Published : Jul 30, 2026, 07:05 AM ISTUpdated : Jul 30, 2026, 10:59 PM IST

India Latest News Live: 'ಪೇಪರ್‌ ಲೀಕ್‌ ಗ್ಯಾಂಗ್‌ನ ಬಿಡೋ ಮಾತೇ ಇಲ್ಲ..' ಮತ್ತೊಂದು ಮಧ್ಯರಾತ್ರಿ ರೀಲ್ಸ್‌ ಮೂಲಕ ಮೋದಿ ವಾರ್ನಿಂಗ್‌!

ಸಾರಾಂಶ

ಛತ್ರಪತಿ ಸಂಭಾಜಿ ನಗರ: ‘ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಉಗ್ರರಲ್ಲ, ದೇಶದ ಭವಿಷ್ಯ. ಅವರನ್ನು ಸರ್ಕಾರ ಹಿಂಸಿಸಬಾರದು. ಸರ್ಕಾರ ಸರಿಯಾದ ಮಾರ್ಗದಲ್ಲಿ ನಡೆಯದಿದ್ದರೆ ಯುವಕರು ಅದನ್ನೇ (ಸರ್ಕಾರವನ್ನೇ) ಬದಲಿಸುತ್ತಾರೆ’ ಎಂದು ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಎಚ್ಚರಿಸಿದ್ದಾರೆ.

ತಮ್ಮ ತವರಾದ ಛತ್ರಪತಿ ಸಂಭಾಜಿ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ದೀಪ್ಕೆ, ‘ಹೋರಾಟದ ಬಳಿಕ ಹಲವು ರಾಜ್ಯಗಳಲ್ಲಿ ಸರ್ಕಾರಗಳು ವಿದ್ಯಾರ್ಥಿಗಳನ್ನು ಹಿಂಸಿಸುತ್ತಿವೆ. ಪೊಲೀಸರು ಮನೆಗೇ ಹೋಗಿ ಬಂಧಿಸುವ ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ಈಗಲಾದರೂ ಸರಿಯಾಗಿ ವರ್ತಿಸಬೇಕು. ಇಲ್ಲದಿದ್ದರೆ, ಈಗ ಸಚಿವರನ್ನುಬದಲಿಸಿದವರು ಮುಂದೆ ಸರ್ಕಾರವನ್ನೇ ಬದಲಿಸಬೇಕಾಗುತ್ತದೆ’ ಎಂದರು. ಜತೆಗೆ, ಅಗತ್ಯವಿದ್ದರೆ ಇನ್ನೂ ದೊಡ್ಡ ಹೋರಾಟ ಮಾಡುವುದಾಗಿಯೂ ಹೇಳಿದರು.

10:59 PM (IST) Jul 30

'ಪೇಪರ್‌ ಲೀಕ್‌ ಗ್ಯಾಂಗ್‌ನ ಬಿಡೋ ಮಾತೇ ಇಲ್ಲ..' ಮತ್ತೊಂದು ಮಧ್ಯರಾತ್ರಿ ರೀಲ್ಸ್‌ ಮೂಲಕ ಮೋದಿ ವಾರ್ನಿಂಗ್‌!

ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ತಡೆಯಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಠಿಣ ವಿಧೇಯಕಕ್ಕೆ ಸಂಸತ್ತಿನಲ್ಲಿ ಅನುಮೋದನೆ ದೊರೆತಿದೆ. ಈ ಹೊಸ ಕಾಯ್ದೆಯು ಪರೀಕ್ಷಾ ವ್ಯವಸ್ಥೆಯನ್ನು ಪಾರದರ್ಶಕವಾಗಿಸಲಿದ್ದು, ಅಕ್ರಮ ಎಸಗುವವರನ್ನು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಭರವಸೆ ನೀಡಿದ್ದಾರೆ.
Read Full Story

10:13 PM (IST) Jul 30

Spider-Man Brand New Day Review - ಪೀಟರ್ ಸಾಹಸ ಈ ಸಲ ಹೇಗಿದೆ - ಇಲ್ಲಿದೆ ಸಂಪೂರ್ಣ ವಿಮರ್ಶೆ

ಸ್ಪೈಡರ್ ಮ್ಯಾನ್ ಸರಣಿಯಿಂದ ಈಗಾಗಲೇ ಹಲವು ಸಿನಿಮಾಗಳು ಬಂದಿವೆ, ಎಲ್ಲರನ್ನೂ ರಂಜಿಸಿವೆ. ಈಗ ಅದೇ ಸರಣಿಯ 'ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ' ಸಿನಿಮಾ ತೆರೆಕಂಡಿದೆ. ಹಾಗಿದ್ರೆ ಈ ಹೊಸ ಸಿನಿಮಾ ಹೇಗಿದೆ? ಓದಿ.

Read Full Story

08:51 PM (IST) Jul 30

ದೇಶದ ಹೊಸ ಕಾರ್ಮಿಕ ನೀತಿ - ತಿಂಗಳ ವೇತನ 7ನೇ ತಾರೀಖಿನ ಒಳಗೆ ನೀಡುವುದು ಕಡ್ಡಾಯ!

ಭಾರತದ ನೂತನ 'ವೇತನ ಸಂಹಿತೆ, 2019'ರ ಅಡಿಯಲ್ಲಿ, ಉದ್ಯೋಗದಾತರು ಪ್ರತಿ ತಿಂಗಳ 7ನೇ ತಾರೀಖಿನೊಳಗೆ ನೌಕರರಿಗೆ ವೇತನ ಪಾವತಿಸುವುದು ಕಡ್ಡಾಯವಾಗಿದೆ. ಉದ್ಯೋಗದಿಂದ ವಜಾಗೊಂಡವರ ಬಾಕಿ ವೇತನವನ್ನು ಎರಡು ದಿನಗಳಲ್ಲಿ ಇತ್ಯರ್ಥಗೊಳಿಸಬೇಕೆಂದು ಸ್ಪಷ್ಟಪಡಿಸುತ್ತದೆ.

Read Full Story

08:29 PM (IST) Jul 30

ಕ್ರೆಟಾ, ಥಾರ್‌ ಹಾಗೂ ಫಾರ್ಚೂನರ್‌ಗೆ ಟಕ್ಕರ್‌ ನೀಡಲು ಐದು ಹೊಸ SUV ಜೊತೆ ಮಾರುಕಟ್ಟೆಗೆ JSW Motors ಎಂಟ್ರಿ!

ಜೆಎಸ್‌ಡಬ್ಲ್ಯೂ ಮೋಟರ್ಸ್, ಚೀನಾದ 'ಚೆರಿ ಆಟೋಮೊಬೈಲ್' ಜೊತೆಗೂಡಿ ಭಾರತದಲ್ಲಿ 5 ಹೊಸ ಎಸ್‌ಯುವಿಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸ್ಥಳೀಯವಾಗಿ ತಯಾರಿಸಲ್ಪಡುವ ಈ ಕಾರುಗಳಲ್ಲಿ ಜೆಟೋರ್ T2, ಜೈಕೂ J5 ನಂತಹ ಮಾಡೆಲ್‌ಗಳು ಸೇರಿವೆ.

Read Full Story

08:17 PM (IST) Jul 30

ಜಿರಳೆಗಳಿಗೆ ಶುರುವಾಯ್ತು ನಡುಕ - ಪ್ರತಿಭಟನೆ ವೇಳೆ ಮುಖ ಗುರುತಿಸೋ ಸಾಧನ ಪ್ರಶ್ನಿಸಿ 'ಸುಪ್ರೀಂ' ಮೊರೆ

NEET-UG 2026 ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತ ಪ್ರತಿಭಟನೆಯಲ್ಲಿ, ದೆಹಲಿ ಪೊಲೀಸರು ಮುಖ ಗುರುತಿಸುವಿಕೆ ತಂತ್ರಜ್ಞಾನ ಬಳಸಿದ್ದನ್ನು ಸಿಪಿಐ(ಎಂ) ಸಂಸದರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಈ ಕಣ್ಗಾವಲು ಅಸಂವಿಧಾನಿಕ ಎಂದು ಘೋಷಿಸಲು ಮತ್ತು ಕಾನೂನು ಜಾರಿಯಾಗುವವರೆಗೆ ಅದನ್ನು ನಿಲ್ಲಿಸಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
Read Full Story

