ಕೊರೋನಾ ಚಿಕಿತ್ಸೆಗೆ ಟೆಲಿ ICU ಉದ್ಘಾಟಿಸಿದ ಸಚಿವ ಡಾ. ಕೆ. ಸುಧಾಕರ್
ಬೆಂಗಳೂರು(ಏ.15): ಕೊರೋನಾ ಸೊಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಹಾಗೂ ಕೋವಿಡ್ 19ನಿಂದ ಸಾವಿನ ಪ್ರಮಾಣವನ್ನು ತಡೆಯಲು ಅತ್ಯಾಧುನಿಕ ಟೆಲಿ ಐಸಿಯು ಘಟಕವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಉದ್ಘಾಟಿಸಿದರು.
ರಾಜ್ಯದ ಎಲ್ಲೆಡೆ ಕೊರೋನಾ ಸೋಂಕಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಟೆಲಿ-ಐಸಿಯು ವ್ಯವಸ್ಥೆಯನ್ನು ಪ್ರಾರಂಭಿಸಿದ್ದೇವೆ. ದೇಶದಲ್ಲೇ ಮೊದಲ ಬಾರಿಗೆ, ಇಂತಹ ಘಟಕದ ಮೂಲಕ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಜ್ಞ ವೈದ್ಯರು ಸೋಂಕಿತರಿಗೆ ಉತ್ತಮ ಚಿಕಿತ್ಸೆ, ಪೂರ್ಣ ಗುಣಮುಖರಾಗುವವರೆಗೆ ನಿಗಾ ವಹಿಸುತ್ತಾರೆ. @BSYBJPhttps://t.co/Jtdfgqz6BR
— Dr Sudhakar K (@mla_sudhakar) April 15, 2020
ರಾಜ್ಯದ ಯಾವುದೇ ಮೂಲೆಯಲ್ಲಿರುವ ಕೋವಿಡ್ 19 ಸೋಂಕಿತರ ಪ್ರಕರಣವನ್ನು ಬೆಂಗಳೂರಿನಲ್ಲೇ ಕುಳಿತು ಮಾಹಿತಿ ಕಲೆಹಾಕಬಹುದಾಗಿದೆ. ತಜ್ಞರು ಸೋಂಕಿತರಿಗೆ ಉತ್ತಮ ಚಿಕಿತ್ಸೆ, ಪೂರ್ಣ ಗುಣಮುಖವಾಗುವವರೆಗೂ ನಿಗಾವಹಿಸುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಕೊರೋನಾ ಸೋಂಕು ದೃಢ: ಸೀಲ್ಡೌನ್ಗೆ ಸಚಿವರ ಆದೇಶ
ಟೆಲಿ ಐಸಿಯದ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಸಚಿವರು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.