ಚೆನ್ನೈ: ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಧ್ಯಕ್ಷತೆಯಲ್ಲಿ ನಡೆದ ಸಿಎಂ ವಿಜಯ್ ಪ್ರಮಾಣ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ಮೊದಲು ವಂದೇ ಮಾತರಂ, ನಂತರ ರಾಷ್ಟ್ರಗೀತೆ ಮತ್ತು ಕೊನೆಯದಾಗಿ ತಮಿಳು ನಾಡಗೀತೆ ನುಡಿಸಿದ್ದು ವಿವಾದಕ್ಕೀಡಾಗಿದೆ. ಇದಕ್ಕೆ ಖುದ್ದು ಸಚಿವ ಆಧವ್ ಅರ್ಜುನ ಹಾಗೂ ಸಿಪಿಐ ಮುಖಂಡ ಸಿಪಿಐ ನಾಯಕ ವೀರಪಾಂಡಿಯನ್ ಆಕ್ಷೇಪಿಸಿದ್ದಾರೆ. ‘ಇದನ್ನು ರಾಜಭವನದ ಗಮನಕ್ಕೆ ತರಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಸುತ್ತೋಲೆ ಅನುಸಾರ ಹಾಡು ನುಡಿಸಲಾಗುತ್ತಿದೆ ಎಂಬ ಉತ್ತರ ಬಂತು. ಹೀಗಾಗಿ ಅನಿವಾರ್ಯವಾಗಿ 3ನೇ ಹಾಡಾಗಿ ತಮಿಳು ನಾಡಗೀತೆ ನುಡಿಸಲಾಗಿತು. ಈ ಹೊಸ ಪದ್ಧತಿ ತಮಿಳುನಾಡಿಗೆ ಸೂಕ್ತವಲ್ಲ. ಇನ್ನು ಮುಂದೆ ಹಿಂದಿನ ಪದ್ಧತಿಯಂತೆ, ಆರಂಭದಲ್ಲಿ ತಮಿಳು ಪ್ರಾರ್ಥನೆ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ’ ಎಂದು ಆಧವ್ ಎಂದಿದ್ದಾರೆ.
08:44 PM (IST) May 11
ಕರುಪ್ಪು ಟ್ರೇಲರ್ ಶುರುವಾಗುವುದೇ ಒಂದು ಭಾವುಕ ಸನ್ನಿವೇಶದಿಂದ. ವಯಸ್ಸಾದ ವ್ಯಕ್ತಿಯೊಬ್ಬರು ಮತ್ತು ಅವರ ಮೊಮ್ಮಗಳು ವರ್ಷಗಳಿಂದ ತಮ್ಮ ಕೇಸ್ ಇತ್ಯರ್ಥವಾಗದೆ ಪದೇ ಪದೇ ಕೋರ್ಟ್ಗೆ ಅಲೆಯುತ್ತಿರುತ್ತಾರೆ.
07:48 PM (IST) May 11
'ದೃಶ್ಯಂ 3' ಕಲೆಕ್ಷನ್ ಬಗ್ಗೆ ಮೋಹನ್ಲಾಲ್ ಹೇಳಿದ ಮಾತುಗಳು ಈಗ ಚರ್ಚೆಗೆ ಬಂದಿವೆ. ಸಿನಿಮಾ 500 ಕೋಟಿ ಕಲೆಕ್ಷನ್ ಮಾಡುತ್ತಾ ಅನ್ನೋ ಪ್ರಶ್ನೆಗೆ ಮೋಹನ್ಲಾಲ್ ತಮಾಷೆಯಾಗಿ ಉತ್ತರ ಕೊಟ್ಟಿದ್ದಾರೆ.
07:39 PM (IST) May 11
07:16 PM (IST) May 11
ರಾಮ್ ಚರಣ್ ನಟನೆಯ, ರಾಷ್ಟ್ರ ಪ್ರಶಸ್ತಿ ವಿಜೇತ ಬುಚಿ ಬಾಬು ಸನಾ ನಿರ್ದೇಶನದ 'ಪೆದ್ದಿ' ಸಿನಿಮಾ 2026ರ ಜೂನ್ 4ಕ್ಕೆ ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಚಿತ್ರಕ್ಕಾಗಿ 70ಕ್ಕೂ ಹೆಚ್ಚು ಸೆಟ್ಗಳನ್ನು ನಿರ್ಮಿಸಿರುವುದಾಗಿ ಪ್ರೊಡಕ್ಷನ್ ಡಿಸೈನರ್ ಅವಿನಾಶ್ ಕೊಲ್ಲಾ ತಿಳಿಸಿದ್ದಾರೆ.
06:44 PM (IST) May 11
06:38 PM (IST) May 11
ಮೇ 10ರ ಭಾನುವಾರದಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೈದರಾಬಾದಿನಲ್ಲಿ ಒಂದು ವಿಭಿನ್ನವಾದ ಹೇಳಿಕೆ ನೀಡಿದರು. ಮೋದಿಯವರ ಹೇಳಿಕೆ ಬಹುಮಟ್ಟಿಗೆ ಕೋವಿಡ್ ಲಾಕ್ಡೌನ್ ದಿನಗಳನ್ನು ನೆನಪಿಸಿದವು.
05:58 PM (IST) May 11
ಮೋಹನ್ಲಾಲ್ ಪುತ್ರಿ ವಿಸ್ಮಯಾ ನಾಯಕಿಯಾಗಿ ನಟಿಸುತ್ತಿರುವ 'ತುಡಕ್ಕಂ' ಚಿತ್ರದ ರಿಲೀಸ್ ಡೇಟ್ ಘೋಷಣೆಯಾಗಿದೆ. '2018' ಖ್ಯಾತಿಯ ಜ್ಯೂಡ್ ಆ್ಯಂಟನಿ ಜೋಸೆಫ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
05:12 PM (IST) May 11
ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ವಾರಣಾಸಿ'. ಇದೀಗ, ಚಿತ್ರದ ನಾಯಕಿ ಪ್ರಿಯಾಂಕಾ ಚೋಪ್ರಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮುಂದಿನ ಶೆಡ್ಯೂಲ್ ಶೂಟಿಂಗ್ ಶುರುವಾಗುವ ಬಗ್ಗೆ ಸುಳಿವು ನೀಡಿದ್ದಾರೆ.
04:54 PM (IST) May 11
ಕಳೆದ ಮೂರು ವರ್ಷಗಳಲ್ಲಿ, ಏರ್ ಇಂಡಿಯಾ ನೈತಿಕ ಉಲ್ಲಂಘನೆಗಳಿಗಾಗಿ 1,000ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಸಿಇಒ ಕ್ಯಾಂಪ್ಬೆಲ್ ವಿಲ್ಸನ್ ಈ ವಿಷಯವನ್ನು ಬಹಿರಂಗಪಡಿಸಿದ್ದು, ELT ಯೋಜನೆಯ ದುರುಪಯೋಗ ಮತ್ತು ಕಳ್ಳಸಾಗಣೆಯಂತಹ ಗಂಭೀರ ಕಾರಣಗಳನ್ನು ಉಲ್ಲೇಖಿಸಿದ್ದಾರೆ.
04:18 PM (IST) May 11
ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ನಾಯಕರು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ 'ಎಡಿಟ್' ಮಾಡಿ ಬಿಸಾಕಿದ್ದಾರೆ. ವಿಜಯ್ ಅವರ ಟೀಮ್ನಲ್ಲಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪೊಲಿಟಿಕಲ್ ಪಾರ್ಟಿ ತರ ಅಲ್ಲ, ಬದಲಾಗಿ ಮಲ್ಟಿ-ನ್ಯಾಷನಲ್ ಕಂಪನಿ ತರ ಇದೆ!
03:49 PM (IST) May 11
ತಮಿಳುನಾಡು ಸಿಎಂ ವಿಜಯ್ ಅವರ ಬಹುನಿರೀಕ್ಷಿತ ಅಂತಿಮ ಚಿತ್ರ 'ಜನ ನಾಯಗನ್' ಮತ್ತೆ ಚರ್ಚೆಯಲ್ಲಿದೆ. ನಿರ್ಮಾಪಕ ವೆಂಕಟ್ ಕೆ. ನಾರಾಯಣ ಅವರ ಪ್ರಕಾರ, ಚಿತ್ರವು ಸೆನ್ಸಾರ್ ಹಂತದಲ್ಲಿದ್ದು, ಇನ್ನೆರಡು ವಾರಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
03:28 PM (IST) May 11
ಆರ್ಸಿಬಿ ಗೆಲುವು ಕಾಣುತ್ತಿದ್ದಂತೆ ತಮಿಳು ಕಮೆಂಟೇಟರ್ ಎಸ್ ಬದ್ರಿನಾತ್ ವಿಷ ಕಕ್ಕಿದ್ದಾರೆ. ಕ್ರುನಾಲ್ ಪಾಂಡ್ಯ ಇಂಜುರಿಯಿದ್ದ ಪಿಚ್ ಮೇಲೆ ಬಿದ್ದಾಗ, ಆತ ಅಲ್ಲೆ ಸಾಯಲಿ, ಆರ್ಸಿಬಿ ಸೋಲಲಿ ಎಂದು ಕಮೆಂಟ್ರಿ ಹೇಳಿದ್ದಾನೆ.
02:45 PM (IST) May 11
ಸಾಮಾನ್ಯವಾಗಿ ರಾಜಕೀಯ ಅಂದ ಕೂಡಲೇ ನಮ್ಮ ಕಣ್ಣಮುಂದೆ ಬರುವುದು ಹಳೇ ಕಾಲದ ರಾಜಕಾರಣಿಗಳು. ಆದರೆ ವಿಜಯ್ ಈ ಇಮೇಜ್ ಅನ್ನು ಪೂರ್ತಿ ಬದಲಿಸಿದ್ದಾರೆ. ಅವರ ಪಕ್ಷದಿಂದ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರ ಪಟ್ಟಿ ನೋಡಿದರೆ, ಇದು ಯಾವುದೋ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪದವಿ ಪ್ರದಾನ ಸಮಾರಂಭದಂತಿದೆ. ಯಾರೆಲ್ಲಾ ಇದ್ದಾರೆ ನೋಡಿ..
02:39 PM (IST) May 11
ಪ್ರಧಾನಿ ನರೇಂದ್ರ ಮೋದಿ ಇಂಧನ ಪೂರೈಕೆ ಕೊರತೆ ಕುರಿತು ಸೂಚನೆ ನೀಡಿದ ಬೆನ್ನಲ್ಲೇ ಹಲವೆಡೆ ಪೆಟ್ರೋಲ್ ಬಂಕ್ ಕ್ಲೋಸ್ ಆಗುತ್ತಿದೆ. ಈ ಆತಂಕದ ಬೆನ್ನಲ್ಲೇ ಪೆಟ್ರೋಲಿಯಂ ಸಚಿವಾಲಯ ಸುದ್ದಿಗೋಷ್ಠಿ ಕರೆದಿದೆ.
01:18 PM (IST) May 11
ಮದುವೆ ಮನೆಯಲ್ಲಿ ಊಟ ಬಡಿಸುವಾಗ ಕೋಳಿ ಸಾರು ಸ್ವಲ್ಪ ಬಟ್ಟೆ ಮೇಲೆ ಚೆಲ್ಲಿದೆ. ಇಷ್ಟೇ ನೋಡಿ ವಾಗ್ವಾದ ಆರಂಭಗೊಂಡ ಜಗಳವೇ ನಡೆದು ಹೋಗಿದೆ. ಘಟನೆಯಲ್ಲಿ ಓರ್ವ ಮೃತಪಟ್ಟರೆ, 6 ಮಂದಿ ಗಾಯಗೊಂಡಿದ್ದಾರೆ.
12:31 PM (IST) May 11
Thalapathy Vijay Daughter: ದಳಪತಿ ವಿಜಯ್ ಸಂಸಾರದಲ್ಲಿ ಬಿರುಕು ಬಂದಿದೆ. ಇವರ ಪತ್ನಿ ಸಂಗೀತಾ ಅವರು, ವಿಜಯ್ ಓರ್ವ ನಟಿಯ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪ ಮಾಡಿ ಡಿವೋರ್ಸ್ಗೆ ಅರ್ಜಿ ಸಲ್ಲಿಸಿದ್ದಾರೆ. ವಿಜಯ್ ಸಿಎಂ ಆಗಿ ಪ್ರಮಾಣ ವಚನಕ್ಕೆ ಸಂಗೀತಾ, ಮಕ್ಕಳಾಗಲೀ ಬಂದಿರಲಿಲ್ಲ.
