ನವದೆಹಲಿ: ಟಿಎಂಸಿ ಪಕ್ಷವು ಪಶ್ಚಿಮ ಬಂಗಾಳದಲ್ಲಿ ನೆಲೆಕಳೆದುಕೊಂಡು, ಇಬ್ಭಾಗವಾಗುವ ಅಂಚಿನಲ್ಲಿರುವ ಹೊತ್ತಿನಲ್ಲಿ ಅದರ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿಯವರನ್ನು ಅವರ ನಿವಾಸದಲ್ಲಿ ಮಂಗಳವಾರ ಭೇಟಿಯಾಗಿದ್ದಾರೆ. ಇದು, ಚುನಾವಣಾ ಸೋಲಿನ ಬಳಿಕ ಅವರಿಬ್ಬರ ಮೊದಲ ಪ್ರತ್ಯೇಕ ಭೇಟಿಯಾಗಿದೆ.
ನಾಯಕಿಯರಿಬ್ಬರ ನಡುವೆ ಯಾವ ವಿಷಯದ ಬಗ್ಗೆ ಮಾತುಕತೆ ನಡೆಯಿತೆಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ವಿಪಕ್ಷಗಳು ಪರಸ್ಪರರನ್ನು ಟೀಕಿಸಿಕೊಳ್ಳುವ ಬದಲು ಬಿಜೆಪಿಯ ವಿರುದ್ಧ ಇಂಡಿಯಾ ಕೂಟವನ್ನು ಇನ್ನಷ್ಟು ಒಗ್ಗೂಡಿಸಿ ಹೋರಾಡಬೇಕೆಂದು ದೀದಿ ಆಗ್ರಹಿಸಿದ್ದಾಗಿ ಮೂಲಗಳಿಂದ ತಿಳಿದುಬಂದಿದೆ. ಇದರ ಜತೆಗೇ, ಉದಯಿಸಿದ ರಾಜ್ಯದಲ್ಲಿ ನೆಲೆ ಇಲ್ಲವಾಗಿರುವ ಹಿನ್ನೆಲೆಯಲ್ಲಿ ಟಿಎಂಸಿಯನ್ನು ಕಾಂಗ್ರೆಸ್ ಜತೆ ವಿಲೀನ ಮಾಡುವ ಬಗ್ಗೆ ಮಾತುಕತೆ ನಡೆದಿದೆ ಎಂದೂ ಹೇಳಲಾಗುತ್ತಿದೆ.
10:02 AM (IST) Jun 10
09:43 AM (IST) Jun 10
ಮುಲ್ಲಾನ್ಪುರ: ಭಾರತ ಹಾಗೂ ಆಫ್ಘಾನಿಸ್ತಾನ ನಡುವೆ ಜೂನ್ 13ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್ ಸಿಕ್ಕಿದೆ. ಏನದು ನೋಡೋಣ ಬನ್ನಿ.
09:31 AM (IST) Jun 10
ಪ್ರಧಾನಿ ನರೇಂದ್ರ ಮೋದಿಯವರ ಸುದೀರ್ಘ ಆಡಳಿತಾವಧಿಯು 'ಏಕ ಭಾರತ, ಶ್ರೇಷ್ಠ ಭಾರತ' ಪರಿಕಲ್ಪನೆಯಡಿ ದೇಶವನ್ನು ಏಕೀಕೃತಗೊಳಿಸಿದೆ. ಜನಧನ, ಉಜ್ವಲಾ, ಸ್ವಚ್ಛ ಭಾರತ್ನಂತಹ ಯೋಜನೆಗಳ ಮೂಲಕ ಜನಕಲ್ಯಾಣ ಮತ್ತು ಡಿಜಿಟಲ್ ಆಡಳಿತಕ್ಕೆ ಒತ್ತು ನೀಡಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತದ ಪ್ರಭಾವ ಹೆಚ್ಚಿಸಿದ್ದಾರೆ.
08:36 AM (IST) Jun 10