Asianet Suvarna News Asianet Suvarna News

ಕೊರೋನಾ ಬಂದ್ರೂ ಬಿಎಂಟಿಸಿ ಅಧಿಕಾರಿಗಳ ನಿರ್ಲಕ್ಷ್ಯ: ಆತಂಕದಲ್ಲಿ ಸಿಬ್ಬಂದಿ

ಬಿಎಂಟಿಸಿ ಚಾಲಕರಿಗೆ ಗ್ಲೌಸ್‌ ಹಾಗೂ ಮಾಸ್ಕ್‌ ನೀಡಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳು| ಕೋರಮಂಗಲದ ಬಸ್‌ ಡಿಪೋದಲ್ಲಿ ಆತಂಕ| ಬಸ್ ಹತ್ತಲು ಸಿಬ್ಬಂದಿಗಳೇ ಹಿಂದೇಟು| ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಬಿಎಂಟಿಸಿ ಅಧಿಕಾರಿಗಳು|

ಬೆಂಗಳೂರು(ಜೂ.14): ಮಹಾಮಾರಿ ಕೊರೋನಾ ಆತಂಕದ ಮಧ್ಯೆ ಅಧಿಕಾರಿಗಳು ಬಿಎಂಟಿಸಿ ಚಾಲಕರಿಗೆ ಗ್ಲೌಸ್‌ ಹಾಗೂ ಮಾಸ್ಕ್‌ ನೀಡಲು ಹಿಂದೇಟು ಹಾಕುತ್ತಿರುವ ಘಟನೆ ಕೋರಮಂಗಲದ ಬಸ್‌ ಡಿಪೋದಲ್ಲಿ ನಡೆದಿದೆ. ಇದರಿಂದ ಬಸ್‌ ಡಿಪೋದಲ್ಲಿ ಆತಂಕ ಶುರುವಾಗಿದೆ. ಬಸ್ ಹತ್ತಲು ಸಿಬ್ಬಂದಿಗಳೇ ಹಿಂದೇಟು ಹಾಕುತ್ತಿದ್ದಾರೆ. 

ಡಾ. ಸುಧಾಕರ್ ಬಿಚ್ಚಿಟ್ಟ 'ಆಗಸ್ಟ್ ಸ್ಫೋಟ'ದ ರಹಸ್ಯ

ನಮಗೆ ಅಗತ್ಯವಿರುವ ಗ್ಲೌಸ್‌ ಹಾಗೂ ಮಾಸ್ಕ್‌ಗಳನ್ನ ಕೊಡಿ ಅಂತ ಸಿಬ್ಬಂದಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಕೊರೋನಾ ವೈರಸ್‌ ರಣಕೇಕೆ ಹಾಕುತ್ತಿದ್ದರೂ ಕೂಡ ಬಿಎಂಟಿಸಿ ಅಧಿಕಾರಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ.