Published : Jul 04, 2026, 06:21 AM ISTUpdated : Jul 04, 2026, 10:42 PM IST

India Latest News Live: ವೈಭವ್ ಡೆಬ್ಯೂ ದಾಖಲೆ ಬರೆದರೂ ಸಿಗಲಿಲ್ಲ ಗೆಲುವು, ಐರ್ಲೆಂಡ್ ಬಳಿಕ ಇಂಗ್ಲೆಂಡ್‌ನಲ್ಲಿ ಮಂದುವರಿದ ಸೋಲು

ಸಾರಾಂಶ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮೊದಲು ನಡೆಯಲಿದೆ ಎನ್ನಲಾಗಿದ್ದ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಆಗಬಹುದು. ಅಧಿವೇಶನ ಮುಗಿದ ಬಳಿಕ ನಡೆಯಬಹುದು ಎಂದು ಮೂಲಗಳು ಹೇಳಿವೆ. ಜು.20ರಿಂದ ಅಧಿವೇಶನ ನಡೆವ ನಿರೀಕ್ಷೆ ಇದ್ದು, ಮಹತ್ವದ ಮಸೂದೆ ಮಂಡನೆ ಆಗಲಿವೆ. ಸರ್ಕಾರ ಅದರ ಕಡೆ ಗಮನ ಹರಿಸಿರುವ ಕಾರಣ ಸಂಪುಟ ಪುನಾರಚನೆ ಮುಂದೂಡಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.

Team India

10:42 PM (IST) Jul 04

ವೈಭವ್ ಡೆಬ್ಯೂ ದಾಖಲೆ ಬರೆದರೂ ಸಿಗಲಿಲ್ಲ ಗೆಲುವು, ಐರ್ಲೆಂಡ್ ಬಳಿಕ ಇಂಗ್ಲೆಂಡ್‌ನಲ್ಲಿ ಮಂದುವರಿದ ಸೋಲು

ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿ ದಾಖಲೆ ಬರೆದಿದ್ದಾರೆ. ಆದರೆ ಇಂಗ್ಲೆಂಡ್ ವಿರುದ್ಧ 2ನೇ ಟಿ20ಯಲ್ಲಿ ಭಾರತಕ್ಕೆ ಗೆಲುವು ಸಿಗಲಿಲ್ಲ. ಐರ್ಲೆಂಡ್ ವಿರುದ್ಧ ಸರಣಿ ಸೋತ ಭಾರತ ಇದೀಗ ಇಂಗ್ಲೆಂಡ್ ವಿರುದ್ದ 2ನೇ ಪಂದ್ಯದಲ್ಲಿ ಮುಗ್ಗರಿಸಿದೆ.

Read Full Story

10:24 PM (IST) Jul 04

ಗರ್ಭಿಣಿಯಾಗಿದ್ದರೂ ನಟನೆಯಿಂದ ಹಿಂದೆ ಸರಿಯದ ಸಮಂತಾ - ಹೊಸ ಪ್ರಾಜೆಕ್ಟ್‌ಗೆ ಗ್ರೀನ್ ಸಿಗ್ನಲ್!

ನಟಿ ಸಮಂತಾ ರುತ್ ಪ್ರಭು ಇತ್ತೀಚೆಗೆ 'ಮಾ ಇಂಟಿ ಬಂಗಾರಂ' ಚಿತ್ರದ ಮೂಲಕ ಭರ್ಜರಿ ಯಶಸ್ಸು ಕಂಡಿದ್ದಾರೆ. ಇದೀಗ ಅವರು ತಮ್ಮ ಹೊಸ ಪಯಣವನ್ನು ಆರಂಭಿಸಿದ್ದು, ಈ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.

Read Full Story

10:02 PM (IST) Jul 04

33 ವರ್ಷದ ಮಗನ ಮುಂದೆ 3ನೇ ಮದುವೆ ಬಗ್ಗೆ ಮಾತಾಡಿದ Aamir Khan; ಮುಜುಗರವೋ, ವ್ಯಂಗ್ಯವೋ? ಕಿಸಕ್ಕನೆ ನಕ್ಕ ಪುತ್ರ

Aamir Khan gauri spratt marriage: ಆಮೀರ್ ಖಾನ್ 59ನೇ ವಯಸ್ಸಿನಲ್ಲಿ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ. ಈಗಾಗಲೇ ಎರಡು ಮದುವೆಗಳು ಮುರಿದುಬಿದ್ದಿದ್ದು, ಈಗ ಮೂರನೇ ಮದುವೆಗೆ ದಿನಾಂಕ ನಿಗದಿಯಾಗಿದೆ. ಆಮೀರ್ ಖಾನ್ ಜೀವನಕ್ಕೆ ಕಾಲಿಡುತ್ತಿರುವ ಆ ಮೂರನೇ ವ್ಯಕ್ತಿ ಯಾರು? ಅವರ ಹಿನ್ನೆಲೆ ಏನು?

Read Full Story

10:01 PM (IST) Jul 04

ದೇಶಕ್ಕಾಗಿ ಮೈಮೇಲಿದ್ದ ಆಭರಣವನ್ನೇ ದಾನ ಮಾಡಿದ ಮಹಾನಟಿ ಸಾವಿತ್ರಿ - ಈ ಅಪರೂಪದ ಕಥೆ ಗೊತ್ತೇ?

