Asianet Suvarna News Asianet Suvarna News

ಚಡ್ಡಿ ತಂಟೆಗೆ ಬಂದರೆ ಹುಷಾರ್, ಹುಚ್ಚಸಿದ್ದರಾಮಯ್ಯ ಪ್ರಚಾರ ಪಡೆಯಲು ಹೊರಟಿದ್ದಾನೆ!

ಚಡ್ಡಿ ಸುಡುತ್ತೇವೆ  ಎಂದು ಹೇಳಿಕೆ ನೀಡಿದ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಕೆಂಡಾಮಂಡಲರಾಗಿದ್ದಾರೆ.  ಚಡ್ಡಿ ತಂಟೆಗೆ ಬಂದರೆ ಹುಷಾರ್, ಸಿದ್ದರಾಮಯ್ಯ ಹುಚ್ಚ, ಪ್ರಚಾರ ಪಡೆಯಲು ಹೊರಟಿದ್ದಾನೆ, ನಿಮ್ಹಾನ್ಸ್‌ಗೂ ಸೇರಿಸಿದರೂ ಚಿಕಿತ್ಸೆ ಇಲ್ಲ ಎಂದು ಗುಡುಗಿದ್ದಾರೆ.

First Published Jun 4, 2022, 4:32 PM IST | Last Updated Jun 4, 2022, 4:32 PM IST

ಬೆಂಗಳೂರು (ಜೂನ್ 4): ಸಿದ್ಧರಾಮಯ್ಯ  ಹುಚ್ಚ.. ಆರ್ ಎಸ್ಎಸ್ ವಿರೋಧಿಸಿ ಬಿಟ್ಟಿ ಪ್ರಚಾರ ಪಡೆಯಲು ಹೊರಟಿದ್ದಾನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ  (Former Chief Minister siddaramaiah ) ವಿರುದ್ಧ ಮಾಜಿ ಸಚಿವ ಕೆಎಸ್ ಈಶ್ವರಪ್ಪ(KS eshwarappa) ಕೆಂಡಾಮಂಡಲರಾಗಿದ್ದಾರೆ. ಚಡ್ಡಿ ತಂಟೆಗೆ ಬಂದರೆ ಹುಷಾರ್ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ.

ಶಿಕ್ಷಣ ಸಚಿವ ಬಿ.ಸಿ ನಾಗೇಶ್ (BC Nagesh) ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದ್ದ ಎನ್‌ಎಸ್‌ಯುಐ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಸಚಿವರ ಮನೆಗೆ ಬೆಂಕಿ ಹಚ್ಚುವ ಪ್ರಯತ್ನ ನಡೆಸಿದ್ದಾರೆ ಎನ್ನುವ ಆರೋಪ ಹೊರಿಸಲಾಗಿತ್ತು. ಈ  ವೇಳೆ ಮಾತನಾಡಿದ್ದ ಸಿದ್ಧರಾಮಯ್ಯ ರಾಜ್ಯಾದ್ಯಂತ ಚಡ್ಡಿಗೆ ಬೆಂಕಿ ಹಾಕುವ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.

Karnataka Politics: ಪುಗಸಟ್ಟೆ ಬಂಧಿಸೋಕೆ ನಾನೇನು ಕುರಿಯೇ?: ಈಶ್ವರಪ್ಪ

ಏಕವಚನದಲ್ಲೇ ವಾಗ್ದಾಳಿ ನಡೆಸಿದ ಈಶ್ವರಪ್ಪ, ರಾವಣ ಹನುಮನ ಬಾಲಕ್ಕೆ ಬೆಂಕಿ ಇಟ್ಟಿದ್ದಕ್ಕೆ ಇಡೀ ಲಂಕಾದಹನವಾಗಿತ್ತು. ಹುಚ್ಚ ಸಿದ್ಧರಾಮಯ್ಯಗೆ ನಿಮಾನ್ಸ್ ನಲ್ಲಿ ಚಿಕಿತ್ಸೆ ನೀಡಿದ್ರೂ ಹುಷಾರಾಗಲ್ಲ ಎಂದು ಹೇಳಿದ್ದಾರೆ.

Video Top Stories