ಜೈಪುರ: ಅನಿಲಕ್ಕಾಗಿ ದೇಶದಲ್ಲಿ ಹಾಹಾಕಾರ ಎದ್ದಿರುವ ನಡುವೆ, ವರದಕ್ಷಿಣೆಗಾಗಿ ಸೊಸೆಗೆ ಕಿರುಕುಳ ನೀಡುವವರ ಮನೆಗೆ ಗ್ಯಾಸ್ ಪೂರೈಕೆ ಕಟ್ ಮಾಡಲಾಗುವುದು ಎಂದು ರಾಜಸ್ಥಾನ ಸರ್ಕಾರ ಘೋಷಿಸಿದೆ.
‘ವರದಕ್ಷಿಣೆಗಾಗಿ ಪೀಡಿಸುವ ಪ್ರಕರಣಗಳ ಮೇಲೆ ಹತ್ತಿರದಿಂದ ನಿಗಾ ವಹಿಸಲಾಗುತ್ತಿದ್ದು, ಅದು ಸಾಬೀತಾದಲ್ಲಿ ಆ ಮನೆಗೆ ಗ್ಯಾಸ್ ಸಿಲಿಂಡರ್ಗಳನ್ನು ಕೊಡಲಾಗುವುದಿಲ್ಲ’ ಎಂದು ರಾಜಸ್ಥಾನ ಪೊಲೀಸರು ಎಕ್ಸ್ನಲ್ಲಿ ತಿಳಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ಗೃಹಬಳಕೆ ಸಿಲಿಂಡರ್ ಕೊರತೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ ಸಿಲಿಂಡರ್ ಕಟ್ ಕ್ರಮ ಎಂದಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.
10:53 PM (IST) Mar 14
09:56 PM (IST) Mar 14
ಸೇನಾಬಲದಿಂದ ಹೊರ್ಮುಜ್ ಜಲಸಂಧಿ ತೆರೆಯುವುದಾಗಿ ಟ್ರಂಪ್ ಘೋಷಣೆ, ಹೆಚ್ಚಿದ ಯುದ್ಧ ಭೀತಿ, ಏರ್ಸ್ಟ್ರೈಕ್ ಹಾಗೂ ಮಿಸೈಲ್ ದಾಳಿ ನಡುವೆ ಇದೀಗ ಸೇನೆಯನ್ನು ಇರಾನ್ ನತ್ತ ನುಗ್ಗಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ.
09:12 PM (IST) Mar 14
ಯುದ್ಧದಿಂದ ಸರ್ಕಾರಿ ನೌಕರರ ಸಂಬಳ ಕಟ್, ಇಂಧನ ಕಟ್, ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಸರ್ಕಾರಿ ವಾಹನಗಳ ಇಂಧನಕ್ಕೆ ಕತ್ತರಿ ಹಾಕಿ ವೇತನದಲ್ಲಿ ಶೇಕಾಡ 30ರಷ್ಟು ಕಡಿತಕ್ಕೆ ಆದೇಶ ನೀಡಲಾಗಿದೆ.
08:49 PM (IST) Mar 14
ನೂತನ ನಾಯಕ ಮೊಜ್ತಬಾ ಖಮೇನಿ ನಿಜವಾಗಿಯೂ ಇದ್ದಾರ? ಎಐ ಸೃಷ್ಟಿಯೇ, ಇರಾನ್ಲ್ಲಿ ಭುಗಿಲೆದ್ದ ಕೂಗು, ಇರಾನ್ನಲ್ಲಿ ಈ ಕುರಿತು ಚರ್ಚೆ, ವ್ಯಂಗ್ಯ, ಹಾಸ್ಯಗಳು ನಡೆಯುತ್ತಿದೆ. ಮೊಜ್ತಬಾ ಖಮೇನಿ ಹತ್ಯೆಯಾದ್ರಾ?
08:01 PM (IST) Mar 14
ಮಹಿಳೆಯಿಂದ ಟಾಟಾ ಸಿಯೆರಾ ಟೆಸ್ಟ್ ಡ್ರೈವ್, 3 ವಾಹನಕ್ಕೆ ಡಿಕ್ಕಿಯಾಗಿ 20 ಅಡಿ ಗುಂಡಿಗೆ ಬಿದ್ದ ಕಾರು, ಡ್ರೈವ್ ಟೆಸ್ಟ್ ಮಾಡಲು ಹೋಗಿ ಕಾರಿನ 5 ಸ್ಟಾರ್ ಸೇಫ್ಟಿಯನ್ನೇ ಮಹಿಳೆ ಟೆಸ್ಟ್ ಮಾಡಿದ್ದಾರೆ. ಮಂದೇನಾಯಿತು?
07:52 PM (IST) Mar 14
ನಟಿ ಅನುಷ್ಕಾ ಶೆಟ್ಟಿ ಮದುವೆ ಬಗ್ಗೆ ಆಗಾಗ ಗಾಸಿಪ್ಗಳು ಕೇಳಿಬರುತ್ತಲೇ ಇರುತ್ತವೆ. ಆದರೆ, ಈ ಬಾರಿ ಅವರ ಮದುವೆ ಬಗ್ಗೆ ಬಲವಾದ ಸುದ್ದಿಯೊಂದು ಹರಿದಾಡುತ್ತಿದೆ. ಉದ್ಯಮಿಯೊಬ್ಬರ ಜೊತೆ ಅನುಷ್ಕಾ ಮದುವೆ ಫಿಕ್ಸ್ ಆಗಿದೆ ಎನ್ನಲಾಗುತ್ತಿದೆ.
06:49 PM (IST) Mar 14
ಚೆನ್ನೈ ವಿಮಾನ ನಿಲ್ದಾಣದಲ್ಲಿ ನಟ ವಿಜಯ್ ಬಗ್ಗೆ ಕೇಳಿದ ಪ್ರಶ್ನೆಗೆ ನಟಿ ತ್ರಿಷಾ ನೀಡಿದ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಜಯ್ ಹೆಸರು ಕೇಳುತ್ತಿದ್ದಂತೆ ತ್ರಿಷಾ ಮೌನವಾಗಿ ಹೊರನಡೆದಿದ್ದೇಕೆ? ಇಲ್ಲಿದೆ ವಿವರ.
06:35 PM (IST) Mar 14
ಮದುವೆ ನಡೆಯುತ್ತಿದ್ದ ವೇಳೆ ವೇದಿಕೆಯ ಮೇಲೆ ಬಂದ ಬುರ್ಖಾಧಾರಿಯೊಬ್ಬರು ವರನಿಗೆ ಮುತ್ತಿಕ್ಕಲು ಆರಂಭಿಸಿ ವಧುವಿಗೆ ಆಘಾತ ನೀಡುತ್ತಾರೆ. ಕೊನೆಗೆ ಆ ಬುರ್ಖಾದೊಳಗಿದ್ದಿದ್ದು ವರನ ಪ್ರೇಯಸಿಯಲ್ಲ, ಬದಲಿಗೆ ಯಾರು ಎಂದು ತಿಳಿದಾಗ ವಧು ನಿಟ್ಟುಸಿರು ಬಿಟ್ಟರು.
06:23 PM (IST) Mar 14
ದಾಳಿಯಲ್ಲಿ ಇಸ್ರೇಲ್ ಪಿಎಂ ನೇತನ್ಯಾಹು ಹತ್ಯೆಯಾಗಿದ್ದಾರ? 6 ಬೆರಳಿನ ವಿಡಿಯೋದಿಂದ ಅನುಮಾನ ಹೆಚ್ಚಾಗಿದೆ. ಯುದ್ಧ ಆರಂಭಗೊಂಡ ಬಳಿಕ ನೇತನ್ಯಾಹು ಬಹಿರಂಗವಾಗಿ ಕಾಣಿಸಿಕೊಂಡಿಲ್ಲ. ಮಾ.13ರ ವಿಡಿಯೋ ಇದೀಗ ಹಲವು ಪ್ರಶ್ನೆ ಹುಟ್ಟುಹಾಕಿದೆ.