ಮಹಾನಟಿ ಸಾವಿತ್ರಿ ಒಂದು ಕ್ಷಣವೂ ಯೋಚಿಸದೆ ತಮ್ಮ ಮೈಮೇಲಿದ್ದ ಎಲ್ಲಾ ಆಭರಣಗಳನ್ನು ದಾನ ಮಾಡಿದ್ದರು. ಈ ಘಟನೆ ಅವರ ದೊಡ್ಡತನಕ್ಕೆ ಸಾಕ್ಷಿ. ಸಾವಿತ್ರಿ ಈ ಮಹಾನ್ ತ್ಯಾಗವನ್ನು ಯಾಕೆ ಮಾಡಿದರು ಗೊತ್ತಾ?

Read Full Story

09:05 PM (IST) Jul 04

ರೂಫ್ ಕ್ಲೋಸ್ ಮಾಡಿ ಇಲ್ಲದಿದ್ದರೆ ಸಾವು ಖಚಿತ, ಮೋದಿ ಆಸ್ಟ್ರೇಲಿಯಾ ಕಾರ್ಯಕ್ರಮಕ್ಕೂ ಮುನ್ನ ಹತ್ಯೆ ಬೆದರಿಕೆ

ಮೋದಿ ಆಸ್ಟ್ರೇಲಿಯಾಗೆ ಸಾವಿಗಾಗಿ ಬರುತ್ತಿದ್ದಾರೆ ಅನ್ನೋ ಬೆದರಿಕೆ ಸಂದೇಶ ಭದ್ರತಾ ಪಡೆಯನ್ನು ಮತ್ತಷ್ಟು ಅಲರ್ಟ್ ಮಾಡಿದೆ. ಅಬು ಮುಸ್ತಾಫಾ ಖಾತೆಯಿಂದ ಮೆಲ್ಬೋರ್ನ್ ಮೀಟ್ಸ್ ಮೋದಿ ಕಾರ್ಯಕ್ರಮಕ್ಕೆ ಬೆದರಿಕೆ ಹಾಕಲಾಗಿದೆ.

Read Full Story

08:57 PM (IST) Jul 04

ವೈಭವ್ ಡೆಬ್ಯೂ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 191 ರನ್ ಟಾರ್ಗೆಟ್, ಮ್ಯಾಂಚೆಸ್ಟರ್‌ನಲ್ಲಿ ಡಿಫೆಂಡ್ ಮಾಡುತ್ತಾ ಭಾರತ?

ವೈಭವ್ ಸೂರ್ಯವಂಶಿ ಡೆಬ್ಯೂ ಮಾಡಿದ ಇಂಗ್ಲೆಂಡ್ ವಿರುದ್ದದ 2ನೇ ಟಿ20 ಪಂದ್ಯದಲ್ಲಿ ಭಾರತ ರನ್ ಸಿಡಿಸಿದೆ. ಮ್ಯಾಂಚೆಸ್ಟರ್‌ನಲ್ಲಿ ಈ ಟಾರ್ಗೆಟನ್ನು ಟೀಂ ಇಂಡಿಯಾ ಯಶಸ್ವಿಯಾಗಿ ಡಿಫೆಂಡ್ ಮಾಡುತ್ತಾ?

 

Read Full Story

08:35 PM (IST) Jul 04

Alpha Collection - ಆಲಿಯಾ ಭಟ್ 'ಆಲ್ಫಾ'ಗೆ ನೀರಸ ಆರಂಭ - ಮೊದಲ ದಿನದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು?

Alpha Box Office Collection: ಆಲಿಯಾ ಭಟ್ ಮತ್ತು ಶರ್ವರಿ ನಟನೆಯ ಸ್ಪೈ ಚಿತ್ರ 'ಆಲ್ಫಾ'ಗೆ ನಿರೀಕ್ಷಿತ ಓಪನಿಂಗ್ ಸಿಕ್ಕಿಲ್ಲ. ಆದರೆ, ಮೊದಲ ದಿನವೇ ವಿಶ್ವಾದ್ಯಂತ ₹17.42 ಕೋಟಿ ಗಳಿಕೆ ಮಾಡಿದೆ.

Read Full Story

08:21 PM (IST) Jul 04

ಅರೆರೆ.. ಸರಿಯಾಗಿ ನಡೆಯಲು ಆಗದೇ ಪರದಾಡ್ತಿರೋ ನಟಿ - ಕ್ರೇಜಿ ಸ್ಟಾರ್‌ ಸಿನಿಮಾದ ಹೀರೋಯಿನ್‌ಗೆ ಇದೇನಾಯ್ತು?

Actress Rambha: ಇತ್ತೀಚೆಗೆ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ರಂಭಾ ಅವರಿಗೆ ಸರಿಯಾಗಿ ನಡೆಯಲು ಕಷ್ಟವಾಗುತ್ತಿರುವಂತೆ ಕಾಣಿಸಿದ್ದು, ಈ ದೃಶ್ಯ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. 

Read Full Story

08:20 PM (IST) Jul 04

ಜುಲೈ 20 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭ; ಯಾವೆಲ್ಲ ವಿಚಾರಗಳು ಚರ್ಚೆ ಆಗಲಿವೆ?

ಜುಲೈ 20 ರಿಂದ ಆಗಸ್ಟ್ 13 ರವರೆಗೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ. ಟಿಎಂಸಿ ಮತ್ತು ಶಿವಸೇನೆಯಲ್ಲಿನ ಒಡಕಿನಿಂದ ಬದಲಾದ ರಾಜಕೀಯ ಚಿತ್ರಣ, ನೀಟ್ ಅಕ್ರಮ ಹಾಗೂ ಇಂಧನ ಬೆಲೆ ಇಳಿಕೆಯಂತಹ ವಿಷಯಗಳು ಈ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಿಪಕ್ಷಗಳ ಪ್ರಮುಖ ಅಸ್ತ್ರಗಳಾಗುವ ಸಾಧ್ಯತೆಯಿದೆ.
Read Full Story

07:51 PM (IST) Jul 04

ಮುಖ್ಯಮಂತ್ರಿ ವಿಜಯ್​- ನಟಿ ತ್ರಿಶಾ ವಿರುದ್ಧ ಹೇಳಿಕೆ - ಶಾಸಕ ಅರೆಸ್ಟ್​- ಅಂಥದ್ದೇನು ಹೇಳಿದ್ರು ನೋಡಿ

ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಮತ್ತು ನಟಿ ತ್ರಿಶಾ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಡಿಎಂಕೆ ಶಾಸಕ ಅನಿತ ರಾಧಾಕೃಷ್ಣನ್ ಅವರನ್ನು ಬಂಧಿಸಲಾಗಿದೆ. ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದ್ದು, ಇದು ಟಿವಿಕೆ ಸರ್ಕಾರದ ರಾಜಕೀಯ ಪ್ರೇರಿತ ನಡೆ ಎಂದು ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಆರೋಪಿಸಿದ್ದಾರೆ.
Read Full Story

07:24 PM (IST) Jul 04

Shocking- CM Vijay - ವಿಜಯ್ ಪುತ್ರನ ಕಿಡ್ನ್ಯಾಪ್ ಸ್ಟೋರಿ.. ಅಪ್ಪ ವಿಜಯ್ ನೋಡಲು ಮಗ ಜೇಸನ್ ಕಿಡ್ನಾಪ್; ಮುಂದೇನಾಯ್ತು?!

ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಜೇಸನ್ ತಮ್ಮ ತಂದೆ ವಿಜಯ್ ಬಗ್ಗೆ  ತುಂಬಾ ಗೌರವ ಮತ್ತು ಮಮತೆಯಿಂದ ಮಾತನಾಡಿದ್ದಾರೆ. ಅಂದ್ರೆ, ಅವರಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ವಾ? ಅಪ್ಪ-ಮಗನ ಮುನಿಸು ಕೇವಲ ಸೋಷಿಯಲ್ ಮೀಡಿಯಾದ ಸೃಷ್ಟಿನಾ? ಈ ಸ್ಟೋರಿ ನೋಡಿ..

Read Full Story

07:06 PM (IST) Jul 04

ರಾಮಲಲ್ಲಾನ ಕದ್ದ ಆಭರಣಗಳೆಲ್ಲಾ ಕರಗಿ ಬಿಸ್ಕೆಟ್ ಆಗಿಬಿಟ್ಟವಾ? ಅಗೆದಷ್ಟೂ ಬಗೆಹರಿಯದ ಪ್ರಶ್ನೆಗಳು

ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ (SIT) ನಡೆಸುತ್ತಿದೆ. ಕದ್ದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕರಗಿಸಿರಬಹುದೆಂಬ ಶಂಕೆಯ ಮೇಲೆ ತನಿಖೆ ಕೇಂದ್ರೀಕೃತವಾಗಿದ್ದು, ಟ್ರಸ್ಟ್‌ನ ದಾಖಲೆಗಳು ಮತ್ತು ಟಂಕಸಾಲೆಯೊಂದಿಗಿನ ವಹಿವಾಟುಗಳನ್ನು ಪರಿಶೀಲಿಸಲಾಗುತ್ತಿದೆ.
Read Full Story

06:48 PM (IST) Jul 04

ಮಗುವನ್ನು ರೈಲಿನಲ್ಲೇ ಮರೆತ 'ಮಹಾನ್'​ ತಾಯಿ - ದೇವರಂತೆ ಬಂದ ಅನಾಮಿಕ- ಶಾಕಿಂಗ್​ ವಿಡಿಯೋ ವೈರಲ್​

ರೈಲಿನಿಂದ ಇಳಿಯುವಾಗ ತಾಯಿಯೊಬ್ಬಳು ತನ್ನ ಲಗ್ಗೇಜ್ ತೆಗೆದುಕೊಂಡು ಮಗುವನ್ನೇ ಮರೆತುಬಿಟ್ಟಿದ್ದಾಳೆ. ನಂತರ ಸಹ ಪ್ರಯಾಣಿಕನೊಬ್ಬ ಮಗುವನ್ನು ತಂದುಕೊಟ್ಟಿದ್ದು, ಈ ಘಟನೆಯ ವಿಡಿಯೋ ವೈರಲ್ ಆಗಿ ತಾಯಿಯ ಬೇಜವಾಬ್ದಾರಿತನದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story

06:39 PM (IST) Jul 04

Samantha - ತಾಯಿಯಾಗ್ತಿರೋ ಸಮಂತಾ ಈಗ ಮೊದಲಿನಂತಿಲ್ಲ! ಆ ಬದಲಾವಣೆ ಬಗ್ಗೆ ನಿರ್ದೇಶಕಿ ಹೇಳಿದ್ದೇನು?

