LIVE NOW
Published : Jul 04, 2026, 06:21 AM ISTUpdated : Jul 04, 2026, 10:00 AM IST

India Latest News Live: ಸೋಮನಾಥ ದೇಗುಲದ ಬಗ್ಗೆ ಕನ್ನಡಿಗನ ಹೃದಯಸ್ಪರ್ಶಿ ಪತ್ರಕ್ಕೆ ಪ್ರಧಾನಿ ಮೋದಿ ಅವರಿಂದ ಅಚ್ಚರಿಯ ಉತ್ತರ!

ಸಾರಾಂಶ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮೊದಲು ನಡೆಯಲಿದೆ ಎನ್ನಲಾಗಿದ್ದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಆಗಬಹುದು. ಅಧಿವೇಶನ ಮುಗಿದ ಬಳಿಕ ನಡೆಯಬಹುದು ಎಂದು ಮೂಲಗಳು ಹೇಳಿವೆ. ಜು.20ರಿಂದ ಅಧಿವೇಶನ ನಡೆವ ನಿರೀಕ್ಷೆ ಇದ್ದು, ಮಹತ್ವದ ಮಸೂದೆ ಮಂಡನೆ ಆಗಲಿವೆ. ಸರ್ಕಾರ ಅದರ ಕಡೆ ಗಮನ ಹರಿಸಿರುವ ಕಾರಣ ಸಂಪುಟ ಪುನಾರಚನೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

Prime minister Narendra Modi reply to Kannadiga  AK Das Letters about Somanath Temple

10:00 AM (IST) Jul 04

ಸೋಮನಾಥ ದೇಗುಲದ ಬಗ್ಗೆ ಕನ್ನಡಿಗನ ಹೃದಯಸ್ಪರ್ಶಿ ಪತ್ರಕ್ಕೆ ಪ್ರಧಾನಿ ಮೋದಿ ಅವರಿಂದ ಅಚ್ಚರಿಯ ಉತ್ತರ!

ಬೆಂಗಳೂರಿನ ಕನ್ನಡಿಗ ಎ.ಕೆ. ದಾಸ್ ಅವರು ಸೋಮನಾಥ ಮಂದಿರ ಪುನರ್ನಿರ್ಮಾಣದ 75ನೇ ವರ್ಷದ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಸೋಮನಾಥದ ಪರಂಪರೆಯನ್ನು ಶ್ಲಾಘಿಸಿ, ಇದು ರಾಷ್ಟ್ರೀಯ ಪುನರುತ್ಥಾನದ ಸಂಕೇತವೆಂದು ಬಣ್ಣಿಸಿದ್ದಾರೆ 

Read Full Story

09:36 AM (IST) Jul 04

ಮೊಬೈಲ್‌ಗಿರೋ ನಾಲ್ಕು ಕ್ಯಾಮೆರಾಗಳ ಪ್ರಯೋಜನ ಏನು? 99% ಜನರಿಗೆ ಈ ವಿಷಯ ಗೊತ್ತಿಲ್ಲ

ಸ್ಮಾರ್ಟ್‌ಫೋನ್‌ಗಳಲ್ಲಿರುವ ಬಹು ಕ್ಯಾಮೆರಾಗಳು ಒಂದೇ ಸಮಯದಲ್ಲಿ ಫೋಟೋ ಕ್ಲಿಕ್ ಮಾಡುವುದಿಲ್ಲ. ಮೂರು ಅಥವಾ ನಾಲ್ಕು ಕ್ಯಾಮೆರಾಗಳು ಇದು ವಿವಿಧ ಸನ್ನಿವೇಶಗಳಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗುತ್ತದೆ.

Read Full Story

08:58 AM (IST) Jul 04

2118ನೇ ಇಸವಿಯಿಂದ ಬಂದನೆಂದು ಹೇಳಿಕೊಳ್ಳುವ ಯುವಕನ ಕಥೆ; ಆಘಾತಕಾರಿ ನೋವಾ ಭವಿಷ್ಯವಾಣಿ

ApexTV ಯೂಟ್ಯೂಬ್ ಚಾನೆಲ್‌ನಲ್ಲಿ, 2118ರಿಂದ ಬಂದ 'ನೋವಾ' ಎಂಬ ಯುವಕ ಮೂರನೇ ಮಹಾಯುದ್ಧ ಮತ್ತು ಭವಿಷ್ಯದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾನೆ. ಆದರೆ, ವಿಜ್ಞಾನಿಗಳು ಮತ್ತು ತಜ್ಞರು ಆತನ ಸಾಕ್ಷ್ಯಗಳನ್ನು ಪ್ರಶ್ನಿಸಿ, ಇದು ಗಮನ ಸೆಳೆಯಲು ಸೃಷ್ಟಿಸಿದ ಕಥೆಯಾಗಿರಬಹುದು ಎಂದು ವಿಶ್ಲೇಷಿಸಿದ್ದಾರೆ. 

Read Full Story

06:30 AM (IST) Jul 04

ಇಂದಿನಿಂದ 6 ದಿನ ಆಯತೋಲ್ಲ ಖಮೇನಿ ಅಂತ್ಯಕ್ರಿಯೆ; ಭಾರತ ಸೇರಿ 90 ದೇಶಗಳ ಉಪಸ್ಥಿತಿ

ಫೆ.28ರಂದು ಅಮೆರಿಕ-ಇಸ್ರೇಲ್‌ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲ ಅಲಿ ಖಮೇನಿ ಅವರ ಅಂತ್ಯಕ್ರಿಯೆಯು ಸುಮಾರು 4 ತಿಂಗಳ ನಂತರ 6 ದಿನಗಳ ಕಾಲ ನಡೆಯಲಿದೆ. ಟೆಹ್ರಾನ್‌, ಕೋಂ, ಮತ್ತು ಇರಾಕ್‌ನ ಪವಿತ್ರ ನಗರಗಳಲ್ಲಿ ಮೆರವಣಿಗೆ ನಡೆದು, ಮಶಾದ್‌ನಲ್ಲಿ ಸಮಾಧಿ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ 90 ದೇಶಗಳ ನಿಯೋಗಗಳು ಭಾಗವಹಿಸಲಿವೆ.
Read Full Story

More Trending News