ಬೆಂಜ್ ಕಾರು ಅಪಘಾತದಲ್ಲಿ ಅಶೋಕ್ ಪುತ್ರ? ಇದಕ್ಕೆ ಗೃಹ ಸಚಿವರ ಫಸ್ಟ್ ರಿಯಾಕ್ಷನ್
ಕಳೆದ ಮೂರು ದಿನಗಳಿಂದ ಹೊಸಪೇಟೆ ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ ಮರ್ಸಿಡೆಸ್ ಬೆಂಜ್ ಕಾರು ಅಪಘಾತ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರು/ ಬಳ್ಳಾರಿ, (ಫೆ.14): ಕಳೆದ ಮೂರು ದಿನಗಳಿಂದ ಹೊಸಪೇಟೆ ಮರಿಯಮ್ಮನಹಳ್ಳಿ ಬಳಿ ಸಂಭವಿಸಿದ ಮರ್ಸಿಡೆಸ್ ಬೆಂಜ್ ಕಾರು ಅಪಘಾತ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
'ಮಗ ಇದ್ನೋ ಇಲ್ವೋ ಮಾತಾಡಲ್ಲ, ಕಾರಿಗೂ ನಮಗೂ ಸಂಬಂಧ ಇಲ್ಲ'
ಕಾರಣ ಅಪಘಾತದ ಕಾರಿನಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪುತ್ರ ಶರತ್ ಇದ್ದರು ಎನ್ನುವುದು. ಈ ಕೇಸ್ ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನು ಅಪಘಾತದ ಬಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದ್ರೆ ಬೊಮ್ಮಾಯಿ ಏನು ಹೇಳಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ.