LIVE NOW
Published : Jul 30, 2026, 07:05 AM ISTUpdated : Jul 30, 2026, 12:02 PM IST

India Latest News Live: Paper Leak - ಪಂಜಾಬ್ ಪೇಪರ್ ಲೀಕ್; ಆಪ್ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಪ್ಲಾನ್, ಸಿಬಿಐ ತನಿಖೆಗೆ ಎಸ್‌ಎಡಿ ಪಟ್ಟು

ಸಾರಾಂಶ

ಛತ್ರಪತಿ ಸಂಭಾಜಿ ನಗರ: ‘ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಉಗ್ರರಲ್ಲ, ದೇಶದ ಭವಿಷ್ಯ. ಅವರನ್ನು ಸರ್ಕಾರ ಹಿಂಸಿಸಬಾರದು. ಸರ್ಕಾರ ಸರಿಯಾದ ಮಾರ್ಗದಲ್ಲಿ ನಡೆಯದಿದ್ದರೆ ಯುವಕರು ಅದನ್ನೇ (ಸರ್ಕಾರವನ್ನೇ) ಬದಲಿಸುತ್ತಾರೆ’ ಎಂದು ಸಿಜೆಪಿ ಸ್ಥಾಪಕ ಅಭಿಜೀತ್‌ ದೀಪ್ಕೆ ಎಚ್ಚರಿಸಿದ್ದಾರೆ.

ತಮ್ಮ ತವರಾದ ಛತ್ರಪತಿ ಸಂಭಾಜಿ ನಗರದ ವಿಮಾನ ನಿಲ್ದಾಣದಲ್ಲಿ ಬಂದಿಳಿದ ದೀಪ್ಕೆ, ‘ಹೋರಾಟದ ಬಳಿಕ ಹಲವು ರಾಜ್ಯಗಳಲ್ಲಿ ಸರ್ಕಾರಗಳು ವಿದ್ಯಾರ್ಥಿಗಳನ್ನು ಹಿಂಸಿಸುತ್ತಿವೆ. ಪೊಲೀಸರು ಮನೆಗೇ ಹೋಗಿ ಬಂಧಿಸುವ ಬೆದರಿಕೆ ಹಾಕುತ್ತಿದ್ದಾರೆ. ಸರ್ಕಾರ ಈಗಲಾದರೂ ಸರಿಯಾಗಿ ವರ್ತಿಸಬೇಕು. ಇಲ್ಲದಿದ್ದರೆ, ಈಗ ಸಚಿವರನ್ನುಬದಲಿಸಿದವರು ಮುಂದೆ ಸರ್ಕಾರವನ್ನೇ ಬದಲಿಸಬೇಕಾಗುತ್ತದೆ’ ಎಂದರು. ಜತೆಗೆ, ಅಗತ್ಯವಿದ್ದರೆ ಇನ್ನೂ ದೊಡ್ಡ ಹೋರಾಟ ಮಾಡುವುದಾಗಿಯೂ ಹೇಳಿದರು.

12:02 PM (IST) Jul 30

Paper Leak - ಪಂಜಾಬ್ ಪೇಪರ್ ಲೀಕ್; ಆಪ್ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಪ್ಲಾನ್, ಸಿಬಿಐ ತನಿಖೆಗೆ ಎಸ್‌ಎಡಿ ಪಟ್ಟು

ಪಂಜಾಬ್ ಪೇಪರ್ ಲೀಕ್ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿದೆ. ಹೀಗಾಗಿ ದೆಹಲಿಯ ಆಪ್ ಕಚೇರಿ ಬಳಿ ಬಿಗಿ ಭದ್ರತೆ ಒದಗಿಸಲಾಗಿದೆ. ಆಪ್ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ 11 ಪರೀಕ್ಷಾ ಹಗರಣಗಳ ಬಗ್ಗೆ ಸಿಬಿಐ ತನಿಖೆಗೆ ಎಸ್‌ಎಡಿ ಸಂಸದೆ ಹರ್ಸಿಮ್ರತ್ ಕೌರ್ ಬಾದಲ್ ಆಗ್ರಹಿಸಿದ್ದಾರೆ.

