ನವದೆಹಲಿ: 'ಭಾರತ ಮತ್ತು ಪಾಕಿಸ್ತಾನದ ಯುದ್ಧ ಸ್ಥಗಿತಕ್ಕೆ ಮಧ್ಯಸ್ಥಿಕೆ ವಹಿಸಿದ್ದು ತಾನೇ ಎಂಬ ಚೀನಾ ಹೇಳಿಕೆ ಕಳವಳಕಾರಿ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಭಾರತೀಯರಿಗೆ ಸ್ಪಷ್ಟನೆ ನೀಡಬೇಕು' ಎಂದು ಕಾಂಗ್ರೆಸ್ ಆಗ್ರಹಿಸಿದೆ. ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, 'ಆಪರೇಷನ್ ಸಿಂದೂರವನ್ನು ನಿಲ್ಲಿಸಲು ತಾನು ಮಧ್ಯಪ್ರ ವೇಶಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 65ಕ್ಕೂ ಹೆಚ್ಚು ಸಲ ಹೇಳಿಕೊಂಡಿದ್ದಾರೆ. ಈಗ ಚೀನಾದ ವಿದೇಶಾಂಗ ಸಚಿವರು, ಚೀನಾ ಕೂಡ ಮಧ್ಯಸ್ಥಿಕೆ ವಹಿಸಿದೆ ಎಂದಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಮೌನ ಮುರಿದು, ಭಾರತೀ ಯರಿಗೆ ಸ್ಪಷ್ಟನೆ ನೀಡಬೇಕು' ಎಂದಿದ್ದಾರೆ.

11:53 PM (IST) Jan 01
ಐಐಟಿ ಹೈದರಾಬಾದ್ ವಿದ್ಯಾರ್ಥಿ ದಾಖಲೆ, 2.5 ಕೋಟಿ ರೂ ಉದ್ಯೋಗ ಗಿಟ್ಟಿಸಿಕೊಂಡ ಎಂಜಿನಿಯರ್, ಕ್ಯಾಂಪಸ್ ಇಂಟರ್ವ್ಯೂನಲ್ಲಿ ನೆದರ್ಲೆಂಡ್ ಕಂಪನಿ ಈ ಆಫರ್ ನೀಡಿದೆ. ವಿಶೇಷ ಅಂದರೆ ಐಐಟಿ ಹೈದರಾಬಾದ್ ಇತಿಹಾಸದಲ್ಲಿ ಗರಿಷ್ಠ ಪ್ಯಾಕೇಜ್ ಆಫರ್
11:22 PM (IST) Jan 01
ಗಂಡ ಇಸ್ರೇಲ್ನಲ್ಲಿ ಶವವಾಗಿ ಪತ್ತೆಯಾದ ಬಳಿಕ ಭಾರತದಲ್ಲಿ ದುರಂತ ಅಂತ್ಯಕಂಡ ಪತ್ನಿ, ಮಗು ಅನಾಥವಾಗಿದೆ. ಕರಳು ಹಿಂಡುವ ಈ ಘಟನೆಗೆ ದೇಶವೇ ಮರುಗಿದೆ. ಸುಂದರ ಕುಟುಂಬ ತಿಂಗಳುಗಳ ಅಂತರದಲ್ಲಿ ಆಘಾತದ ಮೇಲೆ ಆಘಾತ ಅನುಭವಿಸಿದೆ
10:33 PM (IST) Jan 01
ಗೋವಾ ವಿಡಿಯೋದಿಂದ ಸಾರಾ ತೆಂಡೂಲ್ಕರ್ ಟ್ರೋಲ್, ತಂದೆ ಮದ್ಯ ವಿರೋಧಿ ನಿಲುವು ನೆನಪಿಸಿದ ನೆಟ್ಟಿಗರು, ಗೋವಾ ಪ್ರವಾಸದಲ್ಲಿ ಸಾರಾ ತೆಂಡೂಲ್ಕರ್ ಬಿಯರ್ ಬಾಟಲಿ ಹಿಡಿದು ರಸ್ತೆಯಲ್ಲಿ ತೆರಳುತ್ತಿರುವ ವಿಡಿಯೋಗೆ ಜನರು ಕ್ಲಾಸ್ ತೆಗೆದುಕೊಂಡಿದ್ದಾರೆ.
08:43 PM (IST) Jan 01
ಉದ್ಯಮಿ ಹರ್ಷ್ ಗೋಯೆಂಕಾ ಅವರು ನಿಂಬೆ-ಜೇನುತುಪ್ಪದ ಮನೆಮದ್ದಿನಿಂದ ತೂಕ ಇಳಿಸುವ ಪ್ರಯತ್ನದ ಬಗ್ಗೆ ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗಿದ್ದು, ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
08:15 PM (IST) Jan 01
ಅಡ್ಡ ಬಂದ ನಾಯಿ ಜೀವ ಉಳಿಸಲು ಹೋಗಿ ಸಚಿವರ ಕಾರು ಅಪಘಾತ, ಹೆದ್ದಾರಿಯಲ್ಲಿ ಘಟನೆ, ಸಚಿವರು ಕಾರಿನಲ್ಲಿ ಸಂಚರಿಸುತ್ತಿರುವಾಗ ಈ ಅಪಘಾತ ನಡೆದಿದೆ. ದಿಢೀರ್ ಬ್ರೇಕ್ ಹಾಕಿದ ಪರಿಣಾಮ ಅಪಘಾತ ಸಂಭವಿಸಿದೆ.
07:55 PM (IST) Jan 01
ಖ್ಯಾತ ಕ್ರಿಕೆಟಿಗ ಡೇಮಿಯನ್ ಮಾರ್ಟಿನ್ ಅವರು ಮೆನಿಂಜೈಟಿಸ್ನಿಂದ ಬಳಲುತ್ತಿದ್ದು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಮಾಗೆ ಜಾರಿದ್ದ ಅವರ ಆರೋಗ್ಯದಲ್ಲಿ ಸಕಾರಾತ್ಮಕ ಲಕ್ಷಣಗಳು ಕಂಡುಬರುತ್ತಿವೆ ಎಂದು ಮಾಜಿ ಸಹ ಆಟಗಾರ ಆಡಮ್ ಗಿಲ್ಕ್ರಿಸ್ಟ್ ಮಾಹಿತಿ ನೀಡಿದ್ದಾರೆ.
07:26 PM (IST) Jan 01
ಟ್ರೆಂಡ್ ಆದ ಬಿಜೆಪಿ ಸಂಸದನ ಹೊಸವರ್ಷ ಶುಭಾಶಯ,ಗ್ರೆಗೋರಿಯನ್ ಕ್ಯಾಲೆಂಡರ್ ತೆರೆದಿಟ್ಟ ತ್ರಿವೇದಿ, ರೋಮ್ ದೇವರು ಜನೂಸ್ ಹೆಸರಿನಲ್ಲಿ ಆರಂಭಗೊಂಡ ಈ ಗ್ರೆಗೋರಿಯನ್ ಕ್ಯಾಲೆಂಡರ್ ಇತಿಹಾಸವನ್ನು ಶುಭಾಶಯದ ಮೂಲಕ ತೆರೆದಿಟ್ಟಿದ್ದಾರೆ.
07:19 PM (IST) Jan 01
ಹೇರ್ ಸ್ಟ್ರೇಟನಿಂಗ್ ಮಾಡಿಸಿಕೊಂಡ 17 ವರ್ಷದ ಬಾಲಕಿ ಸೇರಿದಂತೆ 26 ಮಹಿಳೆಯರು ತೀವ್ರ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾದರು. ಸಂಶೋಧನೆಯಿಂದ, ಕೂದಲು ನೇರಗೊಳಿಸುವ ಉತ್ಪನ್ನಗಳಲ್ಲಿರುವ 'ಗ್ಲೈಆಕ್ಸಿಲಿಕ್ ಆಮ್ಲ'ವೇ ಇದಕ್ಕೆ ಕಾರಣವೆಂದು ತಿಳಿದುಬಂದಿದೆ.
06:44 PM (IST) Jan 01
2025ರಲ್ಲಿ ಭಾರತೀಯ ಷೇರು ಮಾರುಕಟ್ಟೆಯು ನಿಫ್ಟಿ ಮತ್ತು ಸೆನ್ಸೆಕ್ಸ್ನಲ್ಲಿ ಸಿಂಗಲ್-ಡಿಜಿಟ್ ಲಾಭವನ್ನು ಕಂಡರೂ, ಕೆಲವು ಷೇರುಗಳು ಹೂಡಿಕೆದಾರರಿಗೆ ಅದ್ಭುತ ಲಾಭವನ್ನು ನೀಡಿವೆ. ಫೋರ್ಸ್ ಮೋಟಾರ್ಸ್, ಎಲ್&ಟಿ ಫೈನಾನ್ಸ್, ಮತ್ತು ಹಿಂದೂಸ್ತಾನ್ ಕಾಪರ್ ಸೇರಿದಂತೆ 10 ಕಂಪನಿಗಳು ಭರ್ಜರಿ ರಿಟರ್ನ್ಸ್ ನೀಡಿವೆ.
