LIVE NOW
Published : Jul 23, 2026, 05:18 AM ISTUpdated : Jul 23, 2026, 01:23 PM IST

India Latest News Live: ಪಶ್ಚಿಮ ಏಷ್ಯಾ ಯುದ್ಧದ ಬಿಸಿ - ಭಾರತದ ದೈತ್ಯ ತೈಲ ಕಂಪನಿ ಬಿಪಿಸಿಎಲ್, ಎಚ್‌ಪಿಸಿಎಲ್ ಕೋಟ್ಯಂತರ ರೂಪಾಯಿ ಭಾರಿ ನಷ್ಟ!

ಸಾರಾಂಶ

ನವದೆಹಲಿ: ಕಾಕ್ರೋಚ್ ಜನತಾ ಪಾರ್ಟಿ ನೇತೃತ್ವದ ಪ್ರತಿಭಟನೆಯನ್ನು ಸರ್ಕಾರ ನಿರ್ವಹಿಸಿದ ರೀತಿಯನ್ನು ಸಮರ್ಥಿಸಿಕೊಂಡಿರುವ ಬಿಜೆಪಿ, ‘ವಿದ್ಯಾರ್ಥಿಗಳ ಅಭಿಯಾನ’ದ ಬಗ್ಗೆ ಸರ್ಕಾರ ಅತ್ಯಂತ ಸಂವೇದನಾಶೀಲವಾಗಿದೆ ಮತ್ತು ಸಿಜೆಪಿ ಜೊತೆಗೆ ಮಾತುಕತೆಗೆ ಸರ್ಕಾರ ಮುಕ್ತವಾಗಿದೆ. ಆದರೆ ವಿಪಕ್ಷಗಳು ದೇಶದ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಸುಳ್ಳು ನಿರೂಪಣೆ ಮಾಡುತ್ತಿದೆ ಎಂದು ಆರೋಪಿಸಿದೆ.

ಈ ನಡುವೆ ಬಿಜೆಪಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಜೆಪಿ ನಾಯಕ ಅಭಿಜಿತ್‌ ದೀಪ್ಕೆ, ‘ನಾವು ಸರ್ಕಾರದ ಜೊತೆಗೆ ಮಾತುಕತೆಗೆ ಸಿದ್ಧ. ಆದರೆ ಅದು ಯಾವುದೇ ಸಚಿವರ ಮನೆಯಲ್ಲಿ ಆಗಿರಬಾರದು. ಬದಲಾಗಿ ಯಾವುದಾದರೂ ತಟಸ್ಥ ಸ್ಥಳದಲ್ಲಿ ಆಗಿರಬೇಕು’ ಎಂದು ಹೇಳಿದ್ದಾರೆ.

01:23 PM (IST) Jul 23

ಪಶ್ಚಿಮ ಏಷ್ಯಾ ಯುದ್ಧದ ಬಿಸಿ - ಭಾರತದ ದೈತ್ಯ ತೈಲ ಕಂಪನಿ ಬಿಪಿಸಿಎಲ್, ಎಚ್‌ಪಿಸಿಎಲ್ ಕೋಟ್ಯಂತರ ರೂಪಾಯಿ ಭಾರಿ ನಷ್ಟ!

ಪಶ್ಚಿಮ ಏಷ್ಯಾದಲ್ಲಿನ ಯುದ್ಧದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾದ ಕಾರಣ, ದೇಶೀಯ ಇಂಧನ ದರಗಳನ್ನು ಹೆಚ್ಚಿಸದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರಿ ನಷ್ಟ ಅನುಭವಿಸಿವೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಎಚ್‌ಪಿಸಿಎಲ್ ₹12,265 ಕೋಟಿ ಮತ್ತು ಬಿಪಿಸಿಎಲ್ ₹3,962.13 ಕೋಟಿ ನಿವ್ವಳ ನಷ್ಟವನ್ನು ವರದಿ ಮಾಡಿವೆ.
Read Full Story