Read Full Story

11:18 AM (IST) Jul 30

ಲಂಕಾ ಎದುರಿನ ಟೆಸ್ಟ್ ಸರಣಿಯಿಂದ ಔಟ್; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ಗುಡ್ ಬೈ ಹೇಳಿದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ

ಟೀಂ ಇಂಡಿಯಾದ ಮಾಜಿ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. 2020-21ರ ಆಸ್ಟ್ರೇಲಿಯಾ ಸರಣಿ ಗೆಲುವಿನ ನಾಯಕರಾಗಿದ್ದ ರಹಾನೆ, ಆಯ್ಕೆ ಸಮಿತಿಯಿಂದ ನಿರಂತರ ಕಡೆಗಣನೆಗೆ ಒಳಗಾದ ನಂತರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
Read Full Story

10:41 AM (IST) Jul 30

ಕಾಮನ್‌ವೆಲ್ತ್ ಗೇಮ್ಸ್‌ - ಭಾರತದ 10 ಬಾಕ್ಸರ್‍‌ಗಳಿಗೆ ಮೆಡಲ್ ಖಚಿತ, ಹೊಸ ದಾಖಲೆ

ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಒಟ್ಟು ಪದಕಗಳ ಸಂಖ್ಯೆ 12ಕ್ಕೆ ಏರಿದೆ. ಅಥ್ಲೆಟಿಕ್ಸ್‌ನಲ್ಲಿ ಗುಲ್ವೀರ್‌ ಸಿಂಗ್‌ ಐತಿಹಾಸಿಕ ಬೆಳ್ಳಿ ಗೆದ್ದರೆ, ವೇಟ್‌ಲಿಫ್ಟಿಂಗ್‌ನಲ್ಲಿ ಹರ್ಜಿಂದರ್‌ ಕೌರ್‌ ಬೆಳ್ಳಿ ಪದಕ ಗಳಿಸಿದರು. ಬಾಕ್ಸಿಂಗ್‌ನಲ್ಲಿ ಭಾರತೀಯರು 10 ಪದಕಗಳನ್ನು ಖಚಿತಪಡಿಸಿಕೊಳ್ಳುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿದ್ದಾರೆ.
Read Full Story

09:33 AM (IST) Jul 30

ಶ್ರೀರಾಮಚಂದ್ರನ ರಾಣಿ ಸೀತೆಯಾಗಿ ಸಾಯಿ ಪಲ್ಲವಿ 3 ಲುಕ್‌ ರಿವೀಲ್; ದೈವಿಕ ಕಳೆ ಎಂದ ಫ್ಯಾನ್ಸ್

ಬಹುನಿರೀಕ್ಷಿತ 'ರಾಮಾಯಣ ಭಾಗ-1' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ಗಮನ ಸೆಳೆದಿದ್ದಾರೆ. ಟ್ರೈಲರ್‌ನಲ್ಲಿ ಸ್ವಯಂವರ, ವನವಾಸ ಸೇರಿದಂತೆ ಅವರ ಮೂರು ವಿಭಿನ್ನ ನೋಟಗಳನ್ನು ತೋರಿಸಲಾಗಿದ್ದು, ರಾವಣನಾಗಿ ಯಶ್ ಮತ್ತು ರಾಮನಾಗಿ ರಣ್‌ಬೀರ್ ಕಪೂರ್ ಕೂಡ ಮಿಂಚಿದ್ದಾರೆ.
Read Full Story

07:58 AM (IST) Jul 30

ತೆರೆಕಂಡಿತು ರಾಮಾಯಣ ಟ್ರೈಲರ್; ಒಂದೊಂದು ಪಾತ್ರದ ಅನಾವರಣ; ಯಶ್ ಲುಕ್ ಹೇಗಿದೆ ಗೊತ್ತಾ?

ಯಶ್, ರಣ್‌ಬೀರ್ ಕಪೂರ್ ಮತ್ತು ಸಾಯಿ ಪಲ್ಲವಿ ಅಭಿನಯದ 'ರಾಮಾಯಣ' ಚಿತ್ರದ ಟ್ರೈಲರ್ ಬ್ರಾಹ್ಮೀ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ರಾವಣನಾಗಿ ಯಶ್, ರಾಮನಾಗಿ ರಣ್‌ಬೀರ್ ಮತ್ತು ಸೀತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದು, ಈ ಟ್ರೈಲರ್ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಹೆಚ್ಚಿಸಿದೆ.
Read Full Story

07:40 AM (IST) Jul 30

ಮಾಜಿ ಬಸ್ ಚಾಲಕನ ಮನೆಯಲ್ಲಿ 20 ಕೋಟಿಗೂ ಅಧಿಕ ದುಡ್ಡು, 15 ಕೆಜಿ ಚಿನ್ನ ಪತ್ತೆ..! ಭಾರೀ ಸಂಚಲನ..!

ದಾಳಿ ವೇಳೆ ಚಿನ್ನ ಮತ್ತು ಹಣ ಕಂಡು ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ನಗದು ಎಣಿಕೆಗೆ 5 ಮಷಿನ್‌ಗಳನ್ನ ತಂದಿದ್ದಾರೆ. ಇತ್ತ ಮುಖ್ಯಮಂತ್ರಿ ಅವರು ಭ್ರಷ್ಟರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

Read Full Story

More Trending News