ಚೆನ್ನೈ: 'ಪ್ರಧಾನಿ ನರೇಂದ್ರ ಮೋದಿ ನರಕಾಸುರನಿದ್ದಂತೆ. ಅವರನ್ನು ಸಂಹರಿಸಬೇಕು' ಎಂದು ತಮಿಳುನಾಡಿದ ಡಿಎಂಕೆ ತೆಂಕಾಸಿ ಜಿಲ್ಲಾ ಮುಖಂಡ ಜೆ. ಜೆಯಬಾಲನ್ ಕರೆ ನೀಡಿದ್ದಾರೆ. 'ಮೋದಿ ನಿಮ್ಮ ಮತಗಳನ್ನು ಕಸಿದು ಕೊಳ್ಳಲು ಹತಾಶರಾಗಿದ್ದಾರೆ. ಅವರು ನರಕಾಸುರನಂತಹ ರಾಕ್ಷಸ. ಅಂತಹ ವ್ಯಕ್ತಿಯನ್ನು ನಿರ್ಮೂಲನೆ ಮಾಡಿದರಷ್ಟೆ ತಮಿಳುನಾಡಿಗೆ ನಿಜವಾದ ಲಾಭ. ಎಲ್ಲರೂ ಹೋರಾಡೋಣ' ಎಂದಿದ್ದಾರೆ. ಡಿಎಂಕೆ ನಾಯಕನ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

08:13 PM (IST) Nov 20
ನಾಳೆ ಆರೋಗ್ಯ ಸರಿ ಇರಲ್ಲ, ಮ್ಯೂಸಿಕ್ ಕಾನ್ಸರ್ಟ್ಗೆ ಸಿಕ್ ಲೀವ್ ಕೇಳಿದ ಉದ್ಯೋಗಿಯಿಂದ ಬಾಸ್ ಶಾಕ್, ಮುಂಬೈನಲ್ಲಿ ಆಯೋಜನೆಗೊಂಡಿದ್ದ ಟ್ರಾವಿಸ್ ಸ್ಕಾಟ್ ಮ್ಯೂಸಿಕ್ ಕಾನ್ಸರ್ಟ್ಗಾಗಿ ರಜೆ ಕೇಳಿದ್ದಾನೆ. ಹಲವರು ಇದೇ ವಾಸ್ತವ ಎಂದಿದ್ದಾರೆ.
08:11 PM (IST) Nov 20
ತಂದೆಯ ತುರ್ತು ಚಿಕಿತ್ಸೆಗಾಗಿ ರಜೆಯಲ್ಲಿದ್ದ ಟಿಸಿಎಸ್ ಉದ್ಯೋಗಿಯೊಬ್ಬರನ್ನು ಬಲವಂತವಾಗಿ ರಾಜೀನಾಮೆ ನೀಡುವಂತೆ ಒತ್ತಾಯಿಸಿ, ನಂತರ ಗ್ರಾಚ್ಯುಟಿ ನಿರಾಕರಿಸಿದ ಘಟನೆ ನಡೆದಿದೆ. ಕಾರ್ಮಿಕ ಇಲಾಖೆಯ ಮಧ್ಯಪ್ರವೇಶದಿಂದ ಉದ್ಯೋಗಿಗೆ ನ್ಯಾಯ ಸಿಕ್ಕಿದ್ದು, ಕಂಪನಿಗೆ ಪೂರ್ಣ ಗ್ರಾಚ್ಯುಟಿ ಪಾವತಿಸಲು ಆದೇಶಿಸಲಾಗಿದೆ.
07:53 PM (IST) Nov 20
ಚೀನಾದ ಜೈವಿಕ ತಂತ್ರಜ್ಞಾನ ಕಂಪನಿಯೊಂದು ದೀರ್ಘಾಯುಷ್ಯದ ಮಾತ್ರೆಯೊಂದನ್ನು ಕಂಡುಹಿಡಿದಿದೆ. ದ್ರಾಕ್ಷಿ ಬೀಜದ ಸಂಯುಕ್ತ ಬಳಸಿ ತಯಾರಿಸಲಾದ ಈ ಮಾತ್ರೆ, ವೃದ್ಧಾಪ್ಯ ಕೋಶಗಳನ್ನು ಗುರಿಯಾಗಿಸಿ ಇಲಿಗಳ ಮೇಲೆ ಯಶಸ್ವಿ ಪ್ರಯೋಗ ಕಂಡಿದಿದೆ.
07:12 PM (IST) Nov 20
ಉತ್ತರ ಪ್ರದೇಶದಲ್ಲಿ, ಮೊದಲ ಪತ್ನಿಯೊಂದಿಗೆ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿರುವಾಗಲೇ ಎರಡನೇ ಮದುವೆಯಾಗಲು ಯತ್ನಿಸಿದ ವ್ಯಕ್ತಿಯೊಬ್ಬನಿಗೆ ಆತನ ಮೊದಲ ಪತ್ನಿ ಶಾಕ್ ನೀಡಿದ್ದಾಳೆ. ವರನು ವಧುವಿಗೆ ತಾಳಿ ಕಟ್ಟುವಷ್ಟರಲ್ಲಿ ಮದುವೆ ಮಂಟಪಕ್ಕೆ ಆಗಮಿಸಿದ ಆಕೆ, ಮದುವೆ ನಿಲ್ಲಿಸಿದ್ದಾಳೆ.
06:47 PM (IST) Nov 20
ನಿತೀಶ್ ಕುಮಾರ್ 10ನೇ ಬಾರಿಗೆ ಸಿಎಂ ಆದ್ರೂ 5 ಲಾಂಗೆಸ್ಟ್ ಮುಖ್ಯಮಂತ್ರಿ ಪಟ್ಟಿಯಲ್ಲಿಲ್ಲ ಸ್ಥಾನ, ಇಲ್ಲಿದೆ ಲಿಸ್ಟ್, 19 ವರ್ಷಗಳಿಂದ ಮುಖ್ಯಮಂತ್ರಿ ಸ್ಥಾನದಲ್ಲಿರುವ ನಿತೀಶ್ ಕುಮಾರ್ ಈ ಅವಧಿಯಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಲಿದ್ದಾರೆ. ಸುದೀರ್ಘ ಸೇವೆ ಸಲ್ಲಿಸಿದ ಸಿಎಂ ಯಾರು?
06:42 PM (IST) Nov 20
06:25 PM (IST) Nov 20
2020ರ ದೆಹಲಿ ಗಲಭೆ ಪ್ರಕರಣದಲ್ಲಿ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಯನ್ನು ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ನಲ್ಲಿ ವಿರೋಧಿಸಿದ್ದಾರೆ. ವಿದ್ಯಾವಂತರು ರಾಷ್ಟ್ರವಿರೋಧಿ ಕೃತ್ಯಗಳಲ್ಲಿ ತೊಡಗುವ 'ವೈಟ್ ಕಾಲರ್ ಭಯೋತ್ಪಾದನೆ'ಯ ಪ್ರವೃತ್ತಿ ಅಪಾಯಕಾರಿ ಎಂದಿದ್ದಾರೆ.
06:05 PM (IST) Nov 20
ನೇಪಾಳದಲ್ಲಿ ಮತ್ತೆ ಭುಗಿಲೆದ್ದ ಜೆನ್ ಝೀ ಪ್ರತಿಭಟನೆ, ಹಲವು ಜಿಲ್ಲೆಗಳಲ್ಲಿ ಕರ್ಫ್ಯೂ, ಇಡೇ ದೇಶ ಹೊತ್ತಿ ಉರಿದು ಚುನಾಯಿತ ಪ್ರಧಾನಿ ಸೇರಿದಂತೆ ಇಡೀ ಸರ್ಕಾರ ಪತನಗೊಂಡು ಪಲಾಯನ ಮಾಡುವ ಪರಿಸ್ಥಿತಿಗೆ ಕಾರಣವಾಗಿದ್ದ ಇದೇ ZEN G ಪ್ರತಿಭಟನೆ ಮತ್ತೆ ಶುರುವಾಗಿದೆ.
05:18 PM (IST) Nov 20
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ನಿಂದ ನಾಯಕ ಶುಭಮನ್ ಗಿಲ್ ಕುತ್ತಿಗೆ ನೋವಿನಿಂದಾಗಿ ಹೊರಬಿದ್ದಿದ್ದಾರೆ. ಅವರ ಅನುಪಸ್ಥಿತಿಯಲ್ಲಿ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
05:17 PM (IST) Nov 20
ಸರ್ಕಾರಿ ನೌಕರರಿಗೆ ಭರ್ಜರಿ ಗಿಫ್ಟ್, 8ನೇ ವೇತನ ಆಯೋಗದ ಸ್ಯಾಲರಿ ಹೆಚ್ಚಳ ಪ್ರಕ್ರಿಯೆ ಶುರು, 2026ರ ಆರಂಭದಿಂದಲೇ 8ನೇ ವೇತನ ಆಯೋಗ ಜಾರಿಯಾಗಲಿದೆ. ಇದರ ಪ್ರಕಾರ ವೇತನ ಎಷ್ಟಾಗಲಿದೆ? 8ನೇ ವೇತನ ಆಯೋಗದ ಮಹತ್ವದ ಅಪ್ಡೇಟ್ ಇಲ್ಲಿದೆ.
