Asianet Suvarna News Asianet Suvarna News

ಕೊರೊನಾ ಮರೆತು ಹಬ್ಬದ ಖರೀದಿಯಲ್ಲಿ ಜನ ಬ್ಯುಸಿ, ನಿಯಮಾವಳಿಗಳು ಲೆಕ್ಕಕ್ಕೇ ಇಲ್ಲ!

ಇಂದು ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ಹೊಸ ವರ್ಷಾಚರಣೆಯಲ್ಲಿ ಎಲ್ಲರೂ ಬ್ಯುಸಿಯಾಗಿದ್ದಾರೆ. ಹಣ್ಣು, ಹೂವು, ಪೂಜಾ ಸಾಮಗ್ರಿಗಳು, ಹೊಸ ಬಟ್ಟೆ ಹೀಗೆ ಮಾರ್ಕೆಟ್‌ನಲ್ಲಿ ಖರೀದಿ ಜೋರಾಗಿದೆ. 

ಬೆಂಗಳೂರು (ಏ. 13): ಇಂದು ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ. ಹೊಸ ವರ್ಷಾಚರಣೆಯಲ್ಲಿ ಎಲ್ಲರೂ ಬ್ಯುಸಿಯಾಗಿದ್ದಾರೆ. ಹಣ್ಣು, ಹೂವು, ಪೂಜಾ ಸಾಮಗ್ರಿಗಳು, ಹೊಸ ಬಟ್ಟೆ ಹೀಗೆ ಮಾರ್ಕೆಟ್‌ನಲ್ಲಿ ಖರೀದಿ ಜೋರಾಗಿದೆ. ಕೊರೊನಾ ಭಯವಿಲ್ಲದೇ, ಅಂತರವಿಲ್ಲದೇ, ಮಾಸ್ಕ್ ಇಲ್ಲದೇ ಜನ ಜವಾಬ್ದಾರಿ ಮರೆತಿದ್ದಾರೆ. ಒಂದು ಕಡೆ ಸೋಂಕು ಹೆಚ್ಚಳವಾಗುತ್ತಿದೆ, ಇನ್ನೊಂದು ಕಡೆ ಜನರ ನಿರ್ಲಕ್ಷ್ಯ ಎರಡೂ ಸೇರಿ ಸೋಂಕು ಇನ್ನಷ್ಟು ಹೆಚ್ಚಳವಾಗುವುದರಲ್ಲಿ ಅನುಮಾನವೇ ಇಲ್ಲ. ಕೆ ಆರ್ ಮಾರ್ಕೆಟ್ ಚಿತ್ರಣ ನೋಡಿದರೆ, ನಿರ್ಲಕ್ಷ್ಯ ಯಾವ ಮಟ್ಟಿಗಿದೆ ಎಂದು ತಿಳಿಯುತ್ತದೆ. 

ಉಲ್ಟಾ ಹೇಳಿಕೆ ವದಂತಿಗೆ ತೆರೆ ಎಳೆದ ಸೀಡಿ ಲೇಡಿ, ಮತ್ತೊಂದು ವಿಡಿಯೋ ರಿಲೀಸ್