Asianet Suvarna News Asianet Suvarna News

Bengaluru Tech Summit: ಪುನೀತ್‌ಗೆ ಶ್ರದ್ಧಾಂಜಲಿ ಅರ್ಪಿಸಿದ ಎಂ.ವೆಂಕಯ್ಯ ನಾಯ್ಡು

ಕನ್ನಡದ ಸ್ಟಾರ್‌ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿದ್ದರು. ಸಾಕಷ್ಟು ಜನಪ್ರಿಯತೆ ಹೊಂದಿದವರಾಗಿದ್ದರು. ಅಪ್ಪು ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ತಿಳಿಸಿದರು.

ಬೆಂಗಳೂರು (ನ.17): ಇಂದು ನಡೆದ ಟೆಕ್ ಸಮ್ಮೇಳನಲ್ಲಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು (M Venkaiah Naidu) ಅವರು ನಟ ಪುನೀತ್ ರಾಜ್‍ಕುಮಾರ್ (Puneeth Rajkumar) ಅವರ ಅಗಲಿಕೆಯ ನೋವನ್ನು ವ್ಯಕ್ತಪಡಿಸಿದ್ದಾರೆ. ಟೆಕ್ ಸಮ್ಮೇಳನದಲ್ಲಿ ಮಾತನಾಡಿದ ಅವರು, ಕನ್ನಡದ ಸ್ಟಾರ್‌ ನಟ ಪುನೀತ್ ರಾಜ್‍ಕುಮಾರ್ ಅವರನ್ನು ಕಳೆದುಕೊಂಡಿದ್ದೇವೆ. ಪ್ರತಿಭಾನ್ವಿತ ನಟರಾಗಿ ಗುರುತಿಸಿಕೊಂಡಿದ್ದರು. ಸಾಕಷ್ಟು ಜನಪ್ರಿಯತೆ ಹೊಂದಿದವರಾಗಿದ್ದರು. ಅಪ್ಪು ಅವರ ನಿಧನದಿಂದ ತುಂಬಲಾರದ ನಷ್ಟವಾಗಿದೆ ಎಂದು ಹೇಳುತ್ತಾ ಪುನೀತ್ ರಾಜ್‍ಕುಮಾರ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ, ಸಂತಾಪ ಸೂಚಿಸಿದ್ದಾರೆ.

ಮುತ್ತುರಾಜನ ಹಾದಿಯಲ್ಲಿಯೇ ನಡೆದ ಅಪ್ಪು: ಪುನೀತ್ ರಾಜ್‌ಕುಮಾರ್ ಇನ್ನು ಕರ್ನಾಟಕ ರತ್ನ

ಇನ್ನು ಪುನೀತ್‌ಗೆ ಅವರಿಗೆ ಇಡೀ ಜಗತ್ತು ನಮನ ಸಲ್ಲಿಸಿದ್ದು, ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪುರಸ್ಕಾರವನ್ನು ಕರ್ನಾಟಕ ರಾಜ್ಯ (Karnataka Govt) ಸರ್ಕಾರ ಘೋಷಿಸಿದೆ. ನಟನಾಗಿ ಮಾತ್ರವಲ್ಲದೆ, ಸಮಾಜಮುಖಿ ಕಾರ್ಯಕಗಳಿಂದಲೂ ವ್ಯಾಪಕವಾಗಿ ಗೌರವಿಸಲ್ಪಟ್ಟ ಅಪ್ಪು ಸಮಾಜಮುಖಿ ಕೆಲಸಗಳು ಒಂದೆರಡಲ್ಲ. ಇದೀಗ ಪುನೀತ್ ಅವರು ನೇತ್ರದಾನ ಮಾಡಿದ ನಂತರ ನೇತ್ರದಾನದಲ್ಲಿಯೂ ಏರಿಕೆಯಾಗಿದೆ.

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories