LIVE NOW
Published : Jun 13, 2026, 06:58 AM ISTUpdated : Jun 13, 2026, 10:42 AM IST

India Latest News Live: ಭಾರತದ ಮೇಲೆ ಕಡಲ ಮುನಿಸು, ಎಲ್‌ ನಿನೋ ಖಚಿತಪಡಿಸಿದ ಭಾರತೀಯ ಹವಾಮಾನ ಇಲಾಖೆ

ಸಾರಾಂಶ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪ್ರಬಲ ಪಕ್ಷವಾಗಿ ಬೆಳೆದು 15 ವರ್ಷ ಅಧಿಕಾರ ನಡೆಸಿದ ಟಿಎಂಸಿ ಇಬ್ಭಾಗವಾಗುವ ಅಂಚಿನಲ್ಲಿರುವ ಹೊತ್ತಿನಲ್ಲಿ, ಅದರ ಯಾವ ಬಣವನ್ನು ಅಸಲಿಯೆಂದು ಗುರುತಿಸಲಾಗುವುದು ಹಾಗೂ ಆಸ್ತಿಯು ಯಾರ ಪಾಲಾಗುತ್ತದೆ ಎಂಬ ಪ್ರಶ್ನೆ ಎದ್ದಿದೆ.

2025ರಲ್ಲಿ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್‌ ಫೈಲ್‌ ಮಾಡುವ ವೇಳೆ, 2024-25ರಲ್ಲಿ ತನ್ನ ಆದಾಯ 219.35 ಕೋಟಿ ರು. ಎಂದು ಟಿಎಂಸಿ ಘೋಷಿಸಿತ್ತು. ಇದರಲ್ಲಿ 184.08 ಕೋಟಿ ರು. ದೇಣಿಗೆ, 33.685 ಕೋಟಿ ರು. ಎಫ್‌ಡಿಯ ಬಡ್ಡಿ ಆಗಿದೆ. ಚುನಾವಣಾ ಬಾಂಡ್‌ಗಳು ರದ್ದಾಗುವ ಮುನ್ನ 2029-24ರ ನಡುವೆ ಅವುಗಳ ಮೂಲಕ ಟಿಎಂಸಿ 1,609.5 ಕೋಟಿ ರು. ಸಂಗ್ರಹಿಸಿತ್ತು. 2025-26ನೇ ಸಾಲಿನ ಗಳಿಕೆ ಘೋಷಣೆಯಾಗಿಲ್ಲವಾದರೂ, ಎಡಿಆರ್‌ ವರದಿಯಲ್ಲಿ, ದೇಶದಲ್ಲಿರುವ 36 ಪ್ರಾದೇಶಿಕ ಪಕ್ಷಗಳ ಪೈಕಿ ಟಿಡಿಪಿಯ ಬಳಿಕ ಅತಿಹೆಚ್ಚು ಆಸ್ತಿ ಇರುವುದು ಟಿಎಂಸಿಯ ಬಳಿ ಎನ್ನಲಾಗಿತ್ತು.

ಪಕ್ಷವು ಅಧಿಕೃತವಾಗಿ 2 ಭಾಗವಾದರೆ, ಯಾವುದಾದರೂ ಒಂದು ಬಣಕ್ಕೆ ಚುನಾವಣಾ ಆಯೋಗವು 2 ಹೂಗಳ ಚಿಹ್ನೆಯನ್ನು ನೀಡುತ್ತದೆ. ಆಗ ಪಕ್ಷದ ಪೂರ್ಣ ಆಸ್ತಿ ಆ ಬಣಕ್ಕೇ ಸೇರುತ್ತದೆ. ಒಂದೊಮ್ಮೆ ಬಂಡಾಯವೆದ್ದವರ ಬಣವೇ ಅಸಲಿ ಟಿಎಂಸಿ ಎಂದು ಗುರುತಿಸಲ್ಪಟ್ಟು, ಅದು ಮುಂದೆ ಬಿಜೆಪಿ ಜತೆ ವಿಲೀನವಾದರೆ, ಟಿಎಂಸಿಯ ನಿಧಿಯೂ ಬಿಜೆಪಿ ಪಾಲಾಗುತ್ತದೆ.

10:42 AM (IST) Jun 13

ಭಾರತದ ಮೇಲೆ ಕಡಲ ಮುನಿಸು, ಎಲ್‌ ನಿನೋ ಖಚಿತಪಡಿಸಿದ ಭಾರತೀಯ ಹವಾಮಾನ ಇಲಾಖೆ

ಪ್ರಶಾಂತ್ ಮಹಾಸಾಗರದಲ್ಲಿ 'ಎಲ್ ನಿನೋ' ಹವಾಮಾನ ವ್ಯವಸ್ಥೆಯು ಅಧಿಕೃತವಾಗಿ ಸಕ್ರಿಯಗೊಂಡಿದ್ದು, ಇದು ಭಾರತದ ನೈಋತ್ಯ ಮುಂಗಾರು ಮಾರುತಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ. ಈ ವಿದ್ಯಮಾನದಿಂದಾಗಿ ದೇಶದ ಹಲವು ಭಾಗಗಳಲ್ಲಿ ಬರಗಾಲದ ಭೀತಿ ಎದುರಾಗಲಿದೆ.

Read Full Story

10:14 AM (IST) Jun 13

ಶಿವಶ್ರೀ ತೇಜಸ್ವಿ ಸೂರ್ಯ ಸೇರಿದಂತೆ ರಾಜ್ಯದ 5 ಕಲಾವಿದರಿಗೆ 'ಉಸ್ತಾದ್‌ಬಿಸ್ಮಿಲ್ಲಾ ಖಾನ್‌' ಯುವ ಪುರಸ್ಕಾರ

ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2024-25ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅವರೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್‌, ಐವರು ಯುವ ಕಲಾವಿದರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.

Read Full Story

09:51 AM (IST) Jun 13

ರಾಷ್ಟ್ರೀಯ ಅಂಡರ್-17 ಕುಸ್ತಿ - ಈ ಮಹಾ ಅಪರಾಧಕ್ಕೆ 500 ರೆಸ್ಲರ್‌ಗಳಿಗೆ ಗೇಟ್‌ಪಾಸ್..!

ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದ ಅಂಡರ್‌-17 ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ, ವಯೋಮಿತಿ ಅಕ್ರಮದ ಆರೋಪದ ಮೇಲೆ 500 ಕುಸ್ತಿಪಟುಗಳನ್ನು ಅನರ್ಹಗೊಳಿಸಲಾಗಿದೆ. ಭಾರತೀಯ ಕುಸ್ತಿ ಫೆಡರೇಶನ್‌ (WFI) ಆಧಾರ್ ಆಧಾರಿತ ಪರಿಶೀಲನೆ ನಡೆಸಿದಾಗ ಜನನ ಪ್ರಮಾಣ ಪತ್ರ ಮತ್ತು ಆಧಾರ್ ದಾಖಲೆಗಳಲ್ಲಿನ ವಯಸ್ಸಿನ ವ್ಯತ್ಯಾಸ ಪತ್ತೆಯಾಗಿದೆ.
Read Full Story

09:02 AM (IST) Jun 13

ತಾನೇ ಕಟ್ಟಿದ ಟಿಎಂಸಿ ಕೋಟೆಯಿಂದ ಮಮತಾ ಬ್ಯಾನರ್ಜಿಗೆ ಗೇಟ್‌ಪಾಸ್? 4000 ಇವಿಎಂ ಕಟ್ಟಡಕ್ಕೆ ಬೆಂಕಿ

