ಆಜಾನ್-ಸುಪ್ರಭಾತ ವಿವಾದ: ಕರ್ನಾಟಕದಲ್ಲೂ ಜಾರಿಯಾಗುತ್ತಾ ಉತ್ತರ ಪ್ರದೇಶ ರೂಲ್ಸ್..?
* ಉತ್ತರ ಪ್ರದೇಶದಲ್ಲಿ ಅನಧಿಕೃತ ಮೈಕ್ಗಳ ವಿರುದ್ಧ ಸಮರ ಸಾರಿದ್ದ ಯೋಗಿ
* ಅನಧಿಕೃತ ಮೈಕ್ಗಳ ಸಿಎಂ ಯೋಗಿ ತೆರವುಗೊಳಿಸಿದ್ದರು ಯುಪಿ ಸಿಎಂ
* ರಾಜ್ಯದಲ್ಲಿ ದಿನೇ ದಿನೇ ತೀವ್ರಗೊಳ್ಳುತ್ತಿರುವ ಆಜಾನ್- ಭಜನೆ ವಿವಾದ
ಬೆಂಗಳೂರು(ಮೇ.10): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಮಾದರಿಯನ್ನ ಸಿಎಂ ಬಸವರಾಜ ಬೊಮ್ಮಾಯಿ ಅನುಸರಿಸುತ್ತಾರಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿವೆ. ರಾಜ್ಯದಲ್ಲೂ ಜಾರಿಯಾಗುತ್ತಾ ಉತ್ತರ ಪ್ರದೇಶ ಟಫ್ ರೂಲ್ಸ್?. ಉತ್ತರ ಪ್ರದೇಶದಲ್ಲಿ ಅನಧಿಕೃತ ಮೈಕ್ಗಳ ವಿರುದ್ಧ ಯೋಗಿ ಸಮರ ಸಾರಿದ್ದರು. ಅನಧಿಕೃತ ಮೈಕ್ಗಳ ಸಿಎಂ ಯೋಗಿ ತೆರವುಗೊಳಿಸಿದ್ದರು. ಆಜಾನ್- ಭಜನೆ ವಿಚಾರ ರಾಜ್ಯದಲ್ಲಿ ದಿನೇ ದಿನೇ ತೀವ್ರಗೊಳ್ಳುತ್ತಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಯುಪಿ ಸಿಎಂ ಯೋಗಿ ಮಾದರಿ ಅನುಸರಿಸಿ ರಾಜ್ಯದಲ್ಲಿ ಎದ್ದಿರುವ ಆಜಾನ್-ಸುಪ್ರಭಾತ ವಿವಾದ ತಣ್ಣಗಾಗಿಸ್ತಾರಾ ಎಂಬುದನ್ನ ಕಾದುನೋಡಬೇಕಿದೆ.