Published : Aug 26, 2026, 05:29 AM ISTUpdated : Aug 26, 2026, 11:07 PM IST

India Latest News Live: ಸುಕೇಶ್ ಚಂದ್ರಶೇಖರ್ ಬಳಿ ಎಷ್ಟು ಹಣ ಇದೆ? ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಕೋಟಿ ಕೋಟಿ ಸಂಪಾದನೆ..

ಸಾರಾಂಶ

ಮುಂಬೈ: ಆಟೋ-ರಿಕ್ಷಾ, ಟ್ಯಾಕ್ಸಿ ಮತ್ತು ಆ್ಯಪ್-ಆಧರಿತ ಕ್ಯಾಬ್ ಚಾಲಕರಿಗೆ ಮರಾಠಿ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಮುಂಬೈನ ನಾಲ್ವರು ಕ್ಯಾಬ್ ಚಾಲಕರು ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರದ ಈ ನಿಯಮವು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು), ವಿಧಿ 19 (ವೃತ್ತಿ ಸ್ವಾತಂತ್ರ್ಯ) ಹಾಗೂ ವಿಧಿ 21ರ ಅಡಿ (ಜೀವಿಸುವ ಹಕ್ಕು) ಸಿಗುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯು ಚಾಲನಾ ಪರವಾನಗಿ ನೀಡಲು ಯಾವುದೇ ನಿರ್ದಿಷ್ಟ ಭಾಷಾ ಅರ್ಹತೆಯನ್ನು ಕಡ್ಡಾಯಗೊಳಿಸಿಲ್ಲ ಮತ್ತು ಈ ಆಧಾರದ ಮೇಲೆ ಪರವಾನಗಿ ರದ್ದುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ನಿಯಮಕ್ಕೆ ತಡೆ ನೀಡುವಂತೆ ಕೋರಲಾಗಿದೆ.

11:07 PM (IST) Aug 26

ಸುಕೇಶ್ ಚಂದ್ರಶೇಖರ್ ಬಳಿ ಎಷ್ಟು ಹಣ ಇದೆ? ಜೈಲಿನ ಗೋಡೆಗಳ ಮಧ್ಯೆ ಇದ್ದರೂ ಕೋಟಿ ಕೋಟಿ ಸಂಪಾದನೆ..

ಸುಕೇಶ್ ಚಂದ್ರಶೇಖರ್ 200 ಕೋಟಿ ರೂಪಾಯಿ ವಂಚನೆ ಪ್ರಕರಣದ ಆರೋಪಿಯಾಗಿದ್ದು, ತಿಹಾರ್ ಜೈಲಿನ ಒಳಗಿದ್ದೂ ತನ್ನ ವಂಚನೆಯ ಜಾಲವನ್ನು ನಡೆಸುತ್ತಿದ್ದ ಎನ್ನಲಾಗಿದೆ. ಜಾರಿ ನಿರ್ದೇಶನಾಲಯವು ಆತನ ಐಷಾರಾಮಿ ಆಸ್ತಿಗಳನ್ನು ಜಪ್ತಿ ಮಾಡಿದ್ದರೂ, ಆತ ದೊಡ್ಡ ಮೊತ್ತದ ಹಣಕಾಸಿನ ಹೂಡಿಕೆಯ ಆಫರ್‌ಗಳನ್ನು ನೀಡುವ ಮೂಲಕ ಸದಾ ಸುದ್ದಿಯಲ್ಲಿದ್ದಾನೆ.

Read Full Story

10:51 PM (IST) Aug 26

ಕಾರು, ಬೈಕ್‌ಗಳಿಗೆ ಹೊಸ ನಿಯಮ - ಹೈ ಬೀಮ್ ಹೆಡ್‌ಲೈಟ್ ಲೈಟ್ ಬಳಸಿದರೆ ಗಾಡಿಯಲ್ಲಿ ಬಾರಿಸಲಿದೆ ಅಲಾರಾಂ!

ರಾತ್ರಿ ಅಪಘಾತಗಳನ್ನು ತಡೆಯಲು ಕೇಂದ್ರ ಸರ್ಕಾರವು ವಾಹನಗಳ ಹೈ ಬೀಮ್ ಹೆಡ್‌ಲೈಟ್‌ ಬಳಕೆಗೆ ಹೊಸ ನಿಯಮಗಳನ್ನು ಪ್ರಸ್ತಾಪಿಸಿದೆ. ಈ ಪ್ರಸ್ತಾವನೆಯಲ್ಲಿ ಬೆಳಕಿನ ತೀವ್ರತೆಗೆ ಮಿತಿ, ಅನಗತ್ಯ ಬಳಕೆಗೆ ದಂಡ ಮತ್ತು ಲೈಸೆನ್ಸ್ ಅಮಾನತುಗೊಳಿಸುವಂತಹ ಕಠಿಣ ಕ್ರಮಗಳು ಸೇರಿವೆ.
Read Full Story

09:51 PM (IST) Aug 26

ಪ್ರಭಾಸ್ ಫ್ಯಾನ್ಸ್‌ಗೆ ಬಿಗ್ ನ್ಯೂಸ್ - ‘ಸ್ಪಿರಿಟ್’ಗೆ A ಸರ್ಟಿಫಿಕೇಟ್ ಖಚಿತ, ವಂಗಾ ಹೇಳೋದೇನು?

