ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮೊದಲು ನಡೆಯಲಿದೆ ಎನ್ನಲಾಗಿದ್ದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಆಗಬಹುದು. ಅಧಿವೇಶನ ಮುಗಿದ ಬಳಿಕ ನಡೆಯಬಹುದು ಎಂದು ಮೂಲಗಳು ಹೇಳಿವೆ. ಜು.20ರಿಂದ ಅಧಿವೇಶನ ನಡೆವ ನಿರೀಕ್ಷೆ ಇದ್ದು, ಮಹತ್ವದ ಮಸೂದೆ ಮಂಡನೆ ಆಗಲಿವೆ. ಸರ್ಕಾರ ಅದರ ಕಡೆ ಗಮನ ಹರಿಸಿರುವ ಕಾರಣ ಸಂಪುಟ ಪುನಾರಚನೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

10:00 AM (IST) Jul 04
ಬೆಂಗಳೂರಿನ ಕನ್ನಡಿಗ ಎ.ಕೆ. ದಾಸ್ ಅವರು ಸೋಮನಾಥ ಮಂದಿರ ಪುನರ್ನಿರ್ಮಾಣದ 75ನೇ ವರ್ಷದ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಸೋಮನಾಥದ ಪರಂಪರೆಯನ್ನು ಶ್ಲಾಘಿಸಿ, ಇದು ರಾಷ್ಟ್ರೀಯ ಪುನರುತ್ಥಾನದ ಸಂಕೇತವೆಂದು ಬಣ್ಣಿಸಿದ್ದಾರೆ
09:36 AM (IST) Jul 04
ಸ್ಮಾರ್ಟ್ಫೋನ್ಗಳಲ್ಲಿರುವ ಬಹು ಕ್ಯಾಮೆರಾಗಳು ಒಂದೇ ಸಮಯದಲ್ಲಿ ಫೋಟೋ ಕ್ಲಿಕ್ ಮಾಡುವುದಿಲ್ಲ. ಮೂರು ಅಥವಾ ನಾಲ್ಕು ಕ್ಯಾಮೆರಾಗಳು ಇದು ವಿವಿಧ ಸನ್ನಿವೇಶಗಳಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗುತ್ತದೆ.
08:58 AM (IST) Jul 04
ApexTV ಯೂಟ್ಯೂಬ್ ಚಾನೆಲ್ನಲ್ಲಿ, 2118ರಿಂದ ಬಂದ 'ನೋವಾ' ಎಂಬ ಯುವಕ ಮೂರನೇ ಮಹಾಯುದ್ಧ ಮತ್ತು ಭವಿಷ್ಯದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾನೆ. ಆದರೆ, ವಿಜ್ಞಾನಿಗಳು ಮತ್ತು ತಜ್ಞರು ಆತನ ಸಾಕ್ಷ್ಯಗಳನ್ನು ಪ್ರಶ್ನಿಸಿ, ಇದು ಗಮನ ಸೆಳೆಯಲು ಸೃಷ್ಟಿಸಿದ ಕಥೆಯಾಗಿರಬಹುದು ಎಂದು ವಿಶ್ಲೇಷಿಸಿದ್ದಾರೆ.
06:30 AM (IST) Jul 04