'ನಮ್ಮದು ಯಾವ ವಿಚಾರ ಬೀದಿಗೆ ಬಂದಿದೆ? ನಿಮ್ಮದು ರೆಡಿ ಮಾಡಿಕೊಳ್ಳಯ್ಯ: ಕಟೀಲ್ಗೆ ಡಿಕೆಶಿ ವಾರ್ನ್
ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಮತ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಡಿಕೆಶಿ ಗರಂ ಆಗಿದ್ದಾರೆ.
ಬೆಂಗಳೂರು (ಏ. 04): ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಭಿನ್ನಮತ ಎಂಬ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಡಿಕೆಶಿ ಗರಂ ಆಗಿದ್ದಾರೆ.
'ನಮ್ಮದು ಯಾವ ವಿಚಾರ ಬೀದಿಗೆ ಬಂದಿದೆ..? ನಿಮ್ಮದು ರೆಡಿ ಮಾಡಿಕೊಳ್ಳಯ್ಯ' ಎಂದು ಏಕವಚನದಲ್ಲಿ ಕಿಡಿಕಾರಿದ್ದಾರೆ. ನಾವು ವಿರೋಧ ಪಕ್ಷದಲ್ಲಿದ್ದೇವೆ. ನಿನ್ನ ಲೀಡರ್ಶಿಪ್ನಲ್ಲಿ ರಾಜ್ಯ ಇದೆಯಲ್ಲ, ಅದನ್ನು ಸರಿ ಮಾಡಿಕೊಳ್ಳಯ್ಯ ಎಂದಿದ್ದಾರೆ. ಇಬ್ಬರ ನಡುವೆ ಬಲು ಜೋರಾಗಿಯೇ ವಾಕ್ಸಮರ ನಡೆದಿದೆ.