06:19 PM (IST) Mar 14
ನಟ ಶಿವಕಾರ್ತಿಕೇಯನ್ ತಮ್ಮ ಪತ್ನಿ, ಮಗಳು ಮತ್ತು ಇಬ್ಬರು ಗಂಡು ಮಕ್ಕಳೊಂದಿಗೆ ವಿದೇಶ ಪ್ರವಾಸಕ್ಕೆ ತೆರಳಿದ್ದಾರೆ. ಸಿಂಗಾಪುರದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
05:53 PM (IST) Mar 14
ಶ್ರೀ ರಾಮಾಯಣ ಯಾತ್ರಾ ಟೂರ್ ಘೋಷಿಸಿದ ಭಾರತೀಯ ರೈಲ್ವೇ, ಮಾ.30 ರಿಂದ ಆರಂಭ, ಇದು 17 ದಿನದ ಪ್ರವಾಸ. ಈ ಟೂರ್ನಲ್ಲಿ ಇಡೀ ರಾಮಾಯಣ ದರ್ಶನವಾಗಲಿದೆ. ಇದರ ಬೆಲೆ ಧಾರ್ಮಿ ಕ್ಷೇತ್ರ, ಪ್ರವಾಸಿ ತಾಣಗಳ ವಿವರ ಇಲ್ಲಿದೆ.
05:44 PM (IST) Mar 14
ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಬಹುಮುಖ ಪ್ರತಿಭೆ ಎನಿಸಿರುವ ಲೋಕೇಶ್ ಕನಗರಾಜ್ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಇಲ್ಲಿದೆ ಮಾಹಿತಿ.
05:34 PM (IST) Mar 14
ಉತ್ತರ ಪ್ರದೇಶದ ಬರೇಲಿಯಲ್ಲಿ, ಇಬ್ಬರು ಅಪ್ರಾಪ್ತ ಮುಸ್ಲಿಂ ಬಾಲಕಿಯರು ತಮ್ಮ ಹಿಂದೂ ಸ್ನೇಹಿತೆಯನ್ನು ಮನೆಗೆ ಕರೆದು, ಪಾನೀಯದಲ್ಲಿ ಮತ್ತು ಬರುವ ದ್ರವ ಬೆರೆಸಿ ಪ್ರಜ್ಞೆ ತಪ್ಪಿಸಿದ್ದಾರೆ. ನಂತರ, ಆ ಬಾಲಕಿಯರ ಸಹೋದರ ಆಕೆಯ ಮೇಲೆ ಅತ್ಯಾ*ಚಾರ ಎಸಗಿ, ಅದನ್ನು ವಿಡಿಯೋ ಮಾಡಿ, ಇಸ್ಲಾಂಗೆ ಮತಾಂತರಗೊಳ್ಳುವಂತೆ ಬೆದರಿಕೆ ಹಾಕಿದ್ದಾನೆ.
05:20 PM (IST) Mar 14
'ಅಸುರನ್' ಸಿನಿಮಾದಲ್ಲಿ ಮಗನಾಗಿ ನಟಿಸಿದ್ದ ಕೆನ್ ಕರುಣಾಸ್ನನ್ನು ಫೋಟೋಶೂಟ್ನಲ್ಲಿ ನೋಡಿದಾಗ ನನಗೆ ಇಷ್ಟವಾಗಿರಲಿಲ್ಲ. ಆದರೆ ಮೊದಲ ದಿನದ ನಟನೆ ನೋಡಿದ ಮೇಲೆ ನನ್ನ ಅಭಿಪ್ರಾಯ ಬದಲಾಯಿಸಿದೆ ಎಂದು ನಟ ಧನುಷ್ ಹೇಳಿಕೊಂಡಿದ್ದಾರೆ.
05:04 PM (IST) Mar 14
ಮಾಳವಿಕಾ ಈಗ ಮಲಯಾಳಂ ಮಾತ್ರವಲ್ಲದೆ, ತಮಿಳು, ತೆಲುಗಿನಲ್ಲೂ ಸಖತ್ ಬ್ಯುಸಿ ಆಗಿದ್ದಾರೆ. ಸತ್ಯನ್ ನಿರ್ದೇಶನದ 'ಹೃದಯಪೂರ್ವಂ' ಚಿತ್ರದಲ್ಲಿ ಮೋಹನ್ಲಾಲ್ ಜೊತೆಗಿನ ಇವರ ನಟನೆ ಗಮನ ಸೆಳೆದಿತ್ತು.