ಟಿಎಂಸಿಯ 19 ಸಂಸದರು ತಮ್ಮ ಬಣವನ್ನೇ ಅಸಲಿ ಪಕ್ಷವೆಂದು ಗುರುತಿಸಲು ಸ್ಪೀಕರ್‌ಗೆ ಮನವಿ ಸಲ್ಲಿಸಲು ಸಜ್ಜಾಗಿದ್ದಾರೆ. ಇದು ಯಶಸ್ವಿಯಾದರೆ, ಮಮತಾ ಬ್ಯಾನರ್ಜಿ ತಮ್ಮದೇ ಪಕ್ಷದಿಂದ ಹೊರಬೀಳುವ ಸಾಧ್ಯತೆಯಿದ್ದು, ಪಕ್ಷದ ₹220 ಕೋಟಿ ಆಸ್ತಿಯ ಹಂಚಿಕೆಯ ಪ್ರಶ್ನೆಯೂ ಎದ್ದಿದೆ. ಇದರ ನಡುವೆ, ಮಮತಾ ವಿರುದ್ಧ ಎಫ್‌ಐಆರ್‌ ಮತ್ತು ಇವಿಎಂ ಕಟ್ಟಡಕ್ಕೆ ಬಿದ್ದ ಬೆಂಕಿ ಹಲವು ಅನುಮಾನಗಳನ್ನು ಸೃಷ್ಟಿಸಿದೆ.
Read Full Story

08:37 AM (IST) Jun 13

ಭಾರತ vs ಆಫ್ಘಾನಿಸ್ತಾನ 1ನೇ ಏಕದಿನ - ಸಂಭಾವ್ಯ XI, ಪಂದ್ಯ ಸಮಯ, ನೇರ ಪ್ರಸಾರ ಮಾಹಿತಿ

ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಚೊಚ್ಚಲ ದ್ವಿಪಕ್ಷೀಯ ಏಕದಿನ ಸರಣಿಯು ಧರ್ಮಶಾಲಾದಲ್ಲಿ ಆರಂಭವಾಗಲಿದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ, 2027ರ ವಿಶ್ವಕಪ್‌ಗೆ ತಂಡವನ್ನು ಸಿದ್ಧಪಡಿಸಲು ಭಾರತ ಯುವ ಆಟಗಾರರಿಗೆ ಅವಕಾಶ ನೀಡಲಿದ್ದು, ಅಫ್ಘಾನಿಸ್ತಾನ ತಂಡವು ಅಚ್ಚರಿ ಮೂಡಿಸುವ ಸಾಮರ್ಥ್ಯ ಹೊಂದಿದೆ.
Read Full Story

08:25 AM (IST) Jun 13

FIFA World Cup 2026 - ದಕ್ಷಿಣ ಆಫ್ರಿಕಾ ಎದುರು ಮೆಕ್ಸಿಕೋ ಘರ್ಜನೆ, ಕೊರಿಯಾದ ತಿರುಗೇಟು

ಫಿಫಾ ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ, ದಕ್ಷಿಣ ಆಫ್ರಿಕಾ ವಿರುದ್ಧ 2-0 ಅಂತರದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಮತ್ತೊಂದು ಪಂದ್ಯದಲ್ಲಿ, ದಕ್ಷಿಣ ಕೊರಿಯಾ ತಂಡವು ಚೆಕ್‌ ಗಣರಾಜ್ಯದ ವಿರುದ್ಧ 2-1 ಗೋಲುಗಳಿಂದ ರೋಚಕ ಜಯ ಗಳಿಸಿದೆ.
Read Full Story