12:22 PM (IST) May 11
ಸಂಗೀತಾ ಅವರು ತಮಿಳುನಾಡಿಗೆ ಮರಳಿ ಬರುತ್ತಾರಾ? ಅಥವಾ ಲಂಡನ್ನಲ್ಲೇ ಉಳಿದು ವಿಚ್ಛೇದನದ ಹಾದಿ ತುಳಿಯುತ್ತಾರಾ? ಎಂಬುದು ಈಗ ದಕ್ಷಿಣ ಭಾರತದ ಸಿನಿ ಪ್ರೇಮಿಗಳ ಪಾಲಿನ 'ಮಿಲಿಯನ್ ಡಾಲರ್ ಪ್ರಶ್ನೆ'. ಪತಿ ಸಿಎಂ ಆದ ಮೇಲೆ ಸಂಗೀತಾ ಪತ್ನಿಯಾಗಿ ಅವರ ಜೊತೆ ನಿಲ್ಲುತ್ತಾರಾ ಅಥವಾ ಇಲ್ಲವಾ ಎಂಬುದು ಕಾಲವೇ ಉತ್ತರಿಸಬೇಕಿದೆ.
12:21 PM (IST) May 11
ಭಾರತದಲ್ಲಿ 'ಚಲಿಸುವ ನರಕ' ಎಂದು ಕುಖ್ಯಾತಿ ಪಡೆದ ರೈಲಿದೆ. ಈ ಟ್ರೈನ್ ಕನಿಷ್ಠ 10 ರಿಂದ 12 ಗಂಟೆಗಳ ಕಾಲ ವಿಳಂಬವಾಗಿ ಚಲಿಸುತ್ತದೆ. ಈ ಲೇಖನದಲ್ಲಿ ಅದರ ದೀರ್ಘ ಪ್ರಯಾಣ ಮತ್ತು ಪ್ರಯಾಣಿಕರು ಎದುರಿಸುವ ಸಮಸ್ಯೆಗಳ ಬಗ್ಗೆ ವಿವರಿಸಲಾಗಿದೆ.
11:39 AM (IST) May 11
ಜೊಸೆಫ್ ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿನ ಸಹಿ ಕಹಿ ಘಟನೆ ತಾಯಂದಿರ ದಿನ ಇಬ್ಬರು ತಾಯಂದಿರ ಗೌರವ ಎತ್ತಿ ಹಿಡಿದಿದೆ. ಮಗ ಸಿಎಂ ಆದ ಸಂದರ್ಭ, ಮಗ ಸಿಎಂ ಪ್ರಮಾಣವಚನಕ್ಕೆ ಗೈರಾದ ಸಂದರ್ಭ. ಏನಿದು ?
11:14 AM (IST) May 11
ಈ ಪೋಸ್ಟ್ನಲ್ಲಿ ಎಲ್ಲರ ಗಮನ ಸೆಳೆದಿದ್ದು ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರೀತಿಯ ಉಡುಗೊರೆ. ಸಿದ್ಧಾರ್ಥ್ ತಾವೇ ಸ್ವತಃ ಚಾಕೊಲೇಟ್ ಪ್ಯಾನ್ಕೇಕ್ ತಯಾರಿಸಿದ್ದು, ಅದರ ಮೇಲೆ ಪೀನಟ್ ಬಟರ್ ಬಳಸಿ 'MOM' (ಅಮ್ಮ) ಎಂದು ಬರೆದಿದ್ದರು. ಇದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
11:12 AM (IST) May 11
ಹೊರ ವರ್ತುಲ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಟ ಕೆ. ಭರತ್ ಕಾಂತ್ ಮತ್ತು ಅವರ ಸ್ನೇಹಿತ ಸಾವನ್ನಪ್ಪಿದ್ದಾರೆ. ನಿಯಂತ್ರಣ ತಪ್ಪಿದ ಅವರ ಕಾರು ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
10:37 AM (IST) May 11
Gold Price: ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವರ್ಷವಾದರೂ ಕೂಡ, ಗೋಲ್ಡ್ ಖರೀದಿ ಮಾಡಬೇಡಿ ಎಂದು ಹೇಳಿದ್ದಾರೆ. ಅನೇಕರು ಗೋಲ್ಡ್ ಖರೀದಿ ಮಾಡುತ್ತಾರೆ, ಇದನ್ನು ದೊಡ್ಡ ಮಟ್ಟದ ಹೂಡಿಕೆ ಎಂದು ಭಾವಿಸಿದ್ದಾರೆ. ಮದುವೆ ಎಂದು ಒಂದು ವರ್ಷದವರೆಗೆ ಚಿನ್ನ ಖರೀದಿಸಬೇಡಿ ಎಂದು ನರೇಂದ್ರ ಮೋದಿ ಹೇಳಿದರು.