08:06 PM (IST) Jul 30

ಕೇಬಲ್, ಡಿಟಿಎಚ್‌ಗೆ ಗುಡ್‌ಬೈ! - ಕೇವಲ ₹200ಗೆ 20 OTT, ಅನ್‌ಲಿಮಿಟೆಡ್ 5G ತಂದ Vi

ವೊಡಾಫೋನ್ ಐಡಿಯಾ (Vi) ₹200ರ ಹೊಸ ಪ್ರಿಪೇಡ್ ಎಂಟರ್‌ಟೈನ್‌ಮೆಂಟ್ ಪ್ಯಾಕ್ ಅನ್ನು ಪರಿಚಯಿಸಿದೆ. ಈ ಯೋಜನೆಯು 28 ದಿನಗಳ ವ್ಯಾಲಿಡಿಟಿಯೊಂದಿಗೆ 20 OTT ಪ್ಲಾಟ್‌ಫಾರ್ಮ್‌ಗಳು, 200+ ಲೈವ್ ಟಿವಿ ಚಾನೆಲ್‌ಗಳು, 30GB ಹೈ-ಸ್ಪೀಡ್ ಡೇಟಾ ಮತ್ತು ಅನ್‌ಲಿಮಿಟೆಡ್ 5G ಡೇಟಾವನ್ನು ನೀಡುತ್ತದೆ.

Read Full Story

07:44 PM (IST) Jul 30

ನಿಕ್ ಜೋನಸ್ ಜೊತೆ ಪ್ರಿಯಾಂಕಾ, ಪಕ್ಕದಲ್ಲಿ ಮಹೇಶ್ ಬಾಬು - ವೈರಲ್ ಆಯ್ತು ಈ ಫೋಟೋ

ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ, ಪತಿ ನಿಕ್ ಜೋನಸ್ ಜೊತೆ ಹೈದರಾಬಾದ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತೆಲುಗು ಸೂಪರ್‌ಸ್ಟಾರ್ ಮಹೇಶ್ ಬಾಬು ಜೊತೆ ಅವರು ಮೂವಿ ನೈಟ್ ಎಂಜಾಯ್ ಮಾಡಿದ್ದಾರೆ. ರಾಜಮೌಳಿ ನಿರ್ದೇಶನದ 'ವಾರಣಾಸಿ' ಚಿತ್ರದ ಶೂಟಿಂಗ್‌ಗಾಗಿ ಪ್ರಿಯಾಂಕಾ ಹೈದರಾಬಾದ್‌ನಲ್ಲಿದ್ದಾರೆ.

Read Full Story

07:02 PM (IST) Jul 30

650 ರಿಂದ 500, ಕೊನೆಗೆ 135 - ಒಂದೇ ದಿನದಲ್ಲಿ ಮೂರು ಬಾರಿ ಬದಲಾದ NEET ಸ್ಕೋರ್‌, ಕೋರ್ಟ್‌ ಮೆಟ್ಟಿಲೇರಿದ ಅಭ್ಯರ್ಥಿ!

ನೀಟ್ ಯುಜಿ 2026ರ ಫಲಿತಾಂಶದಲ್ಲಿ ಗಂಭೀರ ಅಕ್ರಮದ ಆರೋಪ ಕೇಳಿಬಂದಿದ್ದು, ವಿದ್ಯಾರ್ಥಿಯೊಬ್ಬರ ಅಂಕಗಳು 24 ಗಂಟೆಗಳಲ್ಲಿ ಮೂರು ಬಾರಿ ಬದಲಾಗಿವೆ. 650 ರಿಂದ 135ಕ್ಕೆ ಕುಸಿದ ಅಂಕಗಳ ಬಗ್ಗೆ ಅಭ್ಯರ್ಥಿಯು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದು, ತಮ್ಮ ಮೂಲ ಒಎಂಆರ್ ಶೀಟ್ ಹಾಜರುಪಡಿಸಲು ಕೋರಿದ್ದಾರೆ.
Read Full Story

06:44 PM (IST) Jul 30

ಸೈಟ್ ಖರೀದಿಸಿದರೆ ಜೀವಮಾನವಿಡೀ ತಿರುಪತಿ ವಿಐಪಿ ದರ್ಶನ? ನಕಲಿ ಜಾಹೀರಾತು ವಿರುದ್ಧ ಟಿಟಿಡಿ ದೂರು

ಒಂದು ಖಾಸಗಿ ರಿಯಲ್ ಎಸ್ಟೇಟ್ ಕಂಪನಿ ತಮ್ಮಲ್ಲಿ ನಿವೇಶನ ಖರೀದಿಸಿದರೆ, 'ಜೀವಮಾನವಿಡೀ ಶ್ರೀವಾರಿ ವಿಐಪಿ ಬ್ರೇಕ್ ದರ್ಶನ' ಮಾಡಿಸುವುದಾಗಿ ಭರವಸೆ ನೀಡಿತ್ತು. ಆದರೆ, ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಈ ಪ್ರಚಾರವನ್ನು ಸಂಪೂರ್ಣವಾಗಿ ತಳ್ಳಿಹಾಕಿದೆ.

Read Full Story

06:33 PM (IST) Jul 30

ಮಾಸಿಕ 20 ಸಾವಿರ ಸಂಬಳ - ದಿನಕ್ಕೆ 10 ಲಕ್ಷ ಖರ್ಚು! ಜಿರಳೆಗಳಿಗೆ ಊಟ ಕೊಟ್ಟವನ ಜಾತಕ ತೆರೆದ ಮುಸ್ಲಿಂ ಮುಖಂಡ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿಸಿ ನಡೆದ ಪ್ರತಿಭಟನೆಗೆ 35 ದಿನಗಳ ಕಾಲ ಉಚಿತ ಊಟ ನೀಡಿದ್ದ ಮೊಹಮ್ಮದ್ ಜುನೈದ್ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಭಟನಾಕಾರರಿಂದ ಕಡೆಗಣನೆಗೆ ಒಳಗಾಗಿ ಕಣ್ಣೀರು ಹಾಕಿರುವ ಅವರ ವಿರುದ್ಧವೇ ಇದೀಗ ದೇಶದ್ರೋಹದ ಆರೋಪ ಕೇಳಿಬಂದಿದ್ದು, ಅವರ ಹಣದ ಮೂಲದ ಬಗ್ಗೆ ತನಿಖೆಗೆ ಆಗ್ರಹಿಸಲಾಗಿದೆ.
Read Full Story

06:11 PM (IST) Jul 30

KKR ಮಾಜಿ ಕ್ರಿಕೆಟಿಗ ಈಗ ಬಾಂಗ್ಲಾದೇಶ ಏಕದಿನ ತಂಡದ ನೂತನ ನಾಯಕ..! ಹಿಂದೂ ಆಟಗಾರನಿಗೆ ಕ್ಯಾಪ್ಟನ್ ಪಟ್ಟ

2027ರ ಏಕದಿನ ವಿಶ್ವಕಪ್‌ ಅನ್ನು ಗುರಿಯಾಗಿಸಿಕೊಂಡು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ, ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ಆಟಗಾರ ಲಿಟನ್ ದಾಸ್‌ಗೆ ಸೀಮಿತ ಓವರ್‌ಗಳ ತಂಡದ ನಾಯಕತ್ವ ನೀಡಿದೆ. ಜಿಂಬಾಬ್ವೆ ವಿರುದ್ಧದ ಸರಣಿ ಸೋಲಿನ ಬೆನ್ನಲ್ಲೇ, ಮೆಹದಿ ಹಸನ್ ಮಿರಾಜ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
Read Full Story

06:09 PM (IST) Jul 30

ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದ ರಾಮಾಯಣ ಟ್ರೇಲರ್; ಸಿನಿಪ್ರಿಯರನ್ನು ಹುಚ್ಚೆಬ್ಬಿಸಿ ಕಿಕ್ಕೇರಿಸುವ 5 ಅಂಶಗಳು ಇವೇ ನೋಡಿ..!

ಭಾರತೀಯ ಚಿತ್ರರಂಗದಲ್ಲಿ ಸದ್ಯ ಕೇಳಿಬರುತ್ತಿರುವ ಏಕೈಕ ಹೆಸರು 'ರಾಮಾಯಣ'. ಬಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಿತೇಶ್ ತಿವಾರಿ ಕನಸಿನ ಕೂಸು, ಬಿಗ್ ಬಜೆಟ್‌ನ ಈ ಮಹಾಕಾವ್ಯ ರಾಮಾಯಣದ ಟ್ರೇಲರ್ ಈಗ ಬಿಡುಗಡೆಯಾಗಿದ್ದು, ಇಂಟರ್ನೆಟ್‌ನಲ್ಲಿ ಬೆಂಕಿ ಹಚ್ಚಿದೆ.

