ಜೈಪುರ: ಅನಿಲಕ್ಕಾಗಿ ದೇಶದಲ್ಲಿ ಹಾಹಾಕಾರ ಎದ್ದಿರುವ ನಡುವೆ, ವರದಕ್ಷಿಣೆಗಾಗಿ ಸೊಸೆಗೆ ಕಿರುಕುಳ ನೀಡುವವರ ಮನೆಗೆ ಗ್ಯಾಸ್ ಪೂರೈಕೆ ಕಟ್ ಮಾಡಲಾಗುವುದು ಎಂದು ರಾಜಸ್ಥಾನ ಸರ್ಕಾರ ಘೋಷಿಸಿದೆ.
‘ವರದಕ್ಷಿಣೆಗಾಗಿ ಪೀಡಿಸುವ ಪ್ರಕರಣಗಳ ಮೇಲೆ ಹತ್ತಿರದಿಂದ ನಿಗಾ ವಹಿಸಲಾಗುತ್ತಿದ್ದು, ಅದು ಸಾಬೀತಾದಲ್ಲಿ ಆ ಮನೆಗೆ ಗ್ಯಾಸ್ ಸಿಲಿಂಡರ್ಗಳನ್ನು ಕೊಡಲಾಗುವುದಿಲ್ಲ’ ಎಂದು ರಾಜಸ್ಥಾನ ಪೊಲೀಸರು ಎಕ್ಸ್ನಲ್ಲಿ ತಿಳಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ ಸಿಲಿಂಡರ್ ಕಟ್ ಕ್ರಮ ಎಂದಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
09:48 AM (IST) Mar 14
09:45 AM (IST) Mar 14
09:41 AM (IST) Mar 14
ಕಾಲ್ತುಳಿತ ದುರಂತದ ನಂತರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಕೆಎಸ್ಸಿಎ, ಸರ್ಕಾರ ನೇಮಿತ ತಜ್ಞರ ಸಮಿತಿಗೆ ಮಾಹಿತಿ ನೀಡಿದೆ. ವಿಸ್ತೃತ ಪ್ರವೇಶ ದ್ವಾರಗಳಂತಹ ಬದಲಾವಣೆಗಳನ್ನು ಪರಿಶೀಲಿಸಿದ ಸಮಿತಿ IPL ಆಯೋಜನೆಗೆ ಶೀಘ್ರದಲ್ಲೇ ಅನುಮತಿ ನೀಡುವ ನಿರೀಕ್ಷೆಯಿದೆ.
09:12 AM (IST) Mar 14
2026ರ ಐಪಿಎಲ್ ಸೀಸನ್ಗೆ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಬದಲಿಗೆ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಸೇರಿಸಿಕೊಂಡಿದೆ. ಪಿಎಸ್ಎಲ್ ತೊರೆದು ಕೆಕೆಆರ್ ಸೇರುತ್ತಿರುವ ಮುಜರಬಾನಿ, ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.