Published : Feb 20, 2026, 10:16 AM ISTUpdated : Feb 20, 2026, 11:01 PM IST

India Latest News Live: ಬೆಂಗಳೂರಲ್ಲಿ ಹುಟ್ಟಿದ ಇಶಾನಿ ಜೋಹರ್‌ ಜೊತೆಗಿನ Divorce ಬೆನ್ನಲ್ಲಿಯೇ ಟ್ರೆಂಡ್‌ ಆದ ರಾಹುಲ್‌ ಜಾತಿ!

ಸಾರಾಂಶ

ತಿರುಮಲ ಲಡ್ಡು ಪ್ರಸಾದಕ್ಕೆ ಬಳಸುವ ತುಪ್ಪದಲ್ಲಿ ಕಲಬೆರಕೆಯಾಗಿದೆ ಅನ್ನೋ ಆರೋಪಕ್ಕೆ ಸಂಬಂಧಿಸಿದಂತೆ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ (YSRCP) ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಇಡೀ ಪ್ರಕರಣದಲ್ಲಿ ತಮ್ಮ ಪಕ್ಷದ ಯಾವುದೇ ಪಾತ್ರವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

rahul chahar divorce

11:01 PM (IST) Feb 20

ಬೆಂಗಳೂರಲ್ಲಿ ಹುಟ್ಟಿದ ಇಶಾನಿ ಜೋಹರ್‌ ಜೊತೆಗಿನ Divorce ಬೆನ್ನಲ್ಲಿಯೇ ಟ್ರೆಂಡ್‌ ಆದ ರಾಹುಲ್‌ ಜಾತಿ!

ಭಾರತೀಯ ಕ್ರಿಕೆಟಿಗ ರಾಹುಲ್ ಚಾಹರ್ ತಮ್ಮ ಪತ್ನಿ ಇಶಾನಿ ಜೋಹರ್ ಅವರಿಂದ ವಿಚ್ಛೇದನ ಪಡೆದಿದ್ದಾರೆ. ಈ ಬೇರ್ಪಡೆಯ ನಂತರ, ಅವರ ಜಾಟ್ ಸಮುದಾಯದ ಹಿನ್ನೆಲೆ, ಕುಟುಂಬ ಮತ್ತು ವಿವಾಹದ ಕುರಿತ ಚರ್ಚೆಗಳು ಮುನ್ನೆಲೆಗೆ ಬಂದಿವೆ. 

Read Full Story

10:48 PM (IST) Feb 20

ಕಾಂಗ್ರೆಸ್ Topless brainless shameless - ಎಐ ಶೃಂಗಸಭೆಯಲ್ಲಿ 'ಕೈ' ಟಾಪ್‌ಲೆಸ್‌ ಪ್ರತಿಭಟನೆಗೆ ಬಿಜೆಪಿ ಆಕ್ರೋಶ

ಜಾಗತಿಕ ಎಐ ಶೃಂಗಸಭೆಯಲ್ಲಿ, ಕಾಂಗ್ರೆಸ್ ಯುವ ಕಾರ್ಯಕರ್ತರು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿ ಟಾಪ್‌ಲೆಸ್ ಪ್ರತಿಭಟನೆ ನಡೆಸಿದರು. ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ ಬಿಜೆಪಿ, ಇದು ವಿಶ್ವ ವೇದಿಕೆಯಲ್ಲಿ ಭಾರತವನ್ನು ಮುಜುಗರಕ್ಕೀಡು ಮಾಡಲು ವ್ಯವಸ್ಥಿತವಾಗಿ ರೂಪಿಸಿದ ಸಂಚು ಎಂದು ಆರೋಪಿಸಿದೆ.

Read Full Story

10:35 PM (IST) Feb 20

ಕಪ್‌ಗಿಂತ ಬ್ರೇಕಪ್‌ಗಳೇ ಜಾಸ್ತಿ! 26ನೇ ವರ್ಷಕ್ಕೆ ಮದುವೆಗೆ ಗುಡ್‌ಬೈ ಹೇಳಿದ ಮತ್ತೊಬ್ಬ ಟೀಮ್‌ ಇಂಡಿಯಾ ಕ್ರಿಕೆಟಿಗ!

From Hardik to Rahul Chahar: Indian Cricketers Who Recently Divorced ಭಾರತೀಯ ಕ್ರಿಕೆಟ್‌ನಲ್ಲಿ ವಿಚ್ಛೇದನದ ಪರ್ವ ಮುಂದುವರೆದಿದೆ. ರಾಹುಲ್ ಚಹರ್, ಶಿಖರ್ ಧವನ್, ಹಾರ್ದಿಕ್ ಪಾಂಡ್ಯ ಸೇರಿದಂತೆ ಹಲವು ಪ್ರಮುಖ ಆಟಗಾರರು ತಮ್ಮ ಪತ್ನಿಯರಿಂದ ಬೇರ್ಪಟ್ಟಿದ್ದು, ಅವರ ವೈವಾಹಿಕ ವಿವರಗಳು ಇಲ್ಲಿವೆ.

Read Full Story

09:55 PM (IST) Feb 20

ಹಿಂದಿ ಉತ್ತೇಜಿಸಿದರೆ ಎಲ್ಲಾ ಭಾಷೆಗಳಿಗೂ ಬಲ, ಇವು ಒಂದೇ ತಾಯಿಯ ಮಕ್ಕಳು - ಅಮಿತ್‌ ಶಾ

ಅಗರ್ತಲಾದಲ್ಲಿ ನಡೆದ ರಾಜಭಾಷಾ ಸಮ್ಮೇಳನದಲ್ಲಿ, ಹಿಂದಿ ಭಾಷೆಯನ್ನು ಉತ್ತೇಜಿಸುವುದರಿಂದ ಪ್ರಾದೇಶಿಕ ಭಾಷೆಗಳು ದುರ್ಬಲಗೊಳ್ಳುವುದಿಲ್ಲ, ಬದಲಾಗಿ ಗಟ್ಟಿಗೊಳ್ಳುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. 

Read Full Story

09:42 PM (IST) Feb 20

ಕಲಬುರಗಿ - ಪರೀಕ್ಷೆಯಲ್ಲಿ ನಕಲು ಪ್ರಶ್ನಿಸಿದ್ದಕ್ಕೆ ಪ್ರೊಫೆಸರ್ ಮೇಲೆಯೇ ಹಲ್ಲೆ ಮಾಡಿದ ಮೆಡಿಕಲ್ ವಿದ್ಯಾರ್ಥಿ

ವೈದ್ಯಕೀಯ ವಿದ್ಯಾರ್ಥಿಗಳ ಅಂತರಿಕ ಪರೀಕ್ಷೆಯಲ್ಲಿ ರಾಜಾರೋಷವಾಗಿ ಮೊಬೈಲ್ ಫೋನ್ ಹಿಡಿದುಕೊಂಡು ನಕಲು ಮಾಡುತ್ತಿದ್ದ ವಿದ್ಯಾರ್ಥಿಯನ್ನು ಪ್ರಶ್ನಿಸಿದ್ದಕ್ಕೆ ಸಿಟ್ಟಿಗೆದ್ದ ವಿದ್ಯಾರ್ಥಿ ಕಾಲೇಜಿನ ಪ್ರೊಫೆಸರ್ ಮೇಲೆಯೇ ಹಲ್ಲೆ ಮಾಡಿದಂತಹ ಘಟನೆ ರಾಜ್ಯದ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

Read Full Story

09:39 PM (IST) Feb 20

ಹೆರಿಗೆ ನೋವು ತಾಳಲಾರದೆ ಚಾಕುವಿನಿಂದ ತನ್ನ ಹೊಟ್ಟೆಯನ್ನೇ ಸೀಳಿಕೊಂಡ ಗರ್ಭಿಣಿ - ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ತಾಯಿ!

ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿ, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬಳು ಸಹಾಯಕ್ಕೆ ಯಾರೂ ಇಲ್ಲದ ಕಾರಣ ಚಾಕುವಿನಿಂದ ತನ್ನ ಹೊಟ್ಟೆಯನ್ನೇ ಸೀಳಿಕೊಂಡಿದ್ದಾಳೆ. ಈ ಆಘಾತಕಾರಿ ಘಟನೆಯ ನಂತರವೂ ಆಕೆ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

Read Full Story

09:16 PM (IST) Feb 20

ಏಪ್ರಿಲ್ 1 ರಿಂದ ಟೋಲ್ ಪ್ಲಾಜಾದಲ್ಲಿ ನಗದು ಸ್ವೀಕಾರ ಬಂದ್? ಸಂಪೂರ್ಣ ಡಿಜಿಟಲ್ ಪಾವತಿಗೆ NHAI ಮಾಸ್ಟರ್ ಪ್ಲಾನ್!

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) 2026 ರಿಂದ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಗದು ವಹಿವಾಟುಗಳನ್ನು ಸಂಪೂರ್ಣವಾಗಿ ನಿಲ್ಲಿಸಲು ಯೋಜಿಸುತ್ತಿದೆ. ಈ ಕ್ರಮದಿಂದ, ಎಲ್ಲಾ ಪಾವತಿಗಳನ್ನು ಫಾಸ್ಟ್‌ಟ್ಯಾಗ್ ಮತ್ತು ಯುಪಿಐ ಮೂಲಕ ಡಿಜಿಟಲ್ ಆಗಿ ಮಾಡಲಾಗುತ್ತದೆ.

Read Full Story

08:54 PM (IST) Feb 20

Breaking - ಜಗತ್ತಿನ ಮೇಲೆ ಟ್ರಂಪ್‌ ವಿಧಿಸಿರುವ ಸುಂಕ ಅಸಿಂಧುಗೊಳಿಸಿದ ಅಮೆರಿಕ ಸುಪ್ರೀಂ ಕೋರ್ಟ್!

ಅಮೆರಿಕದ ಸುಪ್ರೀಂ ಕೋರ್ಟ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸುಂಕದ ಆದೇಶಗಳನ್ನು 'ಅಕ್ರಮ' ಎಂದು ಘೋಷಿಸಿ ರದ್ದುಗೊಳಿಸಿದೆ. ಈ ತೀರ್ಪು ಅಧ್ಯಕ್ಷರ ಕಾರ್ಯನಿರ್ವಾಹಕ ಅಧಿಕಾರದ ವ್ಯಾಪ್ತಿಯನ್ನು ಪ್ರಶ್ನಿಸಿದೆ.

Read Full Story

08:24 PM (IST) Feb 20

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೆಮಿಫೈಲ್ ಟ್ವಿಸ್ಟ್

ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಭವಿಷ್ಯ ಹೇಳಿದ ಪಾಕ್ ಮಾಜಿ ವೇಗಿ, ಸೂಪರ್ 8 ಹಂತದಲ್ಲಿ ಭಾರತದ ಏನಾಗಲಿದೆ ಅನ್ನೋದನ್ನು ಪಾಕ್ ಮಾಜಿ ವೇಗಿ ಹೇಳಿದ್ದಾರೆ. ಸೆಮಿಫೈನಲ್‌ಗೂ ಮೊದಲು ಟ್ವಿಸ್ಟ್ ಕೊಟ್ಟಿದ್ದಾರೆ.