ಸಮಂತಾ ಪತಿ ರಾಜ್ ನಿಡಿಮೋರು ಜೊತೆ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ 'ಮಾ ಇಂಟಿ ಬಂಗಾರಂ' ಚಿತ್ರದ ನಿರ್ದೇಶಕಿ ನಂದಿನಿ ರೆಡ್ಡಿ ಕೆಲವು ಇಂಟರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಏನದು ಅಂತ ತಿಳಿಯಲು ಮುಂದೆ ಓದಿ.

Read Full Story

06:26 PM (IST) Jul 04

ಸೂಪರ್​ ಸ್ಟಾರ್ಸ್​ಗೆ ತಟ್ಟಿದ ಮಳೆ ರೌದ್ರಾವತಾರ - ಅಮಿತಾಭ್​, ಅಜಯ್​ ದೇವಗನ್​ ನೂರಾರು ಕೋಟಿ ಬಂಗ್ಲೆ ಜಲಾವೃತ

ಮುಂಬೈನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಬಾಲಿವುಡ್ ನಟರಾದ ಅಮಿತಾಭ್ ಬಚ್ಚನ್ ಮತ್ತು ಅಜಯ್ ದೇವಗನ್ ಅವರ ಕೋಟ್ಯಂತರ ರೂಪಾಯಿ ಮೌಲ್ಯದ ಮನೆಗಳೂ ಜಲಾವೃತವಾಗಿವೆ.  

Read Full Story

06:08 PM (IST) Jul 04

ಒಂದು ಸ್ಫರ್ತಿಯ ಕತೆ.. 116ರ ಹರೆಯದಲ್ಲಿ ತಿರುಮಲದ 3,550 ಮೆಟ್ಟಿಲು ಹತ್ತಿದ ಕರ್ನಾಟಕದ ಅಜ್ಜಿ!

ಕರ್ನಾಟಕದ 116 ವರ್ಷದ ಲಕ್ಷ್ಮವ್ವ ಎಂಬ ಅಜ್ಜಿಯೊಬ್ಬರು, ಇಳಿವಯಸ್ಸಿನಲ್ಲೂ ದೈಹಿಕ ದೌರ್ಬಲ್ಯವನ್ನು ಮೀರಿ ತಿರುಮಲದ 3,550 ಮೆಟ್ಟಿಲುಗಳನ್ನು ಹತ್ತಿದ್ದಾರೆ.  'ಗೋವಿಂದ' ನಾಮಸ್ಮರಣೆಯೊಂದಿಗೆ ತನ್ನ ಆರಾಧ್ಯ ದೈವದ ದರ್ಶನ ಪಡೆದ ಈ ಅಜ್ಜಿಯ ಅಚಲ ಭಕ್ತಿ ಮತ್ತು ಮನೋಬಲದ ಕಥೆ ಎಲ್ಲರಿಗೂ ಸ್ಫೂರ್ತಿಯಾಗಿದೆ.

Read Full Story

05:52 PM (IST) Jul 04

Body Shaming - 'ದಪ್ಪ ಆಗು, ಸಣ್ಣ ಆಗು ಅಂತಿದ್ರು' - ನಿರ್ಮಾಪಕರ ಆ ಕಾಟ ಬಿಚ್ಚಿಟ್ಟ ನಟಿ ಕಾಜಲ್ ಅಗರ್ವಾಲ್!

ನಟಿ ಕಾಜಲ್ ಅಗರ್ವಾಲ್ ತಮ್ಮ ನೇರ ನುಡಿ, ಅದ್ಭುತ ನಟನೆ ಹಾಗೂ ಫ್ಯಾಷನ್ ಸೆನ್ಸ್‌ನಿಂದ ಸದಾ ಸುದ್ದಿಯಲ್ಲಿರುತ್ತಾರೆ. ದಕ್ಷಿಣ ಭಾರತದ ಚಿತ್ರರಂಗದಿಂದ ಬಾಲಿವುಡ್‌ವರೆಗೂ ಯಶಸ್ಸು ಕಂಡಿರುವ ಅವರಿಗೆ ಸಾಕಷ್ಟು ಅನುಭವವಿದೆ.

Read Full Story

05:20 PM (IST) Jul 04

Hrithik Roshan - ಬಾಲಿವುಡ್‌ 'ಗ್ರೀಕ್ ಗಾಡ್' ಕಣ್ಣೀರ ಕಥೆ ಗೊತ್ತಾ? ದೌರ್ಬಲ್ಯವನ್ನೇ ಬಲವನ್ನಾಗಿ ಮಾಡಿಕೊಂಡ ಹೃತಿಕ್ ರೋಷನ್‌

ಮಾತನಾಡಲು ಆರಂಭಿಸಿದಾಗ ಪದಗಳು ಸಿಕ್ಕಿಹಾಕಿಕೊಳ್ಳುತ್ತವೆ. ಕಾಲಿನ ಉಗುರಿನಿಂದ ಹಿಡಿದು ತಲೆಯ ಕೂದಲಿನವರೆಗೆ ಇಡೀ ದೇಹವೇ ಒಂದು ರೀತಿಯ ಆಘಾತಕ್ಕೆ ಒಳಗಾಗುತ್ತದೆ. ಹೃದಯ ಬಡಿತ ಜೋರಾಗುತ್ತದೆ ಮತ್ತು ಜನರು ನಮ್ಮನ್ನೇ ವಿಚಿತ್ರವಾಗಿ ನೋಡುತ್ತಿದ್ದಾರೆ ಎಂಬ ಅರಿವು ನಮ್ಮನ್ನು ನರಕಕ್ಕೆ ತಳ್ಳುತ್ತದೆ

Read Full Story

05:03 PM (IST) Jul 04

ಬಿಜೆಪಿ ಶಾಸಕ ರಾಜು ಕುಮಾರ್‌ಗೆ 4 ವರ್ಷ ಜೈಲು ಶಿಕ್ಷೆ ತೀರ್ಪು ನೀಡಿದ ಕೋರ್ಟ್, ಏನಿದು ಸೆಲೆಬ್ರೇಶನ್ ಪ್ರಕರಣ?

