ಚೆನ್ನೈ: ತಮಿಳುನಾಡು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅಧ್ಯಕ್ಷತೆಯಲ್ಲಿ ನಡೆದ ಸಿಎಂ ವಿಜಯ್ ಪ್ರಮಾಣ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ, ಮೊದಲು ವಂದೇ ಮಾತರಂ, ನಂತರ ರಾಷ್ಟ್ರಗೀತೆ ಮತ್ತು ಕೊನೆಯದಾಗಿ ತಮಿಳು ನಾಡಗೀತೆ ನುಡಿಸಿದ್ದು ವಿವಾದಕ್ಕೀಡಾಗಿದೆ. ಇದಕ್ಕೆ ಖುದ್ದು ಸಚಿವ ಆಧವ್ ಅರ್ಜುನ ಹಾಗೂ ಸಿಪಿಐ ಮುಖಂಡ ಸಿಪಿಐ ನಾಯಕ ವೀರಪಾಂಡಿಯನ್ ಆಕ್ಷೇಪಿಸಿದ್ದಾರೆ. ‘ಇದನ್ನು ರಾಜಭವನದ ಗಮನಕ್ಕೆ ತರಲಾಗಿತ್ತು. ಆದರೆ ಕೇಂದ್ರ ಸರ್ಕಾರದ ಸುತ್ತೋಲೆ ಅನುಸಾರ ಹಾಡು ನುಡಿಸಲಾಗುತ್ತಿದೆ ಎಂಬ ಉತ್ತರ ಬಂತು. ಹೀಗಾಗಿ ಅನಿವಾರ್ಯವಾಗಿ 3ನೇ ಹಾಡಾಗಿ ತಮಿಳು ನಾಡಗೀತೆ ನುಡಿಸಲಾಗಿತು. ಈ ಹೊಸ ಪದ್ಧತಿ ತಮಿಳುನಾಡಿಗೆ ಸೂಕ್ತವಲ್ಲ. ಇನ್ನು ಮುಂದೆ ಹಿಂದಿನ ಪದ್ಧತಿಯಂತೆ, ಆರಂಭದಲ್ಲಿ ತಮಿಳು ಪ್ರಾರ್ಥನೆ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ನುಡಿಸಲಾಗುತ್ತದೆ’ ಎಂದು ಆಧವ್ ಎಂದಿದ್ದಾರೆ.
09:03 AM (IST) May 11
ಐಪಿಎಲ್ ಟೂರ್ನಿಯಲ್ಲಿ ಒಂದೇ ದಿನ 2 ತಂಡ ಟೂರ್ನಿಯಿಂದ ಹೊರಬಿದ್ದಿದೆ. ಇದೀಗ 8 ತಂಡಗಳ ಪೈಕಿ 7 ತಂಡಕ್ಕೆ ಪ್ಲೇ ಆಫ್ ಅವಕಾಶವಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅದೃಷ್ಠವೇ ಕೈಹಿಡಿಯಬೇಕು.
08:25 AM (IST) May 11
ಬೆಂಗಳೂರು ಸೇರಿದಂತೆ ಭಾರತದಲ್ಲಿ ಇಂದು ಚಿನ್ನದ ಬೆಲೆ ಎಷ್ಟಾಗಿದೆ? ಪ್ರಧಾನಿ ಮೋದಿ ಕನಿಷ್ಠ ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಬೇಡಿ, ಪೆಟ್ರೋಲ್ ಡೀಸೆಲ್ ಬಳಕೆ ಕಡಿಮೆ ಮಾಡಿ ಎಂದು ಕರೆ ಕೊಟ್ಟಿದ್ದಾರೆ. ಇದರ ಬೆನ್ನಲ್ಲೇ ಬಂಗಾರದ ಬೆಲೆಯಲ್ಲಿ ವ್ಯತ್ಯಾಸವಾಗಿದೆ.
07:55 AM (IST) May 11
ಮಂಬೈ ವಿರುದ್ಧ ಕೊನೆಯ ಎಸೆತದಲ್ಲಿ ಗೆದ್ದ ಆರ್ಸಿಬಿ ಟೇಬಲ್ ಟಾಪರ್ ಆಗಿದೆ. 14 ಅಂಕಗಳಿಸಿದೆ. ಆದರೆ ಅಧಿಕೃತವಾಗಿ ಪ್ಲೇ ಆಫ್ ಸ್ಥಾನ ಖಚಿತಗೊಂಡಿಲ್ಲ. ಪ್ಲೇ ಆಫ್ ಗೆಲುವಿಗೆ ಇನ್ನು ಎಷ್ಟು ಗೆಲುವು ಬೇಕು, ಟೇಬಲ್ ಟಾಪ್ನಲ್ಲಿ ಉಳಿಯಲು ಲೆಕ್ಕಾಚಾರವೇನು?
07:26 AM (IST) May 11
06:51 AM (IST) May 11
06:21 AM (IST) May 11
ತಮಿಳುನಾಡು ಸಿಎಂ ವಿಜಯ್ ಅವರ ಚುನಾವಣಾ ಭರವಸೆಗಳನ್ನು ಈಡೇರಿಸಲು ವಾರ್ಷಿಕ ₹1 ಲಕ್ಷ ಕೋಟಿ ಬೇಕಾಗಿದ್ದು, ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಸವಾಲಾಗಿದೆ. ಈ ಯೋಜನೆಗಳು ರಾಜ್ಯದ ಒಟ್ಟು ತೆರಿಗೆ ಆದಾಯದ ಸುಮಾರು 50% ಆಗಿರುವುದರಿಂದ, ಆರ್ಥಿಕ ತಜ್ಞರು ರಾಜ್ಯದ ಸಾಲದ ಹೊರೆ ಹೆಚ್ಚಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದ್ದಾರೆ.
06:04 AM (IST) May 11
05:14 AM (IST) May 11