 

Read Full Story

08:16 PM (IST) Feb 20

ಅಮ್ಮನ ಅಂಬಾರಿ - ಮೇವಿನ ಹೊರೆಯ ಜೊತೆ ಮಗನನ್ನು ಕಟ್ಟಿ ತಲೆಯ ಮೇಲಿಟ್ಟು ಸಾಗಿದ ತಾಯಿ

ಹಳ್ಳಿಯ ತಾಯಿಯೊಬ್ಬಳು ತನ್ನ ಮಗುವನ್ನು ಹುಲ್ಲಿನ ಹೊರೆಯೊಳಗೆ ಇಟ್ಟು ಹೊತ್ತು ಸಾಗುತ್ತಿರುವ ವೀಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ದೃಶ್ಯವು ಗ್ರಾಮೀಣ ಮಹಿಳೆಯರ ಕಷ್ಟಕರ ಜೀವನ ಮತ್ತು ಅಚಲವಾದ ಮಾತೃಪ್ರೇಮವನ್ನು ಬಿಂಬಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಜನರ ಮನ ಕಲಕಿದೆ.
Read Full Story

07:30 PM (IST) Feb 20

ಡೇಟಿಂಗ್ ಆ್ಯಪ್ ಬಿಡಿ ಸಿಂಗಾಪುರ ಆಂಟಿ ಮೇಲೆ ನಂಬಿಕೆ ಇಡಿ, ಏನಿದು 4 ರಾತ್ರಿಯ ಟೂರ್ ಆಫರ್?

ಡೇಟಿಂಗ್ ಆ್ಯಪ್ ಬಿಡಿ ಸಿಂಗಾಪುರ ಆಂಟಿ ಮೇಲೆ ನಂಬಿಕೆ ಇಡಿ, ಇಷ್ಟೇ ನೋಡಿ, ಆಂಟಿಯರ ಜೊತೆ ನಾಲ್ಕು ರಾತ್ರಿಗಳ ಟೂರ್ ಆಫರ್, ಉನ್ನತ ಹೊಟೆಲ್‌ನಲ್ಲಿ ವಾಸ್ತವ್ಯ ಸೇರಿ ಹಲವು ಆತಿಥ್ಯ. ಏನಿದು ಮ್ಯಾಚ್ ಮೇಕಿಂಗ್ ಟೂರ್ ಆಫರ್?

 

Read Full Story

07:26 PM (IST) Feb 20

ಭೂಮಿಯತ್ತ ಬರುತ್ತಿವೆ 15 ಸಾವಿರ ಸಿಟಿ ಕಿಲ್ಲರ್ಸ್‌, ಅವುಗಳನ್ನು ತಡೆಯುವ ಯಾವುದೇ ದಾರಿ ಇಲ್ಲ - ನಾಸಾ ವಾರ್ನಿಂಗ್‌

ನಾಸಾದ ಗ್ರಹ ರಕ್ಷಣಾ ಮುಖ್ಯಸ್ಥರಾದ ಕೆಲ್ಲಿ ಫಾಸ್ಟ್, ಭೂಮಿಯತ್ತ ಬರುತ್ತಿರುವ ಸುಮಾರು 15,000 ಪತ್ತೆಹಚ್ಚಲಾಗದ ಕ್ಷುದ್ರಗ್ರಹಗಳ ಬಗ್ಗೆ ಎಚ್ಚರಿಸಿದ್ದಾರೆ. ಈ 'ಸಿಟಿ ಕಿಲ್ಲರ್'ಗಳು ಯಾವುದೇ ನಗರವನ್ನು ನಾಶಪಡಿಸುವ ಸಾಮರ್ಥ್ಯ ಹೊಂದಿದ್ದು, ಅವುಗಳನ್ನು ತಡೆಯಲು ನಮ್ಮ ಬಳಿ ತಂತ್ರಜ್ಞಾನವಿಲ್ಲ ಎಂದಿದ್ದಾರೆ.

Read Full Story

06:59 PM (IST) Feb 20

ಕಲ್ಪನಾ ಚಾವ್ಲಾ ರೀತಿಯಲ್ಲೇ ಸುನೀತಾ ವಿಲಿಯಮ್ಸ್‌ ಸಾವಾಗುತ್ತಿತ್ತು - ಶಾಕಿಂಗ್‌ ಸತ್ಯ ಒಪ್ಪಿಕೊಂಡ NASA

ಸುನೀತಾ ವಿಲಿಯಮ್ಸ್ ಅವರ ಬೋಯಿಂಗ್ ಬಾಹ್ಯಾಕಾಶ ಯಾನ ವಿಫಲವಾಗಿದ್ದು, ನಾಸಾ ಇದನ್ನು 'ಟೈಪ್ ಎ' ದುರಂತ ಎಂದು ಘೋಷಿಸಿದೆ. ಕೊಲಂಬಿಯಾ ದುರಂತದಂತೆಯೇ ಎಂಜಿನಿಯರಿಂಗ್ ಮತ್ತು ನಾಯಕತ್ವದ ವೈಫಲ್ಯಗಳೇ ಇದಕ್ಕೆ ಕಾರಣ ಎಂದು ವರದಿ ಹೇಳಿದೆ.

Read Full Story

06:42 PM (IST) Feb 20

ನಾವು ದೇಶಕ್ಕಾಗಿ ಹೋರಾಡಿದೆವು ಆದರೆ ದೇಶ ನಮ್ಮ ಕೈ ಬಿಟ್ಟಿತು - ಬಲೂಚ್‌ ಹೋರಾಟಗಾರರ ಕೈಗೆ ಸಿಕ್ಕಿದ ಪಾಕ್ ಯೋಧರ ಅಳಲು

ಬಲೂಚ್ ಲಿಬರೇಶನ್ ಆರ್ಮಿ (ಬಿಎಲ್‌ಎ) ಪಾಕಿಸ್ತಾನದ ಏಳು ಸೈನಿಕರನ್ನು ಸೆರೆಹಿಡಿದು ವೀಡಿಯೋ ಬಿಡುಗಡೆ ಮಾಡಿದೆ. ಈ ವೀಡಿಯೋದಲ್ಲಿ, ಯೋಧರು ತಮ್ಮನ್ನು ರಕ್ಷಿಸುವಂತೆ ಪಾಕ್ ಸರ್ಕಾರವನ್ನು ಕೋರುತ್ತಿದ್ದರೆ, ಪಾಕಿಸ್ತಾನ ಸರ್ಕಾರ ಮಾತ್ರ ಆ ಸೈನಿಕರು ನಮ್ಮವರಲ್ಲ ಎಂದು ಹೇಳಿ ಕೈತೊಳೆದುಕೊಂಡಿದೆ. 

Read Full Story

06:40 PM (IST) Feb 20

ರಶ್ಮಿಕಾ ಮದುವೆ - ನ್ಯಾಷನಲ್‌ ಕ್ರಶ್‌ ರೇಸ್‌ನಲ್ಲಿ ಇಬ್ಬರು ಕನ್ನಡತಿಯರ ಎಂಟ್ರಿ! ಯಾರಾಗ್ತಾರೆ ಮುಂದಿನ ನ್ಯಾಷನಲ್ ಕ್ರಶ್?

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರ ಮದುವೆಯ ನಂತರ, ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ರೇಸ್‌ನಲ್ಲಿ 'ಕಾಂತಾರ' ಖ್ಯಾತಿಯ ರುಕ್ಮಿಣಿ ವಸಂತ್ ಮತ್ತು ಟಾಲಿವುಡ್‌ನಲ್ಲಿ ಮಿಂಚುತ್ತಿರುವ ಶ್ರೀಲೀಲಾ ಮುಂಚೂಣಿಯಲ್ಲಿದ್ದಾರೆ.

Read Full Story

06:30 PM (IST) Feb 20

ಲವ್ ಸೈಕಾಲಜಿ - ಹುಡುಗಿಯರು ಹುಡುಗರಿಂದ ಬಯಸೋದು ಇದನ್ನೇ ನೋಡಿ! ಲವ್ ಮಾಡೋ ಹುಡುಗರಿಗಿದು ಗೊತ್ತಿರಲೇಬೇಕು

ಪ್ರೀತಿ ಅನ್ನೋದು ನೋಡೋಕೆ ಸಿಂಪಲ್ ಅನಿಸಿದ್ರೂ, ಅದರೊಳಗೊಂದು ಬೇರೆಯೇ ಪ್ರಪಂಚ ಇರುತ್ತೆ. ಅದರಲ್ಲೂ ಹುಡುಗಿಯರು, ಹುಡುಗರಿಂದ ನಿಜವಾಗ್ಲೂ ಏನು ಬಯಸುತ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇರುತ್ತೆ. ಮನಶಾಸ್ತ್ರದ ಪ್ರಕಾರ, ಹುಡುಗರಲ್ಲಿರುವ ಯಾವ ಗುಣಗಳು ಹುಡುಗಿಯರ ಮನಸ್ಸಲ್ಲಿ ವಿಶೇಷ ಸ್ಥಾನವಿರುತ್ತೆ ನೋಡೋಣ.

Read Full Story

06:21 PM (IST) Feb 20

ಸಂಜು ಸ್ಯಾಮ್ಸನ್ ಬೇಡವೇ ಬೇಡ, ಅಭಿಷೇಕ್ ಶರ್ಮಾ ಇರಲಿ! ಆತ ಡಕ್ ಆದ್ರೂ ಪರವಾಗಿಲ್ಲ ಎಂದ ಮಾಜಿ ಕ್ರಿಕೆಟಿಗ

ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಶರ್ಮಾರನ್ನೇ ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದು ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಸತತ ಮೂರು ಮ್ಯಾಚ್‌ಗಳಲ್ಲಿ ಡಕೌಟ್ ಆಗಿದ್ರೂ, ಚೋಪ್ರಾ ಅಭಿಷೇಕ್‌ಗೆ ಬೆಂಬಲ ಸೂಚಿಸಿದ್ದಾರೆ.

Read Full Story

06:18 PM (IST) Feb 20

4.5 ಲಕ್ಷ ರೂಪಾಯಿಗೆ ಲಾಂಚ್‌ ಆದ ಎಲೆಕ್ಟ್ರಿಕ್‌ ಸ್ಕೂಟರ್‌ ಮೇಲೆ 2 ಲಕ್ಷ ರೂಪಾಯಿ ಡಿಸ್ಕೌಂಟ್‌ ಘೋಷಿಸಿದ BMW

BMW ಮೋಟೊರಾಡ್ ಇಂಡಿಯಾ ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ CE 02 ಅನ್ನು ₹4.50 ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ನಿರೀಕ್ಷಿತ ಮಾರಾಟ ಕಾಣದ ಕಾರಣ, ಡೀಲರ್‌ಶಿಪ್ ಮಟ್ಟದಲ್ಲಿ ಈಗ ₹2 ಲಕ್ಷಗಳ ಭಾರಿ ರಿಯಾಯಿತಿಯೊಂದಿಗೆ ಇದನ್ನು ಮಾರಾಟ ಮಾಡಲಾಗುತ್ತಿದೆ. 

Read Full Story

06:18 PM (IST) Feb 20

ತೂಕ ಇಳಿಕೆಗೆ ಸಖತ್ ಡೇಂಜರ್ ಪ್ಲಾಸ್ಟಿಕ್ ತಿನ್ನೋ ಡಯಟ್ ಭಾರಿ ವೈರಲ್, ಏನಂತಾರೆ ತಜ್ಞ ವೈದ್ಯರು?

ತೂಕ ಇಳಿಕೆಗೆ ಸಖತ್ ಡೇಂಜರ್ ಪ್ಲಾಸ್ಟಿಕ್ ತಿನ್ನೋ ಡಯಟ್ ಭಾರಿ ವೈರಲ್, ತಕ್ಷಣವೇ ತೂಕ ಇಳಿಕೆಯಾಗಬೇಕು, ಫ್ಯಾಟ್ ಕಡಿಮೆಯಾಗಬೇಕು ಅನ್ನೋ ಮಂದಿ ಈ ವಿಧಾನ ಅನುಸರಿಸುತ್ತಿದ್ದಾರೆ. ತಜ್ಞರು ಹೇಳೋದೇನು?

 

Read Full Story

05:54 PM (IST) Feb 20

ರಾಜಕೀಯಕ್ಕೆ ಎಂಟ್ರಿಕೊಟ್ಟ ಬಿಗ್ ಬಾಸ್ ವಿನ್ನರ್, ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಕ್ಕೆ ಸೇರ್ಪಡೆ

ರಾಜಕೀಯಕ್ಕೆ ಎಂಟ್ರಿಕೊಟ್ಟ ಬಿಗ್ ಬಾಸ್ ವಿನ್ನರ್, ಬರಲ್ಲ, ಆಗಲ್ಲ ಎನ್ನುತ್ತಿದ್ದ ಬಿಗ್ ಬಾಸ್ ಕಿರೀಟ ಗೆದ್ದ ಸ್ಪರ್ಧಿ ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷ ಸೇರಿಕೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೂ ಸ್ಪರ್ಧಿಸುತ್ತಿದ್ದಾರೆ.

 

Read Full Story

05:18 PM (IST) Feb 20

ಭಾರತೀಯರು ಹೇಳುವುದಕ್ಕೆ ಕಷ್ಟಪಡುವ ಶಿವ ತಾಂಡವ ಸ್ತೋತ್ರವನ್ನು ನಿರರ್ಗಳವಾಗಿ ಹಾಡಿದ ದಕ್ಷಿಣ ಕೊರಿಯಾ ಪಾಪ್ ಗಾಯಕ

ಶಿವ ತಾಂಡವ ಸ್ತೋತ್ರದ ಬಗ್ಗೆ ಅನೇಕ ಭಾರತೀಯರಿಗೇ ಗೊತ್ತೇ ಇಲ್ಲ ಗೊತ್ತಿದ್ದರೂ, ಅದನ್ನು ಹೇಳುವುದಕ್ಕೂ ಬರುವುದಿಲ್ಲ, ಹೀಗಿರುವಾಗ ದಕ್ಷಿಣ ಕೊರಿಯಾದ ಪಾಪ್ ಗಾಯಕನೋರ್ವ ಕಷ್ಟಕರವಾಗಿರುವ ಈ ಶಿವ ತಾಂಡವ ಸ್ತೋತ್ರವನ್ನು ನಿರರ್ಗಳವಾಗಿ ಹೇಳುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

05:10 PM (IST) Feb 20

ರಶ್ಮಿಕಾ- ವಿಜಯ್​ ಪ್ರೈವಸಿ ಕಾಪಾಡಲು ಏಳು ಸಮುದ್ರದಾಚೆ ಭದ್ರತಾ ಸಿಬ್ಬಂದಿ! ಮದ್ವೆ ದಿನ ಇರೋದೇನು, ಖರ್ಚೆಷ್ಟು?

ದಕ್ಷಿಣ ಭಾರತದ ತಾರಾ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರು ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಹೈ-ಪ್ರೊಫೈಲ್ ವಿವಾಹಕ್ಕಾಗಿ  ಐಷಾರಾಮಿ ರೆಸಾರ್ಟ್ ಅನ್ನು ಆಯ್ಕೆ ಮಾಡಲಾಗಿದ್ದು, ಅಂತರರಾಷ್ಟ್ರೀಯ ಭದ್ರತೆ ನಿಯೋಜಿಸಲಾಗಿದೆ.

 

Read Full Story

04:59 PM (IST) Feb 20

ಕಡಿಮೆ ಸಂಬಳ ಇದ್ರೂ ಟಾಟಾ ಪಂಚ್‌ ಕಾರ್‌ ಖರೀದಿಸಬಹುದು; ತಿಂಗಳ EMI ಇಷ್ಟೇ!

ಕೈಗೆಟುಕುವ ಬೆಲೆ ಮತ್ತು ಎಸ್‌ಯುವಿ ಲುಕ್‌ನಿಂದ ಗಮನ ಸೆಳೆದಿರುವ ಟಾಟಾ ಪಂಚ್ ಕಾರನ್ನು ಕಡಿಮೆ ಡೌನ್ ಪೇಮೆಂಟ್‌ನಲ್ಲಿ ಖರೀದಿಸಬಹುದು. ವಿವಿಧ ಸಾಲದ ಆಯ್ಕೆಗಳ ಮೂಲಕ ಮಾಸಿಕ ಕಂತುಗಳನ್ನು ಹೊಂದಿಸಿಕೊಂಡು, ಮಧ್ಯಮ ವರ್ಗದ ಕುಟುಂಬಗಳಿಗೆ ಈ ಕಾರು ಒಂದು ಉತ್ತಮ ಆಯ್ಕೆಯಾಗಿದೆ.
Read Full Story

04:19 PM (IST) Feb 20

ಆಸೀಸ್‌ನಲ್ಲಿ ಪಾತ್ರೆ ತೊಳೆದ ಪಾಕ್‌ ಪ್ಲೇಯರ್ಸ್‌ - ಹಾಕಿ, ಕ್ರಿಕೆಟ್‌ ಫೆಡರೇಷನ್‌ಗೂ ಆಸಿಮ್‌ ಮುನೀರ್‌ ಉಸ್ತುವಾರಿ?

Pakistan Hockey Crisis: PHF President Resigns, Captain Banned ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವಮಾನಕ್ಕೊಳಗಾದ ಪಾಕಿಸ್ತಾನ ಹಾಕಿ ತಂಡದ ವಿವಾದ ತಾರಕಕ್ಕೇರಿದೆ. ಫೆಡರೇಶನ್ ಅಧ್ಯಕ್ಷರು ರಾಜೀನಾಮೆ ನೀಡಿದ್ದು, ತನಿಖೆ ನಡೆಸುವಂತೆ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರಿಗೆ ಮನವಿ ಮಾಡಿದ್ದಾರೆ.

Read Full Story

03:46 PM (IST) Feb 20

ಮದುವೆಗೆ 2 ವಾರ ಇರುವಾಗಲೇ ಅರ್ಜುನ್ ತೆಂಡೂಲ್ಕರ್ ಭಾವಿ ಪತ್ನಿಯ ಕೀನ್ಯಾ ಟ್ರಿಪ್ ವೈರಲ್

ಮದುವೆಗೆ 2 ವಾರ ಇರುವಾಗಲೇ ಅರ್ಜುನ್ ತೆಂಡೂಲ್ಕರ್ ಭಾವಿ ಪತ್ನಿಯ ಕೀನ್ಯಾ ಟ್ರಿಪ್ ವೈರಲ್ ಆಗಿದೆ. ಮಾರ್ಚ್ ಮೊದಲ ವಾರದಲ್ಲಿ ಅದ್ಧೂರಿ ಮದುವೆ ನಡೆಯಲಿದೆ. ಇದಕ್ಕೂ ಮೊದಲು ಭಾವಿ ಪತ್ನಿ ಯಾರ ಜೊತೆ ಕೀನ್ಯಾ ಟ್ರಿಪ್ ಮಾಡಿದ್ದಾರೆ?

 

Read Full Story

03:35 PM (IST) Feb 20

ಬದುಕಿದ್ದು ಕೆಲವೇ ವರ್ಷ, ನಟಿಸಿದ್ದ 3 ಸಿನಿಮಾವೂ ಸೂಪರ್ ಹಿಟ್ - 25ಕ್ಕೆ ಬದುಕು ಅಂತ್ಯಗೊಳಿಸಿದ ಜಿಯಾ ಖಾನ್

ಜಿಯಾ ಖಾನ್ ಬಾಲಿವುಡ್‌ನ ದುರಂತವಾಗಿ ಸಾವನ್ನಪ್ಪಿದ ನಟಿಯರಲ್ಲಿ ಒಬ್ಬರು. ಬದುಕಿದ್ದರೆ ಆಕೆಗೆ ಈಗ ಕೇವಲ 37 ವರ್ಷಗಳಾಗಿರುತ್ತಿದ್ದವು. ಆದರೆ 25ರ ಹರೆಯಕ್ಕೆ ಬದುಕಿಗೆ ಗುಡ್ ಬಾಯ್ ಹೇಳಿದ ಜಿಯಾ ಖಾನ್ ಅವರು  ನಟಿಸಿದ ಕೆಲ ಸಿನಿಮಾಗಳ ಡಿಟೇಲ್ ಇಲ್ಲಿದೆ.

Read Full Story

03:05 PM (IST) Feb 20

ಎಲ್ಲಾ ಮುಗಿಸಿ ಮದುವೆ ಎಂದಾಗ ಜಗಳ ಜೋರು, 19ರ ಹರೆಯದ ಜೋಡಿಯ ಲೀವ್ ಇನ್ ಕೇಸ್

ಎಲ್ಲಾ ಮುಗಿಸಿ ಮದುವೆ ಎಂದಾಗ ಜಗಳ ಜೋರು, ಯುವತಿ ಮೇಲೆ ಅನುಮಾನ ಹೆಚ್ಚಾಗಿದೆ. ಮದುವೆ ಮಾತಿನಿಂದ ಶುರುವಾದ ಜಗಳದಲ್ಲಿ ಯುವತಿ ಪರಿಸ್ಥಿತಿ ಚಿಂತಾಜನಕವಾಗಿದ್ದರೆ, ಯುವಕ ಅರೆಸ್ಟ್ ಆಗಿದ್ದಾನೆ.

 

Read Full Story

02:39 PM (IST) Feb 20

ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪತಿಯನ್ನು ಪರಲೋಕಕ್ಕೆ ಕಳಿಸಲು ಪ್ಲಾನ್! ಆಮೇಲೆ ಸಿನಿಮಾ ಕಥೆ ಕಟ್ಟಿದ ಕಿಲಾಡಿ ಲೇಡಿ

ತೆಲಂಗಾಣ: ಈಗ ಕೌಟುಂಬಿಕ ಕಲಹಗಳು ಹೆಚ್ಚೆಚ್ಚು ವರದಿಯಾಗುತ್ತಲೇ ಇವೆ. ಇವೆಲ್ಲದರ ನಡುವೆ ಇಲ್ಲೊಬ್ಬಳು ಪಾಪಿ ಪತ್ನಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಪತಿಯನ್ನು ಮಟನ್ ಗ್ರೇವಿಗೆ 15 ವಯಾಗ್ರಾ ಮಾತ್ರೆ ಬೆರೆಸಿ ಪರಲೋಕಕ್ಕೆ ಕಳಿಸಿದ್ದಾಳೆ. ಏನಿದು ಘಟನೆ ಯಾಕೆ ಹೀಗೆ ಮಾಡಿದ್ಲು ಅನ್ನೋದನ್ನು ನೋಡೋಣ ಬನ್ನಿ.

 

Read Full Story

02:23 PM (IST) Feb 20

ಶೇ.40ರಷ್ಟು ಎಂಟ್ರಿ ಲೆವೆಲ್ ಉದ್ಯೋಗಕ್ಕೆ AI ಕುತ್ತು, ನಿಮ್ ಜಾಬ್ ಸೇಫಾ?IMF ಮುಖ್ಯಸ್ಥೆ ಸ್ಫೋಟಕ ಭವಿಷ್ಯ

ಶೇ.40ರಷ್ಟು ಎಂಟ್ರಿ ಲೆವೆಲ್ ಉದ್ಯೋಗಕ್ಕೆ AI ಕುತ್ತು, ನಿಮ್ಮ ಜಾಬ್ ಸೇಫ್ ಇದೆಯಾ? ಈ ಕುರಿತು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಇದು ಶೇಕಡಾ 60ಕ್ಕೂ ಏರಿಕೆಯಾಗುವ ಸಾಧ್ಯತೆ ಇದೆ.

 

Read Full Story

01:57 PM (IST) Feb 20

ನಟಿಯನ್ನು ಆಸ್ಪತ್ರೆಗೆ ಈಸಿಯಾಗಿ ಎತ್ಕೊಂಡು ಹೇಗಪ್ಪಾ ಓಡೋಡಿ ಬರ್ತಾರೆ ಈ ನಟರು? ವಿಡಿಯೋದಲ್ಲಿದೆ ರಹಸ್ಯ ನೋಡಿ!

