ಝಾನ್ಸಿ: ಹೋಳಿ ಹಬ್ಬದ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಎಲ್ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್ ಅನ್ನೇ ಕದ್ದೊಯ್ದ 7 ಜನ ಖದೀಮರನ್ನು ಉತ್ತರ ಪ್ರದೇಶದ ಝಾನ್ಸಿ ಪೊಲೀಸರು ಬುಧವಾರ ಸೆರೆ ಹಿಡಿದಿದ್ದಾರೆ.
ಜಾವೇದ್, ಆಮಿರ್, ರಿತಿಕ್, ಸುಮಿತ್, ಶುಭಂಕರ್, ಅಭಿಷೇಕ್ ಮತ್ತು ಸುರೇಂದ್ರ ಬಂಧಿತರು. ಕದ್ದ ಸಿಲಿಂಡರ್ ಮಾರಾಟದಿಂದ ಬಂದ ಹಣ ಎನ್ನಲಾದ 83,820 ರು. ಸೇರಿದಂತೆ ಒಟ್ಟು 11.10 ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾ.2ರಂದು ಚಾಲಕ ರಾಜಕುಮಾರ್ ಎಂಬುವವರು 389 ತುಂಬಿದ ಹಾಗೂ 135 ಖಾಲಿ ಸಿಲಿಂಡರ್ಗಳಿದ್ದ ಟ್ರಕ್ ಅನ್ನು ಸಿಪ್ರಿ ಬಜಾರ್ನ ಭಾರತ್ ಪೆಟ್ರೋಲಿಯಂ ಡಿಪೊ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದರು. ಮಾ.6ರಂದು ಮರಳಿ ಬಂದಾಗ ಟ್ರಕ್ ಕಾಣೆಯಾಗಿದೆ. ಬಳಿಕ ಟ್ರಕ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಹುಡುಕಾಟ ನಡೆಸಿದಾಗ ಜಿಪಿಎಸ್ ಹಾನಿಗೊಳಗಾದ ಟ್ರಕ್ ಬಾರಾಗಾಂ ಬಳಿ ಸಿಕ್ಕಿದೆ. ಖದೀಮರು 13 ಲಕ್ಷ ರು.ಗಳಿಗೆ ಗ್ಯಾಸ್ ಏಜನ್ಸಿಯೊಂದರ ಜೊತೆ ಡೀಲ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಏಳೂ ಜನರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
11:08 PM (IST) Mar 12
ಎಷ್ಟೇ ದೊಡ್ಡ ಹೀರೋ ಆದ್ರೂ ಅವರಿಗಂತ ಒಂದು ಕನಸಿನ ಪಾತ್ರ ಇದ್ದೇ ಇರುತ್ತೆ. ಸೂಪರ್ಸ್ಟಾರ್ ಮಹೇಶ್ ಬಾಬು ಅವರಿಗೂ ಅಂತಹದ್ದೇ ಒಂದು ಡ್ರೀಮ್ ರೋಲ್ ಇದೆಯಂತೆ. ಆದರೆ ಆ ಪಾತ್ರ ಮಾಡೋದು ದೊಡ್ಡ ಸಾಹಸವೇ ಸರಿ. ಹಾಗಾದ್ರೆ ಮಹೇಶ್ ಆ ಪಾತ್ರ ಮಾಡ್ತಾರಾ? ಇದರಲ್ಲಿ ನಿಜವೆಷ್ಟು?
10:54 PM (IST) Mar 12
ಇಂಗ್ಲೆಂಡ್ನ 'ದ ಹಂಡ್ರೆಡ್' ಕ್ರಿಕೆಟ್ ಟೂರ್ನಿಯಲ್ಲಿ ಕಾವ್ಯಾ ಮಾರನ್ ಮಾಲೀಕತ್ವದ 'ಸನ್ರೈಸರ್ಸ್ ಲೀಡ್ಸ್' ತಂಡವು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ ಅವರನ್ನು 2.34 ಕೋಟಿ ರೂ. ನೀಡಿ ಖರೀದಿಸಿದೆ. ಭಾರತ-ಪಾಕ್ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ನಡೆದ ಈ ಖರೀದಿಯು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
10:42 PM (IST) Mar 12
09:50 PM (IST) Mar 12
ಮಹಾಕುಂಭಮೇಳದಲ್ಲಿ ವೈರಲ್ ಆಗಿದ್ದ 'ಕುಂಭ ಮೇಳದ ಹುಡುಗಿ' ಖ್ಯಾತಿಯ ಮೊನಾಲಿಸಾ, ಮುಸ್ಲಿಂ ಯುವಕನನ್ನು ಕೇರಳದಲ್ಲಿ ಮದುವೆಯಾದ ವಿಚಾರ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಹಾಗಿದ್ದರೆ ಮೊನಲಿಸಾ ಮದುವೆಯಾದ ಫರ್ಮಾನ್ ಖಾನ್ ಯಾರು ಆತ ಮಾಡ್ತಿರೋದೇನು ಆತನ ಊರು ಯಾವುದು ಇಲ್ಲಿದೆ ಡಿಟೇಲ್ ಸ್ಟೋರಿ...
08:47 PM (IST) Mar 12
ಐಪಿಎಲ್ 2026 ಆರಂಭಕ್ಕೂ ಮುನ್ನ, ಬಿಸಿಸಿಐ ತಂಡಗಳ ತರಬೇತಿಗಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ನಿಯಮದ ಪ್ರಕಾರ, ಒಂದು ತಂಡ ಬಳಸಿದ ಅಭ್ಯಾಸದ ಪಿಚ್ ಅನ್ನು ಮತ್ತೊಂದು ತಂಡ ಬಳಸುವಂತಿಲ್ಲ ಮತ್ತು ಮುಖ್ಯ ಮೈದಾನದಲ್ಲಿ ಅಭ್ಯಾಸ ಪಂದ್ಯಗಳನ್ನು ಆಡುವುದನ್ನು ನಿಷೇಧಿಸಲಾಗಿದೆ.
08:28 PM (IST) Mar 12
07:17 PM (IST) Mar 12
ಇರಾನ್ನ ನೂತನ ಸರ್ವೋಚ್ಚ ನಾಯಕ ಆಯತೊಲ್ಲಾ ಮೊಜ್ತಾಬಾ ಖಮೇನಿ, ಮಧ್ಯಪ್ರಾಚ್ಯದಲ್ಲಿರುವ ಎಲ್ಲಾ ಅಮೆರಿಕದ ಮಿಲಿಟರಿ ನೆಲೆಗಳನ್ನು ಮುಚ್ಚುವಂತೆ ಇಲ್ಲದಿದ್ದರೆ ಭೀಕರ ದಾಳಿ ನಡೆಸುವುದಾಗಿ ಎಚ್ಚರಿಸಿದ್ದಾರೆ. ತಂದೆಯ ಸಾವಿಗೆ ಕಾರಣವಾದ ವೈಮಾನಿಕ ದಾಳಿಯಲ್ಲಿ ಇವರು ಗಾಯಗೊಂಡಿದ್ದರು.
07:11 PM (IST) Mar 12
06:52 PM (IST) Mar 12
ನಟಿ ಹನ್ಸಿಕಾ ಮೋಟ್ವಾನಿ ತಮ್ಮ ಪತಿ ಸೋಹೈಲ್ ಖತುರಿಯಾ ಅವರಿಂದ ವಿಚ್ಛೇದನ ಪಡೆದಿದ್ದಾರೆ. ನಾಲ್ಕು ವರ್ಷಗಳ ದಾಂಪತ್ಯ ಜೀವನಕ್ಕೆ ಈ ಜೋಡಿ ಅಂತ್ಯ ಹಾಡಿದೆ. ಸಿನಿಮಾಗಳಲ್ಲಿ ಹಿಟ್ ಮತ್ತು ಫ್ಲಾಪ್ಗಳಂತೆ, ಹನ್ಸಿಕಾ ಅವರ ನಿಜ ಜೀವನದಲ್ಲೂ ಹಲವು ಏರಿಳಿತಗಳು, ಪ್ರೇಮ ಪ್ರಕರಣಗಳು ಮತ್ತು ಬ್ರೇಕಪ್ಗಳಿವೆ.