12:56 PM (IST) Jul 23

'ಶ್ರೀರಾಮನ ನಿಂದಿಸೋದು' -ಡೆಲ್ಲಿ ಪ್ರತಿಭಟನೆ ವಿರುದ್ಧ ಪಾಕ್ ಮಾಜಿ ಕ್ರಿಕೆಟಿಗ ಆಕ್ರೋಶ

ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದಾನಿಶ್ ಕನೇರಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿರುವ ಅವರು, ಭಾರತದಲ್ಲಿ ನಡೆಯುವ ಪ್ರತಿಭಟನೆಗಳ ಹಿಂದೆ ಒಂದು ನಿರ್ದಿಷ್ಟ ಸ್ಕ್ರಿಪ್ಟ್ ಕೆಲಸ ಮಾಡುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

Read Full Story

12:56 PM (IST) Jul 23

ಜಿಂಬಾಬ್ವೆ ಎದುರು ಮೂವರ ಪಾದಾರ್ಪಣೆಗೆ ವೇದಿಕೆ ಸಜ್ಜು! ಭಾರತ-ಜಿಂಬಾಬ್ವೆ ಮ್ಯಾಚ್ ಆರಂಭದ ಸಮಯದಲ್ಲೂ ಮಹತ್ವದ ಬದಲಾವಣೆ

ಇಂದು ಹರಾರೆಯಲ್ಲಿ ಭಾರತ ಮತ್ತು ಜಿಂಬಾಬ್ವೆ ನಡುವಿನ ಮೊದಲ ಟಿ20 ಪಂದ್ಯ ನಡೆಯಲಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತ ತಂಡದಲ್ಲಿ ರಿಂಕು ಸಿಂಗ್ ಕಮ್‌ಬ್ಯಾಕ್ ಮಾಡಲಿದ್ದು, ಹಲವು ಯುವ ಆಟಗಾರರು ಪಾದಾರ್ಪಣೆ ಮಾಡುವ ನಿರೀಕ್ಷೆಯಿದೆ. ಈ ಪಂದ್ಯವು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದೆ.
Read Full Story

12:28 PM (IST) Jul 23

50 ವರ್ಷಗಳ ಬಳಿಕ ತಮಿಳು ನಾಡಿನಲ್ಲಿ ಇತಿಹಾಸ ಮರುಕಳಿಸಿತು! CM Thalapathy Vijay ಅಂದ್ರೆ ಸುಮ್ನೇನಾ?

Actor Thalapathy Vijay: ಒಬ್ಬರು ಅಧಿಕಾರದಲ್ಲಿ ಮುಖ್ಯಮಂತ್ರಿ... ಇನ್ನೊಂದೆಡೆ ಥಿಯೇಟರ್‌ನಲ್ಲಿ ಮಾಸ್ ಹೀರೋ! 50 ವರ್ಷಗಳ ನಂತರ ತಮಿಳು ಚಿತ್ರರಂಗದ ಇತಿಹಾಸದಲ್ಲಿ ಈ ಅಪರೂಪದ ಘಟನೆ ಪುನರಾವರ್ತನೆಯಾಗಿದೆ. ಎಂಜಿಆರ್‌ನಿಂದ ದಳಪತಿ ವಿಜಯ್‌ವರೆಗೆ ನಡೆದ ಈ ಟ್ರೆಂಡಿಂಗ್ ಬೆಳವಣಿಗೆ ಇದು.

Read Full Story

12:13 PM (IST) Jul 23

IND vs ZIM - ಈ 5 ಕಾರಣಕ್ಕಾದರೂ ನೀವು ಭಾರತ-ಜಿಂಬಾಬ್ವೆ ಟಿ20 ಮ್ಯಾಚ್ ನೋಡಲೇಬೇಕು!

ಹರಾರೆ: ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯು ಇಂದಿನಿಂದ ಆರಂಭವಾಗಲಿದೆ. ಈ ಸರಣಿ ಹಲವು ಕಾರಣಗಳಿಗೆ ವಿಶೇಷತೆ ಎನಿಸಿಕೊಂಡಿದೆ. ಈ ಪೈಕಿ ಈ ಐದು ಕಾರಣಗಳಿಗೋಸ್ಕರವಾದರೂ ಕ್ರಿಕೆಟ್‌ ಅಭಿಮಾನಿಗಳು ಈ ಸರಣಿಯನ್ನು ನೋಡಲೇಬೇಕು.