ಬಿಜೆಪಿ ಶಾಸಕ ರಾಜು ಕುಮಾರ್ ತಪ್ಪಿತಸ್ಥ ಎಂದು ಕೋರ್ಟ್ ತೀರ್ಪು ನೀಡಿದ್ದು ಮಾತ್ರವಲ್ಲ, 4 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಪರಿಹಾರವಾಗಿ 25 ಲಕ್ಷ ರೂಪಾಯಿ ನೀಡಲು ಸೂಚಿಸಿದೆ. ಏನಿದು ಬಿಜೆಪಿ ಶಾಸಕನ ಸೆಲೆಬ್ರೇಷನ್ ಪ್ರಕರಣ?

Read Full Story

04:58 PM (IST) Jul 04

No Gold Bride - ಸಾಲ ಮಾಡಿ ಮದುವೆಯಾಗೋ ಈ ಕಾಲದಲ್ಲಿ, ಗುಲಗಂಜಿ ಚಿನ್ನವಿಲ್ಲ; ನಿರಾಭರಣಳಾಗಿ ಮಂಟಪಕ್ಕೆ ಬಂದ ವಧು!

Rich Bride With No Gold Ornaments: ಮದುವೆ ಮಂಟಪಕ್ಕೆ ಯಾವುದೇ ಆಭರಣ ಹಾಕದೆ ಬಂದ ಇನ್ಫ್ಲುಯೆನ್ಸರ್ ಒಬ್ಬರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ. ಈಗಿನ ಕಾಲದಲ್ಲಿ ಮದುವೆ ಅಂದ್ರೆ ಅದ್ಧೂರಿತನಕ್ಕೆ ಇನ್ನೊಂದು ಹೆಸರು. ಆದರೆ ಈ ವಧು ಮಾತ್ರ ಆರ್ಟಿಫಿಶಿಯಲ್‌ ಆಭರಣ ಕೂಡ ಹಾಕಿಲ್ಲ.

Read Full Story

04:57 PM (IST) Jul 04

ಪ್ರತಿ 12 ವರ್ಷಕ್ಕೊಮ್ಮೆ ದೇವರ ವಿಗ್ರಹಗಳನ್ನ ಬದಲಿಸೋದ್ಯಾಕೆ? ಪುರಿ ಜಗನ್ನಾಥನ ರಹಸ್ಯ..!

ವಿಶ್ವಪ್ರಸಿದ್ಧ ಜಗನ್ನಾಥ ಪುರಿ ರಥಯಾತ್ರೆಯು ಜುಲೈ 16 ರಿಂದ ಆರಂಭವಾಗಲಿದೆ. ಈ ದೇಗುಲದ ಪ್ರಮುಖ ರಹಸ್ಯವೆಂದರೆ, ಪ್ರತಿ 12 ವರ್ಷಗಳಿಗೊಮ್ಮೆ ಬೇವಿನ ಮರದಿಂದ ಮಾಡಿದ ಜಗನ್ನಾಥ, ಬಲಭದ್ರ, ಮತ್ತು ಸುಭದ್ರೆಯ ವಿಗ್ರಹಗಳನ್ನು 'ನವಕಳೇಬರ' ಎಂಬ ಗೌಪ್ಯ ಆಚರಣೆಯಲ್ಲಿ ಬದಲಾಯಿಸಲಾಗುತ್ತದೆ. ಇದರ ರಹಸ್ಯ ಇಲ್ಲಿದೆ.

Read Full Story

04:45 PM (IST) Jul 04

ಬರೋಬ್ಬರಿ 2 ದಶಕಗಳ ಬಳಿಕ ಫೈನಲಿ ಸರ್ಕಾರಿ ಬಂಗಲೆ ಖಾಲಿ ಮಾಡಿದ ಬಿಹಾರದ ಪವರ್‌ ಲೇಡಿ ರಾಬ್ರಿ ದೇವಿ-ಲಾಲು ಕುಟುಂಬ!

ಸುಮಾರು 20 ವರ್ಷಗಳ ಸುದೀರ್ಘ ವಾಸ್ತವ್ಯದ ನಂತರ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಕುಟುಂಬವು ಪಾಟ್ನಾದ ಐಕಾನಿಕ್ '10, ಸರ್ಕ್ಯುಲರ್ ರಸ್ತೆ' ಸರ್ಕಾರಿ ಬಂಗಲೆಯನ್ನು ಅಧಿಕೃತವಾಗಿ ಖಾಲಿ ಮಾಡಿದೆ.   

Read Full Story

03:54 PM (IST) Jul 04

ಧರ್ಮಸಂಕಟಕ್ಕೆ ಸಿಲುಕಿದ ಕಾವ್ಯ ಮಾರನ್ ಖರೀದಿಸಿದ ಪಾಕಿಸ್ತಾನಿ ಆಟಗಾರ..!

ಸನ್‌ರೈಸರ್ಸ್ ಮಾಲಕಿ ಕಾವ್ಯ ಮಾರನ್ 'ದಿ ಹಂಡ್ರೆಡ್' ಲೀಗ್‌ಗಾಗಿ ಪಾಕಿಸ್ತಾನಿ ಕ್ರಿಕೆಟರ್ ಅಬ್ರಾರ್ ಅಹ್ಮದ್ ಅವರನ್ನು ಖರೀದಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಇದೇ ಸಮಯದಲ್ಲಿ ಪಾಕಿಸ್ತಾನದ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆಯಿದ್ದು, ಅಬ್ರಾರ್ ದೇಶ ಮತ್ತು ಹಣದ ನಡುವೆ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.
Read Full Story

01:10 PM (IST) Jul 04

'ನಿನ್ನ ಬರ್ತ್​ಡೇಗೆ ನನ್ನ ಗಿಫ್ಟ್​ ಇದು' - ಸ್ನೇಹಿತನಿಗೆ ಕಾಲ್​ ಮಾಡುತ್ತಲೇ ಜೀವ ಕಳೆದುಕೊಂಡ ಯುವತಿ - ಆಗಿದ್ದೇನು

ಹೈದರಾಬಾದ್​ನ ಹೋಟೆಲ್​ವೊಂದರಲ್ಲಿ ಯುವತಿಯೊಬ್ಬಳು ತನ್ನ ಸ್ನೇಹಿತನಿಗೆ ವಿಡಿಯೋ ಕಾಲ್​ನಲ್ಲಿಯೇ ಹುಟ್ಟುಹಬ್ಬದ ಶುಭಾಶಯ ಕೋರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತನ್ನ ಸಾವನ್ನೇ ಸ್ನೇಹಿತನಿಗೆ 'ಹುಟ್ಟುಹಬ್ಬದ ಉಡುಗೊರೆ' ಎಂದು ಹೇಳಿದ್ದು, ಈ ಸಾವಿನ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Read Full Story

12:52 PM (IST) Jul 04

ರೈಲು ಎಷ್ಟೇ ವೇಗವಾಗಿ ಚಲಿಸಿದರೂ ನೈಸ್ ಆಗಿರೋ ಹಳಿಗಳ ಮೇಲೆ ಏಕೆ ಜಾರುವುದಿಲ್ಲ?

ರೈಲುಗಳು ಅಗಾಧ ತೂಕದಿಂದ ಉಂಟಾಗುವ ಘರ್ಷಣೆ, ಸ್ವಯಂ-ಕೇಂದ್ರೀಕರಿಸುವ ಶಂಕುವಿನಾಕಾರದ ಚಕ್ರಗಳ ವಿನ್ಯಾಸದಿಂದಾಗಿ ಹಳಿಗಳ ಮೇಲೆ ಜಾರದೆ ಸ್ಥಿರವಾಗಿ ಚಲಿಸುತ್ತವೆ. ಮಳೆಯಂತಹ ಸಂದರ್ಭಗಳಲ್ಲಿ ಘರ್ಷಣೆ ಕಡಿಮೆಯಾದಾಗ, 'ಸ್ಯಾಂಡ್‌ಬಾಕ್ಸ್' ತಂತ್ರಜ್ಞಾನವು ಮರಳನ್ನು ಚಿಮುಕಿಸಿ ಹಿಡಿತವನ್ನು ಹೆಚ್ಚಿಸುತ್ತದೆ.

Read Full Story

12:48 PM (IST) Jul 04

ನಾನು ಸ್ಕೂಲ್ ಹುಡುಗನಲ್ಲ - ರಜೆ ಕೊಡಲು ಹಿಂದೇಟು ಹಾಕಿದ ಬಾಸ್‌ಗೆ Gen Z ಉದ್ಯೋಗಿಯ ಉತ್ತರ

ಜ್ವರದಿಂದ ಬಳಲುತ್ತಿದ್ದ ಉದ್ಯೋಗಿಯೊಬ್ಬರು ರಜೆ ಕೇಳಿದಾಗ, ಬಾಸ್ ವೈದ್ಯರ ಚೀಟಿ ಕೇಳಿದ್ದಾರೆ. ಇದರಿಂದ ಅಸಮಾಧಾನಗೊಂಡ ಉದ್ಯೋಗಿ, ತಾನು ಶಾಲಾ ವಿದ್ಯಾರ್ಥಿಯಲ್ಲ ಮತ್ತು ಇದು ತನ್ನ ಹಕ್ಕಿನ ರಜೆ ಎಂದು ಖಾರವಾಗಿ ಉತ್ತರಿಸಿದ್ದಾರೆ. ಈ ವಾಟ್ಸಪ್ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Read Full Story