04:34 PM (IST) Nov 20
Student Died after Teacher insult: ದೆಹಲಿಯ ಪ್ರತಿಷ್ಠಿತ ಸೇಂಟ್ ಕೊಲಂಬಾ ಶಾಲೆಯ 10ನೇ ತರಗತಿ ವಿದ್ಯಾರ್ಥಿ ಶೌರ್ಯ ಪಾಟೀಲ್ ಮೆಟ್ರೋ ನಿಲ್ದಾಣದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಸಾವಿಗೆ ಶಾಲೆಯ ಶಿಕ್ಷಕರ ಕಿರುಕುಳವೇ ಕಾರಣ ಎಂದು ಡೆತ್ನೋಟ್ನಲ್ಲಿ ಬರೆದಿಟ್ಟಿದ್ದಾನೆ.
04:30 PM (IST) Nov 20
ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾಗೆ ಮನಿ ಲಾಂಡರಿಂಗ್ ಸಂಕಷ್ಟ, ಇಡಿ ಚಾರ್ಜ್ಶೀಟ್ ಸಲ್ಲಿಕೆ, ಯುಕೆ ಮೂಲದ ರಕ್ಷಣಾ ಉತ್ಪನ್ನಗಳ ಡೀಲರ್ ಜೊತೆಗಿನ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದೀಗ ರಾಬರ್ಟ್ ವಾದ್ರಾ ಸಂಕಷ್ಟ ಹೆಚ್ಚಾಗಿದೆ.
04:27 PM (IST) Nov 20
ನೇಪಿಯರ್: ವೆಸ್ಟ್ ತಂಡದ ಸ್ಟಾರ್ ಕ್ರಿಕೆಟಿಗ ಶಾಯ್ ಹೋಪ್, ನ್ಯೂಜಿಲೆಂಡ್ ಎದುರು ಶತಕ ಸಿಡಿಸುವ ಮೂಲಕ, ಟೆಸ್ಟ್ ಆಡುವ ಎಲ್ಲಾ ದೇಶಗಳ ತಂಡದ ವಿರುದ್ದ ಶತಕ ಸಿಡಿಸಿದ ಅಪರೂಪದ ವಿಶ್ವದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ದೀಟೈಲೈ ಇಲ್ಲಿದೆ ನೋಡಿ
04:19 PM (IST) Nov 20
ಮೇ ತಿಂಗಳಲ್ಲಿ ನಡೆದ ಭಾರತ-ಪಾಕಿಸ್ತಾನದ 'ಆಪರೇಷನ್ ಸಿಂದೂರ್' ಕುರಿತ ಯುಎಸ್ ಕಾಂಗ್ರೆಸ್ ವರದಿಯ ಪ್ರಕಾರ, ಈ ಯುದ್ಧದ ನಿಜವಾದ ವಿಜೇತ ಚೀನಾ. ಬೀಜಿಂಗ್ ಈ ಸಂಘರ್ಷವನ್ನು ತನ್ನ ಮುಂದುವರಿದ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸಲು ಒಂದು ಅವಕಾಶವಾಗಿ ಬಳಸಿಕೊಂಡಿದೆ ಎಂದು ವರದಿ ತಿಳಿಸಿದೆ.
03:26 PM (IST) Nov 20
10ನೇ ಬಾರಿಗೆ ಸಿಎಂ ಆದರೂ ನಿತೀಶ್ ಕುಮಾರ್ ಆಸ್ತಿ 13 ದನ-ಕರು,21 ರೂ ನಗದು, ಒಂದು ಮನೆ, ನಿತೀಶ್ ಕುಮಾರ್ ಬಿಹಾರದ ಅತ್ಯಂತ ಯಶಸ್ವಿ ಮುಖ್ಯಮಂತ್ರಿ. ಇವರ ಒಟ್ಟು ಆಸ್ತಿ ಇದೀಗ ಭಾರಿ ಚರ್ಚೆಯಾಗುತ್ತಿದೆ.
03:02 PM (IST) Nov 20
Indian nurse dies in Israel: ಇಸ್ರೇಲ್ನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಭಾರತೀಯ ಮೂಲದ ನರ್ಸ್ ಒಬ್ಬರು ಸಾವಿಗೀಡಾಗಿದ್ದಾರೆ. ಇಸ್ರೇಲ್ನಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ 34 ವರ್ಷದ ಮಹಿಳೆ ಶರಣ್ಯ ಪ್ರಸನ್ನನ್ ಮೃತಪಟ್ಟವರು ಎಂದು ತಿಳಿದು ಬಂದಿದೆ.
02:54 PM (IST) Nov 20
violence against men: ಪತ್ನಿ ಪಿಂಕಿ ಶರ್ಮಾ ತನ್ನ ಪತಿ ಅನುಜ್ ಶರ್ಮಾನಿಗೆ ವಿಷವಿಕ್ಕಿ ಕೊಲೆ ಮಾಡಲು ಯತ್ನಿಸಿದ್ದಾಳೆ. ಮದುವೆಯಾಗಿ ಎರಡು ವರ್ಷವಾದರೂ ಪತಿ ದೈಹಿಕವಾಗಿ ಸ್ಪಂದಿಸದ ಕಾರಣ, ಆತನ ನಿರಾಸಕ್ತಿಯಿಂದ ಬೇಸತ್ತು ಈ ಕೃತ್ಯ ಎಸಗಿದ್ದಾಳೆ ಎಂದು ವರದಿಯಾಗಿದೆ.
02:53 PM (IST) Nov 20
ಉದ್ಯೋಗ ಕಡಿತದ ನೋವು ತೋಡಿಕೊಂಡ ಮ್ಯಾನೇಜರ್, 70 ಲಕ್ಷ ರೂ ವೇತನದಿಂದ ಈಗ ಝಿರೋ , 7 ತಿಂಗಳಿನಿಂದ ಬೇರೆ ಕೆಲಸವೂ ಸಿಕ್ಕಿಲ್ಲ, ಇರುವ ಉಳಿತಾಯ, ಬ್ಯಾಂಕ್ ಬ್ಯಾನೆಲ್ಸ್ ಖಾಲಿಯಾಗಿದೆ. ಖರೀದಿಸದ ಹೊಸ ಮನೆಯ ಇಎಂಐ, ಕುಟುಂಬ ನಿರ್ವಹಣ ಕಷ್ಟವಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ.
02:50 PM (IST) Nov 20
ಪಿಂಚಣಿದಾರರು ತಮ್ಮ ಪಿಂಚಣಿಯನ್ನು ನಿರಂತರವಾಗಿ ಪಡೆಯಲು ಪ್ರತಿ ವರ್ಷ 'ಜೀವನ್ ಪ್ರಮಾಣ' ಪತ್ರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ತಪ್ಪಿದಲ್ಲಿ ಪಿಂಚಣಿ ಸ್ಥಗಿತಗೊಳ್ಳುತ್ತದೆ. ಆನ್ಲೈನ್ ಮೂಲಕ ಅಥವಾ ಹತ್ತಿರದ ಕೇಂದ್ರಗಳಲ್ಲಿ ಸಲ್ಲಿಕೆ ವಿಧಾನ ವಿವರಿಸಲಾಗಿದೆ.
02:18 PM (IST) Nov 20
ಗುವಾಹಟಿ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಮಹತ್ವದ ಅಪ್ಡೇಟ್ ಹೊರಬಿದ್ದಿದೆ.
02:15 PM (IST) Nov 20
ನಟಿ ನಯನತಾರಾ ತಮ್ಮ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವಿಶೇಷ ದಿನದಂದು, ಅವರ ಪತಿ ವಿಘ್ನೇಶ್ ಶಿವನ್ 10 ಕೋಟಿ ರೂಪಾಯಿ ಮೌಲ್ಯದ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ವಿಘ್ನೇಶ್ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಪೋಸ್ಟ್ ಹಂಚಿಕೊಂಡಿದ್ದಾರೆ.
01:39 PM (IST) Nov 20
ಐಪಿಎಲ್ ಮಿನಿ ಹರಾಜಿಗಾಗಿ ಕೆಕೆಆರ್ 64.3 ಕೋಟಿ ರೂ.ಗಳ ದೊಡ್ಡ ಮೊತ್ತದೊಂದಿಗೆ ಸಿದ್ಧವಾಗಿದೆ. ಆಂಡ್ರೆ ರಸೆಲ್ ಅವರನ್ನು ಅನಿರೀಕ್ಷಿತವಾಗಿ ಬಿಡುಗಡೆ ಮಾಡಿದ್ದು, ತಂಡವು ಪ್ರಮುಖ ಸ್ಥಾನಗಳನ್ನು ತುಂಬಲು ಸಜ್ಜಾಗಿದೆ.
12:40 PM (IST) Nov 20
U19 ವಿಶ್ವಕಪ್ ವೇಳಾಪಟ್ಟಿ: 2026ರ ಅಂಡರ್ 19 ವಿಶ್ವಕಪ್ ವೇಳಾಪಟ್ಟಿಯನ್ನು ಐಸಿಸಿ ಬಿಡುಗಡೆ ಮಾಡಿದೆ. ಜನವರಿ 15 ರಂದು ಭಾರತ ಮತ್ತು ಯುಎಸ್ಎ ನಡುವಿನ ಪಂದ್ಯದೊಂದಿಗೆ ಟೂರ್ನಿ ಶುರುವಾಗಲಿದೆ.
11:45 AM (IST) Nov 20
ಕೋಲ್ಕತಾ ಟೆಸ್ಟ್ನಲ್ಲಿ ಸೋತ ಭಾರತ ತಂಡ ಗುವಾಹಟಿಯಲ್ಲಿ ನಡೆಯಲಿರುವ 2ನೇ ಟೆಸ್ಟ್ಗೆ ಸಜ್ಜಾಗುತ್ತಿದೆ. ಈಡನ್ ಗಾರ್ಡನ್ಸ್ಗಿಂತ ಭಿನ್ನವಾಗಿರುವ ಗುವಾಹಟಿ ಪಿಚ್, ಕೆಂಪು ಮಣ್ಣಿನಿಂದ ಕೂಡಿದ್ದು ವೇಗಿಗಳಿಗೆ ನೆರವಾಗುವ ನಿರೀಕ್ಷೆಯಿದೆ.
11:44 AM (IST) Nov 20
hospital scam: ಆಸ್ಪತ್ರೆಗಳ ಒಳಗೆ ನಡೆಯುವ ಅಕ್ರಮಗಳು ಬಹುತೇಕ ಜನ ಸಾಮಾನ್ಯರಿಗೆ ತಿಳಿಯುವುದೇ ಇಲ್ಲ, ಆಸ್ಪತ್ರೆಯೊಂದರಲ್ಲಿ ನಡೆದ ಹಗರಣವೊಂದರ ಬಗ್ಗೆ ಟ್ರಾವೆಲ್ ವ್ಲಾಗರ್ ಒಬ್ಬರು ಹೇಳಿಕೊಂಡಿದ್ದು, ಅವರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
11:43 AM (IST) Nov 20
10:37 AM (IST) Nov 20
ಭಾರತದೊಂದಿಗಿನ ತಮ್ಮ ಬಾಂಧವ್ಯದ ಬಗ್ಗೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಮಾಡಿದ ಕಾಮೆಂಟ್ಗಳು ವೈರಲ್ ಆಗಿವೆ. 2 ದಶಕಗಳಿಗೂ ಹೆಚ್ಚು ಕಾಲದ ಭಾರತ ಪ್ರವಾಸದಲ್ಲಿ ತಮಗೆ ಪ್ರೀತಿ ಮತ್ತು ಗೌರವ ಮಾತ್ರ ಸಿಕ್ಕಿದೆ ಎಂದು ಭಾರತದ ಪುಣ್ಯಭೂಮಿಯನ್ನು ಕೊಂಡಾಡಿದ್ದಾರೆ.
08:19 AM (IST) Nov 20
'ತಲಾಖ್-ಎ-ಹಸನ್' ಪದ್ಧತಿಯನ್ನು ರದ್ದುಗೊಳಿಸುವ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಚಿಂತನೆ ನಡೆಸಿದೆ. ಮಹಿಳೆಯರ ಘನತೆಗೆ ಧಕ್ಕೆ ತರುವ ಈ ಪದ್ಧತಿಯನ್ನು ನ್ಯಾಯಾಂಗ ಹಸ್ತಕ್ಷೇಪದ ಮೂಲಕ ನಿಷೇಧಿಸುವ ಸಾಧ್ಯತೆಯಿದ್ದು, ಈ ವಿಷಯವನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲು ನ್ಯಾಯಾಲಯ ಮುಂದಾಗಿದೆ.
07:54 AM (IST) Nov 20
Supreme Court: ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ 2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆಯ ಹಲವು ನಿಬಂಧನೆಗಳನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. 2021ರ ನ್ಯಾಯಮಂಡಳಿಗಳ ಸುಧಾರಣಾ ಕಾಯ್ದೆ.