ಈಶ್ವರಪ್ಪ ರಾಜೀನಾಮೆ ಏನೋ ಕೊಟ್ಟರು. ಅರೆಸ್ಟ್ ಆಗ್ತಾರೋ..?
ಕರ್ನಾಟಕ ರಾಜ್ಯ ರಾಜಕಾರಣದ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಚಲನ ಮೂಡಿಸಿದ್ದು, ಕೆಎಸ್ ಈಶ್ವರಪ್ಪನವರ ಸಚಿವ ಸ್ಥಾನಕ್ಕೆ ಬಲಿಪಡೆದುಕೊಂಡಿದೆ. ಈಶ್ವರಪ್ಪನವರು ರಾಜೀನಾಮೆ ಏನೋ ಕೊಟ್ಟರು. ಅರೆಸ್ಟ್ ಆಗ್ತಾರೋ ಎನ್ನುವುದು ಕಾದುನೋಡಬೇಕಿದೆ.
ಬೆಂಗಳೂರು, (ಏ.14): ಕರ್ನಾಟಕ ರಾಜ್ಯ ರಾಜಕಾರಣದ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಚಲನ ಮೂಡಿಸಿದ್ದು, ಕೆಎಸ್ ಈಶ್ವರಪ್ಪನವರ ಸಚಿವ ಸ್ಥಾನಕ್ಕೆ ಬಲಿಪಡೆದುಕೊಂಡಿದೆ. ಈಶ್ವರಪ್ಪನವರು ರಾಜೀನಾಮೆ ಏನೋ ಕೊಟ್ಟರು. ಅರೆಸ್ಟ್ ಆಗ್ತಾರೋ ಎನ್ನುವುದು ಕಾದುನೋಡಬೇಕಿದೆ.
ಕೊನೆಗೂ ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ, ಬಿಜೆಪಿ ಸರ್ಕಾರದ 2ನೇ ವಿಕೆಟ್ ಪತನ
ಸಂತೋಷ್ ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂಬ ಸಂದೇಶವನ್ನು ಎಲ್ಲ ಮಾಧ್ಯಮ ಪ್ರತಿನಿಧಿಗಳಿಗೆ ವಾಟ್ಸಪ್ (Whatsapp) ಮಾಡಿದ್ದರು. ಹೀಗಾಗಿ ಸಚಿವರಾದ ಈಶ್ವರಪ್ಪ ರಾಜೀನಾಮೆ ನೀಡಬೇಕು ಮತ್ತು ಅವರ ವಿರುದ್ಧ ಎಫ್ ಐ ಆರ್ (FIR) ದಾಖಲಿಸಬೇಕು ಎಂದು ಕಾಂಗ್ರೆಸ್ (Congress) ಆಗ್ರಹಿಸಿತ್ತು. ಇದಾದ ಮೇಲೆ ನಿನ್ನೆ ಮಧ್ಯಾಹ್ನ ನಂತರ ನಡೆದ ಬೆಳವಣಿಗೆಯಲ್ಲಿ ಸಂತೋಷ್ ಆತ್ಮಹತ್ಯೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮೊದಲ ಆರೋಪಿ ಸ್ಥಾನದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೆಸರು ಇದೆ. ಆದ್ರೆ, ಈಶ್ವರಪ್ಪನವರು ರಾಜೀನಾಮೆ ಏನೋ ಕೊಟ್ಟರು. ಅರೆಸ್ಟ್ ಆಗ್ತಾರೋ ಎನ್ನುವುದು ಕಾದುನೋಡಬೇಕಿದೆ.