ನವದೆಹಲಿ: ಜು.20ರಂದು ಜಂತರ್ಮಂತರ್ನಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ಪೊಲೀಸರ ಮೇಲೆ ಹಲ್ಲೆಯಾಗಿರುವುದನ್ನು ಖಂಡಿಸಿ ಒಗ್ಗಟ್ಟು ಪ್ರದರ್ಶಿಸಲು ನಿವೃತ್ತ ಪೊಲೀಸರ ಸಂಘಟನೆ ಆಗಿರುವ ದೆಹಲಿ ಪೊಲೀಸ್ ಫೆಡರೇಶನ್ ಜು.31ಕ್ಕೆ ಪ್ರತಿಭಟನೆ ನಡೆಸಲು ಮುಂದಾಗಿದೆ.
ಈ ಕುರಿತು ಫೆಡರೇಶನ್, ಅನುಮತಿ ಕೋರಿ ದೆಹಲಿ ಪೊಲೀಸ್ ಕಮಿಷನರ್ ಅನುರಾಗ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಜು.31ರ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆ ತನಕ ಜಂತರ್ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಅನುಮತಿಸುವಂತೆ ಕೋರಿದೆ. ವಿದ್ಯಾರ್ಥಿಗಳ ಧರಣಿ ಸಂದರ್ಭದಲ್ಲಿ ಭದ್ರತೆಗೆ ನಿಯೋಜಿತರಾಗಿದ್ದ ಪೊಲೀಸರ ತ್ಯಾಗ ಗುರುತಿಸಲು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
11:42 PM (IST) Jul 29
ಟಾಲಿವುಡ್ನ ಸ್ಟಾರ್ ನಿರ್ದೇಶಕ ರಾಜಮೌಳಿ ಸಿನಿಮಾಗಳು ನೂರಾರು, ಸಾವಿರಾರು ಕೋಟಿ ಕಲೆಕ್ಷನ್ ಮಾಡುತ್ತವೆ. ಇಂತಹ ಬೃಹತ್ ಚಿತ್ರಗಳನ್ನು ಮಾಡುವ ಜಕ್ಕಣ್ಣ ಒಂದು ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ ಗೊತ್ತಾ?
10:51 PM (IST) Jul 29
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ತೆಲುಗು ನಟ ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಝ್ನೋವಾ ಅಂತಾನೇ ಎಲ್ಲರಿಗೂ ಗೊತ್ತು. ಆದರೆ, ಅವರು ಈಗ ಅಧಿಕೃತವಾಗಿ ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅವರ ಹೊಸ ಹೆಸರೇನು ಅಂತ ತಿಳಿದುಕೊಳ್ಳೋಣ ಬನ್ನಿ.
10:28 PM (IST) Jul 29
10:11 PM (IST) Jul 29
ಮಹೀಂದ್ರಾ ಅಂಡ್ ಮಹೀಂದ್ರಾ ತನ್ನ ಟ್ರಕ್ ಮತ್ತು ಬಸ್ ವಿಭಾಗವನ್ನು ₹525 ಕೋಟಿಗೆ 'ಎಸ್ಎಮ್ಎಲ್ ಮಹೀಂದ್ರಾ'ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಬೃಹತ್ ಪುನರ್ರಚನೆಯು ಕಂಪನಿಯ ವಾಣಿಜ್ಯ ವಾಹನಗಳ ಉದ್ಯಮವನ್ನು ಒಂದೇ ಸೂರಿನಡಿ ತಂದು, ಜಾಗತಿಕ ಮಟ್ಟದಲ್ಲಿ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ.
08:47 PM (IST) Jul 29
ತನ್ನ ವಿವಾದಾತ್ಮಕ ವೈಯಕ್ತಿಕ ಜೀವನದಿಂದಲೇ ಸದಾ ಸುದ್ದಿಯಲ್ಲಿರುವ ಈ ನಟಿ, ಹಲವು ಬಾರಿ ಧರ್ಮ ಬದಲಾವಣೆ ಮಾಡಿಕೊಂಡಿದ್ದಾರೆ. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ, ನಂತರ ಇಸ್ಲಾಂಗೆ ಮತಾಂತರಗೊಂಡರು.
08:18 PM (IST) Jul 29
ಗುಜರಾತ್ನ ಭೂಮಿಕಾ ಶಜ್ವಾನಿ ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದ 'ಮಿಸೆಸ್ ಅರ್ಥ್ ಎಲೈಟ್ 2026' ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯ ಕಿರೀಟ ಗೆದ್ದಿದ್ದಾರೆ. ಈ ಗೆಲುವು ಸೌಂದರ್ಯದ ಜೊತೆಗೆ ಆತ್ಮವಿಶ್ವಾಸ, ನಾಯಕತ್ವ ಹಾಗೂ ಮಹಿಳಾ ಸಬಲೀಕರಣದಂತಹ ಜವಾಬ್ದಾರಿಯ ಮಹತ್ವ ಸಾರುತ್ತದೆ.
