LIVE NOW
Published : Feb 07, 2026, 06:36 AM ISTUpdated : Feb 07, 2026, 09:21 AM IST

India Latest News Live: ವೃತ್ತಿಜೀವನದ ಆರಂಭದಲ್ಲೇ ಚಿರಂಜೀವಿಗೆ ಮೋಸ ಮಾಡಿದ್ದ ನಿರ್ಮಾಪಕ! ಆಗ ಮೆಗಾಸ್ಟಾರ್ ತಂದೆ ಮಾಡಿದ್ದೇನು?

ಸಾರಾಂಶ

ಢಾಕಾ: ಬಾಂಗ್ಲಾದೇಶದ ಹಂಗಾಮಿ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನಸ್‌ ಮನೆ ಎದುರು ಶುಕ್ರವಾರ ನೂರಾರು ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಮತ್ತು ಅಧಿಕಾರಿಗಳು ಜಮಾಯಿಸಿ ಯೂನಸ್‌ ವಿರುದ್ಧ ಪ್ರತಿಭಟನೆ ನಡೆಸಿದರು. ಪರಿಣಾಮ ಭದ್ರತಾ ಸಿಬ್ಬಂದಿ ಜೊತೆ ಸಂಘರ್ಷದಲ್ಲಿ 15 ಮಂದಿ ತೀವ್ರವಾಗಿ ಗಾಯಗೊಂಡರು.

ಬಾಂಗ್ಲಾ ಸರ್ಕಾರಿ ನೌಕರರಿಗೆ 7ನೇ ರಾಷ್ಟ್ರೀಯ ವೇತನ ಶ್ರೇಣಿಯನ್ನು ಜಾರಿಗೊಳಿಸಬೇಕೆಂದು ಢಾಕಾದ ಜಮುನಾದಲ್ಲಿರುವ ಯೂನಸ್‌ ಅಧಿಕೃತ ನಿವಾಸಕ್ಕೆ ನೌಕರರು ಮುತ್ತಿಗೆ ಹಾಕಿದರು. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಜನರನ್ನು ಹತ್ತಿಕ್ಕಲು ಯತ್ನಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಸಿಡಿಸಿದ್ದಾರೆ. ಇದರಿಂದ 15 ಜನರು ಗಾಯಗೊಂಡಿದ್ದಾರೆ.

09:21 AM (IST) Feb 07

ವೃತ್ತಿಜೀವನದ ಆರಂಭದಲ್ಲೇ ಚಿರಂಜೀವಿಗೆ ಮೋಸ ಮಾಡಿದ್ದ ನಿರ್ಮಾಪಕ! ಆಗ ಮೆಗಾಸ್ಟಾರ್ ತಂದೆ ಮಾಡಿದ್ದೇನು?

ಮೆಗಾಸ್ಟಾರ್ ಚಿರಂಜೀವಿ ಅವರ ವೃತ್ತಿಜೀವನದ ಆರಂಭದಲ್ಲಿ ನಿರ್ಮಾಪಕರೊಬ್ಬರು ಮೋಸ ಮಾಡಿದ್ದರು. ಕಾರ್ ಕೊಡುತ್ತೇನೆ ಎಂದು ಮಾತು ತಪ್ಪಿದ್ದರು. ಇದರಿಂದ ಬೇಸರಗೊಂಡ ಚಿರಂಜೀವಿಗೆ, ಅವರ ತಂದೆ ಮರೆಯಲಾಗದ ಉಡುಗೊರೆ ನೀಡಿದ್ದರು.
Read Full Story

08:52 AM (IST) Feb 07

ಕನಸಲ್ಲಿ ದುಡ್ಡು ಕಂಡ್ರೆ ಏನರ್ಥ? ಈ ಆರು ರೀತಿಯ ಹಣದ ಕನಸುಗಳ ಬಗ್ಗೆ ಸ್ವಪ್ನ ಶಾಸ್ತ್ರ ಹೇಳೋದೇನು?

ಹಣ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ? ಪ್ರತಿಯೊಬ್ಬರಿಗೂ ದುಡ್ಡು ಬೇಕು, ಅದಕ್ಕಾಗಿಯೇ ಹಗಲಿರುಳು ದುಡಿಯುತ್ತಾರೆ. ಕೆಲವೊಮ್ಮೆ ಇದೇ ಹಣ ಕನಸಿನಲ್ಲೂ ಕಾಣಿಸಿಕೊಳ್ಳುತ್ತೆ. ಹಾಗಾದ್ರೆ ಕನಸಲ್ಲಿ ಹಣ ಕಂಡ್ರೆ ಏನರ್ಥ? ಇದು ಶುಭವೋ ಅಶುಭವೋ? ಸ್ವಪ್ನ ಶಾಸ್ತ್ರ ಹೇಳೋದೇನು?

Read Full Story

07:42 AM (IST) Feb 07

Tirupati Laddu - ತಿರುಪತಿ ಲಡ್ಡುಗೆ ಪ್ರಾಣಿ ಕೊಬ್ಬು, ಕೆಮಿಕಲ್ಸ್ ಬೆರೆಸಲಾಗಿದೆ; SIT ವರದಿಯಲ್ಲಿ ಬಯಲು!

ತಿರುಪತಿ ಲಡ್ಡು ಬೆರಕೆ ಪ್ರಕರಣದ ಕುರಿತು ಎಸ್‌ಐಟಿ ನಡೆಸಿದ ತನಿಖೆಯಲ್ಲಿ ರಾಸಾಯನಿಕ ಮತ್ತು ಪ್ರಾಣಿಗಳ ಕೊಬ್ಬು ಬೆರೆಸಿರುವ ಬಗ್ಗೆ ಸಾಕ್ಷ್ಯ ಸಿಕ್ಕಿದೆ ಎಂದು ಕೇಂದ್ರ ಸಚಿವ ರಾಮ್ ಮೋಹನ್ ನಾಯ್ಡು ಹೇಳಿದ್ದಾರೆ. ಎನ್‌ಡಿಡಿಬಿ ವರದಿಯನ್ನು ಉಲ್ಲೇಖಿಸಿ ಅವರು ಈ ಮಾಹಿತಿ ನೀಡಿದ್ದಾರೆ. ವರದಿಯಲ್ಲೇನಿದೆ?

Read Full Story

07:23 AM (IST) Feb 07

BK Hariprasad ಬಿಜೆಪಿಯವರು ಮಹಾತ್ಮ ಗಾಂಧಿ ವಿರೋಧಿಗಳು - ಕಾಂಗ್ರೆಸ್ ನಾಯಕ ಗಂಭೀರ ಆರೋಪ

ಬಿಜೆಪಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಜಾಹೀರಾತಿನ ಮೂಲಕ ಸುಳ್ಳನ್ನು ಸತ್ಯ ಮಾಡಲು ಹೊರಟಿದೆ ಎಂದು ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ. ಮನಮೋಹನ್ ಸಿಂಗ್ ಕಾಲದ ಮನರೇಗಾ ಯೋಜನೆಯನ್ನು ಬುಡಮೇಲು ಮಾಡಲು ಯತ್ನಿಸುತ್ತಿದ್ದು, ಗಾಂಧೀಜಿಯ ಸಿದ್ಧಾಂತ ಕೊಲ್ಲಲು ಬಿಜೆಪಿ ಮುಂದಾಗಿದೆ ಎಂದು ಟೀಕೆ.

Read Full Story

More Trending News