Read Full Story

05:14 PM (IST) Jul 30

Miss Universe India 2026 - ಈಜುಡುಗೆ ಸ್ಪರ್ಧೆಯಲ್ಲಿ ಬೆಂಗಳೂರಿನಲ್ಲಿ ಮಿಂಚಿದ ದೇಶದ 52 ಸುಂದರಿಯರು

ಮಿಸ್ ಯೂನಿವರ್ಸ್ ಇಂಡಿಯಾ 2026 ಸ್ಪರ್ಧೆಯ ಭಾಗವಾಗಿ ಬೆಂಗಳೂರಿನ ವಂಡರ್‌ಲಾದಲ್ಲಿ ಸ್ವಿಮ್‌ಸೂಟ್ ಸುತ್ತು ನಡೆಯಿತು. ಜೈಪುರದಲ್ಲಿ ನಡೆಯಲಿರುವ ಗ್ರ್ಯಾಂಡ್ ಫಿನಾಲೆಗೂ ಮುನ್ನ ನಡೆದ ಈ ನಿರ್ಣಾಯಕ ಸುತ್ತಿನಲ್ಲಿ, ದೇಶದ ವಿವಿಧ ರಾಜ್ಯಗಳಿಂದ ಆಯ್ಕೆಯಾದ 52 ಫೈನಲಿಸ್ಟ್‌ಗಳು ಭಾಗವಹಿಸಿದ್ದರು.

Read Full Story

04:46 PM (IST) Jul 30

ಅಜಿಂಕ್ಯ ರಹಾನೆ ನಿವೃತ್ತಿ ಬೆನ್ನಲ್ಲೇ ಅದೇ ಹಾದಿ ಹಿಡಿಯಲು ರೆಡಿಯಾದ ಐವರು ಕ್ರಿಕೆಟಿಗರು! ಲಿಸ್ಟ್‌ನಲ್ಲಿದ್ದಾರೆ ಏಕೈಕ ಕನ್ನಡಿಗ

ಬೆಂಗಳೂರು: ಮುಂಬೈ ಮೂಲದ ಸ್ಟಾರ್ ಕ್ರಿಕೆಟಿಗ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಇನ್ನೂ ಐದು ಕ್ರಿಕೆಟಿಗರು ನಿವೃತ್ತಿಯ ಹಾದಿಯಲ್ಲಿದ್ದಾರೆ. ಈ ಪಟ್ಟಿಯಲ್ಲಿ ಏಕೈಕ ಕನ್ನಡಿನ ಹೆಸರೂ ಇದೆ. ಈ ಕುರಿತಾದ ಹೆಚ್ಚಿನ ಡೀಟೈಲ್ಸ್ ಇಲ್ಲಿದೆ ನೋಡಿ

Read Full Story

04:43 PM (IST) Jul 30

ಮೋದಿ ಫುಲ್‌ ಖುಷ್‌, ಕೇಂದ್ರ ಸರ್ಕಾರದ ಖಜಾನೆಗೆ ಸಾವಿರಾರು ಕೋಟಿ ಸುರಿದ ಎಲ್‌ಐಸಿ!

ಭಾರತೀಯ ಜೀವ ವಿಮಾ ನಿಗಮವು (LIC) ಕೇಂದ್ರ ಸರ್ಕಾರಕ್ಕೆ ತನ್ನ ಪಾಲಿನ ₹12,207.25 ಕೋಟಿ ಲಾಭಾಂಶದ ಚೆಕ್ ಅನ್ನು ಹಸ್ತಾಂತರಿಸಿದೆ. ವಾರ್ಷಿಕ ಸಭೆಯಲ್ಲಿ, ಷೇರುದಾರರು ಪ್ರತಿ ಷೇರಿಗೆ ₹10 ಲಾಭಾಂಶಕ್ಕೆ ಅನುಮೋದನೆ ನೀಡಿದ್ದು, ನಿಗಮದ ಒಟ್ಟು ಆಸ್ತಿ ಮೌಲ್ಯ ₹59.03 ಲಕ್ಷ ಕೋಟಿಗೆ ಏರಿಕೆಯಾಗಿದೆ.
Read Full Story

02:43 PM (IST) Jul 30

'ಈಡಿಯಟ್​' ಮೂಲಕ ಇತಿಹಾಸ ಸೃಷ್ಟಿಸಿದ ರಾಹುಲ್​ ಗಾಂಧಿ - ಫೈರಿಂಗ್​ ಮಾಡಲು ಅಮಿತ್​ ಷಾ ಆದೇಶ ಕೊಟ್ರಂತೆ!

ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಹುಲ್ ಗಾಂಧಿ ಅವರು 'ಈಡಿಯಟ್' ಪದ ಬಳಸಿ ಮತ್ತು ಗೃಹ ಸಚಿವ ಅಮಿತ್ ಷಾ ವಿರುದ್ಧ ನೀಟ್ ಪರೀಕ್ಷೆ ವಿಚಾರವಾಗಿ ಸುಳ್ಳು ಆರೋಪ ಮಾಡಿ ಭಾರಿ ಕೋಲಾಹಲ ಸೃಷ್ಟಿಸಿದರು. ಇದರಿಂದಾಗಿ ಬಿಜೆಪಿ ಸಂಸದರು ಕ್ಷಮೆಗೆ ಆಗ್ರಹಿಸಿದ್ದು, ಸ್ಪೀಕರ್ ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಬೇಕಾಯಿತು.
Read Full Story

02:33 PM (IST) Jul 30

ರಾಮಾಯಣ ಟ್ರೈಲರ್‌ನಲ್ಲಿಯ 'ಡಬಲ್ ರೋಲ್' ನಿಮ್ಮ ಗಮನಕ್ಕೂ ಬಂದಿದೆಯಾ? ಫ್ಯಾನ್ಸ್ ಶಾಕ್

ಬಹುನಿರೀಕ್ಷಿತ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಡಬಲ್‌ ರೋಲ್ ನಿಮ್ಮ ಗಮನಕ್ಕೂ ಬಂದಿದೆಯಾ? ರಾಕಿಂಗ್ ಸ್ಟಾರ್‌ ಯಶ್ ಮತ್ತು ಸಾಯಿ ಪಲ್ಲವಿ ನಟನೆ ಮುಂದೆ ರಣಬೀರ್ ಮಂಕಾಗಿದ್ದಾರೆ ಎಂಬ ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ.

Read Full Story

01:57 PM (IST) Jul 30

Johnson & Johnson ಪೌಡರ್​ನಿಂದ ಕ್ಯಾನ್ಸರ್​ - 53 ಸಾವಿರ ಕೋಟಿ ರೂ. ಪರಿಹಾರ ನೀಡಲು ಕಂಪೆನಿ ಒಪ್ಪಿಗೆ

ಜಾನ್ಸನ್ ಆ್ಯಂಡ್ ಜಾನ್ಸನ್ ಕಂಪೆನಿಯ ಬೇಬಿ ಪೌಡರ್ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ ಎಂಬ ಆರೋಪದ ಮೇಲೆ, ಅಮೆರಿಕದಲ್ಲಿ ದಾಖಲಾದ ಪ್ರಕರಣಗಳಿಗೆ ಕಂಪನಿಯು ಸುಮಾರು 53 ಸಾವಿರ ಕೋಟಿ ರೂ. ಪರಿಹಾರ ನೀಡಲು ಒಪ್ಪಿಕೊಂಡಿದೆ. ಈ ಉತ್ಪನ್ನಗಳಿಂದ ಸಾವಿರಾರು ಮಕ್ಕಳು ಮತ್ತು ವಯಸ್ಕರು ಕ್ಯಾನ್ಸರ್‌ಗೆ ತುತ್ತಾಗಿದ್ದು, ಕಂಪನಿಯು ತನ್ನ ಉತ್ಪನ್ನಗಳು ಸುರಕ್ಷಿತವೆಂದು ವಾದಿಸುತ್ತಲೇ ಇದೆ.
Read Full Story

01:12 PM (IST) Jul 30

ಅವನನ್ನು ಯಾಕೆ ಸೆಲೆಕ್ಟ್ ಮಾಡಿದ್ರು? ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾದ ಸ್ಟಾರ್ ಆಟಗಾರನ ಆಯ್ಕೆಯ ಬಗ್ಗೆ ಎಬಿ ಡಿವಿಲಿಯರ್ಸ್ ಅಚ್ಚರಿ

ಬೆಂಗಳೂರು: ಕಳೆದ ಮಂಗಳವಾರ ಶ್ರೀಲಂಕಾ ಎದುರಿನ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ 15 ಆಟಗಾರರನ್ನೊಳಗೊಂಡ ಬಲಿಷ್ಠ ಭಾರತ ತಂಡವನ್ನು ಬಿಸಿಸಿಐ ಆಯ್ಕೆ ಸಮಿತಿ ಪ್ರಕಟಿಸಿದೆ. ಈ ಪೈಕಿ ಒಬ್ಬ ಆಟಗಾರನ ಆಯ್ಕೆಯ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

Read Full Story

12:15 PM (IST) Jul 30

ಭಾರತದ ಈ ನಗರಗಳಲ್ಲಿ ಕಡಿಮೆ ಬೆಲೆಗೆ ಸಿಗುತ್ತೆ ಚಿನ್ನ; ಜಾಣರು ಇಲ್ಲೇ ಖರೀದಿ ಮಾಡ್ತಾರೆ

ಭಾರತದಲ್ಲಿ ಚಿನ್ನ ಖರೀದಿ ಒಂದು ಸಂಪ್ರದಾಯ ಮತ್ತು ಹೂಡಿಕೆಯಾಗಿದೆ. ಮುಂಬೈ, ದೆಹಲಿ, ಚೆನ್ನೈ ಸೇರಿದಂತೆ ಕೆಲವು ನಗರಗಳಲ್ಲಿ ಹೋಲ್‌ಸೇಲ್ ಮಾರುಕಟ್ಟೆಗಳಿದ್ದು, ಇಲ್ಲಿ ತಯಾರಿಕಾ ಶುಲ್ಕ ಮತ್ತು ವೇಸ್ಟೇಜ್ ಕಡಿಮೆ ಇರುವುದರಿಂದ ಆಭರಣಗಳು ಅಗ್ಗವಾಗಿ ಸಿಗುತ್ತವೆ.

Read Full Story

12:14 PM (IST) Jul 30

ಕಟ್ಟಿಗೆ ಹೊರುತ್ತಿದ್ದ ಹೆಣ್ಣು ಮಗಳು ಚಿನ್ನದ ಪದಕಗಳನ್ನೇ ಎತ್ತಿ ಬಿಟ್ಟಳು.. ಒಂದಲ್ಲ.. ಎರಡಲ್ಲ.. ಒಂಬತ್ತು!

ಮಣಿಪುರದ ಮೀರಾಬಾಯಿ ಚಾನು, ಬಡತನದಲ್ಲಿ ಬೆಳೆದು ಕಾಡಿನಿಂದ ಕಟ್ಟಿಗೆ ಹೊತ್ತು ತರುತ್ತಿದ್ದ ಹುಡುಗಿ. ತನ್ನ ಕಠಿಣ ಪರಿಶ್ರಮದಿಂದ ವೇಟ್ ಲಿಫ್ಟಿಂಗ್’ನಲ್ಲಿ ದೇಶಕ್ಕೆ ಕೀರ್ತಿ ತಂದಿದ್ದು, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಷಿಪ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಲಾರಿ ಹತ್ತಿ ತರಬೇತಿಗೆ ಹೋಗುತ್ತಿದ್ದ ಅವರ ಸ್ಪೂರ್ತಿದಾಯಕ ಪಯಣದ ಕಥೆಯಿದು.
Read Full Story

12:02 PM (IST) Jul 30

Paper Leak - ಪಂಜಾಬ್ ಪೇಪರ್ ಲೀಕ್; ಆಪ್ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಪ್ಲಾನ್, ಸಿಬಿಐ ತನಿಖೆಗೆ ಎಸ್‌ಎಡಿ ಪಟ್ಟು

ಪಂಜಾಬ್ ಪೇಪರ್ ಲೀಕ್ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಹೀಗಾಗಿ ದೆಹಲಿಯ ಆಪ್ ಕಚೇರಿ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ಆಪ್ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ 11 ಪರೀಕ್ಷಾ ಹಗರಣಗಳ ಬಗ್ಗೆ ಸಿಬಿಐ ತನಿಖೆಗೆ ಎಸ್‌ಎಡಿ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಆಗ್ರಹಿಸಿದ್ದಾರೆ.

Read Full Story

11:18 AM (IST) Jul 30

ಲಂಕಾ ಎದುರಿನ ಟೆಸ್ಟ್ ಸರಣಿಯಿಂದ ಔಟ್; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ

ಟೀಂ ಇಂಡಿಯಾದ ಮಾಜಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. 2020-21ರ ಆಸ್ಟ್ರೇಲಿಯಾ ಸರಣಿ ಗೆಲುವಿನ ನಾಯಕರಾಗಿದ್ದ ರಹಾನೆ, ಆಯ್ಕೆ ಸಮಿತಿಯಿಂದ ನಿರಂತರ ಕಡೆಗಣನೆಗೆ ಒಳಗಾದ ನಂತರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
Read Full Story

10:41 AM (IST) Jul 30

ಕಾಮನ್‌ವೆಲ್ತ್ ಗೇಮ್ಸ್‌ - ಭಾರತದ 10 ಬಾಕ್ಸರ್‍‌ಗಳಿಗೆ ಮೆಡಲ್ ಖಚಿತ, ಹೊಸ ದಾಖಲೆ

ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಒಟ್ಟು ಪದಕಗಳ ಸಂಖ್ಯೆ 12ಕ್ಕೆ ಏರಿದೆ. ಅಥ್ಲೆಟಿಕ್ಸ್‌ನಲ್ಲಿ ಗುಲ್ವೀರ್‌ ಸಿಂಗ್‌ ಐತಿಹಾಸಿಕ ಬೆಳ್ಳಿ ಗೆದ್ದರೆ, ವೇಟ್‌ಲಿಫ್ಟಿಂಗ್‌ನಲ್ಲಿ ಹರ್ಜಿಂದರ್‌ ಕೌರ್‌ ಬೆಳ್ಳಿ ಪದಕ ಗಳಿಸಿದರು. ಬಾಕ್ಸಿಂಗ್‌ನಲ್ಲಿ ಭಾರತೀಯರು 10 ಪದಕಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
Read Full Story

09:33 AM (IST) Jul 30

ಶ್ರೀರಾಮಚಂದ್ರನ ರಾಣಿ ಸೀತೆಯಾಗಿ ಸಾಯಿ ಪಲ್ಲವಿ 3 ಲುಕ್‌ ರಿವೀಲ್; ದೈವಿಕ ಕಳೆ ಎಂದ ಫ್ಯಾನ್ಸ್

ಬಹುನಿರೀಕ್ಷಿತ 'ರಾಮಾಯಣ ಭಾಗ-1' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಗಮನ ಸೆಳೆದಿದ್ದಾರೆ. ಟ್ರೈಲರ್‌ನಲ್ಲಿ ಸ್ವಯಂವರ, ವನವಾಸ ಸೇರಿದಂತೆ ಅವರ ಮೂರು ವಿಭಿನ್ನ ನೋಟಗಳನ್ನು ತೋರಿಸಲಾಗಿದ್ದು, ರಾವಣನಾಗಿ ಯಶ್ ಮತ್ತು ರಾಮನಾಗಿ ರಣ್‌ಬೀರ್ ಕಪೂರ್ ಕೂಡ ಮಿಂಚಿದ್ದಾರೆ.
Read Full Story

07:58 AM (IST) Jul 30

ತೆರೆಕಂಡಿತು ರಾಮಾಯಣ ಟ್ರೈಲರ್; ಒಂದೊಂದು ಪಾತ್ರದ ಅನಾವರಣ; ಯಶ್ ಲುಕ್ ಹೇಗಿದೆ ಗೊತ್ತಾ?

ಯಶ್, ರಣ್‌ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೈಲರ್ ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ರಾವಣನಾಗಿ ಯಶ್, ರಾಮನಾಗಿ ರಣ್‌ಬೀರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಈ ಟ್ರೈಲರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
Read Full Story

07:40 AM (IST) Jul 30

ಮಾಜಿ ಬಸ್ ಚಾಲಕನ ಮನೆಯಲ್ಲಿ 20 ಕೋಟಿಗೂ ಅಧಿಕ ದುಡ್ಡು, 15 ಕೆಜಿ ಚಿನ್ನ ಪತ್ತೆ..! ಭಾರೀ ಸಂಚಲನ..!

ದಾಳಿ ವೇಳೆ ಚಿನ್ನ ಮತ್ತು ಹಣ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ನಗದು ಎಣಿಕೆಗೆ 5 ಮಷಿನ್‌ಗಳನ್ನ ತಂದಿದ್ದಾರೆ. ಇತ್ತ ಮುಖ್ಯಮಂತ್ರಿ ಅವರು ಭ್ರಷ್ಟರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

Read Full Story

More Trending News