ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದು ಹೀಗೆ
- ವಿಶೇಷ ಆರ್ಥಿಕ ಪ್ಯಾಕೇಜ್ ಬಗ್ಗೆ ರೈತ ಮುಖಂಡರ ಅಸಮಾಧಾನ
- ರೈತರು, ಜನರು ಕಷ್ಟದಲ್ಲಿದ್ದಾಗ ಸರ್ಕಾರ ಅವರ ಪರ ನಿಲ್ಲಬೇಕು
- ರೈತರಿಗೆ ಬೆಂಬಲ ಬೆಲೆ ಘೋಷಿಸಿ, ಸಹಾಯಧನದ ಮೊತ್ತ ಹೆಚ್ಚಿಸಿ
ಬೆಂಗಳೂರು (ಮೇ. 19): 'ಸರ್ಕಾರಕ್ಕೆ ತೆರಿಗೆ ಹಣ ಜನರ ದುಡಿಮೆಯಿಂದ ಬರುತ್ತದೆ. ಅವರು ಕಷ್ಟಪಡುವುದರಿಂದ ಬರುತ್ತದೆ. ಜನರು ಕಷ್ಟದಲ್ಲಿರುವಾಗ ಆ ತೆರಿಗೆ ಹಣ ವನ್ನು ಕೊಡಲು ಸರ್ಕಾರಕ್ಕೇನು ಸಮಸ್ಯೆ.'? ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕುರಬೂರು ಶಾಂತಕುಮಾರ್ ಪ್ರತಿಕ್ರಿಯಿಸಿ, 'ಹೂವು, ಹಣ್ಣು, ತರಕಾರಿ ಬೆಳೆದ ರೈತರಿಗೆ ಹೆಕ್ಟೇರ್ಗೆ 3 ಸಾವಿರ ರೂ ಸಹಾಯಧನ ಘೋಷಿಸಿದ್ದಾರೆ. ಇದನ್ನ 10 ಸಾವಿರಕ್ಕೆ ಹೆಚ್ಚಿಸಬೇಕು' ಎಂದು ಒತ್ತಾಯಿಸಿದ್ಧಾರೆ.