ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಪ್ರಬಲ ಪಕ್ಷವಾಗಿ ಬೆಳೆದು 15 ವರ್ಷ ಅಧಿಕಾರ ನಡೆಸಿದ ಟಿಎಂಸಿ ಇಬ್ಭಾಗವಾಗುವ ಅಂಚಿನಲ್ಲಿರುವ ಹೊತ್ತಿನಲ್ಲಿ, ಅದರ ಯಾವ ಬಣವನ್ನು ಅಸಲಿಯೆಂದು ಗುರುತಿಸಲಾಗುವುದು ಹಾಗೂ ಆಸ್ತಿಯು ಯಾರ ಪಾಲಾಗುತ್ತದೆ ಎಂಬ ಪ್ರಶ್ನೆ ಎದ್ದಿದೆ.
2025ರಲ್ಲಿ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವ ವೇಳೆ, 2024-25ರಲ್ಲಿ ತನ್ನ ಆದಾಯ 219.35 ಕೋಟಿ ರು. ಎಂದು ಟಿಎಂಸಿ ಘೋಷಿಸಿತ್ತು. ಇದರಲ್ಲಿ 184.08 ಕೋಟಿ ರು. ದೇಣಿಗೆ, 33.685 ಕೋಟಿ ರು. ಎಫ್ಡಿಯ ಬಡ್ಡಿ ಆಗಿದೆ. ಚುನಾವಣಾ ಬಾಂಡ್ಗಳು ರದ್ದಾಗುವ ಮುನ್ನ 2029-24ರ ನಡುವೆ ಅವುಗಳ ಮೂಲಕ ಟಿಎಂಸಿ 1,609.5 ಕೋಟಿ ರು. ಸಂಗ್ರಹಿಸಿತ್ತು. 2025-26ನೇ ಸಾಲಿನ ಗಳಿಕೆ ಘೋಷಣೆಯಾಗಿಲ್ಲವಾದರೂ, ಎಡಿಆರ್ ವರದಿಯಲ್ಲಿ, ದೇಶದಲ್ಲಿರುವ 36 ಪ್ರಾದೇಶಿಕ ಪಕ್ಷಗಳ ಪೈಕಿ ಟಿಡಿಪಿಯ ಬಳಿಕ ಅತಿಹೆಚ್ಚು ಆಸ್ತಿ ಇರುವುದು ಟಿಎಂಸಿಯ ಬಳಿ ಎನ್ನಲಾಗಿತ್ತು.
ಪಕ್ಷವು ಅಧಿಕೃತವಾಗಿ 2 ಭಾಗವಾದರೆ, ಯಾವುದಾದರೂ ಒಂದು ಬಣಕ್ಕೆ ಚುನಾವಣಾ ಆಯೋಗವು 2 ಹೂಗಳ ಚಿಹ್ನೆಯನ್ನು ನೀಡುತ್ತದೆ. ಆಗ ಪಕ್ಷದ ಪೂರ್ಣ ಆಸ್ತಿ ಆ ಬಣಕ್ಕೇ ಸೇರುತ್ತದೆ. ಒಂದೊಮ್ಮೆ ಬಂಡಾಯವೆದ್ದವರ ಬಣವೇ ಅಸಲಿ ಟಿಎಂಸಿ ಎಂದು ಗುರುತಿಸಲ್ಪಟ್ಟು, ಅದು ಮುಂದೆ ಬಿಜೆಪಿ ಜತೆ ವಿಲೀನವಾದರೆ, ಟಿಎಂಸಿಯ ನಿಧಿಯೂ ಬಿಜೆಪಿ ಪಾಲಾಗುತ್ತದೆ.
