LIVE NOW
Published : Mar 14, 2026, 06:46 AM ISTUpdated : Mar 14, 2026, 09:48 AM IST

India Latest News Live: ಇರಾನ್ ಯುದ್ಧದ ನಡುವೆಯೂ ಏಕೆ ಕುಸಿಯುತ್ತಿದೆ ಚಿನ್ನದ ಬೆಲೆ? ಹೂಡಿಕೆದಾರರೇ ಗಮನಿಸಿ, ಇಲ್ಲಿದೆ ತಜ್ಞರ ವಿಶ್ಲೇಷಣೆ

ಸಾರಾಂಶ

ಜೈಪುರ: ಅನಿಲಕ್ಕಾಗಿ ದೇಶದಲ್ಲಿ ಹಾಹಾಕಾರ ಎದ್ದಿರುವ ನಡುವೆ, ವರದಕ್ಷಿಣೆಗಾಗಿ ಸೊಸೆಗೆ ಕಿರುಕುಳ ನೀಡುವವರ ಮನೆಗೆ ಗ್ಯಾಸ್‌ ಪೂರೈಕೆ ಕಟ್‌ ಮಾಡಲಾಗುವುದು ಎಂದು ರಾಜಸ್ಥಾನ ಸರ್ಕಾರ ಘೋಷಿಸಿದೆ.

‘ವರದಕ್ಷಿಣೆಗಾಗಿ ಪೀಡಿಸುವ ಪ್ರಕರಣಗಳ ಮೇಲೆ ಹತ್ತಿರದಿಂದ ನಿಗಾ ವಹಿಸಲಾಗುತ್ತಿದ್ದು, ಅದು ಸಾಬೀತಾದಲ್ಲಿ ಆ ಮನೆಗೆ ಗ್ಯಾಸ್‌ ಸಿಲಿಂಡರ್‌ಗಳನ್ನು ಕೊಡಲಾಗುವುದಿಲ್ಲ’ ಎಂದು ರಾಜಸ್ಥಾನ ಪೊಲೀಸರು ಎಕ್ಸ್‌ನಲ್ಲಿ ತಿಳಿಸಿದ್ದಾರೆ. ಜತೆಗೆ ರಾಜ್ಯದಲ್ಲಿ ಗೃಹಬಳಕೆ ಸಿಲಿಂಡರ್‌ ಕೊರತೆ ಇಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ ಸಿಲಿಂಡರ್‌ ಕಟ್‌ ಕ್ರಮ ಎಂದಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ.

09:48 AM (IST) Mar 14

ಇರಾನ್ ಯುದ್ಧದ ನಡುವೆಯೂ ಏಕೆ ಕುಸಿಯುತ್ತಿದೆ ಚಿನ್ನದ ಬೆಲೆ? ಹೂಡಿಕೆದಾರರೇ ಗಮನಿಸಿ, ಇಲ್ಲಿದೆ ತಜ್ಞರ ವಿಶ್ಲೇಷಣೆ

ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಯುದ್ಧದ ಉದ್ವಿಗ್ನತೆ ಹೆಚ್ಚುತ್ತಿದ್ದರೂ, ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಏರಿಕೆಯಾಗುವ ಬದಲು ಕುಸಿಯುತ್ತಿವೆ. ಈ ಅನಿರೀಕ್ಷಿತ ಬೆಲೆ ಇಳಿಕೆಗೆ ಜಾಗತಿಕ ಮಾರುಕಟ್ಟೆಯಲ್ಲಿ ಯುಎಸ್ ಡಾಲರ್ ಸೂಚ್ಯಂಕದ ಬಲವರ್ಧನೆಯೇ ಪ್ರಮುಖ ಕಾರಣವೆಂದು ತಜ್ಞರು ವಿಶ್ಲೇಷಿಸಿದ್ದಾರೆ.
Read Full Story

09:45 AM (IST) Mar 14

ಅಪ್ಪ-ಅಮ್ಮ ಇಲ್ಲ, ಅಜ್ಜನಿಗೆ ಪಿಂಚಣಿ ಬಂದ್ರೆ ಮಾತ್ರ ಹೊಸ ಬಟ್ಟೆ ಎಂದ ಕಂದಮ್ಮ; ಮಮ್ಮಲ ಮರುಗಿದ ಹೆಣ್ಮಕ್ಕಳು!