08:14 AM (IST) Jun 13

ಬೆಂಗಳೂರಿನಲ್ಲಿನ ಪ್ರತಿಭಟನೆಗೆ ತಮಿಳಿಗರನ್ನು ಆಹ್ವಾನಿಸಿದ ಕಾಕ್ರೋಚ್ ಜನತಾ ಪಾರ್ಟಿ

ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧವಾಗಿರುವ ಕಾಕ್ರೋಚ್ ಜನತಾ ಪಾರ್ಟಿ, ಜೂನ್ 14 ರಂದು ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಿದೆ. ಆದರೆ, ಈ ಪ್ರತಿಭಟನೆಗೆ ಪಕ್ಷದ ವಕ್ತಾರ ಸೌರವ್ ದಾಸ್ ಅವರು ತಮಿಳಿನಲ್ಲಿ ಆಹ್ವಾನ ನೀಡಿರುವುದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

08:00 AM (IST) Jun 13

ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳವಾಗಿದ್ರೂ ನಾಳೆ ಈ ಕಾರಣಕ್ಕೆ ಮುಂಬೈನಲ್ಲಿ ಮಾತ್ರ ಇಳಿಕೆ ಆಗುತ್ತೆ!

ಇರಾನ್ ಬಿಕ್ಕಟ್ಟಿನಿಂದಾಗಿ ಭಾರತದಲ್ಲಿ ಇಂಧನ ಬೆಲೆಗಳು ಏರುತ್ತಿವೆ. ಈ ಹಿನ್ನೆಲೆಯಲ್ಲಿ, ಸರ್ಕಾರವು ಕೈಗಾರಿಕಾ ಮತ್ತು ವಾಣಿಜ್ಯ ಬಳಕೆದಾರರು ಪೆಟ್ರೋಲ್ ಪಂಪ್‌ಗಳಿಂದ ಇಂಧನ ಖರೀದಿಸುವುದನ್ನು 90 ದಿನಗಳವರೆಗೆ ನಿಷೇಧಿಸಿ, ಪ್ರತಿ ವಾಹನಕ್ಕೆ ಖರೀದಿ ಮಿತಿಯನ್ನು ವಿಧಿಸಿದೆ.
Read Full Story

07:37 AM (IST) Jun 13

ಇದೊಂದು ಮಾರಕ ಕ್ರಮ, ಒಪ್ಪಿಕೊಳ್ಳೋಕೆ ಸಾಧ್ಯವೇ ಇಲ್ಲ - ಅಮೆರಿಕಕ್ಕೆ ಜೈಶಂಕರ್ ಎಚ್ಚರಿಕೆ

ಒಮಾನ್ ಕೊಲ್ಲಿಯಲ್ಲಿ ಅಮೆರಿಕ ನೌಕಾಪಡೆಯ ದಾಳಿಯಿಂದ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ತೀವ್ರವಾಗಿ ಖಂಡಿಸಿದ್ದಾರೆ. ವಾಣಿಜ್ಯ ಹಡಗುಗಳ ಮೇಲಿನ ಇಂತಹ ಮಾರಕ ಕ್ರಮಗಳು ಸಮರ್ಥನೀಯವಲ್ಲ ಎಂದು ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರಿಗೆ ತಿಳಿಸಿದ್ದಾರೆ.
Read Full Story

07:23 AM (IST) Jun 13

Diesel sale limits - ಕೇಂದ್ರ ಸರ್ಕಾರದಿಂದ ಡೀಸೆಲ್‌ ಖರೀದಿಗೆ ಹೊಸ ಮಿತಿ! ಪ್ರತಿ ವಾಹನಕ್ಕೆ ಇಷ್ಟೇ ಡೀಸೆಲ್ ಸಿಗೋದು!

ಕೇಂದ್ರ ಸರ್ಕಾರವು ಪ್ರತಿ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಖರೀದಿ ಮಿತಿಯನ್ನು ವಿಧಿಸಿದೆ. ಅಲ್ಲದೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಪೆಟ್ರೋಲ್ ಬಂಕ್‌ಗಳಲ್ಲಿ ಸಗಟು ಇಂಧನ ಖರೀದಿಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಕಾರಣವೇನು ತಿಳಿಯಿರಿ.

Read Full Story

More Trending News