06:34 PM (IST) Mar 12
06:32 PM (IST) Mar 12
ಖ್ಯಾತ ನಿರ್ಮಾಪಕರೊಬ್ಬರು ಪ್ರಭಾಸ್ ಅವರ ಫ್ಲಾಪ್ ಸಿನಿಮಾದ ಬಗ್ಗೆ ಇಂಟ್ರೆಸ್ಟಿಂಗ್ ಕಾಮೆಂಟ್ ಮಾಡಿದ್ದಾರೆ. ಎಡಿಟಿಂಗ್ ರೂಮ್ನಲ್ಲೇ ಈ ಸಿನಿಮಾ ಫ್ಲಾಪ್ ಆಗುತ್ತೆ ಅಂತ ತಮಗೆ ಗೊತ್ತಾಗಿತ್ತು ಎಂದು ಅವರು ಹೇಳಿದ್ದಾರೆ. ಹಾಗಿದ್ರೆ ಆ ಸಿನಿಮಾ ಯಾವುದು? ಇಲ್ಲಿದೆ ವಿವರ.
06:29 PM (IST) Mar 12
06:08 PM (IST) Mar 12
ಸಿನಿಮಾಗಾಗಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಟಾಲಿವುಡ್ ಯಂಗ್ ಸ್ಟಾರ್ ಜೂ.ಎನ್ಟಿಆರ್ ಹಿಂದೆ ಸರಿಯಲ್ಲ. ಅವರು ತಮ್ಮ ವೃತ್ತಿಜೀವನದಲ್ಲಿ ಇಂತಹ ಅನೇಕ ಸಾಹಸಗಳನ್ನು ಮಾಡಿದ್ದಾರೆ. ಇದೀಗ ಮತ್ತೊಮ್ಮೆ ದೊಡ್ಡ ಮಟ್ಟದಲ್ಲಿ ತೂಕ ಇಳಿಸಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ.
05:50 PM (IST) Mar 12
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಈಗಿನಿಂದಲೇ ತಮ್ಮ ಉತ್ತರಾಧಿಕಾರಿಯನ್ನು ಸಿದ್ಧಪಡಿಸುತ್ತಿದ್ದಾರೆ. ಇದಕ್ಕಾಗಿ ಮಗ ಅಲ್ಲು ಅಯಾನ್ಗೆ ಕಠಿಣ ತರಬೇತಿಯನ್ನೂ ಶುರು ಮಾಡಿದ್ದಾರೆ. ಅಷ್ಟಕ್ಕೂ ಅಯಾನ್ ಏನು ಮಾಡುತ್ತಿದ್ದಾನೆ ಗೊತ್ತಾ?
05:22 PM (IST) Mar 12
ಶಿವಕಾರ್ತಿಕೇಯನ್ ನಿರ್ಮಾಣದಲ್ಲಿ, ರಾಧಿಕಾ ನಟನೆಯ 'ತಾಯಿ ಕಿಳವಿ' ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದ ಲಾಭದಲ್ಲಿ ಪಾಲು ಪಡೆದ ಮೊದಲ ನಟಿ ಎಂಬ ಹೆಗ್ಗಳಿಕೆಗೆ ರಾಧಿಕಾ ಪಾತ್ರರಾಗಿದ್ದಾರೆ.
04:58 PM (IST) Mar 12
ತನ್ನ ಮೊದಲ ಸಿನಿಮಾ 'ತಮಿಳನ್' ಶೂಟಿಂಗ್ ವೇಳೆ ಸಹನಟ ವಿಜಯ್ರನ್ನು ನೋಡಲು ಸೇರುತ್ತಿದ್ದ ನೂರಾರು ಅಭಿಮಾನಿಗಳನ್ನು ಕಂಡು ತಾನು ಬೆರಗಾಗಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದಾರೆ.
04:54 PM (IST) Mar 12
ಬಾಲ ನಟನಾಗಿ ಮಿಂಚಿದ್ದ 27ಹರೆಯದ ಸಿನಿಮಾ ನಟ ಹರಿ ಮುರಳಿ ಶವವಾಗಿ ಪತ್ತೆ, ಪೋಷಕರು ಕಂಗಾಲಾಗಿದ್ದಾರೆ. 15 ಸಿನಿಮಾದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಹರಿ ಮುರಳಿ ದಿಢೀರ್ ಸಾವು ಚಿತ್ರರಂಗಕ್ಕೆ ಮತ್ತೊಂದು ಆಘಾತ ನೀಡಿದೆ.
04:48 PM (IST) Mar 12
ಗಂಡು ಜಿರಾಫೆಗಳು ಹೆಣ್ಣಿನೊಂದಿಗೆ ಸರಸವಾಡಲು ವಿಶಿಷ್ಟ ವಿಧಾನವನ್ನು ಅನುಸರಿಸುತ್ತವೆ. ಸಂಭೋ*ಗಕ್ಕೆ ಮುನ್ನ, ಹೆಣ್ಣು ಗರ್ಭಧರಿಸಲು ಅರ್ಹಳೇ ಎಂಬುದನ್ನು ಅದರ ಮೂತ್ರವನ್ನು ಕುಡಿದು ಪರೀಕ್ಷಿಸುತ್ತವೆ ಮತ್ತು ಹೆಣ್ಣಿನ ಒಪ್ಪಿಗೆಯನ್ನು ಪಡೆದೇ ಮುಂದಿನ ಕಾರ್ಯಕ್ಕೆ ಮುಂದಾಗುತ್ತವೆ.
04:33 PM (IST) Mar 12
ಬಾಲಿವುಡ್ ನಟ ರಣವೀರ್ ಸಿಂಗ್ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಧುರಂಧರ್ 2' ಸಿನಿಮಾ ಥಿಯೇಟರ್ಗೆ ಬರುವ ಮೊದಲೇ ಅದರ ಓಟಿಟಿ ಸ್ಟ್ರೀಮಿಂಗ್ ದಿನಾಂಕದ ಬಗ್ಗೆ ವರದಿಯಾಗಿದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
03:53 PM (IST) Mar 12
ಲವ್ ಜಿಹಾದ್ ಅಲ್ಲ, ಹಿಂದೂ ಸಂಪ್ರದಾಯದಂತೆ ಮದುವೆ, ಆರೋಪದ ಬೆನ್ನಲ್ಲೇ ಮೊನಾಲಿಸಾ ಸ್ಪಷ್ಟನೆ, ಭಾರಿ ಕೋಲಾಹಲ ಸೃಷ್ಟಿಸಿರುವ ಕುಂಭಮೇಳದ ವೈರಲ್ ಹುಡುಗಿಯ ಮದುವೆಗೆ ಇದೀಗ ಉತ್ತರ ಹೊರಬಿದ್ದಿದೆ.
03:48 PM (IST) Mar 12
ಇರಾನ್-ಅಮೆರಿಕ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಅಧ್ಯಕ್ಷರು ಮೂರು ಪ್ರಮುಖ ಷರತ್ತುಗಳನ್ನು ಮುಂದಿಟ್ಟಿದ್ದಾರೆ. ಈ ನಡುವೆ, ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆದಿದ್ದು, ಜಾಗತಿಕ ತೈಲ ಮಾರುಕಟ್ಟೆಯ ಸ್ಥಿರತೆಗಾಗಿ ಅಂತರಾಷ್ಟ್ರೀಯ ಇಂಧನ ಸಂಸ್ಥೆ ಮಧ್ಯಪ್ರವೇಶಿಸಿದೆ.
03:40 PM (IST) Mar 12
03:00 PM (IST) Mar 12
ಮಹಿಳಾ ಉದ್ಯೋಗಿಗೆ ಆಲುಗಡ್ಡೆ ಎಂದು ಅವಮಾನಿಸಿದ ಬಾಸ್, 29 ಲಕ್ಷ ರೂ ಪರಿಹಾರಕ್ಕೆ ಕೋರ್ಟ್ ಆದೇಶ ನೀಡಿದೆ. ಕೋರ್ಟ್ ಬಳಿ ಪರಿಪರಿಯಾಗಿ ಬೇಡಿದರೂ ಪರಿಹಾರ ಮೊತ್ತ ಕಡಿಮೆಯಾಗಿಲ್ಲ. ಇತ್ತ ಬಾಸ್ ಕಂಗಾಲಾಗಿದ್ದಾರೆ.
