Asianet Suvarna News Asianet Suvarna News

Puneeth Rajkumar ನೋಡಲು ಹೋದಾಗ ತುಂಬಾ ವೀಕ್‌ ಆದೆ: ವಿ.ರವಿಚಂದ್ರನ್‌

ಇತ್ತೀಚೆಗೆ ನಡೆದ ಮನೋರಂಜನ್ ರವಿಚಂದ್ರನ್ ಅಭಿನಯದ ಮುಗಿಲ್‌ಪೇಟೆ  ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ನೆನೆದು ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಭಾವುಕರಾದರು. 

ಇತ್ತೀಚೆಗೆ ನಡೆದ ಮನೋರಂಜನ್ (Manoranjan) ರವಿಚಂದ್ರನ್ ಅಭಿನಯದ 'ಮುಗಿಲ್‌ಪೇಟೆ' (Mugilpete) ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್‌ ರಾಜ್‌ಕುಮಾರ್‌ ನೆನೆದು ಕ್ರೇಜಿಸ್ಟಾರ್ ವಿ.ರವಿಚಂದ್ರನ್ (V.Ravichandran) ಭಾವುಕರಾದರು. ಮುಗಿಲ್‌ಪೇಟೆ ಸಿನಿಮಾದ ಬಗ್ಗೆ ಮಾತನಾಡುವ ಮುನ್ನ ರವಿಚಂದ್ರನ್ ಇದುವರೆಗೂ ನಾನು ಎಲ್ಲೂ ವೀಕ್‌ ಆಗಿರಲಿಲ್ಲ. ಆದರೆ ಪುನೀತ್ ನೋಡಲು ಹೋದಾಗ ಮೊದಲ ಬಾರಿಗೆ ವೀಕ್ ಆದೆ ಎಂದು ಹೇಳಿದರು. ನಾವು ಇರೋವರೆಗೂ ಅವರನ್ನು ಮರೆಯೊಲ್ಲ. ಆದರೆ ಈಗ ಅನ್ನಿಸ್ತಿದೆ ನಾವು ಸಾಯೋವರೆಗೂ ಆ ನೋವು ಮರೆಯೋಕಾಗಲ್ಲ ಎಂದು ರವಿಚಂದ್ರನ್ ಭಾವುಕರಾದರು.

Mugilpete ಚಿತ್ರದ ಬಗ್ಗೆ ಮನುರಂಜನ್-ಕಯಾದು ಲೋಹರ್ ಎಕ್ಸ್‌ಕ್ಲೂಸಿವ್ ಮಾತುಗಳು!

ಇನ್ನು 'ಮುಗಿಲ್‌ಪೇಟೆ' ಚಿತ್ರ ಇಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಭರತ್ ಎಸ್. ನಾವುಂದ  (Bharath S Navunda) ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನಾಯಕಿಯಾಗಿ  ಕಯಾದು ಲೋಹರ್  (Kayadu Lohar) ಮನುರಂಜನ್ ಜೊತೆ ಕಾಣಿಸಿಕೊಂಡಿದ್ದಾರೆ. ಮೋತಿ ಮೂವಿ ಮೇಕರ್ಸ್ ಲಾಂಛನದಲ್ಲಿ ರಕ್ಷಾ ವಿಜಯ್ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಅವಿನಾಶ್, ತಾರಾ ಅನುರಾಧಾ, ಸಾಧುಕೋಕಿಲ, ರಂಗಾಯಣ ರಘು, ರಿಷಿ ಸೇರಿದಂತೆ ಹೆಸರಾಂತ ಕಲಾವಿದರು ನಟಿಸಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories