ಅತಿ ಹೆಚ್ಚು ಔಷಧೀಯ ಗುಣಗಳಿರುವ ತುಳಸಿಯನ್ನು ದೇವರೆಂದು ಪೂಜಿಸುತ್ತೇವೆ. ಹಾಗೆಯೇ ಮನೆಯಲ್ಲಿ ಕೆಲವೊಂದು ಸಸ್ಯಗಳನ್ನು ನೆಡುವುದು ಆಗತ್ಯ. ಅಂಥ ಸಸ್ಯಗಳು ಯಾವುವು?

ಶತಾವರಿ ಸಸ್ಯಕ್ಕೆ ಸಂಸ್ಕೃತದಲ್ಲಿ ಶತಮೂಲಿ ಎಂಬ ಹೆಸರಿದೆ. ಇಂಗ್ಲೀಷ್‌ನಲ್ಲಿ ಅಸ್ಪರಾಗಸ್ ಎನ್ನುತ್ತಾರೆ. ಇದಕ್ಕೆ ಆಯುರ್ವೇದದಲ್ಲಿ ಮಹತ್ವದ ಸ್ಥಾನವಿದೆ. ಎದೆಹಾಲು ಉತ್ಪತ್ತಿ, ಚರ್ಮ ರೋಗ, ಮಧುಮೇಹ ಮೊದಲಾದ ಸಮಸ್ಯೆಗಳನ್ನೂ ನಿವಾರಿಸುವ ಶಕ್ತಿ ಈ ಶತಾವರಿಗಿದೆ. ಇದರಿಂದೇನು ಉಪಯೋಗ?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಡಯಾಬಿಟಿಸ್ ಕಂಟ್ರೋಲ್‌ಗೆ ಡಯಟ್ ಹೀಗಿರಲಿ...

- ಶತಾವರಿ ಬೇರನ್ನು ಎಣ್ಣೆಯಲ್ಲಿ ಕುದಿಸಿ, ಆ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿದರೆ ಚರ್ಮ ರೋಗ ನಿವಾರಣೆಯಾಗುತ್ತದೆ. 
- ಇದರ ಬೇರನ್ನು ಅರೆದು ರಸ ತೆಗೆದು, ಹಾಲಿಗೆ ಬೆರೆಸಿ ದಿನವೂ ಒಂದೊಂದು ಲೋಟ ಕುಡಿಯಬೇಕು. 45 ದಿನಗಳ ಕಾಲ ಈ ಚಿಕಿತ್ಸೆ ಮಾಡಿದರೆ ಮಧುಮೇಹಕ್ಕೆ ಮದ್ದು. 
- ಶತಾವರಿ ಬೇರಿನ ರಸವನ್ನು ಹಾಲು ಸಕ್ಕರೆಯೊಂದಿಗೆ ಪೇಯ ತಯಾರಿಸಿ ಸೇವಿಸಿದರೆ, ಆರೋಗ್ಯ ವರ್ಧನೆಯಾಗುತ್ತದೆ.
- ಶತಾವರಿ ಬೇರನ್ನು ಅಥವಾ ಗಡ್ಡೆಯನ್ನು ಅರೆದು ಜೇನುತುಪ್ಪ ಬೆರೆಸಿ ಸೇವಿಸಿದರೆ, ವಸಡಿನಲ್ಲಿ ರಕ್ತಸ್ರಾವವಾಗೋ ಸಮಸ್ಯೆಗೆ ಮದ್ದು. 
- ಅಡುಗೆಯಲ್ಲಿ ಶತಾವರಿಯನ್ನು ಬಳಸುವುದರಿಂದ ಹೃದಯ ಸಮಸ್ಯೆ ಪರಿಹಾರವಾಗುತ್ತದೆ.
- ಶತಾವರಿ ಬೇರನ್ನು ಅರೆದು ಅದೇ ಪ್ರಮಾಣದ ಹಾಲು ಬೆರೆಸಿ ಕುಡಿದರೆ, ಮೂತ್ರಕೋಶದ ಕಲ್ಲೂ ಕರಗುತ್ತದೆ.
- ಡೆಲಿವರಿ ಆದ ನಂತರ ಎದೆಹಾಲು ಉತ್ಪತ್ತಿ ಆಗದೆ ಇದ್ದರೆ, ಶತಾವರಿ ಬೇರಿನ ಕಷಾಯ ಮಾಡಿ ಕುಡಿದರೊಳಿತು.