01:31 PM (IST) Mar 12
01:26 PM (IST) Mar 12
01:23 PM (IST) Mar 12
ಜಮ್ಮುವಿನಲ್ಲಿ ನಡೆದ ಹತ್ಯೆ ಯತ್ನದ ಬಳಿಕ ಕೇಂದ್ರ ಗೃಹ ಸಚಿವ ಅಮಿತ್ ಶಾ ನನಗೆ ಕರೆ ಮಾಡಿದ್ದರು ಎಂದು ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಪಟಾಕಿ ಶಬ್ದದಂತೆ ಕೇಳಿಸಿತು, ತಕ್ಷಣ ಭದ್ರತಾ ಸಿಬ್ಬಂದಿ ನನ್ನನ್ನು ಅಲ್ಲಿಂದ ಕರೆದೊಯ್ದರು. ಘಟನೆಯ ಬಗ್ಗೆ ಸಂಪೂರ್ಣ ತನಿಖೆಗೆ ಒತ್ತಾಯಿಸಿದ್ದಾರೆ.
01:09 PM (IST) Mar 12
ವಿಮಾನದಲ್ಲಿ, ಇಯರ್ ಫೋನ್ ಬಳಸಲು ನಿರಾಕರಿಸಿ ಜೋರಾಗಿ ಸೌಂಡ್ ಕೊಟ್ಟು ವೀಡಿಯೋ ನೋಡುತ್ತಿದ್ದ ಮಹಿಳೆಯನ್ನು ಸಿಬ್ಬಂದಿ ವಿಮಾನದಿಂದ ಕೆಳಗಿಳಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಆಕೆ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.
01:07 PM (IST) Mar 12
ಎಐ ಗೆಳೆಯನ ಜೊತೆ ವರ್ಚುವಲ್ ಆಗಿ ಮಲಗುತ್ತೇನೆ, ಲೈಂಗಿಕ ತೃಪ್ತಿ ಇದೆ; ಮಹಿಳೆ AI ಲವ್ಗೆ ಜನ ಸುಸ್ತು, ಇದು ಹೇಗೆ ಸಾಧ್ಯ ಎಂದು ಹಲವರು ಪ್ರಶ್ನೆ ಕೇಳುತ್ತಿದ್ದರೆ, ಮಹಿಳೆ ನಾಚುತ್ತಲೇ ಉತ್ತರಿಸಿದ್ದಾಳೆ.
01:02 PM (IST) Mar 12
ದೇಶಾದ್ಯಂತ ಎಲ್ಪಿಜಿ ಕೊರತೆ ಬಗ್ಗೆ ಸಂಸತ್ನಲ್ಲಿ ಚರ್ಚೆಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಆಗ್ರಹ. ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ಈ ಸಮಸ್ಯೆ ಉಂಟಾಗಿದ್ದು, ಭೋಪಾಲ್ನಲ್ಲಿ ರೆಸ್ಟೋರೆಂಟ್ಗಳು ಇಂಡಕ್ಷನ್ ಸ್ಟೌವ್ ಬಳಸುತ್ತಿವೆ. ಮಂಗಳೂರು ದೇವಸ್ಥಾನವೊಂದು ಸೌದೆ ಒಲೆಯಲ್ಲಿ ಅಡುಗೆ ಮಾಡುತ್ತಿದೆ.
12:48 PM (IST) Mar 12
ಅದಾನಿ ಮತ್ತು ಎಪ್ಸ್ಟೀನ್ ಪ್ರಕರಣಗಳಿಂದ ಪ್ರಧಾನಿ ಮೋದಿ 'ಪ್ಯಾನಿಕ್' ಆಗಿದ್ದಾರೆ, ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾದ ಎಲ್ಪಿಜಿ ಕೊರತೆಯನ್ನು ಕಡೆಗಣಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
12:44 PM (IST) Mar 12
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಯಶಸ್ವಿಯಾಗಿ ಮುಕ್ತಾಯವಾಗಿ ಒಂದು ವಾರ ಸಮೀಪಿಸುತ್ತಿದ್ದರೂ, ಅದರ ಕುರಿತಾದ ಚರ್ಚೆಗಳು ಮಾತ್ರ ನಿಂತಿಲ್ಲ. ಇದೀಗ ಈ ಟೂರ್ನಿಯ ವೇಳೆಯಲ್ಲಿ ಸೂರ್ಯಕುಮಾರ್ ಯಾದವ್ ಮೇಲೆ ಸಹ ಆಟಗಾರ ಸಿಟ್ಟಾಗಿರುವ ವಿಚಾರ ಬಹಿರಂಗವಾಗಿದೆ.
