ತನ್ನ ತಂದೆ, ಪತ್ನಿಯ ನಡುವೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ ಪುತ್ರನೋರ್ವ ಅವರಿಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದಾನೆ| ಆರೋಪಿ ಪುಟ್ಟಣ್ಣ ಮಾಳಪ್ಪ ಪೂಜಾರಿ (40) ಪರಾರಿಯಾಗಿದ್ದಾನೆ| ಮಗ ಪುಟ್ಟಣ್ಣ ತನ್ನ ತಂದೆ ಮತ್ತು ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇದೆ ಶಂಕಿಸಿ, ಪತ್ನಿ ರೇಣುಕಾ ಹಾಗೂ ತಂದೆ ಮಾಳಪ್ಪನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ|
ಇಂಡಿ(ಅ.7): ತನ್ನ ತಂದೆ, ಪತ್ನಿಯ ನಡುವೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ ಪುತ್ರನೋರ್ವ ಅವರಿಬ್ಬರನ್ನು ಭೀಕರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಕ್ರಾಸ್ ಬಳಿಯ ತೋಟವೊಂದರಲ್ಲಿ ಭಾನುವಾರ ನಡೆದಿದೆ.
Add Asianetnews Kannada as a Preferred Source

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೊಲೆಯಾದವರನ್ನು ಇಂಡಿ ತಾಲೂಕಿನ ಶಿರಗೂರ ಗ್ರಾಮದ ಮಾಳಪ್ಪ ಧರ್ಮಣ್ಣ ಪೂಜಾರಿ (65), ರೇಣುಕಾ ಪುಟ್ಟಣ್ಣ ಪೂಜಾರಿ (35) ಎಂದು ಗುರುತಿಸಲಾಗಿದೆ. ಆರೋಪಿ ಪುಟ್ಟಣ್ಣ ಮಾಳಪ್ಪ ಪೂಜಾರಿ (40) ಪರಾರಿಯಾಗಿದ್ದಾನೆ.
ಶಿವಪೂರ ಗ್ರಾಮದ ಶ್ರೀಶೈಲ ಸೊನ್ನ ಅವರ ಖೇಡಗಿ ಕ್ರಾಸ್ದಲ್ಲಿರುವ ತೋಟದಲ್ಲಿ ಕೂಲಿ ಕೆಲಸಕ್ಕೆಂದು ಐದಾರು ತಿಂಗಳ ಹಿಂದೆ ಬಂದು ಶೆಡ್ ಶೆಡ್ ಹಾಕಿಕೊಂಡು ವಾಸಿಸುತ್ತಿದ್ದರು. ಮಗ ಪುಟ್ಟಣ್ಣ ತನ್ನ ತಂದೆ ಮತ್ತು ತನ್ನ ಹೆಂಡತಿ ಜೊತೆ ಅನೈತಿಕ ಸಂಬಂಧ ಇದೆ ಶಂಕಿಸಿ, ಭಾನುವಾರ ಪತ್ನಿ ರೇಣುಕಾ ಹಾಗೂ ತಂದೆ ಮಾಳಪ್ಪನನ್ನು ಹರಿತವಾದ ಆಯುಧದಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.
