Asianet Suvarna News Asianet Suvarna News

Russian Ukraine War: ಬಂಕರ್ ಗಳಲ್ಲಿ ಸಿಕ್ಕು ಕನ್ನಡಿಗರ ಪರದಾಟ.. ಅನ್ನವಿಲ್ಲ.. ಆಹಾರವಿಲ್ಲ!

* ರಷ್ಯಾ ಮತ್ತು ಉಕ್ರೇನ್ ಸಮರ
*  ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು ಏನು ಮಾಡಬೇಕು?
*  ರಾಯಭಾರ ಕಚೇರಿಯಿಂದ ಸಿಗುವ ಮಾಹಿತಿ ಏನು?
* ಸಂಕಷ್ಟದಲ್ಲಿ ಸಿಲುಕಿರುವರಿಗೆ ಬಂಕರ್ ಗಳೆ ಆಶ್ರಯ

First Published Feb 28, 2022, 7:20 PM IST | Last Updated Feb 28, 2022, 7:21 PM IST

ನವದೆಹಲಿ(ಫೆ. 28)  ಯುದ್ಧ ಭೂಮಿಯಲ್ಲಿ (War) ಸಿಲುಕಿರುವ ಭಾರತೀಯರನ್ನು (Indians) ತವರಿಗೆ ವಾಪಸ್ ಕರೆತರುವ ಕೆಲಸ ಮಾಡಲಾಗುತ್ತಿದೆ. ವಿಮಾನಗಳ ಮೂಲಕ ವಿದ್ಯಾರ್ಥಿಗಳನ್ನು(Students)  ಕರೆತರಲಾಗುತ್ತಿದೆ. ಇನ್ನು ಸಾವಿರಾರು ಜನರನ್ನು ಕರೆದು ತರಬೇಕಿದ್ದು ಎಲ್ಲ ವ್ಯವಸ್ಥೆ (Operation Ganga) ಮಾಡಿಕೊಳ್ಳಲಾಗಿದೆ.

Russia Ukraine War ಸಂಧಾನಕ್ಕೂ ಮುನ್ನ ಪುಟಿನ್‌ಗೆ ವಾರ್ನಿಂಗ್, ಜೀವ ಹಾಗೂ ಜೀವನನೋಡಿಕೊಳ್ಳಿ ಎಂದ ಉಕ್ರೇನ್ ಅಧ್ಯಕ್ಷ!

ಸಂಕಷ್ಟದಲ್ಲಿರುವವರಿಗೆ ಬಂಕರ್ ಗಳೇ ಆಶ್ರಯವಾಗಿದೆ. ಹೇಗಾದರೂ ಮಾಡಿ ನಮ್ಮನ್ನು ಕಾಪಾಡಿ ಎಂದು ಕನ್ನಡಿಗರು ಮೊರೆ  ಇಟ್ಟಿದ್ದಾರೆ. ಆಹಾರಕ್ಕೂ ಸಮಸ್ಯೆಯಾಗಿದ್ದು ಕೈಯಲ್ಲಿ ದುಡ್ಡು ಇಲ್ಲ ಎಂದು ಅಂಗಲಾಚುತ್ತಿದ್ದಾರೆ.