Asianet Suvarna News Asianet Suvarna News

ಡಿಕೆಶಿ- ಈಶ್ವರಪ್ಪ ನಡುವೆ ವೈಯಕ್ತಿಕ ಜಗಳ: ಆರ್ ಅಶೋಕ್

ಡಿಕೆಶಿ- ಈಶ್ವರಪ್ಪ (DK Shivakumar Eshwarappa) ನಡುವೆ ವೈಯಕ್ತಿಕ ಜಗಳವಾಗಿ ಪರಿಣಮಿಸಿದೆ. ಇವರಿಬ್ಬರ ವೈಯಕ್ತಿಕ ಕಾರಣದಿಂದ ಅಧಿವೇಶನ ನಿಂತಿದೆ. ಸ್ಪೀಕರ್ ಸಂಧಾನ ಮಾಡಿದರೂ, ಕಾಂಗ್ರೆಸ್ ಮೊಂಡಾಟ ಮಾಡುತ್ತಿದೆ' ಎಂದು ಕಂದಾಯ ಸಚಿವ ಆರ್ ಅಶೋಕ್ (R Ashok) ಹೇಳಿದ್ದಾರೆ. 

First Published Feb 22, 2022, 4:31 PM IST | Last Updated Feb 22, 2022, 5:14 PM IST

ಬೆಂಗಳೂರು (ಫೆ. 22): ಡಿಕೆಶಿ- ಈಶ್ವರಪ್ಪ (DK Shivakumar Eshwarappa) ನಡುವೆ ವೈಯಕ್ತಿಕ ಜಗಳವಾಗಿ ಪರಿಣಮಿಸಿದೆ. ಇವರಿಬ್ಬರ ವೈಯಕ್ತಿಕ ಕಾರಣದಿಂದ ಅಧಿವೇಶನ ನಿಂತಿದೆ. ಸ್ಪೀಕರ್ ಸಂಧಾನ ಮಾಡಿದರೂ, ಕಾಂಗ್ರೆಸ್ ಮೊಂಡಾಟ ಮಾಡುತ್ತಿದೆ' ಎಂದು ಕಂದಾಯ ಸಚಿವ ಆರ್ ಅಶೋಕ್ (R Ashok) ಹೇಳಿದ್ದಾರೆ. 

ದೇಶದ್ರೋಹ ಕೃತ್ಯ ಮಾಡಿದವರನ್ನು ಎನ್‌ಕೌಂಟರ್ ಮಾಡ್ಬೇಕು: ರೇಣುಕಾಚಾರ್ಯ

ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಶಾಸಕರ ನಿಯೋಗವು ಇಂದು ಸಂಜೆ ವಿಧಾನಸೌಧದಿಂದ ರಾಜಭವನದವರೆಗೆ ಪಾದಯಾತ್ರೆ ಮೂಲಕ ತೆರಳಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.  ತನ್ಮೂಲಕ ರಾಷ್ಟ್ರಧ್ವಜಕ್ಕೆ ಅವ ಮಾನ ಮಾಡಿರುವ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಮನವಿ ಮಾಡಲು ನಿರ್ಧರಿಸಿದೆ.