Asianet Suvarna News Asianet Suvarna News

ರಾಮೇಶ್ವರಂ ಸ್ಫೋಟದ ತನಿಖೆ ಹಾದಿ ತಪ್ಪಿಸಲು ನಡೆದಿತ್ತು ಪ್ಲಾನ್, ಶಂಕಿತನ ಹೆಜ್ಜೆ ಗುರುತು ಪತ್ತೆ!

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದಲ್ಲಿ ಟೈಮರ್ ಬಾಂಬ್ ಸ್ಫೋಟಿಸಿದ ಶಂಕಿತನ ಮತ್ತಷ್ಟು ವಿವರಗಳು ಲಭ್ಯ, ಆರ್ಟಿಕಲ್ 370 ರದ್ದು ಬಳಿಕ ಮೊದಲ ಬಾರಿಗೆ ಪ್ರಧಾನಿ ಮೋದಿ ಜಮ್ಮು ಕಾಶ್ಮೀರ ಬೇಟಿ, ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದೆ. ಶಂಕಿತನ ಮತ್ತಷ್ಟು ಸಿಸಿಟಿವಿ ದೃಶ್ಯಗಳು ಪತ್ತೆಯಾಗಿದೆ. ಹೊಟೆಲ್‌ನಲ್ಲಿ ಈತ ತನಿಖಾ ಅಧಿಕಾರಿಗಳ ದಿಕ್ಕು ತಪ್ಪಿಸಲು ಮಾಡಿದ ನಾಟಕಗಳು ಒಂದೊಂದಾಗಿ ಬಯಲಾಗುತ್ತಿದೆ. ಇತ್ತ ಸ್ಫೋಟದ ಬಳಿಕ ಮಸೀದಿಗೆ ತೆರಳಿ ವೇಷ ಬದಲಿಸಿರುವ ಅನುಮಾನಗಳನ್ನು ತನಿಖಾ ತಂಡ ವ್ಯಕ್ತಪಡಿಸಿದೆ. ಬಾಂಬ್ ಇಟ್ಟು ಬೆಂಗಳೂರಿನಿಂದ ಬಳ್ಳಾರಿಗೆ ತೆರಳಿರುವ ಕುರಿತು ಅಧಿಕಾರಿಗಳ ತನಿಖೆ ನಡೆಸುತ್ತಿದ್ದಾರೆ. ಶಂಕಿತನ ಕುರಿತ ಮತ್ತಷ್ಟು ವಿವರ ಇಲ್ಲಿದೆ.

Video Top Stories