07:45 PM (IST) Jul 29
'ಕಾಕ್ರೋಚ್ ಜನತಾ ಪಕ್ಷ'ದಿಂದ ಫೇಮಸ್ ಆದ ಅಭಿಜೀತ್ ದೀಪ್ಕೆಗೆ ಸಾಕಷ್ಟು ಮದುವೆ ಪ್ರಪೋಸಲ್ಗಳು ಬರುತ್ತಿವೆ. ಆದರೂ 30 ವರ್ಷವಾದ ದೀಪ್ಕೆ ಯಾಕೆ ಮದುವೆಯಾಗುತ್ತಿಲ್ಲ ಎಂಬ ರಹಸ್ಯವನ್ನು ಅವರ ತಾಯಿ ಅನಿತಾ ದೀಪ್ಕೆ ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದೇನು?
06:01 PM (IST) Jul 29
ಇನ್ಫ್ಲುಯೆನ್ಸರ್ ಶ್ರದ್ಧಾ ಸಿಂಗ್, RAF ಯೋಧರ ನೀಲಿ ಸಮವಸ್ತ್ರವನ್ನು ಲೇವಡಿ ಮಾಡಿದ ರೀಲ್ಸ್ ವಿವಾದಕ್ಕೆ ಗುರಿಯಾಗಿದೆ. ವೀಡಿಯೋ ವೈರಲ್ ಆಗಿ ತೀವ್ರ ಟ್ರೋಲಿಂಗ್ ಎದುರಿಸಿದ ಅವರು, ತಮ್ಮ ತಪ್ಪಿನ ಅರಿವಾಗಿ ವೀಡಿಯೋ ಡಿಲೀಟ್ ಮಾಡಿ ಸ್ಪಷ್ಟನೆ ನೀಡಿದರೂ, ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಕಡಿಮೆಯಾಗಿಲ್ಲ.
04:43 PM (IST) Jul 29
ಕರ್ನಾಟಕದ ಹುಬ್ಬಳ್ಳಿಯನ್ನು ತಮ್ಮ ಮುಖ್ಯ ಕೇಂದ್ರವನ್ನಾಗಿ ಮಾಡಿಕೊಂಡಿದ್ದ ಶ್ರೀ ಸಿದ್ದಾರೂಢ ಸ್ವಾಮೀಜಿ (1836-1929), ಅದ್ವೈತ ವೇದಾಂತ ಪರಂಪರೆಯ ಶ್ರೇಷ್ಠ ಗುರು ಹಾಗೂ ಸಮಾಜ ಸುಧಾರಕರಾಗಿದ್ದರು. ಇವರು ಸಮಾಜಕ್ಕೆ ವಿಶ್ವ ಭ್ರಾತೃತ್ವ ಮತ್ತು ಮಾನವ ಸಮಾನತೆಯ ಸಂದೇಶವನ್ನು ನೀಡಿದರು. ನಟ ಅಲ್ಲು ಅರ್ಜುನ್ ಅವರಿಗಿಘ ಶ್ರೀಗಳ ಶ್ರೀರಕ್ಷೆ ಸಿಕ್ಕಿದೆ.
04:20 PM (IST) Jul 29
03:55 PM (IST) Jul 29
03:53 PM (IST) Jul 29
ಪರೀಕ್ಷಾ ಅಕ್ರಮ ತಡೆಯಲು ಕೇಂದ್ರ ಸರ್ಕಾರ ಮಂಡಿಸಿದ ಆ್ಯಂಟಿ ಪೇಪರ್ ಲೀಕ್ ಬಿಲ್ ಲೋಕಸಭೆಯಲ್ಲಿ ಪಾಸ್ ಆಗಿದೆ. ವಿಪಕ್ಷಗಳ ಭಾರಿ ಗದ್ದಲದ ನಡುವೆ ಧ್ವನಿಮತದ ಮೂಲಕ ಬಿಲ್ ಪಾಸ್ ಮಾಡಲಾಗಿದೆ.
03:26 PM (IST) Jul 29
03:17 PM (IST) Jul 29
01:37 PM (IST) Jul 29
01:28 PM (IST) Jul 29
ಪರೀಕ್ಷಾ ಸುಧಾರಣೆಗೆ ಕೇಂದ್ರ ಸರ್ಕಾರ ರಚಿಸಿದ ಹೈಪವರ್ ಟಾಸ್ಕ್ ಫೋರ್ಸ್ನಲ್ಲಿರುವ ಐಐಟಿ ಮಡ್ರಾಸ್ ನಿರ್ದೇಶಕ ವಿ ಕಾಮಕೋಟಿ ಸದಸ್ಯರಾಗಿದ್ದಾರೆ. ಇದೇ ಕಾಮಕೋಟಿ ವಿರುದ್ದ ಪ್ರಿಯಾಂಕಾ ಗಾಂಧಿ ನಾಲಗೆ ಹರಿಬಿಟ್ಟಿದ್ದಾರೆ. ವಿ ಕಾಮಕೋಟಿ ಸಾಧನೆಗಳೇನು?
12:45 PM (IST) Jul 29
ಬಿಲ್ಕಿಸ್ ಬಾನು ಪ್ರಕರಣದ ಬಗ್ಗೆ ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕಾ ಗಾಂಧಿ ಟೀಕೆ. ಕಾಂಗ್ರೆಸ್ ಸಂಸದ ಗುರ್ಜೀತ್ ಸಿಂಗ್ ಔಜ್ಲಾ ಸಮರ್ಥನೆ. ಇದು ಲೋಕಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು. ಪ್ರಿಯಾಂಕಾ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಕ್ಷಮೆ ಕೇಳಬೇಕು ಎಂದು ಜೋಷಿ, ರಿಜಿಜು ಆಗ್ರಹಿಸಿದ್ದಾರೆ.
12:42 PM (IST) Jul 29
12:41 PM (IST) Jul 29
ಒಬ್ಬರಿಗೆ ಒಂದು ಕಾರು ಮಾತ್ರ ಬಳಕೆ. ಕೇಂದ್ರ ಸರ್ಕಾರ ದಿಢೀರ್ ಹೊಸ ನೀತಿಯನ್ನು ಜಾರಿಗೆ ತಂದಿದೆ.ಹಿರಿಯ ಅಧಿಕಾರಿಗಳು, ಐಎಎಸ್ ಅಧಿಕಾರಿಗಳು ಹೆಚ್ಚುವರಿ ವಾಹನ ಬಳಕೆಗೆ ಕೇಂದ್ರ ಸರ್ಕಾರ ತಡೆ ಹಾಕಿದೆ. ಏನಿದು ಹೊಸ ನಿಯಮ?
12:30 PM (IST) Jul 29
12:17 PM (IST) Jul 29
12:17 PM (IST) Jul 29
11:43 AM (IST) Jul 29
ಇದು ಭಾರತದ 'ಮುತ್ತಿನ ನಗರಿ' ಎಂದು ಪ್ರಸಿದ್ಧವಾಗಿದೆ. ಪರ್ಷಿಯನ್ ಕೊಲ್ಲಿಯಿಂದ ಮುತ್ತುಗಳನ್ನು ಆಮದು ಮಾಡಿಕೊಳ್ಳುವ ಮೂಲಕ ಇದು ಮುತ್ತಿನ ವ್ಯಾಪಾರದ ಪ್ರಮುಖ ಕೇಂದ್ರವಾಯಿತು. ಈ ನಗರ ಬೆಂಗಳೂರಿನಿಂದ 10 ಗಂಟೆಯ ದೂರದಲ್ಲಿದೆ. ಈ ನಗರಕ್ಕೆ ನೀವು ಬಸ್, ರೈಲು ಮತ್ತು ವಿಮಾನದ ಮೂಲಕ ಹೋಗಬಹುದಾಗಿದೆ .
11:41 AM (IST) Jul 29
10:58 AM (IST) Jul 29
10:50 AM (IST) Jul 29
ಗೂಗಲ್ನ ಪೋಷಕ ಕಂಪನಿ ಆಲ್ಫಾಬೆಟ್ನ ವಾರ್ಷಿಕ ಆದಾಯ 25 ಲಕ್ಷ ಕೋಟಿ ರೂ. ದಾಟುತ್ತದೆ. ಜಾಹೀರಾತು, ಯೂಟ್ಯೂಬ್ ಮತ್ತು ಇತರ ಸೇವೆಗಳಿಂದ ಹಣ ಗಳಿಸುವ ಗೂಗಲ್, ಎಷ್ಟು ಸೆಕೆಂಡುಗಳಲ್ಲಿ ಕೋಟಿ ರೂಪಾಯಿ ಸಂಪಾದಿಸುತ್ತೆ?
10:23 AM (IST) Jul 29
ಅಮೆರಿಕ-ಇರಾನ್ ನಡುವೆ ಸಂಘರ್ಷ ತೀವ್ರಗೊಂಡಿರುವ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮಂಗಳವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನ ಭೇಟಿಯಾಗಿರುವುದು ಜಾಗತಿಕ ಸಂಚಲನ ಮೂಡಿಸಿದೆ.
07:10 AM (IST) Jul 29
ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ, ಕ್ರಿಮಿನಲ್ ಹಿನ್ನೆಲೆ ಇಲ್ಲದ 18 ವರ್ಷದೊಳಗಿನ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ಘಟನೆಯ ಡಿಜಿಟಲ್ ಸಾಕ್ಷ್ಯಗಳನ್ನು ಸಂರಕ್ಷಿಸಲು ಮತ್ತು ಹಿಂಸಾಚಾರದ ಬಗ್ಗೆ ಎಸ್ಐಟಿ ತನಿಖೆ ನಡೆಸುವ ಬಗ್ಗೆಯೂ ನ್ಯಾಯಾಲಯ ಒಲವು ವ್ಯಕ್ತಪಡಿಸಿದೆ.