06:31 PM (IST) Jan 01
ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದೂಗೆ ಥಳಿಸಿ ಬೆಂಕಿ ಹಚ್ಚಿದ ಗುಂಪು, ಭಾರತದಲ್ಲಿ ಕೆಕೆಆರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ ಮೇಲೆ ದಾಳಿಯಾಗುತ್ತಿದ್ದರೆ ಇತ್ತ ಶಾರುಖ್ ಖಾನ್ ಹಾಗೂ ಕೆಕೆಆರ್ ವಿರುದ್ಧವೂ ಸ್ವಾಮೀಜಿಗಳು ಆಕ್ರೋಶ ಹೊರಹಾಕಿದ್ದೇಕೆ?
05:54 PM (IST) Jan 01
2025ರಲ್ಲಿ ಪ್ರಳಯವಾಗುವುದೆಂದು ಜನರಲ್ಲಿ ಭೀತಿ ಹುಟ್ಟಿಸಿ, ಸಂಪತ್ತನ್ನು ದಾನ ಮಾಡಲು ಹೇಳಿದ ಘಾನಾದ ಸ್ವಯಂ ಘೋಷಿತ ಪ್ರವಾದಿ ಇವಾನ್ಸ್ ಎಶುನ್ನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಪ್ರವಾಹದಿಂದ ರಕ್ಷಿಸಲು ನಾವೆಗಳನ್ನು ನಿರ್ಮಿಸಿರುವುದಾಗಿ ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಿದ್ಧಿ ಪಡೆದಿದ್ದ.
05:37 PM (IST) Jan 01
Why Desert Countries Like Saudi Arabia & UAE Import Sand ಗಲ್ಫ್ ಪ್ರದೇಶದ ಮುಸ್ಲಿಂ ದೇಶಗಳಲ್ಲಿ ಅಷ್ಟೊಂದು ಮರಳಿದ್ದರೂ, ಈ ದೇಶಗಳು ಮಾತ್ರ ವಿದೇಶದಿಂದ ಮರಳನ್ನು ಆಮದು ಮಾಡಿಕೊಳ್ಳುತ್ತದೆ. ಈ ದೇಶಗಳಿಗೆ ಮರಳಿನ ಅಗತ್ಯವೇಕೆ ಅನ್ನೋದರ ವಿವರ ಇಲ್ಲಿದೆ.
05:30 PM (IST) Jan 01
ದೇಶದ ಮೊದಲ ಸರ್ಕಾರಿ ಸಬ್ಸಿಡಿ, ಕಮಿಷನ್ ರಹಿತ ಕ್ಯಾಬ್ ಸೇವೆ ಭಾರತ್ ಟ್ಯಾಕ್ಸಿ ದೆಹಲಿಯಲ್ಲಿ ಕಾರ್ಯಾರಂಭ ಮಾಡಿದೆ. ಓಲಾ, ಉಬರ್ಗೆ ಪರ್ಯಾಯವಾಗಿ ಪರಿಚಯಿಸಲಾದ ಈ ಆ್ಯಪ್ ಆಧಾರಿತ ಸೇವೆಯು ಕಡಿಮೆ ದರದಲ್ಲಿ ಸುರಕ್ಷಿತ ಪ್ರಯಾಣವನ್ನು ನೀಡುತ್ತದೆ.
04:44 PM (IST) Jan 01
ಶ್ರೀಮಂತ ಉದ್ಯಮಿಯ 3ನೇ ಪತ್ನಿಯಾಗುವ ಆಫರ್, ತಿಂಗಳಿಗೆ 11 ಲಕ್ಷ ರೂ ಸೇರಿ ಐಷಾರಾಮಿ ಜೀವನ ತಿರಸ್ಕರಿಸಿದ ನಟಿ, ಫ್ಲ್ಯಾಟ್, ಐಷಾರಾಮಿ ಕಾರು ಸೇರಿದಂತೆ ಲಕ್ಷುರಿ ಲೈಫ್ಸ್ಟೈಲ್ನಲ್ಲಿ ಜೀವನ ಆಫರ್ ನೀಡಲಾಗಿತ್ತು. ಯಾರು ಆ ನಟಿ?