12:40 PM (IST) Mar 12
ಕುಂಭಮೇಳದ ವೈರಲ್ ಹುಡುಗಿ ಮೋನಾಲಿಸಾ, ಮುಸ್ಲಿಂ ನಟ ಫರ್ಮಾನ್ ಖಾನ್ ಅವರನ್ನು ಕೇರಳದ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಭೇಟಿಯಾದ ಇವರ ಪ್ರೇಮಕಥೆಯಲ್ಲಿ, ಮೋನಾಲಿಸಾ ಅವರೇ ಮೊದಲು ಪ್ರಪೋಸ್ ಮಾಡಿ ಮದುವೆಗೆ ಒತ್ತಾಯಿಸಿದ್ದರು ಎಂದು ಅವರ ಪತಿ ಬಹಿರಂಗಪಡಿಸಿದ್ದಾರೆ.
12:33 PM (IST) Mar 12
ಮದ್ವೆ ಆಗಿದ್ರೆ ಏನಂತೆ ನನ್ಗಿಷ್ಟ, ಆಫೇರ್ಸ್ ಬಗ್ಗೆ ಮೌನ ಮುರಿದ ಗಾಯಕಿ ಶಿವಾಂಗಿ, ಕ್ರಶ್ ಲಿಸ್ಟ್ ಒಂದೆರಡಲ್ಲ, ಖ್ಯಾತ ಸಿಂಗರ್ ಕ್ರಶ್ ಲಿಸ್ಟ್ನಲ್ಲಿ ಮದುವೆಯಾದವರೇ ಹೆಚ್ಚಿದ್ದಾರೆ. ತಮ್ಮ ಕ್ರಶ್ ಲಿಸ್ಟ್ ಬಹಿರಂಗಪಡಿಸಿದ್ದಾರೆ.
11:57 AM (IST) Mar 12
ಗ್ಯಾಸ್ ಕೊರತೆಯಿಂದ ಉದ್ಭವಿಸಿದ ಲಾಕ್ಡೌನ್ ರೀತಿ ಪರಿಸ್ಥಿತಿ, ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಯುದ್ಧ ತೀವ್ರಗೊಳ್ಳುತ್ತಿದೆ, ಎರಡು ಹಡಗಿನ ಮೇಲೆ ದಾಳಿ ನಡುವೆ ಭಾರತಕ್ಕೆ ಇರಾನ್ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೂ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತಿದೆ.
11:05 AM (IST) Mar 12
ಬೆಂಗಳೂರು: ಕಳೆದೆರಡು ದಿನ ಕೊಂಚ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಭರ್ಜರಿ ಕುಸಿತ ಕಂಡಿದ್ದು, ಚಿನ್ನ ಖರೀದಿಸುವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಮಾರ್ಚ್ 12ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ನೋಡೋಣ ಬನ್ನಿ.
10:28 AM (IST) Mar 12
09:15 AM (IST) Mar 12
ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾ ಭೋಸ್ಲೆ ಮತ್ತು ಫರ್ಮಾನ್ ಖಾನ್ ಮದುವೆಯು, ಆಕೆ ಅಪ್ರಾಪ್ತೆ ಎಂಬ ಆರೋಪದಿಂದ ವಿವಾದಕ್ಕೆ ಕಾರಣವಾಗಿದೆ. ಈ ಮದುವೆ ಬಾಲ್ಯವಿವಾಹ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
08:10 AM (IST) Mar 12
ಟಿ20 ವಿಶ್ವಕಪ್ ಗೆದ್ದ ನಂತರ, ಭಾರತದ ಹೆಡ್ ಕೋಚ್ ಗೌತಮ್ ಗಂಭೀರ್ ತಮ್ಮ ಮುಂದಿನ ಗುರಿಯನ್ನು ಬಹಿರಂಗಪಡಿಸಿದ್ದಾರೆ. 2025-2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತಂಡವನ್ನು ಕೊಂಡೊಯ್ಯುವುದೇ ತಮ್ಮ ಪ್ರಮುಖ ಉದ್ದೇಶ ಎಂದು ಅವರು ಹೇಳಿದ್ದಾರೆ.