Asianet Suvarna News Asianet Suvarna News

ದೇಶದ್ರೋಹ ಕೃತ್ಯ ಮಾಡಿದವರನ್ನು ಎನ್‌ಕೌಂಟರ್ ಮಾಡ್ಬೇಕು: ರೇಣುಕಾಚಾರ್ಯ

ಶಿವಮೊಗ್ಗದ (Shivamogga) ಘಟನೆ ಮತ್ತೆ ಮರುಕಳಿಸಬಾರದು. ರಾಷ್ಟ್ರದ್ರೋಹ ಹೇಳಿಕೆ ಕೊಡುವವರನ್ನು ಎನ್‌ಕೌಂಟರ್ (Encounter) ಮಾಡಬೇಕು. ಈ ಕೃತ್ಯದಲ್ಲಿ ಯಾರೇ ಇದ್ದರೂ ಬಿಡುವ ಪ್ರಶ್ನೆಯೇ ಇಲ್ಲ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು' ಎಂದು ಶಾಸಕ ರೇಣುಕಾಚಾರ್ಯ (Renukacharya) ಹೇಳಿದ್ದಾರೆ. 

First Published Feb 22, 2022, 4:03 PM IST | Last Updated Feb 22, 2022, 5:12 PM IST

ಶಿವಮೊಗ್ಗ (ಫೆ. 22): ಇಂತಹ ಘಟನೆ ಮತ್ತೆ ಮರುಕಳಿಸಬಾರದು. ರಾಷ್ಟ್ರದ್ರೋಹ ಹೇಳಿಕೆ ಕೊಡುವವರನ್ನು ಎನ್‌ಕೌಂಟರ್ (Encounter) ಮಾಡಬೇಕು. ಈ ಕೃತ್ಯದಲ್ಲಿ ಯಾರೇ ಇದ್ದರೂ ಬಿಡುವ ಪ್ರಶ್ನೆಯೇ ಇಲ್ಲ, ಸೂಕ್ತ ಕ್ರಮ ತೆಗೆದುಕೊಳ್ಳಬೇಕು' ಎಂದು ಶಾಸಕ ರೇಣುಕಾಚಾರ್ಯ (Renukacharya) ಹೇಳಿದ್ದಾರೆ.

Shivamogga: ಹರ್ಷನ ಹತ್ಯೆಗೆ ಕಾರಣವೇನು..? ಸಹೋದರಿ ಹೀಗೆ ಹೇಳ್ತಾರೆ

ಸಚಿವ ಈಶ್ವರಪ್ಪನವರು ಯಾವ ತಪ್ಪೂ ಮಾಡಿಲ್ಲ. ಹಾಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್‌ನವರು ಸದನದಲ್ಲಿ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಯಾವ ಪುರುಷಾರ್ಥಕ್ಕೆ ಧರಣಿ ಮಾಡುತ್ತಿದ್ದಾರೆ ಎಂಬುದನ್ನು ಜನತೆಯೇ ಪ್ರಶ್ನೆ ಮಾಡಬೇಕು' ಎಂದರು.

ಶಿವಮೊಗ್ಗದಲ್ಲಿ ಪರಿಸ್ಥಿತಿ ಕಂಟ್ರೋಲ್‌ಗೆ ಬಂದಿದೆ. ಎಲ್ಲಾ ಕಡೆಯೂ ಪೊಲೀಸರನ್ನು ನಿಯೋಜಿಸಲಾಗಿದೆ. ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಉಳಿದವರಿಗೆ ತನಿಖೆ ಮುಂದುವರೆದಿದೆ' ಎಂದು ಎಡಿಜಿಪಿ ಮುರುಗನ್ ಹೇಳಿದ್ದಾರೆ.