸ್ಥಾನ ನೀಡಿದ್ದು, ಫಿನಿಶರ್ ರಿಂಕು ಸಿಂಗ್‌ರನ್ನು ಕೈಬಿಟ್ಟಿದ್ದಾರೆ. ಪಠಾಣ್ ಆಯ್ಕೆ ಮಾಡಿದ ತಂಡ ಇಲ್ಲಿದೆ ನೋಡಿ.

Read Full Story

01:52 PM (IST) Feb 07

ಸ್ಲಮ್ ಮಕ್ಕಳ ಬಾಳಲ್ಲಿ ಬಣ್ಣ ತುಂಬಿದ ಕಲಾವಿದೆ - 1 ಮಿಲಿಯನ್ ಡಾಲರ್ ಮೊತ್ತದ ಜಾಗತಿಕ ಶಿಕ್ಷಕಿ ಪ್ರಶಸ್ತಿ ಗೆದ್ದ ರೂಬೆಲ್ ನಾಗ್

ಭಾರತೀಯ ಚಿತ್ರಕಲಾವಿದೆ ಮತ್ತು ಸಮಾಜ ಸುಧಾರಕಿ ರೂಬಲ್ ನಾಗಿ ಅವರು, ಸ್ಲಮ್‌ಗಳನ್ನು ಕಲಾತ್ಮಕವಾಗಿ ಪರಿವರ್ತಿಸಿ ಅಲ್ಲಿನ ಮಕ್ಕಳಿಗೆ ಶಿಕ್ಷಣ ನೀಡಿದ ಸೇವೆಗಾಗಿ ಪ್ರತಿಷ್ಠಿತ ಜಾಗತಿಕ ಶಿಕ್ಷಕ ಪ್ರಶಸ್ತಿ 2026 ಅನ್ನು ಪಡೆದಿದ್ದಾರೆ.

Read Full Story

12:46 PM (IST) Feb 07

ಟಿ20 ವಿಶ್ವಕಪ್‌ನಲ್ಲಿ 17 ವರ್ಷವಾದ್ರೂ ಈ ದಾಖಲೆ ಮುರಿಯಲು ಯಾರಿಗೂ ಸಾಧ್ಯವಾಗಿಲ್ಲ! ಈ ಸಲ ಬ್ರೇಕ್ ಆಗುತ್ತಾ?

2007ರ ಚೊಚ್ಚಲ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡವು ಕೀನ್ಯಾ ವಿರುದ್ಧ 260 ರನ್ ಗಳಿಸಿತ್ತು, ಇದು ಇಂದಿಗೂ ಟೂರ್ನಿಯ ಇತಿಹಾಸದಲ್ಲಿ ಅತಿಹೆಚ್ಚು ಸ್ಕೋರ್ ಆಗಿದೆ. ಸನತ್ ಜಯಸೂರ್ಯ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಸಾಧ್ಯವಾಯಿತು. ಈ ದಾಖಲೆ ಇದುವರೆಗೂ ಬ್ರೇಕ್ ಆಗಿಲ್ಲ. 

Read Full Story

12:38 PM (IST) Feb 07

Bachchan Family Asset - ಗಂಡ, ಮಾವ, ಅತ್ತೆಗಿಂತ ಎಷ್ಟು ಶ್ರೀಮಂತೆ ಐಶ್ವರ್ಯಾ ರೈ ಬಚ್ಚನ್ ?

ಕೆಲವು ವರದಿಗಳ ಪ್ರಕಾರ, ಐಶ್ವರ್ಯಾ ರೈ ಬಚ್ಚನ್ ತಮ್ಮ ಮಾವ ಅಮಿತಾಭ್, ಅತ್ತೆ ಜಯಾ ಮತ್ತು ಪತಿ ಅಭಿಷೇಕ್‌ಗಿಂತಲೂ ಹೆಚ್ಚು ಶ್ರೀಮಂತರಾಗಿದ್ದಾರೆ. ಈ ನಾಲ್ವರ ಒಟ್ಟು ಆಸ್ತಿ ಮೌಲ್ಯದ ಮಾಹಿತಿ ಇಲ್ಲಿದೆ.

Read Full Story

12:31 PM (IST) Feb 07

ಮುಂದಿನ 2 ವರ್ಷ ಭಾರತದಲ್ಲಿ ಚಿನ್ನ ಬೆಳ್ಳಿ ಅಲ್ಲ ಈ ಲೋಹದ ಬೆಲೆ ಡಬಲ್, ICRA ವರದಿ

ಮುಂದಿನ 2 ವರ್ಷ ಭಾರತದಲ್ಲಿ ಚಿನ್ನ ಬೆಳ್ಳಿ ಅಲ್ಲ ಈ ಲೋಹದ ಬೆಲೆ ಡಬಲ್, ICRA ವರದಿ ನೀಡಿದೆ. ಈ ಲೋಹಕ್ಕೆ ಬಾರಿ ಬೇಡಿಕೆ ವ್ಯಕ್ತವಾಗಲಿದೆ. ಹೂಡಿಕೆ ದೃಷ್ಟಿಯಿಂದಲೂ ಈ ಲೋಹ ಉತ್ತಮ ಆಯ್ಕೆಯಾಗಿದೆ.