12:38 PM (IST) Jul 04

ದೇವಸ್ಥಾನದ ಅಂಗಳದಲ್ಲಿ ದಕ್ಷಿಣ ಭಾರತದ ಮೊದಲ ಲಂಬೋರ್ಘಿನಿ ಟೆಮೆರಾರಿಯೊ - ಏನಿದರ ವಿಶೇಷತೆ

ದಕ್ಷಿಣ ಭಾರತದ ಮೊದಲ ಲಂಬೋರ್ಘಿನಿ ಟೆಮೆರಾರಿಯೊ ಕಾರಿಗೆ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗಿದೆ. ಕಾರಿನ ಮಾಲೀಕರು ಡೆಲಿವರಿ ಪಡೆದ ನಂತರ, ಭಾರತೀಯ ಸಂಪ್ರದಾಯದಂತೆ ಪೂಜೆ ಮಾಡಿಸಲು ದೇವಸ್ಥಾನಕ್ಕೆ ತಂದಿದ್ದು, ಅರ್ಚಕರು ಪೂಜಾ ವಿಧಿಗಳನ್ನು ನೆರವೇರಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
Read Full Story

12:15 PM (IST) Jul 04

Hyderabad Food Man - ಕೆಲಸಕ್ಕೆ ಹೋಗೋ ಮುನ್ನ ನೂರಾರು ಜನರ ಹಸಿದ ಹೊಟ್ಟೆಗೆ ಅನ್ನ; ಹೈದರಾಬಾದ್ ಈ 'ಫುಡ್ ಮ್ಯಾನ್'ಗೆ ಸಲಾಂ!

ಹೈದರಾಬಾದ್‌ನಲ್ಲಿ 'ಫುಡ್ ಮ್ಯಾನ್' ಅಂತಾನೇ ಫೇಮಸ್ ಆಗಿರುವ ವ್ಯಕ್ತಿಯೊಬ್ಬರು, ತಮ್ಮ ಕಾರ್ಪೊರೇಟ್ ಕೆಲಸಕ್ಕೆ ಹೋಗುವ ಮುನ್ನ ಪ್ರತಿದಿನ ಬೆಳಗ್ಗೆ ಸರ್ಕಾರಿ ಆಸ್ಪತ್ರೆಗಳ ಹೊರಗೆ ನೂರಾರು ಜನರಿಗೆ ಉಚಿತವಾಗಿ ಪೌಷ್ಟಿಕ ಆಹಾರ ನೀಡುತ್ತಿದ್ದಾರೆ.ಈ ವಿಡಿಯೋ ವೈರಲ್ ಆಗಿದೆ.

Read Full Story

12:15 PM (IST) Jul 04

Thalapathy Vijay Jana Nayagan - ಜನನಾಯಗನ್ ಚಿತ್ರಕ್ಕಿನ್ನೂ ಸೆನ್ಸಾರ್ ಸರ್ಟಿಫಿಕೇಟ್‌ ಸಿಕ್ಕಿಲ್ಲ; ದಳಪತಿ ವಿಜಯ್ ಸಿನಿಮಾ ಬಿಡುಗಡೆ ಯಾವಾಗ?

ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಿರುವ 'ಜನನಾಯಗನ್' ಸಿನಿಮಾವನ್ನು ಎಚ್.‌ ವಿನೋದ್‌ ನಿರ್ದೇಶಿಸಿದ್ದಾರೆ.  ಅನಿರುದ್ಧ್‌ ರವಿಚಂದರ್‌ ಈ ಸಿನಿಮಾಕ್ಕೆ ಸಂಗೀತ ನೀಡಿದ್ದಾರೆ. ದಳಪತಿ ವಿಜಯ್ ನಾಯಕತ್ವದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಮಲಯಾಳಂ ಮೂಲದ ನಟಿ ಮಮಿತಾ ಬೈಜು ನಾಯಕಿಯರಾಗಿ ನಟಿಸಿದ್ದಾರೆ.

Read Full Story

11:28 AM (IST) Jul 04

ಚಹಾಕ್ಕೆ ಹಾಲು ಬೆರೆಸಿ ಕುಡಿಯುವುದು ಏಕೆ? ಹೇಗೆ ಆರಂಭವಾಯಿತು? ಇಲ್ಲಿದೆ ಭಾರತೀಯರ ‘ಟೀ’ ಇತಿಹಾಸ!

ಭಾರತದಲ್ಲಿ ಚಹಾ ಜನಪ್ರಿಯವಾಗಲು ಐತಿಹಾಸಿಕ ಕಾರಣಗಳಿವೆ. ಭಾರತದಲ್ಲಿ ಹಾಲಿನ ಚಹಾ ಕುಡಿಯುವ ಅಭ್ಯಾಸ ಹೇಗೆ ಶುರುವಾಯಿತು?  ಚಹಾಗೆ ಹಾಲು ಬೆರೆಸೋದು ಯಾಕೆ? ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.

Read Full Story

11:14 AM (IST) Jul 04

Keeway Hypevolt-R - ಬಿಡುಗಡೆಯಾಯ್ತು ಪ್ರೀಮಿಯಂ ಸ್ಕೂಟರ್, ರೇಂಜ್, ಟಾಪ್ ಸ್ಪೀಡ್ ಎಷ್ಟು?

ಕೀವೇ ಇಂಡಿಯಾ ತನ್ನ ಹೊಸ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ ಹೈಪ್‌ವೋಲ್ಟ್-ಆರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.  ಡ್ಯುಯಲ್-ಚಾನೆಲ್ ABS, TCS ನಂತಹ ಸುಧಾರಿತ ಸುರಕ್ಷತಾ ತಂತ್ರಜ್ಞಾನಗಳೊಂದಿಗೆ ಸ್ಕೂಟರ್ ಮಾರುಕಟ್ಟೆಗೆ ಬಂದಿದೆ.

Read Full Story

10:00 AM (IST) Jul 04

ಸೋಮನಾಥ ದೇಗುಲದ ಬಗ್ಗೆ ಕನ್ನಡಿಗನ ಹೃದಯಸ್ಪರ್ಶಿ ಪತ್ರಕ್ಕೆ ಪ್ರಧಾನಿ ಮೋದಿ ಅವರಿಂದ ಅಚ್ಚರಿಯ ಉತ್ತರ!

ಬೆಂಗಳೂರಿನ ಕನ್ನಡಿಗ ಎ.ಕೆ. ದಾಸ್ ಅವರು ಸೋಮನಾಥ ಮಂದಿರ ಪುನರ್ನಿರ್ಮಾಣದ 75ನೇ ವರ್ಷದ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ಸೋಮನಾಥದ ಪರಂಪರೆಯನ್ನು ಶ್ಲಾಘಿಸಿ, ಇದು ರಾಷ್ಟ್ರೀಯ ಪುನರುತ್ಥಾನದ ಸಂಕೇತವೆಂದು ಬಣ್ಣಿಸಿದ್ದಾರೆ 

Read Full Story

09:36 AM (IST) Jul 04

ಮೊಬೈಲ್‌ಗಿರೋ ನಾಲ್ಕು ಕ್ಯಾಮೆರಾಗಳ ಪ್ರಯೋಜನ ಏನು? 99% ಜನರಿಗೆ ಈ ವಿಷಯ ಗೊತ್ತಿಲ್ಲ

ಸ್ಮಾರ್ಟ್‌ಫೋನ್‌ಗಳಲ್ಲಿರುವ ಬಹು ಕ್ಯಾಮೆರಾಗಳು ಒಂದೇ ಸಮಯದಲ್ಲಿ ಫೋಟೋ ಕ್ಲಿಕ್ ಮಾಡುವುದಿಲ್ಲ. ಮೂರು ಅಥವಾ ನಾಲ್ಕು ಕ್ಯಾಮೆರಾಗಳು ಇದು ವಿವಿಧ ಸನ್ನಿವೇಶಗಳಲ್ಲಿ ಉತ್ತಮ ಚಿತ್ರಗಳನ್ನು ಸೆರೆಹಿಡಿಯಲು ನೆರವಾಗುತ್ತದೆ.

Read Full Story

08:58 AM (IST) Jul 04

2118ನೇ ಇಸವಿಯಿಂದ ಬಂದನೆಂದು ಹೇಳಿಕೊಳ್ಳುವ ಯುವಕನ ಕಥೆ; ಆಘಾತಕಾರಿ ನೋವಾ ಭವಿಷ್ಯವಾಣಿ

ApexTV ಯೂಟ್ಯೂಬ್ ಚಾನೆಲ್‌ನಲ್ಲಿ, 2118ರಿಂದ ಬಂದ 'ನೋವಾ' ಎಂಬ ಯುವಕ ಮೂರನೇ ಮಹಾಯುದ್ಧ ಮತ್ತು ಭವಿಷ್ಯದ ಬಗ್ಗೆ ಆಘಾತಕಾರಿ ಭವಿಷ್ಯ ನುಡಿದಿದ್ದಾನೆ. ಆದರೆ, ವಿಜ್ಞಾನಿಗಳು ಮತ್ತು ತಜ್ಞರು ಆತನ ಸಾಕ್ಷ್ಯಗಳನ್ನು ಪ್ರಶ್ನಿಸಿ, ಇದು ಗಮನ ಸೆಳೆಯಲು ಸೃಷ್ಟಿಸಿದ ಕಥೆಯಾಗಿರಬಹುದು ಎಂದು ವಿಶ್ಲೇಷಿಸಿದ್ದಾರೆ. 

Read Full Story

06:30 AM (IST) Jul 04

ಇಂದಿನಿಂದ 6 ದಿನ ಆಯತೋಲ್ಲ ಖಮೇನಿ ಅಂತ್ಯಕ್ರಿಯೆ; ಭಾರತ ಸೇರಿ 90 ದೇಶಗಳ ಉಪಸ್ಥಿತಿ

ಫೆ.28ರಂದು ಅಮೆರಿಕ-ಇಸ್ರೇಲ್‌ ದಾಳಿಯಲ್ಲಿ ಮೃತಪಟ್ಟ ಇರಾನ್‌ನ ಸರ್ವೋಚ್ಚ ನಾಯಕ ಆಯತೋಲ್ಲ ಅಲಿ ಖಮೇನಿ ಅವರ ಅಂತ್ಯಕ್ರಿಯೆಯು ಸುಮಾರು 4 ತಿಂಗಳ ನಂತರ 6 ದಿನಗಳ ಕಾಲ ನಡೆಯಲಿದೆ. ಟೆಹ್ರಾನ್‌, ಕೋಂ, ಮತ್ತು ಇರಾಕ್‌ನ ಪವಿತ್ರ ನಗರಗಳಲ್ಲಿ ಮೆರವಣಿಗೆ ನಡೆದು, ಮಶಾದ್‌ನಲ್ಲಿ ಸಮಾಧಿ ಮಾಡಲಾಗುವುದು. ಈ ಕಾರ್ಯಕ್ರಮದಲ್ಲಿ 90 ದೇಶಗಳ ನಿಯೋಗಗಳು ಭಾಗವಹಿಸಲಿವೆ.
Read Full Story

More Trending News