Read Full Story

12:05 PM (IST) Jul 23

ಸೀರೆ ಕೊಡಿಸಲು ಒಪ್ಪದ ಗಂಡ; ಕುಕ್ಕರ್‌ನಿಂದ ಹೊಡೆದ ಕತ್ತು ಹಿಸುಕಿ ಕೊಂದ ಪತ್ನಿಅರೆಸ್ಟ್

ಸೀರೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪತ್ನಿಯೇ ಪತಿಯನ್ನು ಕೊಲೆ ಮಾಡಿದ್ದಾಳೆ. ಜಗಳದ ವೇಳೆ ಕುಕ್ಕರ್‌ನಿಂದ ಹೊಡೆದು, ನಂತರ ಕತ್ತು ಹಿಸುಕಿ ಹತ್ಯೆ ಮಾಡಿದ್ದು, ಪೊಲೀಸರು ಆರೋಪಿ ಪತ್ನಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Read Full Story

11:24 AM (IST) Jul 23

ಅಂದು ಪೇಪರ್ ಲೀಕ್ ವಿರುದ್ಧ ಹೋರಾಡಿ ಲಾಠಿ ಏಟು ತಿಂದಿದ್ದ ಧಮೇಂದ್ರ ಪ್ರಧಾನ್; ಇಂದು ತಿರುಗಿದ ಬಾಣ

ನೀಟ್ ಪರೀಕ್ಷೆ ಅಕ್ರಮದ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯ ಕೇಳಿಬರುತ್ತಿದೆ.  1997ರಲ್ಲಿ ಅವರು ಪೇಪರ್ ಲೀಕ್ ವಿರುದ್ಧ ನಡೆಸಿದ್ದ ಹೋರಾಟ ಮತ್ತು ಪೊಲೀಸ್ ಲಾಠಿ ಏಟು ತಿಂದಿದ್ದ ಘಟನೆ ವೈರಲ್ ಆಗಿದೆ.

Read Full Story

10:48 AM (IST) Jul 23

ಅವನತಿಯ ಅಂಚಿನಲ್ಲಿ ಕಾಮನ್‌ವೆಲ್ತ್‌ ಗೇಮ್ಸ್‌ - ದೇಶಗಳಿಗಿಲ್ಲ ಆತಿಥ್ಯದ ಆಸಕ್ತಿ!

ಹಲವು ದೇಶಗಳು ಕಾಮನ್‌ವೆಲ್ತ್‌ ಗೇಮ್ಸ್‌ನ ಆತಿಥ್ಯಕ್ಕೆ ನಿರಾಸಕ್ತಿ ತೋರುತ್ತಿದ್ದು, ಹೆಚ್ಚುತ್ತಿರುವ ವೆಚ್ಚವೇ ಪ್ರಮುಖ ಕಾರಣವಾಗಿದೆ. ಈ ನಡುವೆ, 2030ರ ಗೇಮ್ಸ್‌ ಆತಿಥ್ಯವನ್ನು ಭಾರತ ಪಡೆದುಕೊಂಡಿದ್ದು, ಮುಂಬರುವ ಕ್ರೀಡಾಕೂಟದಲ್ಲಿ 126 ಅಥ್ಲೀಟ್‌ಗಳೊಂದಿಗೆ ಪದಕ ಗೆಲ್ಲುವ ನಿರೀಕ್ಷೆಯಲ್ಲಿದೆ. ಕರ್ನಾಟಕದ 8 ಕ್ರೀಡಾಪಟುಗಳು ಕೂಡ ಈ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
Read Full Story

10:48 AM (IST) Jul 23

ನೀಟ್ ಸಮರ - ಮೌನ ಮುರಿದ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು, ಬೇಡಿಕೆಗಳೇನು?

ನೀಟ್ ಅಕ್ರಮದ ಕುರಿತು ಪ್ರಧಾನಿ ಮೋದಿ ಅವರ ಪ್ರತಿಕ್ರಿಯೆಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ವಜಾಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ.