 

Read Full Story

12:15 PM (IST) Feb 07

ಇಂದಿನಿಂದ ಟಿ20 ವಿಶ್ವಕಪ್‌ - ಹಾಲಿ ಚಾಂಪಿಯನ್‌ ಭಾರತಕ್ಕೆ ಶುಭಾರಂಭ ನಿರೀಕ್ಷೆ, ಆದ್ರೆ ಸೂರ್ಯ ಪಡೆಗೆ ಆರಂಭದಲ್ಲೇ ವಿಘ್ನ

2026ರ ಟಿ20 ವಿಶ್ವಕಪ್‌ನಲ್ಲಿ ಭಾರತವು ಅಮೆರಿಕ ವಿರುದ್ಧ ತನ್ನ ಅಭಿಯಾನ ಆರಂಭಿಸಲಿದೆ. ಸತತ ಎರಡು ಬಾರಿ ಟ್ರೋಫಿ ಗೆದ್ದು ದಾಖಲೆ ಬರೆಯುವ ಗುರಿ ಹೊಂದಿರುವ ಭಾರತಕ್ಕೆ, ಆರಂಭಿಕ ಪಂದ್ಯದಲ್ಲಿ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಜ್ವರದಿಂದಾಗಿ ಅಲಭ್ಯರಾಗುವ ಸಾಧ್ಯತೆಯಿದೆ.
Read Full Story

11:53 AM (IST) Feb 07

ಸ್ಟಾರ್ ಕ್ರಿಕೆಟಿಗ ಟಿ20 ವಿಶ್ವಕಪ್‌ನಿಂದ ಔಟ್; DSP ಸಿರಾಜ್‌ಗೆ ಬುಲಾವ್! ಇದರ ನಡುವೆ ಮಾರಕ ವೇಗಿಗೆ ಜ್ವರ!

ಬೆಂಗಳೂರು: 10ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಸ್ಟಾರ್ ವೇಗಿ ಹರ್ಷಿತ್ ರಾಣಾ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಸಿರಾಜ್‌ ತಂಡ ಕೂಡಿಕೊಂಡಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ.

 

Read Full Story

11:47 AM (IST) Feb 07

T20 World Cup - ಟೀಮ್ ಇಂಡಿಯಾಗೆ ಶಾಕಿಂಗ್ ನ್ಯೂಸ್; ಮೊದಲ ಪಂದ್ಯದಿಂದ ಪ್ರಮುಖ ಆಟಗಾರ ಔಟ್

ಐಸಿಸಿ ಟಿ20 ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಭಾರತವು ಅಮೆರಿಕವನ್ನು ಎದುರಿಸಲಿದೆ. ಆದರೆ, ವೈರಲ್ ಜ್ವರದಿಂದಾಗಿ ಪ್ರಮುಖ ವೇಗದ ಬೌಲರ್ ಈ ಪಂದ್ಯಕ್ಕೆ ಅಲಭ್ಯರಾಗುವ ಸಾಧ್ಯತೆಯಿದೆ. ಹರ್ಷಿತ್ ರಾಣಾ ಗಾಯದಿಂದ ಹೊರಗುಳಿದಿದ್ದು, ತಂಡವು ಫಿಟ್‌ನೆಸ್ ಸಮಸ್ಯೆಗಳನ್ನು ಎದುರಿಸುತ್ತಿದೆ.

Read Full Story

10:14 AM (IST) Feb 07

PPF Savings Plan - ದಿನಕ್ಕೆ ಕೇವಲ 300 ರೂ. ಉಳಿಸಿ, 40 ಲಕ್ಷ ರೂ. ನಿಮ್ಮದಾಗಿಸಿಕೊಳ್ಳಿ!

ಸಂಪಾದನೆಯಲ್ಲಿ ಸ್ವಲ್ಪವಾದರೂ ಉಳಿತಾಯ ಮಾಡಬೇಕು ಅಂತಾರೆ ಆರ್ಥಿಕ ತಜ್ಞರು. ಸಣ್ಣ ಸಣ್ಣ ಹೂಡಿಕೆಗಳೇ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಲಾಭ ತಂದುಕೊಡುತ್ತವೆ. ಅಂತಹ ಒಂದು ಬೆಸ್ಟ್ ಸೇವಿಂಗ್ ಸ್ಕೀಮ್, ಅಂದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF) ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
Read Full Story

10:11 AM (IST) Feb 07

Owaisi - 'ಮಿಯಾ ಮುಸ್ಲಿಂ' ಹೇಳಿಕೆಗೆ ಹಿಮಂತ ಶರ್ಮಗೆ 2 ರೂಪಾಯಿ ಆಫರ್ ಕೊಟ್ಟ ಓವೈಸಿ!