ಶಾಲಾ ಸಮವಸ್ತ್ರ ಹರಿದಿದ್ದರೂ, ಅಜ್ಜನ ಪಿಂಚಣಿ ಬಂದ ನಂತರವೇ ಹೊಸತು ಎಂದು ಹೇಳಿದ ಅನಾಥ ಬಾಲಕನ ಮಾತುಗಳು ಶಿಕ್ಷಕರ ಹೃದಯವನ್ನು ಕರಗಿಸಿವೆ. ಮರುದಿನವೇ ಶಿಕ್ಷಕರು ಆ ಬಾಲಕನಿಗೆ ಹೊಸ ಬಟ್ಟೆ ಹಾಗೂ ಇನ್ನಿತರ ಉಡುಗೊರೆಗಳನ್ನು ನೀಡಿ ಅಚ್ಚರಿ ಮೂಡಿಸಿದ್ದು, ಈ ಹೃದಯಸ್ಪರ್ಶಿ ವಿಡಿಯೋ ವೈರಲ್ ಆಗಿದೆ.
Read Full Story

09:41 AM (IST) Mar 14

IPL ಸಿದ್ಧತೆ ಬಗ್ಗೆ ತಜ್ಞರ ಸಮಿತಿಗೆ ಕೆಎಸ್‌ಸಿಎ ವಿವರಣೆ - ಚಿನ್ನಸ್ವಾಮಿ ಸ್ಟೇಡಿಯಂಗೆ ಸಿಗುತ್ತಾ ಅನುಮತಿ?

ಕಾಲ್ತುಳಿತ ದುರಂತದ ನಂತರ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಬಗ್ಗೆ ಕೆಎಸ್‌ಸಿಎ, ಸರ್ಕಾರ ನೇಮಿತ ತಜ್ಞರ ಸಮಿತಿಗೆ ಮಾಹಿತಿ ನೀಡಿದೆ. ವಿಸ್ತೃತ ಪ್ರವೇಶ ದ್ವಾರಗಳಂತಹ ಬದಲಾವಣೆಗಳನ್ನು ಪರಿಶೀಲಿಸಿದ ಸಮಿತಿ IPL ಆಯೋಜನೆಗೆ ಶೀಘ್ರದಲ್ಲೇ ಅನುಮತಿ ನೀಡುವ ನಿರೀಕ್ಷೆಯಿದೆ.

Read Full Story

09:12 AM (IST) Mar 14

ಪಿಎಸ್‌ಎಲ್‌ಗೆ ಟಾಟಾ ಮಾಡಿ IPL ಗೆ ಎಂಟ್ರಿಕೊಟ್ಟ RCB ಮಾಜಿ ವೇಗಿ! ಮುಸ್ತಾಫಿಜುರ್ ಬದಲಿಗೆ KKR ಸೇರಿದ ಮಾರಕ ಬೌಲರ್!

2026ರ ಐಪಿಎಲ್‌ ಸೀಸನ್‌ಗೆ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡವು ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಬದಲಿಗೆ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಜರಬಾನಿ ಅವರನ್ನು ಸೇರಿಸಿಕೊಂಡಿದೆ. ಪಿಎಸ್‌ಎಲ್ ತೊರೆದು ಕೆಕೆಆರ್ ಸೇರುತ್ತಿರುವ ಮುಜರಬಾನಿ, ತಂಡದ ವೇಗದ ಬೌಲಿಂಗ್ ವಿಭಾಗಕ್ಕೆ ಬಲ ತುಂಬಲಿದ್ದಾರೆ.

Read Full Story

More Trending News