04:42 PM (IST) Jan 01
ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ತೆಲಂಗಾಣ ಮೂಲದ ಇಬ್ಬರು ಯುವತಿಯರಾದ ಮೇಘನಾ ರಾಣಿ ಮತ್ತು ಭಾವನಾ ಕಂಡಿಯಲಾ ಸಾವನ್ನಪ್ಪಿದ್ದಾರೆ. ಇವರು ಸ್ನಾತಕೋತ್ತರ ಪದವಿ ಮುಗಿಸಿ ಉದ್ಯೋಗ ಅರಸುತ್ತಿದ್ದ
04:34 PM (IST) Jan 01
India's First Bullet Train to Start on August 15, 2027: Ashwini Vaishnaw ಅಹಮದಾಬಾದ್ನ ಸಬರಮತಿ ಮತ್ತು ಮುಂಬೈ ನಡುವೆ ನಿರ್ಮಿಸಲಾಗುತ್ತಿರುವ 508 ಕಿಮೀ ಹೈಸ್ಪೀಡ್ ರೈಲು ಕಾರಿಡಾರ್, ಗಂಟೆಗೆ 320 ಕಿಮೀ ವೇಗದಲ್ಲಿ ಚಲಿಸಲಿದೆ.
04:19 PM (IST) Jan 01
ಕೃತಕ ಬುದ್ಧಿಮತ್ತೆ (AI) ಟೂಲ್ಗಳು, ವಿಶೇಷವಾಗಿ ಎಲಾನ್ ಮಸ್ಕ್ ಅವರ ಗ್ರಾಕ್, ಈಗ ದುರ್ಬಳಕೆಯಾಗುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ಹೆಣ್ಣುಮಕ್ಕಳ ಫೋಟೋಗಳನ್ನು ವಿವಸ್ತ್ರಗೊಳಿಸಿ, ನಗ್ನ ಚಿತ್ರಗಳನ್ನು ರಚಿಸಲು ಈ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ.
03:29 PM (IST) Jan 01
ಫೆಬ್ರವರಿ 2026 ರಿಂದ ಜಾರಿಗೆ ಬರುವ ಹೊಸ ಅಬಕಾರಿ ಸುಂಕದಿಂದಾಗಿ ಸಿಗರೇಟ್ ಬೆಲೆಗಳು ಶೇ. 20 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ತೆರಿಗೆ ಹೆಚ್ಚಳವು 'ತೆರಿಗೆಯ ಮೇಲೆ ತೆರಿಗೆ' ಪರಿಣಾಮವನ್ನು ಸೃಷ್ಟಿಸಿ, ಅಂತಿಮ ಬೆಲೆಯನ್ನು ಹೆಚ್ಚಿಸಲಿದೆ.
02:54 PM (IST) Jan 01
ಹೊಸವರ್ಷದ ಮೊದಲ ದಿನವೇ ಭಾರತದಲ್ಲಿ ಸ್ಫೋಟ, ಪ್ರವಾಸಿಗರ ಗುರಿಯಾಗಿಸಿ ನಡೆಯಿತಾ ಬಾಂಬ್ ದಾಳಿ?, ಸ್ಫೋಟದ ತೀವ್ರತೆಗೆ ಪೊಲೀಸ್ ಠಾಣೆ ಕಟ್ಟಡ, ಅಕ್ಕ ಪಕ್ಕದ ಕಟ್ಟಡಗಳು ಬಿರುಗು ಬಿಟ್ಟಿದೆ, ಗಾಜುಗಳು ಪುಡಿ ಪುಡಿಯಾಗಿದೆ.
02:52 PM (IST) Jan 01
ಭಾರತದ ಅತ್ಯಂತ ಸ್ವಚ್ಛ ನಗರ ಇಂದೋರ್ನಲ್ಲಿ ಕಲುಷಿತ ನೀರು ಸೇವಿಸಿ ಆರು ತಿಂಗಳ ಶಿಶು ಸಾವನ್ನಪ್ಪಿದೆ. ಈ ಜಲ ಮಾಲಿನ್ಯ ಬಿಕ್ಕಟ್ಟಿನಿಂದಾಗಿ ಭಾಗೀರಥಪುರದಲ್ಲಿ ಸುಮಾರು 150 ಜನರು ಅಸ್ವಸ್ಥರಾಗಿದ್ದು, ಚರಂಡಿ ನೀರು ಕುಡಿಯುವ ನೀರಿನ ಪೈಪ್ಲೈನ್ಗೆ ಸೇರಿದ್ದೇ ದುರಂತಕ್ಕೆ ಕಾರಣವೆಂದು ಶಂಕಿಸಲಾಗಿದೆ.
01:24 PM (IST) Jan 01
12:27 PM (IST) Jan 01
ಹಣ ಕಂಡ್ರೆ ಹೆಣ ಕೂಡ ಬಾಯಿಬಿಡುತ್ತೆ ಎಂಬ ಮಾತಿದೆ. ಹೀಗಿರುವಾಗ 500 ರೂಪಾಯಿ ನೋಟು ಕಾಲ ಕೆಳಗೆ ಬಿದ್ದಿದ್ದರೆ ಯಾರು ಸುಮ್ಮನಿರುತ್ತಾರೆ. ಅತ್ತಿತ್ತ ನೋಡಿ ಮೆಲ್ಲನೇ ಎತ್ತಿ ಜೇಬಿಗಿಳಿಸಿ ಬಿಡುತ್ತಾರೆ. ಹಿಗಿರುವಾಗ ಇಲ್ಲೊಂದು ಕಡೆ ವೃದ್ಧನ ಪ್ರಾಮಾಣಿಕತೆಯ ವೀಡಿಯೋವೊಂದು ಭಾರಿ ವೈರಲ್ ಆಗಿದೆ.
12:25 PM (IST) Jan 01
11:59 AM (IST) Jan 01
ಭಾರತೀಯ ಚಿನ್ನದ ಮಾರುಕಟ್ಟೆಯಲ್ಲಿ ಬಾಂಗ್ಲಾದೇಶದಿಂದ ಬಂದ 'ಬಾಂಗ್ಲಾ ರೆಡ್ ಗೋಲ್ಡ್' ಎಂಬ ನಕಲಿ ಚಿನ್ನದ ಹಾವಳಿ ಹೆಚ್ಚಾಗಿದೆ. ತಜ್ಞರಿಗೂ ಗುರುತಿಸಲು ಕಷ್ಟಸಾಧ್ಯವಾದ ಈ ಚಿನ್ನವನ್ನು ಅಸಲಿ ಎಂದು ಮಾರಾಟ ಮಾಡುವ ಜಾಲವಿದ್ದು, ಗ್ರಾಹಕರಿಗೆ ಭವಿಷ್ಯದಲ್ಲಿ ದೊಡ್ಡ ಆರ್ಥಿಕ ಸಂಕಷ್ಟವನ್ನು ತಂದೊಡ್ಡಬಹುದು.
11:22 AM (IST) Jan 01
ಭಾರತದ ಮಣಿಪುರ ಮತ್ತು ಮಿಜೋರಾಂನಲ್ಲಿ ನೆಲೆಸಿರುವ, ಇಸ್ರೇಲ್ನ ಕಳೆದುಹೋದ ಬುಡಕಟ್ಟುಗಳಲ್ಲಿ ಒಂದೆಂದು ಪರಿಗಣಿಸಲಾದ ಬ್ನೈ ಮೆನಾಶೆ ಸಮುದಾಯದ ಜನರು ತಮ್ಮ ತಾಯ್ನಾಡಿಗೆ ಮರಳುತ್ತಿದ್ದಾರೆ.
09:34 AM (IST) Jan 01
1997ರ ಕಾಲಘಟ್ಟದಲ್ಲಿ ಸ್ಮಾರ್ಟ್ಫೋನ್ಗಳಿಲ್ಲದ ಸಮಯದಲ್ಲಿ ಜನರ ಹೊಸ ವರ್ಷದ ಸಂಕಲ್ಪಗಳು ಹೇಗಿದ್ದವು ಎಂಬುದನ್ನು ತೋರಿಸುವ ಹಳೆಯ ವೀಡಿಯೋವೊಂದು ವೈರಲ್ ಆಗಿದೆ.ಈ ವೀಡಿಯೋ 90ರ ದಶಕದ ನೆನಪುಗಳನ್ನು ಮರುಕಳಿಸುತ್ತಿದೆ.
08:59 AM (IST) Jan 01
08:45 AM (IST) Jan 01
08:29 AM (IST) Jan 01
07:10 AM (IST) Jan 01