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ 'ಮಿಯಾ ಮುಸ್ಲಿಂ' ಹೇಳಿಕೆಗೆ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರಿಗೆ 'ಎರಡು ರೂಪಾಯಿ' ಆಫರ್ ನೀಡಿ ಅಣಕವಾಡಿದ್ದಾರೆ.

Read Full Story

09:21 AM (IST) Feb 07

ವೃತ್ತಿಜೀವನದ ಆರಂಭದಲ್ಲೇ ಚಿರಂಜೀವಿಗೆ ಮೋಸ ಮಾಡಿದ್ದ ನಿರ್ಮಾಪಕ! ಆಗ ಮೆಗಾಸ್ಟಾರ್ ತಂದೆ ಮಾಡಿದ್ದೇನು?

ಮೆಗಾಸ್ಟಾರ್ ಚಿರಂಜೀವಿ ಅವರ ವೃತ್ತಿಜೀವನದ ಆರಂಭದಲ್ಲಿ ನಿರ್ಮಾಪಕರೊಬ್ಬರು ಮೋಸ ಮಾಡಿದ್ದರು. ಕಾರ್ ಕೊಡುತ್ತೇನೆ ಎಂದು ಮಾತು ತಪ್ಪಿದ್ದರು. ಇದರಿಂದ ಬೇಸರಗೊಂಡ ಚಿರಂಜೀವಿಗೆ, ಅವರ ತಂದೆ ಮರೆಯಲಾಗದ ಉಡುಗೊರೆ ನೀಡಿದ್ದರು.
Read Full Story

08:52 AM (IST) Feb 07

ಕನಸಲ್ಲಿ ದುಡ್ಡು ಕಂಡ್ರೆ ಏನರ್ಥ? ಈ ಆರು ರೀತಿಯ ಹಣದ ಕನಸುಗಳ ಬಗ್ಗೆ ಸ್ವಪ್ನ ಶಾಸ್ತ್ರ ಹೇಳೋದೇನು?

ಹಣ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ದುಡ್ಡು ಬೇಕು, ಅದಕ್ಕಾಗಿಯೇ ಹಗಲಿರುಳು ದುಡಿಯುತ್ತಾರೆ. ಕೆಲವೊಮ್ಮೆ ಇದೇ ಹಣ ಕನಸಿನಲ್ಲೂ ಕಾಣಿಸಿಕೊಳ್ಳುತ್ತೆ. ಹಾಗಾದ್ರೆ ಕನಸಲ್ಲಿ ಹಣ ಕಂಡ್ರೆ ಏನರ್ಥ? ಇದು ಶುಭವೋ ಅಶುಭವೋ? ಸ್ವಪ್ನ ಶಾಸ್ತ್ರ ಹೇಳೋದೇನು?

Read Full Story

07:42 AM (IST) Feb 07

Tirupati Laddu - ತಿರುಪತಿ ಲಡ್ಡುಗೆ ಪ್ರಾಣಿ ಕೊಬ್ಬು, ಕೆಮಿಕಲ್ಸ್ ಬೆರೆಸಲಾಗಿದೆ; SIT ವರದಿಯಲ್ಲಿ ಬಯಲು!

ತಿರುಪತಿ ಲಡ್ಡು ಬೆರಕೆ ಪ್ರಕರಣದ ಕುರಿತು ಎಸ್‌ಐಟಿ ನಡೆಸಿದ ತನಿಖೆಯಲ್ಲಿ ರಾಸಾಯನಿಕ ಮತ್ತು ಪ್ರಾಣಿಗಳ ಕೊಬ್ಬು ಬೆರೆಸಿರುವ ಬಗ್ಗೆ ಸಾಕ್ಷ್ಯ ಸಿಕ್ಕಿದೆ ಎಂದು ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ. ಎನ್‌ಡಿಡಿಬಿ ವರದಿಯನ್ನು ಉಲ್ಲೇಖಿಸಿ ಅವರು ಈ ಮಾಹಿತಿ ನೀಡಿದ್ದಾರೆ. ವರದಿಯಲ್ಲೇನಿದೆ?

Read Full Story

07:23 AM (IST) Feb 07

BK Hariprasad ಬಿಜೆಪಿಯವರು ಮಹಾತ್ಮ ಗಾಂಧಿ ವಿರೋಧಿಗಳು - ಕಾಂಗ್ರೆಸ್ ನಾಯಕ ಗಂಭೀರ ಆರೋಪ

ಬಿಜೆಪಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಾಹೀರಾತಿನ ಮೂಲಕ ಸುಳ್ಳನ್ನು ಸತ್ಯ ಮಾಡಲು ಹೊರಟಿದೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ಮನಮೋಹನ್ ಸಿಂಗ್ ಕಾಲದ ಮನರೇಗಾ ಯೋಜನೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದು, ಗಾಂಧೀಜಿಯ ಸಿದ್ಧಾಂತ ಕೊಲ್ಲಲು ಬಿಜೆಪಿ ಮುಂದಾಗಿದೆ ಎಂದು ಟೀಕೆ.

Read Full Story

More Trending News