Asianet Suvarna News Asianet Suvarna News

ಕಟಾವ್ ಮಾಡುವಂತಿಲ್ಲ, ಮೀನು ಹಿಡಿಯುವಂತಿಲ್ಲ; ರೆಡ್ ಅಲರ್ಟ್ ಉಡುಪಿಯಲ್ಲೆಲ್ಲಾ!

ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆ ಸುರಿಯುತ್ತಿದೆ. ನಿನ್ನೆ (ಸೋಮವಾರ) ರಾತ್ರಿಯಿಂದ ಮಳೆರಾಯ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾನೆಯಾದರೂ, ಹವಾಮಾನ ಇಲಾಖೆಯು ನಾಳೆಯಿಂದ 3 ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿದೆ. ಒಂದು ಕಡೆ ಅರಬ್ಬೀ ಸಮುದ್ರ ಮತ್ತೊಂದು ಕಡೆ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಉಡುಪಿಯಲ್ಲಿ, ಈಗ ಭತ್ತದ ಕಟಾವು ಮತ್ತು ಆಳ ಸಮುದ್ರ ಮೀನುಗಾರಿಕೆಯ ಸೀಸನ್. ಆದರೆ  ಮಹಾಮಳೆಯು ಎಲ್ಲರನ್ನೂ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ನಮ್ಮ ಪ್ರತಿನಿಧಿ ಶಶಿಧರ್ ಮಾಸ್ತಿಬೈಲು ಉಡುಪಿಯ ಚಿತ್ರಣ ಹೇಗಿದೆ ಎಂಬುವುದನ್ನು ವಿವರಿಸಿದ್ದಾರೆ....    

ಉಡುಪಿ (ಅ.22): ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆ ಸುರಿಯುತ್ತಿದೆ. ನಿನ್ನೆ (ಸೋಮವಾರ) ರಾತ್ರಿಯಿಂದ ಮಳೆರಾಯ ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾನೆಯಾದರೂ, ಹವಾಮಾನ ಇಲಾಖೆಯು ನಾಳೆಯಿಂದ 3 ದಿನಗಳ ಕಾಲ ರೆಡ್ ಅಲರ್ಟ್ ಘೋಷಿಸಿದೆ.

ಒಂದು ಕಡೆ ಅರಬ್ಬೀ ಸಮುದ್ರ ಮತ್ತೊಂದು ಕಡೆ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಉಡುಪಿಯಲ್ಲಿ, ಈಗ ಭತ್ತದ ಕಟಾವು ಮತ್ತು ಆಳ ಸಮುದ್ರ ಮೀನುಗಾರಿಕೆಯ ಸೀಸನ್. ಆದರೆ  ಮಹಾಮಳೆಯು ಎಲ್ಲರನ್ನೂ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. 

ಸಾಮಾನ್ಯವಾಗಿ ಸುರಿವ ‘ದೀಪಾವಳಿ ಮಳೆ’ ಈ ಬಾರಿ ಹಬ್ಬದ ಸಂಭ್ರಮದ ಮೇಲೂ ಮೋಡ ಕವಿಯುವಂತೆ ಮಾಡಿದೆ. ನಮ್ಮ ಪ್ರತಿನಿಧಿ ಶಶಿಧರ್ ಮಾಸ್ತಿಬೈಲು ಉಡುಪಿಯ ಚಿತ್ರಣ ಹೇಗಿದೆ ಎಂಬುವುದನ್ನು ವಿವರಿಸಿದ್ದಾರೆ....