Read Full Story

10:46 AM (IST) Jul 23

ಸರ್ಕಾರಿ ಬಸ್ ಎಗರಿಸಿದ ಕುಡುಕ.. ಬರೋಬ್ಬರಿ 18 ಕಿ.ಮೀ. ರೋಚಕ ಚೇಸ್.. ಮುಂದೇನಾಯ್ತು..? VIDEO

ತೆಲಂಗಾಣದ ಜಗ್ತಿಯಾಲ್ ಜಿಲ್ಲೆಯಲ್ಲಿ, ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ನಿಲ್ಲಿಸಿದ್ದ ಸರ್ಕಾರಿ ಬಸ್ಸನ್ನು ಕದ್ದಿದ್ದಾನೆ. ಪೊಲೀಸರು ಜಿಪಿಎಸ್ ಮೂಲಕ ಬಸ್ಸನ್ನು ಬೆನ್ನಟ್ಟಿ, ಸುಮಾರು 18 ಕಿಲೋಮೀಟರ್‌ಗಳ ಸಿನಿಮೀಯ ಚೇಸಿಂಗ್ ನಂತರ ಆರೋಪಿಯನ್ನು ಬಂಧಿಸಿದ್ದಾರೆ. ಈ ಘಟನೆಯಿಂದಾಗಿ ಹೈವೇಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
Read Full Story

10:35 AM (IST) Jul 23

ಮತ್ತೆ ಬಂತು ಮಿನಿ ಒಲಿಂಪಿಕ್ಸ್‌; ಗ್ಲಾಸ್ಗೋ ಕಾಮನ್‌ವೆಲ್ತ್‌ ಗೇಮ್ಸ್‌ ಇಂದಿನಿಂದ ಆರಂಭ

ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ 23ನೇ ಕಾಮನ್‌ವೆಲ್ತ್‌ ಗೇಮ್ಸ್‌ ಆರಂಭವಾಗಲಿದ್ದು, 74 ದೇಶಗಳು ಪಾಲ್ಗೊಳ್ಳಲಿವೆ. ವೆಚ್ಚ ಕಡಿತದ ಕಾರಣ ಈ ಬಾರಿ ಕ್ರಿಕೆಟ್‌, ಶೂಟಿಂಗ್‌, ಹಾಕಿ ಸೇರಿದಂತೆ ಹಲವು ಪ್ರಮುಖ ಕ್ರೀಡೆಗಳನ್ನು ಕೈಬಿಡಲಾಗಿದ್ದು, ಇದು ಭಾರತದ ಪದಕ ಗಳಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
Read Full Story

09:48 AM (IST) Jul 23

ನೀಟ್ ವಿವಾದ - ಪ್ರತಿಭಟನಾಕಾರರ ಜತೆ ಮಾತನಾಡಲು ಇಷ್ಟು ವಿಳಂಬವೇಕೆ? ಕೇಂದ್ರದ ವಿರುದ್ಧ ಸಿಡಿದೆದ್ದ ಕೆ.ಅಣ್ಣಾಮಲೈ

ನೀಟ್ ಪರೀಕ್ಷಾ ಅಕ್ರಮ ಮತ್ತು ಸೋರಿಕೆ ವಿವಾದಕ್ಕೆ ಸಂಬಂಧಿಸಿದಂತೆ, ಮಾಜಿ ಬಿಜೆಪಿ ನಾಯಕ ಕೆ. ಅಣ್ಣಾಮಲೈ ಕೇಂದ್ರ ಸರ್ಕಾರದ ನಿಷ್ಕ್ರಿಯತೆಯನ್ನು ಪ್ರಶ್ನಿಸಿದ್ದಾರೆ. ಪರೀಕ್ಷಾ ವ್ಯವಸ್ಥೆಯ ವೈಫಲ್ಯಗಳು ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ತಳ್ಳುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪ್ರತಿಭಟನೆಯನ್ನು ಸ್ವಾರ್ಥಿಗಳು ದುರುಪಯೋಗಪಡಿಸಿಕೊಳ್ಳದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
Read Full Story

09:42 AM (IST) Jul 23

ನೀಟ್ ಹಗರಣ - ಕೊನೆಗೂ ಮೌನ ಮುರಿದ ಮೋದಿ, ತಪ್ಪಿತಸ್ಥರಿಗೆ ಕಾದಿದೆ ಶಾಕ್..!