Prabhas Spirit ಸಿನಿಮಾದ ಕಂಟೆಂಟ್‌ನಿಂದಾಗಿ ಅದಕ್ಕೆ 'ಎ' ಸರ್ಟಿಫಿಕೇಟ್ ಖಚಿತ ಎಂದು ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹೇಳಿದ್ದಾರೆ. ಅಲ್ಲದೆ, 2027ರ ಮಾರ್ಚ್ 5ರ ಬಿಡುಗಡೆ ದಿನಾಂಕದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

Read Full Story

09:19 PM (IST) Aug 26

ಫ್ಲೈಟ್‌ನಲ್ಲಿ ರಜನಿಕಾಂತ್ ಪಕ್ಕ ಸೀಟ್ - ನಟಿ ಕಯಾದು ಲೋಹರ್ ಫ್ಯಾನ್‌ಗರ್ಲ್ ಮೊಮೆಂಟ್ ವೈರಲ್!

Kollywood Actor Rajinikanth ಅವರ ಪಕ್ಕವೇ ವಿಮಾನದಲ್ಲಿ ಕುಳಿತುಕೊಂಡ ನಟಿ ಕಯಾದು ಲೋಹರ್ ಫುಲ್ ಎಕ್ಸೈಟ್ ಆಗಿದ್ದಾರೆ. ಈ ಅಪರೂಪದ ಕ್ಷಣದ ಸೆಲ್ಫಿಯನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಕಯಾದು, ‘ನಾನು ಇನ್ನೂ ಕನಸು ಕಾಣುತ್ತಿದ್ದೇನೆ’ ಎಂದಿದ್ದಾರೆ.

Read Full Story

09:09 PM (IST) Aug 26

ಟೀಂ ಇಂಡಿಯಾಗೆ ಮತ್ತೆ ಎಂಟ್ರಿ ಕೊಡಲು ಸಜ್ಜಾದ 3 ಸ್ಟಾರ್ ಬೌಲರ್‍‌ಗಳು; ಒಂದೇ ಫ್ರೇಮ್‌ನಲ್ಲಿ ತ್ರಿಮೂರ್ತಿಗಳು

ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ ಮತ್ತು ಹರ್ಷಿತ್ ರಾಣಾ ಬೆಂಗಳೂರಿನಲ್ಲಿ ಕಠಿಣ ಫಿಟ್‌ನೆಸ್ ತರಬೇತಿ ಪಡೆಯುತ್ತಿದ್ದು, ಶೀಘ್ರದಲ್ಲೇ ಮೈದಾನಕ್ಕೆ ಮರಳಲಿದ್ದಾರೆ. 2027ರ ವಿಶ್ವಕಪ್ ಮತ್ತು 2026ರ ಏಷ್ಯನ್ ಗೇಮ್ಸ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಮೂವರು ವೇಗಿಗಳ ಫಿಟ್‌ನೆಸ್ ಅನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಿದೆ.

Read Full Story

08:47 PM (IST) Aug 26

'ಆ ಪಂದ್ಯ ನೆನಪಾದಾಗ ಮೈಯೆಲ್ಲಾ ನಡುಗುತ್ತೆ..' ರಣ ರೋಚಕ ಪಂದ್ಯದ ಬಗ್ಗೆ ಸೂರ್ಯ ಮಾತು..

ಸೂರ್ಯಕುಮಾರ್ ಯಾದವ್ ಅವರು ಆಕಾಶ್ ಚೋಪ್ರಾ ಅವರ ಟಾಕ್ ಶೋನಲ್ಲಿ ಪಾಕಿಸ್ತಾನ ಪಂದ್ಯದ ಒತ್ತಡ ಮತ್ತು ಬುಮ್ರಾ ಅವರ ಬೌಲಿಂಗ್ ಸಾಮರ್ಥ್ಯವನ್ನು ಶ್ಲಾಘಿಸಿದರು. ಇನ್ನೂ ಏನು ಹೇಳಿದ್ದಾರೆ ಸೂರ್ಯಕುಮಾರ್ ಯಾದವ್? ಈ ಸ್ಟೋರಿಯಲ್ಲಿದೆ ಮಾಹಿತಿ

Read Full Story

07:09 PM (IST) Aug 26

ಸ್ಟಾರ್ ಹೀರೋಯಿನ್ಸ್ ಆಗಿ ಮಿಂಚಿದವರು ಈಗ ಅಕ್ಕ, ತಂಗಿ, ಮಗಳಾಗಿ - ಈ ನಟಿಯರ ಚಾಯ್ಸ್ ಸಖತ್ ಡಿಫರೆಂಟ್!

