ಸಾಹುಕಾರ್ ಸೀಡಿ ಕೆಲವರಿಗೆ ಢವಢವ, ಬಿಗಿ ಕಾನೂನು ತರಲು ಮುಂದಾಗುತ್ತಾ ಸರ್ಕಾರ.?
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಳಿಕ ಬೇರೆ ಸಚಿವರಿಗೆ ಢವಢವ ಶುರುವಾಗಿದೆ. ಸೀಡಿ ವಿಚಾರಕ್ಕೆಂದೇ ಬಿಗಿ ಕಾನೂನು ತರುತ್ತಂತೆ ಬಿಎಸ್ವೈ ಸರ್ಕಾರ. ಈ ವಿಚಾರವಾಗಿ ನಿನ್ನೆ ಮಹತ್ವದ ಚರ್ಚೆ ನಡೆದಿದೆ.
ಬೆಂಗಳೂರು (ಮಾ. 06): ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಳಿಕ ಬೇರೆ ಸಚಿವರಿಗೆ ಢವಢವ ಶುರುವಾಗಿದೆ. ಸೀಡಿ ವಿಚಾರಕ್ಕೆಂದೇ ಬಿಗಿ ಕಾನೂನು ತರುತ್ತಂತೆ ಬಿಎಸ್ವೈ ಸರ್ಕಾರ. ಈ ವಿಚಾರವಾಗಿ ನಿನ್ನೆ ಮಹತ್ವದ ಚರ್ಚೆ ನಡೆದಿದೆ.
ಜಾರಕಿಹೊಳಿ ಕೇಸಲ್ಲಿ 5 ಕೋಟಿ ರೂ ಡೀಲ್, CD ಸ್ಕ್ಯಾಂಡಲ್ಗೆ ಹೊಸ ಟ್ವಿಸ್ಟ್ ಕೊಟ್ಟ ಕುಮಾರಣ್ಣ!
ವೈಯಕ್ತಿಕ ವಿಚಾರದಲ್ಲಿ ತೇಜೋವಧೆಗೆ ಅವಕಾಶ ಇರುವುದಿಲ್ಲ. ಯಾರ್ಯಾರೋ ವಿಡಿಯೋ ಬಿಡುಗಡೆ ಮಾಡುವಂತಿಲ್ಲ. ಮೀಡಿಯಾದಲ್ಲೂ ತಮ್ಮ ಗೌರವಕ್ಕೆ ಚ್ಯುತಿ ಬರುವಂತಹ ಯಾವುದೇ ಸುದ್ದಿ, ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಕಾನೂನು ತರುವಂತೆ ಬಿಎಸ್ವೈಗೆ ಮಂತ್ರಿಗಳು, ಶಾಸಕರು ಮನವಿ ಮಾಡಿದ್ದಾರೆ. ಈ ಬಗ್ಗೆ ಸರ್ಕಾರ ಕಾನೂನು ತಜ್ಞರ ಸಲಹೆ ಕೇಳಿದೆ.