Asianet Suvarna News Asianet Suvarna News

ರಾಜೀನಾಮೆ ಸಾಲಲ್ಲ, ಈಶ್ವರಪ್ಪನ್ನ ಬಂಧಿಸಬೇಕು: ಕಾಂಗ್ರೆಸ್‌ ನಾಯಕರಿಂದ ಅಹೋರಾತ್ರಿ ಧರಣಿ

*  ಕೇವಲ ರಾಜೀನಾಮೆ ಕೊಟ್ಟರೆ ಸಾಲದು ಈಶ್ವರಪ್ಪ ಅವರನ್ನ ಬಂಧಿಸಬೇಕು 
*  ವಿಧಾನಸೌಧದಲ್ಲಿ ಕಾಂಗ್ರೆಸ್‌ ನಾಯಕ ಅಹೋರಾತ್ರಿ ಧರಣಿ 
*  ವಿಧಾನಸೌಧದಲ್ಲೇ ರಾತ್ರಿ ಕಳೆದ ಕೈ ನಾಯಕರು 
 

First Published Apr 15, 2022, 9:48 AM IST | Last Updated Apr 15, 2022, 9:48 AM IST

ಬೆಂಗಳೂರು(ಏ.14):  ಸಂತೋಷ್‌ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್‌ ಸುಮ್ಮನಾಗುತ್ತಿಲ್ಲ. ಹೌದು, ಕೇವಲ ರಾಜೀನಾಮೆ ಕೊಟ್ಟರೆ ಸಾಲದು ಈಶ್ವರಪ್ಪ ಅವರನ್ನ ಬಂಧಿಸಬೇಕು ಅಂತ ವಿಧಾನಸೌಧದಲ್ಲಿ ಕಾಂಗ್ರೆಸ್‌ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಕೇಸ್‌ ದಾಖಲಿಸುವಂತೆ ಪ್ರತಪಕ್ಷ ಆಗ್ರಹಿಸಿದೆ. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌, ಎಂ.ಬಿ.ಪಾಟೀಲ್‌ ಸೇರಿದಂತೆ ಪ್ರಮುಖ ನಾಯಕರು ಧರಣಿಯಲ್ಲಿ ಭಾಗಿಯಾಗಿದ್ದರು. ವಿಧಾನಸೌಧದಲ್ಲೇ ಕಾಂಗ್ರೆಸ್‌ ನಾಯಕರು ರಾತ್ರಿ ಕಳೆದಿದ್ದಾರೆ.   

ಈಶ್ವರಪ್ಪ ರಾಜೀನಾಮೆ ಏನೋ ಕೊಟ್ಟರು. ಅರೆಸ್ಟ್ ಆಗ್ತಾರೋ..?