ತೆರೆಯ ಮೇಲೆ ಕಾಣುವ ದೃಶ್ಯಗಳೆಲ್ಲವೂ ಸತ್ಯವಾಗಿರುವುದಿಲ್ಲ, ಅದರ ಹಿಂದೆ ತಂತ್ರಜ್ಞರ ಕೈಚಳಕವಿರುತ್ತದೆ. ವೈರಲ್ ಆಗಿರುವ ಸೀರಿಯಲ್ ಶೂಟಿಂಗ್ ವಿಡಿಯೋವೊಂದು, ನಾಯಕ ನಾಯಕಿಯನ್ನು ಆಸ್ಪತ್ರೆಗೆ ಎತ್ತಿಕೊಂಡು ಓಡುವ ದೃಶ್ಯ ನೋಡಬಹುದು.

Read Full Story

01:44 PM (IST) Feb 20

ಪೆಟ್ರೋಲ್ ತುಂಬಿಸುವಾಗ ಸಿಗರೇಟ್ ಎಳಿಬೇಡ ಎಂದಿದ್ದಕ್ಕೆ ಪೆಟ್ರೋಲ್ ಬಂಕ್‌ಗೆ ಬೆಂಕಿ ಹಚ್ಚಿದ ಹುಚ್ಚ..!

ಛತ್ತೀಸ್‌ಗಢದ ರಾಯ್ಪುರದಲ್ಲಿ, ಪೆಟ್ರೋಲ್ ಪಂಪ್‌ನಲ್ಲಿ ಧೂಮಪಾನ ಮಾಡಬೇಡಿ ಎಂದಿದ್ದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಲೈಟರ್‌ನಿಂದ ಇಂಧನ ನಳಿಕೆಗೆ ಬೆಂಕಿ ಹಚ್ಚಿದ್ದಾನೆ. ತಕ್ಷಣ ಕಾರ್ಯಪ್ರವೃತ್ತರಾದ ಪಂಪ್ ಸಿಬ್ಬಂದಿ ಅಗ್ನಿಶಾಮಕ ಬಳಸಿ ಬೆಂಕಿ ನಂದಿಸಿ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
Read Full Story

01:44 PM (IST) Feb 20

Trump India Visit - ಮತ್ತೆ ಭಾರತಕ್ಕೆ ಬರ್ತಾರಾ ಡೊನಾಲ್ಡ್ ಟ್ರಂಪ್? ಪ್ರಧಾನಿ ಮೋದಿಯಿಂದ ಆಹ್ವಾನ!

ಡೊನಾಲ್ಡ್ ಟ್ರಂಪ್‌ಗೆ ಭಾರತಕ್ಕೆ ಬರುವಂತೆ ಪ್ರಧಾನಿ ಮೋದಿ ಆಹ್ವಾನ ನೀಡಿದ್ದಾರೆ, ಹಾಗಾಗಿ ಅವರು ಮತ್ತೆ ಬರುವ ಸಾಧ್ಯತೆಯಿದೆ ಎಂದು ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ಹೇಳಿದ್ದಾರೆ. ಎಐ ಮತ್ತು 'ಪ್ಯಾಕ್ಸ್ ಸಿಲಿಕಾ' ವಿಚಾರದಲ್ಲಿ ಭಾರತದೊಂದಿಗೆ ಕೈಜೋಡಿಸಲು ಅಮೆರಿಕ ಉತ್ಸುಕವಾಗಿದೆ ಎಂದಿದ್ದಾರೆ.

Read Full Story

01:32 PM (IST) Feb 20

ಹೊಟೆಲ್ ಕಾಫಿ ಮೇಕರ್‌ನಲ್ಲಿ ಅಂಡರ್‌ವೇರ್ ತೊಳೆದ ಇನ್‌ಫ್ಲುಯೆನ್ಸರ್,Video ನೋಡಿ ಹಲವರು ಗರಂ

ಹೊಟೆಲ್ ಕಾಫಿ ಮೇಕರ್‌ನಲ್ಲಿ ಅಂಡರ್‌ವೇರ್ ತೊಳೆದ ಇನ್‌ಫ್ಲುಯೆನ್ಸರ್, ತನ್ನ ಒಳ ಉಡುಪು ಹೇಗೆ ತೊಳೆಯುತ್ತೇನೆ ಅನ್ನೋದನ್ನು ಈ ಟ್ರಾವೆಲ್ ಮಹಿಳೆ ಟಿಪ್ಸ್ ನೀಡಿದ್ದಾರೆ. ಇದೀಗ ಹೊಟೆಲ್ ಕಾಫಿ ಮೇಕರ್‌ನಲ್ಲಿ ಕಾಫಿ ಕುಡಿಯಲು ಜನರು ಹಿಂದೇಟು ಹಾಕುತ್ತಿದ್ದಾರೆ.

Read Full Story

01:25 PM (IST) Feb 20

MP Viral Video - ಪತಿಯ ಅಕ್ರಮ ಸಂಬಂಧ ಬಯಲು? ರಸ್ತೆಯಲ್ಲೇ ಯುವತಿಗೆ ಹಿಗ್ಗಾಮುಗ್ಗಾ ಥಳಿಸಿದ ಡೆಂಟಿಸ್ಟ್ ಪತ್ನಿ!

ಮಧ್ಯಪ್ರದೇಶದ ರೇವಾದಲ್ಲಿ ನಡೆದ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಹಿರಿಯ ವೈದ್ಯ ಡಾ. ಕೆ.ಡಿ. ಸಿಂಗ್ ಅವರ ಪತ್ನಿ, ತಾನೂ ದಂತವೈದ್ಯೆಯಾಗಿರುವ ಮಹಿಳೆ, ತನ್ನ ಪತಿ ಇನ್ನೊಬ್ಬ ಯುವತಿಯೊಂದಿಗೆ ಕಾರಿನಲ್ಲಿರುವುದನ್ನು ಕಂಡು ರಸ್ತೆಯಲ್ಲೇ ಆ ಯುವತಿಗೆ ಥಳಿಸಿದ್ದಾರೆ ಎನ್ನಲಾಗಿದೆ. 

