Asianet Suvarna News Asianet Suvarna News

ರಾಜ್ಯದಲ್ಲಿ ಸೋಂಕು ಹೆಚ್ಚಾಗಲು ಕಾಂಟ್ಯಾಕ್ಟ್ ಟ್ರೇಸಿಂಗ್‌ನಲ್ಲಿ ಇಳಿಮುಖ ಕಾರಣ..?

ಈ ಮೊದಲು ಕೊರೋನಾ ಸಂಪರ್ಕಿತರ ಹುಡುಕಾಟದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿತ್ತು. ಆದರೆ ಇದೀಗ ಕರ್ನಾಟಕ ಈ ವಿಚಾರದಲ್ಲಿ ಹಿಂದೆ ಬಿದ್ದಿದೆ. ಪ್ರಾಥಮಿಕ ಸಂಪರ್ಕದಲ್ಲಿ ಇರೋರನ್ನೇ ಪತ್ತೆಹಚ್ಚಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

ಬೆಂಗಳೂರು(ಜು.23): ಒಂದು ಕಡೆ ರಾಜ್ಯದಲ್ಲಿ ಕೊರೋನಾ ವೈರಸ್ ಶರವೇಗದಲ್ಲಿ ಹಬ್ಬುತ್ತಿದೆ, ಇನ್ನು ಮತ್ತೊಂದು ಕಡೆ ಕಾಂಟ್ಯಾಕ್ಟ್ ಟ್ರೇಸಿಂಗ್ ವಿಚಾರದಲ್ಲಿ ಇಳಿಮುಖವಾಗಿರುವ ಆಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. 

ಹೌದು, ಈ ಮೊದಲು ಕೊರೋನಾ ಸಂಪರ್ಕಿತರ ಹುಡುಕಾಟದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿತ್ತು. ಆದರೆ ಇದೀಗ ಕರ್ನಾಟಕ ಈ ವಿಚಾರದಲ್ಲಿ ಹಿಂದೆ ಬಿದ್ದಿದೆ. ಪ್ರಾಥಮಿಕ ಸಂಪರ್ಕದಲ್ಲಿ ಇರೋರನ್ನೇ ಪತ್ತೆಹಚ್ಚಲು ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

ಯಾದಗಿರಿ ಕೋವಿಡ್ ಆಸ್ಪತ್ರೆ ಅವ್ಯವಸ್ಥೆಗೆ ಕೊನೆ ಯಾವಾಗ..?

ಈ ಮೊದಲು ಒಬ್ಬ ಸೋಂಕಿತನಿದ್ದರೆ ಆತನ ಸಂಪರ್ಕಕಕ್ಕೆ ಬಂದ 47 ಜನಗಳನ್ನು ಪತ್ತೆ ಮಾಡಲಾಗುತ್ತಿತ್ತು. ಹಾಗಾಗಿ ಸೋಂಕು ನಿಯಂತ್ರದಲ್ಲಿತ್ತು. ಆದರೆ ಈಗ ಪತ್ತೆಹಚ್ಚುವ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

Video Top Stories