Asianet Suvarna News Asianet Suvarna News

ಬಾಕ್ಸಾಫೀಸ್‌ನಲ್ಲಿ ಗೆದ್ದ ಕಾಟೇರ: ದುಬೈ ಕನ್ನಡಿಗರಿಂದ ದರ್ಶನ್‌ಗೆ ಕರುನಾಡ ಅಧಿಪತಿ ಬಿರುದು!

ಕಾಟೇರ. ತರುಣ್ ಸುಧೀರ್ ನಿರ್ದೇಶನದ ಸಿನಿಮಾ. ಜಡೇಶ್ ಹಂಪಿ ಕಥೆ ಬರೆದ ಚಿತ್ರ. ಮಾಸ್ತಿ ಡೈಲಾಗ್ ಕೆತ್ತಿದ ಸಿನಿಮಾ. ನಟ ದರ್ಶನ್ ಅಭಿನಯದ ಮೂವಿ. ಮಾಲಾಶ್ರೀ ಮಗಳು ಆರಾಧನಾ ಡೆಬ್ಯೂ ಮಾಡಿದ ಚಿತ್ರ. ಇಷ್ಟೆಲ್ಲಾ ಇದ್ಮೇಲೆ ಕಾಟೇರ ಗೆಲ್ಲದೆ ಇರ್ತಾನಾ.? 
 

ಕಾಟೇರ. ತರುಣ್ ಸುಧೀರ್ ನಿರ್ದೇಶನದ ಸಿನಿಮಾ. ಜಡೇಶ್ ಹಂಪಿ ಕಥೆ ಬರೆದ ಚಿತ್ರ. ಮಾಸ್ತಿ ಡೈಲಾಗ್ ಕೆತ್ತಿದ ಸಿನಿಮಾ. ನಟ ದರ್ಶನ್ ಅಭಿನಯದ ಮೂವಿ. ಮಾಲಾಶ್ರೀ ಮಗಳು ಆರಾಧನಾ ಡೆಬ್ಯೂ ಮಾಡಿದ ಚಿತ್ರ. ಇಷ್ಟೆಲ್ಲಾ ಇದ್ಮೇಲೆ ಕಾಟೇರ ಗೆಲ್ಲದೆ ಇರ್ತಾನಾ.? ಯೆಸ್, ಕಾಟೇರ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಗೆದ್ದಾಗಿದೆ. ಹಾಕಿದ್ದ 60 ಕೋಟಿ ಬಂಡವಾಳವನ್ನ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಬಾಚಿಕೊಂಡಿದ್ದಾರೆ. ಈಗ ಕಾಟೇರನ ಸಕ್ಸಸ್ ಯಾತ್ರೆ ಗಾಲ್ಫ್ ಜಗತ್ತಿಗೆ ಹೋಗಿದೆ. ದುಬೈನಲ್ಲಿ ಕಾಟೇರ ಸಿನಿಮಾ ರಿಲೀಸ್ ಆಗಿದ್ದು ಬಿಗ್ ಒಪನಿಂಗ್ ಪಡೆದುಕೊಂಡಿದೆ. 

ಕಾಟೇರ ಸಿನಿಮಾ ಗಾಲ್ಫ್ ದೇಶಗಳಲ್ಲಿ ರಿಲೀಸ್ ಆಗಿದೆ. ಈ ಸಿನಿಮಾವನ್ನ ದುಬೈ ಕನ್ನಡಿಗರು ಅದ್ಧೂರಿಗಾಗೆ ವೆಲ್ ಕಮ್ ಮಾಡಿದ್ದಾರೆ. ದುಬೈನ ಹಲವು ಚಿತ್ರಂದಿರಗಳು ಹೌಸ್ ಫುಲ್ ಆಗಿ ರನ್ ಆಗ್ತಿವೆ. ದುಬೈನ ಚಿತ್ರಮಂದಿರದಲ್ಲಿ ಕಾಟೇರ ಚಿತ್ರತಂಡ ಪ್ರೇಕ್ಷಕರನ್ನ ನೇರಾ ನೇರಾ ಭೇಟಿಯಾಗಿದ್ದಾರೆ. ಇಡೀ ಕಾಟೇರ ಚಿತ್ರತಂಡಕ್ಕೆ ದುಬೈ ಕನ್ನಡಿಗರು ಸನ್ಮಾನ ಮಾಡಿದ್ದಾರೆ. ಕಾಟೇರ ಸಿನಿಮಾ ಗೆದ್ದಿದ್ದಕ್ಕೆ ನಟ ದರ್ಶನ್ಗೆ ದುಬೈ ಕನ್ನಡಿಗರು ಸನ್ಮಾನ ಮಾಡಿದ್ದಾರೆ. ಅಷ್ಟೆ ಅಲ್ಲ ದರ್ಶನ್ಗೆ ಕರುನಾಡ ಅಧಿಪತಿ ಅಂತ ಬಿರುದ್ಧು ಕೊಟ್ಟಿದ್ದಾರೆ. ಈ ಮೂಲಕ ದರ್ಶನ್ ನಟನೆಯ ಕಾಟೇರ ಸಿನಿಮಾ ಹೊರ ದೇಶದಲ್ಲೂ ಸದ್ದು ಮಾಡುತ್ತಿದೆ. 

Video Top Stories