04:57 PM (IST) Mar 14
NHAI 'ಫಾಸ್ಟ್ಟ್ಯಾಗ್ ವಾರ್ಷಿಕ ಪಾಸ್' ದರವನ್ನು ಪರಿಷ್ಕರಿಸಿದೆ. ಏಪ್ರಿಲ್ 1 ರಿಂದ, ವಾಣಿಜ್ಯೇತರ ವಾಹನ ಬಳಕೆದಾರರು 3,000 ರೂ. ಬದಲಿಗೆ 3,075 ರೂ. ಪಾವತಿಸಬೇಕಾಗುತ್ತದೆ. ಈ ಪಾಸ್ ಒಂದು ವರ್ಷ ಅಥವಾ 200 ಟ್ರಿಪ್ಗಳವರೆಗೆ ರಾಷ್ಟ್ರೀಯ ಹೆದ್ದಾರಿ ಟೋಲ್ಗಳಲ್ಲಿ ಮಾನ್ಯವಾಗಿರುತ್ತದೆ.
04:44 PM (IST) Mar 14
ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್ದತ್ ನಟಿಸಿದ್ದಾರೆ. ಯಶ್ ‘ಟಾಕ್ಸಿಕ್’ ರಿಲೀಸ್ ಮುಂದಕ್ಕೆ ಹೋಗಿರುವುದರಿಂದ ‘ಧುರಂಧರ್ 2’ಗೆ ಸ್ಪರ್ಧೆಯೇ ಇಲ್ಲ.
04:31 PM (IST) Mar 14
ಫಿಲ್ಮ್ ಫೆಸ್ಟಿವಲ್ನಲ್ಲಿ ಪ್ಲಾಸ್ಟಿಕ್ ಕವರ್ ಜೊತೆ ಬಂದ ನಟಿ, ಇದರ ಬೆಲೆ ನೋಡಿ ದಂಗಾದ ಜನ, ಖ್ಯಾತ ನಟಿ, ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿರುವ ನಟಿ ಈ ಬ್ಯಾಗ್ ಇದೀಗ ಭಾರಿ ಚರ್ಚೆಯಾಗುತ್ತಿದೆ. ಇದು ನಮ್ಮ ಪ್ಲಾಸ್ಟಿಕ್ ಕವರ್ ಅಲ್ಲ. ಇದ್ರ ಬೆಲೆ ಬಲು ದುಬಾರಿ.
04:23 PM (IST) Mar 14
ವರದಕ್ಷಿಣೆ ಪಿಡುಗು ತಡೆಯಲು ಸರ್ಕಾರ ಒಂದು ವಿಶಿಷ್ಟ ಕಾನೂನು ಜಾರಿಗೆ ತಂದಿದೆ. ವರದಕ್ಷಿಣೆ ಕೇಳಿದ್ದು ಸಾಬೀತಾದರೆ, ಗಂಡಿನ ಮನೆಯ ಗ್ಯಾಸ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ಗ್ಯಾಸ್ ಸಿಲಿಂಡರ್ಗಳನ್ನೇ ವರದಕ್ಷಿಣೆಯಾಗಿ ಕೇಳುವ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ.
04:16 PM (IST) Mar 14
ಟಿ20 ವಿಶ್ವಕಪ್ ವೇಳೆ ಅಕ್ಷರ್ ಪಟೇಲ್ ಫೀಲ್ಡಿಂಗ್ ನೋಡಿ ಫ್ಯಾನ್ಸ್, ಪ್ರೀತಿಯಿಂದ "ಬಾಪು" ಅಂತ ಕರೆಯುವುದನ್ನು ನೀವು ನೋಡಿರಬಹುದು. ಅಂದಹಾಗೆ, ಅಕ್ಷರ್ ಪಟೇಲ್ರನ್ನು 'ಬಾಪು' ಅಂತ ಯಾಕೆ ಕರೆಯುತ್ತಾರೆ ಗೊತ್ತಾ?
04:06 PM (IST) Mar 14
2016ರ ನೋಟು ಅಮಾನ್ಯೀಕರಣದ ವೇಳೆ ದೆಹಲಿ ಮೂಲದ ಕಂಪನಿಯ 3.2 ಕೋಟಿ ರೂ. ನಗದು ಜಮಾ ಮಾಡಲು ನಿರಾಕರಿಸಿದ್ದ ಆಕ್ಸಿಸ್ ಬ್ಯಾಂಕ್ಗೆ ರಾಷ್ಟ್ರೀಯ ಗ್ರಾಹಕ ಆಯೋಗವು ಭಾರಿ ದಂಡ ವಿಧಿಸಿದೆ. ಬ್ಯಾಂಕಿನ ಏಕಪಕ್ಷೀಯ ನಿರ್ಧಾರವು ನಿಯಮಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಹೇಳಿದೆ.
03:50 PM (IST) Mar 14
ಹಲವು ಯುವತಿಯರ ಜೊತೆಗಿರುವ ನಟನ ಬೆಡ್ ರೂಂ ವಿಡಿಯೋ ಲೀಕ್, ಆದರೂ ಬೆಂಬಲಕ್ಕೆ ನಿಂತ ಪತ್ನಿ, ಕೆಲ ನಟಿಯರು,ಮಾಡೆಲ್ ಜೊತೆಗೆ ಸರಸದ ವಿಡಿಯೋಗಳು ಲೀಕ್ ಆಗಿ ಕೋಲಾಹಲ ಸಷ್ಟಿಸಿದ ಬೆನ್ನಲ್ಲೇ, ನಟನ ಬೆಂಬಲಕ್ಕೆ ಪತ್ನಿ ನಿಂತುಕೊಂಡಿದ್ದಾಳೆ.
03:23 PM (IST) Mar 14
03:20 PM (IST) Mar 14
ಬ್ಲೆಸ್ಸಿಂಗ್ ಮುಜರಬಾನಿ, ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಜೊತೆಗಿನ ಒಪ್ಪಂದವನ್ನು ಉಲ್ಲಂಘಿಸಿ ಐಪಿಎಲ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೇರಿದ್ದಾರೆ. ಈ ಒಪ್ಪಂದ ಉಲ್ಲಂಘನೆಗಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿದೆ.
01:55 PM (IST) Mar 14
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಹೃದಯಸ್ಪರ್ಶಿ ವಿಡಿಯೋವೊಂದರಲ್ಲಿ, ಆದರ್ಶ್ ಎಂಬ ಯುವಕ ತನ್ನ ಪೋಷಕರಿಗೆ ಶಾಪಿಂಗ್ ಮಾಲ್ನಲ್ಲಿ ಸರ್ಪ್ರೈಸ್ ನೀಡಿದ್ದಾನೆ. ಮಾಲ್ನ ದೊಡ್ಡ ಜಾಹೀರಾತು ಬೋರ್ಡ್ನಲ್ಲಿ ತಮ್ಮ ಮಗನ ಫೋಟೋವನ್ನು ಮೊದಲ ಬಾರಿಗೆ ನೋಡಿದ್ದಾರೆ.
01:32 PM (IST) Mar 14
ನಟಿ ಉರ್ಫಿ ಜಾವೇದ್ ಅವರ ವಿಚಿತ್ರ ಉಡುಗೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಇದೀಗ ನಟ ಫೈಜಾನ್ ಅನ್ಸಾರಿ, ಉರ್ಫಿ ಹೆಣ್ಣಲ್ಲ, ಆಕೆ ತೃತೀಯ ಲಿಂಗಿ ಎಂದು ಹೇಳಿದ್ದು, ಈ ಸತ್ಯವನ್ನು ಸಾಬೀತುಪಡಿಸಲು ಹೈಕೋರ್ಟ್ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
01:25 PM (IST) Mar 14
ನಟಿ ಹಾಗೂ ನೂತನ ನಿರ್ದೇಶಕಿ ವರಲಕ್ಷ್ಮಿ ಶರತ್ಕುಮಾರ್, ತಮ್ಮ 'ಎಸ್.ಸರಸ್ವತಿ' ಚಿತ್ರದ ಪ್ರಚಾರದ ವೇಳೆ ಜನಸಂಖ್ಯೆ ಮತ್ತು ಮಕ್ಕಳ ಪಾಲನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆರ್ಥಿಕ ಶಕ್ತಿಯಿಲ್ಲದೆ ಮಕ್ಕಳನ್ನು ಹೆರುವುದು ತಪ್ಪು ಎಂದಿದ್ದಾರೆ.
01:02 PM (IST) Mar 14
12:47 PM (IST) Mar 14
12:33 PM (IST) Mar 14
12:28 PM (IST) Mar 14
ಯುದ್ಧಪೀಡಿತ ಹಾರ್ಮುಜ್ ಜಲಸಂಧಿಯನ್ನು ಭಾರತದ ಧ್ವಜವಿರುವ 'ಶಿವಾಲಿಕ್' ಎಲ್ಪಿಜಿ ಹಡಗು ಯಾವುದೇ ಬೆಂಗಾವಲಿಲ್ಲದೆ ಯಶಸ್ವಿಯಾಗಿ ದಾಟಿದೆ. ಸುಮಾರು 40 ಸಾವಿರ ಮೆಟ್ರಿಕ್ ಟನ್ ಎಲ್ಪಿಜಿ ಹೊತ್ತಿದ್ದ ಈ ಹಡಗಿನ ಬೆನ್ನಲ್ಲೇ 'ನಂದಾದೇವಿ' ಎಂಬ ಇನ್ನೊಂದು ಹಡಗೂ ಈ ಜಲಮಾರ್ಗವನ್ನು ದಾಟಿದೆ.
12:23 PM (IST) Mar 14
ರಷ್ಯಾದಿಂದ ತೈಲ ಆಮದು ನಿಲ್ಲಿಸುವಂತೆ ಭಾರತದ ಮೇಲೆ ತಿಂಗಳುಗಟ್ಟಲೆ ಒತ್ತಡ ಹಾಕಿದ್ದ ಅಮೆರಿಕ, ಈಗ ಇರಾನ್ ಜೊತೆಗಿನ ಸಂಘರ್ಷದಿಂದಾಗಿ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದ ನಂತರ ತನ್ನ ನಿಲುವು ಬದಲಿಸಿದೆ ಎಂದು ಇರಾನ್ ವಿದೇಶಾಂಗ ಸಚಿವರು ಹೇಳಿದ್ದಾರೆ.
12:02 PM (IST) Mar 14
11:33 AM (IST) Mar 14
ನಟಿ ತನುಶ್ರೀ ದತ್ತಾ ಅವರು ಸಿನಿಮಾರಂಗಕ್ಕೆ ಬರುವ ಹೊಸಬರು ಎದುರಿಸುವ ಶೋಷಣೆಯ ಬಗ್ಗೆ ಮಾತನಾಡಿದ್ದಾರೆ. ದೊಡ್ಡ ಭರವಸೆಗಳನ್ನು ನೀಡಿ ಅವರನ್ನು ಬಲೆಗೆ ಬೀಳಿಸಿ, ಲೈಂಗಿಕವಾಗಿ ಶೋಷಿಸಲಾಗುತ್ತದೆ ಮತ್ತು ಕೆಲವರನ್ನು ವೇಶ್ಯಾವಾಟಿಕೆಗೂ ತಳ್ಳಲಾಗುತ್ತದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
11:31 AM (IST) Mar 14
ಬೆಂಗಳೂರು: ಚಿನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ಇಳಿಕೆ ಕಾಣಲಾರಂಭಿಸಿದೆ. ಮಾರ್ಚ್ 14ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.
11:27 AM (IST) Mar 14
11:00 AM (IST) Mar 14
10:51 AM (IST) Mar 14
ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ, ಪಾಕ್ ಬ್ಯಾಟರ್ ಸಲ್ಮಾನ್ ಅಘಾ ವಿವಾದಾತ್ಮಕವಾಗಿ ರನೌಟ್ ಆದರು. ಬೌಲರ್ ಮೆಹಿದಿ ಹಸನ್ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದೆ.
09:48 AM (IST) Mar 14
09:45 AM (IST) Mar 14