ದೇಶಾದ್ಯಂತ ಸಂಚಲನ ಮೂಡಿಸಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಕೊನೆಗೂ ಮೌನ ಮುರಿದಿದ್ದಾರೆ. ಯುವಕರ ಭವಿಷ್ಯವೇ ನಮಗೆ ಮುಖ್ಯವಾಗಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲು ಫಾಸ್ಟ್ ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸುವುದಾಗಿ ಅವರು ಘೋಷಿಸಿದ್ದಾರೆ.
Read Full Story

09:23 AM (IST) Jul 23

ರಾಷ್ಟ್ರೀಯ ಹೆದ್ದಾರಿಗಳ ಮೃತ್ಯುಪಾಶ - 3 ವರ್ಷಗಳಲ್ಲಿ 37 ಸಾವಿರಕ್ಕೂ ಹೆಚ್ಚು ಜನರ ಬಲಿ; ಕರ್ನಾಟಕಕ್ಕೆ 3ನೇ ಸ್ಥಾನ!

ಕಳೆದ ಮೂರು ವರ್ಷಗಳಲ್ಲಿ ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ 6,358 'ಬ್ಲ್ಯಾಕ್ ಕಾರಿಡಾರ್'ಗಳಲ್ಲಿ 37,000ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ. ಅತಿ ಹೆಚ್ಚು ಅಪಘಾತ ಪೀಡಿತ ವಲಯಗಳನ್ನು ಹೊಂದಿರುವ ರಾಜ್ಯಗಳಲ್ಲಿ ತಮಿಳುನಾಡು ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಈ ಅಪಾಯಕಾರಿ ವಲಯಗಳನ್ನು ಸರಿಪಡಿಸಲು ಸರ್ಕಾರ  ಕ್ರಮಗಳನ್ನು ಕೈಗೊಳ್ಳುತ್ತಿದೆ.

Read Full Story

08:48 AM (IST) Jul 23

ದೆಹಲಿ ಸಿಜೆಪಿ ಪ್ರತಿಭಟನೆ - ರಾತ್ರಿ ಕನ್ನಾಟ ಪ್ಯಾಲೇಸ್ ಬಳಿ ನಡೆದಿದ್ದೇನು? ಪಿಎಸ್‌ಐಗೆ ಗಾಯ

ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು, ಕನ್ನಾಟ ಪ್ಯಾಲೇಸ್ ಬಳಿ ನಡೆದ ಕಲ್ಲು ತೂರಾಟದಲ್ಲಿ ಪಿಎಸ್‌ಐ ಒಬ್ಬರು ಗಾಯಗೊಂಡಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಇಂಟರ್‌ನೆಟ್ ಸ್ಥಗಿತಗೊಳಿಸಲಾಗಿದ್ದು, ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರೆಸಿದ್ದಾರೆ.

Read Full Story

05:29 AM (IST) Jul 23

10 ವರ್ಷದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಲೀಕ್‌, ಪ್ರಧಾನಿ ಮೋದಿ ಕ್ಷಮೆಯಾಚಿಸಲಿ - ರಾಹುಲ್ ಗಾಂಧಿ

ಕಳೆದ ದಶಕದಲ್ಲಿ 152 ಬಾರಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, 7.5 ಕೋಟಿ ವಿದ್ಯಾರ್ಥಿಗಳು ಬಾಧಿತರಾಗಿದ್ದಾರೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಶಿಕ್ಷಣ ಸಚಿವ ಪ್ರಧಾನ್ ಪದಚ್ಯುತಿ ಹಾಗೂ ಪ್ರಧಾನಿ ಮೋದಿ ಕ್ಷಮೆಯಾಚಿಸಬೇಕೆಂದು ಅವರು ಆಗ್ರಹಿಸಿದ್ದು, ಇದುವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Read Full Story

More Trending News