Read Full Story

01:20 PM (IST) Feb 20

ಮುಂದುವರೆದ ಚಿನ್ನದ ಬೆಲೆಯಲ್ಲಿ ಏರಿಳಿತ; ಶುಕ್ರವಾರ ಕೊಂಚ ಕುಸಿದ ಬಂಗಾರದ ಬೆಲೆ! ಇವತ್ತಿನ ರೇಟ್ ಎಷ್ಟು?

ಬೆಂಗಳೂರು: ಮದುವೆ ಸೇರಿದಂತೆ ಶುಭ ಸಮಾರಂಭಗಳು ಹತ್ತಿರವಾಗುತ್ತಿದ್ದಂತೆಯೇ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳು ಉಂಟಾಗುತ್ತಿದೆ. ಇವತ್ತಿನ ಚಿನ್ನ-ಬೆಳ್ಳಿ ದರ ಎಷ್ಟಿದೆ ನೋಡೋಣ.

 

Read Full Story

01:13 PM (IST) Feb 20

Vishwaguru Modi - ವಿಶ್ವಗುರು ಮೋದಿ ಪ್ರಚಾರದಲ್ಲಿ ಬ್ಯುಸಿ, ಅತ್ತ ಅಮೆರಿಕ-ಪಾಕ್ ದೋಸ್ತಿ ನಿಂತಿಲ್ಲ, ಜೈರಾಂ ರಮೇಶ್ ವಾಗ್ದಾಳಿ

ಪ್ರಧಾನಿ ಮೋದಿ ಬರೀ ಅಕ್ರೋನಿಮ್‌ಗಳ ಮೂಲಕ 'ವಿಶ್ವಗುರು' ಆಗುವುದರಲ್ಲಿ ಬ್ಯುಸಿಯಾಗಿದ್ದಾರೆ, ಆದರೆ ಅತ್ತ ಅಮೆರಿಕ-ಪಾಕಿಸ್ತಾನದ ದೋಸ್ತಿ ಮಾತ್ರ ನಿಂತಿಲ್ಲ ಎಂದು ಜೈರಾಂ ರಮೇಶ್ ಟೀಕೆ 2025ರ ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಯಾವುದೇ ಬೆಲೆ ತೆತ್ತಿಲ್ಲ, ಇದು ಮೋದಿ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ

Read Full Story

12:34 PM (IST) Feb 20

ಮಾಜಿ ಬಾಯ್‌ಫ್ರೆಂಡ್‌ನಿಂದ ಶ್ವಾನ ಕಸ್ಟಡಿಗೆ ಪಡೆಯಲು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ತಮ್ಮ ಸಾಕು ನಾಯಿ ಹೆನ್ರಿಯನ್ನು ವಶಕ್ಕೆ ಪಡೆಯಲು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಗೆಳೆಯ ಜೈ ಅನಂತ್ ದೇಹಾದ್ರಾಯಿ ಅವರೊಂದಿಗೆ ಶ್ವಾನವಿದ್ದು, ಅದನ್ನು ಕಸ್ಟಡಿಗೆ ಕೋರಿ ಅವರು ಅರ್ಜಿ ಸಲ್ಲಿಸಿದ್ದಾರೆ.

Read Full Story

11:19 AM (IST) Feb 20

ವಿಜಯ್-ರಶ್ಮಿಕಾ ಮದುವೆ ರೂಮರ್ಸ್ ಒಂದೆರಡಲ್ಲ! ಸಿಎಂ ಕೂಡಾ ಭಾಗಿ?

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಸುದ್ದಿ ಜೋರಾಗಿದೆ. ಫೆಬ್ರವರಿ 26 ರಂದು ಇವರಿಬ್ಬರ ವಿವಾಹ ನಡೆಯಲಿದೆ ಎನ್ನಲಾಗ್ತಿದೆ. ಅಷ್ಟೇ ಅಲ್ಲ, ಅದಕ್ಕೂ ಮುನ್ನ ನಡೆಯುವ ಹಲ್ದಿ, ಸಂಗೀತ ಕಾರ್ಯಕ್ರಮಗಳ ದಿನಾಂಕ ಯಾವುದು ಗೊತ್ತಾ? ಈ ಜೋಡಿಯ ಮದುವೆ ಸಂಭ್ರಮ ಯಾವಾಗ ಶುರುವಾಗಲಿದೆ? ಇಲ್ಲಿದೆ ಮಾಹಿತಿ.
Read Full Story

11:16 AM (IST) Feb 20

Ricky Syngkon - ಶಿಲ್ಲಾಂಗ್ ಸಂಸದ ರಿಕಿ ಎಜೆ ಸಿಂಗ್ಕಾನ್ ಹೃದಯಾಘಾತದಿಂದ ನಿಧನ, ಗಣ್ಯರ ಸಂತಾಪ

Ricky Syngkon ಮೇಘಾಲಯದ ಶಿಲ್ಲಾಂಗ್ ಲೋಕಸಭಾ ಕ್ಷೇತ್ರದ ಸಂಸದ ರಿಕಿ ಎಜೆ ಸಿಂಗ್ಕಾನ್ (54) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ.

Read Full Story

11:05 AM (IST) Feb 20

Crime News - ಟಿವಿ ಸೌಂಡ್ ಕಡಿಮೆ ಮಾಡು ಅಂದಿದ್ದಕ್ಕೆ ಗಂಡನನ್ನೇ ಚುಚ್ಚಿ ಕೊಂದ ಹೆಂಡತಿ!

ಆಂಧ್ರಪ್ರದೇಶದ ಅಮರಾವತಿಯಲ್ಲಿ ಟಿವಿ ಸೌಂಡ್ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಗಂಡನಿಗೆ ಚಾಕುವಿನಿಂದ ಇರಿದು ಪತ್ನಿ ಕೊಂದಿದ್ದಾಳೆ. 27 ವರ್ಷದ ಶೇಖ್ ಅಹ್ಮದ್ ಮೃತಪಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
Read Full Story

More Trending News