South Indian Actresses: ಸ್ಟಾರ್ ಹೀರೋಯಿನ್ಸ್ ಇಮೇಜ್ ಉಳಿಸಿಕೊಳ್ಳುವುದಕ್ಕಿಂತ ಉತ್ತಮ ಕಥೆ ಹಾಗೂ ನೆನಪಿನಲ್ಲಿ ಉಳಿಯುವ ಪಾತ್ರಗಳಿಗೆ ಆದ್ಯತೆ ನೀಡುತ್ತಿರುವ ಈ ನಟಿಯರ ಆಯ್ಕೆ, ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಟ್ರೆಂಡ್‌ಗೆ ನಾಂದಿ ಹಾಡುತ್ತಿದೆ.

Read Full Story

06:51 PM (IST) Aug 26

Main Door Vastu - ಹಣದ ಸಮಸ್ಯೆ ಕಾಡುತ್ತಿದೆಯಾ? ಮನೆಯ ಮುಖ್ಯದ್ವಾರದಲ್ಲಿ ಈ ತಪ್ಪು ಮಾಡುತ್ತಿದ್ದೀರಾ ನೋಡಿ

ವಾಸ್ತು ಪ್ರಕಾರ, ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ಆರ್ಥಿಕ ಸಮಸ್ಯೆಗಳನ್ನು ತರಬಹುದು. ಅದರಲ್ಲೂ ಮನೆಯ ಮುಖ್ಯ ದ್ವಾರದ ಮುಂದೆ ಕೆಲವು ವಸ್ತುಗಳನ್ನು ತಪ್ಪಿಯೂ ಇಡಬಾರದು.

Read Full Story

06:35 PM (IST) Aug 26

ಸೆಟ್‌ನಲ್ಲಿ ಚಿಕ್ಕ ಮಗುವಿನಂತೆ ತುಂಟಾಟ ಮಾಡ್ತಿದ್ದ ಈ ನಟ - ನಯನತಾರಾ ಬಿಚ್ಚಿಟ್ರು ಇಂಟರೆಸ್ಟಿಂಗ್ ವಿಷಯ

Kollywood Actress Nayanthara: ಒಂದು ಕಾಲದಲ್ಲಿ ಸೆಟ್‌ನಲ್ಲಿ ಚಿಕ್ಕ ಮಗುವಿನಂತೆ ತುಂಟಾಟ ಮಾಡುತ್ತಿದ್ದ ಈ ನಟ ಇಂದು ಪ್ಯಾನ್ ಇಂಡಿಯಾ ಬ್ರ್ಯಾಂಡ್ ಆಗಿ ಬೆಳೆದಿರುವುದನ್ನು ಕಂಡು ನಯನತಾರಾ ಸಂತಸ ಹಾಗೂ ಹೆಮ್ಮೆ ವ್ಯಕ್ತಪಡಿಸಿದ್ದರು.

Read Full Story

06:16 PM (IST) Aug 26

ರೈಫಲ್ ಕೋಚ್ ಸಾದಿಕ್‌ ಖಾನ್ ಮರುಳು ಮಾತಿಗೆ ಬಲಿಯಾದ ಕುಟುಂಬ, ಗೋದಾವರಿಗೆ ನದಿಗೆ ಹಾರಿ ಸಾವಿಗೆ ಶರಣಾದ ಮೂವರು!

ರಾಜಮಂಡ್ರಿ ಬಳಿ ಗೋದಾವರಿ ನದಿಗೆ ಜಿಗಿದು ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶೂಟಿಂಗ್ ಕೋಚ್ ಸಾಧಿಕ್ ಖಾನ್ ಎಂಬಾತನ ಮಾನಸಿಕ ಹಿಂಸೆ, ಆಸ್ತಿ ಕಬಳಿಸುವ ಸಂಚು ಹಾಗೂ ಕೊಲೆ ಬೆದರಿಕೆಯೇ ಈ ದುರಂತಕ್ಕೆ ಕಾರಣ ಎಂದು ಡೆತ್ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ.

Read Full Story

05:26 PM (IST) Aug 26

‘ಡಾಕ್ಟರ್ ಅನುಮತಿ ಇಲ್ಲದೆ ಮಾಡಬೇಡಿ’ - ಪ್ರೆಗ್ನೆನ್ಸಿಯಲ್ಲೂ ನಟಿ ಸಮಂತಾ ಹೆವಿ ವರ್ಕೌಟ್

Telugu Actress Samantha ತಮ್ಮ ಪೋಸ್ಟ್‌ನಲ್ಲಿ, ಪ್ರತಿಯೊಂದು ಗರ್ಭಧಾರಣೆಯ ಅನುಭವವೂ ವಿಭಿನ್ನವಾಗಿರುತ್ತದೆ ಎಂದು ಹೇಳಿದ್ದಾರೆ. ತಾವು ಮಾಡುತ್ತಿರುವ ವ್ಯಾಯಾಮಗಳು ತಮ್ಮ ದೇಹ, ಅನುಭವ ಮತ್ತು ಗರ್ಭಾವಸ್ಥೆಗೆ ಅನುಗುಣವಾಗಿ ಬದಲಾವಣೆ ಮಾಡಿಕೊಂಡು ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

05:21 PM (IST) Aug 26

Saturn Retrograde - ಚಂದ್ರಗ್ರಹಣದ ವೇಳೆ ಶನಿ ವಕ್ರ! 50 ವರ್ಷಗಳ ಬಳಿಕ ಈ 3 ರಾಶಿಯವರಿಗೆ ಹಣ, ಉದ್ಯೋಗದಲ್ಲಿ ಭರ್ಜರಿ ರಾಜಯೋಗ!

2026ರಲ್ಲಿ ಸಂಭವಿಸಲಿರುವ ಶನಿ ವಕ್ರ ಮತ್ತು ಚಂದ್ರಗ್ರಹಣದ ಅಪರೂಪದ ಸಂಯೋಗವು ಜ್ಯೋತಿಷ್ಯದ ಪ್ರಕಾರ ಮಹತ್ವದ್ದಾಗಿದೆ. ಈ ಗ್ರಹ ಸಂಚಾರವು ವಿಶೇಷವಾಗಿ ಮೇಷ, ಸಿಂಹ ಮತ್ತು ಧನು ರಾಶಿಯವರ ಜೀವನದಲ್ಲಿ ಹಣ, ವೃತ್ತಿ ಮತ್ತು ಅಧಿಕಾರದ ವಿಷಯದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ.
Read Full Story

05:10 PM (IST) Aug 26

'ಆಗಸ್ಟ್ 25ಕ್ಕೆ ಬಿಗ್ ರಿವೀಲ್', ಸೋಶಿಯಲ್ ಮೀಡಿಯಾ ಕ್ರಿಯೇಟರ್‌ನಿಂದ ಕೋಟಿ ಕೋಟಿ ರೂಪಾಯಿ ವಂಚನೆ

'ಆಗಸ್ಟ್ 25 ಬಿಗ್ ರಿವೀಲ್' ಹೆಸರಿನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹೈಪ್ ಸೃಷ್ಟಿಸಿದ ವ್ಯಕ್ತಿಯೊಬ್ಬ, ದೊಡ್ಡ ರಹಸ್ಯ ಬಯಲು ಮಾಡುವುದಾಗಿ ನಂಬಿಸಿದ್ದ. ವಿಡಿಯೋ ನೋಡಲು ತಲಾ 500 ರೂ. ಪಡೆದು, ಕೊನೆಗೆ ಕೇವಲ ಮೋಟಿವೇಷನಲ್ ವಿಡಿಯೋ ಪೋಸ್ಟ್ ಮಾಡಿ ವಂಚಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

Read Full Story

05:07 PM (IST) Aug 26

ಹಾಕಿ ವಿಶ್ವಕಪ್‌ನಿಂದ ಹೊರಬಿದ್ದ ಭಾರತ - 'ಯಾರಿಗಾದರೂ ನಿಜಕ್ಕೂ ಕಾಳಜಿ ಇದ್ಯಾ?' ಪಿಆರ್‌ ಶ್ರೀಜೇಶ್‌, ವೀರೆನ್‌ ರಸ್ಕಿನ್ಹಾ ಆಕ್ರೋಶ

ಹಾಕಿ ವಿಶ್ವಕಪ್‌ನಿಂದ ಭಾರತ ತಂಡ ಹೊರಬಿದ್ದ ನಂತರ, ಮಾಜಿ ನಾಯಕರಾದ ಪಿಆರ್ ಶ್ರೀಜೇಶ್ ಮತ್ತು ವೀರೇನ್ ರಸ್ಕಿನ್ಹಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಂಡದ ಕಳಪೆ ಪ್ರದರ್ಶನ ಮತ್ತು ಆಡಳಿತದ ನಿರ್ಲಕ್ಷ್ಯವನ್ನು ಪ್ರಶ್ನಿಸಿರುವ ಅವರು, ಈ ಸೋಲಿನ ಹೊಣೆಯನ್ನು ಯಾರು ಹೊರಬೇಕು ಎಂದು ಕೇಳಿದ್ದಾರೆ.

Read Full Story

04:41 PM (IST) Aug 26

ನೇಪಾಳದಲ್ಲಿ ಭೀಕರ ಜಲಪ್ರಳಯ.. ಭೋಟೆಕೋಶಿ ನದಿ ಅಬ್ಬರಕ್ಕೆ 105 ಭಾರತೀಯರು ನಾಪತ್ತೆ..

ಟಿಬೆಟ್‌ನಿಂದ ಹರಿದುಬಂದ ಭೋಟೆಕೋಶಿ ನದಿ ಪ್ರವಾಹಕ್ಕೆ ನೇಪಾಳದಲ್ಲಿ 105 ಭಾರತೀಯರು ಸೇರಿದಂತೆ 384 ಪ್ರವಾಸಿಗರು ನಾಪತ್ತೆಯಾಗಿದ್ದಾರೆ. ಈ ಭೀಕರ ಪ್ರವಾಹದಲ್ಲಿ 16 ಜನರು ಸಾವನ್ನಪ್ಪಿದ್ದು, ಹಲವಾರು ಜಲವಿದ್ಯುತ್ ಯೋಜನೆಗಳು ಮತ್ತು ರಸ್ತೆಗಳು ಧ್ವಂಸಗೊಂಡಿವೆ.

Read Full Story

04:33 PM (IST) Aug 26

ತಂದೆ-ಮಗಳ ಕಥೆ ನೋಡಿ ರಶ್ಮಿಕಾ ಮಂದಣ್ಣ ಮನಸ್ಸು ಕರಗಿತೇ? ರವಿ ತೇಜ ‘Irumudi’ ಬಗ್ಗೆ ನಟಿ ಹೇಳಿದ್ದೇನು?

Irumudi ಚಿತ್ರಕ್ಕೆ ಇದೀಗ ನಟಿ ರಶ್ಮಿಕಾ ಮಂದಣ್ಣ ಅವರ ಮೆಚ್ಚುಗೆಯೂ ಸಿಕ್ಕಿದೆ. ಸಿನಿಮಾ ವೀಕ್ಷಿಸಿದ ಬಳಿಕ ರಶ್ಮಿಕಾ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡು ‘ಇರುಮುಡಿ’ ಚಿತ್ರತಂಡವನ್ನು ಮನಸಾರೆ ಕೊಂಡಾಡಿದ್ದಾರೆ.

Read Full Story

04:06 PM (IST) Aug 26

ಫೋನ್ ಕದ್ದ ನಂತರವೂ ನಿಮ್ಮ ಡೇಟಾವನ್ನ ಹೇಗೆ ಉಳಿಸಿಕೊಳ್ಳಬಹುದು.. ಈ ಟೆಕ್ನಿಕ್ ನಿಮಗೆ ಗೊತ್ತಿರಲೇಬೇಕು

ಆಂಡ್ರಾಯ್ಡ್ 17 ಫೋನ್ ಕಳ್ಳತನವಾದರೂ ನಿಮ್ಮ ಡೇಟಾವನ್ನು ರಕ್ಷಿಸಲು 'ಐಡೆಂಟಿಟಿ ಚೆಕ್' ನಂತಹ ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳನ್ನು ಪರಿಚಯಿಸಿದೆ. ಈ ಕುರಿತ ಕಂಪ್ಲೀಟ್ ಮಾಹಿತಿ ಇಲ್ಲಿದೆ..

Read Full Story

03:29 PM (IST) Aug 26

Wedding Facts - ತಾಳಿ ಕಟ್ಟುವಾಗ ಮೂರು ಗಂಟು ಹಾಕೋದೇಕೆ? ಹಿಂದೂ ಸಂಪ್ರದಾಯದ ಹಿಂದಿದೆ ಅಚ್ಚರಿಯ ಅರ್ಥ!

ಹಿಂದೂಗಳ ಮದುವೆಯಲ್ಲಿ ಮಾಂಗಲ್ಯ ಧಾರಣೆ ಅನ್ನೋದು ತುಂಬಾನೇ ಪ್ರಮುಖವಾದ ಘಟ್ಟ. ಇದು ನಡೆದರೆ ವಧು-ವರರು ಅಧಿಕೃತವಾಗಿ ಗಂಡ-ಹೆಂಡತಿ ಆದಂತೆ. ವರನು ವಧುವಿನ ಕೊರಳಿಗೆ ತಾಳಿ ಕಟ್ಟುವಾಗ ಮೂರು ಗಂಟು ಹಾಕುತ್ತಾನೆ. ಇದರ ಹಿಂದಿನ ಅರ್ಥ ಮತ್ತು ಪರಮಾರ್ಥ ಏನು ಗೊತ್ತಾ?

Read Full Story

03:24 PM (IST) Aug 26

Cricket Records - ಹೆಚ್ಚು ಶತಕ ಸಿಡಿಸಿದ ವಿಕೆಟ್ ಕೀಪರ್‌ಗಳು ಇವರೇ! ಪಟ್ಟಿಯಲ್ಲಿ ಧೋನಿ ಯಾವ ಸ್ಥಾನಲ್ಲಿದ್ದಾರೆ?

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಕೆಟ್‌ ಕೀಪರ್ ಬ್ಯಾಟರ್‌ಗಳ ಪಟ್ಟಿಯನ್ನು ಈ ಲೇಖನವು ವಿವರಿಸುತ್ತದೆ. ಆಸ್ಟ್ರೇಲಿಯಾದ ಆಡಮ್ ಗಿಲ್‌ಕ್ರಿಸ್ಟ್ 33 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಕ್ವಿಂಟನ್ ಡಿ ಕಾಕ್, ಕುಮಾರ್ ಸಂಗಕ್ಕಾರ ಮತ್ತು ಎಂಎಸ್ ಧೋನಿಯಂತಹ ಪ್ರಮುಖ ಆಟಗಾರರು ಈ ಪಟ್ಟಿಯಲ್ಲಿದ್ದಾರೆ.
Read Full Story

01:34 PM (IST) Aug 26

ಧೋನಿಗೆ ನಂಬಿಸಿ ಮೋಸ ಮಾಡಿತಾ ಚೆನ್ನೈ ಸೂಪರ್‌ ಕಿಂಗ್ಸ್ ಫ್ರಾಂಚೈಸಿ..? 5 ಕಪ್ ಗೆಲ್ಲಿಸಿಕೊಟ್ಟ ನಾಯಕನಿಗೆ ಇದೆಂಥಾ ಅನ್ಯಾಯ?

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಮಾಲೀಕರಾಗಲು ಎಂ.ಎಸ್. ಧೋನಿ ಬಯಸಿದ್ದು, ಷೇರುಗಳ ವಿಚಾರವಾಗಿ ಫ್ರಾಂಚೈಸಿ ಜೊತೆ ತಿಕ್ಕಾಟ ನಡೆದಿದೆ ಎಂದು ವರದಿಯಾಗಿದೆ. ನಿವೃತ್ತಿ ನಂತರ ಹೆಚ್ಚಿನ ಷೇರು ನೀಡುವುದಾಗಿ ಸಿಎಸ್‌ಕೆ ಮಾತು ತಪ್ಪಿತೇ ಮತ್ತು ಇದು ಧೋನಿಯ ಮುಂದಿನ ಆಟದ ಮೇಲೆ ಪರಿಣಾಮ ಬೀರುವುದೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.
Read Full Story

01:32 PM (IST) Aug 26

IIT Delhi ವಿದ್ಯಾರ್ಥಿ ಸಾವು ಪ್ರಕರಣ - ನಮ್ಮ ಹೋರಾಟಕ್ಕೆ ರಾಜಕೀಯ ಬಣ್ಣ ಬೇಡ! JNU ಪ್ರಭಾವ ವಿರೋಧಿಸಿ ವಿದ್ಯಾರ್ಥಿಗಳ ಆಕ್ರೋಶ

ಐಐಟಿ ದೆಹಲಿಯ ವಿದ್ಯಾರ್ಥಿ ರಿಷಿಕೇಶ್ ಕುಮಾರ್ ಸಾವಿನ ಕುರಿತ ಪ್ರತಿಭಟನೆಗೆ ಜೆಎನ್‌ಯು ನಂತಹ ಹೊರಗಿನ ಕ್ಯಾಂಪಸ್‌ಗಳಿಂದ ರಾಜಕೀಯ ಬಣ್ಣ ಬಳಿಯಲಾಗುತ್ತಿದೆ. ಇದು ನಮ್ಮ ಒಗ್ಗಟ್ಟನ್ನು ಮುರಿಯುತ್ತಿದೆ ಎಂದು ಐಐಟಿ ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.

Read Full Story

12:27 PM (IST) Aug 26

ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ ರಜತ್‌ ಪಾಟೀದಾರ್..! ಆರ್‌ಸಿಬಿಯಿಂದ 5, CSK 2 ಆಟಗಾರರಿಗೆ ಸ್ಥಾನ..!

ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸತತ ಎರಡು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ ರಜತ್ ಪಾಟೀದಾರ್, ಇದೀಗ ಸಾರ್ವಕಾಲಿಕ ಶ್ರೇಷ್ಠ ಐಪಿಎಲ್ ತಂಡವನ್ನು ಆಯ್ಕೆ ಮಾಡಿದ್ದಾರೆ. ತಂಡದಲ್ಲಿ ಯಾರಿಗೆಲ್ಲಾ ಸ್ಥಾನ ಸಿಕ್ಕಿದೆ ಎನ್ನುವುದನ್ನು ನೋಡೋಣ ಬನ್ನಿ.