11:14 PM (IST) Jun 13
ನಟ ನಾನಿ ಕೇವಲ ಅಭಿನಯಕ್ಕಷ್ಟೇ ಸೀಮಿತವಾಗದೆ, 'ವಾಲ್ ಪೋಸ್ಟರ್ ಸಿನಿಮಾ' (Wall Poster Cinema) ಎಂಬ ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ವಿಭಿನ್ನ ಕಥೆಗಳಿಗೆ ಜೀವ ನೀಡುತ್ತಿದ್ದಾರೆ. ಇದೀಗ ಹೊಸ ಸಿನಿಮಾಗೆ ಕನ್ನಡದ ನಟಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
10:39 PM (IST) Jun 13
Fertilizer Crisis Karnataka: ಕರ್ನಾಟಕದಲ್ಲಿ ರಸಗೊಬ್ಬರ ಕೊರತೆ ಇಲ್ಲ. ಕೇಂದ್ರ ಸರ್ಕಾರ ಅಗತ್ಯಕ್ಕಿಂತ ಹೆಚ್ಚು ಗೊಬ್ಬರ ಪೂರೈಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
09:51 PM (IST) Jun 13
ಫ್ರಾನ್ಸ್ನಲ್ಲಿ ನಡೆಯಲಿರುವ ಜಿ7 (G7) ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಜೂನ್ 17 ರಂದು ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ.
08:34 PM (IST) Jun 13
ರಜನಿಕಾಂತ್ ಅವರ ಪತ್ನಿ ಲತಾ ಅವರು ‘ಮಕ್ಕಳ್ ಮಂದಿರಂ’ ಎಂಬ ಸಂಘಟನೆ ಆರಂಭಿಸಿದಾಗ, ರಜನಿ ಅವರು ಮತ್ತೆ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಹರಿದಾಡಿದ್ದವು. ಈ ಎಲ್ಲಾ ಬೆಳವಣಿಗೆಗಳು ರಜನಿಕಾಂತ್ ಅವರ ಆರೋಗ್ಯ ಮತ್ತು ಅವರ ವೈಯಕ್ತಿಕ ಶಾಂತಿಗೆ ಧಕ್ಕೆ ತರುತ್ತಿವೆ. ಇದೀಗ ಈ ಸುದ್ದಿ ಬಂದಿದೆ!
08:21 PM (IST) Jun 13
ಮಹಿಳೆಯೊಬ್ಬಳು ನ್ಯಾಯಾಧೀಶರ ಕುರ್ಚಿಯ ಮೇಲೆ ಕುಳಿತು ತಾನೇ ಜಡ್ಜ್ ಎಂದು ಘೋಷಿಸಿಕೊಂಡು 'ಆರ್ಡರ್ ಆರ್ಡರ್' ಎಂದು ಕೂಗಿದಳು. ಸುಮಾರು ಒಂದು ಗಂಟೆ ಕಾಲ ನಡೆದ ಈ ನಾಟಕದ ನಂತರ, ಆಕೆ ಮಾನಸಿಕವಾಗಿ ಅಸ್ವಸ್ಥಳೆಂದು ತಿಳಿದುಬಂದಿದ್ದು, ಭದ್ರತಾ ಸಿಬ್ಬಂದಿ ಆಕೆಯನ್ನು ಕುಟುಂಬಕ್ಕೆ ಒಪ್ಪಿಸಿದ್ದಾರೆ.
08:05 PM (IST) Jun 13
ರಹೆಮಾನುಲ್ಲಾ ಗುರ್ಬಾಜ್ ಸಿಡಿಸಿದ ಶತಕದ ನೆರವಿನಿಂದ ಆಫ್ಘಾನಿಸ್ತಾನ 194 ರನ್ ಸಿಡಿಸಿದೆ. ಮಳೆಯಿಂದ 25 ಓವರ್ಗೆ ಸೀಮಿತಗೊಂಡ ಈ ಪಂದ್ಯದಲ್ಲಿ ಇದೀಗ ಭಾರತ 195 ರನ್ ಟಾರ್ಗೆಟ್ ಚೇಸ್ ಮಾಡಬೇಕಿದೆ.
07:50 PM (IST) Jun 13
Jagapathi Babu ತಮ್ಮ ಪತ್ನಿ ಯಾಕೆ ಸಾರ್ವಜನಿಕವಾಗಿ ತನ್ನ ಜೊತೆ ಕಾಣಿಸಿಕೊಳ್ಳುವುದಿಲ್ಲ ಎಂಬ ಕಾರಣವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ 3 ಕೋಟಿಗೆ ಮನೆ ಮಾರಿದ ಭಾವನಾತ್ಮಕ ಘಟನೆಯನ್ನೂ ನೆನಪಿಸಿಕೊಂಡಿದ್ದಾರೆ.
07:32 PM (IST) Jun 13
KGF 2 Movie Actress Mouni Roy: ನಾಗಿನ್ ಧಾರಾವಾಹಿ ಮೂಲಕ ದೇಶದಲ್ಲಿ ಹೆಸರು ಮಾಡಿರುವ ಮೌನಿ ರಾಯ್ ಅವರು ಕೆಜಿಎಫ್ ಭಾಗ 1 ರಲ್ಲಿ ಡ್ಯಾನ್ಸ್ ಕೂಡ ಮಾಡಿದ್ದರು. ಇವರ ಡಿವೋರ್ಸ್ ವಿಷಯ ದೊಡ್ಡ ಚರ್ಚೆಯನ್ನುಂಟು ಮಾಡಿತ್ತು. ಈಗ ಇವರು ನಾನು ಸಲಿಂಗಕಾಮಿ ಅಲ್ಲ ಎಂದು ಹೇಳಿದ್ದಾರೆ.
07:31 PM (IST) Jun 13
ವದಂತಿಗಳಿಗೆ ಬ್ರೇಕ್ ಹಾಕಿದ ‘ಕ್ಯಾಟ್’: ಅನುಷ್ಕಾ ಹಾದಿ ಹಿಡಿಯಲ್ಲ ಎಂದ ನಟಿ!
ಯಾವುದೇ ಒಬ್ಬ ಸ್ಟಾರ್ ನಟಿ ಮದುವೆಯಾದ ತಕ್ಷಣ ಸಿನಿಪ್ರಿಯರಲ್ಲಿ ಮೂಡುವ ಮೊದಲ ಪ್ರಶ್ನೆ ‘ಇವರು ಇನ್ನು ನಟಿಸುತ್ತಾರಾ?’. ಅದರಲ್ಲೂ ಕತ್ರಿನಾ ಬಗ್ಗೆ ಬಿ-ಟೌನ್ನಲ್ಲಿ ನಾನಾ ರೀತಿಯ ಚರ್ಚೆಗಳು ಶುರುವಾಗಿದ್ದವು. ಆದರೆ ಈಗ ನೋಡಿ.!
07:26 PM (IST) Jun 13
Best Villain: ಕೆಲವು ಸಿನಿಮಾಗಳಲ್ಲಿ ಹೀರೋಗಳಿಗಿಂತ ವಿಲನ್ಗಳ ಪಾತ್ರವೇ ಹೆಚ್ಚು ಪ್ರಬಲವಾಗಿರುತ್ತದೆ. ಅಂತಹ ಖಳನಾಯಕರ ಪಾತ್ರಗಳಿಂದಲೇ ಗೆದ್ದ ಟಾಲಿವುಡ್ನ ಕೆಲವು ಪ್ರಮುಖ ಚಿತ್ರಗಳ ಬಗ್ಗೆ ಈ ಗ್ಯಾಲರಿಯಲ್ಲಿ ನೋಡೋಣ.
07:08 PM (IST) Jun 13
Top 10 brilliant money saving tips: ಸಿಟಿಗಳಲ್ಲಿ ಹಣ ಉಳಿಸೋದು ಟಾಸ್ಕ್ ಆಗಿದೆ. ಬಾಡಿಗೆ ಮನೆ-ಊಟ ತಿಂಡಿ, ಬಟ್ಟೆ ಮುಂತಾದ ವಿಷಯಕ್ಕೆ ಹಣ ಖಾಲಿ ಆಗುತ್ತದೆ. ಯುವ ಜನತೆ ಹಣ ಉಳಿಸೋಕೆ ಆಗದೆ ಒದ್ದಾಡೋದುಂಟು. ಬೆಂಗಳೂರಿನ ಈ ವ್ಯಕ್ತಿ ಈ 7 ನಿಯಮ ಪಾಲಿಸಿ ಹಣ ಉಳಿತಾಯ ಮಾಡಿದ್ದಾರೆ.