10:17 AM (IST) May 11
09:59 AM (IST) May 11
09:38 AM (IST) May 11
ಆರ್ಸಿಬಿ ಸಿಂಹಗಳು, ಇದೀಗ ರಾಯಚೂರಿನಲ್ಲೂ ಘರ್ಜಿಸಿದೆ ಎಂದ ಮಾಜಿ ಮಾಲೀಕ ವಿಜಯ್ ಮಲ್ಯ ತಕ್ಷಣವೇ ತಪ್ಪು ಸರಿಪಡಿಸಿ ಎಕ್ಸ್ ಪೋಸ್ಟ್ ಮಾಡಿದ್ದಾರೆ. ಈ ವೇಳೆ ನನ್ನೊಳಗಿನ ಕನ್ನಡಿಗ ಬಿಟ್ಟುಕೊಡುವುದೇ ಎಂದು ತಪ್ಪು ಸರಿ ಮಾಡಿದ್ದಾರೆ.
09:03 AM (IST) May 11
ಐಪಿಎಲ್ ಟೂರ್ನಿಯಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ 8 ತಂಡಗಳ ಪೈಕಿ 7 ತಂಡಕ್ಕೆ ಪ್ಲೇ ಆಫ್ ಅವಕಾಶವಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅದೃಷ್ಠವೇ ಕೈಹಿಡಿಯಬೇಕು.
08:25 AM (IST) May 11
ಬೆಂಗಳೂರು ಸೇರಿದಂತೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಾಗಿದೆ? ಪ್ರಧಾನಿ ಮೋದಿ ಕನಿಷ್ಠ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಬೇಡಿ, ಪೆಟ್ರೋಲ್ ಡೀಸೆಲ್ ಬಳಕೆ ಕಡಿಮೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗಿದೆ.
07:55 AM (IST) May 11
ಮಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಆರ್ಸಿಬಿ ಟೇಬಲ್ ಟಾಪರ್ ಆಗಿದೆ. 14 ಅಂಕಗಳಿಸಿದೆ. ಆದರೆ ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಗೊಂಡಿಲ್ಲ. ಪ್ಲೇ ಆಫ್ ಗೆಲುವಿಗೆ ಇನ್ನು ಎಷ್ಟು ಗೆಲುವು ಬೇಕು, ಟೇಬಲ್ ಟಾಪ್ನಲ್ಲಿ ಉಳಿಯಲು ಲೆಕ್ಕಾಚಾರವೇನು?
07:26 AM (IST) May 11
06:51 AM (IST) May 11
06:21 AM (IST) May 11
ತಮಿಳುನಾಡು ಸಿಎಂ ವಿಜಯ್ ಅವರ ಚುನಾವಣಾ ಭರವಸೆಗಳನ್ನು ಈಡೇರಿಸಲು ವಾರ್ಷಿಕ ₹1 ಲಕ್ಷ ಕೋಟಿ ಬೇಕಾಗಿದ್ದು, ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಸವಾಲಾಗಿದೆ. ಈ ಯೋಜನೆಗಳು ರಾಜ್ಯದ ಒಟ್ಟು ತೆರಿಗೆ ಆದಾಯದ ಸುಮಾರು 50% ಆಗಿರುವುದರಿಂದ, ಆರ್ಥಿಕ ತಜ್ಞರು ರಾಜ್ಯದ ಸಾಲದ ಹೊರೆ ಹೆಚ್ಚಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
06:04 AM (IST) May 11
05:14 AM (IST) May 11