Read Full Story

12:19 PM (IST) Aug 26

ಆಸ್ಪತ್ರೆಯ ಚಿನ್ನಾಭರಣ ಬ್ಯಾಗ್​ ಕಳುವು - ಮಧ್ಯರಾತ್ರಿ ಬಂದದ್ದು ಮನುಷ್ಯರೇ ಅಲ್ಲ- ಸಿಸಿಟಿವಿ ನೋಡಿ ಬೆಚ್ಚಿಬಿದ್ದ ಪೊಲೀಸರು

ಮಧ್ಯಪ್ರದೇಶದ ಆಸ್ಪತ್ರೆಯೊಂದರಲ್ಲಿ ಮಹಿಳೆಯೊಬ್ಬರ 4 ಲಕ್ಷ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಣ್ಮರೆಯಾಗಿತ್ತು. ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ, ಯಾವುದೇ ಮನುಷ್ಯ ಕಳ್ಳರು ಕಾಣಿಸದೇ ಇದ್ದು, ಬ್ಯಾಗ್ ಕದ್ದಿದ್ದು ಯಾರೆಂಬ ರೋಚಕ ಸತ್ಯ ಬಯಲಾಗಿದೆ.
Read Full Story

11:32 AM (IST) Aug 26

ನೋಡುಗರಿಗೆ ಡಬಲ್ ಥ್ರಿಲ್ ನೀಡೋ ಮಲಯಾಳಂನ ಟಾಪ್ 5 ಸಸ್ಪೆನ್ಸ್ ಸಿನಿಮಾಗಳ ಪಟ್ಟಿ ನೋಡಿ

ಮಲಯಾಳಂ ಚಿತ್ರರಂಗವು ಸಣ್ಣ ಕಥೆಯನ್ನಿಟ್ಟುಕೊಂಡು ಅದ್ಭುತ ಸಿನಿಮಾ ಮಾಡುವಲ್ಲಿ ನಿಪುಣವಾಗಿದೆ. ನೀವು ಡಬಲ್ ಥ್ರಿಲ್ಲರ್ ಅನುಭವ ನೀಡುವ ಮಲಯಾಳಂ ಸಿನಿಮಾಗಳ ಹುಡುಕಾಟದಲ್ಲಿದ್ದರೆ, ಈ 5 ಚಿತ್ರಗಳನ್ನು ನಿಮ್ಮ ವಾಚ್‌ ಲಿಸ್ಟ್‌ಗೆ ಸೇರಿಸಿಕೊಳ್ಳಬಹುದು.

Read Full Story

11:28 AM (IST) Aug 26

Irumudi - 5 ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಮೂವಿ! ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ ರವಿತೇಜ ಸಿನಿಮಾ

ಮಾಸ್ ಮಹಾರಾಜ ರವಿತೇಜ ಅಭಿನಯದ 'ಇರುಮುಡಿ' ಸಿನಿಮಾವು ಕೇವಲ ಐದೇ ದಿನಗಳಲ್ಲಿ 100 ಕೋಟಿ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ಶಿವ ನಿರ್ವಾಣ ನಿರ್ದೇಶನದ ಈ ಚಿತ್ರವು ಅಪ್ಪ-ಮಗಳ ಬಾಂಧವ್ಯದ ಭಾವನಾತ್ಮಕ ಕಥೆಯನ್ನು ಹೊಂದಿದ್ದು, ರವಿತೇಜ ಹಿಂದೆಂದೂ ಕಾಣದ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ.
Read Full Story

10:26 AM (IST) Aug 26

ಸಿಎಸ್‌ಕೆ ತಂಡದ ಜತೆಗಿರಲು ದೊಡ್ಡ ಬೇಡಿಕೆಯಿಟ್ಟ ಮಹೇಂದ್ರ ಸಿಂಗ್ ಧೋನಿ..! ಆದ್ರೆ ಚೆನ್ನೈ ಫ್ರಾಂಚೈಸಿ ಜತೆಗಿನ ಮಹಿ ಮಾತುಕತೆ ಫೇಲ್

ನವದೆಹಲಿ: ಮಹೇಂದ್ರ ಸಿಂಗ್ ಧೋನಿ, ಚೆನ್ನೈ ಸೂಪರ್ ಕಿಂಗ್ಸ್‌ಗೆ ಐದು ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ನಾಯಕ. ಆದರೆ ಮುಂದಿನ ಸೀಸನ್‌ ಟೂರ್ನಿಗೂ ಮುನ್ನ ಧೋನಿ ಹಾಗೂ ಸಿಎಸ್‌ಕೆ ಫ್ರಾಂಚೈಸಿ ನಡುವೆ ಮನಸ್ತಾಪ ಉಂಟಾಗಿದೆ ಎಂದು ವರದಿಯಾಗಿದೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ.

Read Full Story

09:02 AM (IST) Aug 26

ಬಂತು 800 ಟನ್‌ ಈರುಳ್ಳಿ ಹೊತ್ತ ಮೊದಲ 'ಕಾಂದಾ' ಎಕ್ಸ್‌ಪ್ರೆಸ್‌; 5 ನಗರಗಳಿಗೆ ಪೂರೈಕೆ

ಈರುಳ್ಳಿ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ, 800 ಟನ್ ಈರುಳ್ಳಿಯನ್ನು ಹೊತ್ತ ಮೊದಲ 'ಕಾಂದಾ ಎಕ್ಸ್‌ಪ್ರೆಸ್' ನಾಸಿಕ್‌ನಿಂದ ದೆಹಲಿಗೆ ತಲುಪಲಿದ್ದು, ಕೆ.ಜಿ.ಗೆ ₹35ರ ದರದಲ್ಲಿ ಮಾರಾಟ ಮಾಡುವ ಗುರಿ ಹೊಂದಿದೆ.
Read Full Story

08:54 AM (IST) Aug 26

ದುಲೀಫ್‌ ಟ್ರೋಫಿ - ಸೆಮೀಸ್‌ ರೇಸ್‌ನಲ್ಲಿ ರೋಚಕ ತಿರುವು

ದುಲೀಪ್ ಟ್ರೋಫಿ ಕ್ವಾರ್ಟರ್‌ ಫೈನಲ್‌ನಲ್ಲಿ ಈಶಾನ್ಯ ವಲಯವನ್ನು ಇನ್ನಿಂಗ್ಸ್‌ ಅಂತರದಿಂದ ಮಣಿಸಿದ ಪೂರ್ವ ವಲಯ ಸೆಮಿಫೈನಲ್‌ ಪ್ರವೇಶಿಸಿದೆ. ಮತ್ತೊಂದು ಪಂದ್ಯದಲ್ಲಿ ಪಶ್ಚಿಮ ಹಾಗೂ ಉತ್ತರ ವಲಯಗಳ ನಡುವೆ ಜಯಕ್ಕಾಗಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಪಂದ್ಯ ರೋಚಕ ಘಟ್ಟ ತಲುಪಿದೆ.

Read Full Story

08:28 AM (IST) Aug 26

Ajit Doval China visit - ಗಾಲ್ವಾನ್ ಕಣಿವೆ ಘರ್ಷಣೆ ಬಳಿಕ ದೋವಲ್ ಚೀನಾ ಭೇಟಿ! LAC ವಿಷಯ ಪ್ರಸ್ತಾಪಿಸಿದಾಗ ಹೇಳಿದ್ದೇನು?

ಗಾಲ್ವಾನ್ ಕಣಿವೆ ಘರ್ಷಣೆಯ ನಂತರ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರನ್ನು ಭೇಟಿಯಾಗಿದ್ದಾರೆ. ಈ ಸಭೆಯಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ, ಗಡಿ ವಿವಾದ ಮತ್ತು ದ್ವಿಪಕ್ಷೀಯ ಸಹಕಾರದ ಬಗ್ಗೆ ಮಹತ್ವದ ಚರ್ಚೆ ನಡೆಸಲಾಗಿದೆ.

Read Full Story

07:06 AM (IST) Aug 26

ಪಾಕ್‌ ಅಣ್ವಸ್ತ್ರ ಕೇಂದ್ರದ ಮೇಲೆ ಭಾರತ ದಾಳಿ ವದಂತಿಗೆ ತೆರೆ; ಕಿರಾನಾ ಬೆಟ್ಟದಲ್ಲಿ ಡ್ರೋನ್ ಬಿದ್ದಿದ್ದೇಗೆ?

ಕಳೆದ ವರ್ಷ ಪಾಕಿಸ್ತಾನದ ಕಿರಾನಾ ಬೆಟ್ಟದ ಮೇಲೆ ಭಾರತದ ಡ್ರೋನ್ ಅಪ್ಪಳಿಸಿದ್ದು ಉದ್ದೇಶಪೂರ್ವಕ ದಾಳಿಯಲ್ಲ, ಬದಲಿಗೆ ಇಂಧನ ಖಾಲಿಯಾಗಿತ್ತು ಎಂದು ಮಾಜಿ ಸಿಡಿಎಸ್‌ ಜ. ಅನಿಲ್‌ ಚೌಹಾಣ್‌ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪಾಕ್ ಅಣ್ವಸ್ತ್ರ ಕೇಂದ್ರದ ಮೇಲೆ ಭಾರತ ದಾಳಿ ನಡೆಸಿತ್ತು ಎಂಬ ವದಂತಿಗೆ ಅವರು ತೆರೆ ಎಳೆದಿದ್ದಾರೆ.
Read Full Story

More Trending News