06:15 PM (IST) Jun 13
ಸದ್ಯ ತಮಿಳುನಾಡಿಗೆ ದೊರೆ ಆಗಿರುವ ದಳಪತಿ ವಿಜಯ್ ಅವರಿಗೆ, ವೈಯಕ್ತಿಕ ಬದುಕಿನಲ್ಲಿ ಜೂನ್ 15ರ ದಿನಾಂಕ ಅತಿದೊಡ್ಡ ಸವಾಲಾಗಿದೆ. ಅಂದು ಪತ್ನಿ ಜೊತೆಗಿನ ಸಮಸ್ಯೆ ಸುಖಾಂತ್ಯವಾಗುತ್ತಾ ಅಥವಾ ವಿಜಯ್-ಸಂಗೀತ ಹಾದಿ ಬೇರೆ ಬೇರೆಯಾಗುತ್ತಾ? ಕಾದು ನೋಡಬೇಕಿದೆ.
04:42 PM (IST) Jun 13
Disha Patani Income: ನಟಿ ದಿಶಾ ಪಟಾನಿಗೆ ಈಗ 34 ವರ್ಷ. ಕೇವಲ 500 ರೂಪಾಯಿ ಇಟ್ಟುಕೊಂಡು ಮುಂಬೈಗೆ ಬಂದಿದ್ದ ಅವರು, ಇಂದು 75 ಕೋಟಿ ರೂಪಾಯಿ ಆಸ್ತಿಯ ಒಡತಿ. ಸಿನಿಮಾ, ಬ್ರ್ಯಾಂಡ್ ಎಂಡಾರ್ಸ್ಮೆಂಟ್, ಬ್ಯುಸಿನೆಸ್ ಮೂಲಕ ಕೋಟಿ ಕೋಟಿ ಸಂಪಾದನೆ ಮಾಡುತ್ತಿದ್ದಾರೆ.
03:39 PM (IST) Jun 13
03:38 PM (IST) Jun 13
02:23 PM (IST) Jun 13
01:40 PM (IST) Jun 13
ಆರ್ಥಿಕ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ(Mamata Banerjee) ಅವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ(Abhishekh banerjee) ಅವರ ಕೊಲ್ಕತ್ತಾ ನಿವಾಸದ ಮೇಲೆ ಪೊಲೀಸರು ಮತ್ತು ಕೇಂದ್ರ ಪಡೆಗಳು ಜಂಟಿಯಾಗಿ ಶೋಧ ಕಾರ್ಯ ನಡೆಸಿವೆ.
01:18 PM (IST) Jun 13
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಭಾರತದ ಪ್ರಚಂಡ ಆರ್ಥಿಕ ಸಾಮರ್ಥ್ಯವನ್ನು ವಿವರಿಸಿದ್ದಾರೆ. ದೇಶವು ಒಂದೇ ದಿನದಲ್ಲಿ ತನ್ನ ವಿದೇಶಿ ಸಾಲದ ಬಹುಪಾಲು ಮರುಪಾವತಿಸುವ ಶಕ್ತಿಯನ್ನು ಹೊಂದಿದ್ದು, ಶೇ. 7.7ರಷ್ಟು ಜಿಡಿಪಿ ಬೆಳವಣಿಗೆಯೊಂದಿಗೆ ಆರ್ಥಿಕ ಮಂದಗತಿಯ ಆತಂಕಗಳನ್ನು ದೂರಮಾಡಿದೆ.
12:19 PM (IST) Jun 13
Ashirwad Sooryavanshi Smashes Century: ವೈಭವ್ ಸೂರ್ಯವಂಶಿ ಹೆಸರು ಯಾರಿಗೆ ಗೊತ್ತಿಲ್ಲ ಹೇಳಿ? ಐಪಿಎಲ್ನಲ್ಲಿ ವಿಸ್ಪೋಟಕ ಬ್ಯಾಟಿಂಗ್ ನಡೆಸುವ ಮೂಲಕ ಇದೀಗ ಭಾರತ ತಂಡಕ್ಕೆ ವೈಭವ್ ಸೂರ್ಯವಂಶಿ ಆಯ್ಕೆಯಾಗಿದ್ದಾರೆ. ಇದರ ನಡುವೆ ವೈಭವ್ ಸೂರ್ಯವಂಶಿ ತಮ್ಮ ಸ್ಪೋಟಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ.
11:49 AM (IST) Jun 13
11:01 AM (IST) Jun 13
Why is there no row 13 on planes: ನೀವು ಎಂದಾದರೂ ವಿಮಾನದಲ್ಲಿನ ಸೀಟುಗಳನ್ನು ಗಮನಿಸಿದ್ದೀರಾ? ಅಲ್ಲಿ 13ನೇ ನಂಬರ್ ಸೀಟು ಕಾಣಿಸುವುದಿಲ್ಲ. 12ರ ನಂತರ ನೇರವಾಗಿ 14ನೇ ನಂಬರ್ ಇರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ? 13ನೇ ಸಂಖ್ಯೆಯನ್ನು ಯಾಕೆ ಕೈಬಿಡಲಾಗಿದೆ?
10:49 AM (IST) Jun 13
Salman Khan And Aishwarya Rai Breakup Reason: ಸಲ್ಮಾನ್ ಖಾನ್ ಜೊತೆಗಿನ ತಮ್ಮ ಹಳೆಯ ಸಂಬಂಧ, ಬ್ರೇಕಪ್ ಬಗ್ಗೆ ಐಶ್ವರ್ಯಾ ರೈ ಹಲವು ವರ್ಷಗಳ ಹಿಂದೆ ನೀಡಿದ್ದ ಹೇಳಿಕೆಯೊಂದು ಈಗ ಮತ್ತೆ ವೈರಲ್ ಆಗಿದೆ. 'ನನ್ನೊಳಗಿನ ರಾಕ್ಷಸರನ್ನು ನಾನು ಹೊರಹಾಕಿದ್ದೇನೆ' ಎಂದು ಅವರು ಅಂದು ಏಕೆ ಹೇಳಿದ್ದರು?
10:42 AM (IST) Jun 13
ಪ್ರಶಾಂತ್ ಮಹಾಸಾಗರದಲ್ಲಿ 'ಎಲ್ ನಿನೋ' ಹವಾಮಾನ ವ್ಯವಸ್ಥೆಯು ಅಧಿಕೃತವಾಗಿ ಸಕ್ರಿಯಗೊಂಡಿದ್ದು, ಇದು ಭಾರತದ ನೈಋತ್ಯ ಮುಂಗಾರು ಮಾರುತಗಳ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಲಿದೆ. ಈ ವಿದ್ಯಮಾನದಿಂದಾಗಿ ದೇಶದ ಹಲವು ಭಾಗಗಳಲ್ಲಿ ಬರಗಾಲದ ಭೀತಿ ಎದುರಾಗಲಿದೆ.
10:14 AM (IST) Jun 13
ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2024-25ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಹಿರಿಯ ನಿರ್ದೇಶಕ ಟಿ.ಎಸ್.ನಾಗಾಭರಣ ಅವರೊಂದಿಗೆ ಸಂಸದ ತೇಜಸ್ವಿ ಸೂರ್ಯ ಅವರ ಪತ್ನಿ ಶಿವಶ್ರೀ ಸ್ಕಂದ ಪ್ರಸಾದ್, ಐವರು ಯುವ ಕಲಾವಿದರು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
09:51 AM (IST) Jun 13
09:02 AM (IST) Jun 13
08:37 AM (IST) Jun 13
08:25 AM (IST) Jun 13
08:14 AM (IST) Jun 13
08:00 AM (IST) Jun 13
07:37 AM (IST) Jun 13
07:23 AM (IST) Jun 13
ಕೇಂದ್ರ ಸರ್ಕಾರವು ಪ್ರತಿ ವಾಹನಕ್ಕೆ ದಿನಕ್ಕೆ ಗರಿಷ್ಠ 200 ಲೀಟರ್ ಡೀಸೆಲ್ ಖರೀದಿ ಮಿತಿಯನ್ನು ವಿಧಿಸಿದೆ. ಅಲ್ಲದೆ, ಕೈಗಾರಿಕೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಪೆಟ್ರೋಲ್ ಬಂಕ್ಗಳಲ್ಲಿ ಸಗಟು ಇಂಧನ ಖರೀದಿಸುವುದನ್ನು ನಿಷೇಧಿಸಲಾಗಿದೆ. ಇದಕ್ಕೆ ಕಾರಣವೇನು ತಿಳಿಯಿರಿ.