ಝಾನ್ಸಿ: ಹೋಳಿ ಹಬ್ಬದ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಎಲ್ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್ ಅನ್ನೇ ಕದ್ದೊಯ್ದ 7 ಜನ ಖದೀಮರನ್ನು ಉತ್ತರ ಪ್ರದೇಶದ ಝಾನ್ಸಿ ಪೊಲೀಸರು ಬುಧವಾರ ಸೆರೆ ಹಿಡಿದಿದ್ದಾರೆ.
ಜಾವೇದ್, ಆಮಿರ್, ರಿತಿಕ್, ಸುಮಿತ್, ಶುಭಂಕರ್, ಅಭಿಷೇಕ್ ಮತ್ತು ಸುರೇಂದ್ರ ಬಂಧಿತರು. ಕದ್ದ ಸಿಲಿಂಡರ್ ಮಾರಾಟದಿಂದ ಬಂದ ಹಣ ಎನ್ನಲಾದ 83,820 ರು. ಸೇರಿದಂತೆ ಒಟ್ಟು 11.10 ಲಕ್ಷ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಾ.2ರಂದು ಚಾಲಕ ರಾಜಕುಮಾರ್ ಎಂಬುವವರು 389 ತುಂಬಿದ ಹಾಗೂ 135 ಖಾಲಿ ಸಿಲಿಂಡರ್ಗಳಿದ್ದ ಟ್ರಕ್ ಅನ್ನು ಸಿಪ್ರಿ ಬಜಾರ್ನ ಭಾರತ್ ಪೆಟ್ರೋಲಿಯಂ ಡಿಪೊ ಬಳಿ ನಿಲ್ಲಿಸಿ ಮನೆಗೆ ಹೋಗಿದ್ದರು. ಮಾ.6ರಂದು ಮರಳಿ ಬಂದಾಗ ಟ್ರಕ್ ಕಾಣೆಯಾಗಿದೆ. ಬಳಿಕ ಟ್ರಕ್ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ. ಹುಡುಕಾಟ ನಡೆಸಿದಾಗ ಜಿಪಿಎಸ್ ಹಾನಿಗೊಳಗಾದ ಟ್ರಕ್ ಬಾರಾಗಾಂ ಬಳಿ ಸಿಕ್ಕಿದೆ. ಖದೀಮರು 13 ಲಕ್ಷ ರು.ಗಳಿಗೆ ಗ್ಯಾಸ್ ಏಜನ್ಸಿಯೊಂದರ ಜೊತೆ ಡೀಲ್ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಏಳೂ ಜನರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
09:15 AM (IST) Mar 12
ಕುಂಭಮೇಳದ ವೈರಲ್ ಸುಂದರಿ ಮೊನಾಲಿಸಾ ಭೋಸ್ಲೆ ಮತ್ತು ಫರ್ಮಾನ್ ಖಾನ್ ಮದುವೆಯು, ಆಕೆ ಅಪ್ರಾಪ್ತೆ ಎಂಬ ಆರೋಪದಿಂದ ವಿವಾದಕ್ಕೆ ಕಾರಣವಾಗಿದೆ. ಈ ಮದುವೆ ಬಾಲ್ಯವಿವಾಹ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.
08:10 AM (IST) Mar 12
ಟಿ20 ವಿಶ್ವಕಪ್ ಗೆದ್ದ ನಂತರ, ಭಾರತದ ಹೆಡ್ ಕೋಚ್ ಗೌತಮ್ ಗಂಭೀರ್ ತಮ್ಮ ಮುಂದಿನ ಗುರಿಯನ್ನು ಬಹಿರಂಗಪಡಿಸಿದ್ದಾರೆ. 2025-2027ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ತಂಡವನ್ನು ಕೊಂಡೊಯ್ಯುವುದೇ ತಮ್ಮ ಪ್ರಮುಖ ಉದ್ದೇಶ ಎಂದು ಅವರು ಹೇಳಿದ್ದಾರೆ.