LIVE NOW
Published : Aug 26, 2026, 05:29 AM ISTUpdated : Aug 26, 2026, 07:06 AM IST

India Latest News Live: ಪಾಕ್‌ ಅಣ್ವಸ್ತ್ರ ಕೇಂದ್ರದ ಮೇಲೆ ಭಾರತ ದಾಳಿ ವದಂತಿಗೆ ತೆರೆ; ಕಿರಾನಾ ಬೆಟ್ಟದಲ್ಲಿ ಡ್ರೋನ್ ಬಿದ್ದಿದ್ದೇಗೆ?

ಸಾರಾಂಶ

ಮುಂಬೈ: ಆಟೋ-ರಿಕ್ಷಾ, ಟ್ಯಾಕ್ಸಿ ಮತ್ತು ಆ್ಯಪ್-ಆಧರಿತ ಕ್ಯಾಬ್ ಚಾಲಕರಿಗೆ ಮರಾಠಿ ಭಾಷಾ ಜ್ಞಾನವನ್ನು ಕಡ್ಡಾಯಗೊಳಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ, ಮುಂಬೈನ ನಾಲ್ವರು ಕ್ಯಾಬ್ ಚಾಲಕರು ಮಂಗಳವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಸರ್ಕಾರದ ಈ ನಿಯಮವು ಸಂವಿಧಾನದ ವಿಧಿ 14 (ಸಮಾನತೆಯ ಹಕ್ಕು), ವಿಧಿ 19 (ವೃತ್ತಿ ಸ್ವಾತಂತ್ರ್ಯ) ಹಾಗೂ ವಿಧಿ 21ರ ಅಡಿ (ಜೀವಿಸುವ ಹಕ್ಕು) ಸಿಗುವ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯು ಚಾಲನಾ ಪರವಾನಗಿ ನೀಡಲು ಯಾವುದೇ ನಿರ್ದಿಷ್ಟ ಭಾಷಾ ಅರ್ಹತೆಯನ್ನು ಕಡ್ಡಾಯಗೊಳಿಸಿಲ್ಲ ಮತ್ತು ಈ ಆಧಾರದ ಮೇಲೆ ಪರವಾನಗಿ ರದ್ದುಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು, ನಿಯಮಕ್ಕೆ ತಡೆ ನೀಡುವಂತೆ ಕೋರಲಾಗಿದೆ.

07:06 AM (IST) Aug 26

ಪಾಕ್‌ ಅಣ್ವಸ್ತ್ರ ಕೇಂದ್ರದ ಮೇಲೆ ಭಾರತ ದಾಳಿ ವದಂತಿಗೆ ತೆರೆ; ಕಿರಾನಾ ಬೆಟ್ಟದಲ್ಲಿ ಡ್ರೋನ್ ಬಿದ್ದಿದ್ದೇಗೆ?

ಕಳೆದ ವರ್ಷ ಪಾಕಿಸ್ತಾನದ ಕಿರಾನಾ ಬೆಟ್ಟದ ಮೇಲೆ ಭಾರತದ ಡ್ರೋನ್ ಅಪ್ಪಳಿಸಿದ್ದು ಉದ್ದೇಶಪೂರ್ವಕ ದಾಳಿಯಲ್ಲ, ಬದಲಿಗೆ ಇಂಧನ ಖಾಲಿಯಾಗಿತ್ತು ಎಂದು ಮಾಜಿ ಸಿಡಿಎಸ್‌ ಜ. ಅನಿಲ್‌ ಚೌಹಾಣ್‌ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪಾಕ್ ಅಣ್ವಸ್ತ್ರ ಕೇಂದ್ರದ ಮೇಲೆ ಭಾರತ ದಾಳಿ ನಡೆಸಿತ್ತು ಎಂಬ ವದಂತಿಗೆ ಅವರು ತೆರೆ ಎಳೆದಿದ್ದಾರೆ.
Read Full Story

More Trending News